ShareChat
click to see wallet page
search
#📢ಸೆಪ್ಟೆಂಬರ್ 11 ರ ಅಪ್ಡೇಟ್ಸ್ 👈 ವಿಜಯನಗರ ನಿರ್ಗಮಿತ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಬರೆದ ಮನ ಮಿಡಿಯುವ ಪತ್ರ ವಿಜಯನಗರ ಜಿಲ್ಲೆಯ ಎಲ್ಲಾ ಗೌರವಾನ್ವಿತರಿಗೆ ನನ್ನ ನಮಸ್ಕಾರಗಳು, ದಿನಾಂಕ:19.07.2023 ರಿಂದ ಇಲ್ಲಿಯವರೆಗೆ ಸರ್ಕಾರದ ನಿರ್ದೇಶನದಂತೆ ತಮ್ಮೆಲ್ಲರ ಸಹಕಾರದೊಂದಿಗೆ ಈ ಕೆಳಕಂಡ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆಯಲ್ಲಿ ನಾನೂ ಭಾಗಿಯಾಗಿರುವೆನೆಂದು ಹೆಮ್ಮೆಯಿಂದ ತಮ್ಮೆಲ್ಲರನ್ನೂ ಗೌರವಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹುದ್ದೆಯ ಕರ್ತವ್ಯವನ್ನು ಸಂತೃಪ್ತಿಯಿಂದ ನಿರ್ವಹಿಸಿ ಸರ್ಕಾರದ ಆದೇಶದನ್ವಯ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆಗೊಂಡಿರುತ್ತೇನೆ. 1. ನಗರ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಇ-ಸ್ವತ್ತು ಅಭಿಯಾನದ ಮೂಲಕ ಅರ್ಜಿದಾರರ ಮನೆಬಾಗಿಲಿಗೆ ನೊಂದಣಿ ಅಂಚೆ ಮೂಲಕ ಇ-ಸ್ವತ್ತು , ಮ್ಯೂಟೇಷನ್‌ ಪ್ರತಿ ಹಾಗೂ ಇತರೆ ದಾಖಲೆಗಳನ್ನು ನೀಡಲಾಗಿದ್ದು ಸದರಿ ಅಭಿಯಾನವು ಸಾರ್ವಜನಿಕರಿಗೆ ಸಹಕಾರವಾಗಿರುತ್ತದೆ ಎಂದು ಭಾವಿಸಿರುತ್ತೇನೆ. 2. ಸಾರ್ವಜನಿಕ ಆಸ್ಪತ್ರಗಳಲ್ಲಿ ನೈರ್ಮಲ್ಯ ವಾತಾವರಣವನ್ನು ರೋಗಿಗಳಿಗೆ ಹಾಗೂ ರೋಗಿಯ ಪಾಲಕರಿಗೆ ಒದಗಿಸುವಂತಾಗುವ ಉದ್ದೇಶದಿಂದ ಪ್ರತ್ಯೇಕ Whatsapp ಗ್ರೂಪ್‌ ಮಾಡಿ ಎಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳ ಬೆಡ್‌, ಶೌಚಾಲಯ ಇತರೆ ಪ್ರದೇಶಗಳ ಛಾಯಾ ಚಿತ್ರಗಳನ್ನು ಹಾಕಲಾಗುತ್ತಿದ್ದು ಸದರಿ ಮಾಹಿತಿಯನ್ನು ಖುದ್ದು ನಾನೇ ಪರಿಶೀಲನೆ ಮಾಡಲಾಗುತ್ತಿದ್ದುದರಿಂದ ಆಸ್ಪತ್ರೆಗಳ ನೈರ್ಮಲ್ಯ ವಾತಾವರಣದಿಂದ ಕೂಡಿರಲು ಸಾಧ್ಯವಾಗಿರುತ್ತದೆ. 3. ಕಂದಾಯ ಇಲಾಖೆಯ ನಿರ್ದೇಶನದಂತೆ 300 ಕ್ಕೂ ಹೆಚ್ಚು ಗ್ರಾಮಗಳನ್ನ ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಿದ್ದು ಇದರಿಂದಾಗಿ ಸಾವಿರಾರು ಸೌಲಭ್ಯ ವಂಚಿತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದಂತಾಗಿರುತ್ತದೆ. 4. ಕಂದಾಯ ಇಲಾಖೆಯ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಸೂಕ್ತ ಸ್ಥಳ ಗುರುತಿಸಿ ಕಛೇರಿಯನ್ನು ಸ್ಥಾಪನೆ ಮಾಡಿದ್ದು ಅಧಿಕಾರಿಗಳಿಗೂ ಹಾಗೂ ಸಾರ್ವಜನಿಕರಿಗೂ ಎಲ್ಲಾ ಕಂದಾಯ ಸೇವೆಗಳು ತಮ್ಮ ಗ್ರಾಮದ ವ್ಯಾಒಪ್ತಿಯಲ್ಲಿಯೇ ದೊರಕುತ್ತಿದ್ದು ತಾಲೂಕು ಕಛೇರಿಗೆ ಅಲೆದಾಟವನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿರುತ್ತದೆ. 5. ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬದ ಮುಖ್ಯಸ್ಥನು ಮೃತನಾದಂತಹ ಸಂದರ್ಭದಲ್ಲಿ ಮಾನಸಿಕ ನೋವು & ಖಿನ್ನತೆಗೆ ಒಳಗಾಗಿ ಸೌಲಭ್ಯಗಳನ್ನು ಪಡೆಯಲು ಮನೆಯಿಂದ ಹೊರಗೆ ಬರದೇ ಇರುವ ಸಂದರ್ಭಗಳನ್ನು ಅರಿತು ಅಧಿಕಾರಿಗಳು ಭೇಟಿ ನೀಡಿ ಮೃತರ ಪತ್ನಿಗೆ ಮನೆ ಬಾಗಿಲಿಗೆ ವಿಧವಾ ವೇತನ ಅಭಿಯಾನವನ್ನು ಕೈಗೆತ್ತಿಕೊಂಡಿರುವುದರಿಂದ ಆಕೆಗೆ ಮರಣ ಪ್ರಮಾಣ ಪತ್ರ , ವಂಶ ವೃಕ್ಷ ಪ್ರಮಾಣ ಪತ್ರ, ಹಕ್ಕುಬದಲಾವಣೆ ಪ್ರಕ್ರಿಯೆಗೆ ಅನುಕೂಲವಾಗಿ ಮೃತರ ಕುಂಟುಂಬದ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ಕ್ರಮ ಕೈಗೊಳ್ಳಲಾಗಿರುತ್ತದೆ. 6. ಗ್ರಾಮೀಣ ಭಾಗದ ಸುಮಾರು 700 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮತ್ತು ನಗರ ಪ್ರದೇಶದಲ್ಲಿ 95 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸರ್ಕಾರಿ ಜಮೀನುಗಳನ್ನು ಸ್ಮಶಾನಕ್ಕಾಗಿ ಒದಗಿಸಿ ವಿವಿಧ ಯೋಜನೆಗಳಡಿಯಲ್ಲಿ ಅಭಿವೃಧ್ದಿಪಡಿಸಿದ್ದು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಕ್ರಮ ವಹಿಸಲಾಗಿರುತ್ತದೆ. 7. ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ 2000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮಳೆನೀರಿನಿಂದ ಸೋರುತ್ತಿದ್ದು ಸದರಿ ಶಾಲೆಗಳನ್ನು ಉನ್ನತೀಕರಿಸಿ ಅಭಿವೃಧ್ದಿ ಪಡಿಸಲಾಗಿರುತ್ತದೆ ಹಾಗೂ ಸುಮಾರು 400 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಹೊಸದಾಗಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಮಾಡಲಾಗಿರುತ್ತದೆ ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಗುಣಮಟ್ಟಗಳು ಸುಧಾರಣೆ ಮಾಡಲು ಕ್ರಮ ಕೈಗೊಳ್ಳಲಾಗಿರುತ್ತದೆ. 8. ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ನಿಯಮಾನುಸಾರ ಸ್ಥಳ ಗುರುತಿಸಿ ಜಮೀನು ನೀಡಲಾಗಿರುತ್ತದೆ ಅಲ್ಲದೇ ವಿವಿಧ ಯೋಜನೆಗಳಡಿಯಲ್ಲಿ ಅಂಗನವಾಡಿ ಕಟ್ಟಡಗಳನ್ನು ಸರಿಪಡಿಸಲಾಗಿದ್ದು ಕೆಲವು ಅಂಗನವಾಡಿ ಕಟ್ಟಡಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗಿರುತ್ತದೆ. 9. ವಿವಿಧ ಇಲಾಖೆಗಳ ವಸತಿ ಶಾಲೆ ಹಾಗೂ ಹಾಸ್ಟೆಲ್‌ ಗಳಲ್ಲಿ ಆಹಾರ ಪೂರೈಕೆಯ ಗುಣಮಟ್ಟ, ಸ್ವಚ್ಚತೆ ಹಾಗೂ ವಸತಿ ನಿಲಯಗಳ ಮಕ್ಕಳಿಗೆ ಅವಶ್ಯ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸುವ ಸಂಬಂಧ ಪ್ರತ್ಯೇಕ Whatsapp ಗ್ರೂಪ್‌ ರಚನೆ ಮಾಡಿ ಪ್ರತಿ ದಿನ ಖುದ್ದು ನಾನೇ ಪರಿಶೀಲನೆ ಮಾಡುತ್ತಿದ್ದರಿಂದ ಮಕ್ಕಳಿಗೆ ಅವಶ್ಯ ಸೌಕರ್ಯಗಳನ್ನು ಒದಗಿಸುವಲ್ಲಿ ಕ್ರಮ ವಹಿಸಲಾಗಿರುತ್ತದೆ. 10. ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯ ಜಿಲ್ಲೆಯ ಎಲ್ಲಾ ದೇವಸ್ತಾನಗಳಲ್ಲಿನ ಸೇವೆಗಳನ್ನು ಹಾಗೂ ಲೆಕ್ಕ ಪತ್ರಗಳನ್ನು ಸಂಪೂರ್ಣ ಗಣಕೀಕರಣ ಮಾಡಲಾಗಿದ್ದು ಇದರಿಂದ ಭಕ್ತರಿಗೆ ಪಾರದರ್ಶಕತೆ ಸೇವೆಯನ್ನು ಒದಗಿಸುತ್ತಿದ್ದು ಇದರಿಂದಾಗಿ ದೇವಸ್ಥಾನಗಳ ಆದಾಯ ಗರಿಷ್ಠ ಮಿತಿಯಲ್ಲಿ ಹೆಚ್ಚಾಗಿರುತ್ತದೆ ಸದರಿ ಆದಾಯದಿಂದ ದೇವಸ್ತಾನಗಳಲ್ಲಿ ಭಕ್ತರಿಗೆ ಅವಶ್ಯ ಮೂಲಭೂತ ಸೌಕರ್ಯಗಳನ್ನು ನೀಡುವ ಸಂಬಂಧ ಹಲವಾರು ಅಭಿವೃಧ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿರುತ್ತದೆ. 11. ಹಂಪಿ ಉತ್ಸವವನ್ನು ಸತತ ಎರೆಡೂ ವರ್ಷಗಳಲ್ಲಿ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು ಪಾರಂಪರಿಕ ತಾಣ ಹಂಪಿಯ ವೈಭೋಗವನ್ನು ರಾಜ್ಯಕ್ಕೆ ತೋರಿಸಿ , ರಾಜ್ಯದ ಸಂಸ್ಕೃತಿಯನ್ನು ವೈಭವೀಕರಿಸುವಂತೆ ಉತ್ಸವವನ್ನು ಆಚರಿಸಲಾಗಿರುತ್ತದೆ. 12. ಆಡಳಿತ ಸಮಯದಲ್ಲಿಅಟಲ್‌ ಜೀ ಜನಸ್ನೇಹಿ ಕೇಂದ್ರದಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ, ಸಕಾಲ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಭೂಮಿ ಸೇವೆಗಳಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿರುತ್ತದೆ. 13. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ಕಾಲೇಜುಗಳಿಗೆ ಖುದ್ದಾಗಿ ಸತತವಾಗಿ ಭೇಟಿ ನೀಡಿ ಸಾರ್ವಜನಿಕರಿಗೆ ಒದಗಿಸುವ ಸೇವೆಗಳಲ್ಲಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡಲಾಗಿರುತ್ತದೆ. 14. ಜಿಲ್ಲೆಯಾದ್ಯಂತ ಗ್ರಾಮೀಣ, ಹಾಗೂ ನಗರ ಪ್ರದೇಶಗಳಿಗೆ ಅಲ್ಲಿನ ಜನಪ್ರತಿನಿಧಿಗಳು & ಅಧಿಕಾರಿಗಳೊಂದಿಗೆ ಸೈಕಲ್‌ ಜಾತಾ ಮೂಲಕ ಸಂಚರಿಸಿ ಸಾರ್ವಜನಿಕರೊಂದಿಗೆ ಬೆರೆತು ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗಿರುತ್ತದೆ. 15. ಕಂದಾಯ ಇಲಾಖೆಯ ಭೂ ಸುರಕ್ಷಾ ಅಭಿಯಾನದಡಿಯಲ್ಲಿ ಲಕ್ಷೋಪ ಲಕ್ಷ ಭೂ ದಾಖಲೆಗಳನ್ನು ಡಿಜಟಲೀಕರಣ ಮಾಡುವುದು, ಇ-ಪೌತಿ ಅಭಿಯಾನದಲ್ಲಿ ವಾರಸುದಾರರಿಗೆ ಹಕ್ಕುಬದಲಾವಣೆ ಪ್ರಕ್ರಿಯೆ ಮಾಡುವುದು , ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುವ ಸುಮಾರು 16000 ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿರುವುದು. ಕರ್ತವ್ಯ ಅವಧಿಯಲ್ಲಿ ಮುಖ್ಯ ಪಾತ್ರವಹಿಸಿರುತ್ತದೆ. 16. ಸರ್ಕಾರಿ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸುವುದು, ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಫಾರಂ 3 ನೀಡಿದ್ದನ್ನು ರದ್ದುಗೊಳಿಸಿ ತೆರವುಗೊಳಿಸುವ ಕಾರ್ಯದಲ್ಲಿ ಬಾಗಿಯಾಗಿರುತ್ತೇನೆ. 17. ಹಿಂದಿನ ಸಾಲಿನಲ್ಲಿ SSLC ಫಲಿತಾಂಶದಲ್ಲಿ ರಾಜ್ಯದಲ್ಲಿಯೇ 24ನೇ ಸ್ಥಾನದಲ್ಲಿದ್ದುದರಿಂದ ಶಾಲಾ ಶಿಕ್ಷಕರಿಗೆ ವಿಶೇಷವಾದ ತರಬೇತಿಯನ್ನು ನೀಡಿ ಕಲಿಕಾ ವ್ಯವಸ್ಥೆಯಲ್ಲಿ ಪ್ರಗತಿ ಸಾಧಿಸಿ 2024-25 ನೇ ಸಾಲಿನಲ್ಲಿ 17 ನೇ ಸ್ಥಾನಕ್ಕೆ ಬಂದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿರುತ್ತದೆ. 18. ಗುಡೇಕೋಟೆಹೋಬಳಿ ಅಪ್ಪೇನಹಳ್ಳಿ ಗ್ರಾಮದಲ್ಲಿ 02 ಎಕರೆ ಜಮೀನನ್ನು ದೇವರೆತ್ತು ಗೋಶಾಲೆಗಾಗಿ ಜಮೀನು ಕಾಯ್ದಿರಿಸಲಾಗಿರುತ್ತೆ. 19. ನ್ಯಾಯಾಲಯದ ಪ್ರಕರಣಗಳನ್ನು ಅತೀ ಕಡಿಮೆ ಅವಧಿಯಲ್ಲಿ ನಿಯಮಾನುಸಾರ ಇತ್ಯರ್ಥಗೊಳಿಸಿ ನ್ಯಾಯಾಲಯ ಪ್ರಕರಣಗಳನ್ನು ಅತ್ಯಂತ ಶೀಘ್ರ ವಿಲೇವಾರಿ ಮಾಡಲಾಗಿರುತ್ತದೆ. ಇಂತಿ ನಿಮ್ಮವ ನಿರ್ಗಮಿತ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು - ಎಂ.ಎಸ್.ದಿವಾಕರ. I.A.S., ಜಿಲ್ಲಾಧಿಕಾರಿಗಳು, ವಿಜಯನಗರ ಜಿಲ್ಲೆ #heartwarming #letter #written #outgoing #Vijayanagara #DC #MSDiwakar #malgudiexpress #malgudinews #news #TopNews
📢ಸೆಪ್ಟೆಂಬರ್ 11 ರ ಅಪ್ಡೇಟ್ಸ್ 👈 - ShareChat