Malgudi Express
ShareChat
click to see wallet page
@news007
news007
Malgudi Express
@news007
Malgudi Express official Page
#📜ಪ್ರಚಲಿತ ವಿದ್ಯಮಾನ📜 ಕಾರ್ಮಿಕ ಸಂಹಿತೆಗಳ ವಿರುದ್ಧ ಮಂಗಳೂರಿನಲ್ಲಿ ರಸ್ತೆತಡೆ ಅಖಿಲ ಭಾರತ ಮಹಾಮುಷ್ಕರ ಮಂಗಳೂರು: ಕಾರ್ಮಿಕ ವರ್ಗದ 29 ಪ್ರಮುಖ ಕಾನೂನುಗಳನ್ನು ರದ್ದುಗೊಳಿಸಿ, ಕಾರ್ಪೊರೇಟ್ ಪರ 4 ಸಂಹಿತೆಗಳನ್ನು ಜಾರಿಗೊಳಿಸಿದ ಕೇಂದ್ರ ಸರಕಾರದ ವಿರುದ್ಧ ರೈತ ಕಾರ್ಮಿಕರ ನೇತ್ರತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ ಅತ್ಯಂತ ಯಶಸ್ವಿಯಾಗಿ ಜರುಗಿದ್ದು,ಅದರ ಭಾಗವಾಗಿ ಮಂಗಳೂರಿನ ಹೃದಯಭಾಗದ ಕ್ಲಾಕ್ ಟವರ್ ಬಳಿಯಲ್ಲಿ ವಿವಿಧ ವಿಭಾಗದ ಕಾರ್ಮಿಕರು ನೌಕರರು ಜತೆಯಾಗಿ ಸೇರಿ ರಸ್ತೆತಡೆ ನಡೆಸಿ ಬಳಿಕ ಪ್ರತಿಭಟನಾ ಸಭೆಯನ್ನು ನಡೆಸಿದರು. 500ಕ್ಕೂ ಮಿಕ್ಕಿದ ಪ್ರತಿಭಟನಾಕಾರರು, ಕಾರ್ಪೊರೇಟ್ ಹಿತಾಸಕ್ತಿಗಳನ್ನು ತನ್ನ ಮೂಲಮಂತ್ರವನ್ನಾಗಿಸಿದ ಕೇಂದ್ರ ಸರಕಾರದ ವಿರುದ್ದ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗುವ ಮೂಲಕ ಲೇಬರ್ ಕೋಡ್ ಗಳನ್ನು ವಾಪಸ್ ಪಡೆಯಲು ಒಕ್ಕೊರಲಿನಿಂದ ಒತ್ತಾಯಿಸಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಅಚ್ಛೇದಿನ್ ತರುವುದಾಗಿ ದೇಶದ ಜನತೆಯ ಮುಂದೆ ವಾಗ್ದಾನ ಮಾಡಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 12 ವರ್ಷಗಳಲ್ಲಿ ದೇಶದ ಸಂಪತ್ತನ್ನು ದೋಚಿದ್ದಲ್ಲದೆ ಕಾರ್ಪೊರೇಟ್ ಗಳ ಪರವಾಗಿ ತನ್ನೆಲ್ಲಾ ನೀತಿ ನಿರೂಪಣೆಗಳನ್ನು ರೂಪಿಸಿದೆ.ದೇಶದ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿದೆ.ಕಾರ್ಮಿಕ ಕಾನೂನುಗಳನ್ನು ಇಲ್ಲವಾಗಿಸಿದ ಕೇಂದ್ರ ಸರಕಾರ ದೇಶದ ಗುತ್ತೇದಾರಿ ಬಂಡವಾಳಿಗರ ಪರವಾಗಿ ಸಂಹಿತೆಗಳನ್ನು ಜಾರಿಮಾಡಿದೆ.90% ಕಾರ್ಮಿಕರ ಬದುಕಿಗೆ ರಕ್ಷಣೆ ನೀಡದ ಲೇಬರ್ ಕೋಡ್ ಗಳು ಕಾರ್ಪೊರೇಟ್ ಕೋಡ್ ಗಳಲ್ಲದೆ ಮತ್ತೇನು ಎಂದು ಪ್ರಶ್ನಿಸಿರುವ ಅವರು,ಈ ಮಹಾಮುಷ್ಕರದಲ್ಲಿ ದೇಶದ 40 ಕೋಟಿಗೂ ಮಿಕ್ಕಿದ ರೈತ ಕಾರ್ಮಿಕರು ನೌಕರರು ಭಾಗವಹಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಛಡಿಯೇಟು ಬೀಸಿದ್ದಾರೆ.ಲೇಬರ್ ಕೋಡ್ ಹಾಗೂ ರೈತ ವಿರೋಧಿ ಬೀಜ ಮಸೂದೆ,ವಿದ್ಯುತ್ ಮಸೂದೆಗಳನ್ನು ಈ ಕೂಡಲೇ ವಾಪಸ್ ಪಡೆಯದಿದ್ದಲ್ಲಿ ಇನ್ನಷ್ಟು ಸಮರಶೀಲ ಹೋರಾಟಗಳನ್ನು ನಡೆಸುವುದರಲ್ಲಿ ಸಂಶಯವಿಲ್ಲ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು. AITUC ಜಿಲ್ಲಾ ನಾಯಕ ಎಚ್ ವಿ ರಾವ್ ಮಾತನಾಡಿ, ಮಹಾತ್ಮ ಗಾಂಧೀಜಿಯ ಹೆಸರಿನಲ್ಲಿದ್ದ,ಗ್ರಾಮೀಣ ಜನತೆಯ ಉಸಿರಾಗಿದ್ದ ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನೇ ಬದಲಿಸಿ, ಮುಂಬರುವ ದಿನಗಳಲ್ಲಿ ಆ ಯೋಜನೆಯನ್ನು ಕತ್ತು ಹಿಸುಕಿ ಸಾಯಿಸಲು ಹೊರಟ ಕೇಂದ್ರ ಸರಕಾರದ ಕುತಂತ್ರವನ್ನು ದೇಶದ ಜನತೆ ಅರ್ಥೈಯಿಸಬೇಕಾಗಿದೆ ಎಂದು ಹೇಳಿದರು. ದ.ಕ.ಜಿಲ್ಲಾ ಬ್ಯಾಂಕ್ ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ ಮಾತನಾಡಿ, ದೇಶದ ಅರ್ಥ ವ್ಯವಸ್ಥೆಗೆ ಭಾರೀ ಕೊಡುಗೆ ನೀಡಿದ ರಾಷ್ಟ್ರೀಕೃತ ಬ್ಯಾಂಕುಗಳನ್ನೇ ಇಲ್ಲವಾಗಿಸಲು ವಿಲಿನೀಕರಣದ ಹೆಸರಿನಲ್ಲಿ ಅದೆಷ್ಟೋ ಬ್ಯಾಂಕುಗಳನ್ನು ಹೇಳ ಹೆಸರಿಲ್ಲದಂತೆ ಮಾಡಿದ ಕೇಂದ್ರ ಸರಕಾರ ಇಂದು ವಿಮಾ ವಲಯವನ್ನು ಕೂಡ 100% ದಷ್ಟು ವಿದೇಶೀ ನೇರ ಹೂಡಿಕೆಗೆ ಒಳಪಡಿಸಿದೆ.ಈ ಮೂಲಕ ದೇಶದ ಅರ್ಥ ವ್ಯವಸ್ಥೆಯನ್ನು ಬುಡಮೇಲುಗೊಳಿಸಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಅಖಿಲ ಭಾರತ ಮುಷ್ಕರದ ಮಹತ್ವವನ್ನು ವಿವರಿಸುತ್ತಾ,ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಎಳೆಎಳೆಯಾಗಿ ವಿವರಿಸಿದರು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕರ್ನಾಟಕ ಬ್ಯಾಂಕ್ ನೌಕರರ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಜಿ ಫಣೀಂದ್ರ, AITUC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ, ಬ್ಯಾಂಕ್ ನೌಕರರ ಮುಖಂಡರಾದ ಬಿ ಎಂ ಮಾಧವ, DYFI ಜಿಲ್ಲಾಧ್ಯಕ್ಷರಾದ ಬಿ ಕೆ ಇಮ್ತಿಯಾಜ್ ರವರು ಮಾತನಾಡಿ,ರೈತ ಕಾರ್ಮಿಕರ ಹಾಗೂ ಮಧ್ಯಮ ವರ್ಗದ ನೌಕರರ ಸಂಕಷ್ಟಗಳನ್ನು ವಿವರಿಸಿದರು. ಪ್ರತಿಭಟನೆಯಲ್ಲಿ AITUC ಜಿಲ್ಲಾ ನಾಯಕರಾದ ವಿ ಕುಕ್ಯಾನ್, ಕರುಣಾಕರ್, ಕೃಷ್ಣಪ್ಪ ವಾಮಂಜೂರು,CITU ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ, ಸಂತೋಷ್ ಆರ್ ಎಸ್, ಮುಝಾಫರ್, ಜಯಂತಿ ಶೆಟ್ಟಿ, ಭಾರತಿ ಬೋಳಾರ, ಜಯಲಕ್ಷ್ಮಿ, ಬ್ಯಾಂಕ್ ನೌಕರರ ಸಂಘಟನೆಗಳ ನಾಯಕರಾದ ಪುರುಷೋತ್ತಮ ಪೂಜಾರಿ, ನಾಗೇಂದ್ರ, ಲೋಕೇಶ್, ವಕೀಲರ ಸಂಘಟನೆಯ ಮುಖಂಡರಾದ ಯಶವಂತ ಮರೋಳಿ, ವಿಮಾ ನೌಕರರ ಮುಖಂಡರಾದ ಬಿ ಎನ್ ದೇವಾಡಿಗ, ಹೋಟೇಲ್ ನೌಕರರ ಸಂಘದ ನಾಯಕರಾದ ಮೋಹನ್, ದಲಿತ ಸಂಘಟನೆಯ ಕೃಷ್ಣ ತಣ್ಣೀರುಬಾವಿ, ಆದಿವಾಸಿ ಸಂಘಟನೆಯ ಕೃಷ್ಣ ಇನ್ನಾ,ಶೇಖರ್ ವಾಮಂಜೂರು, ಕರಿಯ ಕೆ, DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ, ಯಶ್ ರಾಜ್ ಬಜಾಲ್, ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಯೋಗಿತಾ ಉಳ್ಳಾಲ, ಗೀತಾ ಸುರತ್ಕಲ್, ಫ್ಲೇವಿ ಕ್ರಾಸ್ತಾ ಅತ್ತಾವರ, ಬಂದರು ಶ್ರಮಿಕ ಸಂಘದ ಶರಣಪ್ಪ, ಸಾಧಿಕ್, ಜುಬೇರ್ ಮುಂತಾದವರು ಭಾಗವಹಿಸಿದ್ದರು #Roadblock #Mangalore #against #laborcodes #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಶಾಸಕರು ಮಜಾ ಮಾಡಲು ವಿದೇಶ ಪ್ರವಾಸ ಹೋಗುತ್ತಿದ್ದಾರೆ: ಆರ್‌.