"ಅನ್ಯದೈವವುಳ್ಳ ಭಕ್ತನ ಮನೆಯ ಆರೋಗಣೆ ಅನ್ಯಾಹಾರದ ಕೂಳು, ನಂಬುಗೆಯಿಲ್ಲದ ಭಕ್ತನ ಮನೆಯ ಆರೋಗಣೆ ಸಂದೇಹದ ಕೂಳು, ಮಾಡಿ, ಹಮ್ಮನುಡಿವ ಭಕ್ತನ ಮನೆಯ ಆರೋಗಣೆ ಕಾರಿದ ಕೂಳು, ನಿಮ್ಮ ನಂಬಿದ ಸಜ್ಜನ ಭಕ್ತನ ಮನೆಯ ಆರೋಗಣೆ ಸದಾಚಾರ ಭೃತ್ಯಾಚಾರ ಶಿವಾಚಾರದಿಂದ ಬಂದುದಾಗಿ ಲಿಂಗಾರ್ಪಿತವಾಯಿತ್ತಯ್ಯಾ ಕೂಡಲಚೆನ್ನಸಂಗಮದೇವಾ.. ✍️ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ವಚನ 💐 ಶರಣು ಶರಣಾರ್ಥಿಗಳು 🙏🏻 #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ


