#📜ಪ್ರಚಲಿತ ವಿದ್ಯಮಾನ📜
I welcome Modi finally opening his mouth on the proposed delimitation exercise: Siddaramaiah
"I welcome Prime Minister Narendra Modi finally opening his mouth on the proposed delimitation exercise. This sudden concern for “reassuring” southern states appears less like statesmanship and more like election-driven messaging, timed conveniently with political calculations in states like Kerala and Tamil Nadu.
Let us be clear: the issue has never been about whether the number of Lok Sabha seats of southern states increases. The concern is about how they increase - and who benefits disproportionately.
Under the proposed expansion, while every state may see an increase, the rate and scale of increase clearly favour BJP-dominated states. Uttar Pradesh is expected to go from 80 to 120 seats (+40), Maharashtra from 48 to 72 (+24), Bihar from 40 to 60 (+20), Madhya Pradesh from 29 to 43–44 (+14–15), Rajasthan from 25 to 37–38 (+12–13), and Gujarat from 26 to 39 (+13).
In contrast, southern states see smaller gains. Karnataka rises from 28 to 42 (+14), Tamil Nadu from 39 to 58–59 (+20), Andhra Pradesh from 25 to 37–38 (+12–13), Telangana from 17 to 25–26 (+8–9), and Kerala from 20 to 30 (+10).
The numbers are telling. Five southern states together gain barely 63–66 additional seats, while just these seven BJP-dominated states gain about 128–131 seats - nearly double.
Even after expanding the Lok Sabha to 816 seats, the collective share of southern states remains around 24% - unchanged and already modest. States that performed better in population control and governance are being penalised, and Karnataka - a key driver of national growth - risks being deliberately sidelined. If our share does not improve while the numerical dominance of larger states grows, what exactly is Karnataka gaining from this exercise?
The result is a widening imbalance. Today, Uttar Pradesh has 52 more seats than Karnataka - this gap will increase to 78. Maharashtra’s lead over Karnataka will expand from 20 to 30 seats. This is not just expansion; it is concentration of power.
This is not cooperative federalism - this is another blatant assault on federalism, designed to concentrate power and silence states like Karnataka. Having failed to win the trust of southern people, the Modi Government is now attempting to weaken our voice through a manipulative restructuring of representation.
Such a structural change cannot be pushed without consultations or public debate. At a time of economic and global challenges, the Union Government is more focused on political arithmetic over national priorities.
The people of Karnataka - and all who believe in federalism - deserve fairness, respect, and transparency. We will firmly oppose any attempt to weaken our voice."
- Siddaramaiah, ChiefMinister
#welcome #Modi #finally #opening #mouth #proposed #delimitation #exercise #Siddaramaiah #BJPFailsIndia #Delimitation #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಇತಿಹಾಸ ಸೃಷ್ಟಿಸಿದ ಕರ್ನಾಟಕ ರಾಜ್ಯ ರೈತ ಸಂಘ
ಇಳ್ಳೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಕರ್ನಾಟಕ ರಾಜ್ಯ ರೈತ ಸಂಘ
ಒಟ್ಟು 10 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಭರ್ಜರಿ ಜಯ
ದರ್ಶನ್ ಪುಟ್ಟಣ್ಣಯ್ಯ ಅವರ ಸ್ವರಾಜ್ಯ ಸಂಕಲ್ಪಕ್ಕೆ ಬೆಲೆ
ಮಂಡ್ಯ: ಮೇಲುಕೋಟೆ ವಿಧಾನಸಭೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಪಂಚಾಯಿತಿ ವ್ಯಾಪ್ತಿಯ ಇಳ್ಳೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಇತಿಹಾಸ ಸೃಷ್ಟಿಸಿದೆ. ಒಟ್ಟು 10 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಭರ್ಜರಿಯಾಗಿ ಗೆದ್ದು, ಗ್ರಾಮೀಣ ರಾಜಕೀಯದಲ್ಲಿ ರೈತರ ಏಕತೆ, ನಾಯಕತ್ವ ಮತ್ತು ಸಂಕಲ್ಪದ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಈ ಭರ್ಜರಿ ಜಯ ದರ್ಶನ್ ಪುಟ್ಟಣ್ಣಯ್ಯ ಅವರ “ಸ್ವರಾಜ್ಯ ಸಂಕಲ್ಪ”ದ ತತ್ವಗಳು ಗ್ರಾಮ ಮಟ್ಟದಲ್ಲೂ ಬೇರೂರಿರುವುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಅಧಿಕಾರ ಗ್ರಾಮಕ್ಕೆ, ನಿರ್ಧಾರ ರೈತನಿಗೆ ಮತ್ತು ಅಭಿವೃದ್ಧಿ ಸಹಕಾರ ಸಂಘಗಳಿಂದಲೇ ಪ್ರಾರಂಭವಾಗಬೇಕು ಎಂಬ ಅವರ ಹೋರಾಟಕ್ಕೆ ಇಳ್ಳೆನಹಳ್ಳಿ ಸ್ಪಷ್ಟವಾಗಿ ಬೆಂಬಲ ಸೂಚಿಸಿದೆ.
ಇಳ್ಳೇನಹಳ್ಳಿ ರೈತ ಸಂಘದ ಈ ಗೆಲುವು, ಸಂಘದ ಮೇಲೆ ಜನತೆ ಇಟ್ಟಿರುವ ಅಪಾರ ವಿಶ್ವಾಸ ಮಾತ್ರವಲ್ಲ; ಇದು ಹಣ, ಜಾತಿ, ಕುಟಿಲ ರಾಜಕಾರಣಕ್ಕಿಂತ ರೈತರ ಏಕತೆ ಮತ್ತು ಶುದ್ಧ ನಂಬಿಕೆಗೆ ಜನತೆ ಮೌಲ್ಯ ನೀಡಿದೆ ಎಂಬುದರ ಘೋಷಣೆಯಾಗಿದೆ.
ರೈತ ಸಂಘದ ವಿಜಯ ಕುರಿತು ಪ್ರತಿಕ್ರಿಯೆ ನೀಡಿರುವ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಈ ವಿಜಯಕ್ಕೆ ಕಾರಣರಾದ ಸಂಘದ ಎಲ್ಲ ಸದಸ್ಯರು, ಕಾರ್ಯಕರ್ತರು, ಮುಖಂಡರು, ಮತದಾರರು ಮತ್ತು ಇಳ್ಳೇನಹಳ್ಳಿಯ ರೈತ ಸಮುದಾಯಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲವೇ ನಮ್ಮ ಹೋರಾಟದ ಬಲ ಎಂದಿದ್ದಾರೆ.
#KarnatakaRajyaRaitaSanhga #created #history #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಗೌರವ ಡಾಕ್ಟರೇಟ್ ತಿರಸ್ಕರಿಸಿದ ಬಸವರಾಜ ಬೊಮ್ಮಾಯಿ
ಬೆಂಗಳೂರು: ತಮಗೆ ನೀಡಿದ ಗೌರವ ಡಾಕ್ಟರೇಟ್ ಪದವಿಯನ್ನು ಮಾಜಿ ಸಿಎಂ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ತಿರಸ್ಕರಿಸಿದ್ದಾರೆ.
ಹಾವೇರಿ ವಿಶ್ವವಿದ್ಯಾಲಯವು ತಮ್ಮ ಸಿಂಡಿಕೇಟ್ ಸಭೆಯಲ್ಲಿ ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಮತ್ತು ಧನ್ಯವಾದಗಳು ಎಂದಿದ್ದಾರೆ.
ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ಈಗಾಗಲೇ ಕುಲಪತಿಗಳಿಗೆ ತಿಳಿಸಿದ್ದೇನೆ. ನಾನು ಸಾರ್ವಜನಿಕ ಸೇವೆಯಲ್ಲಿ ಇರುವುದರಿಂದ, ಸಾರ್ವಜನಿಕ ಸೇವೆಗೆ ಯಾವುದೇ ಪ್ರಶಸ್ತಿಯನ್ನು ಅಪೇಕ್ಷಿಸುವುದಿಲ್ಲ. ಸಾರ್ವಜನಿಕ ಸೇವೆಗೆ ಜನರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಅತ್ಯಂತ ದೊಡ್ಡ ಗೌರವವೆಂದು ಭಾವಿಸುತ್ತೇನೆ. ಆದ್ದರಿಂದ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ವಿನಮ್ರವಾಗಿ ಪುನರುಚ್ಚರಿಸುತ್ತೇನೆ ಎಂದಿದ್ದಾರೆ.
ಗೌರವ ಡಾಕ್ಟರೇಟ್ ಎಂಬುದು ದೀರ್ಘಕಾಲದಿಂದ ಯಾವುದಾದರೂ ಕ್ಷೇತ್ರದಲ್ಲಿ ವಿಶಿಷ್ಟ ಮತ್ತು ಮಹತ್ತರ ಸೇವೆ ಸಲ್ಲಿಸಿದವರಿಗೆ ನೀಡಬೇಕಾದ ಗೌರವವೆಂಬುದು ನನ್ನ ಅಭಿಪ್ರಾಯ. ಹೀಗಾಗಿ ಇದನ್ನು ಅಂಥ ಸಾಧಕರಿಗೆ ನೀಡಬೇಕು. ರಾಜಕಾರಣಿಗಳಿಗೆ ಅಥವಾ ಸ್ವಯಂ ಪ್ರೇರಣೆಯಿಂದ ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಮಂಜಸವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ಪುನರ್ ವಿಚಾರ ಮಾಡಬೇಕೆಂದು ವಿನಂತಿಸಿದ್ದಾರೆ.
ಮತ್ತೊಮ್ಮೆ ವಿನಯಪೂರ್ವಕವಾಗಿ ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲವೆಂದು ತಿಳಿಸುತ್ತಾ, ಹಾವೇರಿ ವಿಶ್ವವಿದ್ಯಾಲಯಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
#BasavarajaBommai #rejects #honorary #doctorate #Haveri #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಬೇಸಿಗೆ ಶಾಖ ಮತ್ತು ನಾಗರಿಕ ರಕ್ಷಣಾ ಇಲಾಖೆ ಹೆಸರಿನಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯವೇ?
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಏನು? ಕಳೆದ ಕೆಲವು ದಿನಗಳಿಂದ ವಾಟ್ಸಾಪ್ ಮತ್ತು ಫೇಸ್ಬುಕ್ನಲ್ಲಿ "ನಾಗರಿಕ ರಕ್ಷಣಾ ಇಲಾಖೆ" (Civil Defence Department) ಹೆಸರಿನಲ್ಲಿ ಒಂದು ಎಚ್ಚರಿಕೆಯ ಸಂದೇಶ ವೈರಲ್ ಆಗುತ್ತಿದೆ. ಅದರಲ್ಲಿ, "ಹೊರಗಿನ ತಾಪಮಾನ 45–47°C ತಲುಪಲಿದೆ, ಆದ್ದರಿಂದ ಎಸಿ ತಾಪಮಾನವನ್ನು 24°C ನಲ್ಲೇ ಇಡಿ ಮತ್ತು ಮಧ್ಯಾಹ್ನ ಹೊರಗೆ ಬರಬೇಡಿ" ಎಂದು ಸೂಚಿಸಲಾಗಿದೆ.
ಮಾಲ್ಗುಡಿ ಎಕ್ಸ್ಪ್ರೆಸ್ ನಡೆಸಿದ ತನಿಖೆಯಲ್ಲಿ ಕಂಡುಬಂದ ಸತ್ಯಾಂಶಗಳು ಇಲ್ಲಿವೆ:
1. ಇದು ಅಧಿಕೃತ ಪ್ರಕಟಣೆಯೇ?: ಅಸತ್ಯ: ನಮ್ಮ ತನಿಖೆಯ ಪ್ರಕಾರ, ನಾಗರಿಕ ರಕ್ಷಣಾ ಇಲಾಖೆ ಇತ್ತೀಚಿನ ದಿನಗಳಲ್ಲಿ ಇಂತಹ ಯಾವುದೇ ಪ್ರಕಟಣೆ ಹೊರಡಿಸಿಲ್ಲ. ಈ ಸಂದೇಶ ಕಳೆದ ಹಲವು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ಕೇವಲ ಹೆಸರುಗಳನ್ನು ಬದಲಾಯಿಸಿಕೊಂಡು (ಕೆಲವೊಮ್ಮೆ ಆರೋಗ್ಯ ಇಲಾಖೆ, ಕೆಲವೊಮ್ಮೆ ಇಂಧನ ಇಲಾಖೆ) ಹರಿದಾಡುತ್ತಿದೆ.
2. ಎಸಿ ತಾಪಮಾನ 24–25°C ನಲ್ಲಿರಬೇಕೇ?: ಸರಿ: ತಾಂತ್ರಿಕವಾಗಿ ಇದು ಸರಿಯಾದ ಸಲಹೆ. ತಜ್ಞರ ಪ್ರಕಾರ, ಎಸಿಯನ್ನು 24 ಡಿಗ್ರಿಯಲ್ಲಿ ಇಡುವುದರಿಂದ ದೇಹದ ಆರೋಗ್ಯಕ್ಕೂ ಉತ್ತಮ ಮತ್ತು ವಿದ್ಯುತ್ ಬಿಲ್ ಕೂಡ ಕಡಿಮೆ ಬರುತ್ತದೆ. ಆದರೆ, ತಾಪಮಾನ 45 ಡಿಗ್ರಿ ದಾಟಿದ ಕೂಡಲೇ ಎಸಿ ಸ್ಫೋಟಗೊಳ್ಳುತ್ತದೆ ಅಥವಾ ಕೆಟ್ಟುಹೋಗುತ್ತದೆ ಎಂಬ ಆತಂಕ ಪಡಬೇಕಿಲ್ಲ. ಆಧುನಿಕ ಎಸಿಗಳು ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ.
3. ಮಧ್ಯಾಹ್ನ 10 ರಿಂದ 3 ರವರೆಗೆ ಹೊರಗೆ ಹೋಗಬಾರದೇ?: ಭಾಗಶಃ ಸರಿ: ಹವಾಮಾನ ಇಲಾಖೆ ಮತ್ತು ವೈದ್ಯರು ಬೇಸಿಗೆಯ ಸಮಯದಲ್ಲಿ ಮಧ್ಯಾಹ್ನ 11 ರಿಂದ ಸಂಜೆ 4 ರವರೆಗೆ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಡಿ ಎಂದು ಸಲಹೆ ನೀಡುತ್ತಾರೆ. ಇದು ಹೀಟ್ ಸ್ಟ್ರೋಕ್ ತಡೆಯಲು ಸಹಕಾರಿ. ಸಂದೇಶದಲ್ಲಿರುವ ಈ ಭಾಗ ಜನಹಿತ ದೃಷ್ಟಿಯಿಂದ ಉಪಯುಕ್ತವಾಗಿದೆ.
ಮಾಲ್ಗುಡಿ ಎಕ್ಸ್ಪ್ರೆಸ್ ತೀರ್ಪು: ವೈರಲ್ ಆಗಿರುವ ಸಂದೇಶದಲ್ಲಿರುವ ಆರೋಗ್ಯದ ಸಲಹೆಗಳು (ನೀರು ಕುಡಿಯುವುದು, ಬಿಸಿಲಿನಲ್ಲಿ ಹೋಗದಿರುವುದು) ಪಾಲಿಸಲು ಯೋಗ್ಯವಾಗಿವೆ. ಆದರೆ, ಈ ಸಂದೇಶ ನಾಗರಿಕ ರಕ್ಷಣಾ ಇಲಾಖೆಯಿಂದ ಬಂದ ಅಧಿಕೃತ ಎಚ್ಚರಿಕೆಯಲ್ಲ. ಇದು ಹಳೆಯ ಫಾರ್ವರ್ಡ್ ಮೆಸೇಜ್ ಆಗಿದ್ದು, ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೊಳಗಾಗುವ ಅಗತ್ಯವಿಲ್ಲ.
ಓದುಗರಲ್ಲಿ ಮನವಿ: ಯಾವುದೇ ಅಧಿಕೃತ ಮಾಹಿತಿಗಾಗಿ ಸರ್ಕಾರದ ವೆಬ್ಸೈಟ್ಗಳು ಅಥವಾ ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳನ್ನು ಗಮನಿಸಿ. ಆಧಾರರಹಿತ ಸಂದೇಶಗಳನ್ನು ಹಂಚುವ ಮೊದಲು ಪರಿಶೀಲಿಸಿ.
#message #spread #name #summerheat #CivilDefenseDepartment #true #factcheck #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಏಪ್ರಿಲ್-1 ಮೂರ್ಖರ ದಿನ ಎಂದು ಕರೆಯುವವರೇ ಶತಮೂರ್ಖರು!
'ಸಮಾಜ ಸೇವೆ' ಹೆಸರಿನಲ್ಲಿ ಆಳೆತ್ತರದ ದೊಡ್ಡ ದೊಡ್ಡ ಫ್ಲೆಕ್ಸ್ ಫೋಟೋ ಹಾಕಿಕೊಂಡು ರಾರಾಜಿಸುವ ನಾಯಕರ ಭಿತ್ತಿಚಿತ್ರಗಳನ್ನು ನೀವು ನೋಡಿದ್ದೀರಿ. 'ಕೊಡುಗೈ ದಾನಿ' 'ಕಲಿಯುಗದ ಕರ್ಣ' 'ದಾನ ಶೂರ' 'ಸಮಾಜ ಸೇವಾ ದುರಂದರ' 'ಸಮಾಜ ಸೇವಾ ರತ್ನ' 'ಬಡವರ ಬಂಧು' 'ದಾನ ಚಿಂತಾಮಣಿ' ಇನ್ನೂ ಮುಂತಾದ ವಿಶೇಷಣಗಳಿಂದ ಕೀರ್ತಿಸಲಾಗುವ ಆ ನಾಯಕರ ಭಾವಚಿತ್ರಗಳು ಮತ್ತು ಅವರ ದೇಹಭಾಷೆ ಒಮ್ಮೆಯಾದರೂ ನಮ್ಮ ಕಣ್ಣುಗಳನ್ನು ಸೆಳೆಯದಿರಲು ಸಾಧ್ಯವಿಲ್ಲ. ಸರ್ವಾಲಂಕಾರ ಭೂಷಿತರಾಗಿ ಕೈಬೆರಳು ಕೊರಳು ಮುಂಗೈ ಮೈತುಂಬಾ ಲಕ್ಷಗಟ್ಟಲೆ ಬೆಲೆಬಾಳುವ ಒಡವೆಗಳನ್ನು ಮತ್ತು ವಸ್ತ್ರಗಳನ್ನು ಧರಿಸಿಕೊಂಡು ಭರ್ಜರಿಯಾದ ಕಾರುಗಳಲ್ಲಿ ಸಹಚರರ ಪಡೆಯೊಂದಿಗೆ ಬಂದಿಳಿಯುವ ಅವರ ಠೀವಿ ಗತ್ತು ಗಮ್ಮತ್ತು ಗಾಂಭೀರ್ಯಗಳಿಗೆ ಬೆರಗಾದ ವಂದಿಮಾಗದ ಅಭಿಮಾನಿಗಳು ಪಟಾಕಿ ಸರ ಸಿಡಿಸಿ ಜಯಘೋಷ ಹಾಕುತ್ತಾರೆ. ಇನ್ನೂ ಕೆಲವರು ಸರ್ಕಾರಕ್ಕೆ ಸಾರ್ವಜನಿಕರ ಕೋಟಿಗಟ್ಟಲೆ ತೆರಿಗೆ ದುಡ್ಡನ್ನು ಕಟ್ಟದೆ ವಂಚಿಸಿ ಮತ್ತು ತಮ್ಮದೇ ಕೈಕೆಳಗೆ ದುಡಿಯುವ ನೌಕರರಿಗೆ ಕೊಡಬೇಕಾದ ವೇತನವನ್ನು ವಂಚಿಸಿ ಅಥವಾ ಭ್ರಷ್ಟಾಚಾರದಿಂದ ಅಕ್ರಮ ಸಂಪತ್ತನ್ನು ಗುಡ್ಡೆ ಹಾಕಿಕೊಂಡು ಬಹಿರಂಗದಲ್ಲಿ ಅಪೂಟ ಸರಳತೆಯ ಪೋಜು ಕೊಡುತ್ತಾರೆ. ಎಸಗಿದ ಪಾಪವನ್ನು ತೊಳೆದುಕೊಳ್ಳುವ ಪ್ರಾಯಶ್ಚಿತ್ತಕ್ಕಾಗಿ ತಾವು ಹೋಗಿಬರುವ ಕಡೆಗೆಲ್ಲಾ ಕಾರಿನಲ್ಲಿ ಸೀರೆಗಳನ್ನು, ನೋಟಿನ ಕಂತೆಗಳನ್ನು ಕಾಣಿಕೆಗಳನ್ನು ಕೊಂಡೊಯ್ದು ಮಠಮಂದಿರಗಳಿಗೂ ಪೂಜಾರಿಗಳಿಗೂ, ವಿಲಿಯಂ ಬ್ಲೇಕನ ಕವಿತೆಗಳಲ್ಲಿ ಬರುವಂತಹ ಬಡಬಗ್ಗರಿಗೂ ಹಂಚಿ ಕೃತಾರ್ಥ ಭಾವದಿಂದ ಕೈಮುಗಿದು ಬರುತ್ತಾರೆ. ಇನ್ನೂ ಕೆಲವರು ಸಮಾಜ ಸೇವೆ ಎಂಬುದನ್ನೇ ತಮ್ಮ ಜೀವನೋಪಾಯದ ದಾರಿಯಾಗಿಸಿಕೊಂಡಿರುತ್ತಾರೆ. ಇಂಥವರಿಗೆ ಕನಿಷ್ಠ ಸಾರ್ವಜನಿಕ ಲಜ್ಜೆ ಎಂಬುದೇ ಇರುವುದಿಲ್ಲ.
ಸೇವೆ ಎಂಬ ಪದವನ್ನು ನಾವು ಹೊಣೆಗಾರಿಕೆ ಅಥವಾ ಕರ್ತವ್ಯ ಎಂದು ಭಾವಿಸಿದಾಗ ಹೆಚ್ಚು ಅರ್ಥ ಬರುತ್ತದೆ. ನಮ್ಮನ್ನು ರೂಪಿಸಿರುವುದು ಈ ಸಮಾಜವೇ ಆಗಿರುವುದರಿಂದ ನಾವು ಪಡೆದುಕೊಂಡ ಸಮಾಜಕ್ಕೆ ನಾವು ವಾಪಸ್ಸು ಋಣ ಸಂದಾಯ ಮಾಡಬೇಕಿರುತ್ತದೆ. ಇದನ್ನು ಅಂಬೇಡ್ಕರ್ ಅವರು Pay back to society ಎಂದಿದ್ದಾರೆ.