ಅಶೋಕ ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಖಾಲಿಯಾಗಿದ್ದು, ಇದು ಸರ್ಕಾರ ಪಾಪರ್‌ ಆಗಿರುವುದರ ಸಂಕೇತವಾಗಿದೆ. ಇಂತಹ ಸಮಯದಲ್ಲಿ ಕಾಂಗ್ರೆಸ್‌ ಶಾಸಕರು ಮಜಾ ಮಾಡಲು ವಿದೇಶ ಪ್ರವಾಸ ಹೋಗುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಔಷಧಿ ಖರೀದಿಸಲು ಹಣವಿಲ್ಲ. ಪ್ಯಾರಾಸಿಟಾಮಾಲ್‌ನಿಂದ ಆರಂಭವಾಗಿ ಅಗತ್ಯವಾದ 800 ಕ್ಕೂ ಅಧಿಕ ಔಷಧಿಗಳು ಲಭ್ಯವಿಲ್ಲವೆಂದು ನಾನು 2024 ರ ಡಿಸೆಂಬರ್‌ನ ಅಧಿವೇಶನದಲ್ಲಿ ಹೇಳಿದ್ದೆ. ಆಗ ಸಚಿವ ದಿನೇಶ್‌ ಗುಂಡೂರಾವ್‌, ಕೂಡಲೇ ಔಷಧಿ ಖರೀದಿಸಲಾಗುವುದು ಎಂದು ಹೇಳಿದ್ದರು. ಇನ್ನೂ ಯಾವುದೇ ಔಷಧಿ ದಾಸ್ತಾನಿಲ್ಲ. ಈ ಮೂಲಕ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿದೆ. ಆಸ್ಪತ್ರೆಗಳ ನಿರ್ವಹಣೆಯ ಹಣದಿಂದ ಔಷಧಿ ಖರೀದಿಸುವ ದುಸ್ಥಿತಿಗೆ ಸರ್ಕಾರ ಬಂದಿದೆ. ಸಾಲ ಮಾಡಿ ಔಷಧಿ ಖರೀದಿಸುವ ಸ್ಥಿತಿ ಬಂದಿದೆ ಎಂದರು. ಮಾರ್ಚ್‌ಗೆ ಟೆಂಡರ್‌ಗೆ ಅಂತಿಮಗೊಳಿಸಲು ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಅಂದರೆ ಮೇ, ಜೂನ್‌ವರೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಬಾರದೇ ಇದ್ದರೆ ರೋಗಿಗಳು ಸಾಯಬೇಕಾಗುತ್ತದೆ. ಅಪಘಾತವಾದರೆ ಬ್ಯಾಂಡೇಜ್‌ ಕೂಡ ಸಿಗುವುದಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಅನಿವಾರ್ಯವಾಗಿ ಹೊರಗೆ ಔಷಧಿ ಖರೀದಿಗೆ ಚೀಟಿ ಬರೆದುಕೊಡುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಹೊರಗೆ ಔಷಧಿ ಖರೀದಿಗೆ ಚೀಟಿ ಬರೆಯಬಾರದೆಂದು ಸೂಚನೆ ನೀಡಲಾಗಿತ್ತು. ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ಸರ್ಕಾರ ಪ್ರಯತ್ನ ಮಾಡಿದೆ. ಈಗ ಜನರು ಜನೌಷಧಿ ಕೇಂದ್ರಗಳಲ್ಲೇ ಔಷಧಿ ಖರೀದಿಸುತ್ತಿದ್ದಾರೆ ಎಂದರು. ಕಳೆದ ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ 30% ಅನುದಾನ ಕಡಿತವಾಗಿದೆ. ಐದು ಗ್ಯಾರಂಟಿಗಳಿಗಾಗಿ ಜನರಿಗೆ ನೀಡುವ ಔಷಧಿಯನ್ನು ಕೊರತೆ ಮಾಡಲಾಗಿದೆ. ಕೆಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ದ್ರಾವಣ, ನೋವು ನಿವಾರಕ ಔಷಧಿ ಇಲ್ಲದೆ ಆಪರೇಶನ್‌ ಮಾಡುವುದಿಲ್ಲ ಎಂದು ಹೇಳಲಾಗಿದೆ. ಕಮಿಶನ್‌ ತರುವ ಇಲಾಖೆಗಳಿಗೆ ಗಮನ ನೀಡಿ, ಜನರ ಸಮಸ್ಯೆ ಬಗೆಹರಿಸುವ ಇಲಾಖೆಗಳನ್ನು ಕಡೆಗಣಿಸಲಾಗಿದೆ. ಇದು ಸರ್ಕಾರ ಪಾಪರ್‌ ಆಗಿರುವುದಕ್ಕೆ ಕನ್ನಡಿ ಎಂದರು. ಪಶುಸಂಗೋಪನಾ ಸಚಿವರು ಶಾಸಕರನ್ನು ಫಾರಿನ್‌ ಟೂರ್‌ಗೆ ಕರೆದೊಯ್ಯುತ್ತಿದ್ದಾರೆ. ಸರ್ಕಾರದ ಹಣದಲ್ಲಿ ವಿದೇಶ ಪ್ರವಾಸ ಹೋಗುವುದನ್ನು ಹಿಂದೆಯೇ ತಡೆಯಲಾಗಿದೆ. ಪ್ರವಾಸ ಹೋಗಬೇಕೆಂದರೆ ಆ ನಿಯೋಗದಲ್ಲಿ ಎಲ್ಲ ಪಕ್ಷಗಳ ಸದಸ್ಯರು ಇರುತ್ತಾರೆ. ಸಚಿವರು ಕರೆದುಕೊಂಡು ಹೋಗುತ್ತಿದ್ದಾರೆ ಎಂದರೆ ಇದಕ್ಕೆ ಸರ್ಕಾರ ಅನುಮತಿ ಹೇಗೆ ನೀಡಿದೆ? ಇದಕ್ಕೆ ಯಾರು ಹಣ ಖರ್ಚು ಮಾಡುತ್ತಿದ್ದಾರೆ ಎಂದು ತಿಳಿಸಬೇಕಿದೆ. ಸ್ಪೀಕರ್‌ ಯು.ಟಿ.ಖಾದರ್‌ ಇದನ್ನು ತಡೆಯಬೇಕಿದೆ ಎಂದರು. ಕಾಂಗ್ರೆಸ್‌ ಶಾಸಕರು ಯಾವ ಅಧ್ಯಯನ ಮಾಡಲು ಹೋಗುತ್ತಿದ್ದಾರೆ ಎಂದು ಗೊತ್ತಿಲ್ಲ. ಈಗ ಬಜೆಟ್‌ ತಯಾರಿ ನಡೆಯುತ್ತಿದ್ದು, ಶಾಸಕರು ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಬೇಕಿದೆ. ಇಂತಹ ಸಮಯದಲ್ಲಿ ಸ್ವಂತ ಹಣದಲ್ಲಿ ಹೋಗುತ್ತಿದ್ದೇವೆ ಎಂದು ಶಾಸಕ ಪುಟ್ಟರಂಗಶೆಟ್ಟಿ ಹೇಳಿದ್ದಾರೆ. ಸ್ವಂತ ಹಣದಲ್ಲಿ ಅಧ್ಯಯನ ಪ್ರವಾಸ ಮಾಡಲು ಸಾಧ್ಯವಿಲ್ಲ. ಅಧ್ಯಯನ ಮಾಡಿದರೂ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಆದರೆ ಇಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ನಿರ್ಧಾರ ಕೈಗೊಳ್ಳಲು ವಿದೇಶಕ್ಕೆ ಹೋಗುತ್ತಿದ್ದಾರೆ ಎಂಬ ಅನುಮಾನವಿದೆ. ಇದು ಒಳ್ಳೆಯ ಸಂಸ್ಕೃತಿಯಲ್ಲ. ಸರ್ಕಾರಿ ಶಾಲೆಯ ಮಕ್ಕಳು ಬಸ್‌ ಇಲ್ಲದೆ ಜೆಸಿಬಿ, ಟಿಪ್ಪರ್‌ನಲ್ಲಿ ಪ್ರಯಾಣ ಮಾಡುತ್ತಿದ್ದರೆ, ಶಾಸಕರು ಎಮಿರೇಟ್ಸ್‌ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದರು. ಅಬಕಾರಿ ಇಲಾಖೆಯ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದ್ದು, ಬಿಜೆಪಿ ಇದರ ವಿರುದ್ಧ ಹೋರಾಟ ಮಾಡುತ್ತಿದೆ. ಇದನ್ನು ತನಿಖೆ ಮಾಡದಿದ್ದರೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಏನೂ ಕೇಳಿಲ್ಲ. ಏಕೆಂದರೆ ಇದರಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗೆ ರಾಹುಲ್‌ ಗಾಂಧಿಗೂ ಹಣ ದೊರೆಯುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ ಆರೋಪ ಬಂದಾಗ ಸಚಿವರ ರಾಜೀನಾಮೆ ಪಡೆದು ತನಿಖೆ ಮಾಡಿಸಲಾಗಿತ್ತು ಎಂದರು. ಕಾಂಗ್ರೆಸ್‌ ಪಕ್ಷ ಹಾಗೂ ಮಾಜಿ ಪ್ರಧಾನಿ ಪಂಡಿತ್‌ ಜವಹರಲಾಲ್‌ ನೆಹರು ವಂದೇಮಾತರಂ ಗೀತೆಯ ಸಾಲುಗಳನ್ನು ಕಡಿತ ಮಾಡಿ ಹಾಡಲು ಮಾತ್ರ ಅವಕಾಶ ಮಾಡಿತ್ತು. ವಂದೇಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡುವ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ತಿಳಿಸುತ್ತೇನೆ. ಹಾಡಿನಲ್ಲಿ ದುರ್ಗೆಯ ಹೆಸರು ಇದೆ ಎಂಬ ಕಾರಣಕ್ಕೆ ಗೀತೆಯನ್ನು ಕಡೆಗಣಿಸಲಾಗಿತ್ತು ಎಂದರು. ಬೇರೆ ಪಕ್ಷದಿಂದ ಬಂದವರಿಗೆ ಅಧಿಕಾರ ನೀಡಲಾಗಿದೆ ಎಂದು ಡಿ.ಕೆ.ಸುರೇಶ್‌ ಬಹಳ ತಡವಾಗಿ ಹೇಳಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್‌ ಕಾದುಕೊಂಡಿದ್ದರೆ ಯಾವುದೇ ಪ್ರಯೋಜನವಿಲ್ಲ. ಮೂಲ ಕಾಂಗ್ರೆಸ್ಸಿಗರು ದಿಕ್ಕಿಲ್ಲದಂತಾಗಿದ್ದಾರೆ ಎಂದರು. ಆರ್‌ಸಿಬಿ ಸಂಭ್ರಮಾಚರಣೆಯನ್ನು ತಪ್ಪಾಗಿ ಆಯೋಜಿಸಿದ್ದು ಕಾಂಗ್ರೆಸ್‌ ಸರ್ಕಾರದ ತಪ್ಪು. ಆದರೆ ಆರ್‌ಸಿಬಿ ಹಾಗೂ ಕ್ರಿಕೆಟ್‌ ಅಸೋಸಿಯೇಶನ್‌ ಮೇಲೆ ತಪ್ಪು ಹೊರಿಸಲಾಗಿದೆ. ಸರ್ಕಾರಕ್ಕೆ ಯೋಗ್ಯತೆ ಇದ್ದರೆ ಭದ್ರತೆ ನೀಡಲಿ ಎಂದರು. #MLA #going #foreign #trips #fun #RAshoka #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಪ್ರಭುತ್ವ ಹಿಂಸಾಚಾರ ವಿರುದ್ಧ ಅಭಿಯಾನ (CASR) ಅದಾನಿ ಗುಂಪಿನ ಹೆಸರಿನಲ್ಲಿ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಪತ್ರಕರ್ತ ರವಿ ನಾಯರ್ ಅವರಿಗೆ ವಿಧಿಸಲಾದ ದೋಷಾರೋಪಣೆಯನ್ನು CASR ತೀವ್ರವಾಗಿ ಖಂಡಿಸುತ್ತದೆ. ಈ ದೋಷಾರೋಪಣೆ ಕೇವಲ ಒಬ್ಬ ಪತ್ರಕರ್ತನ ಮೇಲಿನ ದಾಳಿ ಮಾತ್ರವಲ್ಲ, ಇದು ಮಾಧ್ಯಮ ಸ್ವಾತಂತ್ರ್ಯ, ಪ್ರಜಾಸತ್ತಾತ್ಮಕ ಧ್ವನಿ ಮತ್ತು ಕಾರ್ಪೊರೇಟ್ ಶಕ್ತಿಯನ್ನು ಪ್ರಶ್ನಿಸುವ ಜನರ ಹಕ್ಕಿನ ಮೇಲೆ ಗಂಭೀರ ದಾಳಿಯಾಗಿದೆ. ರವಿ ನಾಯರ್ ತಮ್ಮ ಪತ್ರಕರ್ತ ವೃತ್ತಿಯ ಮೂಲಕ ಪ್ರಭಾವಿ ಕಾರ್ಪೊರೇಟ್ ಕುಟುಂಬಗಳು ಮತ್ತು ಭಾರತದ ಪ್ರಭುತ್ವ ನಡುವಿನ ಗಾಢ ಸಂಬಂಧವನ್ನು ಬಹಿರಂಗಪಡಿಸಲು ಪ್ರಯತ್ನಿಸಿದ್ದಾರೆ. ಕ್ರೋನಿ ಕ್ಯಾಪಿಟಲಿಸಂ, ನಿಯಂತ್ರಣ, ವಶಪಡಿಸಿಕೊಳ್ಳುವಿಕೆ ಮತ್ತು ಸಾರ್ವಜನಿಕ ಸಂಪನ್ಮೂಲಗಳು ಕೆಲವು ದೊಡ್ಡ ಕಾರ್ಪೊರೇಟ್ ಗುಂಪುಗಳ ಕೈಯಲ್ಲಿ ಕೇಂದ್ರೀಕೃತವಾಗುತ್ತಿರುವ ಬಗ್ಗೆ ಉದ್ಭವಿಸಿದ ಗಂಭೀರ ಪ್ರಶ್ನೆಗಳನ್ನು ಪರಿಹರಿಸುವ ಬದಲು, ಪ್ರಭುತ್ವವು ತನ್ನ ತನಿಖಾ ಸಂಸ್ಥೆಗಳನ್ನು ಹಾಗೂ ನ್ಯಾಯಾಂಗ ಸೇರಿದಂತೆ ಬಳಸಿಕೊಂಡು ದಿಟ್ಟತನದಿಂದ ಮಾತಾಡುವವರನ್ನು ಮೌನಗೊಳಿಸಲು ಮತ್ತು ಶಿಕ್ಷಿಸಲು ಬಳಸಿದೆ. ಈ ಧೋರಣೆ ಹೊಸದಲ್ಲ, ಪ್ರತ್ಯೇಕವೂ ಅಲ್ಲ. ದೇಶದಾದ್ಯಂತ ಕೇಂದ್ರದ ಪ್ರಭುತ್ವವು ಕರಾಳ ಕಾನೂನುಗಳಾದ ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅನ್ನು ಏಕಪಕ್ಷೀಯವಾಗಿ ಮತ್ತು ಮನಬಂದಂತೆ ಕಾರ್ಯಕರ್ತರು, ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ತಮ್ಮ ಜಲ, ಜಂಗಲ್, ಜಮೀನ್ (ನೀರು, ಕಾಡು, ಭೂಮಿ) ಹಕ್ಕುಗಳಿಗಾಗಿ ಹೋರಾಡುವ ಆದಿವಾಸಿ ಮತ್ತು ಅಂಚಿನ ಸಮುದಾಯಗಳ ವಿರುದ್ಧ ಬಳಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕಾರ್ಪೊರೇಟ್ ಭೂಸ್ವಾಧೀನ, ಗಣಿಗಾರಿಕೆ ವಿಸ್ತರಣೆ, ಸ್ಥಳಾಂತರ ಮತ್ತು ಪರಿಸರ ನಾಶದ ವಿರುದ್ಧ ಪ್ರತಿರೋಧಿಸುವವರನ್ನು 'ರಾಷ್ಟ್ರವಿರೋಧಿ' ಅಥವಾ 'ಭಯೋತ್ಪಾದಕ' ಎಂದು ಗುರುತಿಸಲಾಗುತ್ತದೆ, ಆದರೆ ಪ್ರಕೃತಿ ಸಂಪನ್ಮೂಲಗಳ ಕಾರ್ಪೊರೇಟ್ ಲೂಟಿ ದಂಡಮುಕ್ತವಾಗಿ ಮುಂದುವರಿಯುತ್ತದೆ. ಸಂದೇಶ ಸ್ಪಷ್ಟವಾಗಿದೆ: ಕಾರ್ಪೊರೇಟ್ ಲೂಟಿಗೆ ವಿರೋಧಿಸುವವರನ್ನು ಅಪರಾಧಿಗಳನ್ನಾಗಿ ಮಾಡಲಾಗುತ್ತದೆ; ಪ್ರಭುತ್ವ ಮತ್ತು ಕಾರ್ಪೊರೇಟ್ ಕುಟುಂಬಗಳ ನಡುವಿನ ಮೈತ್ರಿಯನ್ನು ಬಹಿರಂಗಪಡಿಸುವವರು ಮಾನಹಾನಿ ಮೊಕದ್ದಮೆಗಳು, ಜೈಲು ಶಿಕ್ಷೆ ಮತ್ತು ವೃತ್ತಿಜೀವನದ ಕೊನೆ ದಿನಗಳನ್ನು ಎದುರಿಸುತ್ತಾರೆ. ಇದೇ ವೇಳೆ, ಪ್ರಭಾವಿ ಕಾರ್ಪೊರೇಷನ್‌ಗಳಿಗೆ ಸಂಬಂಧಿಸಿದ ಹಣಕಾಸು ಅಕ್ರಮಗಳು, ಪರಿಸರ ಉಲ್ಲಂಘನೆಗಳು ಮತ್ತು ಪಕ್ಷಪಾತದ ಆರೋಪಗಳು ಜವಾಬ್ದಾರಿ ಸಂಸ್ಥೆಗಳಿಂದ ಗಂಭೀರ ತನಿಖೆ ಅಪರೂಪವಾಗಿದೆ. ಈ ವ್ಯಾಪಕ ಹಿಂಸಾಚಾರದ ದಿನಗಳಲ್ಲಿ ನ್ಯಾಯಾಂಗದ ಕೆಲವು ವಿಭಾಗಗಳ ಪಾತ್ರದ ಬಗ್ಗೆ ನಾವು ಆಳವಾದ ಚಿಂತೆಯನ್ನು ವ್ಯಕ್ತಪಡಿಸುತ್ತೇವೆ. ಮತ್ತೆ ಮತ್ತೆ, ನ್ಯಾಯಾಲಯಗಳು ಕಾರ್ಪೊರೇಟ್ ಮಾನಹಾನಿ ದಾವೆಗಳನ್ನು ಪರಿಗಣಿಸಲು ಹಾಗೂ ಪತ್ರಕರ್ತರು ಮತ್ತು ಪ್ರತಿರೋಧ ಧ್ವನಿಗಳ ವಿರುದ್ಧದ ಪ್ರಕರಣಗಳನ್ನು ಮಿಂಚಿನ ವೇಗದಲ್ಲಿ ಮುಂದುವರಿಸಲು ಹೆಚ್ಚು ಸಿದ್ಧವಾಗಿರುವಂತೆ ಕಾಣುತ್ತವೆ. ಆದರೆ ಕಾರ್ಪೊರೇಟ್ ಜವಾಬ್ದಾರಿ ಅಥವಾ ಪ್ರಭುತ್ವದ ಅತಿರೇಕಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿವೆ. ಪ್ರಭಾವಿ ಕಾರ್ಪೊರೇಟ್ ಹಿತಾಸಕ್ತಿಗಳ ವಿರುದ್ಧ ದೃಢ ನಿಲುವು ತೆಗೆದುಕೊಳ್ಳಲು ಯತ್ನಿಸಿದ ಕೆಲ ನ್ಯಾಯಾಧೀಶರನ್ನು ದಿಢೀರನೆ ವರ್ಗಾಯಿಸಿದ ಘಟನೆಗಳೂ ಕಂಡುಬಂದಿವೆ. ಇದು ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಸಾಂಸ್ದಿಕ ಒತ್ತಡದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಅಧಿಕಾರವನ್ನು ಜವಾಬ್ದಾರಿಯುತವಾಗಿ ಪ್ರಯೋಗಿಸುವಲ್ಲಿ ಮಾಧ್ಯಮವು ಮಹತ್ವದ ಪಾತ್ರ ವಹಿಸುತ್ತದೆ. ಮಾನಹಾನಿ ಕಾನೂನುಗಳನ್ನು ತನಿಖಾತ್ಮಕ ಪತ್ರಿಕೋದ್ಯಮವನ್ನು ಕುಂಠಿತಗೊಳಿಸಲು ಅಥವಾ ವಿಮರ್ಶಕರನ್ನು ಬೆದರಿಸಲು ಆಯುಧವಾಗಿಸಲು ಸಾಧ್ಯವಿಲ್ಲ. ನ್ಯಾಯಾಂಗವು ಕಾರ್ಪೊರೇಟ್ ಶಕ್ತಿಗಳ ರಕ್ಷಣೆ ಸ್ಥಳವಾಗಿಬಿಟ್ಟರೆ ಮತ್ತು ವಿರೋಧ ಧ್ವನಿಗಳನ್ನು ಅಪರಾಧೀಕರಿಸಿದರೆ, ಅದು ಸಂವಿಧಾನಾತ್ಮಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಂದಿಸುತ್ತದೆ. ಆದ್ದರಿಂದ ರವಿ ನಾಯರ್ ಅವರ ಮೇಲಿನ ದೋಷಾರೋಪಣೆಯನ್ನು ಪ್ರತ್ಯೇಕ ಕಾನೂನು ತೀರ್ಪಾಗಿ ನೋಡದೆ, ದೊಡ್ಡ ಮಟ್ಟದ ಹಿಂಸಾಚಾರದ ವ್ಯವಸ್ಥೆಯ ಒಂದು ಭಾಗವೆಂದು ಅರ್ಥಮಾಡಿಕೊಳ್ಳಬೇಕು. ಇದು ಪತ್ರಕರ್ತರ ಮೇಲೆ ಹಿಂಸೆ, ಮಾನವ ಹಕ್ಕು ರಕ್ಷಕರನ್ನು ಯುಎಪಿಎ ಅಡಿಯಲ್ಲಿ ಬಂಧಿಸುವುದು, ಆದಿವಾಸಿ ಪ್ರತಿರೋಧ ಚಳವಳಿಗಳನ್ನು ಕುಂಠಿತಗೊಳಿಸುವುದು ಹಾಗೂ ಬುದ್ಧಿಜೀವಿಗಳು ಮತ್ತು ಲೇಖಕರನ್ನು ಮೌನಗೊಳಿಸುವುದನ್ನು ಸಹಜಗೊಳಿಸುತ್ತದೆ. ಹಿಂಸಾಚಾರವು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಸಮಾಜದ ಬೇರೆ ಬೇರೆ ವರ್ಗಗಳನ್ನು ಗುರಿಯಾಗಿಸುತ್ತದೆ, ಆದರೆ ಅದರ ಮೂಲ ಉದ್ದೇಶ ಒಂದೇ: ಕಾರ್ಪೊರೇಟ್-ಪ್ರಭುತ್ವ ಮೈತ್ರಿಗೆ ಸಾರ್ವಜನಿಕ ಪರಿಶೀಲನೆಯಿಂದ ರಕ್ಷಣೆ ಒದಗಿಸುವುದು. CASR ನ ಬೇಡಿಕೆಗಳು: ರವಿ ನಾಯರ್ ಅವರ ಮೇಲಿನ ದೋಷಾರೋಪಣೆಯನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಪತ್ರಕರ್ತರು ಮತ್ತು ಕಾರ್ಯಕರ್ತರನ್ನು ಮೌನಗೊಳಿಸಲು ಅಪರಾಧಾತ್ಮಕ ಮಾನಹಾನಿ ಮತ್ತು ಕಠಿಣ ಕಾನೂನುಗಳ ದುರುಪಯೋಗ ನಿಲ್ಲಬೇಕು. ಮಾಧ್ಯಮ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು. ಕಾರ್ಪೊರೇಟ್-ಪ್ರಭುತ್ವ ಮೈತ್ರಿಗೆ ಸಂಬಂಧಿಸಿದ ವಿಷಯಗಳಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಇರಬೇಕು. ಹೆಚ್ಚುತ್ತಿರುವ ಪ್ರಭುತ್ವವಾದಿ ಪ್ರವೃತ್ತಿಗೆ ವಿರುದ್ಧವಾಗಿ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು, ನಾಗರಿಕ ಸಮಾಜ ಸಂಘಟನೆಗಳು, ಪತ್ರಕರ್ತರ ಸಂಘಗಳು, ವಿದ್ಯಾರ್ಥಿ ಗುಂಪುಗಳು, ಕಾರ್ಮಿಕ ಸಂಘಟನೆಗಳು ಹಾಗೂ ಎಲ್ಲಾ ಜವಾಬ್ದಾರಿಯುತ ನಾಗರಿಕರು ಒಂದಾಗಿ ನಿಲ್ಲಬೇಕೆಂದು ನಾವು ಕರೆ ನೀಡುತ್ತೇವೆ. ಇಂದು ಒಬ್ಬ ಪತ್ರಕರ್ತನ ರಕ್ಷಣೆಯೇ ನಾಳೆ ಎಲ್ಲರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯಾಗಿದೆ. ಪ್ರತಿರೋಧದ ಧ್ವನಿಯನ್ನು ಮೌನಗೊಳಿಸುವುದರಿಂದ ಸತ್ಯ ಅಳಿದುಹೋಗುವುದಿಲ್ಲ. ಸತ್ಯ ಬಹಿರಂಗಪಡಿಸುವುದನ್ನು ಅಪರಾಧೀಕರಿಸುವುದರಿಂದ ಅನ್ಯಾಯವನ್ನು ರಕ್ಷಿಸಲು ಸಾಧ್ಯವಿಲ್ಲ. ನಾವು ರವಿ ನಾಯರ್ ಹಾಗೂ ಪ್ರಭುತ್ವ ಹಿಂಸಾಚಾರ ಮತ್ತು ಕಾರ್ಪೊರೇಟ್ ಪ್ರಭುತ್ವಕ್ಕೆ ವಿರುದ್ಧವಾಗಿ ಹೋರಾಡುವ ಎಲ್ಲರೊಂದಿಗೆ ಐಕ್ಯತೆಯಲ್ಲಿ ನಿಲ್ಲುತ್ತೇವೆ. ಪ್ರಭುತ್ವ ಹಿಂಸಾಚಾರ ವಿರುದ್ಧದ ಅಭಿಯಾನ (CASR) ಸಂಘಟನಾ ತಂಡ (AIRSO, AISF, APCR, ASA, BASF, BSM, Bhim Army, bsCEM, CEM, COLLECTIVE, CRPP, CSM, CTF, DISSC, DSU, DTF, Forum Against Repression Telangana, Fraternity, IAPL, Innocence Network, Karnataka Janashakti, LAA, Mazdoor Adhikar Sangathan, Mazdoor Patrika, NAPM, Nazariya Magazine, Nishant Natya Manch, Nowruz, NTUI, People’s Watch, Rihai Manch, Samajwadi Janparishad, Samajwadi Lok Manch, Bahujan Samajwadi Manch, United Peace Alliance, WSS, Y4S) #Campaign #against #stateviolence #RaviNair #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ​ಫ್ಯಾಕ್ಟ್ ಚೆಕ್: ಮಿಥುನ್ ಚಕ್ರವರ್ತಿ ಕಸದ ತೊಟ್ಟಿಯಿಂದ ಮಗುವನ್ನು ತಂದ ಪೋಸ್ಟ್ ವೈರಲ್: ನಿಜವೇ? ​ಕ್ಲೈಮ್ (Claim): ಕಸದ ತೊಟ್ಟಿಯಲ್ಲಿ ಪತ್ತೆಯಾದ ಹೆಣ್ಣು ಮಗುವನ್ನು ನಟ ಮಿಥುನ್ ಚಕ್ರವರ್ತಿ ದತ್ತು ಪಡೆದು ಸಾಕಿ ದೊಡ್ಡವಳನ್ನಾಗಿ ಮಾಡಿದ್ದಾರೆ ಎಂಬ ಬರಹದೊಂದಿಗೆ ಮಗುವಿನ ಫೋಟೋ ವೈರಲ್ ಆಗುತ್ತಿದೆ. ​ಫ್ಯಾಕ್ಟ್ (Fact): ಮಿಥುನ್ ಚಕ್ರವರ್ತಿ ಮಗಳನ್ನು ದತ್ತು ಪಡೆದಿರುವುದು ನಿಜ, ಆದರೆ ಪೋಸ್ಟ್‌ನಲ್ಲಿ ಬಳಸಲಾದ ಮಗುವಿನ ಫೋಟೋ ಸುಳ್ಳು. ​ಸತ್ಯಶೋಧನೆ: ​ದಿಶಾನಿ ಅವರ ಹಿನ್ನೆಲೆ: ಮಿಥುನ್ ಚಕ್ರವರ್ತಿ ಅವರು 90ರ ದಶಕದ ಕೊನೆಯಲ್ಲಿ ಮಗು ದಿಶಾನಿ ಮಗುವನ್ನು ದತ್ತು ಪಡೆದಿದ್ದರು. ಆಗ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದ ಅನಾಥಾಶ್ರಮವೊಂದರ ಮೂಲಕ ಅವರು ಈ ಮಗುವನ್ನು ಮನೆಗೆ ಕರೆತಂದಿದ್ದರು. ಇಂದು ದಿಶಾನಿ ಚಕ್ರವರ್ತಿ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಅಭಿನಯ ತರಬೇತಿ ಪಡೆದು ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ​ಫೋಟೋ ಎಲ್ಲಿಂದ ಬಂತು?: ಪೋಸ್ಟ್‌ನಲ್ಲಿ ಕಸದ ರಾಶಿಯಲ್ಲಿ ತೋರಿಸಲಾದ ಮಗುವಿನ ಚಿತ್ರಕ್ಕೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಇದು ಅಂತರ್ಜಾಲದಲ್ಲಿ ಹಲವು ವರ್ಷಗಳಿಂದ 'ಅನಾಥ ಮಗು' ಎಂಬ ಹೆಸರಿನಲ್ಲಿ ಹರಿದಾಡುತ್ತಿರುವ ಸಂಕೇತಿಕ ಚಿತ್ರವಾಗಿದೆ (Representative Image). ​ತಪ್ಪುದಾರಿ ಎಳೆಯುವ ಮಾಹಿತಿ: ಭಾವುಕತೆಯನ್ನು ಸೃಷ್ಟಿಸಲು ಎರಡು ವಿಭಿನ್ನ ಚಿತ್ರಗಳನ್ನು ಜೋಡಿಸಿ, ಹಳೆಯ ಕಥೆಯನ್ನು ಹೊಸದಾಗಿ ಬಿಂಬಿಸಲಾಗುತ್ತಿದೆ. ​ತೀರ್ಪು (Verdict): ಮಿಥುನ್ ಚಕ್ರವರ್ತಿ ಅವರ ದತ್ತು ಸ್ವೀಕಾರದ ಕಥೆ ಮಾನವೀಯತೆಯ ಸಂಕೇತವಾಗಿರುವುದು ಸತ್ಯ. ಆದರೆ ಪೋಸ್ಟ್‌ನಲ್ಲಿರುವ ಮಗುವಿನ ಚಿತ್ರವು ಸುಳ್ಳು ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕೂಡಿದೆ. #MithunChakraborty #post #bringing #baby #garbage #bin #goes #viral #factcheck ​#FactCheck #MalgudiExpress #MithunChakraborty #ViralNews #FakeNewsAlert #KannadaNews #SathyaShodhana #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಮಗುವನ್ನು' ಮಿಥುನ್ ಚಕ್ರವರ್ತಿ ಕಸದ ತೊಟ್ಟಿಯಿಂದ ತಂದ ಫೋಸ್ಟ್ ವೈರಲ್: ನಿಜವೇ? K E RaAN F A C T G1 FAcl 11' 7 [  03303 రయెల్ల; . S9o)4 HTTPS:IIMALGUDIEXPRESS.CO.IN/ EXPRESS ಮಗುವನ್ನು' ಮಿಥುನ್ ಚಕ್ರವರ್ತಿ ಕಸದ ತೊಟ್ಟಿಯಿಂದ ತಂದ ಫೋಸ್ಟ್ ವೈರಲ್: ನಿಜವೇ? K E RaAN F A C T G1 FAcl 11' 7 [  03303 రయెల్ల; . S9o)4 HTTPS:IIMALGUDIEXPRESS.CO.IN/ EXPRESS - ShareChat
#📜ಪ್ರಚಲಿತ ವಿದ್ಯಮಾನ📜 ಕಂದಾಯ ಇಲಾಖೆ ಸಂಪೂರ್ಣ ಡಿಜಿಟಲೀಕರಣಕ್ಕೆ ಬದ್ಧ: ಕೃಷ್ಣ ಭೈರೇಗೌಡ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾವೇರಿಯಲ್ಲಿ 1.10 ಲಕ್ಷ ಹಕ್ಕುಪತ್ರ ವಿತರಣೆ ಗದಗ: ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವುದು ಸರ್ಕಾರದ ಗುರಿಯಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ತಹಶೀಲ್ದಾರ್ ಕಚೇರಿಗಳಲ್ಲಿ 10,774 ಅವಧಿ ಮೀರಿದ ಪ್ರಕರಣಗಳಿದ್ದವು. ವಿಶೇಷ ಅಭಿಯಾನ ಹಮ್ಮಿಕೊಂಡು ಅವುಗಳನ್ನು ವಿಲೇವಾರಿ ಮಾಡಲಾಗಿದ್ದು, ಸದ್ಯ 478 ಪ್ರಕರಣ ಮಾತ್ರ ಬಾಕಿ ಉಳಿದಿವೆ. ಅವುಗಳನ್ನೂ ಶೀಘ್ರ ಇತ್ಯರ್ಥಗೊಳಿಸಲು ಸೂಚನೆ ನೀಡಲಾಗಿದೆ ಎಂದರು. ಎ.ಸಿ ನ್ಯಾಯಾಲಯಗಳಲ್ಲಿ 73,624 ಅವಧಿ ಮೀರಿದ ಪ್ರಕರಣಗಳಿದ್ದರೆ, ಈಗ ಅವು 11,605 ಕ್ಕೆ ಇಳಿದಿವೆ. ಐದು ವರ್ಷಕ್ಕಿಂತ ಹೆಚ್ಚು ಕಾಲ ಬಾಕಿ ಇದ್ದ 32,782 ಪ್ರಕರಣಗಳಲ್ಲಿ ಕೇವಲ 3,155 ಮಾತ್ರ ಉಳಿದಿದ್ದು, ಮುಂದಿನ ಎರಡು ತಿಂಗಳಲ್ಲಿ ಇವುಗಳನ್ನು ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಬಗರ್ ಹುಕುಂ ರೈತರ ಜಮೀನುಗಳ ಸರ್ವೆ ಮತ್ತು ಆರ್.ಟಿ.ಸಿ ಸಮಸ್ಯೆ ನಿವಾರಣೆಗೆ “ನನ್ನ ಭೂಮಿ ಅಭಿಯಾನ” ಆರಂಭಿಸಲಾಗಿದೆ. 2013-18 ಅವಧಿಯಲ್ಲಿ 5,842 ಪೋಡಿ ದುರಸ್ತಿ ಆಗಿದ್ದರೆ, 2018-23ರಲ್ಲಿ 8,500 ಪ್ರಕರಣಗಳು ವಿಲೇವಾರಿಯಾಗಿವೆ. ಜನವರಿ 2025ರಿಂದ ಆರಂಭವಾದ ಅಭಿಯಾನದಡಿ ಸದ್ಯ ರಾಜ್ಯಾದ್ಯಂತ 1,93,615 ಪ್ರಕರಣಗಳಲ್ಲಿ ಸರ್ವೆ ಮತ್ತು ಪೋಡಿ ದುರಸ್ತಿ ನಡೆಯುತ್ತಿದೆ. ಅಧಿಕಾರಿಗಳು ಮನೆಬಾಗಿಲಿಗೆ ತೆರಳಿ ಸೇವೆ ನೀಡುತ್ತಿರುವುದು ಸರ್ಕಾರದ ಬದ್ಧತೆಯ ಕಾರ್ಯ ಎಂದರು. ತಾಂಡಾ ಹಾಗೂ ಹಟ್ಟಿಗಳ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಮದಡಿ ಹಿಂದಿನ ಆರು ವರ್ಷಗಳಲ್ಲಿ ಒಂದು ಲಕ್ಷ ಹಕ್ಕುಪತ್ರ ವಿತರಿಸಲಾಗಿತ್ತು. ನಮ್ಮ ಸರ್ಕಾರದ ಎರಡೂವರೆ ವರ್ಷದ ಅವಧಿಯಲ್ಲಿ 1.10 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಫೆ. 14 ರಂದು ಹಾವೇರಿಯಲ್ಲಿ ಸಮಾವೇಶ ನಡೆಸಿ ಇದೇ ಸಂಖ್ಯೆಯ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು. ರಾಜ್ಯದಲ್ಲಿ ಮೃತರ ಹೆಸರಿನಲ್ಲಿ ಉಳಿದಿದ್ದ 49 ಲಕ್ಷ ಜಮೀನುಗಳನ್ನು ಗುರುತಿಸಿ ವಾರಸುದಾರರಿಗೆ ಹಸ್ತಾಂತರಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ 12 ಲಕ್ಷ ಮೂಲ ವಾರಸುದಾರರಿಗೆ ಜಮೀನು ಹಸ್ತಾಂತರಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಇಂತಹ 50 ಸಾವಿರ ಪ್ರಕರಣಗಳಿದ್ದು, ಸದ್ಯ 12 ಸಾವಿರ ಮಾತ್ರ ಬಾಕಿ ಉಳಿದಿವೆ. ಗ್ರಾಮ ಲೆಕ್ಕಾಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದು, ಅವರಿಗೆ ಪ್ರೋತ್ಸಾಹಧನವಾಗಿ 5 ಕೋಟಿ ರೂ. ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು. ಹಳೆ ದಾಖಲೆಗಳ ನಕಲಿ ತಡೆಗಟ್ಟಲು “ಭೂಸುರಕ್ಷಾ” ಯೋಜನೆಯಡಿ 64 ಲಕ್ಷಕ್ಕೂ ಹೆಚ್ಚು ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಸಾರ್ವಜನಿಕರು ಆನ್‌ಲೈನ್‌ನಲ್ಲೇ ಕಂದಾಯ ದಾಖಲೆಗಳನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಭೂಮಿಯ ಮಾಲಿಕತ್ವಕ್ಕೆ ಗ್ಯಾರಂಟಿ ನೀಡುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ 5 ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದ್ದು, ಅತ್ಯಾಧುನಿಕ ಸರ್ವೆ ಉಪಕರಣಗಳನ್ನು ಕೂಡ ಒದಗಿಸಲಾಗಿದೆ ಎಂದು ಸಚಿವರ ಕೃಷ್ಣ ಬೈರೇಗೌಡ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ಉಪಸ್ಥಿತರಿದ್ದರು. #RevenueDepartment #committed #complete #digitalization #KrishnaBairegowda #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ದುನಿಯಾ ವಿಜಯ್ ಮುಖ್ಯಪಾತ್ರದಲ್ಲಿ ನಟಿಸಿರುವ ಲ್ಯಾಂಡ್ ಲಾರ್ಡ್ ಸಿನಿಮಾ ಬಗ್ಗೆ ಸಂವಾದವನ್ನು ಏರ್ಪಡಿಸಲಾಗಿದೆ. 13.02.2016 ಸಂಜೆ‌ 4 ಕ್ಕೆ ಕಬ್ಬನ್ ಪಾರ್ಕಿನಲ್ಲಿರುವ ಸೆಕ್ರೆಟರಿಯೇಟ್ ಕ್ಲಬ್ಬಿನಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. #DuniyaVijay #Landord #entertainment #sandalwood #malgudiexpress #malgudinews #news #TopNews | Subscribe | Comment | Like | Share |
📜ಪ್ರಚಲಿತ ವಿದ್ಯಮಾನ📜 - ಸಂವಾದದಲ್ಲಿ ಸಮಾನ ಮನಸ್ಕರ ವೇದಿಕೆ- ಬೆಂಗಳೂರು @odgpnobe ఒందు సిందాది ಸುಬ್ಬು ಸಿದ್ಧನಗೌಡ 83 ಉಮಾಶ್ರೀ ಸಂಜ್ಯೋತಿ ವಿಕೆ ಪಾಟೀಲ್ ನಾರಾಯಣಸ್ಪಾಮಿ ಹೊಲೆಯಾರ್ ಉಪಸ್ಿ3ಿ 03~% ಜಡೇರ್ ಕೆಹಂಪಿ   ಬಿಎಂ ಗಿರಿರಾಜ್ ಮಾಸ್ತಿ ದುನಿಯಾ చిజయా ಉಪ್ಪಾರಳ್ಳಿ 3,3808] ಪ್ರಕಾಶ್ ಮಂಟೇದ, ನಾರಾಯಣ್ ಕ್ಯಾಸಂಬಳ್ಳಿ , ವಿಆರ್ ಕಾರ್ಪೆಂಟರ್ ಫಕ್ಕಿರೇಶ್ ಹಳ್ಳಳ್ಳ , ವಿನಯ್ ಗುಂಟೆ, ಯತಿರಾಜ್ ಬ್ಯಾಲಹಳ್ಳಿ , ಮಧು ಹೊಲೆಯಾರ್ ಮಂಜುಳಾ ಕಿರುಗಾವಲು; ಅಶ್ವಿನಿ ಬೋಧ್; ಕಾವ್ಯಾ ಕೆಪಿ ಸಮನಯ దా మంజునాథి అద్ది ಫೆಬ್ರವರಿ 2026, ಸಂಜೆ 4 ಕ್ಕೆ 13 ಸಂಯೋಜನೆ ಶ್ರೀ ಚನ್ನಬಸವಪ್ಪ ಸಭಾಂಗಣ ಕರ್ನಾಟಕ ಸರ್ಕಾರ ಸಚಿವಾಲಯ ಕಬ್ ರವಿಕುಮಾರ್ ಬಾಗಿ ಎಸ್ ಮಂಜುನಾಥ್; ಹುಲಿಕುಂಟೆ ಮೂರ್ತಿ, ಮುರಳಿ ಮೋಹನ ಕಾಟಿ, శబ్బనో లుద్యానచన దా అంబింద్యరా బింది; ಹರೀಶ್ ಭೈರಪ್ಪ , ಸೂರ್ಯ ಮುಕುಂದರಾಜ್ ರುದ್ರು ಪುನೀ್ ಬೆಂಗಳೂರು  ಸಂವಾದದಲ್ಲಿ ಸಮಾನ ಮನಸ್ಕರ ವೇದಿಕೆ- ಬೆಂಗಳೂರು @odgpnobe ఒందు సిందాది ಸುಬ್ಬು ಸಿದ್ಧನಗೌಡ 83 ಉಮಾಶ್ರೀ ಸಂಜ್ಯೋತಿ ವಿಕೆ ಪಾಟೀಲ್ ನಾರಾಯಣಸ್ಪಾಮಿ ಹೊಲೆಯಾರ್ ಉಪಸ್ಿ3ಿ 03~% ಜಡೇರ್ ಕೆಹಂಪಿ   ಬಿಎಂ ಗಿರಿರಾಜ್ ಮಾಸ್ತಿ ದುನಿಯಾ చిజయా ಉಪ್ಪಾರಳ್ಳಿ 3,3808] ಪ್ರಕಾಶ್ ಮಂಟೇದ, ನಾರಾಯಣ್ ಕ್ಯಾಸಂಬಳ್ಳಿ , ವಿಆರ್ ಕಾರ್ಪೆಂಟರ್ ಫಕ್ಕಿರೇಶ್ ಹಳ್ಳಳ್ಳ , ವಿನಯ್ ಗುಂಟೆ, ಯತಿರಾಜ್ ಬ್ಯಾಲಹಳ್ಳಿ , ಮಧು ಹೊಲೆಯಾರ್ ಮಂಜುಳಾ ಕಿರುಗಾವಲು; ಅಶ್ವಿನಿ ಬೋಧ್; ಕಾವ್ಯಾ ಕೆಪಿ ಸಮನಯ దా మంజునాథి అద్ది ಫೆಬ್ರವರಿ 2026, ಸಂಜೆ 4 ಕ್ಕೆ 13 ಸಂಯೋಜನೆ ಶ್ರೀ ಚನ್ನಬಸವಪ್ಪ ಸಭಾಂಗಣ ಕರ್ನಾಟಕ ಸರ್ಕಾರ ಸಚಿವಾಲಯ ಕಬ್ ರವಿಕುಮಾರ್ ಬಾಗಿ ಎಸ್ ಮಂಜುನಾಥ್; ಹುಲಿಕುಂಟೆ ಮೂರ್ತಿ, ಮುರಳಿ ಮೋಹನ ಕಾಟಿ, శబ్బనో లుద్యానచన దా అంబింద్యరా బింది; ಹರೀಶ್ ಭೈರಪ್ಪ , ಸೂರ್ಯ ಮುಕುಂದರಾಜ್ ರುದ್ರು ಪುನೀ್ ಬೆಂಗಳೂರು - ShareChat
#📜ಪ್ರಚಲಿತ ವಿದ್ಯಮಾನ📜 ರೈತ ಕಾರ್ಮಿಕರ ನೇತೃತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರ ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ ಹಾಗೂ ಪ್ರತಿಭಟನಾ ಸಭೆ ಮಂಗಳೂರು: 29 ಪ್ರಮುಖ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿರುವುದರ ವಿರುದ್ಧ, ಕಾರ್ಮಿಕ ವಿರೋಧಿ ಕಾರ್ಪೊರೇಟ್ ಪರ 4 ಕಾರ್ಮಿಕ ಸಂಹಿತೆಗಳ ವಿರುದ್ಧ, ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ವಿರುದ್ಧ ಹಾಗೂ ಉದ್ಯೋಗ ಖಾತ್ರಿ ಯೋಜನೆಗೆ ತಂದ ತಿದ್ದುಪಡಿ ವಿರೋಧಿಸಿ ರೈತ ಕಾರ್ಮಿಕರ ನೇತೃತ್ವದಲ್ಲಿ ನಾಳೆ(ಫೆಬ್ರವರಿ 12) ಅಖಿಲ ಭಾರತ ಮಹಾಮುಷ್ಕರ ನಡೆಯಲಿದ್ದು, ದ.ಕ.ಜಿಲ್ಲೆಯಾದ್ಯಂತ ವ್ಯಾಪಕ ರಸ್ತೆತಡೆ, ಮೆರವಣಿಗೆ ಹಾಗೂ ಪ್ರತಿಭಟನಾ ಸಭೆಗಳನ್ನು ನಡೆಸುವ ಮೂಲಕ ರೈತ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಪ್ರತಿಭಟಿಸಲಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಪರವಾಗಿ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸರಕಾರ ಭಾರತದ ಕಾರ್ಮಿಕ ವರ್ಗವನ್ನು ದುರ್ಬಲಗೊಳಿಸಿ ಮತ್ತೆ ಗುಲಾಮಗಿರಿಯತ್ತ ತಳ್ಳಲು, ಕಾರ್ಮಿಕರ ಹಕ್ಕು ಬಾಧ್ಯತೆಗಳನ್ನು ನಾಶ ಮಾಡಲು ಕಾರ್ಮಿಕ ಚಳುವಳಿಯನ್ನು ಹತ್ತಿಕ್ಕಲು ಹಾಗೂ ಬಂಡವಾಳಿಗರ ಲಾಭದ ಹಿತಾಸಕ್ತಿಗಳನ್ನು ಕಾಪಾಡಲು ಪ್ರಮುಖ 29 ಕಾನೂನುಗಳನ್ನು ರದ್ದುಗೊಳಿಸಿ, ಉದ್ಯಮಸ್ನೇಹಿ ಹೆಸರಿನಲ್ಲಿ ಕಾರ್ಪೊರೇಟ್ ಪರವಾದ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿದೆ.ಮತ್ತೊಂದು ಕಡೆ ರೈತ ವಿರೋಧಿ ಬೀಜ ಮಸೂದೆ, ವಿದ್ಯುತ್ ಮಸೂದೆ ಜಾರಿಗೊಳಿಸಿರುವುದು ಹಾಗೂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ತಿದ್ದುಪಡಿ ಮಾಡಿ ಗ್ರಾಮೀಣ ಪ್ರದೇಶದ ರೈತರು ಹಾಗೂ ಕೃಷಿಕೂಲಿಕಾರರ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು ತಿಳಿಸಿದೆ. ಇಂದು ದೇಶಾದ್ಯಂತ ನಡೆಯಲಿರುವ ಮಹಾಮುಷ್ಕರದ ಭಾಗವಾಗಿ ದ.ಕ.ಜಿಲ್ಲೆಯ ತೊಕ್ಕೋಟು, ಮಂಗಳೂರು, ಗುರುಪುರ ಕೈಕಂಬ, ಮೂಡಬಿದ್ರೆ,ಬಿ ಸಿ ರೋಡ್, ಬೆಳ್ತಂಗಡಿ, ಪುತ್ತೂರು, ಸುಳ್ಯ ಸೇರಿದಂತೆ ಎಲ್ಲಾ ತಾಲೂಕು, ವಲಯ ಕೇಂದ್ರಗಳಲ್ಲಿ ರಸ್ತೆತಡೆ, ಮೆರವಣಿಗೆ, ಹಾಗೂ ಪ್ರತಿಭಟನಾ ಸಭೆಗಳು ವ್ಯಾಪಕವಾಗಿ ಜರುಗಲಿದೆ. ಈ ಎಲ್ಲಾ ಪ್ರದೇಶಗಳಲ್ಲಿ ವಿದ್ಯಾರ್ಥಿ ಯುವಜನರು,ಮಹಿಳೆಯರು, ದಲಿತ ಆದಿವಾಸಿ ಸೇರಿದಂತೆ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ದೃಢವಾಗಿ ವಿರೋಧಿಸಬೇಕೆಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (JCTU) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. #AllIndia #general #strike #led #farmer #workers #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಫೆಬ್ರವರಿ 15ರಂದು ಕಿ.ರಂ. ನೆನಪಿನ ಕಾವ್ಯ ಶಿವರಾತ್ರಿ ಬೆಂಗಳೂರು: ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ, ಬೆಂಗಳೂರು ಹಾಗೂ ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ಇದೇ 15 ಫೆಬ್ರವರಿ 2026, ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಬೆಂಗಳೂರು ವಿವಿ ಜ್ಞಾನಭಾರತಿಯ ಡಾ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ  ವಿಮರ್ಶಕ ಪ್ರೊ ಕಿ.ರಂ.ನಾಗರಾಜ ನೆನಪಿನ ಕಾವ್ಯಶಿವರಾತ್ರಿ ಪ್ರಯುಕ್ತ ಅಹೋರಾತ್ರಿ ಮಂಟೇಸ್ವಾಮಿ ಮತ್ತು ಮಲೆ ಮಹದೇಶ್ವರ ಮಹಾಕಾವ್ಯ ಗಾಯನವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಕೆರೆ ಶಿವಕುಮಾ‌ರ್ ಮತ್ತು ಸಂಗಡಿಗರು ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ. ಸಂಜೆ 6.00 ಕವಿಗೋಷ್ಠಿ ಚಾಲನೆ: ಡಾ.ಎಚ್. ಲಕ್ಷ್ಮೀನಾರಾಯಣಸ್ವಾಮಿ, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪುರಸ್ಕೃತರು ಅಧ್ಯಕ್ಷತೆ: ಚಲಂ ಹಾಡ್ಲಹಳ್ಳಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಭಾಗವಹಿಸುವ ಕವಿಗಳು ಚಾಂದ್ ಪಾಷಾ ಅಮರಾವತಿ ಕೆ. ದಾದಾಪೀ‌ರ್ ಜೈಮನ್ ಶ್ರೀಧರ ಸಿ. ಮಂಜುಳಾ ಹುಲಿಕುಂಟೆ ಇಂಚರ ನಾರಾಯಣಸ್ವಾಮಿ ಎಂ.ಎಸ್. ಸಿದ್ದಾರ್ಥ ಆನಂದ ಕುಮಾರ್ ಎಸ್.ಡಿ ಹಾಜಿರಾ ಖಾನಂ ಗುಂಡಿಗೆರೆ ವಿಶ್ವನಾಥ್ ಚಿನ್ನೇನಹಳ್ಳಿ ಸ್ವಾಮಿ ಸೈಯ್ಯದ್ ಯೇಜಸ್ ಪಾಶ ದಯಾನಂದ ಹುಲಗುತ್ತೂರು ಶಿವಕುಮಾ‌ರ್ ಕೆಂಪನಪುರ ಕಾಂತರಾಜಪುರ ಸುರೇಶ್ ಕಮರವಾಡಿ ಮಹದೇವಸ್ವಾಮಿ ಕುಮಾರ್ ಇಂದ್ರಬೆಟ್ಟ ಡಾ.ಪಿ ಪ್ರೇಮ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಕೃತಿ ಚಿಂತಕರಾದ ಡಾ.ಟಿ.ವೆಂಕಟೇಶಮೂರ್ತಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಜಯಕರ್ ಎಸ್.ಎಂ. ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ, ಇವರು ವಹಿಸಲಿದ್ದಾರೆ. ಕಿರಂ ಕಾವ್ಯ ಶಿವರಾತ್ರಿ ಪುರಸ್ಕಾರ ಪ್ರದಾನ: ಪ.ಸ. ಕುಮಾರ್, ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಪುರಸ್ಕೃತರು: ಶೃತಿ ಶಿಲ್ಪಿ ಏಕತಾರಿ ರಾಮಯ್ಯ ಚಂಚನ ಪಾಳ್ಯ, ಬೆಂಗಳೂರು ಮುಖ್ಯ ಅತಿಥಿಗಳಾಗಿ ಶಾಂತಲಾ ಕೆ ಟಿ, ಕುಲಸಚಿವರು, ಬೆಂಗಳೂರು ವಿಶ್ವವಿದ್ಯಾಲಯ, ಡಾ. ಸಿ ಎಸ್ ಕರಿಗಾರ್ ಕುಲಸಚಿವರು (ಮೌಲ್ಯಮಾಪನ) ಬೆಂಗಳೂರು ವಿಶ್ವವಿದ್ಯಾಲಯ, ಸಿಂಡಿಕೇಟ್ ಸದಸ್ಯರಾದ ಡಾ. ಕೆ.ಷರೀಫ, ರಮೇಶ್‌ ಬಾಬು, ಗಂಗರಾಜು, ಮಹದೇವ ನಾಯಕ್  ಹಾಗೂ ಕಿ.ರಂ ಮಕ್ಕಳಾದ ಕೆ.ಎನ್. ಸಹನ, ಕೆ.ಎನ್.ಕವನ, ಕೆ.ಎನ್.ಚಂದನ ಭಾಗವಹಿಸಲಿದ್ದಾರೆ. ಪ್ರೊ. ಬಿ. ಗಂಗಾಧರ, ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಸ್ವಾಗತವನ್ನು ಡಾ. ಪ್ರದೀಪ್ ಮಾಲ್ಗುಡಿ, ಅಧ್ಯಕ್ಷರು ಜನಸಂಸ್ಕೃತಿ ಪ್ರತಿಷ್ಠಾನ ಮಾಡಲಿದ್ದಾರೆ. ಕಾರ್ಯಕ್ರಮವನ್ನು ನಿರ್ಮಲಾ ನಾದನ್ ನಿರ್ವಹಿಸಲಿದ್ದಾರೆ. ಕಾವ್ಯಶಿವರಾತ್ರಿ ಕುರಿತು ಪ್ರೊ ಕಿ.ರಂ.ನಾಗರಾಜ ಅವರಿಗೆ ಜನಪದ ಮಹಾಕಾವ್ಯಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಅವುಗಳಲ್ಲಿ ಅವಿತಿರುವ ಜೀವಸತ್ವ, ಅಂತಃಸತ್ವಗಳನ್ನು ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅವರು ಉಣಬಡಿಸುತ್ತಿದ್ದರು. ವಿಚಾರ ಸಂಕಿರಣಗಳಲ್ಲಿ ಕೂಡ ಜನಪದ ಮಹಾಕಾವ್ಯಗಳ ಕುರಿತು ವಿಭಿನ್ನ ಒಳನೋಟಗಳನ್ನು ಅವರು ನೀಡುತ್ತಿದ್ದರು. ಇದರ ಮುಂದುವರಿದ ಭಾಗವಾಗಿ ಕಾವ್ಯಮಂಡಲದಿಂದ ಪ್ರತಿ ಶಿವರಾತ್ರಿಯಂದು ಕಾವ್ಯ ಶಿವರಾತ್ರಿ ಹೆಸರಿನಲ್ಲಿ ಜನಪದ ಮಹಾಕಾವ್ಯಗಳನ್ನು ನೀಲಗಾರರಿಂದ ಹಾಡಿಸುವ ಸಂಪ್ರದಾಯವನ್ನು ಹುಟ್ಟುಹಾಕಿದರು. ಈ ಬಾರಿ ಸ್ನಾತಕೋತ್ತರ ಕೇಂದ್ರ ರಾಮನಗರ ಬೆಂಗಳೂರು ವಿಶ್ವವಿದ್ಯಾನಿಲಯ ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೊ: 9448160398, 9844086993 #KavyaShivaratri #memory #Kiram #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಸಿ ಕೆ ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದಾಗ ಕರ್ನಾಟಕದ ಪಾಲಿಗೆ ಸುವರ್ಣ ಕಾಲ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ರಾಜ್ಯದ ಸಚಿವರುಗಳಿಂದ ರಾಜ್ಯಕ್ಕೆ ಮೂರು ಕಾಸಿನ ಅನುಕೂಲ ಆಗುತ್ತಿಲ್ಲ .ಆದರೆ ಪದೇ ,ಪದೇ ರಾಜ್ಯ ಸರ್ಕಾರವನ್ನ ಟೀಕೆ ಮಾಡುವುದರಲ್ಲಿ ಮಾತ್ರ ಹಿಂದೆ ಬೀಳುವುದಿಲ್ಲ. ಆದರೆ ನಿಜಕ್ಕೂ ಕರ್ನಾಟಕಕ್ಕೆ ರೈಲ್ವೆ ಇಲಾಖೆಯಲ್ಲಿ ಸುವರ್ಣ ಕಾಲವನ್ನು ಒದಗಿಸಿದವರು ಭಾರತ ದೇಶದ ಭೂಪಟದಲ್ಲಿ ರೈಲ್ವೆ ಇಲಾಖೆಯಲ್ಲಿ ಕರ್ನಾಟಕಕ್ಕೆ ಮಹತ್ವವನ್ನ ತಂದು ಕೊಟ್ಟವರು ಸಿ ಕೆ ಜಾಫರ್ ಶರೀಫ್. ಪಿ,ವಿ ,ನರಸಿಂಹರಾಯರು ಪ್ರಧಾನ ಮಂತ್ರಿಗಳಾಗಿದ್ದಾಗ ಕೇಂದ್ರದಲ್ಲಿ ರೈಲ್ವೆ ಸಚಿವರಾಗಿದ್ದ ಶ್ರೀ ಸಿ ಕೆ ಜಾಫರ್ ಷರೀಫ್ ರವರು ನಿಜಕ್ಕೂ ಸಹ ಈ ರಾಜ್ಯಕ್ಕೆ ಹೆಚ್ಚು ಸೇವೆಯನ್ನು ಸಲ್ಲಿಸಿದ ಕೇಂದ್ರ ಸಚಿವರಾಗಿದ್ದಾರೆ. ಅವರು ಸಚಿವರಾಗಿದ್ದಾಗ ಇಡೀ ದೇಶದಾದ್ಯಂತ ಆರು ಸಾವಿರ ಕಿಲೋಮೀಟರ್ಗಳ ಗೇಜ್ ಪರಿವರ್ತನೆಯನ್ನ ಮಾಡುವ ಸಂದರ್ಭದಲ್ಲಿ ಸುಮಾರು ಒಂದು ಸಾವಿರ ಕಿಲೋಮೀಟರ್ ಗೆಜ್ ಪರಿವರ್ತನೆಯ ಯೋಜನೆಯನ್ನು ಕರ್ನಾಟಕಕ್ಕೆ ನೀಡಿದ್ದಾರೆ. ಅತ್ಯಂತ ಮಹತ್ವದ ಕೊಂಕಣ್ ರೈಲ್ವೆ ಯೋಜನೆಯ ಅನುಷ್ಠಾನಕ್ಕೆ ಶ್ರಮವನ್ನ ವಹಿಸಿದ್ದಾರೆ. ಬೆಂಗಳೂರಿನಲ್ಲಿ ರೈಲ್ವೆ ವಲಯವನ್ನು ಸ್ಥಾಪಿಸಿ ನಮ್ಮ ನಾಡಿನ ಜನರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ರೈಲ್ವೆ ನೇಮಕಾತಿ ಮಂಡಳಿಯನ್ನ ಪ್ರತ್ಯೇಕವಾಗಿ ಬೆಂಗಳೂರಿನಲ್ಲಿ ರಚಿಸಿ ನಮ್ಮ ಕರ್ನಾಟಕದ ಹೆಚ್ಚಿನ ಜನರು ಉದ್ಯೋಗವನ್ನು ಪಡೆದುಕೊಳ್ಳುವಲ್ಲಿ ನೆರವು ನೀಡಿದ್ದಾರೆ. ಬೆಂಗಳೂರು ಮತ್ತು ದೆಹಲಿ ರಾಜಧಾನಿ ಎಕ್ಸ್ಪ್ರೆಸ್ ,ಚೆನ್ನೈ ಬೆಂಗಳೂರು ಶತಾಬ್ದಿ ಎಕ್ಸ್ಪ್ರೆಸ್, ಇವುಗಳು ಇವರ ಕೊಡುಗೆಯಾಗಿದೆ. ಅತ್ಯಂತ ಮಹತ್ವದ ವೀಲ್ ಅಂಡ್ ಆಕ್ಸೆಲ್ ಕಾರ್ಖಾನೆಯನ್ನು ಯಲಹಂಕದಲ್ಲಿ ಸ್ಥಾಪಿಸಿ ನಮ್ಮ ನಾಡಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಕರ್ನಾಟಕದ ಅನೇಕ ಹೊಸ ಹೊಸ ಯೋಜನೆಗಳಿಗೆ ಚಾಲನೆಯನ್ನು ನೀಡಿ ಮತ್ತಷ್ಟು ಹೊಸ ಯೋಜನೆಗಳ ಅನುಷ್ಠಾನವಾಗುವಲ್ಲಿ ಅವುಗಳಿಗೆ ಬೇಕಾದ ಆಡಳಿತಾತ್ಮಕವಾದಂತ ಮಂಜೂರಾತಿ ಮತ್ತು ಸಂಪನ್ಮೂಲಗಳ ಒದಗಿಸಿ ಕೊಟ್ಟಿದ್ದಾರೆ. ಇವರ ಈ ಕೊಡುಗೆಗಳಿಂದಾಗಿ ಬೆಂಗಳೂರು ನಗರದಲ್ಲಿ ರೈಲ್ವೆ ವಲಯದಲ್ಲಿ ಹೆಚ್ಚಿನ ವಾಣಿಜ್ಯ ವ್ಯವಹಾರಗಳು ನಡೆಯಲು ಸಾಧ್ಯವಾಯಿತು. ವಿನೂತನವಾದ ತಂತ್ರಜ್ಞಾನವನ್ನು ಒಳಗೊಂಡ ತೂಗು ಸೇತುವೆ ಕೆಆರ್ ಪುರದಲ್ಲಿ ನಿರ್ಮಾಣದ ಹಿಂದೆ ಇವರ ಶ್ರಮವಿದೆ. ಕರ್ನಾಟಕದ ಜನರು ರೈಲಿನಲ್ಲಿ ಬಿಟ್ಟಿ ಓಡಾಡುತ್ತಿಲ್ಲ ,ಟಿಕೆಟ್ ಗಳನ್ನು ಕೊಂಡು ಪ್ರಯಾಣ ಮಾಡುತ್ತಾರೆ. ರೈಲ್ವೆ ಇಲಾಖೆಯ ಒಟ್ಟಾರೆ ಶೇಖರಣೆಯ ಮೊತ್ತದಲ್ಲಿ ಸುಮಾರು 48 ಸಾವಿರದಿಂದ ಹಿಡಿದು ಐವತ್ತು ಸಾವಿರ ರೂಪಾಯಿಗಳ ಪಾಲು ಕರ್ನಾಟಕದ ರೈಲ್ವೆ ಸಂಚಾರದಿಂದ ಬಂದಿರುತ್ತದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏನೇನು ಕೊಟ್ಟು ಬಿಟ್ಟಿದೆ ಎನ್ನುವ ರೀತಿಯಲ್ಲಿ ತಮ್ಮ ಬೆನ್ನುಗಳನ್ನು ತಾವೇ ತಟ್ಟಿಕೊಳ್ಳುವುದು ಬೇಡ. ಕರ್ನಾಟಕದ ರೈಲ್ವೆ ಇಲಾಖೆಯಲ್ಲಿ ಸಿಕೆ ಜಾಫರ್ ಷರೀಫ್ ರವರ ರೀತಿಯಲ್ಲಿ ಯಾರು ಸಹ ನಮ್ಮ ರಾಜ್ಯದ ಪರವಾಗಿ ಯೋಜನೆಗಳನ್ನು ತರಲು ಇಲ್ಲಿಯ ತನಕ ಸಾಧ್ಯವಾಗಿರುವುದಿಲ್ಲ. ನಮ್ಮ ಲೋಕಸಭಾ ಸದಸ್ಯರುಗಳು ಮತ್ತು ಕೇಂದ್ರದ ಸಚಿವರು ಕೇವಲ ಟೀಕೆ ಮಾಡುವುದನ್ನು ಬಿಟ್ಟು ಯೋಜನೆಗಳನ್ನ ತಂದು ಕರ್ನಾಟಕದ ಪ್ರಗತಿಗೆ ಚಾಲನೆಯನ್ನು ನೀಡಿ. ರಾಜಕಾರಣದ ಮಾತುಗಳು ಪ್ರತಿದಿನವೂ ಕೇಳಿ ಕೇಳಿ ಎಲ್ಲರಿಗೂ ಸಾಕಾಗಿದೆ .ಅಭಿವೃದ್ಧಿಯ ಮಾತು ಕೇಳಿ ಬರಲಿ. ಯಾರು ಎಷ್ಟು ಕೆಲಸವನ್ನ ಮಾಡಿದ್ದಾರೆ ಎನ್ನುವುದನ್ನು ವಾಟ್ಸಾಪ್ ಗಳು ನಿರ್ಧರಿಸುವುದಿಲ್ಲ. ಇತಿಹಾಸ ದಾಖಲಿಸುತ್ತದೆ. - ಕೆ ಎಸ್ ನಾಗರಾಜ್, ಬೆಂಗಳೂರು #goldenera #Karnataka #CKJafferSharif #RailwayMinister #ksnagaraj #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಸಿ ಕೆ ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದಾಗ ಕರ್ನಾಟಕದ ಪಾಲಿಗೆ ಸುವರ್ಣ ಕಾಲ ಸುದ್ರಿ & ಉಂಯಲ್ಲಿ  EXRRESS Please subscribe to Malgudi Express YouTube and Website ಸಿ ಕೆ ಜಾಫರ್ ಷರೀಫ್ ರೈಲ್ವೆ ಸಚಿವರಾಗಿದ್ದಾಗ ಕರ್ನಾಟಕದ ಪಾಲಿಗೆ ಸುವರ್ಣ ಕಾಲ ಸುದ್ರಿ & ಉಂಯಲ್ಲಿ  EXRRESS Please subscribe to Malgudi Express YouTube and Website - ShareChat
#📜ಪ್ರಚಲಿತ ವಿದ್ಯಮಾನ📜 ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡದ ಸಿನಿತಾರೆಗಳು ಕಣ್ಣಿಗೆ ಕಣ್ಣುತ್ತಿಲ್ಲವೇ?: ಡಾ.ಕೆ.ಸುಧಾಕರ್ ಕರ್ನಾಟಕದ ಸುಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್ ಗೆ ಬ್ರಾಂಡ್ ಅಂಬಾಸಿಡರ್ ನೇಮಿಸಲು ನಮ್ಮದೇ ಕನ್ನಡ ನಾಡಿನ ಅನೇಕ ತಾರೆಗಳು ಇದ್ದರೂ ಪರರಾಜ್ಯದ, ಅನ್ಯಭಾಷೆಯ ಸಿನಿಮಾ ನಟಿಯೊಬ್ಬರನ್ನು ಕೋಟ್ಯಂತರ ರೂಪಾಯಿ ಪೇಮೆಂಟ್ ಕೊಟ್ಟು ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿರುವುದು ಕಾಂಗ್ರೆಸ್ ಪಕ್ಷದ ಕನ್ನಡ ವಿರೋಧಿ ಮನಸ್ಥಿತಿಗೆ ಮತ್ತೊಂದು ಸಾಕ್ಷಿ. ಕನ್ನಡ ಸಿನಿ ತಾರೆಯರಾದ ರಮ್ಯಾ, ರಶ್ಮಿಕಾ ಮಂದಣ್ಣ, ಶ್ರೀನಿಧಿ ಶೆಟ್ಟಿ, ಪೂಜಾ ಹೆಗ್ಡೆ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕ ನಟಿಯರು ಇವತ್ತು ಅನೇಕ ಭಾಷೆಗಳ ಚಿತ್ರರಂಗದಲ್ಲಿ ಬೇಡಿಕೆಯುಳ್ಳ ಜನಪ್ರಿಯ ನಟಿಯರಾಗಿ ಕನ್ನಡದ ಕೀರ್ತಿ ಪತಾಕೆಯನ್ನ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ. ನಮ್ಮದೇ ಕನ್ನಡ ನಾಡಿನ ನಟಿಯರನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕುವ ಕಾಂಗ್ರೆಸ್ ಪಕ್ಷದ ಧೋರಣೆ ಕನ್ನಡ ನಾಡಿನ ಪ್ರತಿಭೆಗಳಿಗೆ ಮಾಡಿರುವ ಅಮಪಾನ ಮಾತ್ರವಲ್ಲ, ಮೈಸೂರು ಸ್ಯಾಂಡಲ್ ಸೋಪಿನ ಅಸ್ಮಿತೆಗೂ ಮಾಡಿರುವ ಘೋರ ಅಪಮಾನ. ಈ ಕನ್ನಡ ವಿರೋಧಿ, ನಾಡದ್ರೋಹಿ ಕಾಂಗ್ರೆಸ್ ಪಕ್ಷವನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ. - ಡಾ.ಕೆ.ಸುಧಾಕರ್, ಸಂಸದ #Kannada #film #stars #traitorous #govt #KSudhakar #malgudiexpress #malgudinews #news #TopNews | Subscribe | Comment | Like | Share |
📜ಪ್ರಚಲಿತ ವಿದ್ಯಮಾನ📜 - ShareChat