S K Rangoli Art Design
633 views • 21 hours ago
#🌿1ನೇ ಶ್ರಾವಣ ಸೋಮವಾರ 🙏🔱 ಜ್ಯೋತಿರ್ಭೀಮೇಶ್ವರ ಕಥೆ:-
ಪೂರ್ವದಲ್ಲಿ ನೈಮಿಷಾರಣ್ಯ ವಾಸಿಗಳಾಗಿದ್ದ ಶೌನಕಾದಿ ಮಹಾ ಮುನಿಗಳ ಅತಿಥಿಯಾಗಿ ಬಂದಿದ್ದ ಸೂತ ಪುರಾಣಿಕರನ್ನು, “ಮಹಾತ್ಮರೆ ಸ್ತ್ರೀಯರು ದೀರ್ಘಸುಮಂಗಲಿಯರಾಗಿ, ಸಕಲ ಸಂಪತ್ತನ್ನು ಪಡೆದು ಪತಿಯೊಂದಿಗೆ ಸುಖವಾಗಿ, ದೀರ್ಘಕಾಲ ಬಾಳುವ ಯಾವುದಾದರೂ ದೇಶದಲ್ಲಿ ವ್ರತವಿದ್ದರೆ ತಿಳಿಸಿ, ಎಂದು ಕೇಳಿದಾಗ ಈ ಕಥೆಯನ್ನು ತಿಳಿಸುತ್ತಾರೆ.
ಹಿಂದೆ ಸೌರಾಷ್ಟ್ರ ದೇಶದಲ್ಲಿ ವಜ್ರಬಾಹು ಎಂಬ ರಾಜನಿದ್ದನು, ಆ ರಾಜನು ವೀರ ಧೀರ ಮತ್ತು ಗುಣವಂತನು ಆಗಿದ್ದನು. ರಾಜನಿಗೆ ಜಯಶೀಲ ಎಂಬ ಮಗನಿದ್ದನು. ಅವನು ಅತಿ ಸುಂದರನೂ, ಸದ್ಗುಣನೂ ಆಗಿದ್ದನು. ಆದರೆ ಗ್ರಹಚಾರವಶಾತ್ ಯುವಕನಾಗಿ ರುವಾಗಲೇ ಮರಣಹೊಂದಿದನು.“ವಜ್ರಬಾಹು” ರಾಜನಿಗೆ ಆಘಾತವಾಯಿತು. ಇದ್ದ ಒಬ್ಬ ಮಗ ಹೋಗಿಬಿಟ್ಟ.ತನಗೂ ತನ್ನ ಪಿತೃಗಳಿಗೂ ತಿಲೋದಕವನ್ನು ಕೊಡುವವರಿಲ್ಲ ಎಂದು ದುಃಖಿ ತನಾದನು. ಹೀಗಿರುವಾಗ ಅವನಿಗೆ ಒಂದು ಯೋಚನೆ ಬಂದಿತು.
ತನ್ನ ಮೃತ ಮಗನಿಗೆ ವಿವಾಹ ಮಾಡಿದರೆ ಆಗ ಹೆಣ್ಣಿನ ಮೂಲಕ ತನಗೂ ತನ್ನ ಪಿತೃಗಳಿಗೆ ಸದ್ಗತಿ ಒದಗಬಹುದೆಂದು ಚಿಂತಿಸಿದನು.
ಕೂಡಲೇ ಕಾರ್ಯ ಪ್ರವೃತ್ತನಾದನು."ಯಾರಾದರೂ ತನ್ನ ಮೃತ ಮಗನಿಗೆ ಹೆಣ್ಣು ಕೊಟ್ಟರೆ, ಅವರಿಗೆ ಯಥೇಚ್ಛವಾಗಿ ಧನವನ್ನು ಕೊಡುವುದಾಗಿ ಪ್ರಕಟಿಸಿದನು. ಅದೇ ಊರಿನ ಸಮೀಪ ಒಬ್ಬ ಸುಸಂಸ್ಕೃತನೂ, ವೇದಶಾಸ್ತ್ರ ಪಾರಂಗತನು ಆದ ಒಬ್ಬ ಬ್ರಾಹ್ಮಣನಿದ್ದನು.ಅವನ ಕರ್ಮಫಲದಿಂದ ದಟ್ಟ ದರಿದ್ರನಾಗಿದ್ದ. ಅವನಿಗೆ ಮನೆತುಂಬಾ ಹೆಣ್ಣುಮಕ್ಕಳು. ಬಡತನ ಹೋದೀತೆಂದು
ಹೆಣ್ಣು ಮಕ್ಕಳಲ್ಲಿ "ಸುಶೀಲೆ "ಎಂಬ ಒಬ್ಬ ಮಗಳನ್ನು ಮರಣ ಹೊಂದಿದ ರಾಜಕುಮಾರಗೆ ಧಾರೆಯೆರೆದು ಕೊಟ್ಟನು. ಬಡ ಬ್ರಾಹ್ಮಣನಿಗೆ ಅಪಾರ ಧನ ಸಿಕ್ಕಿತು,ರಾಜನ ಇಚ್ಛೆ ನೆರವೇರಿತು.
ವಿವಾಹ ಶಾಸ್ತ್ರ ಮುಗಿಯುತ್ತಿದ್ದಂತೆ ರಾಜಕುಮಾರನ ಶವವನ್ನು
ರಾಜ ಸ್ಮಶಾನಕ್ಕೆ ಸಾಗಿಸಿ ಅಲ್ಲಿ ದಹನಕ್ರಿಯೆ ಏರ್ಪಡಿಸಿ ಸೊಸೆ ಯನ್ನು ಕರೆದು ಚಿತೆಗೆ ಬೆಂಕಿ ಇಡುವಂತೆ ಹೇಳಿದನು. ಮಂಗಳ
ದ್ರವ್ಯ ಗಳಿಂದ, ಸಕಲಾಭರಣಗಳಿಂದ ಶೋಭಿತಳಾಗಿ ಪರಿಶುದ್ಧ ಮನಸ್ಸಿನ ಸೊಸೆ ಭಕ್ತಿಯಿಂದ ಪರಮಾತ್ಮನನ್ನು ಧ್ಯಾನಿಸುತ್ತಾ, ನಿರ್ವಿಕಾರ ಭಾವದಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದಳು.
ಭಗವಂತನ ಲೀಲೆ ಎಂಬಂತೆ ಆ ಕ್ಷಣಕ್ಕೆ ಜೋರಾಗಿ ಮಳೆ ಬಂದಿ ತು. ಚಿತೆಯ ಬೆಂಕಿ ಆರಿಹೋಯಿತು. ಸೂರ್ಯ ಅಸ್ತಮಿಸಿದ, ಆಷಾಡ ಮಾಸದ ಅಮಾವಾಸ್ಯೆ ಜೋರು ಮಳೆಯಿಂದಾಗಿ ಜಲಪ್ರವಾಹ ಹೆಚ್ಚಾಯಿತು. ಎಲ್ಲೆಲ್ಲೂ ಗಾಡಾಂಧಕಾರ ತುಂಬಿತು. ರಾಜ ತನ್ನ ಕರ್ತವ್ಯ ಮುಗಿಯಿತೆಂದು ಪರಿವಾರದೊಂದಿಗೆ ಅರಮನೆಗೆ ಹೊರಟುಹೋದನು. ಆ ದಿನ ಮದುವೆಯಾದ ಪುಟ್ಟ ಬಾಲೆ, ಪತಿಯ ಶವವನ್ನು ಬಿಟ್ಟುಹೋಗದೆ ಶವದ ಪಕ್ಕದಲ್ಲೇ ಕುಳಿತಳು. ಸ್ಮಶಾನದಲ್ಲಿ ಅವಳಿಗೆ ಭಯವಾಯಿತು ಹೆದರಿಕೆ ಯಿಂದ ಕಣ್ಣೀರಿಡುತ್ತಾ ಪರಮಾತ್ಮನಲ್ಲಿ ಮೊರೆಯಿಟ್ಟಳು.
ಹೇ ಮಹಾದೇವ, ಹಿಂದೆ ನಿನ್ನ ಕರುಣೆಯಿಂದ ಮಾರ್ಕಂಡೇಯನು ಚಿರಂಜೀವಿ ಯಾದನು. ಚ್ಯವನಮಹರ್ಷಿ ದೀರ್ಘಾಯುಸ್ಸನ್ನು ಪಡೆದನು. ರತಿ ಮನ್ಮಥರು ಪುನರ್ಜೀವವನ್ನು ಪಡೆದರು. ಶ್ವೇತ ವಾಹನ ಪೂರ್ಣಾಯುಷ್ಯವನ್ನು ಪಡೆದನು. ಅಗ್ನಿಯ ಪತ್ನಿಯ ರಾದ ಸ್ವಾಹ -ಸ್ವಧಾ ದೇವಿಯರು ಸುಮಂಗಲಿಯರಾಗಿ ಪುತ್ರರ ನ್ನು ಪಡೆದರು. ಹೀಗಿರುವಾಗ ನಾನೇನು ಪಾಪ ಮಾಡಿದೆ? ನನ ಗೇಕೆ ಇಂತಹ ಘೋರ ಶಿಕ್ಷೆ ದೇವಾ? ದಯಾಮಯನಾದ ನೀನು ನನ್ನನ್ನು ಅನಾಥಳನ್ನಾಗಿ ಮಾಡಿದೆ. ಈಗ ನಿನ್ನ ಕೃಪಾಕಟಾಕ್ಷವನ್ನು ತೋರಿ ನನ್ನನ್ನು ಕಾಪಾಡಬೇಕು ಎಂದು ಕಣ್ಣೀರು ಹಾಕುತ್ತಾ ಭಕ್ತಿಯಿಂದ, ಪರಿಪರಿಯಾಗಿ ಬೇಡಿಕೊಂಡಳು. ಕರುಣಾಮಯ ನಾದ ಪರಮೇಶ್ವರನು- ಪಾರ್ವತಿ ಸಮೇತ ಪ್ರತ್ಯಕ್ಷನಾಗಿ,'ಮಗಳೇ ಚಿಂತಿಸಬೇಡ ನಿನ್ನ ಕೋರಿಕೆಯಂತೆ, ಸಂಪತ್ತನ್ನು, ಸೌಭಾಗ್ಯವನ್ನು ನೀಡಬಲ್ಲ ವ್ರಥ ಒಂದಿದೆ, ಅದನ್ನು ನಿನಗೆ ಉಪದೇಶಿಸುವೆ. ಅದರಿಂದ ನೀನು ಸಕಲ ಸಂಪತ್ತನ್ನು ಹೊಂದುವೆ.
ಆಷಾಡ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನದಲ್ಲಿ, ಮಂಗಳ ಸ್ನಾನವನ್ನು ಮಾಡಿ, ಭಕ್ತಿಯಿಂದ ಪೂಜಾ ಸ್ಥಳವನ್ನು ಶುಚಿ ಮಾಡಿಕೊಂಡು, ರಂಗೋಲಿ ಹಾಕಿ, ಅದರ ಮೇಲೆ ಅಕ್ಕಿ ತುಂಬಿದ ಒಂದು ತಟ್ಟೆಯಲ್ಲಿ ತುಪ್ಪ ಹಾಗೂ ಮತ್ತೊಂದು ಎಣ್ಣೆ ಭತ್ತಿಯಿಂದ ಬೆಳಗುವ ಎರಡು ದೀಪ ಸ್ತಂಭವನ್ನು ಇಟ್ಟು,( ಶಿವ) ನನ್ನನ್ನು ಆವಾಹನೆ ಮಾಡಬೇಕು. ಇದರಲ್ಲಿ ಅಷ್ಟಮೂರ್ತಿಗಳು ನೆಲೆಸಿರುತ್ತಾರೆ. ಜ್ಯೋತಿರ್ಮಯನಾದ ನನಗೆ “ಭೀಮೇಶ್ವರ”ನೆಂದು ಹೆಸರು. ಚಂದ್ರ ನನಗೆ ಪ್ರಿಯವಾದವನು, ಚಂದ್ರನನ್ನು ಜ್ಯೋತಿ ಸ್ವರೂಪ ನೆಂದು, ನನ್ನನ್ನು ಮಹಾಲಿಂಗ ಸ್ವರೂಪನೆಂದು ತಿಳಿದು ಭಕ್ತಿಯಿಂದ ಆರಾಧನೆ ಮಾಡು ಎಂದು ಹೇಳಿ,ವ್ರತದ ನಿಯಮಗಳನ್ನು ತಿಳಿಸಿ ಅದೃಶ್ಯವಾದನು.