ಸಮಾಜ ಸೇವಕರೆಂದು ಕರೆದುಕೊಳ್ಳುವ ಕೆಲವು ಜನರಿಂದಾಗಿ ಭಾರತದ ಇಂದಿನ ಅರ್ಥ ವ್ಯವಸ್ಥೆ ತುಂಬಾ ಏರುಪೇರಾಗಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಆರ್ಥಿಕ ವಿಚಲತೆಗೆ ಕಾರಣವಾಗಿದೆ. ಇವತ್ತು ನಾವು ವಿಶ್ವ ಆರ್ಥಿಕತೆಯಲ್ಲಿ ಭಾರತದ ಸ್ಥಾನಮಾನ ಕುರಿತು ವಿಪರೀತವಾಗಿ ಚರ್ಚಿಸುತ್ತಿದ್ದೇವೆ. ಅಂತರಾಷ್ಟ್ರೀಯ ಹಣಕಾಸು ವ್ಯವಸ್ಥೆ (International financial system) ಮತ್ತು ಹಣಕಾಸಿನ ಏಜೆನ್ಸಿಗಳನ್ನು ಕುರಿತು ದೊಡ್ಡ ದೊಡ್ಡ ಪ್ರಬಂಧಗಳನ್ನು ಬರೆದು ಮಂಡಿಸುತ್ತಿದ್ದೇವೆ. stocks and shares, debentures and derivatives ಎಂದು ಷೇರು ಮಾರುಕಟ್ಟೆಯ ಅರ್ಥಶಾಸ್ತ್ರಜ್ಞರು ಮತ್ತು ಸಂಶೋಧಕರು ತಮ್ಮ ಅಧ್ಯಯನದ ಫಲಿತಗಳನ್ನು ಕಾಲಕಾಲಕ್ಕೆ ನಮ್ಮ ಮುಂದಿಡುತ್ತಿದ್ದಾರೆ. ಈ ಅಧ್ಯಯನಗಳೆಲ್ಲವೂ ವಿಶ್ವಮಟ್ಟದಲ್ಲಿ ಭಾರತವು ಒಂದು ಅಭಿವೃದ್ಧಿಶೀಲ ರಾಷ್ಟ್ರವೆಂದೂ, ಭಾರತ ದೇಶದ ಆಂತರಿಕ ಆರ್ಥಿಕತೆಯು ತೀರಾ ಅಸಮಾನತೆಯಿಂದ ಕೂಡಿದೆಯೆಂದೂ, ದೇಶದ ಪ್ರಜೆಗಳಲ್ಲಿ ಆರ್ಥಿಕ ಪಾರದರ್ಶಕತೆ ಕಂಡುಬರುತ್ತಿಲ್ಲವೆಂದೂ, ಕೆಲವೇ ಶ್ರೀಮಂತರ ಕೈಗಳಲ್ಲಿ ಇಡೀ ದೇಶದ ಸಿಂಹಪಾಲು ಸಂಪತ್ತು ಕೇಂದ್ರೀಕರಣವಾಗಿದೆಯೆಂದೂ ಹಾಗೂ ಬಡಜನರಿಂದಲೇ ತುಂಬಿರುವ ಶ್ರೀಮಂತ ರಾಷ್ಟ್ರವೆಂದೂ ವಿಶ್ವದೆದುರು ಸಾರುತ್ತಿವೆ. ಹೀಗೆಂದಾಗ ಭಾರತದ ದೋಷಪೂರಿತ ವಿತ್ತೀಯ ನೀತಿಗಳೇ (fiscal policies) ಇಂತೆಲ್ಲಾ ವೈರುಧ್ಯಗಳಿಗೆ ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅನ್ನಿಸ್ತಿದೆ.
ಬಸವಣ್ಣನ ನಂತರದಲ್ಲಿ ಭಾರತದ ಆರ್ಥಿಕ ಸಮಸ್ಯೆಗಳನ್ನು ಕುರಿತು ಆಮೂಲಾಗ್ರ ಚಿಂತನೆ ನಡೆಸಿದವರೆಂದರೆ ಅಂಬೇಡ್ಕರ್ ಒಬ್ಬರೇ. The problem of the rupee ; Its origin and its solution (History of Indian currency and Banking) ಎಂಬ ವಿಷಯದ ಮೇಲೆ ಬಹುದೊಡ್ಡ ಸಂಶೋಧನೆಯನ್ನು ಅವರು ಕೈಗೊಳ್ಳುತ್ತಾರೆ. ಭಾರತದ ಆರ್ಥಿಕತೆಯ ಏರಿಳಿತ ಮತ್ತು ಸಂಪತ್ತಿನ ಅಸಮಾನ ಹಂಚಿಕೆಯನ್ನು ಅವರು ಮನಗಾಣುತ್ತಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು London School of Economics ನಲ್ಲಿ ಪಿಎಚ್.ಡಿ ಸಂಶೋಧನೆ ಕೈಗೊಂಡು ಡಾಕ್ಟರೇಟ್ ಮಹಾಪ್ರಬಂಧವನ್ನು ಮಂಡಿಸಿ ಭಾರತದ ಆರ್ಥಿಕ ನಡಿಗೆಯನ್ನು ಹೊಸ ದಿಕ್ಕಿನ ಕಡೆಗೆ ಬದಲಿಸಿದರು. ಇದೇ ಮಹಾಪ್ರಬಂಧವನ್ನು ಆಧರಿಸಿಯೇ 1935 ರ ಏಪ್ರಿಲ್ 1 ನೇ ತಾರೀಖಿನಂದು Reserve Bank of India (RBI) ಸ್ಥಾಪನೆಯಾಯಿತು. ಏಪ್ರಿಲ್ 1 ನ್ನು ಭಾರತದ ಮಟ್ಟಿಗೆ 'ಮೂರ್ಖರ ದಿನ' ಎನ್ನುವವರು ಶತಮೂರ್ಖರೇ ಸರಿ. ಏಪ್ರಿಲ್ 1 ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞನಾದ ಅಂಬೇಡ್ಕರ್ ಹೆಸರಿನಲ್ಲಿ ಆಚರಿಸಬೇಕಾದ 'ರೂಪಾಯಿ ದಿನ' ಅಥವಾ 'ಬ್ಯಾಂಕ್ ದಿನ'. ಇವತ್ತು ಯಾರದೇ ಜೇಬಿನಲ್ಲಿ ಒಂದು ರೂಪಾಯಿ ನಾಣ್ಯ ಓಡಾಡುತ್ತಿದ್ದರೂ, ಕೋಟಿ ರೂಪಾಯಿ ಚಲಾವಣೆಯಾಗುತ್ತಿದ್ದರೂ ಅದಕ್ಕೆ ಅಂಬೇಡ್ಕರರೇ ಕಾರಣ.
ಭಾರತದಲ್ಲಿ ಅಸಮಾನ ಆರ್ಥಿಕ ರಚನೆ ಮತ್ತು ಸಂಪತ್ತಿನ ಕೇಂದ್ರೀಕರಣವನ್ನು ಗುರುತಿಸಿದ ಅಂಬೇಡ್ಕರ್ ಆರ್ಥಿಕ ಉತ್ಪಾದನೆಯ ಪ್ರಧಾನಾಂಶವಾದ ಭೂಮಿಯನ್ನು ರಾಷ್ಟ್ರೀಕರಣ ಮಾಡಲು ಉದ್ದೇಶಿಸಿದ್ದರು. ಮಹಿಳೆಯರಿಗೆ ಸಮಾನ ಆಸ್ತಿಯ ಹಕ್ಕನ್ನು ತರಲು ಸಾಧ್ಯವಾದ ಅಂಬೇಡ್ಕರ್ ಅವರು ಕನಸಿದ್ದ ಭೂಮಿಯ ರಾಷ್ಟ್ರೀಕರಣದ ಆಸೆ ಕೈಗೂಡಲಿಲ್ಲ. ಹಾಗಾಗಿಯೇ ಅವರು Pay back to society ಎಂದು ನಾವು ಸಮಾಜಕ್ಕೆ ಋಣ ಸಂದಾಯ ಮಾಡಬೇಕಾದ ನೈತಿಕ ಜವಾಬ್ದಾರಿಯನ್ನು ನಮ್ಮ ಮೇಲೆ ಹೊರಿಸಿದರು. ಇಂತಹ ಋಣ ಸಂದಾಯವನ್ನು ಕೆಲವರು ಸಮಾಜ ಸೇವೆ ಎಂದು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಸಮಾಜ ಸೇವಕರೆಂಬ ಲೇಬಲ್ ಅಂಟಿಸಿಕೊಳ್ಳುತ್ತಿದ್ದಾರೆ. ಇದು ದಾನವೂ ಅಲ್ಲ. ಸೇವೆಯೂ ಅಲ್ಲ. ನಮ್ಮ ಪಾಲಿನ ಸಾಮಾಜಿಕ ಹೊಣೆಗಾರಿಕೆ ಅಥವಾ ಕರ್ತವ್ಯ. ಇದನ್ನೇ ಬಸವಣ್ಣ ದಾಸೋಹ ಎಂದಿದ್ದಾರೆ. 'ಬೇಡುವವರಿಲ್ಲದೆ ನಾ ಬಡವನಾದೆನಯ್ಯ' ಎಂಬ ವಚನವಾಕ್ಯವು ನೀಡುವವರನ್ನೇ ಬೇಡುವವರಿಲ್ಲದ ಕಾರಣವಾಗಿ ಬಡವರಾದರೆಂದು ತಿಳಿಸುತ್ತದೆ. ಎಲ್ಲವೂ ಈ ಸೃಷ್ಟಿಯು ನಮಗೆ ಕೊಟ್ಟಿರುವ ದಾನವಾಗಿರುವುದರಿಂದ ನಾವು ಕೊಡುವಂತಹ ದಾನ ಯಾವುದೂ ಇಲ್ಲ. ಇಂತಹ ಸಂದೇಶವಿರುವ ಕೆಲವು ವಚನಕಾರರ ವಚನಗಳನ್ನು ನಾವು ನೋಡೋಣ.
"ಹಾಡಿದೊಡೆ ಎನ್ನೊಡೆಯನ ಹಾಡುವೆ
ಬೇಡಿದೊಡೆ ಎನ್ನೊಡೆಯನ ಬೇಡುವೆ
ಒಡೆಯಂಗೊಡಲ ತೋರಿ ಎನ್ನ ಬಡತನವ ಭಿನ್ನೈಸುವೆ
ಒಡೆಯ ಮಹಾದಾನಿ ಕೂಡಲಸಂಗಮದೇವರಿಗೆ
ಸೆರಗೊಡ್ಡಿ ಬೇಡುವೆ"
---- ಬಸವಣ್ಣ
"ಒಡಲ ಕಳವಳಕ್ಕಾಗಿ ಅಡವಿಯ ಪೊಕ್ಕೆನು
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು
ಅವು ನೀಡಿದವು ತಮ್ಮ ಲಿಂಗಕ್ಕೆಂದು
ಆನು ಬೇಡಿ ಭವಿಯಾದೆನು
ಅವು ನೀಡಿ ಭಕ್ತರಾದವು
ಇನ್ನು ಬೇಡಿದೆನಾದಡೆ ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮಾಣೆ"
---- ಅಕ್ಕಮಹಾದೇವಿ
"ಇಳೆ ನಿಮ್ಮ ದಾನ
ಬೆಳೆ ನಿಮ್ಮ ದಾನ
ಸುಳಿದು ಸೂಸುವ ಗಾಳಿ ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ"
---- ಜೇಡರ ದಾಸಿಮಯ್ಯ
"ಮಾಡಿದೆನೆಂಬುದು ಮನದಲಿ ಹೊಳೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆನೆನ್ನದಿರಾ ಲಿಂಗಕ್ಕೆ,
ನೀಡಿದೆನೆನ್ನದಿರ ಜಂಗಮಕ್ಕೆ
ಮಾಡಿದ್ದು ನೀಡಿದ್ದು ಮನದಲಿ ಇಲ್ಲದಿದ್ದರೆ
ಬೇಡಿದ್ದನೀವ ನಮ್ಮ ಕೂಡಲಸಂಗಮದೇವ"
---- ಬಸವಣ್ಣ
"ಲಂಚವಂಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾ ಕೈ ಮುಟ್ಟಿ ಎತ್ತಿದೆನಾದಡರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ, ನೀವಿಕ್ಕಿದ ಭಿಕ್ಷೆದಲ್ಲಿಪ್ಪೆನಾಗಿ
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ
ನೀನಾಗಲೇ ಎನ್ನ ನರಕದಲಿ ಅದ್ದಿ
ನೀನೆದ್ದು ಹೋಗು ಶಂಭುಜಕ್ಕೇಶ್ವರಾ"
--- ಶರಣೆ ಸತ್ಯಕ್ಕ
‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂದಿಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲಸಂಗಮದೇವ"
---- ಬಸವಣ್ಣ
"ಎತ್ತು ನಿಮ್ಮ ದಾನ ಬಿತ್ತು ನಿಮ್ಮ ದಾನ
ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ಹೇಳಾ ರಾಮನಾಥ"
---- ಜೇಡರ ದಾಸಿಮಯ್ಯ
"ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ
ಸತ್ಪಾತ್ರಕ್ಕೆ ಸಲ್ಲದಯ್ಯ
ನಾಯ ಹಾಲು ನಾಯಿಗಲ್ಲದೆ
ಪಂಚಾಮೃತಕ್ಕೆ ಸಲ್ಲದಯ್ಯ
ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಂಡಯ್ಯಾ"
---- ಬಸವಣ್ಣ
ಸಂಪತ್ತಿನ ಗಳಿಕೆ ಮತ್ತು ಅದರ ಬಳಕೆಯನ್ನು ಕುರಿತು ಬಸವಣ್ಣ ಹೇಳಿರುವ ದಾಸೋಹದ ಪರಿಕಲ್ಪನೆಯಂತೆ ಸತ್ಯಶುದ್ದ ಕಾಯಕದಿಂದ ಗಳಿಸಿದ ಹಣವನ್ನು ಸಮಾಜದ ಸತ್ಪಾತ್ರಕ್ಕೆ
ಬಳಸಬೇಕು. ಅಲ್ಲದ ಹೊರತಾದ ಯಾವುದೇ ಹಣದಿಂದ ಪಾಪಿಯ ಪಾಪದ ಸಂಚಯನವಾಗುತ್ತದೆ. ಅಂತಹ ಪಾಪಿಗಳು ಮಾತ್ರ ಪ್ರಾಯಶ್ಚಿತ್ತ ಮಾಡಿಕೊಳ್ಳಲು ದೇವರ ಮತ್ತು ಸಮಾಜ ಸೇವೆಯ ಹೆಸರಿನಲ್ಲಿ ವ್ಯಯಿಸಿ ಮತ್ತಷ್ಟು ಪಾಪವನ್ನು ಹೊಂದುತ್ತಾರೆ. ನಾಯಿಯ ಹಾಲು ಪಂಚಾಮೃತಕ್ಕೆ ಹೇಗೆ ಸಲ್ಲುವುದಿಲ್ಲವೋ ಹಾಗೆಯೇ ಪಾಪಿಯ ಹಣ ಪವಿತ್ರವಾದ ವಿನಿಯೋಗ ಎನ್ನಿಸಿಕೊಳ್ಳುವುದಿಲ್ಲ. ಸತ್ಯಶುದ್ಧ ಕಾಯಕದಿಂದ ಸಂಪಾದಿಸಿದ ಸಂಪತ್ತು ಮಾತ್ರ ಸತ್ಪಾತ್ರಕ್ಕೆ ಸಲ್ಲುವ ಮೂಲಕ ಪಾಪ ಸೂತಕದಿಂದ ನಮ್ಮನ್ನು ದೂರವಿರಿಸುತ್ತದೆ. ಬಸವಣನವರ "ಬೇಡುವವರಿಲ್ಲದೆ ನಾ ಬಡವನಾದೆನಯ್ಯ" ಹಾಗೂ ಅಂಬೇಡ್ಕರ್ ಅವರ "PAY BACK TO SOCIETY" ಎಂಬ ಆಶಯಗಳ ಕರ್ತವ್ಯ ಪಾಲಕರು ನಾವಾಗೋಣ.
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ
#call #April1st #RBI #Ambedkar #AprilFoolsDay #VaddagereNagarajaiah #fools #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಸಂಸದರು ಲೇಟಾಗಿ ಬಂದ್ರೆ ಸಂಬಳ ಕಟ್ ಆಗುತ್ತಾ? ಸಾಮಾಜಿಕ ಜಾಲತಾಣದ ಸುದ್ದಿಯ ಅಸಲಿಯತ್ತೇನು?
ಮಾಲ್ಗುಡಿ ಫ್ಯಾಕ್ಟ್ ಚೆಕ್: "ಇನ್ಮುಂದೆ ಸಂಸದರು ಲೇಟಾಗಿ ಬಂದ್ರೆ ಸಂಬಳ ಕಟ್ ಆಗುತ್ತೆ, ಸೀಟಿನಲ್ಲಿ ಕುಳಿತರೆ ಮಾತ್ರ ಹಾಜರಾತಿ ಸಿಗುತ್ತೆ" - ಇಂತಹದೊಂದು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಾಮಾನ್ಯ ಜನರು "ನಮಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವೇ?" ಎಂದು ಪ್ರಶ್ನಿಸುತ್ತಿರುವ ಬೆನ್ನಲ್ಲೇ, ಈ ಸುದ್ದಿಯ ಸತ್ಯಾಸತ್ಯತೆಯನ್ನು 'ಮಾಲ್ಗುಡಿ ಎಕ್ಸ್ಪ್ರೆಸ್' ಪರಾಮರ್ಶಿಸಿದೆ.
ವೈರಲ್ ಆಗುತ್ತಿರುವ ವಿಷಯ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಪ್ರಕಾರ:
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರಿಗೆ ಕಠಿಣ ನಿಯಮ ಜಾರಿ ಮಾಡಿದ್ದಾರೆ.
ಸಂಸದರು ತಡವಾಗಿ ಬಂದರೆ ಅವರ ಸಂಬಳ ಕಡಿತಗೊಳಿಸಲಾಗುತ್ತದೆ.
ಸಂಸತ್ತಿನ ಒಳಗೆ ತಮ್ಮ ನಿಗದಿತ ಸೀಟಿನಲ್ಲಿ ಕುಳಿತಾಗ ಮಾತ್ರ ಹಾಜರಾತಿ ದಾಖಲಾಗುತ್ತದೆ.
ಮಾಲ್ಗುಡಿ ಫ್ಯಾಕ್ಟ್ ಚೆಕ್ (Fact Check)
1. ಸೀಟಿನಲ್ಲಿ ಕುಳಿತರೆ ಮಾತ್ರ ಹಾಜರಾತಿ: (ನಿಜ)
ಹೌದು, ಇದು ಸತ್ಯ. 2026ರ ಬಜೆಟ್ ಅಧಿವೇಶನದಿಂದ ಜಾರಿಗೆ ಬರುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೊಸ ಡಿಜಿಟಲ್ ಹಾಜರಾತಿ ವ್ಯವಸ್ಥೆಯನ್ನು ಘೋಷಿಸಿದ್ದಾರೆ. ಈ ಹಿಂದೆ ಸಂಸದರು ಸಂಸತ್ತಿನ ಲಾಬಿಯಲ್ಲಿರುವ ರಿಜಿಸ್ಟರ್ನಲ್ಲಿ ಸಹಿ ಮಾಡಿ ಹಾಜರಾತಿ ಹಾಕಬಹುದಿತ್ತು. ಆದರೆ ಈಗ, ಪ್ರತಿಯೊಬ್ಬ ಸಂಸದನ ಸೀಟಿನಲ್ಲಿ ಅಳವಡಿಸಲಾಗಿರುವ ಬಯೋಮೆಟ್ರಿಕ್ ಕನ್ಸೋಲ್ ಮೂಲಕ ಮಾತ್ರ ಹಾಜರಾತಿ ದಾಖಲಿಸಬೇಕು. ಅಂದರೆ, ಸದನದ ಒಳಗೆ ಹೋಗಿ ಸೀಟಿನಲ್ಲಿ ಕುಳಿತರೆ ಮಾತ್ರ ಅವರು ಹಾಜರಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
2.ತಡವಾಗಿ ಬಂದರೆ ಸಂಬಳ ಕಡಿತ: (ದಾರಿತಪ್ಪಿಸುವ ಮಾಹಿತಿ)
ಸಂಸದರು ತಡವಾಗಿ ಬಂದ ತಕ್ಷಣ ಅವರ 'ಮೂಲ ವೇತನ' (Basic Salary) ಕಡಿತಗೊಳಿಸುವ ಯಾವುದೇ ಕಾನೂನು ಜಾರಿಯಾಗಿಲ್ಲ. ಆದರೆ, ಸಂಸದರಿಗೆ ಪ್ರತಿ ದಿನದ ಅಧಿವೇಶನಕ್ಕೆ ಹಾಜರಾಗಲು ಸುಮಾರು 2,500 ರೂ. 'ದೈನಂದಿನ ಭತ್ಯೆ' (Daily Allowance) ಸಿಗುತ್ತದೆ. ಹೊಸ ನಿಯಮದಂತೆ ಸೀಟಿನಲ್ಲಿ ಕುಳಿತು ಹಾಜರಾತಿ ದಾಖಲಿಸದಿದ್ದರೆ, ಅವರಿಗೆ ಆ ದಿನದ ಭತ್ಯೆ ಸಿಗುವುದಿಲ್ಲ. ಇದನ್ನು "ಸಂಬಳ ಕಡಿತ" ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ.
3. ಸಂಬಳ ಕಡಿತದ ಹಳೆಯ ಕತೆ:
ಈ ಹಿಂದೆ 2020ರಲ್ಲಿ ಕೋವಿಡ್ ನಿಧಿಗಾಗಿ ಸಂಸದರ ಸಂಬಳದಲ್ಲಿ 30% ಕಡಿತ ಮಾಡಲಾಗಿತ್ತು. ಅದನ್ನು ಹೊರತುಪಡಿಸಿ, ಶಿಸ್ತಿನ ಕ್ರಮವಾಗಿ ಸಂಬಳ ಕಡಿತ ಮಾಡುವ ನಿಯಮ ಸದ್ಯಕ್ಕಿಲ್ಲ.
ಅಂತಿಮ ತೀರ್ಪು (Verdict): ಸಂಸದರು ಕಲಾಪದಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಲು ಹಾಜರಾತಿ ನಿಯಮ ಬದಲಿಸಿರುವುದು ಸತ್ಯ. ಆದರೆ, ತಡವಾಗಿ ಬಂದವರ ಸಂಬಳ ಕಡಿತವಾಗುತ್ತದೆ ಎನ್ನುವುದು ದಾರಿತಪ್ಪಿಸುವ ಸುದ್ದಿಯಾಗಿದೆ. ಕೇವಲ ಹಾಜರಾತಿ ಇಲ್ಲದ ದಿನದ ಭತ್ಯೆ ಮಾತ್ರ ಅವರಿಗೆ ಸಿಗುವುದಿಲ್ಲ.
#MP #get #salaries #cut #arrive #late #factcheck #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಕಾಂಗ್ರೆಸ್ ಪದ್ಧತಿಯಂತೆ ಉಮೇಶ್ ಮೇಟಿ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ: ಸಿದ್ದರಾಮಯ್ಯ
ಬಾಗಲಕೋಟೆ: ಹೆಚ್.ವೈ.ಮೇಟಿ ಅವರ ನಾಲ್ವರೂ ಮಕ್ಕಳು ಟಿಕೆಟ್ ಕೇಳಿದ್ದರು. ಆದರೆ, ಯಾರಿಗೇ ಕೊಟ್ಟರೂ ಒಟ್ಟಿಗೆ ಸೇರಿ ಕೆಲಸ ಮಾಡುವ ಭರವಸೆ ನೀಡಿದ್ದರು. ಕಾಂಗ್ರೆಸ್ ಪದ್ಧತಿಯಂತೆ ಉಮೇಶ್ ಮೇಟಿ ಅವರಿಗೆ ಟಿಕೆಟ್ ಕೊಟ್ಟಿದ್ದೇವೆ. ಆದ್ದರಿಂದ ಇವರನ್ನು ಬೆಂಬಲಿಸಿ, ಗೆಲ್ಲಿಸಿ ಕಳುಹಿಸಿ ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಆಲಮಟ್ಟಿ ವಿಚಾರದಲ್ಲಿ ಜನವಿರೋಧಿ ನಿಲುವು ಹೊಂದಿದೆ. ಹದಿಮೂರು ವರ್ಷಗಳಿಂದ ಗೆಜೆಟ್ ನೋಟಿಫಿಕೇಶನ್ ಕೂಡ ಮಾಡಲಿಲ್ಲ. ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗಲೂ ಭೂ ಪರಿಹಾರ ಘೋಷಿಸಿದರೂ ಹಣ ನೀಡಲಿಲ್ಲ ಎಂದು ದೂರಿದರು.
ನಾನು ಮುಖ್ಯಮಂತ್ರಿಯಾಗಿ ಎಕರೆ ನೀರಾವರಿ ಜಮೀನಿಗೆ 40 ಲಕ್ಷ, ಒಣ ಭೂಮಿಗೆ 30 ಲಕ್ಷ ರೂ. ಪರಿಹಾರ ಕೊಡುವ ತೀರ್ಮಾನ ಮಾಡಿ ಕೆಲಸ ಪ್ರಾರಂಭ ಮಾಡಿದ್ದು, ಮೂರು ವರ್ಷದಲ್ಲಿ ಪರಿಹಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಎಚ್.ವೈ.ಮೇಟಿಯವರ ಒತ್ತಾಯದಂತೆ ಬಾಗಲಕೋಟೆಗೆ ಮೆಡಿಕಲ್ ಕಾಲೇಜಿನ ಶಂಕುಸ್ಥಾಪನೆ ಮಾಡಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮತ್ತು ಟ್ರಾಮಾ ಸೆಂಟರನ್ನೂ ನಾವು ಮಾಡುತ್ತೇವೆ. ನುಡಿದಂತೆ ಕೆಲಸ ಮಾಡುವ ಸರ್ಕಾರ ನಮ್ಮದು ಮಾತ್ರ ಎಂದರು.
ಬಿಜೆಪಿಯವರು ನುಡಿದಂತೆ ನಡೆಯಲಿಲ್ಲ. ಒಂದೇ ಒಂದು ರೂಪಾಯಿ ರೈತರ ಸಾಲ ಮನ್ನಾ ಮಾಡಲಿಲ್ಲ. ಕೋವಿಡ್ ನಿಂದ ಬಳಲಿದ್ದ ರಾಜ್ಯದ ಜನತೆಗೆ ಅನುಕೂಲ ಮಾಡಿಕೊಡಲು ಐದು ಗ್ಯಾರಂಟಿಗಳನ್ನು ತಂದು ಜನರಿಗೆ ನೆರವಾಗಿದ್ದು ನಮ್ಮ ಸರ್ಕಾರ. ಕೇಂದ್ರದ ಬಿಜೆಪಿ ಸರ್ಕಾರ ಕಬ್ಬು ಬೆಳೆಗೆ ರೈತರ ಬೇಡಿಕೆಯಷ್ಟು ಬೆಂಬಲ ಬೆಲೆ ನೀಡದಿದ್ದಾಗ ನಾನು ರೈತ ಸಂಘಟನೆಗಳು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ 200 ರೂ. ಹೆಚ್ಚು ಮಾಡಿದೆ ಎಂದರು.
ಎಚ್.ವೈ.ಮೇಟಿಯವರು ಜನರ ಕೈಗೆ ಸಿಗುತ್ತಿದ್ದರು. ಅಹಿಂದ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದರು. ಆದರೆ ಅಧಿಕಾರದಲ್ಲಿದ್ದಾಗ ಜನರಿಗೆ ಸ್ಪಂದಿಸದೆ, ಈಗ ನಮ್ಮ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಮತ ಕೇಳುವ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.
ನಾವು ಪ್ರತೀ ವರ್ಷ 52 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಜೇಬಿಗೆ ಹಾಕುತ್ತಲೇ, ಅಭಿವೃದ್ಧಿ ಕೆಲಸವನ್ನೂ ಮಾಡುತ್ತಿದ್ದೇವೆ. ಬಿಜೆಪಿಯವರು ಕಳ್ಳೆತ್ತುಗಳು. ಗೇಯುವ ಎತ್ತಿಗೆ ತಾನೆ ಮೇವು ಹಾಕೋದು, ಹಾಗೆಯೇ ಕೆಲಸ ಮಾಡಿದ ನಮಗೆ ಕೂಲಿ ಕೊಡಿ. ಎಚ್.ವೈ.ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಮೇಶ್ ಮೇಟಿ ಅವರನ್ನು ಗೆಲ್ಲಿಸಲೇಬೇಕು ಎಂದರು.
#given #ticket #UmeshMeti #Congress #tradition #Siddaramaiah #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಏಪ್ರಿಲ್ 1 ರಿಂದ ಸ್ವಯಂ ಗಣತಿ ಪ್ರಕ್ರಿಯೆ ಆರಂಭ
ಭಾರತ ಜನಗಣತಿ-2027ಗೆ ಸಹಕರಿಸಲು ಜಿಲ್ಲಾಧಿಕಾರಿ ಮನವಿ
ಚಿತ್ರದುರ್ಗ: ಭಾರತ ಜನಗಣತಿ-2027ರ ಅಂಗವಾಗಿ ಸಾರ್ವಜನಿಕರು ತಾವಾಗಿಯೇ ಮಾಹಿತಿ ನೀಡುವ “ಸ್ವಯಂ ಗಣತಿ” ಪ್ರಕ್ರಿಯೆಯು 2026ರ ಏಪ್ರಿಲ್ 1 ರಿಂದ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಸಾರ್ವಜನಿಕರು 2026ರ ಏಪ್ರಿಲ್ 01 ರಿಂದ 15 ರವರೆಗೆ ಇಲಾಖೆಯ ವೆಬ್ಸೈಟ್ www.se.census.gov.in ಗೆ ಭೇಟಿ ನೀಡಿ ತಮ್ಮ ಕುಟುಂಬದ ವಿವರಗಳನ್ನು ಆನ್ಲೈನ್ ಪೋರ್ಟಲ್ ಮೂಲಕ ಭರ್ತಿ ಮಾಡಬಹುದು. ಮಾಹಿತಿ ಸಲ್ಲಿಸಿದ ನಂತರ ಲಭ್ಯವಾಗುವ ರೆಫರೆನ್ಸ್ ಐಡಿ (Reference ID) ಅನ್ನು ಸಾರ್ವಜನಿಕರು ಸುರಕ್ಷಿತವಾಗಿಟ್ಟುಕೊಳ್ಳಬೇಕು.
ಬಳಿಕ 2026ರ ಏಪ್ರಿಲ್ 16 ರಿಂದ ಮೇ 15 ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಯ ಸಮಯದಲ್ಲಿ, ಮೌಲ್ಯೀಕರಣಕ್ಕಾಗಿ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಈ ರೆಫರೆನ್ಸ್ ಐಡಿ ಅನ್ನು ನೀಡಿ ಗಣತಿ ಕಾರ್ಯದಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮನವಿ ಮಾಡಿದ್ದಾರೆ.
#Self #enumeration #process #begins #April #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಧಾರವಾಡ ಜಿಲ್ಲೆಯಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ
ಧಾರವಾಡ: ಭಾರತ ಚುನಾವಣಾ ಆಯೋಗ ಹಾಗೂ ಮುಖ್ಯ ಚುನಾವಣಾಧಿಕಾರಿಗಳವರು ಪತ್ರದಲ್ಲಿ ನೀಡಿದ ನಿರ್ದೇಶನದನ್ವಯ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಜರುಗಿಸುವ ಕುರಿತು ಪೂರ್ವ ಸಿದ್ಧತೆಗಳ ಅಂಗವಾಗಿ 2025 ರ ಮತದಾರರ ಯಾದಿಯಲ್ಲಿ ನೋಂದಣಿಯಾದ ಮತದಾರರನ್ನು 2002 ರ ಮತದಾರರ ಪಟ್ಟಿಗೆ ತಾಳೆ ಮಾಡುವ (Mapping, Progeny and Mapping including Progeny) ಕಾರ್ಯವನ್ನು ಕೈಗೊಳ್ಳಲಾಗಿರುತ್ತದೆ.
ಪ್ರಸ್ತುತ ಜಿಲ್ಲೆಯ 69-ನವಲಗುಂದ, 70-ಕುಂದಗೋಳ, 71-ಧಾರವಾಡ, 72-ಹುಬ್ಬಳ್ಳಿ-ಧಾರವಾಡ (ಪೂರ್ವ), 73-ಹುಬ್ಬಳ್ಳಿ-ಧಾರವಾಡ (ಕೇಂದ್ರ), 74-ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಮತ್ತು 75-ಕಲಘಟಗಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಸನ್ 2025 ನೇ ಸಾಲಿನ ಮತದಾರರ ಪಟ್ಟಿಯಲ್ಲಿ 39 ಹಾಗೂ 39 ವರ್ಷಕ್ಕಿಂತ ಅಧಿಕ ವಯಸ್ಸಿನ ಮತದಾರರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು (ಉದಾ: ಮಗ, ಮಗಳು ಹಾಗೂ ಮೊಮ್ಮಕ್ಕಳು) ಸನ್ 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್, ಪ್ರೊಜಿನಿ ಮತ್ತು ಮ್ಯಾಪಿಂಗ್ ಸೇರಿದಂತೆ ಪ್ರೊಜಿನಿ (Mapping, Progeny and Mapping including Progeny) ಮಾಡುವ ಕಾರ್ಯವು ಪ್ರಗತಿಯಲ್ಲಿ ಇರುತ್ತದೆ. ಪ್ರಸ್ತುತ ಮಾರ್ಚ 24, 2026 ರವರೆಗೆ 69-ನವಲಗುಂದ ಶೇ. 92.98 ರಷ್ಟು, 70-ಕುಂದಗೋಳ ಶೇ. 87.57 ರಷ್ಟು, 71-ಧಾರವಾಡ ಶೇ. 77.57, 72-ಹುಬ್ಬಳ್ಳಿ-ಧಾರವಾಡ (ಪೂರ್ವ) ಶೇ. 63.31 ರಷ್ಟು, 73-ಹುಬ್ಬಳ್ಳಿ-ಧಾರವಾಡ (ಕೇಂದ್ರ) ಶೇ. 63.59 ರಷ್ಟು, 74-ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಶೇ. 62.11 ರಷ್ಟು, 75-ಕಲಘಟಗಿ ಶೇ. 90.08 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.
2025 ನೇ ಸಾಲಿನ ಮತದಾರರ ಪಟ್ಟಿಯಲ್ಲಿ 39 ಹಾಗೂ 39 ವರ್ಷಕ್ಕಿಂತ ಅಧಿಕ ವಯಸ್ಸಿನ ಮತದಾರರು ಹಾಗೂ ಅವರ ಕುಟುಂಬ ಸದಸ್ಯರು (ಉದಾ: ಮಗ, ಮಗಳು ಹಾಗೂ ಮೊಮ್ಮಕ್ಕಳು) ಸನ್ 2002ರ ಮತದಾರರ ಪಟ್ಟಿಗೆ Mapping, Progeny and Mapping including Progeny ಅಂತಹ ಮತದಾರರಿಂದ ಪೂರಕ ದಾಖಲೆಗಳನ್ನು ಸಂಗ್ರಹಿಸದೇ ನೇರವಾಗಿ ಹೊಸ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಬಹುದಾಗಿದೆ. ತಪ್ಪಿದಲ್ಲಿ ಸಾರ್ವಜನಿಕರು ವಿಶೇಷ ಸಮಗ್ರ ಪರಿಷ್ಕರಣೆಯ ಸಮಯದಲ್ಲಿ, ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಪೂರಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಆದ ಕಾರಣ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ Mapping, Progeny and Mapping including Progeny ಕಾರ್ಯದಲ್ಲಿ ಶೇ.95 ಕ್ಕಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸುವುದು ಅತೀ ಅವಶ್ಯವಿರುತ್ತದೆ. ಕಾರಣ, ಜಿಲ್ಲೆಯ ಸಮಸ್ತ ನಾಗರಿಕರು, ಸಾರ್ವಜನಿಕರು ಮತ್ತು ಮತದಾರರು, ತಮ್ಮ ಮನೆಗಳಿಗೆ ಭೇಟಿ ನೀಡುವ ಮತಗಟ್ಟೆ ಮಟ್ಟದ ಅಧಿಕಾರಿ ಹಾಗೂ ಮೇಲ್ವಿಚಾರಕರುಗಳಿಗೆ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಸೂಕ್ತ ಮಾಹಿತಿಯನ್ನು ನೀಡಿ ಸಹಕರಿಸಬೇಕು.
ಅಲ್ಲದೇ, ತಮ್ಮ ಮತಗಟ್ಟೆಗೆ ಸಂಬಂಧಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳ ಹೆಸರು, ದೂರವಾಣಿ ಸಂಖ್ಯೆಯ ವಿವರಗಳನ್ನು ಚುನಾವಣಾ ಆಯೋಗದ ಅಧಿಕೃತ ಜಾಲತಾಣ https://ceo.karnataka.gov.in/en ನೇದ್ದರಲ್ಲಿ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣಾ ಶಿರಸ್ತೇದಾರ ಸುನೀಲ ಚವಡಣ್ಣನವರ ಅವರ ದೂರವಾಣಿ ಸಂಖ್ಯೆ: 95919 83598 ನೇದ್ದಕ್ಕೆ ಕೆಲಸದ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 01 ಗಂಟೆಯವರೆಗೆ ಸಂಪರ್ಕಿಸಬಹುದು.
#SIR #voters #Dharwad #district #malgudiexpress #malgudinews #news #TopNews









![📜ಪ್ರಚಲಿತ ವಿದ್ಯಮಾನ📜 - ಏಪ್ರಿಲ್-] ಮೂರ್ಖರ ದಿನ ಎಂದು ಕರೆಯುವವರೇ ಶತಮೂರ್ಖರು: Rule 3 BANK 0 ಸುದ್ರಿ 8 ಯರಿಯಲ್ಲಿ್ Soqa Please subscribe to Malgudi Express YouTube and Website EXPRESS ಏಪ್ರಿಲ್-] ಮೂರ್ಖರ ದಿನ ಎಂದು ಕರೆಯುವವರೇ ಶತಮೂರ್ಖರು: Rule 3 BANK 0 ಸುದ್ರಿ 8 ಯರಿಯಲ್ಲಿ್ Soqa Please subscribe to Malgudi Express YouTube and Website EXPRESS - ShareChat 📜ಪ್ರಚಲಿತ ವಿದ್ಯಮಾನ📜 - ಏಪ್ರಿಲ್-] ಮೂರ್ಖರ ದಿನ ಎಂದು ಕರೆಯುವವರೇ ಶತಮೂರ್ಖರು: Rule 3 BANK 0 ಸುದ್ರಿ 8 ಯರಿಯಲ್ಲಿ್ Soqa Please subscribe to Malgudi Express YouTube and Website EXPRESS ಏಪ್ರಿಲ್-] ಮೂರ್ಖರ ದಿನ ಎಂದು ಕರೆಯುವವರೇ ಶತಮೂರ್ಖರು: Rule 3 BANK 0 ಸುದ್ರಿ 8 ಯರಿಯಲ್ಲಿ್ Soqa Please subscribe to Malgudi Express YouTube and Website EXPRESS - ShareChat](https://cdn4.sharechat.com/bd5223f_s1w/compressed_gm_40_img_789703_2ea57946_1775014715889_sc.jpg?tenant=sc&referrer=user-profile-service%2FrequestType50&f=889_sc.jpg)



