ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ಡಾ.ಎಚ್.ಆರ್. ಸ್ವಾಮಿ ಅವರ ಕುಡ್ರ್ ವಾತ ಕತ ಜನಾಪರ್ಪಣೆ ಸಡಗರ ನೇಗಿಲ ಯೋಗಿ ಟ್ರಸ್ಟ್ ವತಿಯಿಂದ 'ಕೊರಚ' ಸಮುದಾಯದ ಸಂಶೋಧನಾ ಕೃತಿಗಳ 'ಜನಾಪರ್ಪಣೆ ಸಡಗರ' ಕಾರ್ಯಕ್ರಮ ಬೆಂಗಳೂರು: ನಾಡಿನ ವಿಶಿಷ್ಟ ಅಲೆಮಾರಿ ಸಮುದಾಯವಾದ 'ಕೊರಚ' ಜನಾಂಗದ ಬದುಕು, ಸಂಸ್ಕೃತಿ ಮತ್ತು ಭಾಷೆಯನ್ನು ದಾಖಲಿಸುವ ಮಹತ್ವದ ಸಂಶೋಧನಾ ಕೃತಿಗಳ 'ಜನಾಪರ್ಪಣೆ ಸಡಗರ' ಇದೇ ಮೇ 17ರಂದು ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ನೇಗಿಲ ಯೋಗಿ ಟ್ರಸ್ಟ್ (ನೇಯೋಟ್) ವತಿಯಿಂದ ಆಯೋಜನೆಯಾಗಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕರಾದ ಡಾ.ಎಚ್.ಆರ್. ಸ್ವಾಮಿ ಅವರ ಕೃತಿ ಕುಡ್ರ್ ವಾತ ಕತ (ಕೊರಚ ಮಾತುಕತೆ) ಹಾಗೂ ಡಾ. ಎಚ್.ಆರ್.ಸ್ವಾಮಿ ಅವರ ಕರ್ನಾಟಕದ ಕೊರಚರು ಪಿಎಚ್ಡಿ ಪ್ರಬಂಧದ ಇಂಗ್ಲಿಷ್ ಅನುವಾದಿತ ಕೃತಿ 'The Korachas of Karnataka' (ಅನುವಾದ: ಶ್ರೀಹರ್ಷ) ಬಿಡುಗಡೆಯಾಗಲಿವೆ. ಕಾರ್ಯಕ್ರಮದ ವಿವರಗಳು: ದಿನಾಂಕ: 17-05-2026, ಭಾನುವಾರ ಸಮಯ: ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರವರೆಗೆ ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಗಣ್ಯರ ಉಪಸ್ಥಿತಿ: ನಾಡಿನ ಖ್ಯಾತ ಸಾಕ್ಷಿಪ್ರಜ್ಞೆ, ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಕೃತಿಗಳನ್ನು ಜನಾರ್ಪಣೆ ಮಾಡಲಿದ್ದಾರೆ. ಹಿರಿಯ ಭಾಷಾ ವಿಜ್ಞಾನಿ ಪ್ರೊ. ಹಂಪ ನಾಗರಾಜಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತೀಯ ಸಾಹಿತ್ಯದ ಪರಿಣಿತರಾದ ಅಗ್ರಹಾರ ಕೃಷ್ಣಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ಡಾ. ಆರ್.ವಿ. ಚಂದ್ರಶೇಖರ್ ಭಾಗವಹಿಸಲಿದ್ದಾರೆ. ಕೃತಿಗಳ ಕುರಿತು ಚರ್ಚೆ: ಕುಡ್ರ ವಾತ ಕತ (ಕೊರಚ ಮಾತುಕತೆ) ಕೃತಿಯ ಕುರಿತು ತುಮಕೂರು ವಿ.ವಿ.ಯ ಡಾ. ಬಸವರಾಜು ಜಿ. ಅವರು ಮಾತನಾಡಲಿದ್ದಾರೆ. 'The Korachas of Karnataka' ಕೃತಿಯ ಕುರಿತು ಚೀಫ್ ಆಪರೇಟಿಂಗ್ ಆಫಿಸರ್, ಸೀನಿಯರ್ ಅಸೋಸಿಯೇಟ್ ಇನ್ ಎಜುಕೇಷನ್ ಅಂಡ್ ಕರಿಯರ್ ಕೌನ್ಸಿಲಿಂಗ್ ಆಫೀಸರ್ ಕುಮಾರಿ ಅನ್ವೇಷ ಓಬಿರಾಯ್ ವಿಷಯ ಮಂಡಿಸಲಿದ್ದಾರೆ. ವಿಶೇಷ ಆಕರ್ಷಣೆ: ಕಾರ್ಯಕ್ರಮದ ಅಂಗವಾಗಿ ಕೊರಚ ಭಾಷೆಯಲ್ಲಿ ವಚನ ಗಾಯನ (ರಾಜಪ್ಪ ಕೋಲಾರ ಮತ್ತು ತಂಡ), ಬುದ್ಧ ಕಥಾ ವಾಚನ (ಶ್ರೀಮತಿ ಮಾಲತಿ ಎಂ.) ಹಾಗೂ ಸಂವಿಧಾನದ ಪೀಠಿಕೆ ಓದು (ತ್ರಿಶಾನ್ ಸಂತೋಷ್) ನಡೆಯಲಿದೆ. ಅಲ್ಲದೆ, ಪ್ರತಿ ಕೊರಚ ಹಟ್ಟಿಗೆ ಒಂದು ಸೆಟ್ ಪುಸ್ತಕವನ್ನು ಉಚಿತವಾಗಿ ವಿತರಿಸುವ ಮೂಲಕ ಜ್ಞಾನದೀವಿಗೆಯನ್ನು ಹಂಚುವ ವಿಶಿಷ್ಟ ಪ್ರಯತ್ನಕ್ಕೆ ಡಾ. ಎಚ್.ಆರ್. ಸ್ವಾಮಿ ಅವರು ಮುಂದಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಲಿಪಿಯಲ್ಲಿ ಕೊರಚ ಭಾಷೆಯನ್ನು ಕಲಿಯುವ ಮೊಟ್ಟಮೊದಲ ದಾಖಲೆ ಇದಾಗಿದ್ದು, ಅಳಿವಿನ ಅಂಚಿನಲ್ಲಿರುವ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಕೃತಿಗಳು ಮೈಲಿಗಲ್ಲಾಗಿವೆ. ಸಮುದಾಯದ ಬಾಂಧವರು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಬೇಕೆಂದು ನೇಗಿಲ ಯೋಗಿ ಟ್ರಸ್ಟ್‌ನ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನೇಗಿಲ ಯೋಗಿ ಟ್ರಸ್ಟ್ (ರಿ), ಬೆಂಗಳೂರು. ಸಂ. 161, 2ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ, ಬೆಂಗಳೂರು - 560060 ಮೊ: 9844086993 #HRSwami #KudrVataKatha #release #bookpromotion #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ ನ93 EXPRESS (ಕನ್ನಡ ಮತ್ತು ಇಂಲ್ಲೀಷ್ ಆಪಿಯಲ್ಲಿ ಮೊಟ್ಟಮೊದಲ ದಾಖಲ ಕೊರಚ ಮಾತುಕತೆ  ಡಾ ಎಚ್ ಆರ್. ಸ್ವಾಮಿ ಕಡ್ ವಾತಕತ ಅವರ ಕುಡ್ರ್ ವಾತ ಕತ మట్తు The Korachas of ಜನಾರ್ಪಣೆ ಸಡಗರ Karnataka ಅನುವಾದಿತ ಕೃತ ಜನಾರ್ಪಣ 1111 ಸಡಗರ HTTPS:IIMALGUDIEXPRESS.CO.INI ಶ ನ93 EXPRESS (ಕನ್ನಡ ಮತ್ತು ಇಂಲ್ಲೀಷ್ ಆಪಿಯಲ್ಲಿ ಮೊಟ್ಟಮೊದಲ ದಾಖಲ ಕೊರಚ ಮಾತುಕತೆ  ಡಾ ಎಚ್ ಆರ್. ಸ್ವಾಮಿ ಕಡ್ ವಾತಕತ ಅವರ ಕುಡ್ರ್ ವಾತ ಕತ మట్తు The Korachas of ಜನಾರ್ಪಣೆ ಸಡಗರ Karnataka ಅನುವಾದಿತ ಕೃತ ಜನಾರ್ಪಣ 1111 ಸಡಗರ HTTPS:IIMALGUDIEXPRESS.CO.INI - ShareChat