ಸ್ಮಶಾನದಲ್ಲಿ( ಜೋರಾಗಿ ಮಳೆ ಸುರಿಯುತ್ತಿದೆ) ಆ ಹುಡುಗಿ ಅಲ್ಲೇ ನೆಂದಿದ್ದ ಮಣ್ಣಿನಿಂದ, ದೀಪಸ್ತಂಭಗಳನ್ನು ಮಾಡಿದಳು. ಆಲದೆಲೆಗಳನ್ನು ವೀಳ್ಯದೆಲೆಯಾಗಿಯೂ ತರ ಕಾಯಿಗಳನ್ನೇ ಅಡಿಕೆಯಾಗಿಯೂ ಮಾಡಿಕೊಂಡು, ಗರಿಕೆ ಹುಲ್ಲುಗಳನ್ನೇ ಹೂವೆಂದು ಭಾವಿಸಿ, ಮಣ್ಣಿನಿಂದಲೇ ಸಿಹಿ ಕಡುಬು ಗಳನ್ನು ಮಾಡಿ, ಧೂಪ- ದೀಪ ಮಾಡಿ ನೈವೇದ್ಯಕ್ಕೆ ಏನು ಬೇಕು ಅದೆಲ್ಲವನ್ನು ಮನಸ್ಸಿನ ( ಮಾನಸ ಪೂಜೆಯಂತೆ) ಇಚ್ಛೆಯಂತೆ ಯಥೋಚಿತವಾಗಿ ಭಗವಂತನಿಗೆ ಅರ್ಪಿಸಿ (ಮಾನಸ ಪೂಜೆ ಯಂತೆ) ಜ್ಯೋತಿರ್ಭಿಮೇಶ್ವರನನ್ನು ಭಕ್ತಿಯಿಂದ ಪೂಜೆ ಮಾಡಿದಳು. ಆ ಹುಡುಗಿಯ ಪರಿಶುದ್ಧವಾದ ಪೂಜೆಯಿಂದ
ಸಂತುಷ್ಟನಾದ ಭಗವಂತ ಪ್ರಕಟಗೊಂಡು ಹುಡುಗಿಗೆ ಏನು ಬೇಕು ಎಲ್ಲವನ್ನು ಅನುಗ್ರಹಿಸಿದನು. ಹುಡುಗಿ ಕಣ್ಣುಬಿಟ್ಟು ನೋಡುತ್ತಾಳೆ, ಬಂಗಾರದ ಗೋಡೆಗಳಿಗೆ ರತ್ನಖಚಿತವಾದ ಕಂಬಗಳಿದ್ದ ಭವನ ವೊಂದು ಸಿದ್ಧವಾಗಿದೆ. ಎಲ್ಲೆಲ್ಲೂ ನವರತ್ನ ರಾಶಿಗಳು ತುಂಬಿದೆ. ಚಿತೆಯೇ ರತ್ನದ ಮಂಚದಂತೆ ಹೊಳೆಯುತ್ತಿ ತ್ತು. ರಾಜಕುಮಾರ ನಿದ್ದೆ ಯಿಂದ ಎದ್ದಂತೆ ಕಣ್ಣು ಬಿಟ್ಟನು. ಚತುರಂಗ ಬಲವು-ಕಾಲಾಳು ಅಲ್ಲಿ ನಿಂತಿತು. ಇದನ್ನೆಲ್ಲಾ ನೋಡುತ್ತಲೆ ಆಶ್ಚರ್ಯಭರಿತಳಾದಳು.
ಆಗಿನ್ನೂ ನಿದ್ದೆಯಿಂದ ಎದ್ದಂತೆ ರಾಜಕುಮಾರ ಹಾಸಿಗೆಯಿಂದ ಮೇಲೆದ್ದು ಎದುರಿಗಿದ್ದ ಕನ್ಯಾಮಣಿಯನ್ನು ನೋಡಿದನು. ಸಂತೋಷಗೊಂಡು ಆಕೆ ಪತಿಗೆ, ನಡೆದ ವೃತ್ತಾಂತವನ್ನೆಲ್ಲಾ ಹೇಳಿದಳು. ರಾಜಕುಮಾರ ಆನಂದಭರಿತನಾದನು. ಮರುದಿನ ರಾಜ ಭಟರು ಬಂದು ಇಲ್ಲಿನ ವೈಭೋಗವನ್ನು ನೋಡಿ ಆಶ್ಚರ್ಯ ದಿಂದ ರಾಜನಿಗೆ ನಡೆದುದನ್ನೆಲ್ಲಾ ತಿಳಿಸಿದರು. ರಾಜನು ಅತೀವ ಸಂತೋಷದಿಂದ ಮಹಾಶಿವನನ್ನು ಮನಸಾರೆ ಸ್ಮರಿಸಿ ನಿಂದ ಹೊರಟು ಸ್ಮಶಾನಕ್ಕೆ ಬಂದನು. ಅಲ್ಲಿ ನಡೆದ ವೈಭೋಗವನ್ನು ನೋಡಿ ಮಗನನ್ನು ಗಾಢವಾಗಿ ಅಪ್ಪಿಕೊಂಡನು. ಸೊಸೆಯನ್ನು ಮನಸಾರೆ ಮೆಚ್ಚಿ, ಸಮಾಧಾನ ಪಡಿಸಿ ಕರೆತಂದು, ಸಂಭ್ರಮೋ ತ್ಸಾಹದಿಂದ ಮಗ ಸೊಸೆಯನ್ನು ವೈಭವದಿಂದ ಅರಮನೆಗೆ (ಕರೆದುಕೊಂಡನು)ಸ್ವಾಗತಿಸಿದನು. ಬ್ರಾಹ್ಮಣ ಮುತ್ತೈದೆಯರಿಗೆ ಯಥೇಚ್ಛವಾಗಿ ದಾನ ಧರ್ಮಗಳನ್ನು ಕೊಡಿಸಿದನು. ಬೇಕು ಬೇಕಾದ ಪಕ್ವಾನ್ ಗಳನ್ನು ಮಾಡಿಸಿ ರಾಜ್ಯದ ಪ್ರಜೆಗಳೆಲ್ಲರಿಗೂ ಸಂತುಷ್ಟರಾಗುವಂತೆ ಭೋಜನದ ವ್ಯವಸ್ಥೆ ಮಾಡಿದನು. ಈ ರೀತಿ ಸಂತೋಷದಿಂದ ಎಲ್ಲರೊಂದಿಗೆ ಬಹಳ ಕಾಲ ಅರಮನೆಯಲ್ಲಿ ಬಾಳಿ ಬದುಕಿ ಸುಖದಿಂದ ಇದ್ದರು. ಎಂದು ಸೂತ ಪುರಾಣಿಕರು ಶೌನಕಾದಿಗಳಿಗೆ ಈ ಕಥೆಯನ್ನು ತಿಳಿದರು.
'ಭೀಮನಮಾವಾಸ್ಯೆ' ಜ್ಯೋತಿರ್ಭಿಮೇಶ್ವರ ವ್ರತ ಪೂಜೆ ಭಕ್ತಿಯಿಂದ ಮಾಡಿ, ಇದರ ಕಥೆಯನ್ನು ಓದಬೇಕು ಅಥವಾ ಕೇಳಬೇಕು ಇಲ್ಲ ಹೇಳಬೇಕು. ಹೀಗೆ ಮಾಡುವುದರಿಂದ ಮಾಡಿದ ವ್ರತ ಕಥೆ ಸಂಪನ್ನವಾಗುತ್ತದೆ. ವಿವಾಹದ ಹೆಣ್ಣು ಮಕ್ಕಳು ಓಂ
ವರ್ಷದಿಂದಲೇ ಜ್ಯೋತಿರ್ಭಿಮೇಶ್ವರ ವ್ರತವನ್ನು ಮಾಡಿ ಹತ್ತನೇ ವರ್ಷ ಉದ್ಯಾಪನೆ ಮಾಡುತ್ತಾರೆ. ವ್ರತ ಮಾಡಿದ ಉದ್ಯಾಪನ ಬಾಗಿನವನ್ನು ಅಣ್ಣ- ಅತ್ತಿಗೆಗೆ ಕೊಡುತ್ತಾರೆ.
"ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ನಮಃ !
ತಸ್ಮಾತ್ ಕಾರುಣ್ಯ ಭಾವೇನಾ ರಕ್ಷ ಮಾಂ ಪರಮೇಶ್ವರ
ರಕ್ಷ ರಕ್ಷೋ ಜಗದೀಶ್ವರ". #💖 ಶಿವ–ಪಾರ್ವತಿ 🕉️🌺 #🙏ಶ್ರಾವಣ ಮಾಸ Coming Soon🙏 #🌺 ಶಿವ ಭಕ್ತ🕉️ #🌧️ ಪವಿತ್ರ ಶ್ರಾವಣ ಮಾಸ 🌿🕉️
8 likes
8 shares