CATHOLIC BIBLE VERSE
709 views 1 days ago
#✝️ Jesus #✝ಯೇಸು ವಾಕ್ಯಗಳು📖 #📚 ಬೈಬಲ್✝️ #📖ಬೈಬಲ್ ನುಡಿಗಳು✝ ಪರಮಸಾಧ್ವಿ ಸಂತ ಅಲ್ಫೋನ್ಸಾ†*🌹🌹🌹🌹🌹🌹🌹🌹🌹🌹 ಹಬ್ಬದ ದಿನ : ಜುಲೈ •28 -------------------------------- ✍️*ಮಥಿಯಾಸ್ ಕುಮಾರ್* (ಮೈಸೂರು) ___________________________________ *ಕಥೋಲಿಕ ಕ್ರೈಸ್ತ ಜಗತ್ತು* ತನ್ನ ಕಥೋಲಿಕವೆಂಬ ಸಾರ್ವತ್ರಿಕ ಸತ್ಯಕ್ಕೆ ಸಾಕ್ಷಿಯಾಗಿ ತನ್ನ ಪವಿತ್ರ ಒಡಲಲ್ಲಿ ಅಸಂಖ್ಯಾತ ದೇವಪ್ರಜಾ ಸಮೂಹವನ್ನೂ ಸಂತ ಶ್ರೇಷ್ಠರನ್ನೂ ತುಂಬಿಕೊಂಡು ದೈವಾಭಿಮುಖವಾಗಿ ಮುನ್ನಡೆಯುತ್ತಿದೆ. ಸಂತರೆಂದರೇ ಯಾರೂ ಹುಟ್ಟಿದಾಗಲೇ ಸಂತರಾಗಿ ಜನಿಸುವಂತವರಲ್ಲ!! ತಮ್ಮ ಜೀವಿತವನ್ನು ಪವಿತ್ರ ಜೀವಿತಕ್ಕೆ ಬದಲಾಯಿಸಿ ದೈವತ್ವದ ಹಾದಿಯಲ್ಲಿ ಮುನ್ನಡೆದು ಕಠಿಣ ಪರಿಶ್ರಮದಿಂದ ನಿಷ್ಠೆ, ಪ್ರಾಮಾಣಿಕತೆಯಿಂದ ದೈವಚಿತ್ತಕ್ಕೆ ಮಣಿದು ದೇವರ ಮಹಿಮೆಯನ್ನು ಬೆಳಗಿದವರೇ ನಮ್ಮ ಸಂತ ಶ್ರೇಷ್ಠರು.!! *"ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ"* (ಮತ್ತಾಯ 5:48) ಎಂದು ನುಡಿದ *ಪ್ರಭುಯೇಸುಕ್ರಿಸ್ತ* ರ ಮಧುರ ವಾಕ್ಯಕ್ಕೆ ಕಿವಿಗೊಟ್ಟು ತಮ್ಮ ಜೀವಿತವನ್ನು ಪಾವನತೆಯೆಡೆಗೆ ಮುಡುಪಾಗಿಟ್ಟು ಶೋಧನೆ, ವೇದನೆ, ಭಾವನೆಗಳು ಜಯಿಸಿ ಸಾತ್ವಿಕರೆನ್ನಿಸಿ ಕೊಂಡವರು ಈ ಸಂತ ಶ್ರೇಷ್ಠರುಗಳು. ಇವರನ್ನು ಕುರಿತು ದೇವರು ಕೀರ್ತನೆಗಾರನ ಮೂಲಕ ತಿಳಿಸುತ್ತಾರೆ. *''ಸಂತರು ನಾಡಿಗೆ ತಿಲಕವು| ಅವರಲ್ಲಿದೆ ಎನಗೆ ಒಲವು||"* (ಕೀರ್ತನೆ 16:3) ಎಂದು.. ವಿಶ್ವವ್ಯಾಪ್ತೀ *ಏಕ. ಪವಿತ್ರ.ಪ್ರೇಷಿತ ಮತ್ತು ಕಥೋಲಿಕ ಧರ್ಮಸಭೆ* ಯಲ್ಲಿ ಸಂತರ ಪಟ್ಟ ಪಡೆಯುವುದು ಅಷ್ಟು ಸುಲಭದ ಕಾರ್ಯವಲ್ಲ..!! ಹಾಗೆಯೇ ಸಂತರಾಗಲು ಸಾಧ್ಯವೇ ಇಲ್ಲವೆಂದಲ್ಲ!!! ಏಕೆಂದರೆ ನಮ್ಮ ಕಥೋಲಿಕ ಧರ್ಮಸಭೆಯಲ್ಲಿ ಅಸಂಖ್ಯಾತ ಸಂತ ಶ್ರೇಷ್ಠರು ಗುರುತಿಸಲ್ಪಟ್ಟು ಸಂತರ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿದ್ದಾರೆ.!!. ಪವಿತ್ರ ಕಥೋಲಿಕ ಶ್ರೀಧರ್ಮಸಭೆಯಲ್ಲಿ ಸಂತರ ಸ್ಥಾನಕ್ಕೇರಿಸಲ್ಪಟ್ಟು ಘೋಷಿಸಲ್ಪಡಬೇಕಾದರೆ ಅವರ ಪಾವಿತ್ರ್ಯತೆಯ ಜೀವಿತದ ಹಾಗೂ ಸೂಚಕ ಕಾರ್ಯಗಳು, ಮತ್ತು ಪವಾಡ ಕಾರ್ಯಗಳ ಅದ್ಭುತಗಳು ಸಾಕ್ಷ್ಯಾಧಾರಗಳ ಸಮೇತ ನಾಲ್ಕು ಪ್ರಮುಖ ಹಂತಗಳನ್ನು ದಾಟಬೇಕಾಗಿದೆ ಅವುಗಳು ಕೆಳಗಿನಂತಿವೆ. 💥*1)The Servents of God †* *ದೇವರ ಸೇವಕರು* 💥*2) The Venerable †* *ಪೂಜ್ಯರು* 💥*3) The Blessed †* *ಪುನೀತರು* 💥*4) The Saints †* *ಸಂತರು* ಈ ಮೇಲಿನ ಎಲ್ಲಾ ಪ್ರಮುಖ ಹಂತಗಳನ್ನು ದಾಟಲು ಪವಿತ್ರ ಕಥೋಲಿಕ ಶ್ರೀಧರ್ಮಸಭೆಯಲ್ಲಿ ಹಲವು ಪ್ರಕ್ರಿಯೆಗಳಿವೆ ಇವನ್ನೆಲ್ಲಾ ಹಾದು ದೈವಕೃಪಾನುಗ್ರಹದಿಂದ ಸಾಧನೆಗೈದ ಮೇಲೆಯೇ ಸಂತರೆಂದು ಘೋಷಿಸಲ್ಪಟ್ಟು ಗೌರವಿಸಲ್ಪಡುತ್ತಾರೆ..!! ಇದು ಪ್ರಭುಯೇಸುವಿನ ಕರೆಯೂ ಸ್ವರ್ಗಕ್ಕೆ ಆಮಂತ್ರಣವೂ ಪೀಠಕಾಯ್ದಿರಿಸುವಿಕೆಯೂ ಅಡಗಿದೆ..!! *"ನಾನು ಜಯಗಳಿಸಿ ನನ್ನ ತಂದೆಯೊಡನೆ ಅವರ ಸಿಂಹಾಸನದಲ್ಲಿ ಕುಳಿತುಕೊಂಡಿದ್ದೇನೆ. ಅದೇ ಪ್ರಕಾರ ಜಯ ಹೊಂದಿದವನಿಗೆ ನನ್ನೊಡನೆ ನನ್ನ ಸಿಂಹಾಸನದಲ್ಲಿ ಕುಳಿತುಕೊಳ್ಳುವ ಹಕ್ಕನ್ನು ನಾನು ಕೊಡುತ್ತೇನೆ."*(ಪ್ರಕಟನೆ3:21) ಈ ಪವಿತ್ರ ಕರೆಗೆ ಓಗೊಟ್ಟ ಅಸಂಖ್ಯಾತ ದೈವಕೃಪಾನುಭರಿತ ಸಂತರೆಂದು ಪವಿತ್ರ ಶ್ರೀಧರ್ಮಸಭೆಯಿಂದ ಪರಿಗಣಿಸಲ್ಪಟ್ಟ ಕಥೋಲಿಕ ಕ್ರೈಸ್ತ ಜಗತ್ತಿನ ಸಂತರುಗಳ ಸಾಲಿನಲ್ಲಿ ನಮ್ಮ ಭವ್ಯ ಭಾರತ ದೇಶದ *ಪರಮಸಾಧ್ವಿ* ಮಹಿಮಾನ್ವಿತಾ ಸನ್ಯಾಸಿನಿಯೊಬ್ಬರು ಸಾಧನೆಗೈದು ಜಯಗಳಿಸಿದರು!!. ಅವರೇ ಭಾರತದ ಪ್ರಥಮ ಮಹಿಳಾ ಸಂತರೆಂದು ಘೋಷಿಸಲ್ಪಟ್ಟ ಸಂತರು" *"ಸಂತ ಸಿಸ್ಟರ್ ಅಲ್ಫೋನ್ಸಾ ಮುಟ್ಟತ್ತು ಪಾಡತ್ತು"* ರವರು, ಇವರು ನಮ್ಮ ನೆರೆ ರಾಜ್ಯದ 🏖️*"ದೇವರಸ್ವಂತ ನಾಡು"* ಎಂದೇ ಪ್ರಸಿದ್ಧವಾದ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ಕುಡಮಾಲೂರ್‌ ಹತ್ತಿರವಿರುವ *ಮುಟ್ಟತ್ತುಪಾಡತ್ತು* ಎಂಬಲ್ಲಿ 1910 ದ ಆಗಸ್ಟ್ 19 ರಂದು ಜನಿಸಿದರು., *"ತಂದೆ ಜೋಸೆಫ್ ಮುಟ್ಟತ್ತು ಪಾಡತ್ತು"* ಮತ್ತು ತಾಯಿ *"ಮೇರಿಯಂ ಪುದುಸೇರಿ"* ಯವರು ಸಂತ ಅಲ್ಫೋನ್ಸಾರವರು ಹುಟ್ಟಿದ *ಏಳನೇಯ ದಿನ ಜ್ಞಾನಸ್ನಾನ* ಪಡೆದು ''ಅನ್ನಕುಟ್ಟಿ'' ಎಂದು ನಾಮಕರಣ ಪಡೆದರು. *ಏಳನೆಯ ವಯಸ್ಸಿನಲ್ಲಿ* ಅಂದರ 1917 ರ ನವೆಂಬರ್ 27 ರಂದು *ಪ್ರಥಮ ಪರಮಪ್ರಸಾದವನ್ನು ಸ್ವೀಕರಿಸಿದರು*. ತನ್ನ 17ನೇಯ ವಯಸ್ಸಿನಲ್ಲಿ ಅಂದರೆ 1927ರ ಮೇ 27ರಂದು *ಭರಣಾಂಗಮ್* ಎಂಬಲ್ಲಿ *ಫ್ರಾನ್ಸಿಸ್ಕನ್ ಕ್ಲಾರಿಸ್ಟ್* ಎಂಬ ಸನ್ಯಾಸಿನಿಯರ ಮಠಕ್ಕೆ ಸೇರಿದರು. ಮಾರನೆಯ ವರ್ಷ 1928ರ ಆಗಸ್ಟ್ 2 ರಂದು ಕನ್ಯಾಮಠದ ಶಿರೋವಸ್ತ್ರ ಸ್ವೀಕರಿಸಿ *"ಅನ್ನಕುಟ್ಟಿ"* ಎಂಬ ನಾಮಕ್ಕೆ ಬದಲು *"ಅಲ್ಫೋನ್ಸಾ"* ಎಂಬ ನಾಮವನ್ನು ಸ್ವೀಕರಿಸಿದರು. ಏಕೆಂದರೆ ಅಂದು ಧರ್ಮಸಭೆಯ ಮಹಾಪಂಡಿತರಾದ *"† ಸಂತ ಅಲ್ಫೋನ್ಸ್ ಮರಿಯಾ ಲಿಗೋರಿ''* ಅವರ ಹಬ್ಬದ ದಿನವಾಗಿತ್ತು.!!! ಸಂತ ಪೌಲರು ನುಡಿದಂತೆ *"ಕ್ರಿಸ್ತ ಯೇಸು ತಮ್ಮ ಶರೀರವಾದ ಧರ್ಮಸಭೆಗೋಸ್ಕರ ಅನುಭವಿಸಬೇಕಾದ ಯಾತನೆಗಳಲ್ಲಿ ಉಳಿದದ್ದನ್ನು ನಾನು ನನ್ನ ದೇಹದಲ್ಲಿ ಅನುಭವಿಸಿ ಪೂರ್ಣಗೊಳಿಸುತ್ತಿದ್ದೇನೆ.."* (ಕೊಲೋಸ್ಸೆಯರಿಗೆ1:24) ಈ ವಾಕ್ಯದಂತಯೇ *ಸಂತ ಅಲ್ಫೋನ್ಸಾ* ರವರು ಅನಾರೋಗ್ಯದ ಯಾತನಾಭರಿತ ಜೀವಿತದಿಂದ ದೇವರನ್ನು ಮಹಿಮೆ ಪಡಿಸಿ 1946ರ ಜುಲೈ 28 ರಂದು ತಮ್ಮ ಅಂತಿಮ ಪಯಣಕ್ಕೆ ಸಿದ್ದರಾಗಿ ಕೊನೆಗೆ *"ಯೇಸುವೇ ಮರಿಯೇ ಜೋಸೆಫರೇ"* ಎಂದು ಜಪಿಸುತ್ತಾ ಕ್ರಿಸ್ತೈಕ್ಯರಾದರು.., ಅವರ ಮರಣದ ನಂತರ, ಅನೇಕ ಜನರು ಅವರ ಮಧ್ಯಸ್ಥಿಕೆಗೆ ಪವಾಡಗಳನ್ನು ಹೇಳಲು ಪ್ರಾರಂಭಿಸಿದರು..!! ಅವರ ಸಂತ ಪದವಿ ನೀಡುವ ಪ್ರಕ್ರಿಯೆಯು 1955 ರಲ್ಲಿ ಪ್ರಾರಂಭವಾಯಿತು ಮತ್ತು 1986 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ. *"ಯುವಕರಪೋಪ್ ಎಂದೇ ಖ್ಯಾತಿ ಪಡೆದ † ಸಂತ ಪೋಪ್ ಜಾನ್ ಪಾಲ್II"* ಅವರಿಂದ ಅವರನ್ನು *† ಪುನೀತ †* ರೆಂದು ಘೋಷಿಸಲ್ಪಟರು.., 1990 ರ ದಶಕದಲ್ಲಿ, ಅವರ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು, ಇದು *ಭಾರತೀಯ ಅಂಚೆಚೀಟಿಯಲ್ಲಿ ಕಾಣಿಸಿಕೊಂಡ ಕೇರಳದ ಮೊದಲ ಮಹಿಳೆ ಎಂದು ಗುರುತಿಸುತ್ತದೆ..!! ಹಾಗೆಯೇ ಭಾರತ ಸರ್ಕಾರವು ಸಂತ ಅಲ್ಫೋನ್ಸಾರ ಜನ್ಮಶತಮಾನೋತ್ಸವದ ಅಂಗವಾಗಿ ₹5 ಮತ್ತು ₹100 ಸ್ಮಾರಕ ನಾಣ್ಯಗಳನ್ನು ಬಿಡುಗಡೆ ಮಾಡಿ ಅಲ್ಫೋನ್ಸಾ ಅವರನ್ನು ಗೌರವಿಸಲಾಯಿತು..!!* ಅಕ್ಟೋಬರ್ 12, 2008 ರಂದು *"† ಪೋಪ್ ಬೆನೆಡಿಕ್ಟ್ XVI"* ಅವರು *ಅಲ್ಫೋನ್ಸಾ* ಅವರನ್ನು *† ಸಂತ †* ರೆಂದು ಘೋಷಿಸಿದರು, ಇದರಿಂದಾಗಿ. *"ಭಾರತದ ಪ್ರಥಮ ಮಹಿಳಾ ಸಂತರು"* ಎಂಬ ಅಮೋಘ ಗೌರವಕ್ಕೆ ಪಾತ್ರರಾದರು. ಭಾರತಕ್ಕೆ ಸಂಬಂಧಿಸಿದ ಸಂತರಲ್ಲಿ ಅವರಿಗಿಂತ ಮೊದಲು *ಸಂತ ಗೊನ್ಸಾಲೊ ಗಾರ್ಸಿಯಾ* ಹಾಗೂ *ಸಂತ ಜೋಸೆಫ್ ವಾಜ್* ಅವರನ್ನು ಧರ್ಮಸಭೆ ಸಂತರಾಗಿ ಘೋಷಿಸಿತ್ತು. *"ಸಂತ ಅಲ್ಫೋನ್ಸಮ್ಮನವರು ರೋಗಿಗಳು, ದೈಹಿಕ ಕಾಯಿಲೆಯಿಂದ ಬಳಲುವವರು ಹಾಗೂ ವಿಶೇಷವಾಗಿ ಪಾದದ ಕಾಯಿಲೆಗಳಿಂದ ಬಳಲುವವರ ಪಾಲಕ ಸಂತರಾಗಿದ್ದಾರೆ."* 🏝️ಕೇರಳದಲ್ಲಿ *† ಸಂತ ಅಲ್ಫೋನ್ಸಾ* ಅವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ, ಕೇರಳದ ತಿರುವನಂತಪುರಂ ಜಿಲ್ಲೆಯ *"ಭರಣಂಗಣಂ" (Bharananganam)* ನಲ್ಲಿರುವ ಅವರ ಸಮಾಧಿಯು ತೀರ್ಥಯಾತ್ರೆಯ ಸ್ಥಳವಾಗಿದೆ..! ಅವರ ಹಬ್ಬದ ದಿನವನ್ನು ವಾರ್ಷಿಕವಾಗಿ ಇದೇ ತಿಂಗಳ ಜುಲೈ 28 ರಂದು *† ಸಂತ ಅಲ್ಫೋನ್ಸಾ ಅಮ್ಮ†* ರವರ ಹಬ್ಬವನ್ನು ಪವಿತ್ರ ಕಥೋಲಿಕ ಧರ್ಮಸಭೆಯು ಆಚರಿಸುತ್ತದೆ.‌ ಸಿರೋ-ಮಲಬಾರ್ ಚರ್ಚ್ ನಲ್ಲಿ ಬಹು ವಿಜೃಂಭಣೆಯಿಂದ ಇವರ ವಾರ್ಷಿಕೋತ್ಸವ ಹಬ್ಬವನ್ನು ಆಚರಿಸುತ್ತಾರೆ.., *"ನಮ್ಮಲ್ಲಿಯೂ ಸಂತರಂತೆ!! ವಾಸಿಸುತ್ತಿರುವ ಅನೇಕ ಸಂತ ಸಿಸ್ಟರ್(ಕನ್ಯಾಸ್ತ್ರೀ)ಗಳಿದ್ದಾರೆ.!! ಶಿಕ್ಷಣ ಕ್ಷೇತ್ರದಲ್ಲಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ..!!ಜನರೊಂದಿಗೆ ನಡೆನುಡಿಯಲ್ಲಿ ಸೌಮ್ಯತೆ..!!* *ಹಿರಿಯ ಕಿರಿಯರಲ್ಲಿ ಸೌಜನ್ಯತೆ..!! ಬಡವಬಲ್ಲಿಧವರಲ್ಲಿ ಸೌಹಾರ್ದತೆ..!!* *ನಿರ್ಗತಿಕರಲ್ಲಿ ಕರುಣೆ ಅನುಕಂಪ ಮತ್ತು ಸಹಾಯಕತೇ..!! ಸೇವೆ..!! ದೇವರಿಗೆ ಪ್ರಿಯ..??"* ದೇವರ ವಾಕ್ಯ ತಿಳಿಸುತ್ತದೆ. *"ಸತ್ಕ್ರಿಯೆಗಳಿಲ್ಲದ ವಿಶ್ವಾಸ ಸತ್ತ ವಿಶ್ವಾಸವೇ ಸರಿ."* ಎಂದು (ಯಾಕೋಬನು 2:17) *"† ಹೌದಾದರೆ ಹೌದೆನ್ನಿರಿ: ಅಲ್ಲವಾದರೆ ಅಲ್ಲವೆನ್ನಿರಿ; ಇದಕ್ಕಿಂತ ಮಿಗಿಲಾದುದು ಪಿಶಾಚಿಯಿಂದ ಪ್ರೇರಿತವಾದುದು."†* (ಮತ್ತಾಯ5:37) *† ಸಂತ ಅಲ್ಫೋನ್ಸಾ ಅಮ್ಮ†* ರವರಲ್ಲಿ ನಮ್ಮ ಅಗತ್ಯಗಳಿಗಾಗಿ ಪ್ರಾರ್ಥಿಸಿ ದೇವರಿಂದ ವರದಾನಗಳನ್ನು ಪಡೆಯೋಣವೇ..!? 🙏🏻*ಪ್ರಾರ್ಥನೆ:* ಓ ಮಹಿಮಾಸಾಧ್ವಿ ಸಂತ ಅಲ್ಫೋನ್ಸಮ್ಮನವರೇ, ಶಿಲುಬೆಯ ಮಾರ್ಗವನ್ನು ಸಂತೋಷದಿಂದ ಹೊತ್ತು ಕ್ರಿಸ್ತನನ್ನು ಅನುಸರಿಸಿದ ನಿಮ್ಮ ಮಾದರಿಯನ್ನು ನಾವು ಅನುಸರಿಸುವ ಕೃಪೆಯನ್ನು ದೇವರಿಂದ ನಮಗಾಗಿ ಬೇಡಿಕೊಳ್ಳಿರಿ. ನಮ್ಮ ದುಃಖ, ಕಾಯಿಲೆ, ಸಂಕಷ್ಟ ಮತ್ತು ಶೋಧನೆಗಳಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದೆ ದೇವರ ಚಿತ್ತಕ್ಕೆ ವಿಧೇಯರಾಗಿ ಬದುಕುವ ಅನುಗ್ರಹವನ್ನು ಹೊಂದುವಂತೆ ಮಧ್ಯಸ್ಥಿಕೆ ವಹಿಸಿರಿ. ಆಮೆನ್. 🌹 *ಮಹಿಮಾಸಾಧ್ವಿ ಸಂತ ಅಲ್ಫೋನ್ಸಮ್ಮನವರೇ ನಮಗಾಗಿ ಪ್ರಾರ್ಥಿಸಿರೀ..* 🌹
14 shares

More like this