"ಇಲಿ ಗಡಹನೊಡ್ಡಿನಲ್ಲಿರ್ಪಂತೆ ಎನ್ನ ಸಂಸಾರ, ತನು ಕೆಡುವನ್ನಕ್ಕ ಮಾಣದು ಹೆರರ ಛಿದ್ರಿಸುವುದು, ತನು ಕೆಡುವನ್ನಕ್ಕ ಮಾಣದು ಅಕಟಕಟಾ! ಸಂಸಾರಕ್ಕಾಸತ್ತೆ ಕೂಡಲಸಂಗಮದೇವಾ.. ✍ ಬಸವಣ್ಣನವರು.. ವಚನದ ಭಾವಾರ್ಥ: ಇಲಿಯು ಗಡವ ಬೆಕ್ಕಿನ ಸನಿಹದಲ್ಲಿರುವಂತೆ ತಾನು ಸಂಸಾರದಲ್ಲಿರುವೆನು.ತನ್ನ ದೇಹಾಂತ್ಯವಾಗುವ ತನಕ ತನಗೆ ಇದರಿಂದ ಬಿಡುಗಡೆಯಿಲ್ಲ. ಪರರನ್ನು ಕೆಡಿಸುವಂತೆ ಸಂಸಾರವು ಪ್ರಚೋದಿಸುತ್ತದೆ.ಸ್ವಾರ್ಥವನ್ನು ಅಧಿಕಗೊಳಿಸುತ್ತದೆ. ಈ ಸಂಸಾರದ ತೆಕ್ಕೆಯಲ್ಲಿ ತಾನು ಬಳಲಿ ಬೆಂಡಾಗಿ ಬೇಸತ್ತೆನೆನ್ನುತ್ತಾರೆ.. 🙏 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ


