Malgudi Express
ShareChat
click to see wallet page
@news007
news007
Malgudi Express
@news007
Malgudi Express official Page
#📜ಪ್ರಚಲಿತ ವಿದ್ಯಮಾನ📜 ಬೇಸಿಗೆ ಶಾಖ ಮತ್ತು ನಾಗರಿಕ ರಕ್ಷಣಾ ಇಲಾಖೆ ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯವೇ? ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಏನು? ಕಳೆದ ಕೆಲವು ದಿನಗಳಿಂದ ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ "ನಾಗರಿಕ ರಕ್ಷಣಾ ಇಲಾಖೆ" (Civil Defence Department) ಹೆಸರಿನಲ್ಲಿ ಒಂದು ಎಚ್ಚರಿಕೆಯ ಸಂದೇಶ ವೈರಲ್ ಆಗುತ್ತಿದೆ. ಅದರಲ್ಲಿ, "ಹೊರಗಿನ ತಾಪಮಾನ 45–47°C ತಲುಪಲಿದೆ, ಆದ್ದರಿಂದ ಎಸಿ ತಾಪಮಾನವನ್ನು 24°C ನಲ್ಲೇ ಇಡಿ ಮತ್ತು ಮಧ್ಯಾಹ್ನ ಹೊರಗೆ ಬರಬೇಡಿ" ಎಂದು ಸೂಚಿಸಲಾಗಿದೆ. ಮಾಲ್ಗುಡಿ ಎಕ್ಸ್ಪ್ರೆಸ್ ನಡೆಸಿದ ತನಿಖೆಯಲ್ಲಿ ಕಂಡುಬಂದ ಸತ್ಯಾಂಶಗಳು ಇಲ್ಲಿವೆ: 1. ಇದು ಅಧಿಕೃತ ಪ್ರಕಟಣೆಯೇ?: ಅಸತ್ಯ: ನಮ್ಮ ತನಿಖೆಯ ಪ್ರಕಾರ, ನಾಗರಿಕ ರಕ್ಷಣಾ ಇಲಾಖೆ ಇತ್ತೀಚಿನ ದಿನಗಳಲ್ಲಿ ಇಂತಹ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಈ ಸಂದೇಶ ಕಳೆದ ಹಲವು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಕೇವಲ ಹೆಸರುಗಳನ್ನು ಬದಲಾಯಿಸಿಕೊಂಡು (ಕೆಲವೊಮ್ಮೆ ಆರೋಗ್ಯ ಇಲಾಖೆ, ಕೆಲವೊಮ್ಮೆ ಇಂಧನ ಇಲಾಖೆ) ಹರಿದಾಡುತ್ತಿದೆ. 2. ಎಸಿ ತಾಪಮಾನ 24–25°C ನಲ್ಲಿರಬೇಕೇ?: ಸರಿ: ತಾಂತ್ರಿಕವಾಗಿ ಇದು ಸರಿಯಾದ ಸಲಹೆ. ತಜ್ಞರ ಪ್ರಕಾರ, ಎಸಿಯನ್ನು 24 ಡಿಗ್ರಿಯಲ್ಲಿ ಇಡುವುದರಿಂದ ದೇಹದ ಆರೋಗ್ಯಕ್ಕೂ ಉತ್ತಮ ಮತ್ತು ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ಆದರೆ, ತಾಪಮಾನ 45 ಡಿಗ್ರಿ ದಾಟಿದ ಕೂಡಲೇ ಎಸಿ ಸ್ಫೋಟಗೊಳ್ಳುತ್ತದೆ ಅಥವಾ ಕೆಟ್ಟುಹೋಗುತ್ತದೆ ಎಂಬ ಆತಂಕ ಪಡಬೇಕಿಲ್ಲ. ಆಧುನಿಕ ಎಸಿಗಳು ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. 3. ಮಧ್ಯಾಹ್ನ 10 ರಿಂದ 3 ರವರೆಗೆ ಹೊರಗೆ ಹೋಗಬಾರದೇ?: ಭಾಗಶಃ ಸರಿ: ಹವಾಮಾನ ಇಲಾಖೆ ಮತ್ತು ವೈದ್ಯರು ಬೇಸಿಗೆಯ ಸಮಯದಲ್ಲಿ ಮಧ್ಯಾಹ್ನ 11 ರಿಂದ ಸಂಜೆ 4 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಡಿ ಎಂದು ಸಲಹೆ ನೀಡುತ್ತಾರೆ. ಇದು ಹೀಟ್ ಸ್ಟ್ರೋಕ್ ತಡೆಯಲು ಸಹಕಾರಿ. ಸಂದೇಶದಲ್ಲಿರುವ ಈ ಭಾಗ ಜನಹಿತ ದೃಷ್ಟಿಯಿಂದ ಉಪಯುಕ್ತವಾಗಿದೆ. ಮಾಲ್ಗುಡಿ ಎಕ್ಸ್ಪ್ರೆಸ್ ತೀರ್ಪು: ವೈರಲ್ ಆಗಿರುವ ಸಂದೇಶದಲ್ಲಿರುವ ಆರೋಗ್ಯದ ಸಲಹೆಗಳು (ನೀರು ಕುಡಿಯುವುದು, ಬಿಸಿಲಿನಲ್ಲಿ ಹೋಗದಿರುವುದು) ಪಾಲಿಸಲು ಯೋಗ್ಯವಾಗಿವೆ. ಆದರೆ, ಈ ಸಂದೇಶ ನಾಗರಿಕ ರಕ್ಷಣಾ ಇಲಾಖೆಯಿಂದ ಬಂದ ಅಧಿಕೃತ ಎಚ್ಚರಿಕೆಯಲ್ಲ. ಇದು ಹಳೆಯ ಫಾರ್ವರ್ಡ್ ಮೆಸೇಜ್ ಆಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಓದುಗರಲ್ಲಿ ಮನವಿ: ಯಾವುದೇ ಅಧಿಕೃತ ಮಾಹಿತಿಗಾಗಿ ಸರ್ಕಾರದ ವೆಬ್‌ಸೈಟ್‌ಗಳು ಅಥವಾ ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳನ್ನು ಗಮನಿಸಿ. ಆಧಾರರಹಿತ ಸಂದೇಶಗಳನ್ನು ಹಂಚುವ ಮೊದಲು ಪರಿಶೀಲಿಸಿ. #message #spread #name #summerheat #CivilDefenseDepartment #true #factcheck #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಬೇಸಿಗೆ ಶಾಖ ಮತ್ತು ನಾಗರಿಕ ರಕ್ಷಣಾ ಇಲಾಖೆ ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯವೇ? K E ನೀಡಲಾಗಿದೆ F A C T 29 ರಿಂದ ಮೇ 12 ರವರೆಗೆ; స్రిలా ళిగ్గి 10 రిందె మెధ్యార్న 3 రేవెరిగి ಯಾರೂ (ವಿಶೇಷವಾಗಿ ತೆರೆದ ಪ್ರದೇಶಗಳಲ್ಲಿ ) ಹೊರಗೆ ಹೋಗಬಾರದು. ತಾಪಮಾನವು 45*0 ನಿಂದ 55*0 ಗೆ ಏರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಯಾರಿಗಾದರೂ ' FAcl ಉಸಿರಾಡಲು ತೊಂದರೆಯಾದರೆ ಅಥವಾ ದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರೆ, ತಕ್ಷಣ' 03303 ರನ್ನು ಸಂಪರ್ಕಿಸಿ. ಸರಿಯಾದ ಗಾಳಿಗಾ ಬಾಗಿಲುಗಳನ್ನು ತೆರೆದಿಡಿ २९ 6ಗಲ ಬಲ?: మెది రియేల్ల . >96 HTTPS:IIMALGUDIEXPRESS.CO.IN/ EXPRESS ಬೇಸಿಗೆ ಶಾಖ ಮತ್ತು ನಾಗರಿಕ ರಕ್ಷಣಾ ಇಲಾಖೆ ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯವೇ? K E ನೀಡಲಾಗಿದೆ F A C T 29 ರಿಂದ ಮೇ 12 ರವರೆಗೆ; స్రిలా ళిగ్గి 10 రిందె మెధ్యార్న 3 రేవెరిగి ಯಾರೂ (ವಿಶೇಷವಾಗಿ ತೆರೆದ ಪ್ರದೇಶಗಳಲ್ಲಿ ) ಹೊರಗೆ ಹೋಗಬಾರದು. ತಾಪಮಾನವು 45*0 ನಿಂದ 55*0 ಗೆ ಏರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಯಾರಿಗಾದರೂ ' FAcl ಉಸಿರಾಡಲು ತೊಂದರೆಯಾದರೆ ಅಥವಾ ದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರೆ, ತಕ್ಷಣ' 03303 ರನ್ನು ಸಂಪರ್ಕಿಸಿ. ಸರಿಯಾದ ಗಾಳಿಗಾ ಬಾಗಿಲುಗಳನ್ನು ತೆರೆದಿಡಿ २९ 6ಗಲ ಬಲ?: మెది రియేల్ల . >96 HTTPS:IIMALGUDIEXPRESS.CO.IN/ EXPRESS - ShareChat
#🕉️ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಜನ್ಮದಿನ🙏
🕉️ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಜನ್ಮದಿನ🙏 - ಅಕ್ಷರ ದಾಸೋಹಿ , ಅನ್ನದಾನಿ ಶ್ರೀಗಳಿಗೆ ನಮನ ನಡೆದಾಡುವ ದೇವರು  ಸಿದ್ಧಗಂಗಾ ಮಠದ ಲಿಂಗೈಕ್ಯ ` ಪರಮಪೂಜ್ಯ ಶ್ರೀಶ್ರೀಶ್ರೀ ಶಿವಕುಮಾರ' ಸ್ವಾಮೀಜಿಯವರ ಜಯಂತಿ : "ಕಾಯಕವೇ ಕೈಲಾಸ; ಸೇವೆಯೇ ಪರಮಧರ್ಮ" ತತ್ವದಡಿ ಲಕ್ಷಾಂತರ ಎಂಬ ಬಡ ಮಕ್ಕಳ ಬಾಳಿಗೆ  ಬೆಳಕಾದ ಜ್ಞಾನ್ ಸೂರ್ಯನಿಗೆ ಕೋಟಿ ಕೋಟಿ ಪ್ರಣಾಮಗಳು ~8 ರಿಯಲ್ಲ; & ತ್ತೂರಿ 7 ల/v MALGUDI EXPRESS EXPRESS https:| Imalgudiexpress coinl ಅಕ್ಷರ ದಾಸೋಹಿ , ಅನ್ನದಾನಿ ಶ್ರೀಗಳಿಗೆ ನಮನ ನಡೆದಾಡುವ ದೇವರು  ಸಿದ್ಧಗಂಗಾ ಮಠದ ಲಿಂಗೈಕ್ಯ ` ಪರಮಪೂಜ್ಯ ಶ್ರೀಶ್ರೀಶ್ರೀ ಶಿವಕುಮಾರ' ಸ್ವಾಮೀಜಿಯವರ ಜಯಂತಿ : "ಕಾಯಕವೇ ಕೈಲಾಸ; ಸೇವೆಯೇ ಪರಮಧರ್ಮ" ತತ್ವದಡಿ ಲಕ್ಷಾಂತರ ಎಂಬ ಬಡ ಮಕ್ಕಳ ಬಾಳಿಗೆ  ಬೆಳಕಾದ ಜ್ಞಾನ್ ಸೂರ್ಯನಿಗೆ ಕೋಟಿ ಕೋಟಿ ಪ್ರಣಾಮಗಳು ~8 ರಿಯಲ್ಲ; & ತ್ತೂರಿ 7 ల/v MALGUDI EXPRESS EXPRESS https:| Imalgudiexpress coinl - ShareChat
#📜ಪ್ರಚಲಿತ ವಿದ್ಯಮಾನ📜 ಏಪ್ರಿಲ್-1 ಮೂರ್ಖರ ದಿನ ಎಂದು ಕರೆಯುವವರೇ ಶತಮೂರ್ಖರು! 'ಸಮಾಜ ಸೇವೆ' ಹೆಸರಿನಲ್ಲಿ ಆಳೆತ್ತರದ ದೊಡ್ಡ ದೊಡ್ಡ ಫ್ಲೆಕ್ಸ್ ಫೋಟೋ ಹಾಕಿಕೊಂಡು ರಾರಾಜಿಸುವ ನಾಯಕರ ಭಿತ್ತಿಚಿತ್ರಗಳನ್ನು ನೀವು ನೋಡಿದ್ದೀರಿ. 'ಕೊಡುಗೈ ದಾನಿ' 'ಕಲಿಯುಗದ ಕರ್ಣ' 'ದಾನ ಶೂರ' 'ಸಮಾಜ ಸೇವಾ ದುರಂದರ' 'ಸಮಾಜ ಸೇವಾ ರತ್ನ' 'ಬಡವರ ಬಂಧು' 'ದಾನ ಚಿಂತಾಮಣಿ' ಇನ್ನೂ ಮುಂತಾದ ವಿಶೇಷಣಗಳಿಂದ ಕೀರ್ತಿಸಲಾಗುವ ಆ ನಾಯಕರ ಭಾವಚಿತ್ರಗಳು ಮತ್ತು ಅವರ ದೇಹಭಾಷೆ ಒಮ್ಮೆಯಾದರೂ ನಮ್ಮ ಕಣ್ಣುಗಳನ್ನು ಸೆಳೆಯದಿರಲು ಸಾಧ್ಯವಿಲ್ಲ. ಸರ್ವಾಲಂಕಾರ ಭೂಷಿತರಾಗಿ ಕೈಬೆರಳು ಕೊರಳು ಮುಂಗೈ ಮೈತುಂಬಾ ಲಕ್ಷಗಟ್ಟಲೆ ಬೆಲೆಬಾಳುವ ಒಡವೆಗಳನ್ನು ಮತ್ತು ವಸ್ತ್ರಗಳನ್ನು ಧರಿಸಿಕೊಂಡು ಭರ್ಜರಿಯಾದ ಕಾರುಗಳಲ್ಲಿ ಸಹಚರರ ಪಡೆಯೊಂದಿಗೆ ಬಂದಿಳಿಯುವ ಅವರ ಠೀವಿ ಗತ್ತು ಗಮ್ಮತ್ತು ಗಾಂಭೀರ್ಯಗಳಿಗೆ ಬೆರಗಾದ ವಂದಿಮಾಗದ ಅಭಿಮಾನಿಗಳು ಪಟಾಕಿ ಸರ ಸಿಡಿಸಿ ಜಯಘೋಷ ಹಾಕುತ್ತಾರೆ. ಇನ್ನೂ ಕೆಲವರು ಸರ್ಕಾರಕ್ಕೆ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ದುಡ್ಡನ್ನು ಕಟ್ಟದೆ ವಂಚಿಸಿ ಮತ್ತು ತಮ್ಮದೇ ಕೈಕೆಳಗೆ ದುಡಿಯುವ ನೌಕರರಿಗೆ ಕೊಡಬೇಕಾದ ವೇತನವನ್ನು ವಂಚಿಸಿ ಅಥವಾ ಭ್ರಷ್ಟಾಚಾರದಿಂದ ಅಕ್ರಮ ಸಂಪತ್ತನ್ನು ಗುಡ್ಡೆ ಹಾಕಿಕೊಂಡು ಬಹಿರಂಗದಲ್ಲಿ ಅಪೂಟ ಸರಳತೆಯ ಪೋಜು ಕೊಡುತ್ತಾರೆ. ಎಸಗಿದ ಪಾಪವನ್ನು ತೊಳೆದುಕೊಳ್ಳುವ ಪ್ರಾಯಶ್ಚಿತ್ತಕ್ಕಾಗಿ ತಾವು ಹೋಗಿಬರುವ ಕಡೆಗೆಲ್ಲಾ ಕಾರಿನಲ್ಲಿ ಸೀರೆಗಳನ್ನು, ನೋಟಿನ ಕಂತೆಗಳನ್ನು ಕಾಣಿಕೆಗಳನ್ನು ಕೊಂಡೊಯ್ದು ಮಠಮಂದಿರಗಳಿಗೂ ಪೂಜಾರಿಗಳಿಗೂ, ವಿಲಿಯಂ ಬ್ಲೇಕನ ಕವಿತೆಗಳಲ್ಲಿ ಬರುವಂತಹ ಬಡಬಗ್ಗರಿಗೂ ಹಂಚಿ ಕೃತಾರ್ಥ ಭಾವದಿಂದ ಕೈಮುಗಿದು ಬರುತ್ತಾರೆ. ಇನ್ನೂ ಕೆಲವರು ಸಮಾಜ ಸೇವೆ ಎಂಬುದನ್ನೇ ತಮ್ಮ ಜೀವನೋಪಾಯದ ದಾರಿಯಾಗಿಸಿಕೊಂಡಿರುತ್ತಾರೆ. ಇಂಥವರಿಗೆ ಕನಿಷ್ಠ ಸಾರ್ವಜನಿಕ ಲಜ್ಜೆ ಎಂಬುದೇ ಇರುವುದಿಲ್ಲ. ಸೇವೆ ಎಂಬ ಪದವನ್ನು ನಾವು ಹೊಣೆಗಾರಿಕೆ ಅಥವಾ ಕರ್ತವ್ಯ ಎಂದು ಭಾವಿಸಿದಾಗ ಹೆಚ್ಚು ಅರ್ಥ ಬರುತ್ತದೆ. ನಮ್ಮನ್ನು ರೂಪಿಸಿರುವುದು ಈ ಸಮಾಜವೇ ಆಗಿರುವುದರಿಂದ ನಾವು ಪಡೆದುಕೊಂಡ ಸಮಾಜಕ್ಕೆ ನಾವು ವಾಪಸ್ಸು ಋಣ ಸಂದಾಯ ಮಾಡಬೇಕಿರುತ್ತದೆ. ಇದನ್ನು ಅಂಬೇಡ್ಕರ್ ಅವರು Pay back to society ಎಂದಿದ್ದಾರೆ. ಸಮಾಜ ಸೇವಕರೆಂದು ಕರೆದುಕೊಳ್ಳುವ ಕೆಲವು ಜನರಿಂದಾಗಿ ಭಾರತದ ಇಂದಿನ ಅರ್ಥ ವ್ಯವಸ್ಥೆ ತುಂಬಾ ಏರುಪೇರಾಗಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಆರ್ಥಿಕ ವಿಚಲತೆಗೆ ಕಾರಣವಾಗಿದೆ. ಇವತ್ತು ನಾವು ವಿಶ್ವ ಆರ್ಥಿಕತೆಯಲ್ಲಿ ಭಾರತದ ಸ್ಥಾನಮಾನ ಕುರಿತು ವಿಪರೀತವಾಗಿ ಚರ್ಚಿಸುತ್ತಿದ್ದೇವೆ. ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ (International financial system) ಮತ್ತು ಹಣಕಾಸಿನ ಏಜೆನ್ಸಿಗಳನ್ನು ಕುರಿತು ದೊಡ್ಡ ದೊಡ್ಡ ಪ್ರಬಂಧಗಳನ್ನು ಬರೆದು ಮಂಡಿಸುತ್ತಿದ್ದೇವೆ. stocks and shares, debentures and derivatives ಎಂದು ಷೇರು ಮಾರುಕಟ್ಟೆಯ ಅರ್ಥಶಾಸ್ತ್ರಜ್ಞರು ಮತ್ತು ಸಂಶೋಧಕರು ತಮ್ಮ ಅಧ್ಯಯನದ ಫಲಿತಗಳನ್ನು ಕಾಲಕಾಲಕ್ಕೆ ನಮ್ಮ ಮುಂದಿಡುತ್ತಿದ್ದಾರೆ. ಈ ಅಧ್ಯಯನಗಳೆಲ್ಲವೂ ವಿಶ್ವಮಟ್ಟದಲ್ಲಿ ಭಾರತವು ಒಂದು ಅಭಿವೃದ್ಧಿಶೀಲ ರಾಷ್ಟ್ರವೆಂದೂ, ಭಾರತ ದೇಶದ ಆಂತರಿಕ ಆರ್ಥಿಕತೆಯು ತೀರಾ ಅಸಮಾನತೆಯಿಂದ ಕೂಡಿದೆಯೆಂದೂ, ದೇಶದ ಪ್ರಜೆಗಳಲ್ಲಿ ಆರ್ಥಿಕ ಪಾರದರ್ಶಕತೆ ಕಂಡುಬರುತ್ತಿಲ್ಲವೆಂದೂ, ಕೆಲವೇ ಶ್ರೀಮಂತರ ಕೈಗಳಲ್ಲಿ ಇಡೀ ದೇಶದ ಸಿಂಹಪಾಲು ಸಂಪತ್ತು ಕೇಂದ್ರೀಕರಣವಾಗಿದೆಯೆಂದೂ ಹಾಗೂ ಬಡಜನರಿಂದಲೇ ತುಂಬಿರುವ ಶ್ರೀಮಂತ ರಾಷ್ಟ್ರವೆಂದೂ ವಿಶ್ವದೆದುರು ಸಾರುತ್ತಿವೆ. ಹೀಗೆಂದಾಗ ಭಾರತದ ದೋಷಪೂರಿತ ವಿತ್ತೀಯ ನೀತಿಗಳೇ (fiscal policies) ಇಂತೆಲ್ಲಾ ವೈರುಧ್ಯಗಳಿಗೆ ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅನ್ನಿಸ್ತಿದೆ. ಬಸವಣ್ಣನ ನಂತರದಲ್ಲಿ ಭಾರತದ ಆರ್ಥಿಕ ಸಮಸ್ಯೆಗಳನ್ನು ಕುರಿತು ಆಮೂಲಾಗ್ರ ಚಿಂತನೆ ನಡೆಸಿದವರೆಂದರೆ ಅಂಬೇಡ್ಕರ್ ಒಬ್ಬರೇ. The problem of the rupee ; Its origin and its solution (History of Indian currency and Banking) ಎಂಬ ವಿಷಯದ ಮೇಲೆ ಬಹುದೊಡ್ಡ ಸಂಶೋಧನೆಯನ್ನು ಅವರು ಕೈಗೊಳ್ಳುತ್ತಾರೆ. ಭಾರತದ ಆರ್ಥಿಕತೆಯ ಏರಿಳಿತ ಮತ್ತು ಸಂಪತ್ತಿನ ಅಸಮಾನ ಹಂಚಿಕೆಯನ್ನು ಅವರು ಮನಗಾಣುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು London School of Economics ನಲ್ಲಿ ಪಿಎಚ್.ಡಿ ಸಂಶೋಧನೆ ಕೈಗೊಂಡು ಡಾಕ್ಟರೇಟ್ ಮಹಾಪ್ರಬಂಧವನ್ನು ಮಂಡಿಸಿ ಭಾರತದ ಆರ್ಥಿಕ ನಡಿಗೆಯನ್ನು ಹೊಸ ದಿಕ್ಕಿನ ಕಡೆಗೆ ಬದಲಿಸಿದರು. ಇದೇ‌ ಮಹಾಪ್ರಬಂಧವನ್ನು ಆಧರಿಸಿಯೇ 1935 ರ ಏಪ್ರಿಲ್ 1 ನೇ ತಾರೀಖಿನಂದು Reserve Bank of India (RBI) ಸ್ಥಾಪನೆಯಾಯಿತು. ಏಪ್ರಿಲ್ 1 ನ್ನು ಭಾರತದ ಮಟ್ಟಿಗೆ 'ಮೂರ್ಖರ ದಿನ' ಎನ್ನುವವರು ಶತಮೂರ್ಖರೇ ಸರಿ. ಏಪ್ರಿಲ್ 1 ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞನಾದ ಅಂಬೇಡ್ಕರ್ ಹೆಸರಿನಲ್ಲಿ ಆಚರಿಸಬೇಕಾದ 'ರೂಪಾಯಿ ದಿನ' ಅಥವಾ 'ಬ್ಯಾಂಕ್ ದಿನ'. ಇವತ್ತು ಯಾರದೇ ಜೇಬಿನಲ್ಲಿ ಒಂದು ರೂಪಾಯಿ ನಾಣ್ಯ ಓಡಾಡುತ್ತಿದ್ದರೂ, ಕೋಟಿ ರೂಪಾಯಿ ಚಲಾವಣೆಯಾಗುತ್ತಿದ್ದರೂ ಅದಕ್ಕೆ ಅಂಬೇಡ್ಕರರೇ ಕಾರಣ. ಭಾರತದಲ್ಲಿ ಅಸಮಾನ ಆರ್ಥಿಕ ರಚನೆ ಮತ್ತು ಸಂಪತ್ತಿನ ಕೇಂದ್ರೀಕರಣವನ್ನು ಗುರುತಿಸಿದ ಅಂಬೇಡ್ಕರ್ ಆರ್ಥಿಕ ಉತ್ಪಾದನೆಯ ಪ್ರಧಾನಾಂಶವಾದ ಭೂಮಿಯನ್ನು ರಾಷ್ಟ್ರೀಕರಣ ಮಾಡಲು ಉದ್ದೇಶಿಸಿದ್ದರು. ಮಹಿಳೆಯರಿಗೆ ಸಮಾನ ಆಸ್ತಿಯ ಹಕ್ಕನ್ನು ತರಲು ಸಾಧ್ಯವಾದ ಅಂಬೇಡ್ಕರ್ ಅವರು ಕನಸಿದ್ದ ಭೂಮಿಯ ರಾಷ್ಟ್ರೀಕರಣದ ಆಸೆ ಕೈಗೂಡಲಿಲ್ಲ. ಹಾಗಾಗಿಯೇ ಅವರು Pay back to society ಎಂದು ನಾವು ಸಮಾಜಕ್ಕೆ ಋಣ ಸಂದಾಯ ಮಾಡಬೇಕಾದ ನೈತಿಕ ಜವಾಬ್ದಾರಿಯನ್ನು ನಮ್ಮ ಮೇಲೆ ಹೊರಿಸಿದರು. ಇಂತಹ ಋಣ ಸಂದಾಯವನ್ನು ಕೆಲವರು ಸಮಾಜ ಸೇವೆ ಎಂದು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಸಮಾಜ ಸೇವಕರೆಂಬ ಲೇಬಲ್ ಅಂಟಿಸಿಕೊಳ್ಳುತ್ತಿದ್ದಾರೆ. ಇದು ದಾನವೂ ಅಲ್ಲ. ಸೇವೆಯೂ ಅಲ್ಲ. ನಮ್ಮ ಪಾಲಿನ ಸಾಮಾಜಿಕ ಹೊಣೆಗಾರಿಕೆ ಅಥವಾ ಕರ್ತವ್ಯ. ಇದನ್ನೇ ಬಸವಣ್ಣ ದಾಸೋಹ ಎಂದಿದ್ದಾರೆ. 'ಬೇಡುವವರಿಲ್ಲದೆ ನಾ ಬಡವನಾದೆನಯ್ಯ' ಎಂಬ ವಚನವಾಕ್ಯವು ನೀಡುವವರನ್ನೇ ಬೇಡುವವರಿಲ್ಲದ ಕಾರಣವಾಗಿ ಬಡವರಾದರೆಂದು ತಿಳಿಸುತ್ತದೆ. ಎಲ್ಲವೂ ಈ ಸೃಷ್ಟಿಯು ನಮಗೆ ಕೊಟ್ಟಿರುವ ದಾನವಾಗಿರುವುದರಿಂದ ನಾವು ಕೊಡುವಂತಹ ದಾನ ಯಾವುದೂ ಇಲ್ಲ. ಇಂತಹ ಸಂದೇಶವಿರುವ ಕೆಲವು ವಚನಕಾರರ ವಚನಗಳನ್ನು ನಾವು ನೋಡೋಣ. "ಹಾಡಿದೊಡೆ ಎನ್ನೊಡೆಯನ ಹಾಡುವೆ ಬೇಡಿದೊಡೆ ಎನ್ನೊಡೆಯನ ಬೇಡುವೆ ಒಡೆಯಂಗೊಡಲ ತೋರಿ ಎನ್ನ ಬಡತನವ ಭಿನ್ನೈಸುವೆ ಒಡೆಯ ಮಹಾದಾನಿ ಕೂಡಲಸಂಗಮದೇವರಿಗೆ ಸೆರಗೊಡ್ಡಿ ಬೇಡುವೆ" ---- ಬಸವಣ್ಣ "ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು ಅವು ನೀಡಿದವು ತಮ್ಮ ಲಿಂಗಕ್ಕೆಂದು ಆನು ಬೇಡಿ ಭವಿಯಾದೆನು ಅವು ನೀಡಿ ಭಕ್ತರಾದವು ಇನ್ನು ಬೇಡಿದೆನಾದಡೆ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮಾಣೆ" ---- ಅಕ್ಕಮಹಾದೇವಿ "ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಸುಳಿದು ಸೂಸುವ ಗಾಳಿ ನಿಮ್ಮ ದಾನ ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ, ರಾಮನಾಥ" ---- ಜೇಡರ ದಾಸಿಮಯ್ಯ "ಮಾಡಿದೆನೆಂಬುದು ಮನದಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗುರ ಮಾಡಿದೆನೆನ್ನದಿರಾ ಲಿಂಗಕ್ಕೆ, ನೀಡಿದೆನೆನ್ನದಿರ ಜಂಗಮಕ್ಕೆ ಮಾಡಿದ್ದು ನೀಡಿದ್ದು ಮನದಲಿ ಇಲ್ಲದಿದ್ದರೆ ಬೇಡಿದ್ದನೀವ ನಮ್ಮ ಕೂಡಲಸಂಗಮದೇವ" ---- ಬಸವಣ್ಣ "ಲಂಚವಂಚನಕ್ಕೆ ಕೈಯಾನದ ಭಾಷೆ ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ ನಾ ಕೈ ಮುಟ್ಟಿ ಎತ್ತಿದೆನಾದಡರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷೆದಲ್ಲಿಪ್ಪೆನಾಗಿ ಇಂತಲ್ಲದೆ ನಾನು ಅಳಿಮನವ ಮಾಡಿ ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ ನೀನಾಗಲೇ ಎನ್ನ ನರಕದಲಿ ಅದ್ದಿ ನೀನೆದ್ದು ಹೋಗು ಶಂಭುಜಕ್ಕೇಶ್ವರಾ" --- ಶರಣೆ ಸತ್ಯಕ್ಕ ‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಂದಿಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವ" ---- ಬಸವಣ್ಣ "ಎತ್ತು ನಿಮ್ಮ ದಾನ ಬಿತ್ತು ನಿಮ್ಮ ದಾನ ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ಹೇಳಾ ರಾಮನಾಥ" ---- ಜೇಡರ ದಾಸಿಮಯ್ಯ "ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯ ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಂಡಯ್ಯಾ" ---- ಬಸವಣ್ಣ ಸಂಪತ್ತಿನ ಗಳಿಕೆ ಮತ್ತು ಅದರ ಬಳಕೆಯನ್ನು ಕುರಿತು ಬಸವಣ್ಣ ಹೇಳಿರುವ ದಾಸೋಹದ ಪರಿಕಲ್ಪನೆಯಂತೆ ಸತ್ಯಶುದ್ದ ಕಾಯಕದಿಂದ ಗಳಿಸಿದ ಹಣವನ್ನು ಸಮಾಜದ ಸತ್ಪಾತ್ರಕ್ಕೆ ಬಳಸಬೇಕು. ಅಲ್ಲದ ಹೊರತಾದ ಯಾವುದೇ ಹಣದಿಂದ ಪಾಪಿಯ ಪಾಪದ ಸಂಚಯನವಾಗುತ್ತದೆ. ಅಂತಹ ಪಾಪಿಗಳು ಮಾತ್ರ ಪ್ರಾಯಶ್ಚಿತ್ತ ಮಾಡಿಕೊಳ್ಳಲು ದೇವರ ಮತ್ತು ಸಮಾಜ ಸೇವೆಯ ಹೆಸರಿನಲ್ಲಿ ವ್ಯಯಿಸಿ ಮತ್ತಷ್ಟು ಪಾಪವನ್ನು ಹೊಂದುತ್ತಾರೆ. ನಾಯಿಯ ಹಾಲು ಪಂಚಾಮೃತಕ್ಕೆ ಹೇಗೆ ಸಲ್ಲುವುದಿಲ್ಲವೋ ಹಾಗೆಯೇ ಪಾಪಿಯ ಹಣ ಪವಿತ್ರವಾದ ವಿನಿಯೋಗ ಎನ್ನಿಸಿಕೊಳ್ಳುವುದಿಲ್ಲ. ಸತ್ಯಶುದ್ಧ ಕಾಯಕದಿಂದ ಸಂಪಾದಿಸಿದ ಸಂಪತ್ತು ಮಾತ್ರ ಸತ್ಪಾತ್ರಕ್ಕೆ ಸಲ್ಲುವ ಮೂಲಕ ಪಾಪ ಸೂತಕದಿಂದ ನಮ್ಮನ್ನು ದೂರವಿರಿಸುತ್ತದೆ. ಬಸವಣನವರ "ಬೇಡುವವರಿಲ್ಲದೆ ನಾ ಬಡವನಾದೆನಯ್ಯ" ಹಾಗೂ ಅಂಬೇಡ್ಕರ್ ಅವರ "PAY BACK TO SOCIETY" ಎಂಬ ಆಶಯಗಳ ಕರ್ತವ್ಯ ಪಾಲಕರು ನಾವಾಗೋಣ. - ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ #call #April1st #RBI #Ambedkar #AprilFoolsDay #VaddagereNagarajaiah #fools #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಏಪ್ರಿಲ್-] ಮೂರ್ಖರ ದಿನ ಎಂದು ಕರೆಯುವವರೇ ಶತಮೂರ್ಖರು: Rule 3 BANK 0 ಸುದ್ರಿ 8 ಯರಿಯಲ್ಲಿ್ Soqa Please subscribe to Malgudi Express YouTube and Website EXPRESS ಏಪ್ರಿಲ್-] ಮೂರ್ಖರ ದಿನ ಎಂದು ಕರೆಯುವವರೇ ಶತಮೂರ್ಖರು: Rule 3 BANK 0 ಸುದ್ರಿ 8 ಯರಿಯಲ್ಲಿ್ Soqa Please subscribe to Malgudi Express YouTube and Website EXPRESS - ShareChat
#📜ಪ್ರಚಲಿತ ವಿದ್ಯಮಾನ📜 ಸಂಸದರು ಲೇಟಾಗಿ ಬಂದ್ರೆ ಸಂಬಳ ಕಟ್ ಆಗುತ್ತಾ? ಸಾಮಾಜಿಕ ಜಾಲತಾಣದ ಸುದ್ದಿಯ ಅಸಲಿಯತ್ತೇನು? ಮಾಲ್ಗುಡಿ ಫ್ಯಾಕ್ಟ್ ಚೆಕ್: "ಇನ್ಮುಂದೆ ಸಂಸದರು ಲೇಟಾಗಿ ಬಂದ್ರೆ ಸಂಬಳ ಕಟ್ ಆಗುತ್ತೆ, ಸೀಟಿನಲ್ಲಿ ಕುಳಿತರೆ ಮಾತ್ರ ಹಾಜರಾತಿ ಸಿಗುತ್ತೆ" - ಇಂತಹದೊಂದು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಾಮಾನ್ಯ ಜನರು "ನಮಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವೇ?" ಎಂದು ಪ್ರಶ್ನಿಸುತ್ತಿರುವ ಬೆನ್ನಲ್ಲೇ, ಈ ಸುದ್ದಿಯ ಸತ್ಯಾಸತ್ಯತೆಯನ್ನು 'ಮಾಲ್ಗುಡಿ ಎಕ್ಸ್‌ಪ್ರೆಸ್' ಪರಾಮರ್ಶಿಸಿದೆ. ​ವೈರಲ್ ಆಗುತ್ತಿರುವ ವಿಷಯ: ​ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಪ್ರಕಾರ: ​ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರಿಗೆ ಕಠಿಣ ನಿಯಮ ಜಾರಿ ಮಾಡಿದ್ದಾರೆ. ​ಸಂಸದರು ತಡವಾಗಿ ಬಂದರೆ ಅವರ ಸಂಬಳ ಕಡಿತಗೊಳಿಸಲಾಗುತ್ತದೆ. ​ಸಂಸತ್ತಿನ ಒಳಗೆ ತಮ್ಮ ನಿಗದಿತ ಸೀಟಿನಲ್ಲಿ ಕುಳಿತಾಗ ಮಾತ್ರ ಹಾಜರಾತಿ ದಾಖಲಾಗುತ್ತದೆ. ಮಾಲ್ಗುಡಿ ಫ್ಯಾಕ್ಟ್ ಚೆಕ್ (Fact Check) ​1. ಸೀಟಿನಲ್ಲಿ ಕುಳಿತರೆ ಮಾತ್ರ ಹಾಜರಾತಿ: (ನಿಜ) ಹೌದು, ಇದು ಸತ್ಯ. 2026ರ ಬಜೆಟ್ ಅಧಿವೇಶನದಿಂದ ಜಾರಿಗೆ ಬರುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೊಸ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಘೋಷಿಸಿದ್ದಾರೆ. ಈ ಹಿಂದೆ ಸಂಸದರು ಸಂಸತ್ತಿನ ಲಾಬಿಯಲ್ಲಿರುವ ರಿಜಿಸ್ಟರ್‌ನಲ್ಲಿ ಸಹಿ ಮಾಡಿ ಹಾಜರಾತಿ ಹಾಕಬಹುದಿತ್ತು. ಆದರೆ ಈಗ, ಪ್ರತಿಯೊಬ್ಬ ಸಂಸದನ ಸೀಟಿನಲ್ಲಿ ಅಳವಡಿಸಲಾಗಿರುವ ಬಯೋಮೆಟ್ರಿಕ್ ಕನ್ಸೋಲ್ ಮೂಲಕ ಮಾತ್ರ ಹಾಜರಾತಿ ದಾಖಲಿಸಬೇಕು. ಅಂದರೆ, ಸದನದ ಒಳಗೆ ಹೋಗಿ ಸೀಟಿನಲ್ಲಿ ಕುಳಿತರೆ ಮಾತ್ರ ಅವರು ಹಾಜರಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ​2.ತಡವಾಗಿ ಬಂದರೆ ಸಂಬಳ ಕಡಿತ: (ದಾರಿತಪ್ಪಿಸುವ ಮಾಹಿತಿ) ಸಂಸದರು ತಡವಾಗಿ ಬಂದ ತಕ್ಷಣ ಅವರ 'ಮೂಲ ವೇತನ' (Basic Salary) ಕಡಿತಗೊಳಿಸುವ ಯಾವುದೇ ಕಾನೂನು ಜಾರಿಯಾಗಿಲ್ಲ. ಆದರೆ, ಸಂಸದರಿಗೆ ಪ್ರತಿ ದಿನದ ಅಧಿವೇಶನಕ್ಕೆ ಹಾಜರಾಗಲು ಸುಮಾರು 2,500 ರೂ. 'ದೈನಂದಿನ ಭತ್ಯೆ' (Daily Allowance) ಸಿಗುತ್ತದೆ. ಹೊಸ ನಿಯಮದಂತೆ ಸೀಟಿನಲ್ಲಿ ಕುಳಿತು ಹಾಜರಾತಿ ದಾಖಲಿಸದಿದ್ದರೆ, ಅವರಿಗೆ ಆ ದಿನದ ಭತ್ಯೆ ಸಿಗುವುದಿಲ್ಲ. ಇದನ್ನು "ಸಂಬಳ ಕಡಿತ" ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ​3. ಸಂಬಳ ಕಡಿತದ ಹಳೆಯ ಕತೆ: ಈ ಹಿಂದೆ 2020ರಲ್ಲಿ ಕೋವಿಡ್ ನಿಧಿಗಾಗಿ ಸಂಸದರ ಸಂಬಳದಲ್ಲಿ 30% ಕಡಿತ ಮಾಡಲಾಗಿತ್ತು. ಅದನ್ನು ಹೊರತುಪಡಿಸಿ, ಶಿಸ್ತಿನ ಕ್ರಮವಾಗಿ ಸಂಬಳ ಕಡಿತ ಮಾಡುವ ನಿಯಮ ಸದ್ಯಕ್ಕಿಲ್ಲ. ​ಅಂತಿಮ ತೀರ್ಪು (Verdict): ​ಸಂಸದರು ಕಲಾಪದಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಲು ಹಾಜರಾತಿ ನಿಯಮ ಬದಲಿಸಿರುವುದು ಸತ್ಯ. ಆದರೆ, ತಡವಾಗಿ ಬಂದವರ ಸಂಬಳ ಕಡಿತವಾಗುತ್ತದೆ ಎನ್ನುವುದು ದಾರಿತಪ್ಪಿಸುವ ಸುದ್ದಿಯಾಗಿದೆ. ಕೇವಲ ಹಾಜರಾತಿ ಇಲ್ಲದ ದಿನದ ಭತ್ಯೆ ಮಾತ್ರ ಅವರಿಗೆ ಸಿಗುವುದಿಲ್ಲ. #MP #get #salaries #cut #arrive #late #factcheck #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಸಂಸದರು ಲೇಟಾಗಿ ಬಂದ್ರೆ ಸಂಬಳ ಕಟ್ ಆಗುತ್ತಾ? ಸಾಮಾಜಿಕ ಜಾಲತಾಣದ ಸುದ್ದಿಯ ಅಸಲಿಯತ್ತೇನು? K E ಣದ ಹಕ್ಕು F A అన edia Claimy (Actual' C T 0=6~0 ಸೀಟನಲ್ಲಿ ಕುಳಿತು ಬಯೋಮೆಟ್ರಕ್ ಹಾಜರಾತಿ FAcl 7 र 03303 பஙனப ~3 ಸುವ' ನಿಖರ' మెది రియేల్ల . S9o)4 HTTPS:IIMALGUDIEXPRESS.CO.IN/ EXPRESS ಸಂಸದರು ಲೇಟಾಗಿ ಬಂದ್ರೆ ಸಂಬಳ ಕಟ್ ಆಗುತ್ತಾ? ಸಾಮಾಜಿಕ ಜಾಲತಾಣದ ಸುದ್ದಿಯ ಅಸಲಿಯತ್ತೇನು? K E ಣದ ಹಕ್ಕು F A అన edia Claimy (Actual' C T 0=6~0 ಸೀಟನಲ್ಲಿ ಕುಳಿತು ಬಯೋಮೆಟ್ರಕ್ ಹಾಜರಾತಿ FAcl 7 र 03303 பஙனப ~3 ಸುವ' ನಿಖರ' మెది రియేల్ల . S9o)4 HTTPS:IIMALGUDIEXPRESS.CO.IN/ EXPRESS - ShareChat
#📜ಪ್ರಚಲಿತ ವಿದ್ಯಮಾನ📜 ಕಾಂಗ್ರೆಸ್ ಪದ್ಧತಿಯಂತೆ ಉಮೇಶ್ ಮೇಟಿ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ: ಸಿದ್ದರಾಮಯ್ಯ ಬಾಗಲಕೋಟೆ: ಹೆಚ್.ವೈ.ಮೇಟಿ ಅವರ ನಾಲ್ವರೂ ಮಕ್ಕಳು ಟಿಕೆಟ್ ಕೇಳಿದ್ದರು. ಆದರೆ, ಯಾರಿಗೇ ಕೊಟ್ಟರೂ ಒಟ್ಟಿಗೆ ಸೇರಿ ಕೆಲಸ ಮಾಡುವ ಭರವಸೆ ನೀಡಿದ್ದರು. ಕಾಂಗ್ರೆಸ್ ಪದ್ಧತಿಯಂತೆ ಉಮೇಶ್ ಮೇಟಿ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. ಆದ್ದರಿಂದ ಇವರನ್ನು ಬೆಂಬಲಿಸಿ, ಗೆಲ್ಲಿಸಿ ಕಳುಹಿಸಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು. ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಆಲಮಟ್ಟಿ ವಿಚಾರದಲ್ಲಿ ಜನವಿರೋಧಿ ನಿಲುವು ಹೊಂದಿದೆ. ಹದಿಮೂರು ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಲಿಲ್ಲ. ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗಲೂ ಭೂ ಪರಿಹಾರ ಘೋಷಿಸಿದರೂ ಹಣ ನೀಡಲಿಲ್ಲ ಎಂದು ದೂರಿದರು. ನಾನು ಮುಖ್ಯಮಂತ್ರಿಯಾಗಿ ಎಕರೆ ನೀರಾವರಿ ಜಮೀನಿಗೆ 40 ಲಕ್ಷ, ಒಣ ಭೂಮಿಗೆ 30 ಲಕ್ಷ ರೂ. ಪರಿಹಾರ ಕೊಡುವ ತೀರ್ಮಾನ ಮಾಡಿ ಕೆಲಸ ಪ್ರಾರಂಭ ಮಾಡಿದ್ದು, ಮೂರು ವರ್ಷದಲ್ಲಿ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದರು. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಎಚ್.ವೈ.ಮೇಟಿಯವರ ಒತ್ತಾಯದಂತೆ ಬಾಗಲಕೋಟೆಗೆ ಮೆಡಿಕಲ್ ಕಾಲೇಜಿನ ಶಂಕುಸ್ಥಾಪನೆ ಮಾಡಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮತ್ತು ಟ್ರಾಮಾ ಸೆಂಟರನ್ನೂ ನಾವು ಮಾಡುತ್ತೇವೆ. ನುಡಿದಂತೆ ಕೆಲಸ ಮಾಡುವ ಸರ್ಕಾರ ನಮ್ಮದು ಮಾತ್ರ ಎಂದರು. ಬಿಜೆಪಿಯವರು ನುಡಿದಂತೆ ನಡೆಯಲಿಲ್ಲ. ಒಂದೇ ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಲಿಲ್ಲ. ಕೋವಿಡ್ ನಿಂದ ಬಳಲಿದ್ದ ರಾಜ್ಯದ ಜನತೆಗೆ ಅನುಕೂಲ ಮಾಡಿಕೊಡಲು ಐದು ಗ್ಯಾರಂಟಿಗಳನ್ನು ತಂದು ಜನರಿಗೆ ನೆರವಾಗಿದ್ದು ನಮ್ಮ ಸರ್ಕಾರ. ಕೇಂದ್ರದ ಬಿಜೆಪಿ ಸರ್ಕಾರ ಕಬ್ಬು ಬೆಳೆಗೆ ರೈತರ ಬೇಡಿಕೆಯಷ್ಟು ಬೆಂಬಲ ಬೆಲೆ ನೀಡದಿದ್ದಾಗ ನಾನು ರೈತ ಸಂಘಟನೆಗಳು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ 200 ರೂ. ಹೆಚ್ಚು ಮಾಡಿದೆ ಎಂದರು. ಎಚ್.ವೈ.ಮೇಟಿಯವರು ಜನರ ಕೈಗೆ ಸಿಗುತ್ತಿದ್ದರು. ಅಹಿಂದ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದರು. ಆದರೆ ಅಧಿಕಾರದಲ್ಲಿದ್ದಾಗ ಜನರಿಗೆ ಸ್ಪಂದಿಸದೆ, ಈಗ ನಮ್ಮ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಮತ ಕೇಳುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು. ನಾವು ಪ್ರತೀ ವರ್ಷ 52 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಜೇಬಿಗೆ ಹಾಕುತ್ತಲೇ, ಅಭಿವೃದ್ಧಿ ಕೆಲಸವನ್ನೂ ಮಾಡುತ್ತಿದ್ದೇವೆ. ಬಿಜೆಪಿಯವರು ಕಳ್ಳೆತ್ತುಗಳು. ಗೇಯುವ ಎತ್ತಿಗೆ ತಾನೆ ಮೇವು ಹಾಕೋದು, ಹಾಗೆಯೇ ಕೆಲಸ ಮಾಡಿದ ನಮಗೆ ಕೂಲಿ ಕೊಡಿ. ಎಚ್.ವೈ.ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಮೇಶ್ ಮೇಟಿ ಅವರನ್ನು ಗೆಲ್ಲಿಸಲೇಬೇಕು ಎಂದರು. #given #ticket #UmeshMeti #Congress #tradition #Siddaramaiah #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಏಪ್ರಿಲ್ 1 ರಿಂದ ಸ್ವಯಂ ಗಣತಿ ಪ್ರಕ್ರಿಯೆ ಆರಂಭ ಭಾರತ ಜನಗಣತಿ-2027ಗೆ ಸಹಕರಿಸಲು ಜಿಲ್ಲಾಧಿಕಾರಿ ಮನವಿ ಚಿತ್ರದುರ್ಗ: ಭಾರತ ಜನಗಣತಿ-2027ರ ಅಂಗವಾಗಿ ಸಾರ್ವಜನಿಕರು ತಾವಾಗಿಯೇ ಮಾಹಿತಿ ನೀಡುವ “ಸ್ವಯಂ ಗಣತಿ” ಪ್ರಕ್ರಿಯೆಯು 2026ರ ಏಪ್ರಿಲ್ 1 ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಸಾರ್ವಜನಿಕರು 2026ರ ಏಪ್ರಿಲ್ 01 ರಿಂದ 15 ರವರೆಗೆ ಇಲಾಖೆಯ ವೆಬ್‍ಸೈಟ್ www.se.census.gov.in ಗೆ ಭೇಟಿ ನೀಡಿ ತಮ್ಮ ಕುಟುಂಬದ ವಿವರಗಳನ್ನು ಆನ್‍ಲೈನ್ ಪೋರ್ಟಲ್ ಮೂಲಕ ಭರ್ತಿ ಮಾಡಬಹುದು. ಮಾಹಿತಿ ಸಲ್ಲಿಸಿದ ನಂತರ ಲಭ್ಯವಾಗುವ ರೆಫರೆನ್ಸ್ ಐಡಿ (Reference ID) ಅನ್ನು ಸಾರ್ವಜನಿಕರು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಬಳಿಕ 2026ರ ಏಪ್ರಿಲ್ 16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಯ ಸಮಯದಲ್ಲಿ, ಮೌಲ್ಯೀಕರಣಕ್ಕಾಗಿ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಈ ರೆಫರೆನ್ಸ್ ಐಡಿ ಅನ್ನು ನೀಡಿ ಗಣತಿ ಕಾರ್ಯದಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮನವಿ ಮಾಡಿದ್ದಾರೆ. #Self #enumeration #process #begins #April #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಧಾರವಾಡ ಜಿಲ್ಲೆಯಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಧಾರವಾಡ: ಭಾರತ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾಧಿಕಾರಿಗಳವರು ಪತ್ರದಲ್ಲಿ ನೀಡಿದ ನಿರ್ದೇಶನದನ್ವಯ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಜರುಗಿಸುವ ಕುರಿತು ಪೂರ್ವ ಸಿದ್ಧತೆಗಳ ಅಂಗವಾಗಿ 2025 ರ ಮತದಾರರ ಯಾದಿಯಲ್ಲಿ ನೋಂದಣಿಯಾದ ಮತದಾರರನ್ನು 2002 ರ ಮತದಾರರ ಪಟ್ಟಿಗೆ ತಾಳೆ ಮಾಡುವ (Mapping, Progeny and Mapping including Progeny) ಕಾರ್ಯವನ್ನು ಕೈಗೊಳ್ಳಲಾಗಿರುತ್ತದೆ. ಪ್ರಸ್ತುತ ಜಿಲ್ಲೆಯ 69-ನವಲಗುಂದ, 70-ಕುಂದಗೋಳ, 71-ಧಾರವಾಡ, 72-ಹುಬ್ಬಳ್ಳಿ-ಧಾರವಾಡ (ಪೂರ್ವ), 73-ಹುಬ್ಬಳ್ಳಿ-ಧಾರವಾಡ (ಕೇಂದ್ರ), 74-ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಮತ್ತು 75-ಕಲಘಟಗಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಸನ್ 2025 ನೇ ಸಾಲಿನ ಮತದಾರರ ಪಟ್ಟಿಯಲ್ಲಿ 39 ಹಾಗೂ 39 ವರ್ಷಕ್ಕಿಂತ ಅಧಿಕ ವಯಸ್ಸಿನ ಮತದಾರರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು (ಉದಾ: ಮಗ, ಮಗಳು ಹಾಗೂ ಮೊಮ್ಮಕ್ಕಳು) ಸನ್ 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್, ಪ್ರೊಜಿನಿ ಮತ್ತು ಮ್ಯಾಪಿಂಗ್ ಸೇರಿದಂತೆ ಪ್ರೊಜಿನಿ (Mapping, Progeny and Mapping including Progeny) ಮಾಡುವ ಕಾರ್ಯವು ಪ್ರಗತಿಯಲ್ಲಿ ಇರುತ್ತದೆ. ಪ್ರಸ್ತುತ ಮಾರ್ಚ 24, 2026 ರವರೆಗೆ 69-ನವಲಗುಂದ ಶೇ. 92.98 ರಷ್ಟು, 70-ಕುಂದಗೋಳ ಶೇ. 87.57 ರಷ್ಟು, 71-ಧಾರವಾಡ ಶೇ. 77.57, 72-ಹುಬ್ಬಳ್ಳಿ-ಧಾರವಾಡ (ಪೂರ್ವ) ಶೇ. 63.31 ರಷ್ಟು, 73-ಹುಬ್ಬಳ್ಳಿ-ಧಾರವಾಡ (ಕೇಂದ್ರ) ಶೇ. 63.59 ರಷ್ಟು, 74-ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಶೇ. 62.11 ರಷ್ಟು, 75-ಕಲಘಟಗಿ ಶೇ. 90.08 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. 2025 ನೇ ಸಾಲಿನ ಮತದಾರರ ಪಟ್ಟಿಯಲ್ಲಿ 39 ಹಾಗೂ 39 ವರ್ಷಕ್ಕಿಂತ ಅಧಿಕ ವಯಸ್ಸಿನ ಮತದಾರರು ಹಾಗೂ ಅವರ ಕುಟುಂಬ ಸದಸ್ಯರು (ಉದಾ: ಮಗ, ಮಗಳು ಹಾಗೂ ಮೊಮ್ಮಕ್ಕಳು) ಸನ್ 2002ರ ಮತದಾರರ ಪಟ್ಟಿಗೆ Mapping, Progeny and Mapping including Progeny ಅಂತಹ ಮತದಾರರಿಂದ ಪೂರಕ ದಾಖಲೆಗಳನ್ನು ಸಂಗ್ರಹಿಸದೇ ನೇರವಾಗಿ ಹೊಸ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಬಹುದಾಗಿದೆ. ತಪ್ಪಿದಲ್ಲಿ ಸಾರ್ವಜನಿಕರು ವಿಶೇಷ ಸಮಗ್ರ ಪರಿಷ್ಕರಣೆಯ ಸಮಯದಲ್ಲಿ, ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಪೂರಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದ ಕಾರಣ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ Mapping, Progeny and Mapping including Progeny ಕಾರ್ಯದಲ್ಲಿ ಶೇ.95 ಕ್ಕಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸುವುದು ಅತೀ ಅವಶ್ಯವಿರುತ್ತದೆ. ಕಾರಣ, ಜಿಲ್ಲೆಯ ಸಮಸ್ತ ನಾಗರಿಕರು, ಸಾರ್ವಜನಿಕರು ಮತ್ತು ಮತದಾರರು, ತಮ್ಮ ಮನೆಗಳಿಗೆ ಭೇಟಿ ನೀಡುವ ಮತಗಟ್ಟೆ ಮಟ್ಟದ ಅಧಿಕಾರಿ ಹಾಗೂ ಮೇಲ್ವಿಚಾರಕರುಗಳಿಗೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಸೂಕ್ತ ಮಾಹಿತಿಯನ್ನು ನೀಡಿ ಸಹಕರಿಸಬೇಕು. ಅಲ್ಲದೇ, ತಮ್ಮ ಮತಗಟ್ಟೆಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳ ಹೆಸರು, ದೂರವಾಣಿ ಸಂಖ್ಯೆಯ ವಿವರಗಳನ್ನು ಚುನಾವಣಾ ಆಯೋಗದ ಅಧಿಕೃತ ಜಾಲತಾಣ https://ceo.karnataka.gov.in/en ನೇದ್ದರಲ್ಲಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣಾ ಶಿರಸ್ತೇದಾರ ಸುನೀಲ ಚವಡಣ್ಣನವರ ಅವರ ದೂರವಾಣಿ ಸಂಖ್ಯೆ: 95919 83598 ನೇದ್ದಕ್ಕೆ ಕೆಲಸದ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 01 ಗಂಟೆಯವರೆಗೆ ಸಂಪರ್ಕಿಸಬಹುದು. #SIR #voters #Dharwad #district #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ವಿಜಯೇಂದ್ರ ಅವರೇ, ನಿಮ್ಮ ಹೇಳಿಕೆ ಆತ್ಮಘಾತಕತನದಿಂದ ಕೂಡಿದೆ: ಟಿ ಎ ನಾರಾಯಣ ಗೌಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರೇ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇದ್ದ ಹೊರೆಯನ್ನು ತೆಗೆದು, ಮೂರನೇ ಭಾಷೆಗೆ ಗ್ರೇಡಿಂಗ್ ನೀಡುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ನಿಮ್ಮ ಹೇಳಿಕೆ ಗಮನಿಸಿದೆ. ನಿಮ್ಮ ಒಟ್ಟು ಹೇಳಿಕೆಯು ಆತ್ಮಘಾತಕತನದಿಂದ ಕೂಡಿದೆ, ಕನ್ನಡದ ಮಕ್ಕಳ ಭವಿಷ್ಯದ ವಿರುದ್ಧವಾಗಿದೆ, ಕನ್ನಡಿಗರ ಆಶೋತ್ತರಗಳನ್ನು ಹೀಯಾಳಿಸುವಂತೆ ಇದೆ. ಇಂಥ ಹೇಳಿಕೆಯನ್ನು ನಿಮ್ಮಿಂದ ನಾನು ನಿರೀಕ್ಷಿಸಿರಲಿಲ್ಲ. 2023-2024ರ SSLC ಪರೀಕ್ಷೆಯಲ್ಲಿ 90,000ಕ್ಕೂ ಹೆಚ್ಚು ಕನ್ನಡದ ಮಕ್ಕಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದರು. 2024-25ರಲ್ಲಿ ಹಿಂದಿಯೊಂದರಲ್ಲಿ 1,42,400 ಮಕ್ಕಳು ಫೇಲ್ ಆಗಿದ್ದರು. ಪ್ರತಿ ವರ್ಷ ನಮ್ಮ ಕನ್ನಡದ ಮಕ್ಕಳು ತಮ್ಮದಲ್ಲದ ಹಿಂದಿಯ ಕಡ್ಡಾಯ ಕಲಿಕೆಯಿಂದ ಒಂದು ವರ್ಷ ಕಳೆದುಕೊಳ್ಳುತ್ತಿದ್ದರು. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ? ನಮ್ಮ ಕನ್ನಡದ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡಲು ನಮಗೇನು ಹಕ್ಕಿದೆ? ಯಾಕೆ ಅವರ ಮೇಲೆ ಇಂಥ ದೌರ್ಜನ್ಯ? ಯಾವತ್ತಾದರೂ ಯೋಚಿಸಿದ್ದೀರಾ? ದಶಕಗಳಿಂದ ಕನ್ನಡದ ಮಕ್ಕಳು ಈ ದೌರ್ಜನ್ಯ ಅನುಭವಿಸಿದ್ದಾರೆ. ಇನ್ನೂ ಎಷ್ಟು ಕಾಲ ಈ ಮಾನಸಿಕ ಅತ್ಯಾಚಾರವನ್ನು ಅನುಭವಿಸಬೇಕು? ಕಳೆದ ವರ್ಷ ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ತೃತೀಯ ಭಾಷೆಯನ್ನು ಕೈಬಿಟ್ಟು ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಲಾಯಿತು? ಯಾಕೆ ಅಲ್ಲಿ ಹಿಂದಿಯನ್ನು ತೆಗೆಯಲಾಯಿತು ಎಂಬುದನ್ನು ಅಲ್ಲಿನ ನಿಮ್ಮ ಮುಖ್ಯಮಂತ್ರಿಗಳನ್ನು ಒಮ್ಮೆ ಕೇಳಿ. ಆಗ ನೀವು ಯಾಕೆ ಮಾತನಾಡಲಿಲ್ಲ? ದೇಶದಲ್ಲೇ ಮಾದರಿ ತ್ರಿಭಾಷಾ ಶಿಕ್ಷಣ ನೀತಿಯನ್ನು ಯಾಕೆ ತೆಗೆದಿರಿ ಎಂದು ಕೇಳಬೇಕಿತ್ತಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ನೀತಿ ಸರಿಯೇ? ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ ಎಂದು ಹೇಳಿದ್ದೀರಿ. ಇದು ಯಾವ ಬಗ್ಗೆಯ ಚಿಂತನೆ? ಕನ್ನಡವನ್ನು, ತಮಿಳನ್ನು, ತೆಲುಗನ್ನು ಅಥವಾ ಇನ್ನುಳಿದ ಭಾಷೆಗಳನ್ನು ನೀವು ಯಾಕೆ ರಾಷ್ಟ್ರೀಯ ದೃಷ್ಟಿಕೋನದಲ್ಲಿ ನೋಡುವುದಿಲ್ಲ. ನಮ್ಮ ಭಾಷೆಗಳೆಲ್ಲ ಬೇರೆ ದೇಶಗಳಿಂದ ಬಂದವುಗಳಾ? ಅಥವಾ ಮೂರನೇ ದರ್ಜೆ ಭಾಷೆಗಳಾ? ಹಿಂದಿಯೊಂದೇ ರಾಷ್ಟೀಯವೇ? ಬೇರೆಯ ಭಾಷೆಗಳೆಲ್ಲ ಏನು ಹಾಗಾದರೆ? ಈ ಬಾಲಿಷ, ಕುಯುಕ್ತಿಯ ಚಿಂತನೆಗಳನ್ನು ನೀವೂ ಯಾಕೆ ಪ್ರತಿಪಾದಿಸುತ್ತಿದ್ದೀರಿ? ಒಂದು ಕೆಲಸ ಮಾಡಿ. ಉತ್ತರ ಪ್ರದೇಶ, ಬಿಹಾರ ಇನ್ನಿತ್ಯಾದಿ ಹಿಂದಿ ರಾಜ್ಯಗಳಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳಿವೆ. ಅಲ್ಲಿ ಕೇವಲ ಎರಡು ಭಾಷೆಗಳನ್ನು ಕಲಿಸಲಾಗುತ್ತಿದೆ. ನೀವು ಅಲ್ಲಿ ಮೂರನೇ ಭಾಷೆಯನ್ನಾಗಿ ಕನ್ನಡವನ್ನು ಕಡ್ಡಾಯಗೊಳಿಸಿ. ನೂರು ಅಂಕ ನಿಗದಿಪಡಿಸಿ. ಅಲ್ಲಿನ ಮಕ್ಕಳು ಕನ್ನಡ ಓದಿ, ಕನಿಷ್ಠ 35 ಅಂಕ ಪಡೆದು ಪಾಸಾಗಲಿ. ಇದು ನಿಮಗೆ, ನಿಮ್ಮ ಪಕ್ಷಕ್ಕೆ ನೇರ ಸವಾಲು. ಇದು ಸಾಧ್ಯವೇ ನಿಮ್ಮಿಂದ? ಸಾಧ್ಯವಿಲ್ಲವಾದರೆ ಕರ್ನಾಟಕದ ಮಕ್ಕಳು ಮೂರನೇ ಭಾಷೆ ಹೇರಿಸಿಕೊಂಡು ಫೇಲಾಗಿ ಭವಿಷ್ಯ ಹಾಳುಮಾಡಿಕೊಳ್ಳಲಿ ಎಂದು ದಯವಿಟ್ಟು ಬೋಧನೆ ಮಾಡಬೇಡಿ. ಕನ್ನಡಿಗರು ಈಗ ಎಚ್ಚೆತ್ತುಕೊಂಡಿದ್ದಾರೆ. ಇದು ಹೊಸ ಕರ್ನಾಟಕ, ನಾವು ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ನಾವು ಯಾರ ಗುಲಾಮರೂ ಅಲ್ಲ. ʻʻಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದುʼʼ ಎಂದು ಕಾಳಜಿ ತೋರಿದ್ದೀರಿ. ಇದು ಸರಿಯಾದ ಮಾತು. ಇದಕ್ಕೆ ಸರಿಯಾದ ಉತ್ತರವೂ ನಿಮ್ಮ ಬಳಿಯೇ ಇರುತ್ತದೆ. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಹೋಗುವವರಿಗೆ ಹಿಂದಿ ಗೊತ್ತಿರಲೇಬೇಕು ಎಂಬ ವಾತಾವರಣವನ್ನು ಈ ಕೂಡಲೇ ಬದಲಾಯಿಸಿ. ಕೇಂದ್ರ ಸರ್ಕಾರವನ್ನು ಹಿಂದಿ ಭಾಷಿಕರಿಗೆ ನಾವು ಬರೆದುಕೊಟ್ಟಿಲ್ಲ. ಕೇಂದ್ರ ಸರ್ಕಾರವೆಂದರೆ ಅದು ಎಲ್ಲರ ಸರ್ಕಾರ, ಕನ್ನಡಿಗರ, ಮಲೆಯಾಳಿಗಳ, ಅಸ್ಸಾಮಿಗಳ, ಬಂಗಾಳಿಗಳ ಹೀಗೆ ಎಲ್ಲರ ಸರ್ಕಾರ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಮಾಡಿ. ಆಗ ನಿಮ್ಮ ಕಾಳಜಿಗೆ ಸರಿಯಾದ ಉತ್ತರ ಸಿಗುತ್ತದೆ. ನಿಮ್ಮ ತಂದೆಯವರಾದ ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಹಲವು ಬಾರಿ ಮುಖ್ಯಮಂತ್ರಿಗಳಾಗಿದ್ದಾಗ ಕನ್ನಡದ ವಿಷಯಕ್ಕೆ ಬಂದಾಗ ಯಾವತ್ತೂ ರಾಜಿ ಆದವರಲ್ಲ. ನಿಮ್ಮದೇ ಪಕ್ಷದವರು ಕನ್ನಡ ಬಾವುಟ ಹಾರಿಸಬಾರದು ಎಂದು ಆದೇಶ ಹೊರಡಿಸಿದಾಗಲೂ ರಾಜ್ಯೋತ್ಸವದಂದು ಕಂಠೀರವ ಸ್ಟೇಡಿಯಂನಲ್ಲಿ ಕನ್ನಡ ಬಾವುಟ ಹಾರಿಸಿದವರು ಅವರು. ನೀವು ಅವರ ರಾಜಕೀಯ ಪುಟಗಳಿಂದ ಈ ಸ್ವಾಭಿಮಾನದ ಪಾಠವನ್ನು ಕಲಿತಹಾಗೆ ಕಾಣುತ್ತಿಲ್ಲ. ದಯವಿಟ್ಟು ನಿಮ್ಮನ್ನು ತಪ್ಪು ದಾರಿಗೆ ಎಳೆಯುತ್ತಿರುವವರಿಗೆ ಬುದ್ಧಿಹೇಳಿ, ಕನ್ನಡ ಪ್ರೇಮಿಗಳಾಗಿ. ನಾವೆಲ್ಲರೂ ನಿಮ್ಮನ್ನು ಗೌರವಿಸುತ್ತೇವೆ. ಆ ಗೌರವವನ್ನು ನೀವೇ ಕಳೆದುಕೊಳ್ಳಬೇಡಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿನಿ ಹಾಲಿನ ವಿಷಯವು ಯಾವ ಪ್ರಮಾಣದಲ್ಲಿ ನಿಮ್ಮ ಪಕ್ಷಕ್ಕೆ ಘಾಸಿ ಮಾಡಿತು ಎಂಬುದನ್ನು ನೀವು ಮರೆತಿಲ್ಲ ಎಂಬುದನ್ನು ಭಾವಿಸುತ್ತೇನೆ. ನಾವಂತೂ ಹಿಂದಿಹೇರಿಕೆ ಪರವಾಗಿರುವವರನ್ನು ನಾಡದ್ರೋಹಿಗಳು ಎಂದು ತೀರ್ಮಾನಿಸಿದ್ದೇವೆ. ನೀವು ನಾಡದ್ರೋಹಿಗಳಾಗಬೇಡಿ. ನಿಮ್ಮ ಮೇಲಿನ ಪ್ರೀತಿಯಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ. - ಟಿ ಎ ನಾರಾಯಣ ಗೌಡ, ಕರವೇ ರಾಜ್ಯಾಧ್ಯಕ್ಷ #Vijayendra #statement #selfdefeating #TANarayanaGowda #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ: ವಿಜಯೇಂದ್ರ ಕಳೆದ ಹಲವು ದಶಕಗಳಿಂದ ದೇಶದಲ್ಲೇ ಮಾದರಿ ಶಿಕ್ಷಣದಲ್ಲಿ ತ್ರಿಭಾಷಾ ನೀತಿ ಹೊಂದಿರುವ ಕರ್ನಾಟಕದಲ್ಲಿ ಯಾವುದೇ ಪೂರ್ವಾಪರ ಚರ್ಚೆ, ಶಿಕ್ಷಣ ತಜ್ಞರ ಸಲಹೆ, ಪ್ರತಿಪಕ್ಷಗಳ ನಿಲುವು ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕಾಏಕಿ ಹಿಂದಿ ಭಾಷೆ ಕೈ ಬಿಡುವ ನಿಲುವು ತೆಗೆದುಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಅದರಲ್ಲೂ SSLC ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಹಠಾತ್ ನಿಲುವು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ನಾವು ಕನ್ನಡ ಭಾಷೆಯಲ್ಲಿ ಕಲಿಕೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಕನ್ನಡ ನಮ್ಮ ಮಾತೃಭಾಷೆ. ಕನ್ನಡವು ನಮ್ಮ ಬೋಧನಾ ಭಾಷೆಯಾಗಿ ಜಾಗತಿಕ ದೃಷ್ಟಿಕೋನದಿಂದ ಇಂಗ್ಲಿಷ್ ಕಲಿಕೆಗೂ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಕನ್ನಡಿಗರು ದೇಶದ ಅನೇಕ ರಾಜ್ಯಗಳಿಗೆ ಉದ್ಯೋಗ ಅರಸಿ ಹೋದಾಗ ಕನಿಷ್ಠಮಟ್ಟದ ಹಿಂದಿ ಭಾಷೆಯ ಅರಿವು ಇರಬೇಕಾಗುತ್ತದೆ. ಕೇಂದ್ರ ಸರಕಾರದ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಕರ್ನಾಟಕದ ಯುವಸಮೂಹವು ರಾಷ್ಟ್ರಮಟ್ಟದಲ್ಲಿ ಹಿಂದೆ ಬೀಳಬಾರದು ಎಂಬ ಕಾಳಜಿ ನಮ್ಮದು. ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿರುವ ತ್ರಿಭಾಷಾ ಸೂತ್ರವೂ ಕನ್ನಡವನ್ನು ಅಸ್ಮಿತೆಯಾಗಿ, ಇಂಗ್ಲಿಷ್‌ನ್ನು ಸಂವಹನ ಭಾಷೆಯಾಗಿ ಹಾಗೂ ಹಿಂದಿಯನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಆದಾಗ್ಯೂ ಹಿಂದಿ ಭಾಷೆಯನ್ನು ಕೈಬಿಡುವುದಾದರೆ ಇದರ ಬಗೆಗೆ ಭಾಷಾ ತಜ್ಞರು, ಶಿಕ್ಷಣ ತಜ್ಞರು, ಎಲ್ಲ ಭಾಷೆಯ ಸಾಹಿತಿಗಳು ಸೇರಿದಂತೆ ಸಾರ್ವಜನಿಕವಾಗಿ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದೆ. ಕೇವಲ ರಾಜಕೀಯ ವಿರೋಧಕ್ಕಾಗಿ ಕೇಂದ್ರ ಸರಕಾರದ ಮೇಲಿನ ದ್ವೇಷಕ್ಕಾಗಿ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಸರಕಾರದ ತೀರ್ಮಾನ ವಿವೇಕ ರಹಿತ ಹಾಗೂ ಆಘಾತಕಾರಿ ಆದುದು. - ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ #Govt #decision #gamble #childrens #future #unwise #Vijayendra #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ದ್ವಿಭಾಷಾ ಶಿಕ್ಷಣ ನೀತಿಯ ಮೊದಲ ಹೆಜ್ಜೆಯಾಗಿ ಹಿಂದಿಗೆ ಗ್ರೇಡ್‌ ನೀಡುವ ವ್ಯವಸ್ಥೆ ಜಾರಿ: ಟಿ ಎ ನಾರಾಯಣ ಗೌಡ ಕರ್ನಾಟಕದ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶದಲ್ಲಿ ಹಿಂದಿ ವಿಷಯದ ಅಂಕಗಳನ್ನು ಒಟ್ಟು ಅಂಕಗಳ ಪಟ್ಟಿಗೆ ಪರಿಗಣಿಸಲಾಗುವುದಿಲ್ಲಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ) ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸದೆ, ಕೇವಲ ಗ್ರೇಡ್ ನೀಡಲಾಗುತ್ತದೆ. ಇದರಿಂದ ಒಟ್ಟು ಅಂಕಗಳು 625 ರಿಂದ 525ಕ್ಕೆ ಇಳಿಕೆಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಕಳೆದ 27 ವರ್ಷದಿಂದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕೆಂದು ಸತತ ಚಳವಳಿ ನಡೆಸುತ್ತ ಬಂದಿದೆ. ದ್ವಿಭಾಷಾ ಶಿಕ್ಷಣ ನೀತಿಯ ಮೊದಲ ಹೆಜ್ಜೆಯಾಗಿ ರಾಜ್ಯ ಸರ್ಕಾರ ಮೂರನೇ ಭಾಷೆ ಹಿಂದಿಗೆ ಗ್ರೇಡ್‌ ನೀಡುವ ವ್ಯವಸ್ಥೆ ಜಾರಿಗೊಳಿಸುತ್ತಿದೆ. ಪ್ರತಿವರ್ಷ ರಾಜ್ಯ ಪಠ್ಯಕ್ರಮದಲ್ಲಿ ಓದುವ ವಿದ್ಯಾರ್ಥಿಗಳು ಕೇಂದ್ರ ಪಠ್ಯಕ್ರಮಗಳಿಗಿಂತ ಹೆಚ್ಚುವರಿಯಾಗಿ ನೂರು ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗಿತ್ತು. ಇದರಿಂದಾಗಿ ಪ್ರತಿವರ್ಷ ಕನ್ನಡದ ಮಕ್ಕಳು ಹೆಚ್ಚಿನ ಹೊರೆಯನ್ನು ಹೊರಬೇಕಿತ್ತು. ಅಷ್ಟೇ ಅಲ್ಲದೆ ಎಷ್ಟೋ ಮಕ್ಕಳು ಕೇವಲ ಹಿಂದಿಯಲ್ಲಿ ಅನುತ್ತೀರ್ಣಗೊಂಡ ಕಾರಣಕ್ಕೆ ಎಸ್‌ ಎಸ್‌ ಎಲ್‌ ಸಿ ಮುಗಿಸಲು ಪರದಾಡುವಂತಹ ಸ್ಥಿತಿ ಇತ್ತು. ಇದೀಗ ರಾಜ್ಯ ಸರ್ಕಾರ ಕೈಗೊಂಡ ಕ್ರಮದಿಂದ ಮಕ್ಕಳ ಮೇಲಿನ ಹೊರೆ ಇಳಿದಂತಾಗಿದೆ. ತ್ರಿಭಾಷಾ ಸೂತ್ರವೇ ಹಿಂದಿ ಹೇರಿಕೆಯನ್ನು ನಿಧಾನವಾಗಿ ಒಪ್ಪಿಸಲು ಮಾಡಿಕೊಂಡಿದ್ದ ಒಂದು ಕುತಂತ್ರದ ಯೋಜನೆ. ಅದು ಸ್ವಾತಂತ್ರ್ಯಾನಂತರ ಯಾವುದೇ ಎಗ್ಗಿಲ್ಲದೆ ರಾಜಾರೋಷವಾಗಿ ನಡೆದುಕೊಂಡುಬಂದಿದೆ. ಹಿಂದಿ ಹೇರಿಕೆಯ ಭಾಗವಾಗಿ ತ್ರಿಭಾಷಾ ಸೂತ್ರವನ್ನು ರದ್ದುಗೊಳಿಸಬೇಕನ್ನುವುದು ಕರ್ನಾಟಕ ರಕ್ಷಣಾ ವೇದಿಕೆ ಹಕ್ಕೊತ್ತಾಯವಾಗಿತ್ತು. ಕಡ್ಡಾಯ ಹಿಂದಿ ಕಲಿಕೆಯಿಂದಾಗಿ ಸಾವಿರಾರು ಮಕ್ಕಳ ಭವಿಷ್ಯ ಪ್ರತಿ ವರ್ಷ ಮಂಕಾಗುತ್ತಿತ್ತು‌. ಇದೇ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ @siddaramaiah ಅವರನ್ನು ಭೇಟಿ ಮಾಡಿ, ತ್ರಿಭಾಷಾ ನೀತಿಯನ್ನು ಕಿತ್ತು ಹಾಕಬೇಕೆಂದು ಒತ್ತಾಯಿಸಿದ್ದೆ. ಅಷ್ಟೇ ಅಲ್ಲದೆ ತಮಿಳುನಾಡು ಮಾದರಿಯಲ್ಲಿ ದ್ವಿಭಾಷಾ ನೀತಿಯನ್ನು ಅಳವಳಡಿಸಿಕೊಳ್ಳಬೇಕೆಂದು ಆಗ್ರಹಿಸಿದ್ದೆ. ಇದೀಗ ಶಿಕ್ಷಣ ಮಂತ್ರಿಗಳು ಮೂರನೇ ಭಾಷೆಯ ಪರೀಕ್ಷೆಯ ಅಂಕವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿರುವುದು ಹಿಂದಿ ಹೇರಿಕೆ ವಿರುದ್ದ ಹೋರಾಟದ ದೊಡ್ಡ ಯಶಸ್ಸು ಎಂದು ನಾನು ಭಾವಿಸಿದ್ದೇನೆ. ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು, ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಮತ್ತು ಈ ಹೋರಾಟದಲ್ಲಿ ಭಾಗವಹಿಸಿದ್ದ ಎಲ್ಲಾ ಕನ್ನಡ ಮನಸ್ಸುಗಳನ್ನು ಅಭಿನಂದಿಸುತ್ತೇನೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯಬಾರದು. ಯಾರದೇ ಒತ್ತಡಕ್ಕೆ, ಒತ್ತಾಯಕ್ಕೆ ಮಣಿಯಬಾರದು. ಸರ್ಕಾರದ ಈ ನಿರ್ಧಾರದ ವಿರುದ್ಧ ಮಾತನಾಡುವ ಯಾರೇ ಆದರೂ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ದ್ರೋಹಿಗಳು, ನಾಡದ್ರೋಹಿಗಳು ಎಂದೇ ಭಾವಿಸಿ ಅವರ ವಿರುದ್ಧ ಹೋರಾಟ ನಡೆಸುತ್ತದೆ. - ಟಿ ಎ ನಾರಾಯಣ ಗೌಡ, ಕರವೇ ರಾಜ್ಯಾಧ್ಯಕ್ಷ #Implementation #grading #system #Hindi #firststep #bilingual #education #policy #TANarayanaGowda #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat