Malgudi Express
ShareChat
click to see wallet page
@news007
news007
Malgudi Express
@news007
Malgudi Express official Page
#📜ಪ್ರಚಲಿತ ವಿದ್ಯಮಾನ📜 ಕನಿಷ್ಠ ಸರಿಯಾಗಿ ಗುಂಡಿ ಮುಚ್ಚೋಕೂ ಕಷ್ಟ ಅಂದ್ರೆ ಹೇಗೆ?: ಕೃಷ್ಣ ಬೈರೇಗೌಡ #BREAKING #malgudiexpress #malgudinews #news #TopNews | Subscribe | Comment | Like | Share |
📜ಪ್ರಚಲಿತ ವಿದ್ಯಮಾನ📜 - ShareChat
01:51
#📜ಪ್ರಚಲಿತ ವಿದ್ಯಮಾನ📜 RSSಗೆ ಗಲಿಬಿಲಿಯಾದರೆ ಬಿಜೆಪಿ ಬುಸುಗುಡುತ್ತೆ: ಪ್ರಿಯಾಂಕ್ ಖರ್ಗೆ ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಭಾರತೀಯ ಜನತಾ ಪಾರ್ಟಿ (BJP) ನಡುವಿನ ಸೈದ್ಧಾಂತಿಕ ಹಾಗೂ ರಾಜಕೀಯ ಸಂಬಂಧವನ್ನು ಅತ್ಯಂತ ತೀಕ್ಷ್ಣವಾದ ರೂಪಕಗಳ ಮೂಲಕ ಪ್ರಶ್ನಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಅವರು ಹಂಚಿಕೊಂಡಿರುವ ಚಿತ್ರದಲ್ಲಿ ಕೇಸರಿ ಹಿನ್ನೆಲೆಯಲ್ಲಿ ಇಂಗ್ಲಿಷ್ ಅಕ್ಷರ 'R' ಅನ್ನು ಹಾವಿನ ಆಕಾರದಲ್ಲಿ ಬಿಂಬಿಸಲಾಗಿದ್ದು, "RSSಗೆ ಗಲಿಬಿಲಿಯಾದರೆ ಬಿಜೆಪಿ ಬುಸುಗುಡುತ್ತೆ" ಎಂಬ ಬರಹವಿದೆ. ಈ ಪೋಸ್ಟರ್ ಮೂಲಕ ಆರೆಸ್ಸೆಸ್ ಮತ್ತು ಬಿಜೆಪಿಯ ಒಳಸಂಬಂಧವನ್ನು ಅವರು ಕಟುವಾಗಿ ಟೀಕಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ತಮ್ಮ ಪೋಸ್ಟ್‌ನಲ್ಲಿ ಬಿಜೆಪಿಯ ರಾಜಕೀಯ ನಡವಳಿಕೆಯನ್ನು ಪ್ರಶ್ನಿಸುತ್ತಾ ಪ್ರಮುಖ ಐದು ಸವಾಲುಗಳನ್ನು ಮುನ್ನೆಲೆಗೆ ತಂದಿದ್ದಾರೆ: ದೇಶಪ್ರೇಮದ ಪಾಠದ ಪ್ರಶ್ನೆ: ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡದ ಸಂಘಟನೆ, ಇಂದು ರಾಷ್ಟ್ರಕ್ಕೆ ದೇಶಪ್ರೇಮದ ಪಾಠ ಹೇಳುವುದೇಕೆ? ಎಂದು ಪ್ರಶ್ನಿಸಿದಾಗಲೆಲ್ಲಾ ಬಿಜೆಪಿ ತನ್ನ ಸ್ಥಿಮಿತತೆ ಕಳೆದುಕೊಂಡು ಸಿಟ್ಟಿನಿಂದ ಬುಸುಗುಡುತ್ತದೆ ಎಂದು ಖರ್ಗೆ ಲೇವಡಿ ಮಾಡಿದ್ದಾರೆ. ರಾಷ್ಟ್ರಧ್ವಜದ ವಿವಾದ: ನಾಗಪುರದಲ್ಲಿರುವ ಆರೆಸ್ಸೆಸ್ ಪ್ರಧಾನ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಬರೋಬ್ಬರಿ 52 ವರ್ಷಗಳು ಏಕೆ ಬೇಕಾಯಿತು ಎಂಬ ಹಳೆಯ ಸೈದ್ಧಾಂತಿಕ ಪ್ರಶ್ನೆಯನ್ನು ಅವರು ಮತ್ತೆ ಕೆದಕಿದ್ದಾರೆ. ಸಂವಿಧಾನದ ಮೇಲಿನ ಬದ್ಧತೆ: ಅವರು ನಿಜಕ್ಕೂ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಬದ್ಧರಾಗಿದ್ದಾರೋ ಅಥವಾ ತಾವೇ ಬರೆಯಬೇಕೆಂದು ಬಯಸುವ ಸಂವಿಧಾನಕ್ಕೆ ಒಲವು ಹೊಂದಿದ್ದಾರೋ ಎಂದು ಕೇಳಿದರೆ ಬಿಜೆಪಿ ಆಕ್ರೋಶಗೊಳ್ಳುತ್ತದೆ ಎಂದಿದ್ದಾರೆ. ನೋಂದಣಿ ಮತ್ತು ತೆರಿಗೆ ವಿನಾಯಿತಿ: ಆರೆಸ್ಸೆಸ್ ಸಂಘಟನೆಯು ತನ್ನ ಅಧಿಕೃತ ನೋಂದಣಿ ಮಾಡಿಕೊಳ್ಳುವುದನ್ನು ಮತ್ತು ಕಾನೂನುಬದ್ಧವಾಗಿ ತೆರಿಗೆ ಪಾವತಿಸುವುದನ್ನು ಏಕೆ ನಿರಾಕರಿಸುತ್ತದೆ ಎಂಬ ಆಡಳಿತಾತ್ಮಕ ಪ್ರಶ್ನೆಗಳನ್ನು ಅವರು ಎತ್ತಿದ್ದಾರೆ. ಉಪದೇಶ ವರ್ಸಸ್ ಆಚರಣೆ: ಆರೆಸ್ಸೆಸ್ ಇತರರಿಗೆ ನೀಡುವ ಉಪದೇಶಗಳನ್ನು ಮೊದಲು ತಾನು ಅನುಸರಿಸಲಿ ಎಂದು ಕೇಳಿದರೆ ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. -ಹಾವಿನ ಬಾಲ ಯಾರ ಕೈಯಲ್ಲಿದೆ?: ಕೊನೆಯಲ್ಲಿ ಬಿಜೆಪಿಯನ್ನು ಕೇವಲ ಆರೆಸ್ಸೆಸ್‌ನ ಒಂದು ರಾಜಕೀಯ 'ಸಾಧನ' ಎಂದು ಕರೆದಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿ ಎಂದಿಗೂ ಆರ್‌ಎಸ್‌ಎಸ್‌ಗೆ ಕೇವಲ ಮಿತ್ರನಾಗಿರಲಿಲ್ಲ; ಅದು ಎಂದಿಗೂ ಅದರ ಸಾಧನವಾಗಿಯೇ ಇದೆ. ಪ್ರತಿ ಬಾರಿ ಬಿಜೆಪಿ ಬುಸುಗುಡುವಾಗಲೂ, ಹಾವಿನ ಬಾಲ ಯಾರ ಕೈಯಲ್ಲಿದೆ ಎಂಬುದು ಜಗತ್ತಿಗೆ ಖಚಿತವಾಗುತ್ತದೆ ಎಂದು ಬರೆಯುವ ಮೂಲಕ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ. ಚಿತ್ರದಲ್ಲಿರುವ ಹಾವಿನ ಚಿತ್ರಣ ಮತ್ತು ಸಚಿವರ ಸಾಲುಗಳು ಕೇವಲ ರಾಜಕೀಯ ವಿರೋಧವಲ್ಲ, ಬದಲಿಗೆ ಆಡಳಿತ ಪಕ್ಷದ ಸೈದ್ಧಾಂತಿಕ ಬೇರುಗಳನ್ನು ನೇರವಾಗಿ ಪ್ರಶ್ನಿಸುವ ಸಾಮಾಜಿಕ ಜಾಲತಾಣದ ಹೊಸ ರಾಜಕೀಯ ಸಮರಕ್ಕೆ ನಾಂದಿ ಹಾಡಿದೆ. #RSS gets #trouble #BJP #angry #PriyankKharge #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - 0 నoలv EXPRESS RSSಗೆ ಗಲಿಬಿಲಿಯಾದರೆ Rssn ಗಲಬಲಿಯಾದರ' ಬಿಜೆಪಿ ಬುಸುಗುಡುತ್ತೆ: బిజిచి ಬುಸುಗುಟ್ಟುತ್ತ ಪ್ರಿಯಾಂಕ್ ಖರ್ಗೆ HTTPS:IIMALGUDIEXPRESS.CO.INI 0 నoలv EXPRESS RSSಗೆ ಗಲಿಬಿಲಿಯಾದರೆ Rssn ಗಲಬಲಿಯಾದರ' ಬಿಜೆಪಿ ಬುಸುಗುಡುತ್ತೆ: బిజిచి ಬುಸುಗುಟ್ಟುತ್ತ ಪ್ರಿಯಾಂಕ್ ಖರ್ಗೆ HTTPS:IIMALGUDIEXPRESS.CO.INI - ShareChat
#📜ಪ್ರಚಲಿತ ವಿದ್ಯಮಾನ📜 क्या हिंदुस्तान का पासपोर्ट ग़ैर हिंदुस्तानियों को भी दिया जाता है?: Supriya Srinate #BREAKING #malgudiexpress #malgudinews #news #TopNews | Subscribe | Comment | Like | Share |
📜ಪ್ರಚಲಿತ ವಿದ್ಯಮಾನ📜 - ShareChat
00:31
#📜ಪ್ರಚಲಿತ ವಿದ್ಯಮಾನ📜 ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಮೇವು ಸಂಗ್ರಹಣೆ ಕಡ್ಡಾಯ ಮಳೆ ಕೊರತೆ ಹಿನ್ನೆಲೆ ದಾವಣಗೆರೆ: ಜಿಲ್ಲೆಯಲ್ಲಿ ಕೃತಿಕಾ ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಶೇ. 100ರಷ್ಟು ಬರಗಾಲ ಆವರಿಸುವ ಆತಂಕ ಎದುರಾಗಿದ್ದು, ರೈತರು ಯಾವುದೇ ಜಮೀನನ್ನು ಪಾಳು ಬಿಡದಂತೆ ಕಡ್ಡಾಯವಾಗಿ ಬರ ನಿರೋಧಕ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕು, ಕುಡಿಯುವ ನೀರು, ಉದ್ಯೋಗ ಸೃಷ್ಠಿ, ಮೇವು ಸಂಗ್ರಹಣೆಗೆ ಆದ್ಯತೆ ನೀಡಲು ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬರಪರಿಸ್ಥಿತಿ ನಿರ್ವಹಣೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ತಹಶೀಲ್ದಾರರು, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ವಿಸ್ತರಣಾಧಿಕಾರಿಗಳು, ಪಿಡಿಒ ಹಾಗೂ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಮಟ್ಟದಲ್ಲಿ ಕಾರ್ಯಪ್ರವೃತ್ತರಾಗಿರಬೇಕು ಮತ್ತು ಪ್ರತಿ 15 ದಿನಗಳಿಗೊಮ್ಮೆ ರೈತರೊಂದಿಗೆ ಸಭೆ ನಡೆಸಿ ನೀರು, ಮೇವು, ರಸಗೊಬ್ಬರ ಹಾಗೂ ಬೆಳೆಗಳ ಬಗ್ಗೆ ಚರ್ಚಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ಮಳೆ ಮಾಪನ ಕೇಂದ್ರಗಳನ್ನು ವಿ.ಎ ಮತ್ತು ಆರ್.ಐಗಳು ಖುದ್ದಾಗಿ ಪರಿಶೀಲಿಸಬೇಕು. ತಹಶೀಲ್ದಾರರು ಕನಿಷ್ಠ 5 ಕೇಂದ್ರಗಳಿಗಾದರೂ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು. ರೈತರ ಮನವೊಲಿಸಿ ನವಧಾನ್ಯಗಳು, ಊರಲೆ, ನವಣೆ, ಶೇಂಗಾ, ದ್ವಿದಳ ಧಾನ್ಯಗಳು, ಕಡಲೇಕಾಯಿ, ತೊಗರಿ, ಸೋಯಾ ಹಾಗೂ ಸಜ್ಜೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಆಗಸ್ಟ್ ಅಥವಾ ಅಕ್ಟೋಬರ್ ಅಂತ್ಯದೊಳಗೆ ಹುರುಳಿ ಬೆಳೆಯನ್ನು ಬಿತ್ತನೆ ಮಾಡಲು ಅವಕಾಶವಿದ್ದು, ಜಮೀನನ್ನು ಖಾಲಿ ಬಿಡದಂತೆ ನೋಡಿಕೊಳ್ಳಬೇಕು ಮತ್ತು ಅತಿ ಹೆಚ್ಚು ನೀರು ಬೇಡುವ ಬಾಳೆ, ಅಡಿಕೆ ಮುಂತಾದ ಹೊಸ ತೋಟಗಾರಿಕಾ ಬೆಳೆಗಳ ನಾಟಿಯನ್ನು ಮುಂದೂಡುವಂತೆ ರೈತರಲ್ಲಿ ಮನವೊಲಿಸಬೇಕು ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಬೆಳೆ ವಿಮೆ (Crop Insurance) ಪ್ರಕ್ರಿಯೆಯನ್ನು ಅತ್ಯಂತ ಶೀಘ್ರವಾಗಿ ಜಾರಿಗೊಳಿಸಬೇಕು. ನರೇಗಾ ಹಾಗೂ ಕೃಷಿ ಇಲಾಖೆಯಡಿ ನಿರ್ಮಿಸಲಾದ ಕೃಷಿ ಹೊಂಡ ಮತ್ತು ಚೆಕ್ ಡ್ಯಾಂಗಳಲ್ಲಿನ ಕಳೆ ಹಾಗೂ ಗಿಡಗಂಟೆಗಳನ್ನು ತೆರವುಗೊಳಿಸಿ, ಹೂಳೆತ್ತಿ ಮಳೆನೀರನ್ನು ಹಿಡಿದಿಡಲು ಸಜ್ಜುಗೊಳಿಸಬೇಕು ಎಂದರು. ಜಿಲ್ಲೆಯಲ್ಲಿ 63 ವಾರಗಳಿಗಾಗುವಷ್ಟು ಮೇವು ಇದ್ದು ಮೇವು ಕೊರತೆ ಇಲ್ಲ, ಆರ್.ಐ, ವಿ.ಎ ಹಾಗೂ ಪಿಡಿಒಗಳು ಹೆಚ್ಚು ಮೇವಿರುವ ರೈತರನ್ನು ಮನವೊಲಿಸಿ, ಪ್ರತಿ ಕಡೆಯಿಂದ ಒಂದೊಂದು ಹೊರೆ ಮೇವನ್ನು ಸಂಗ್ರಹಿಸಿ ಸುರಕ್ಷಿತವಾಗಿ ದಾಸ್ತಾನು ಮಾಡಬೇಕು. ಜಿಲ್ಲೆಯ ಮೇವು ಬೇರೆ ಜಿಲ್ಲೆಗಳಿಗೆ ರಫ್ತಾಗದಂತೆ ಕಟ್ಟುನಿಟ್ಟಿನ ಕಣ್ಗಾವಲು ಇಡಬೇಕು ಎಂದರು. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲಿ, ರಸಗೊಬ್ಬರ ದಾಸ್ತಾನನ್ನು ಪ್ರತಿದಿನ ಪರಿಶೀಲಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು ಹಾಗೂ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗದಂತೆ ಕ್ರಮವಹಿಸಬೇಕು ಮತ್ತು ಅಂಗಡಿಗಳ ಪಿಒಎಸ್‌ ಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದರು. ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗದಂತೆ, ಪ್ರತಿ 15 ದಿನಗಳಿಗೊಮ್ಮೆ ಕೊಳವೆಬಾವಿಗಳ ಅಂತರ್ಜಲ ಮಟ್ಟದ ಸ್ಥಿತಿಗತಿಯನ್ನು ಕಡ್ಡಾಯವಾಗಿ ವೈಯಕ್ತಿಕವಾಗಿ ಪರಿಶೀಲಿಸಿ ಜಿಲ್ಲಾಧಿಕಾರಿ ಹಾಗೂ ಸಿಇಒ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ಕಾಲುವೆಗಳಿಗೆ ಸದ್ಯ ನೀರು ಬಿಡದಿರುವ ಕಾರಣ, ಬಾಕಿ ಇರುವ ಎಲ್ಲಾ ದುರಸ್ತಿ ಕಾಮಗಾರಿಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಕಚೇರಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನರೇಗಾ ಯೋಜನೆಯಡಿ ಮನುಷ್ಯ ಶಕ್ತಿಯನ್ನು ಬಳಸಿ ಮಾಡುವ ಹೂಳೆತ್ತುವ ಕಾಮಗಾರಿಗಳನ್ನು ತಕ್ಷಣವೇ ಆರಂಭಿಸಲು ಹಾಗೂ ಯಂತ್ರೋಪಕರಣಗಳ ಅಗತ್ಯವಿರುವ ಕಾಮಗಾರಿಗಳ ವರದಿಯನ್ನು ಪ್ರತ್ಯೇಕವಾಗಿ ಸಲ್ಲಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಲ್ಪಾವಧಿ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಬ್ಯಾಂಕ್‌ಗಳಿಗೆ ಸೂಕ್ತ ನಿರ್ದೇಶನ ನೀಡಬೇಕಿದೆ. ಲೀಡ್ ಬ್ಯಾಂಕ್ ಮ್ಯಾನೇಜರ್ ಎಲ್ಲಾ ಬ್ಯಾಂಕುಗಳ ಸಭೆ ಕರೆದು, ರೈತರಿಗೆ ಕಿರುಸಾಲ ಹಾಗೂ ಕೃಷಿ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಬೇಸಿಗೆಯ ಬಿಸಿ ಮತ್ತು ಹಸಿರು ಹುಲ್ಲು ಇರುವುದರಿಂದ ಹಾವುಗಳ ಕಾಟ ಹೆಚ್ಚಿದ್ದು, ಹಾವು ಕಡಿತ ಔಷಧಿಯನ್ನು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಇಡುವಂತೆ ಕ್ರಮವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು. #Drinking #water #job #creation #fodder #procurement #mandatory #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ నoలv ಸಭಾಂಗ EXPRESS 0 ಮಳೆ ಕೊರತೆ ಹಿನ್ನೆಲೆ: ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಮೇವು ಸಂಗ್ರಹಣೆ ಕಡ್ಡಾಯ [ಲ>y [ HTTPS:IIMALGUDIEXPRESS.CO.IN/ ಶ నoలv ಸಭಾಂಗ EXPRESS 0 ಮಳೆ ಕೊರತೆ ಹಿನ್ನೆಲೆ: ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಮೇವು ಸಂಗ್ರಹಣೆ ಕಡ್ಡಾಯ [ಲ>y [ HTTPS:IIMALGUDIEXPRESS.CO.IN/ - ShareChat
#📜ಪ್ರಚಲಿತ ವಿದ್ಯಮಾನ📜 ಶ್ರೀರಾಮ ದೇಗುಲದಲಿ ಕಳ್ಳತನ, ಚಾನ್ಸೇ ಇಲ್ಲ!!! ಅಂಧಭಕ್ತನ ಸ್ವಗತ - ಏನ್ ಜನಾರ್ರಿ.. ನಮ್ಮೆಲ್ಲರ ಆರಾಧ್ಯದೈವ ಶ್ರೀರಾಮಚಂದ್ರನ ಭವ್ಯವಾದ ರಾಮಮಂದಿರದಲ್ಲಿ ಕೋಟ್ಯಾಂತರ ರೂಪಾಯಿ ಹುಂಡಿ ಹಣ ಹಾಗೂ ಚಿನ್ನದಾಭರಣಗಳು ಕಳುವಾಗಿದ್ದಾವಂತೆ. ಇದನ್ನೆಲ್ಲಾ ನಂಬೋಕೆ ಸಾಧ್ಯಾನಾ? ಶ್ರೀರಾಮಚಂದ್ರನ ಆದೇಶ ಇಲ್ಲದೇ ಜಗತ್ತಿನಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡಲು ಸಾಧ್ಯವಿಲ್ಲಾ.. ಹೀಗಿರುವಾಗ ಆ ದೇವರ ದೇವಸ್ಥಾನದ ಹಣ ದೋಚಲಾಗಿದೆಯಾ? ಸಾಧ್ಯವೇ ಇಲ್ಲಾ.. ಅಸಲಿಗೆ ಆಗಿದ್ದೇನಪಾಂತಂದ್ರೆ.. ಆ ಪಾಪಿ ಪಾಕಿಸ್ಥಾನದವರು ಮಾರುವೇಷದಲ್ಲಿ ಬಂದು ಶ್ರೀರಾಮ ದೇಗುಲದಲ್ಲಿ ದರೋಡೆ ಮಾಡಲು ಬಲು ದೊಡ್ಡ ಸಂಚು ರೂಪಿಸಿದ್ರು. ಹಾಗೇನಾದ್ರೂ ಆ ಭಯೋತ್ಪಾದಕರು ದರೋಡೆ ಮಾಡುವಲ್ಲಿ ಯಶಸ್ವಿಯಾಗಿದ್ರೆ ಶ್ರೀರಾಮಚಂದ್ರನ ಹೆಸರಿಗೆ ಕಳಂಕ ಬರುತ್ತಿತ್ತು. ಅದಕ್ಕೆ ನಮ್ಮ ಆದರನೀಯ ಯೋಗಿ ಆದಿತ್ಯನಾಥರು ಒಂದು ಐಡಿಯಾ ಮಾಡಿದರು. ಅದೇನಪಾಂತಂದ್ರೆ ಹುಂಡಿ ಹಣ ಮತ್ತು ಚಿನ್ನವನ್ನು ಶ್ರೀರಾಮ ದೇವಸ್ಥಾನದಲ್ಲಿ ಕೆಲಸ ಮಾಡುವವರ ಮನೆಯಲ್ಲಿ ಜೋಪಾನವಾಗಿ ಇರಿಸಿದರು. ಹೀಗಾಗಿ ಪಾಕಿಸ್ತಾನಿ ಸಾಬಿಗಳ ಲೂಟಿ ಪ್ಲಾನ್ ಪ್ಲಾಪ್ ಆಯ್ತು. ಅಷ್ಟೇ.. ಇಷ್ಟಕ್ಕೆ ಅಯೋದ್ಯಯ ಶ್ರೀರಾಮ ದೇವಸ್ಥಾನದ ನೌಕರರು ಹುಂಡಿ ಹಣ ಲೂಟಿ ಮಾಡಿದ್ದಾರೆ ಎಂದು ವಿರೋಧ ಪಕ್ಷದವರು ಗುಲ್ಲೆಬ್ಬಿಸಿದ್ದಾರೆ. ಇದೆಲ್ಲಾ ಬರೀ ರಾಜಕೀಯ. ಯೋಗಿಯವರ ಮೇಲೆ, ಮೋದಿಯವರ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಹಿಂದೂ ಧರ್ಮದ್ರೋಹಿಗಳು ಮಾಡ್ತಿದ್ದಾರೆ. ಅದನ್ನೆಲ್ಲಾ ಆ ನಮ್ಮ ಶ್ರೀರಾಮ ದೇವರು ನೋಡಿಕೊಳ್ತಾನೆ ಬಿಡಿ. ಹೀಗಾಗಿ ಯಾರೂ ದೇಶದ್ರೋಹಿಗಳ ಮಾತನ್ನು ನಂಬಬಾರದು. ನಂಬಿದ್ದೇ ಆದರೆ ಅದು ಹಿಂದೂ ಹೃದಯ ಸಾಮ್ರಾಟ್ ಮೋದಿಯವರಿಗೆ ಮಾಡಿದ ಅಪಮಾನ. ದೇಶದ್ರೋಹಿಗಳ ಸುಳ್ಳು ಆರೋಪಗಳನ್ನು ಸಮಸ್ತ ಅಂಧಭಕ್ತರು ಖಂಡಿಸಬೇಕು. ಜೈ ಶ್ರೀರಾಂ. - ಶಶಿಕಾಂತ ಯಡಹಳ್ಳಿ #Theft #SriRama #Temple #nochance #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ್ರೀರಾಮ ದೇಗುಲದಲಿ ಕಳ್ಳತನ, ಚಾನ್ಸೇ ಇಲ್ಲವ ಸುದ್ರಿ శ చవసరియోల్ల  EXRRESS Please subscribe to Malgudi Express YouTube and Website ಶ್ರೀರಾಮ ದೇಗುಲದಲಿ ಕಳ್ಳತನ, ಚಾನ್ಸೇ ಇಲ್ಲವ ಸುದ್ರಿ శ చవసరియోల్ల  EXRRESS Please subscribe to Malgudi Express YouTube and Website - ShareChat
#📜ಪ್ರಚಲಿತ ವಿದ್ಯಮಾನ📜 ದೇವರ ಮುಂದೆ ಎಲ್ಲರೂ ಸಮಾನರು: ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಜಯನಗರದಲ್ಲಿ 3,000 ಮಹಿಳೆಯರಿಂದ ಭವ್ಯ ಶ್ರೀ ಲಲಿತಾ ಸಹಸ್ರನಾಮ ಪೂಜೆ! ಬೆಂಗಳೂರು: ಜಾತಿ, ಮತ, ಧರ್ಮದ ಭೇದವಿಲ್ಲ, ದೇವರ ಮುಂದೆ ಎಲ್ಲರೂ ಸಮಾನರು ಎಂದು ಮಂತ್ರಾಲಯ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಸಂದೇಶ ನೀಡಿದ್ದಾರೆ. ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ 4ನೇ ವರ್ಷದ ಶ್ರೀ ಲಲಿತಾ ಸಹಸ್ರನಾಮ ಪೂಜೆ ಮತ್ತು ಮಂತ್ರ ಪಠಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಈ ಮಹಾ ಪೂಜೆಯಲ್ಲಿ ಸುಮಾರು 3,000ಕ್ಕೂ ಹೆಚ್ಚು ಮಹಿಳೆಯರು ಏಕಕಾಲದಲ್ಲಿ ಮಂತ್ರ ಪಠಣೆ ಮಾಡಿದ್ದು ವಿಶೇಷವಾಗಿತ್ತು. ಭಕ್ತಿ ಸಾಗರದಲ್ಲಿ ತೇಲಿದ ಉದ್ಯಾನನಗರಿ: ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು, ಉದ್ಯಾನನಗರಿ ಬೆಂಗಳೂರಿನಲ್ಲಿ ರಕ್ಷಾ ಫೌಂಡೇಷನ್ ಕಳೆದ ನಾಲ್ಕು ವರ್ಷಗಳಿಂದ ಲಲಿತಾ ಸಹಸ್ರನಾಮ ಪೂಜೆಯನ್ನು ಹಾಗೂ 14 ವರ್ಷಗಳಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುವ ಸತ್ಕಾರ್ಯವನ್ನು ಮಾಡುತ್ತಾ ಬಂದಿದೆ. ಈ ಪೂಜೆಯಲ್ಲಿ ಶ್ರೀಮಂತರು, ಮಧ್ಯಮ ವರ್ಗದವರು, ಬಡವರು ಹಾಗೂ ಪೌರಕಾರ್ಮಿಕರು ಎಂಬ ಯಾವುದೇ ಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಪಾಲ್ಗೊಂಡಿರುವುದು ಸನಾತನ ಹಿಂದೂ ಧರ್ಮದ ವೈಶಿಷ್ಟ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಲೋಕಕಂಟಕರ ನಾಶಕ್ಕಾಗಿ ಅವತರಿಸಿದ ಶ್ರೀ ಲಲಿತಾ ದೇವಿಯನ್ನು ಪ್ರತಿನಿತ್ಯ ಸ್ಮರಿಸುವುದರಿಂದ ಕಷ್ಟಗಳು ದೂರವಾಗಲಿವೆ ಎಂದರು. ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಪಾತ್ರ ಅನನ್ಯ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಲಲಿತಾಂಬೆಯ ಆರಾಧನೆ ಹಾಗೂ ಸ್ವಾಮೀಜಿಯವರ ಮಾರ್ಗದರ್ಶನ ಸಮಾಜಕ್ಕೆ ಸದಾ ಸಿಗಲಿ" ಎಂದು ಹಾರೈಸಿದರು. ಶಾಸಕ ಸಿ. ಕೆ. ರಾಮಮೂರ್ತಿ ಮಾತನಾಡಿ, ಶ್ರೀ ಲಲಿತಾ ಸಹಸ್ರನಾಮ ಪಠಿಸುವುದರಿಂದ ಸಕಲ ಸಂಪತ್ತು, ಮಕ್ಕಳಿಗೆ ಜ್ಞಾನವೃದ್ಧಿ ಹಾಗೂ ಗೃಹದೋಷ ನಿವಾರಣೆಯಾಗುತ್ತದೆ ಎಂದು ಪುರಾಣಗಳಲ್ಲೇ ಹೇಳಲಾಗಿದೆ. 'ನಾನು' ಎಂಬ ಅಹಂಕಾರ ಬಿಟ್ಟು, 'ನಾವೆಲ್ಲರೂ' ಒಂದೇ ಎಂದು ಕೂಡಿ ಬಾಳುವುದೇ ನಿಜವಾದ ಜೀವನ. ಈ ಭವ್ಯ ಕಾರ್ಯಕ್ರಮದಿಂದ ಜಯನಗರ ಕ್ಷೇತ್ರ ಹಾಗೂ ನಾಡಿನ ಜನತೆಗೆ ಒಳಿತಾಗಲಿ ಎಂದು ಆಶಿಸಿದರು. ಈ ಧಾರ್ಮಿಕ ಸಮಾರಂಭದಲ್ಲಿ ಆರ್.ಎಸ್.ಎಸ್. ಭಗಿನಿ ಮತ್ತು ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ, ಪ್ರಸಿದ್ಧ ಚಲನಚಿತ್ರ ನಟಿ ಪ್ರಣೀತಾ ಸುಭಾಷ್, ಬಿಬಿಎಂಪಿ ಮಾಜಿ ಸದಸ್ಯೆ ನಾಗರತ್ನ ರಾಮಮೂರ್ತಿ ಉಪಸ್ಥಿತರಿದ್ದರು. ಅಲ್ಲದೆ, ಮಾಜಿ ಪಾಲಿಕೆ ಸದಸ್ಯರುಗಳಾದ ಬಿ. ಸೋಮಶೇಖರ್, ಮಾಲತಿ ಸೋಮಶೇಖರ್, ಚಂದ್ರಶೇಖರ್ ರಾಜು, ಗೋವಿಂದನಾಯ್ಡು, ಜೆಲ್ಲಿ ರಮೇಶ್, ಧನರಾಜ್, ದೀಪಿಕಾ ಮಂಜುನಾಥ್ ರೆಡ್ಡಿ ಸೇರಿದಂತೆ ಜಯನಗರ ವಿಧಾನಸಭಾ ಕ್ಷೇತ್ರದ ಹಲವು ಬಿಜೆಪಿ ಪ್ರಮುಖರು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. #equal before #God #SriSubudendraTheerthaSwamiji #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ నoలv EXPRESS ದೇವರ ಮುಂದೆ ಎಲ್ಲರೂ ಸಮಾನರು: ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ HTTPS:IIMALGUDIEXPRESS.CO.INI ಶ నoలv EXPRESS ದೇವರ ಮುಂದೆ ಎಲ್ಲರೂ ಸಮಾನರು: ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ HTTPS:IIMALGUDIEXPRESS.CO.INI - ShareChat
#📜ಪ್ರಚಲಿತ ವಿದ್ಯಮಾನ📜 ಯಡಿಯೂರಿನಲ್ಲಿ ಅ.ನ.ಕೃ ಕನ್ವೆನ್ಷನ್ ಸೆಂಟರ್, ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣ ಲೋಕಾರ್ಪಣೆ ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕನ್ನಡ ಚಳುವಳಿಗಳ ಪಿತಾಮಹ ಅ.ನ.ಕೃ ಕನ್ವೆನ್ಷನ್ ಸೆಂಟರ್ ಮತ್ತು ಚಲನಚಿತ್ರರಂಗದ ಧ್ರುವತಾರೆ ಡಾ. ಪುನೀತ್ ರಾಜ್‌ಕುಮಾರ್ ಸಭಾಂಗಣವನ್ನು ಭವ್ಯವಾಗಿ ಲೋಕಾರ್ಪಣೆಗೊಳಿಸಲಾಯಿತು. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾದ ಎಲ್.ಎಸ್. ತೇಜಸ್ವಿ ಸೂರ್ಯ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಅ.ನ.ಕೃ ಅವರ ಪುತ್ರ ಗೌತಮ್, ಬಿಜೆಪಿ ನಾಯಕರಾದ ಎನ್.ಆರ್. ರಮೇಶ್ ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ಪೂರ್ಣಿಮಾ ರಮೇಶ್ ಅವರು ಜಂಟಿಯಾಗಿ ದೀಪ ಬೆಳಗಿಸುವ ಮೂಲಕ ಈ ಸುಸಜ್ಜಿತ ಕಟ್ಟಡವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ಬಡವರು ಸಾಲ ಮಾಡಿ ಮದುವೆ ಮಾಡುವ ದಿನಗಳು ದೂರಾಗಲಿ: ಆರ್. ಅಶೋಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಬಡವರು ಸಾಲ ಮಾಡಿ ಮದುವೆ ಸಮಾರಂಭಗಳನ್ನು ಮಾಡಬಾರದು ಎಂಬ ಉದಾತ್ತ ಉದ್ದೇಶದಿಂದ ಈ ಹಳೆಯ ಪಾಲಿಕೆ ಕಟ್ಟಡವನ್ನು ತೆರವುಗೊಳಿಸಿ, ಇಂದು ಭವ್ಯವಾದ ಹಾಗೂ ಸುಸಜ್ಜಿತವಾದ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ. ಅಂತರ್ಜಲ ಹೆಚ್ಚಿಸಲು ಮತ್ತು ಪರಿಸರ ರಕ್ಷಣೆಗಾಗಿ ಈಗಾಗಲೇ ಯಡಿಯೂರು ಕೆರೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು. ನಗರದ ಸಾರ್ವಜನಿಕ ಜವಾಬ್ದಾರಿಯ ಕುರಿತು ಮಾತನಾಡುತ್ತಾ, ಬೆಂಗಳೂರು ಇಂದು ಸಾಕಷ್ಟು ಬದಲಾಗಿದೆ. ರಸ್ತೆ ಮತ್ತು ಕಸದ ಸಮಸ್ಯೆಗೆ ಕೇವಲ ಸರ್ಕಾರವನ್ನೇ ಹೊಣೆ ಮಾಡಲಾಗದು. ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಿದಾಗ ಮಾತ್ರ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕರೆ ನೀಡಿದರು. ಬಿಬಿಎಂಪಿ ಚುನಾವಣೆ ತಕ್ಷಣ ನಡೆಸಿ: ತೇಜಸ್ವಿ ಸೂರ್ಯ ಆಗ್ರಹ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕರ್ನಾಟಕದ ಏಕೀಕರಣದಲ್ಲಿ ಅ.ನ.ಕೃಷ್ಣರಾಯರ ಪಾತ್ರ ಅನನ್ಯವಾದದ್ದು. ಹಾಗೆಯೇ ಡಾ. ಪುನೀತ್ ರಾಜ್‌ಕುಮಾರ್ ಅವರನ್ನು ಇಂದಿಗೂ ಪ್ರತಿ ಮನೆಯಲ್ಲೂ ಸ್ಮರಿಸಲಾಗುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಹವಾನಿಯಂತ್ರಿತ ಕಲ್ಯಾಣ ಮಂಟಪ ಹಾಗೂ ಶಾಲಾ ಕಾರ್ಯಕ್ರಮ, ಚಿತ್ರರಂಗದ ಆಡಿಯೋ-ವಿಡಿಯೋ ಬಿಡುಗಡೆಗೆ ಈ ಸಭಾಂಗಣ ಉಪಯುಕ್ತವಾಗಲಿದೆ ಎಂದರು. ಇದೇ ವೇಳೆ ಬಿಬಿಎಂಪಿ ಚುನಾವಣೆ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಳೆದ 6 ವರ್ಷಗಳಿಂದ ಪಾಲಿಕೆ ಚುನಾವಣೆ ನಡೆದಿಲ್ಲ, ಇದು ಬೆಂಗಳೂರು ಹಾಳಾಗಲು ಪ್ರಮುಖ ಕಾರಣ. ಸರ್ಕಾರ ಕೂಡಲೇ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು. ಬಾಡಿಗೆ ವಿವರ ಮತ್ತು ವಾರ್ಡ್‌ನ ವಿಶೇಷತೆಗಳು: ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್. ರಮೇಶ್ ಅವರು ಈ ಹೈಟೆಕ್ ಸಭಾಂಗಣಗಳ ಬಾಡಿಗೆ ದರ ಹಾಗೂ ಯಡಿಯೂರು ವಾರ್ಡ್‌ನ ಮಾದರಿ ಅಭಿವೃದ್ಧಿಯ ಚಿತ್ರಣವನ್ನು ಹೀಗೆ ಹಂಚಿಕೊಂಡರು: ಸಭಾಂಗಣದ ವಿವರ ನಿಗದಿಪಡಿಸಲಾದ ಬಾಡಿಗೆ ದರ ವಿಶೇಷ ಸೌಲಭ್ಯಗಳು ಅ.ನ.ಕೃ ಕನ್ವೆನ್ಷನ್ ಸೆಂಟರ್ (ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ) ₹ 75,000 ಸಂಪೂರ್ಣ ಹವಾನಿಯಂತ್ರಿತ (AC), ಸುಸಜ್ಜಿತ ಹೈಟೆಕ್ ವ್ಯವಸ್ಥೆ ಡಾ. ಪುನೀತ್ ರಾಜ್‌ಕುಮಾರ್ ಆಡಿಟೋರಿಯಂ ₹ 25,000 ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸೂಕ್ತ ಕಳೆದ 16 ವರ್ಷಗಳಿಂದ ಯಡಿಯೂರು ವಾರ್ಡ್ ಏಷ್ಯಾದಲ್ಲೇ ಅತ್ಯಂತ ಸುಂದರ ವಾರ್ಡ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಇಲ್ಲಿ ಜನನದಿಂದ ಅಂತ್ಯಸಂಸ್ಕಾರದವರೆಗೆ ಬೇಕಾದ ಮಕ್ಕಳ ಆಸ್ಪತ್ರೆ, ಹೈಟೆಕ್ ಶಿಕ್ಷಣ, ಕ್ರೀಡಾಂಗಣ, ವೈದಿಕ ಭವನ ಹಾಗೂ ಹಸಿ ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಮಾದರಿ ವಾರ್ಡ್ ಮಾಡಲಾಗಿದೆ ಎಂದು ಎನ್.ಆರ್. ರಮೇಶ್ ಹೇಳಿದರು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಿ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ಜನಸಾಮಾನ್ಯರ ಅನುಕೂಲಕ್ಕಾಗಿ ಇಷ್ಟು ಸುಂದರ ಹಾಗೂ ಸುಸಜ್ಜಿತ ಕಲ್ಯಾಣ ಮಂಟಪವನ್ನು ನಿರ್ಮಿಸಿ, ಅತ್ಯಂತ ಕಡಿಮೆ ಬಾಡಿಗೆಗೆ ನೀಡುತ್ತಿರುವುದು ಶ್ಲಾಘನೀಯ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಈ ಸುಂದರ ಕಟ್ಟಡದ ನಿರ್ಮಾಣಕ್ಕೆ ಕಾರಣಕರ್ತರಾದ ಎನ್.ಆರ್. ರಮೇಶ್ ಹಾಗೂ ಬಿಬಿಎಂಪಿಗೆ ಧನ್ಯವಾದಗಳು ಎಂದರು. ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಎ.ಹೆಚ್. ಬಸವರಾಜ್, ಸರಳಾ ಮಹೇಶ್, ಗೋವಿಂದರಾಜು ಹಾಗೂ ಸ್ಥಳೀಯ ಮುಖಂಡರು ಮತ್ತು ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು. #ANAKRU #ConventionCenter #PuneethRajkumar #Hall #Inauguration #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶಿ S000 EXPRESS ಯಡಿಯೂರಿನಲ್ಲಿ ಅ.ನ.ಕೃ ಕನ್ವೆನ್ಷನ್ ಸೆಂಟರ್, ಡಾ. వునిా రాజాపమారా ಸಭಾಂಗಣ ಲೋಕಾರ್ಪಣೆ HTTPS:IIMALGUDIEXPRESS.CO.IN/ ಶಿ S000 EXPRESS ಯಡಿಯೂರಿನಲ್ಲಿ ಅ.ನ.ಕೃ ಕನ್ವೆನ್ಷನ್ ಸೆಂಟರ್, ಡಾ. వునిా రాజాపమారా ಸಭಾಂಗಣ ಲೋಕಾರ್ಪಣೆ HTTPS:IIMALGUDIEXPRESS.CO.IN/ - ShareChat
#📜ಪ್ರಚಲಿತ ವಿದ್ಯಮಾನ📜 ಬಿಜೆಪಿಯವರು ಧರ್ಮಸ್ಥಳವನ್ನು ತಮ್ಮ ರಾಜಕಾರಣಕ್ಕೆ ಬಳಸಬಾರದು ದೇಶದ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ವಿಭಜಿಸುತ್ತ ಅಲ್ಲಿಂದ ಚುನಾಯಿತರಾಗಿದ್ದ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಜೊತೆಗೆ ವಿಧಾನಸಭಾ ಸದಸ್ಯರನ್ನು ಯಾವುದೇ ನಾಚಿಕೆ ಇಲ್ಲದೆ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡು, ಸಣ್ಣಪುಟ್ಟ ಪಕ್ಷಗಳನ್ನು ನಿರ್ನಾಮ ಮಾಡುತ್ತಿರುವ, ಬಿಜೆಪಿಯವರಿಗೆ ಕರ್ನಾಟಕದಲ್ಲಿನ ತಮ್ಮ ಪಕ್ಷದ ಆಸೆಬುರುಕ ಮತ್ತು ಸ್ವಾರ್ಥಿಗಳು ಅಡ್ಡ ಮತದಾನ ಮಾಡಿದ್ದಾರೆ ಎನ್ನುವುದು ದೊಡ್ಡದಾದಂತಹ ಘಟನೆಯಾಗಿದೆ. ಇದೇ ರೀತಿಯ ಅಭಿಪ್ರಾಯ ಮಹಾರಾಷ್ಟ್ರದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ನಡೆಸುತ್ತಿರುವ ಪಕ್ಷಾಂತರ ಪರ್ವವೆಂಬ ಪ್ರಜಾಪ್ರಭುತ್ವದ ಕಗ್ಗೊಲೆಯ ಪ್ರಕರಣಗಳಲ್ಲಿ ಬಾಯಿ ಬಿಡಲು ಏನಾಗಿತ್ತು? ಈ ಹಿಂದೆ ಯಡಿಯೂರಪ್ಪನವರು ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ಪ್ರಸ್ತಾಪವನ್ನ ಮಾಡಿ ಅದೊಂದು ದೊಡ್ಡ ಘಟನೆಯಾಯಿತು. ಈಗ ಇವರ ಸುಪುತ್ರ ವಿಜಯೇಂದ್ರ ರವರು ಇದೇ ಹಾದಿಯನ್ನ ಹಿಡಿದು ಅಡ್ಡ ಮತದಾನದ ವಿಚಾರಕ್ಕೆ ಧರ್ಮಸ್ಥಳವನ್ನು ಎಳೆದು ತಂದಿರುವುದು ಸರಿಯಾದಂತಹ ನಿರ್ಧಾರವಲ್ಲ. ಅಡ್ಡ ಮತದಾನ ಮಾಡಿದವರಿಗೆ ಪತ್ತೆಹಚ್ಚಲು ಈಗಾಗಲೇ ವಿಚಾರಣಾ ಸಮಿತಿಯನ್ನು ನೇಮಿಸಿಕೊಂಡಿದ್ದೀರಿ. ಅವರುಗಳು ಕಂಡುಹಿಡಿಯಲು ಆಗದಿದ್ದರೆ ನಿಮ್ಮ ಪಕ್ಷದ ಕಚೇರಿಯ ಮುಂಭಾಗದಲ್ಲಿ ನಿಮ್ಮ ಪಕ್ಷದ ಶಾಸಕರುಗಳಿಗೆ ಅವರ ಹೆಂಡತಿ ಮತ್ತು ಮಕ್ಕಳ ತಲೆಯ ಮೇಲೆ ಕೈ ಇಟ್ಟು ಯಾರಿಗೆ ಮತ ಹಾಕಿದ್ದೇವೆ ಎಂದು ಪ್ರಮಾಣ ಮಾಡಲು ತಿಳಿಸಿ. ಆಗ ಭಯ ಬರುತ್ತದೆ. ಬೇಕಾದರೆ ದೇವರ ಮುಂದೆಯೂ ಸುಳ್ಳು ಹೇಳದಿರಲು ಸಾಧ್ಯವಿಲ್ಲ. ಏನೇ ಆಗಲಿ ಧರ್ಮಸ್ಥಳ ಕೋಟ್ಯಾಂತರ ಜನರ ಭಕ್ತಿಯ, ನಂಬಿಕೆಯ ಕೇಂದ್ರವಾಗಿದೆ. ಇಲ್ಲಿ ರಾಜಕಾರಣಕ್ಕಾಗಿ ದೇವರನ್ನು ಬಳಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕರು ತಮ್ಮ ಈ ನಿರ್ಧಾರದಿಂದ ಹಿಂದೆ ಸರಿದು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ಬೇರೆಬೇರೆ ರಾಜ್ಯದಲ್ಲಿ ನೀವು ಮಾಡುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆಯ ಪ್ರಕರಣಗಳಿಂದಾಗಿ, ನಮ್ಮ ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಬರೇ ಹಾಕಿದ್ದಾರೆ ಎಂದು ತಿಳಿಸುತ್ತಾ, ಅವರುಗಳ ನಡವಳಿಕೆಯನ್ನು ಮತ್ತು ಕುತಂತ್ರದ ಚಾಣಾಕ್ಷತನವೆಂಬ ರಾಜಕಾರಣದ ಹಾದಿಯನ್ನ ಬಿಟ್ಟು, ಸರಿಯಾದ ಮಾರ್ಗದಲ್ಲಿ ಹೋಗಲು ತಿಳಿಸಿ. - ಕೆ ಎಸ್ ನಾಗರಾಜ್, ಬೆಂಗಳೂರು #BJP #Dharmasthala #politics #Vijayendra #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ತಮ್ಮ ಬಿಜಿಪಿಯವರು ಧರ್ಮಸ್ಥಳವನ್ನು  ರಾಜಕಾರಣಕ್ಕೆ ಬಳಸಬಾರದು 3 ಸುದ್ರಿ & చవసరియోల్ల  Soqa Please subscribe to Malgudi Express YouTube and Website EXPRESS ತಮ್ಮ ಬಿಜಿಪಿಯವರು ಧರ್ಮಸ್ಥಳವನ್ನು  ರಾಜಕಾರಣಕ್ಕೆ ಬಳಸಬಾರದು 3 ಸುದ್ರಿ & చవసరియోల్ల  Soqa Please subscribe to Malgudi Express YouTube and Website EXPRESS - ShareChat
#📜ಪ್ರಚಲಿತ ವಿದ್ಯಮಾನ📜 ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಧಿಕಾರ ಅಲ್ಲ ಜವಾಬ್ದಾರಿ: ಬಿ ಕೆ ಹರಿಪ್ರಸಾದ್ ಬೆಂಗಳೂರು: ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಇಂದು ಮಹತ್ವಾಕಾಂಕ್ಷೆಯ ದಿನ, ಮಹತ್ವಪೂರ್ಣವಾದ ದಿನ. ಕೆಪಿಸಿಸಿ ಅಧ್ಯಕ್ಷನಾಗಿರುವುದು ಇದು ಅಧಿಕಾರ ಅಲ್ಲ ಜವಾಬ್ದಾರಿ ಅಂತ ಭಾವಿಸಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡು, ಅರಮನೆ ಮೈದಾನದಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 141 ವರ್ಷ ಈ ದೇಶದ ಸೇವೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷವನ್ನು ರಾಜ್ಯಾದ್ಯಂತ ಗಟ್ಟಿಗೊಳಿಸುವ, ಸಂಘಟಿಸುವ ಅವಕಾಶವಿದು. ಇದಕ್ಕಾಗಿ ನನ್ನ ಅಚ್ಚುಮೆಚ್ಚಿನ ನಾಯಕಿ ಸೋನಿಯಾಗಾಂಧಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ನೆಚ್ಚಿನ ನಾಯಕರಾದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ರಾಜ್ಯದ ಉಸ್ತುವಾರಿ ಸುರ್ಜೇವಾಲಾ ಅವರುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಈ ದೇಶ ಗುಲಾಮಗಿರಿಯಲ್ಲಿ ನರಳುತ್ತಿದ್ದಾಗ ಜನರನ್ನು ಸಂಘಟಿಸಿ ಎಲ್ಲರನ್ನು ಸಮಾನರು ಎಂದು ಬೇಧವಿಲ್ಲದೆ ನಿರಂತರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸ್ವಾತಂತ್ರ್ಯಗೊಳಿಸುವಲ್ಲಿ ದೇಶಕ್ಕಾಗಿ ದುಡಿದ ಪಕ್ಷ ರಾಷ್ಟ್ರೀಯ ಕಾಂಗ್ರೆಸ್ ಎಂದರು. ಸರ್ವಧರ್ಮಗಳನ್ನು ಸಮಾನವಾಗಿ ನೋಡುವ ಎಲ್ಲರೂ ಭ್ರಾತೃತ್ವದಲ್ಲಿ ಬದುಕುವಂತೆ ಮಾಡುವ ವ್ಯವಸ್ಥೆಗೆ ಕಾಂಗ್ರೆಸ್ ಅಡಿಪಾಯ ಹಾಕಿದೆ. ಭಾರತ ದೇಶದಲ್ಲಿ 500-600 ರಾಜರುಗಳಿದ್ದ ರಾಜ್ಯವನ್ನು ಗಣರಾಜ್ಯವೆಂದು ಘೋಷಿಸಿದರಲ್ಲಿ ಕಾಂಗ್ರೆಸ್ಸಿನ ಪಾತ್ರ ಹಾಗೂ ಮಹಾತ್ಮ ಗಾಂಧಿಜಿಯವರ, ಪಟೇಲರ ಪಾತ್ರವಿದೆ, ಎಂಬುದನ್ನ ನಾವು ಮರೆಯಬಾರದು ಎಂದರು. ಕಾಂಗ್ರೆಸ್ ಪಕ್ಷ, ದೇಶದಲ್ಲಿ ಕೇವಲ ಅಧಿಕಾರ, ಚುನಾವಣೆ ನಡೆಸುತ್ತಾ ಬಂದಿಲ್ಲ. ಅದಕ್ಕಾಗಿ ರಾಜಕಾರಣ ಮಾಡುತ್ತಿಲ್ಲ, ಬದಲಾಗಿ ಬಾಬಾ ಸಾಹೇಬರು ನೀಡಿದ ಸಂವಿಧಾನವನ್ನು ಉಳಿಸುವ, ನಮ್ಮ ಪೂರ್ವಜರು ಕಟ್ಟಿದ ಪ್ರಜಾಪ್ರಭುತ್ವವನ್ನು ಉಳಿಸುವ, ಪ್ರಜಾಸತ್ತಾತ್ಮಕವಾಗಿ ಬದುಕಲು ಅವಕಾಶ ನೀಡಿದ ಉದ್ದೇಶವನ್ನು ಅದರ ಆಶೋತ್ತರಗಳನ್ನು ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದರು. ಬಿಜೆಪಿ ಮತ್ತು ಸಂಘಪರಿವಾರದವರು ಸಂವಿಧಾನದ ವಿರುದ್ಧ, ಸ್ವಾತಂತ್ರ್ಯ ಹೋರಾಟದ ವಿರುದ್ಧ, ದಾಸ್ಯದ ಪರವಾಗಿ ಇದ್ದವರು. ಮುಂಬರುವ 2028-29 ರಲ್ಲಿ ಚುನಾವಣೆಯ ಭಾಗವಾಗಿ ಈ ದೇಶ ಒಡೆದು ಆಳಲು ಯತ್ನಿಸುತ್ತಿರುವವರ ವಿರುದ್ಧ ಹೋರಾಡಿ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಬೇಕಿದೆ ಎಂದರು. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ರೀತಿಯಲ್ಲೂ ಕೊಡುಗೆ ನೀಡದ ಭಾರತೀಯ ಜನತಾ ಪಾರ್ಟಿ ಹಾಗೂ ಆರ್ಎಸ್ಎಸ್ ನಮ್ಮ ಮುಂದೆ ದೊಡ್ಡ ಸವಾಲುಗಳನ್ನು ತಂದಿಟ್ಟಿದೆ. ಸಾಂವಿಧಾನಿಕ ಹುದ್ದೆಗಳನ್ನು, ನಮ್ಮ ವ್ಯವಸ್ಥೆಯನ್ನು ತಮ್ಮ ಅಡಿಯಲ್ಲಿ ಇರಿಸಿಕೊಂಡು ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದೆ. ನಮ್ಮ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ಕೆಲಸವನ್ನು ಬ್ರಿಟಿಷರ ಮಾದರಿಯಲ್ಲಿ ಮಾಡುತ್ತಿದ್ದಾರೆ ಎಂದರು. ಸ್ವತಂತ್ರ ಪೂರ್ವದಲ್ಲಿ ತೆರಿಗೆ ಕಟ್ಟುವವರು ಮಾತ್ರ ಮತದಾನ ಮಾಡುವ ಅವಕಾಶವಿದ್ದದ್ದನ್ನು ತೆಗೆದುಹಾಕಿ ಇಡೀ ದೇಶದ ಕಟ್ಟಕಡೆಯ ವ್ಯಕ್ತಿಗೂ ಮತದಾನದ ಹಕ್ಕು ನೀಡಲಾಗಿತ್ತು. ಆದರೆ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಆ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತಾ ಬಂದಿದೆ. ವೋಟ್ ಚೋರಿ, ಎಸ್ಐಆರ್ ಅಂತಹ ಅಸ್ತ್ರಗಳನ್ನು ಬಳಸಿ ಜನರ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಕೊಡಲು ಹುನ್ನಾರ ನಡೆಸಿದ್ದು ಹಲವು ರಾಜ್ಯಗಳಲ್ಲಿ ಅದನ್ನು ಜಾರಿ ಮಾಡಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ದೇಶದಲ್ಲಿ ಅಶಾಂತಿ ಸೃಷ್ಟಿಸಲು ಆ ಮೂಲಕ ಈಗ ರಾಜ್ಯದಲ್ಲಿ ನಾವು ರಾಷ್ಟ್ರ ಕವಿ ಕುವೆಂಪು ಅವರ ಆಶಯದಂತೆ ಕರೆ ಕೊಡಬೇಕಿದೆ, ಒಟ್ಟಾಗಬೇಕಿದೆ ಎಂದು ಕರೆ ನೀಡಿದರು. ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಓ. ಬನ್ನಿ, ಸೋದರರೆ, ಬೇಗ ಬನ್ನಿ! ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮುಟ್ಟ ಕೀಳಬನ್ನಿ, ಮೌಢ್ಯತೆಯ ಮಾರಿಯನ್ನು ಹೊರದೂಡಲೈ ತನ್ನಿ, ವಿಜ್ಙಾನ ದೀವಿಗೆಯ ಹಿಡಿಯ ಬನ್ನಿ. ಓ, ಬನ್ನಿ, ಸೋದರರೆ,ವಿಶ್ವಪಥಕ್ಕೆ ಎಂದು ಕೂಗಿ ಕೂಗಿ ಹೇಳಬೇಕಿದೆ ಎಂದರು. ನಮ್ಮ ನಾಡಗೀತೆಯಲ್ಲಿ ಹೇಳಿದ ಸಂದೇಶವನ್ನು ಅರ್ಥ ಮಾಡಿಕೊಳ್ಳಬೇಕಿದೆ. "ಹಿಂದೂ-ಮುಸ್ಲಿಂ,ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರ ಉದ್ಯಾನ. ಸರ್ವಜನಾಂಗದ ಶಾಂತಿಯ ತೋಟವನ್ನು ನಿರ್ಮಿಸುವುದು ಕಾಂಗ್ರೆಸ್ನ ಮೂಲ ಉದ್ದೇಶ. ಅದಕ್ಕಾಗಿ ಇಂದು ಸಂಕಲ್ಪ ಮಾಡಬೇಕಿದೆ ಈ ರಾಜ್ಯದಲ್ಲಿ ದ್ವೇಶ ರಾಜಕಾರಣಕ್ಕೆ ಬೆಂಬಲ ಇಲ್ಲ, ಕೋಮುದ್ವೇಷ ಬಿತ್ತುವವರನ್ನು ದೂರ ಇಡುವ ಪಣ ತೋಡೋಣ. ದೆಹಲಿಯಲ್ಲಿ ದೇಶದ ಪರವಾಗಿ ಹೋರಾಟ ಮಾಡುತ್ತಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಕೈಬಲಪಡಿಸಬೇಕಿದೆ ಎಂದರು. ಈ ದೇಶದ ಮೊಟ್ಟ ಮೊದಲ ಭಯೋತ್ಪಾದ ನಾಥುರಾಮ್ ಗೋಡ್ಸೆ. ಈ ದೇಶದ ಮಹಾತ್ಮನನ್ನು ಕೊಂದ ಗೋಡ್ಸೆಯನ್ನು ಕೊಲೆಗಡುಕ, ದೇಶದ್ರೋಹಿ ಎಂದು ಇಂದಿಗೂ ಘೋಷಿಸದೆ ಆತನಿಗೆ ಗುಡಿ ಕಟ್ಟಿ ಪೂಜಿಸುವ ಆರ್ಎಸ್ಎಸ್ ಬಿಜೆಪಿ ನಿರಂತರವಾಗಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ. ಇದರಿಂದ ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ನಾವು ನೀವು ಕಂಡಿದ್ದೇವೆ ಎಂದರು. ಅಂಬೇಡ್ಕರ್ ಅವರು ಹೇಳುವಂತೆ "ಜೀವನ ಮಾಡೋಕೆ ಅಂತ ರಾಜಕಾರಣಕ್ಕೆ ಬರಬೇಡಿ, ದೀನ-ದಲಿತರ ಬಡವರ ಉದ್ದಾರಕ್ಕಾಗಿ ಮಾತ್ರ ಬನ್ನಿ" ಎಂಬ ಮಾತನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಾವು ತೆಗೆದುಕೊಳ್ಳುವ ಪ್ರತಿ ನಿರ್ಧಾರಕ್ಕೂ ಮುನ್ನ ದೇಶದ ಕಟ್ಟಕಡೆಯ ವ್ಯಕ್ತಿಯನ್ನು ನೆನೆಯಬೇಕು ಅವರ ಬದುಕು ಇದರಿಂದ ಹಸನಾಗುತ್ತದೆಯಾ ಎಂದು ಚಿಂತಿಸಬೇಕು ಆದರೆ, ಮೋದಿಯವರಿಗೆ ನೆನಪಾಗೋದು ಅದಾನಿ - ಅಂಬಾನಿ ಮಾತ್ರ ಎಂದರು. ಬಿಜೆಪಿ ಹಾಗೂ ಆರ್ಎಸ್ಎಸ್ ಪುಕ್ಕುಲರು. ನಾವು ಸುಮ್ಮನಿರುವುದಕ್ಕೆ ಆಟಾಟೋಪ ಹೆಚ್ಚಾಗಿದೆಯಷ್ಟೆ ನಾವಿನ್ನು ಹಿಂದೆ ಸರಿಯಬಾರದು. ನೆಹರು ಅವರನ್ನು ಇನ್ನಿಲ್ಲದಂತೆ ಜರಿಯುವ ಇವರುಗಳು ಅವರ ಸಮಕ್ಕೂ ಬರಲಾರರು. ಹಸಿವು, ಬಡತನ, ಅನಾರೋಗ್ಯವನ್ನು ನಾವು ವಿಜ್ಞಾನದ ಮೂಲಕ ಸರಿಪಡಿಸಬೇಕೇ ವಿನಃ ಮೂಡನಂಬಿಕೆಯಿಂದಲ್ಲ ಎಂದರು. ನಮ್ಮನ್ನು ನಾವು ಕಂಡುಕೊಳ್ಳುವ ಮಾರ್ಗ ಇತರರನ್ನು ಸೇವೆ ಮಾಡುವುದು - ಇದೆ ಕಾಂಗ್ರೆಸ್ ಪಕ್ಷದ ತತ್ವ - ಸಿದ್ಧಾಂತ ಮತ್ತು ಧ್ಯೇಯ. ನಾವು ಇದನ್ನು ಮರೆಯಬಾರದು. ಇಂದಿರಾ ಗಾಂಧಿ ಅವರು ಬಡತನ ನಿರ್ಮೂಲನೆ, ಗರಿಬೀ ಹಟಾವೋ ಹಾಗೂ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಪ್ರಜ್ಞಾಪೂರ್ವಕವಾಗಿದದ್ದರು. ಆದರೆ, ಮೋದಿ ಅಮೆರಿಕಾ ಮುಂದೆ ಶರಣಾಗಿ ಸರೆಂಡರ್ ಪ್ರಧಾನಿಯಾಗಿ ದೇಶವನ್ನು ಜಾಗತಿಕಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದರು. ಒಂದು ರಾಷ್ಟ್ರದ ನಿಜವಾದ ಶಕ್ತಿ ಇರುವುದು ಇತರರಿಂದ ಪಡೆಯುವುದರಿಂದ ಅಲ್ಲ, ಸ್ವಾವಲಂಬಿಯಾಗಿ ಸಾಧಿಸಿದಾಗ ಮಾತ್ರ. ಇಂದಿರಾಗಾಂಧಿಯವರ ಆಡಳಿತದ ಫಲವೇ ಹಸಿರು ಕ್ರಾಂತಿ. ಅದರ ಫಲವೇ ರಾಷ್ಟ್ರದಲ್ಲಿ ಅತಿಹೆಚ್ಚಿನ ಅಕ್ಕಿ ಬೆಳೆಯುವ ರಾಷ್ಟ್ರವಾಗಿದೆ, ಹೆಚ್ಚು ಹಾಲು ಉತ್ಪಾದಿಸುವ ದೇಶ ಭಾರತವಾಗಿದೆ ಎಂದರು. ಯುವಶಕ್ತಿ ತಂತ್ರಜ್ಞಾನ ಅಧುನಿಕತೆಯನ್ನು ದೇಶಕ್ಕೆ ಪರಿಚಯಿಸಿದ ಕೀರ್ತಿ, ಯುವಕರಿಗೆ ಮತದಾನದ ಹಕ್ಕು ಘೋಷಿಸಿದ ಶ್ರೇಯಸ್ಸು ನನ್ನ ನೆಚ್ಚಿನ ನಾಯಕ ರಾಜೀವ್ ಗಾಂಧಿ ಅವರದ್ದು. ಇಡೀ ಭಾರತದಲ್ಲಿ ಆ ಕುಟುಂಬದ ಆರು ನೇತಾರರ ಜೊತೆಗೆ ಕೆಲಸ ಮಾಡಿರುವ ಹೆಮ್ಮೆ ಸಾಧನೆ ನನ್ನದು. ರಾಷ್ಟ್ರಕ್ಕಾಗಿ ಕೋಮು ಸೌಹಾರ್ದತೆಗಾಗಿ ದೇಶದ ಅಖಂಡತೆಗಾಗಿ ಜೀವತೆತ್ತಿರುವುದು ಗಾಂಧೀಜಿ ಬಿಟ್ಟರೆ ಅದು ನೆಹರು ಕುಟುಂಬ ಮಾತ್ರ ಎಂದರು. ಮಹಾತ್ಮ ಗಾಂಧಿ ಅವರ ಹೆಸರಲ್ಲಿ ನರೇಗಾ ಉದ್ಯೋಗ ಖಾತ್ರಿ, ಉಚಿತ ಶಿಕ್ಷಣ, ಆಹಾರ ಖಾತ್ರಿ ಯೋಜನೆ ತಂದದ್ದೆಲ್ಲ ಕಾಂಗ್ರೆಸ್ ಪಕ್ಷ. ಆದರೆ, ಮೋದಿ ಇದೆಲ್ಲವನ್ನು ಬುಡಮೇಲು ಮಾಡುತ್ತಿದ್ದಾರೆ, ಯುವಜನರ ಕನಸನ್ನು ಹಾಳು ಮಾಡಿದ್ದಾರೆ. ನೀಟ್ ಪರೀಕ್ಷೆ ಪತ್ರಿಕೆ ಸೋರಿಕೆ, ನಿರುದ್ಯೋಗದ ಹೆಸರಲ್ಲಿ ನಾಶ ಮಾಡಿದೆ ಎಂದರು. ನರೇಂದ್ರ ಮೋದಿ ಸುದೀರ್ಘ ಅಧಿಕಾರವಾದಿಯಲ್ಲಿ ಮಹಿಳೆಯರು, ಮಕ್ಕಳು, ಯುವಕರು, ದಲಿತರು ದೀನರು ಬಡವರಿಗಾಗಿ ಒಂದೇ ಒಂದು ಸಮರ್ಥ ಕಾರ್ಯಕ್ರಮ ಪರಿಚರಿಯಿಸಿಲ್ಲ. ಆದರೆ, ಕರ್ನಾಟಕವನ್ನು ಮಾದರಿ ರಾಜ್ಯವಾಗಿಸಲು ಹಾಗೂ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಗೂ ನಾನು ಪಣ ತೊಟ್ಟಿದ್ದೇವೆ ಎಂದರು. ಕರ್ನಾಟಕ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದೇವೆ. ಅದಕ್ಕೆ ಹಿರಿಯರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ, ಕಿರಿಯ ನಾಯಕರ ಸಹಕಾರ ಕೊಡಬೇಕು ಎಂದು ಕೇಳಿಕೊಕಡರೂ. ಮುಂದಿನ ದಿನಗಳಲ್ಲಿ ನಮ್ಮ ಮುಂದೆ ದೊಡ್ಡ ಸವಾಲಿದೆ ಅದೇ ಎಸ್ಐಆರ್. ಅದರಿಂದ ರಾಜ್ಯವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಅದನ್ನು ನಿಭಾಯಿಸಿ ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ ಎಂಬ ಭರವಸೆ ನೀಡುತ್ತಿದ್ದೇನೆ. ನಾನು ಸಾಮಾನ್ಯ ಕಾರ್ಯಕರ್ತನೇ ಹೊರತು ಬಂಡವಾಳಶಾಹಿ ಅಲ್ಲ, ಪ್ರಬಲಜಾತಿಯವನಲ್ಲ. ನನಗೆ ಈ ಮಟ್ಟದ ಅವಕಾಶ ಸಿಕ್ಕಿದೆ ಅಂದ ಮೇಲೆ ನಿಮಗೂ ಸಿಗುತ್ತದೆ ಕಾರ್ಯಕರ್ತರು ಪಕ್ಷದ ಮೇಲೆ ನಂಬಿಕೆ ಗಟ್ಟಿಗೊಳಿಸಿಕೊಳ್ಳಬೇಕು ಎಂದರು. ಮುಂದಿನ ದಿನಗಳಲ್ಲಿ ರಾಜ್ಯದ ವಿದ್ಯಾರ್ಥಿ- ಯುವಕರು ಮಹಿಳೆಯರನ್ನು ಒಳಗೊಂಡಂತೆ ಹೊಸ ಅವಕಾಶಗಳಿಂದ ಅರ್ಹರಿಗೆ ಅವಕಾಶ ನೀಡಿ ಹೊಸ ರೀತಿಯಲ್ಲಿ ಪಕ್ಷವನ್ನು ಕಟ್ಟುತ್ತೇನೆ ನಾಯಕರೆಲ್ಲರೂ ಸಹಕಾರ ಕೊಡಬೇಕು. ಜೊತೆಗೆ ಹೊಸ ಕಾರ್ಯಕರ್ತರು ಹೊಸ ಜವಾಬ್ದಾರಿಯನ್ನು ಹುಮ್ಮಸಿನಲ್ಲಿ ನಿರ್ವಹಿಸೋಣ ಎಂದು ಕರೆನೀಡಿದರು. ನಿಮ್ಮ ಪ್ರೀತಿ - ಅಭಿಮಾನ ನಮ್ಮನ್ನು ಸದಾ ತಲುಪುತ್ತದೆ ಹಾಗಾಗಿ ಇಲ್ಲಿವರೆಗೆ ನಡೆದು ಬಂದಂತೆ ಹಾರ ತುರಾಯಿ, ಪೇಟ, ಶಾಲು ತಂದು ಹಣ ಖರ್ಚುಮಾಡಬೇಡಿ. ಪಕ್ಷಕ್ಕಾಗಿ ನಿಮ್ಮದಾದ ದೇಣಿಗೆ ಅಂತ ಅದೇ ಹಣವನ್ನು ನೀಡಿ ಪಕ್ಷವನ್ನು ಸಂಘಟಿಸಿ ಎಂದು ನನ್ನ ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ಕೋರಿಕೊಂಡಿರುವೆನು, ಪಾಲಿಸುವರೆಂದು ನಂಬಿರುವೆ ಎಂದರು. #KPCC #President #post #responsibility #power #BKHariprasad #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ @9প EXPRESS ಕೆಪಿಸಿಸಿ ಅಧ್ಯಕ್ಷ ಸ್ಥಾನ  ಅಧಿಕಾರ ಅಲ್ಲ ಜವಾಬ್ದಾರಿ:  ಹರಿಪ್ರಸಾದ್ ಬಿಕೆ HTTPS:IMALGUDIEXPRESS.CO.INII ಶ @9প EXPRESS ಕೆಪಿಸಿಸಿ ಅಧ್ಯಕ್ಷ ಸ್ಥಾನ  ಅಧಿಕಾರ ಅಲ್ಲ ಜವಾಬ್ದಾರಿ:  ಹರಿಪ್ರಸಾದ್ ಬಿಕೆ HTTPS:IMALGUDIEXPRESS.CO.INII - ShareChat
#📜ಪ್ರಚಲಿತ ವಿದ್ಯಮಾನ📜 ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ ದರ್ಶನ್‌ ಪುಟ್ಟಣ್ಣಯ್ಯ ಮಂಡ್ಯ: ಸರ್ಕಾರಿ ಕಚೇರಿಗಳ ಕತ್ತಲ ಕೋಣೆಗಳಲ್ಲಿ ಫೈಲುಗಳ ಬೆನ್ನಟ್ಟಿ ಸಾರ್ವಜನಿಕರು ಅಲೆಯುವ ಕಾಲ ಈಗ ಮುಗಿದಿದೆ. ಶಾಸಕರೊಬ್ಬರು ಮನಸ್ಸು ಮಾಡಿದರೆ ಇಡೀ ಆಡಳಿತ ಯಂತ್ರವನ್ನೇ ಜನರ ಹೊಸ್ತಿಲಿಗೆ ತಂದು ನಿಲ್ಲಿಸಬಹುದು ಎಂಬುದನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರತ್ಯಕ್ಷವಾಗಿ ಸಾಬೀತುಪಡಿಸಿದ್ದಾರೆ. ಅವರ ದೂರದರ್ಶಿತ್ವದ ಮಾರ್ಗದರ್ಶನದಲ್ಲಿ ಮೂಡಿಬಂದಿರುವ "ಸರ್ಕಾರಿ ಸೇವೆ ಮನೆ ಬಾಗಿಲಿಗೆ" ಎಂಬ ಮಹತ್ವಾಕಾಂಕ್ಷಿ ಅಭಿಯಾನ ಈಗ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಮಾಣಿಕ್ಯನಹಳ್ಳಿಯ ಯಶಸ್ಸಿನ ಬೆನ್ನಲ್ಲೇ, ಇದೀಗ ಜೂನ್ 15, 2026 ರಿಂದ ಜುಲೈ 04, 2026 ರವರೆಗೆ ಕಟ್ಟೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬೃಹತ್ ಜನಸೇವಾ ಸಪ್ತಾಹ ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಂಡಿದೆ. ಕಚೇರಿಗೆ ನೀವ್ಯಾಕೆ ಬರ್ತೀರಿ? ಕಚೇರಿಯೇ ನಿಮ್ಮ ಮನೆಗೆ ಬರಲಿದೆ!: ಈ ಹಿಂದೆ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ದಿನದ ಕೂಲಿ ಬಿಟ್ಟು, ತಾಲೂಕು ಕೇಂದ್ರಗಳಿಗೆ ಅಲೆಯಬೇಕಿತ್ತು. ಅಲ್ಲಿ ಮಧ್ಯವರ್ತಿಗಳ ಕಾಟ, ಭ್ರಷ್ಟಾಚಾರ ಮತ್ತು ವಿಳಂಬ ನೀತಿಯಿಂದಾಗಿ ಜನ ಸಾಮಾನ್ಯರು ಕಸರತ್ತು ನಡೆಸಬೇಕಿತ್ತು. ಆದರೆ ದರ್ಶನ್ ಪುಟ್ಟಣ್ಣಯ್ಯ ಅವರ ಕ್ರಾಂತಿಕಾರಿ ಚಿಂತನೆಯ ಫಲವಾಗಿ, "ಸರ್ಕಾರಿ ಕಛೇರಿಗೆ ನೀವು ಬರಬೇಡಿ, ಕಛೇರಿಯೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ" ಎಂಬ ಘೋಷವಾಕ್ಯದೊಂದಿಗೆ ಇಡೀ ತಾಲೂಕು ಮಟ್ಟದ ಅಧಿಕಾರಿಗಳ ದಂಡೇ ಹಳ್ಳಿಗಳಲ್ಲಿ ಬಿಡಾರ ಹೂಡಿದೆ. ವಿಳಂಬ ರಹಿತ, ಪಾರದರ್ಶಕ ಆಡಳಿತಕ್ಕೆ ಮುನ್ನುಡಿ: ಈ ಕಾರ್ಯಕ್ರಮದ ಮುಖ್ಯ ವೈಶಿಷ್ಟ್ಯವೆಂದರೆ ಪಾರದರ್ಶಕತೆ. ಇಲ್ಲಿ ಮಧ್ಯವರ್ತಿಗಳಿಗೆ ಜಾಗವಿಲ್ಲ, ಲಂಚದ ನೆರಳೂ ಇಲ್ಲ. ಅಧಿಕಾರಿಗಳೇ ನೇರವಾಗಿ ಹಳ್ಳಿಗಳ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಕಂದಾಯ, ಪಡಿತರ, ಸಾಮಾಜಿಕ ಭದ್ರತೆ ಸೇರಿದಂತೆ 8 ಪ್ರಮುಖ ಇಲಾಖೆಗಳ ಸೇವೆಗಳನ್ನು ಒಂದೇ ಸೂರಿನಡಿ ಕ್ಷಿಪ್ರವಾಗಿ ವಿಲೇವಾರಿ ಮಾಡಲಾಗುತ್ತಿದೆ. ಒಂದೇ ಸೂರಿನಡಿ ಸಿಗುತ್ತಿರುವ 8 ಪ್ರಮುಖ ಸೌಲಭ್ಯಗಳು: 1. ಪಿಂಚಣಿ ಸೌಲಭ್ಯಗಳು: ವೃದ್ಧರು, ವಿಕಲಚೇತನರು ಹಾಗೂ ವಿಧವೆಯರ ಮಾಶಾಸನ ಸ್ಥಳದಲ್ಲೇ ಮಂಜೂರಾತಿ. 2. ಪೌತಿ ಖಾತೆ ಆಂದೋಲನ: ರೈತರ ಜಮೀನಿನ ವಾರಸುದಾರರ ಖಾತೆ ಬದಲಾವಣೆ ಪ್ರಕ್ರಿಯೆ ಸರಳೀಕರಣ. 3. ಕಂದಾಯ ಅದಾಲತ್: ಭೂಮಿಗೆ ಸಂಬಂಧಿಸಿದ ತಕರಾರುಗಳ ಶೀಘ್ರ ವಿಲೇವಾರಿ. 4. ಪಡಿತರ ಚೀಟಿಗೆ ಆಧಾರ್ ಜೋಡಣೆ: ಅನ್ನಭಾಗ್ಯ ಯೋಜನೆಯ ಸೌಲಭ್ಯ ತಲುಪಿಸಲು ತಿದ್ದುಪಡಿ. 5. ಕಾರ್ಮಿಕ ಕಾರ್ಡ್: ಶ್ರಮಿಕ ವರ್ಗಕ್ಕೆ ಸರ್ಕಾರದ ಸೌಲಭ್ಯಗಳ ವಿತರಣೆ. 6. ಇ-ಸ್ವತ್ತು: ಗ್ರಾಮೀಣ ಭಾಗದ ಆಸ್ತಿ ದಾಖಲೆಗಳ ಡಿಜಿಟಲೀಕರಣ ಮತ್ತು ವಿತರಣೆ. 7. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ: ವಿವಿಧ ಯೋಜನೆಗಳ ನಗದು ನೇರವಾಗಿ ರೈತರ ಖಾತೆಗೆ ಜಮೆ (DBT). 8. ಗ್ಯಾರಂಟಿ ಯೋಜನೆಗಳು: ಸರ್ಕಾರದ ಎಲ್ಲಾ ಜನಪ್ರಿಯ ಗ್ಯಾರಂಟಿಗಳ ತಡೆರಹಿತ ನೋಂದಣಿ. ಇದು ಸೇವೆಯಲ್ಲ ನಮ್ಮ ಕರ್ತವ್ಯ: ಜನರು ತಮ್ಮ ಹಕ್ಕುಗಳಿಗಾಗಿ ಕಚೇರಿಗಳ ಮುಂದೆ ಸಾಲು ನಿಲ್ಲಬಾರದು. ಸಾರ್ವಜನಿಕರ ಸಮಯ ಮತ್ತು ಶ್ರಮವನ್ನು ಉಳಿಸಿ, ಗೌರವಯುತವಾಗಿ ಸೌಲಭ್ಯಗಳನ್ನು ತಲುಪಿಸುವುದು ನಮ್ಮ ಜವಾಬ್ದಾರಿ ಎನ್ನುತ್ತಾರೆ ಶಾಸಕ ದರ್ಶನ್ ಪುಟ್ಟಣ್ಣಯ್ಯ. ಅವರ ಈ ಜನಪರ ಕಾಳಜಿಗೆ ಇಡೀ ಕ್ಷೇತ್ರದಾದ್ಯಂತ ರೈತರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸಮಸ್ತ ಜನಪ್ರತಿನಿಧಿಗಳು, ದಕ್ಷ ಅಧಿಕಾರಿಗಳ ವರ್ಗ ಹಾಗೂ ಮುಖಂಡರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ, ಮೇಲುಕೋಟೆ ಕ್ಷೇತ್ರವು ಈಗ ಕೇವಲ ಭೌಗೋಳಿಕವಾಗಿ ಅಷ್ಟೇ ಅಲ್ಲ, ಆಡಳಿತಾತ್ಮಕವಾಗಿಯೂ ಮಾದರಿ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ದರ್ಶನ್ ಪುಟ್ಟಣ್ಣಯ್ಯ ಅವರ ಈ ‘ಮನೆ ಬಾಗಿಲಿಗೆ ಆಡಳಿತ’ದ ಪರಿಕಲ್ಪನೆ ಭ್ರಷ್ಟಾಚಾರ ಮುಕ್ತ ಮತ್ತು ಅಲೆದಾಟ ಮುಕ್ತ ಕರ್ನಾಟಕದ ನಿರ್ಮಾಣಕ್ಕೆ ದಿಕ್ಸೂಚಿಯಾಗಿದೆ. #Model #program #doortodoor #govt #services #Katteri #GramPanchayat #darshanputtannaiah #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ నoలv EXPRESS ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ  ಮನೆ ಬಾಗಿಲಿಗೆ ಮಾದರಿ శాయణశ్చమ HTTPS:IMALGUDIEXPRESS.CO.INII ಶ నoలv EXPRESS ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ  ಮನೆ ಬಾಗಿಲಿಗೆ ಮಾದರಿ శాయణశ్చమ HTTPS:IMALGUDIEXPRESS.CO.INII - ShareChat