ShareChat
click to see wallet page
search
ಪ್ರಸ್ತುತ ಮನುಷ್ಯ ಬದುಕುವುದು ಹೇಗಿದೆ ಅಂದರೆ ಆತನೊಬ್ಬನೇ ಬದುಕಬೇಕು, ತನ್ನ ಸುತ್ತಾ ಮುತ್ತಾ ಇರುವ ಜೀವ ಸಂಕುಲಗಳೆಲ್ಲಾ ತಾನು ನಾಶ ಪಡಿಸಲೆಂದೇ ಇದ್ದಾನೇನೋ ಎನ್ನುವ ಒಂದು ಅಹಂನಲ್ಲಿ ಬದುಕುತ್ತಿದ್ದಾನೆ. ಮಾನವೀಯ ಮೌಲ್ಯಗಳೆಲ್ಲಾ ಮಾಯವಾಗಿ ಫೊಟೋ ಫ್ರೇಮ್ ನೊಳಗೆ ಮಾತ್ರ ಅಭಿವ್ಯಕ್ತವಾಗುತ್ತಿದೆ. ಆತನಿಗೆ ತಾನೊಬ್ಬನೇ ಬದುಕುತ್ತಾನೆ ಎನ್ನುವ ಭ್ರಮೆಯೋ ಅಥವಾ ನನ್ನಿಂದ ಏನು ಬೇಕಾದರು ಸಾಧ್ಯ ಅಂತಾನೋ ಒಟ್ಟಿನಲ್ಲಿ ಆತನಿಗೆ ಬದುಕಬೇಕು. ಆತ ಬದುಕುವ ವಿಧಾನದಲ್ಲಿ ಜೀವಸಂಕುಲದ ಪ್ರಶ್ನೆಯಿಲ್ಲ,ಪ್ರಕೃತಿಯ ಚಿಂತೆಯಿಲ್ಲ ಅದರ ಅಸ್ತಿತ್ವವನ್ನು ನಾಶ ಮಾಡಿ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳುತ್ತಿದ್ದೇನೆ ಎನ್ನುವ ಮೂಡ ನಂಬಿಕೆಯಲ್ಲಿ ಹೊರಟ ಮನುಷ್ಯನಿಗೆ ಪ್ರಸ್ತುತ ಸನ್ನಿವೇಶ ಇವೆಲ್ಲಾ ಕರ್ಮಸಿದ್ಧಾಂತ ಪ್ರತಿಕ್ರಿಯೆ ಎನ್ನುವುದು ವಾಸ್ತವ ಸತ್ಯ. ಮನುಷ್ಯ ತನಗೇನೋ ಸಮಸ್ಯೆಯಾಯಿತು, ತನಗೆ ಅನ್ಯಾಯವಾಯಿತು ಎಂದು ಪೊಲೀಸ್, ಕೋರ್ಟ್, ಪ್ರತಿಭಟನೆಯಿಂದ ಪರಿಹಾರ ಕಂಡಾನು. ಆದರೆ ಪ್ರಕೃತಿ..! ಯಾವ ರೀತಿ ನೋವು ತೋರ್ಪಡಿಸಹಳು.? ಹೇಗೆ ಸೃಷ್ಟಿ‌ ನಿಯಮಗಳು ಪ್ರಬುದ್ಧವಾಗಿ ಕಾಣಿಸುವಾಗ ಎಲ್ಲದಕ್ಕೂ ಒಂದು ರೀತಿಯ ಪರಿಹಾರ ಇದ್ದೇ ಇರುವುದಂತು ಈ ಸೃಷ್ಟಿ ನಿಯಮದಲ್ಲಿರುವುದು ಸತ್ಯ ಅಲ್ಲವೇ..? ಇಲ್ಲಿನ ಪ್ರಕೃತಿ ನಿಯಮಗಳು ತನ್ನ ಕೋಪವನ್ನು ತುಸು ಮೆಲ್ಲನೆ ತೋರ್ಪಡಿಸುತ್ತಿದ್ದರೂ ಮನುಷ್ಯ ಅದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಮಾಡುತ್ತಾ ಬುದ್ಧಿವಂತ ಅಂದುಕೊಂಡಿದ್ದ ಅದರೆ ಪ್ರಸ್ತುತ ಕೊರೋನಾ ಕೂಪದಲ್ಲಿ ಹಾದಿ ಬೀದಿಗಳಲ್ಲಿ ನೀರಿನಿಂದ ಹೊರಕ್ಕೆ ಚೆಲ್ಲಿದ ಮೀನಿನಂತೆ ಒದ್ದಾಡುವ ಪರಿಯನ್ನು ಕಂಡರೆ ಮನುಷ್ಯ ತನ್ನ ಅವಸಾನದ ಅಂಚಿಗೆ ಬಂದಿರುವುದಂತೂ ಸತ್ಯ. ಮನುಷ್ಯ ಎಲ್ಲಿಯವರೆಗೆ ಪ್ರಕೃತಿ ಮತ್ತು ಸಂಕುಗಳಿಗೆ ಬೆಲೆ ಕೊಡುವುದಿಲ್ಲವೊ ಅಲ್ಲಿಯವರೆಗೆ ಈ ಪ್ರಕೃತಿಯ ರುದ್ರ ನರ್ತನ ನಿಲ್ಲದು. #💓ಲವ್ #🔱 ಭಕ್ತಿ ಲೋಕ #🌎 TuluNadu #🤔 ನನ್ನ ಪ್ರಕಾರ #📖Morning motivation
💓ಲವ್ - C TRANS - ShareChat