Malgudi Express
ShareChat
click to see wallet page
@news007
news007
Malgudi Express
@news007
Malgudi Express official Page
#📜ಪ್ರಚಲಿತ ವಿದ್ಯಮಾನ📜 ಎಸ್ ಐ ಟಿ ತನಿಖೆಯ ವರದಿ ಮಾಸ್ಕ್ ಮ್ಯಾನ್ ನಂತೆ ಮಾಸ್ಕ್ ನಲ್ಲಿ ಮುಚ್ಚಿ ಹೋಗಿದೆಯೇ?: ಸುರೇಶ್ ಕುಮಾರ್ ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಆರೋಪ ಪ್ರಕರಣ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿದೆ. ಈ ಬಗ್ಗೆ ನಡೆದ ಎಸ್ ಐಟಿಆ ತನಿಖೆಯ ವರದಿ ಮಾಸ್ಕ್ ಮ್ಯಾನ್ ನಂತೆ ಮಾಸ್ಕ್ ನಲ್ಲಿ ಮುಚ್ಚಿ ಹೋಗಿದೆಯೇ ಎಂದು ಬಿಜೆಪಿ ನಾಯಕ ಸುರೇಶ್ ಕುಮಾರ್ ಪ್ರಶ್ನಿಸಿದ್ದಾರೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಅವರು ಈ ಪ್ರಕರಣದಲ್ಲಿ ಯಾವುದೇ ಸತ್ಯ ಹೊರಬರಲಿಲ್ಲ, ಬದಲಿಗೆ ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಮಾಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಧರ್ಮಸ್ಥಳ ವಿಚಾರದಲ್ಲಿ ಎಸ್ ಐಟಿ ಮಾಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ದಿನೇಶ್ ಗುಂಡೂರಾವ್ ಹೇಳಿದ್ದರು. ಆದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದೆ ಆರೋಪಗಳ ವಿಚಾರವಾಗಿ ತನಿಖೆ ನಡೆಸಲು ಎಸ್ ಐಟಿ ರಚನೆ ಮಾಡಲಾಗಿದೆ. ಈ ತನಿಖೆ ಸಾಗುತ್ತಿರುವ ರೀತಿಯಿಂದ ಬೇಸತ್ತು ಎಸ್ ಐಟಿಯಲ್ಲಿದ್ದ ಅನೇಕರು ಹೊರಬಂದರು. ಸತ್ಯ ಬರಲಿ ಎಂದು ಅಂದು ನಾವು ಎಸ್ ಐಟಿ ಗೆ ವಿರೋಧ ಮಾಡಲಿಲ್ಲ. ಈಗ ಎಸ್ ಐಟಿ ಏನು ಮಾಡುತ್ತಿದೆ ಆರೋಪಗಳ ಬಗ್ಗೆ ಏನು ತನಿಖೆ‌ ಆಗಿದೆ ಎಂದು ಪ್ರಶ್ನಿಸಿದರು. ಗೃಹ ಮಂತ್ರಿಗಳು ಎಸ್ ಐ ಟಿ ತನಿಖೆಯ ಮಧ್ಯಂತರ ವರದಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಆ ವರದಿ ಎಲ್ಲಿದೆ? ಅದರಲ್ಲಿ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ? ಒಂದು ವೇಳೆ ಆರೋಪ ಮಾಡಿರುವ ಮಾಸ್ಕ್ ಮ್ಯಾನ್ ನಂತೇ ಈ ವರದಿಗೂ ಮಾಸ್ಕ್ ಹಾಕಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಧರ್ಮಸ್ಥಳ ಇನ್ನೂ ಕಳಂಕ ಹೊತ್ತುಕೊಂಡೇ ಇರಬೇಕಾ? ವರದಿಯನ್ನು ಸದನದ ಮುಂದಿಡಿ. ಧರ್ಮಸ್ಥಳ ಬುರುಡೆ ಗ್ಯಾಂಗ್, ಗಡಿಪಾರು ಇವೆಲ್ಲಾ ರಾಮಾಯಣ. ಈ ಬಗ್ಗೆ ನಾನು ಹೆಚ್ಚು ಹೇಳಲ್ಲ. ಏನೇ ಇರಲಿ, ಧರ್ಮಸ್ಥಳದ ಎಸ್‌ಐಟಿ ವರದಿಯನ್ನು ಮಂಡಿಸಿ ಎಂದು ಆಗ್ರಹಿಸಿದರು. ಧರ್ಮಸ್ಥಳದ ಬಗ್ಗೆ ಸಲ್ಲಿಸಲಾಗಿದ್ದ ಪಿಎಎಲ್ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಪೈಸಾ ವಸೂಲಿ ಲಿಟಿಗೇಷನ್ ಎಂದು ಹೇಳಿದೆ. ಧರ್ಮಸ್ಥಳ ಒಂದು ಧಾರ್ಮಿಕ ಶ್ರದ್ಧಾ ಕೇಂದ್ರ. ಬಹಳ ಜನರಿಗೆ ಮಂಜುನಾಥ ಭರವಸೆಯಾಗಿ ಉಳಿದಿದ್ದಾರೆ. ನಂಬಿಕೆಗೆ ಕೆಲವರು ಮಸಿ ಬಳಿಯುವ ಪ್ರಯತ್ನ ಮಾಡಿದರು. ಏನೇ ಆಗಲಿ, ಸತ್ಯಾಂಶ ಗೊತ್ತಾಗಬೇಕಿದೆ. ಎಸ್‌ಐಟಿ ತನಿಖಾ ವರದಿಯನ್ನು ಮಂಡಿಸಬೇಕು ಎಂದು ಆಗ್ರಹಿಸಿದರು. ವಿಧಾನಸಭೆಯಲ್ಲಿ ಶ್ರೀಸಾಮಾನ್ಯರ ಹಿತ ಕಾಯುವ ಒಂದೂ ಚರ್ಚೆಯಾಗುತ್ತಿಲ್ಲ. ಹೀಗಾದರೆ ಅರ್ಥವಿಲ್ಲದಂತಾಗುತ್ತದೆ. ಶ್ರೀಸಾಮಾನ್ಯರ ಹಿತ ಕಾಯುವ, ಅವರ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗಬೇಕಿದೆ. ವಿಧಾನಸಭೆಯ ಬಗ್ಗೆ ಜನಸಾಮಾನ್ಯರು ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಎಂದರು. ರಾಜ್ಯ ಸರ್ಕಾರದಲ್ಲಿ ಭಿನ್ನಮತ ತೀವ್ರಗೊಂಡಿದೆ ಅಧಿಕಾರಕ್ಕಾಗಿ ಬಿಕ್ಕಟ್ಟು ಆರಂಭಗೊಂಡಿದೆ ಒಳ ಜಗಳದಿಂದ ಕೂಡಿರುವ ಸರ್ಕಾರ ಇದು. ಬೆಲೆ ಏರಿಕೆ ಮಾಡುವ ಸರ್ಕಾರ ಇದಾಗಿದ್ದು, ಜನ ಬಯಸಿದಂತೆ ನಡೆದುಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ರಾಜಕೀಯ ಸೇಡು ತೀರಿಸಿಕೊಳ್ಳುವ ಸರ್ಕಾರ ಇದಾಗಿದೆ. ಕೇವಲ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯಲ್ಲಿ ದೊಡ್ಡ ಮಟ್ಟದ ಘರ್ಷಣೆ ಉಂಟಾಯಿತು ರಾಜಕೀಯ ಕಾರಣಕ್ಕಾಗಿ ಬಡಪಾಯಿ ಕಾರ್ಯಕರ್ತನೊಬ್ಬನನ್ನು ಸುಟ್ಟು ಹಾಕಲಾಯಿತು. ಘರ್ಷಣೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬದಲ್ಲಿ ಮೃತ ದೇಹವನ್ನು ಹೂತು ಹಾಕುವ ಸಂಪ್ರದಾಯ ಇದೆ. ಆದರೆ ರಾಜಕೀಯ ಕಾರಣಕ್ಕಾಗಿ ಇದನ್ನು ಮರೆಮಾಚಿ ಮೃತ ದೇಹವನ್ನು ಸುಟ್ಟು ಹಾಕಲಾಯಿತು ಎಂದು ಹೇಳಿದ ಅವರು, ರಾಜ್ಯಪಾಲರು ಮಾಡಿದ ಭಾಷಣಕ್ಕೆ ತಾವು ವಂದನೆ ಸಲ್ಲಿಸುವುದಿಲ್ಲ. ಬದಲಿಗೆ ಸದನಕ್ಕೆ ಬಂದ ರಾಜ್ಯಪಾಲರಿಗೆ ವಂದನೆ ಸಲ್ಲಿಸುವುದಾಗಿ ಹೇಳಿದರು. #SIT #investigation #report #covered #mask #like #MaskedMan #SSureshKumar #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಮೋಹನ್ ದಾಸ್ ಪೈಗೆ ತಿರುಗೇಟು ಕೊಟ್ಟ ರಾಮಲಿಂಗಾರೆಡ್ಡಿ ಬೆಂಗಳೂರು: ಮಹಾನಗರ ಬೆಂಗಳೂರಿನ ರಸ್ತೆಗಳ ಬಗ್ಗೆ ತಕರಾರು ಎತ್ತುತ್ತಿರುವ ಉದ್ಯಮಿ ಮೋಹನ್ ದಾಸ್ ಪೈ, ಇದೀಗ ನಗರದ ಸಾರಿಗೆ ವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವ್ಯವಸ್ಥೆಯ ಬಗ್ಗೆ ಟ್ವೀಟ್ ಮೂಲಕ ಅಭಿಪ್ರಾಯ ಹೇಳುವ ಬದಲಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಬಿಎಂಟಿಸಿ ಬಸ್ ಕುರಿತಂತೆ ಮೋಹನ್ ದಾಸ್ ಪೈ ಅವರು ಮಾಡಿರುವ ಟ್ವೀಟ್ ಗೆ ಪ್ರತ್ಯುತ್ತರ ನೀಡಿರುವ ರಾಮಲಿಂಗಾರೆಡ್ಡಿ ರೆಡ್ಡಿ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಯಾವುದೇ ನಿಯಮಗಳಿಗೆ ಹೊಸ ಬಸ್‌ಗಳ ಸೇರ್ಪಡೆ ಸ್ಥಗಿತಗೊಂಡಿದ್ದಾಗ ಮತ್ತು ನಿಗಮಗಳು ಸೊರಗುತ್ತಿದ್ದಾಗ ನೀವು ಒಂದೇ ಒಂದು ಪ್ರಶ್ನೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ. ಜನಪರ ಸರ್ಕಾರವು ಉತ್ತಮ ಕೆಲಸ ಮಾಡುತ್ತಿರುವಾಗ ಮಾತ್ರ ನಿಮ್ಮ ಈ 'ಕಾರ್ಪೊರೇಟ್ ಕಾಳಜಿ' ಎಚ್ಚರಗೊಳ್ಳುವುದು ಏಕೆ? ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ ಸೇರಿದಂತೆ, ಬಿಜೆಪಿಯ ಯಾವುದಾದರೂ ಒಂದು ರಾಜ್ಯ ಅಥವಾ ನಗರ ಈ ಮಟ್ಟದ ಸಾರಿಗೆ ವ್ಯಾಪ್ತಿ ಮತ್ತು ದಕ್ಷತೆಯನ್ನು ಹೊಂದಿದ್ದರೆ ತೋರಿಸಿ ಎಂದು ಸವಾಲು ಒಡ್ಡಿದ್ದಾರೆ. ಕಳೆದ ಕೇವಲ 2 ವರ್ಷಗಳಲ್ಲಿ ನಾವು 5,800ಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಸೇರಿಸಿದ್ದೇವೆ. ಮಾರ್ಚ್ 2026ರ ವೇಳೆಗೆ ಇನ್ನೂ 2,000 ಬಸ್‌ಗಳು ರಸ್ತೆಗಿಳಿಯಲಿವೆ.ನಿಮ್ಮ ದೃಷ್ಟಿಕೋನವು ಕೇವಲ ಪೂರ್ವಾಗ್ರಹ ಪೀಡಿತವಲ್ಲ. ನೀವು ಸಾರ್ವಜನಿಕ ಸೇವೆಯನ್ನು ಕೇವಲ ಲಾಭ-ನಷ್ಟದ 'ಬ್ಯಾಲೆನ್ಸ್ ಶೀಟ್' ಮೂಲಕ ನೋಡುತ್ತೀರಿ; ಆದರೆ ನಾನು ಅದನ್ನು 1.5 ಕೋಟಿ ನಾಗರಿಕರ ಸೇವೆಯ ದೃಷ್ಟಿಯಿಂದ ನೋಡುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. ರಾಜ್ಯದಲ್ಲಿ ಶೇಕಡಾ 30ರಷ್ಟು ಮಾರ್ಗಗಳು ನಷ್ಟದಲ್ಲಿದ್ದರೂ, ಹಳ್ಳಿಯ ಸಾಮಾನ್ಯ ಮನುಷ್ಯ ಮತ್ತು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಸುಲಭವಾಗಿ ಸಿಗಲಿ ಎನ್ನುವುದು ನಮ್ಮ ಆಶಯ, ಎಲ್ಲರಿಗೂ ಸುಗಮ ಸಂಚಾರ ವ್ಯವಸ್ಥೆ ಸಿಗಲಿ ಎಂಬ ಕಾರಣಕ್ಕೆ ನಾವು ಅವುಗಳನ್ನು ನಡೆಸುತ್ತಿದ್ದೇವೆ. ಶೇ. 30ರಷ್ಟು ಮಾರ್ಗಗಳು ಲಾಭವೂ ಇಲ್ಲದ, ನಷ್ಟವೂ ಇಲ್ಲದ ಸ್ಥಿತಿಯಲ್ಲಿವೆ. ದೂರ ಪ್ರಯಾಣಿಸುವ ಬಸ್‌ಗಳಿಂದಾಗಿ ಶೇ. 40ರಷ್ಟು ಲಾಭ ಸಿಗಲಿದೆ. ರಾಜ್ಯದ ಶೇ. 98ರಷ್ಟು ಹಳ್ಳಿಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಸಮಾಜಕ್ಕೆ ಸೇವೆ ಸಲ್ಲಿಸುವುದು ಹೀಗೆಯೇ ಹೊರತು, ಕೇವಲ ಬೋರ್ಡ್ ಆಫ್ ಡೈರೆಕ್ಟರ್‌ಗಳ ಲಾಭಕ್ಕಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕವು ಒಟ್ಟು 26,054 ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಬೆಂಗಳೂರಿನಲ್ಲಿ ಮಾತ್ರವೇ ನಾವು ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದೇವೆ. 7,108 ಬಸ್‌ಗಳ ಪೈಕಿ 1,686 ಎಲೆಕ್ಟ್ರಿಕ್ ಬಸ್‌ಗಳಿದ್ದು, ದಿನಕ್ಕೆ 13 ಲಕ್ಷ ಕಿ.ಮೀ ಸಂಚರಿಸುತ್ತಾ 66,000 ಟ್ರಿಪ್‌ಗಳನ್ನು ಪೂರೈಸುತ್ತಿದ್ದೇವೆ. ಇದು ಇಡೀ ಭಾರತದಲ್ಲೇ ಅತಿ ಹೆಚ್ಚು ಎಂದಿದ್ದಾರೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆ ಕೇವಲ ಯೋಜನೆಯಲ್ಲ, ಮಹಿಳೆಯರ ಆರ್ಥಿಕ ಸಬಲೀಕರಣದ ದೊಡ್ಡ ಹೆಜ್ಜೆ. ಸಾಮಾಜಿಕ ಸೇವೆ ಖಾಸಗಿ ಸಂಸ್ಥೆಗಳಂತೆ ನಾವು ಕೇವಲ ಲಾಭದಾಯಕ ಮಾರ್ಗಗಳನ್ನು ಮಾತ್ರ ಆರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಮೋಹನ್‌ದಾಸ್ ಪೈ ಅವರೇ, ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿ ಚರ್ಚೆ ನಡೆಸಲು ನಮ್ಮ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಒಬ್ಬರೇ ಸಾಕು. ದಯವಿಟ್ಟು ಬನ್ನಿ ಮತ್ತು ಅವರೊಂದಿಗೆ ನೇರವಾಗಿ ಸತ್ಯಾಸತ್ಯತೆಗಳ ಬಗ್ಗೆ ಚರ್ಚಿಸಿ. ನೀವು ಈ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ? ಅಥವಾ ಕೇವಲ ಟ್ವೀಟ್ ಮಾಡುವುದಕ್ಕಷ್ಟೇ ಸೀಮಿತವಾಗುತ್ತೀರಾ ಎಂದು ಕೇಳಿದ್ದಾರೆ. ಉದ್ಯಮಿ ಮೋಹನ್ ದಾಸ್ ಪೈ ಅವರು ತಮ್ಮ ಟ್ವೀಟ್ ನಲ್ಲಿ ರಾಮಲಿಂಗಾರೆಡ್ಡಿಯವರೇ ಸಾರಿಗೆ ಸಚಿವರಾಗಿ‌ ನಿಮ್ಮ ಸಿದ್ಧಾಂತ ಮತ್ತು ನಡೆಯಿಂದ ರಾಜ್ಯಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ನೀಡುವಲ್ಲಿ ನೀವು ವಿಫಲರಾಗಿದ್ದೀರಿ. ಸಾರ್ವಜನಿಕ ಸಾರಿಗೆಯ ಕೊರತೆಯಿಂದ ಜನತೆ ಪರದಾಡುತ್ತಿದ್ದಾರೆ. ದಯವಿಟ್ಟು ಖಾಸಗಿ ವಲಯಕ್ಕೆ ಅವಕಾಶ ನೀಡಿ. ಕಳೆದ ಕೆಲವು ವರ್ಷದಿಂದ ಬಸ್‌ಗಳ ವ್ಯವಸ್ಥೆ ಸರಿಯಿಲ್ಲ. ಬಸ್‌ ಓಡಾಟ ಕಡಿಮೆಯಾಗಿದೆ. ಕೇವಲ ಸರ್ಕಾರಿ ಸಂಸ್ಥೆಗಳೇ ಕೆಲಸ ಮಾಡಬೇಕು ಎಂಬ ನಿಮ್ಮ ಹಠಮಾರಿತನ ಏಕೆ? ಜನರಿಗೆ ಸಾರ್ವಜನಿಕ ಸಾರಿಗೆ ಬೇಕು, ಅದನ್ನು ಯಾರು ಒದಗಿಸುತ್ತಾರೆ ಎಂದು ಪೋಸ್ಟ್‌ ಮಾಡಿದ್ದರು. #RamalingaReddy #hitback #MohanDasPai #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - మిఠునో దానో శృిగి తిరుగిళటు ಕೊಟ್ಟ ' ರಾಮಲಿಂಗಾರೆಡ್ಡಿ ಸುದ್ರಿ & ಯ೦ರಯಲ್ಲಿ್ 'Saqa Please subscribe to Malgudi Express YouTube and Website EXPRESS మిఠునో దానో శృిగి తిరుగిళటు ಕೊಟ್ಟ ' ರಾಮಲಿಂಗಾರೆಡ್ಡಿ ಸುದ್ರಿ & ಯ೦ರಯಲ್ಲಿ್ 'Saqa Please subscribe to Malgudi Express YouTube and Website EXPRESS - ShareChat
#ಐಪಿಎಸ್ ಅಧಿಕಾರಿ ಡಾನ್ಸ್ ವಿಡಿಯೋ ವೈರಲ್ IPS Officer off Telangana Vasundhara Dance Goes Viral in Social Media ತೆಲಂಗಾಣದ ಐಪಿಎಸ್ ಅಧಿಕಾರಿ ವಸುಂಧರಾ ನೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ तेलंगाना आईपीएस अधिकारी वसुंधरा का डांस सोशल मीडिया पर वायरल हो गया है। #Cute #SammakkaSarakka #MedaramJatara2026 #MonalisaofTelanagana #malgudiexpress #malgudinews #news #TopNews | Subscribe | Comment | Like | Share |
ಐಪಿಎಸ್ ಅಧಿಕಾರಿ ಡಾನ್ಸ್ ವಿಡಿಯೋ ವೈರಲ್ - ShareChat
00:28
#📜ಪ್ರಚಲಿತ ವಿದ್ಯಮಾನ📜 ಡಿ ಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ರಾಜ್ಯದ ಸಿಎಂ ಆಗಬಾರದು, ಸಿದ್ದರಾಮಯ್ಯ ಮುಂದುವರೆಯಬೇಕು: ಜನಾರ್ದನ ರೆಡ್ಡಿ ಬೆಂಗಳೂರು: ಬಳ್ಳಾರಿಯ ರಾಜಕಾರಣ ರಾಜ್ಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಸವಾಲು ಮತ್ತು ಪ್ರತಿ ಸವಾಲಿನ ಪಂಥಾಹ್ವಾನದ ವೇದಿಕೆಯಾಗಿ ಪರಿಣಮಿಸಿತು. ಅಷ್ಟೇ ಅಲ್ಲದೆ ಡಿಸಿಎಂ ಡಿ ಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ರಾಜ್ಯದ ಮುಖ್ಯಮಂತ್ರಿ ಆಗಬಾರದು, ಸಿದ್ದರಾಮಯ್ಯ ಅವರೇ ಹುದ್ದೆಯಲ್ಲಿ ಮುಂದುವರೆಯಬೇಕು ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದರು. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಚರ್ಚೆ ಆರಂಭಿಸಿದ ಬಿಜೆಪಿಯ ಜನಾರ್ದನ ರೆಡ್ಡಿ, ಬಳ್ಳಾರಿಯಲ್ಲಿ ಇತ್ತೀಚೆಗೆ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಭೆಯ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಸದನದಲ್ಲಿ ಭಾಷಣ ಆರಂಭಿಸಿದ ಮಾಜಿ ಸಚಿವ ಬಿ ನಾಗೇಂದ್ರ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಳ್ಳಾರಿಯಲ್ಲಿ ನಡೆದ ಘರ್ಷಣೆಯ ಕುರಿತಂತೆ ಜನಾರ್ದನ ರೆಡ್ಡಿಯವರು ನಿನ್ನೆ ಹಲವು ಸುಳ್ಳು ಹೇಳಿ ಸದನಕ್ಕೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಗಲಾಟೆ ಆದಾಗ ಬಿಜೆಪಿ ಕಾರ್ಯಕರ್ತರು ವಾಲ್ಕೀಕಿ ಫೋಟೋ ಇದ್ದ ಬ್ಯಾನರ್ ಕೆಳಕ್ಕೆ ಹಾಕಿ ಅವಮಾನ ಮಾಡಿದ್ರು. ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಸಾವಾಯ್ತು.ಇದಕ್ಕೆ ಯಾರು ಕಾರಣ ಅಂತ ತನಿಖೆಯಲ್ಲಿ ಬಹಿರಂಗ ಆಗುತ್ತದೆ.ಆದರೆ ಈ ಘಟನೆ ನಂತರ ಬಿಜೆಪಿ ನಾಯಕರ ಬಳ್ಳಾರಿಯಲ್ಲಿ ಸಮಾವೇಶದಲ್ಲಿ ಶ್ರೀರಾಮುಲು ಅವರು ಏ ಭರತ್ ರೆಡ್ಡಿ, ಏಯ್ ಕಾಂಗ್ರೆಸ್ ಕಾರ್ಯಕರ್ತರೇ ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ನೀವೆಲ್ಲಿದ್ರೂ, ಪಾತಾಳದಲ್ಲಿದ್ರೂ ಹುಡುಕಿ ಒದ್ದು ಓಡಿಸ್ತೇವೆ ಅಂದರು ಎಂದು ಆರೋಪಿಸಿದರು. ನಾಗೇಂದ್ರ ಅವರ ಈ ಆರೋಪಗಳಿಗೆ ಅಲ್ಲಿಯೇ ತಿರುಗೇಟು ನೀಡಿದ ಜನಾರ್ಧನ ರೆಡ್ಡಿ ವಾಲ್ಮೀಕಿ ಸಮುದಾಯದಲ್ಲಿ ನೀನಿನ್ನೂ ಬಚ್ಚಾ ಯಾವುದೇ ಕಾರಣಕ್ಕೂ ಶ್ರೀರಾಮುಲು ಮುಂದೆ ನೀನು ನಾಯಕನಾಗಿ ಬೆಳೆಯಲು ಸಾಧ್ಯವೇ ಇಲ್ಲ. ಈ ಜನ್ಮ ಅಲ್ಲ ಇನ್ನು ನೂರು ಜನ್ಮ ಹುಟ್ಟಿ ಬಂದರೂ ನೀನು ನಮ್ಮ ನಾಯಕ ಶ್ರೀರಾಮುಲು ಅವರ ಮುಂದೆ ಲೀಡರ್ ಆಗಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ಗುಡುಗಿದರು. ಗಲಾಟೆಯ ಸಂದರ್ಭದಲ್ಲಿ ಪೆಟ್ರೋಲ್ ಬಾಂಬ್ ಹಾಕೋಕೆ ಮುಂದಾದ್ರು. ನಿಮ್ಮ ಕಾರ್ಯಕರ್ತ ಸಾವನ್ನಪ್ಪಿದ್ದಾರೆ. ಆದ್ರೆ ನೀನು ಅದನ್ನೆ ಸಮರ್ಥನೆ ಮಾಡಿಕೊಳ್ಳುತ್ತಿಯಾ ಎಂದ್ರೆ ಹೇಗೆ? ಎಂದು ನಾಗೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ತಿರುಗೇಟು ನೀಡಿದ ನಾಗೇಂದ್ರ, "ವಾಲ್ಮೀಕಿ ಭಾವಚಿತ್ರ ಇರೋ ಬ್ಯಾನರ್ ಕೆಳಗೆ ಹಾಕಿ ತುಳಿದಿದ್ದಾರೆ. ಇದು ಸರಿಯಲ್ಲ. ನನ್ನನ್ನು ಸೋಲಿಸೋದು ಬಿಡೋದು ಇದ್ದೇ ಇರುತ್ತದೆ. ನಮ್ಮ ಹೋರಾಟವೂ ಇರುತ್ತದೆ‌. ರೆಡ್ಡಿಯವರ ಎಲ್ಲ ಚಾಲೆಂಜ್ ಗಳನ್ನೂ ನಾವು ಸ್ವಾಗತ ಮಾಡ್ತೇವೆ" ಎಂದರು. ವಿಚಾರವಾಗಿ ಇಬ್ಬರೂ ನಾಯಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು ಇಬ್ಬರು ನಾಯಕರನ್ನು ಸುಮ್ಮನಿರುವಂತೆ ಮಾಡುವಲ್ಲಿ ಹರಸಾಹಸ ಮಾಡಿದ ಸಭಾಧ್ಯಕ್ಷ ಯುಟಿ ಖಾದರ್ ಅವರು ಅಂತಿಮವಾಗಿ ಬಿಜೆಪಿ ನಾಯಕ ಸುನಿಲ್ ಕುಮಾರ್ ಅವರಲ್ಲಿ ಜನಾರ್ಧನ ರೆಡ್ಡಿ ಅವರನ್ನು ಸುಮ್ಮನೆ ಕೂರಿಸುವಂತೆ ಮನವಿ ಮಾಡಿದರು. #DKShivakumar #CM #state #reason #Siddaramaiah #continue #JanardanaReddy #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಬಿಜೆಪಿ ನಾಯಕರು ಜನ ಸಾಮಾನ್ಯರು ಹಾದಿ ಬೀದಿಯಲ್ಲಿ ಉಗಿಯುತ್ತಿರುವುದನ್ನು ಮರೆತಂತಿದೆ: ಬಿ ಕೆ ಹರಿಪ್ರಸಾದ್ ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವುದು ಒಂದೇ, BJP Karnataka ದವರಿಂದ ಘನತೆ, ಗೌರವ ಸಂಸ್ಕೃತಿಯ ಬಿಟ್ಟಿ ಪಾಠ ಕೇಳುವುದು ಒಂದೇ. ಸದನಗಳ ಘನತೆ, ಗೌರವವನ್ನು ಮೂರಾಬಟ್ಟೆ ಮಾಡಿರುವ ಬಿಜೆಪಿ ನೈತಿಕತೆಯ ಪಾಠ ಮಾಡುವುದು ಹೇಸಿಗೆತನದ ಪರಮಾವಧಿ. ಚಿಂತಕರ ಚಾವಡಿಯಲ್ಲಿ ಬಾಯ್ತುರಿಕೆಗೆ ಮಾತಾಡುವ ನಾಯಕರನ್ನೇ ಆಯ್ಕೆ ಮಾಡುವ ಪರಂಪರೆ ಹೊಂದಿರುವ ಬಿಜೆಪಿ ಪಕ್ಷದವರು ಸದನದಲ್ಲಾಗಲಿ, ಸಾರ್ವಜನಿಕ ವೇದಿಕೆಯಲ್ಲಾಗಲಿ ಮಹಿಳೆಯರ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ ಉದುರಿಸುವ ಒಂದೊಂದು ಮುತ್ತುಗಳನ್ನು ನೋಡಿ ಜನ ಸಾಮಾನ್ಯರು ಹಾದಿ ಬೀದಿಯಲ್ಲಿ ಉಗಿಯುತ್ತಿರುವುದನ್ನು ಮರೆತಂತಿದೆ. ಆರ್.ಎಸ್.ಎಸ್ ಹಾಗೂ ಬಿಜೆಪಿ ಇತ್ತೀಚಿಗೆ "ನಮಸ್ತೆ ಸದಾ ವತ್ಸಲೇ"ಯನ್ನು ಮರೆತು, "ನಮಸ್ತೆ ಸದಾ ರೌಡಿ ಕೋತ್ವಾಲನೇ"ಎಂದು ಶುರು ಮಾಡಿದ್ದಾರೆ. ಕೇಂದ್ರದ ಗೃಹ ಸಚಿವನೇ ಕೊಲೆಯ ಕೇಸ್ ಹಾಕಿಸಿಕೊಂಡು, ಗೂಂಡಾಗಿರಿ ಮಾಡಿ, ಸುಪ್ರೀಂಕೋರ್ಟಿನಿಂದ ಗಡಿಪಾರದವನ ಚೇಲಾಗಳೇ ತುಂಬಿ ತುಳುಕುತ್ತಿರುವ ಬಿಜೆಪಿಗೆ ರೌಡಿ ಕೋತ್ವಾಲನೇ ಗುರು. ರೌಡಿಗಳು, ರೇಪಿಸ್ಟ್ ಗಳು, ಕೊಲೆ ಗಡುಕರಿಗಾಗಿಯೇ ಬಿಜೆಪಿಯಲ್ಲಿ ಪ್ರತ್ಯೇಕ ಮೋರ್ಚಾ ಇರುವಾಗ ರೌಡಿ ಕೋತ್ವಾಲನ ಜಪ ಇಲ್ಲದೇ ನಿದ್ದೆ ಕೂಡ ಬರುವುದಿಲ್ಲ. ಸದನದಲ್ಲೇ ಸರ್ಕಾರದ ಸಚಿವೆಯನ್ನು "ವೇಶ್ಯೆ" ಎಂದು ಕರೆದವನನ್ನು ಚಿಂತಕರ ಚಾವಡಿಗೆ ಸದಸ್ಯ ಮಾಡಿರುವ ಬಿಜೆಪಿಯ ಸಂಸ್ಕೃತಿ ಯಾವುದು? ಮಹಿಳೆಯರನ್ನು ತುಚ್ಛವಾಗಿ ಮಾತಾಡುವ ನಾಯಕನನ್ನು ಬಿಜೆಪಿ ಪಕ್ಷ ಮುಂಬಾಗಿಲಿನಿಂದ ಆಯ್ಕೆ ಮಾಡಿದ್ದಿರೋ ಇಲ್ಲ, ಹಿಂಬಾಗಿಲಿನಿಂದ ಆಯ್ಕೆ ಮಾಡಿದ್ದಿರೋ.. "ರಾತ್ರಿ ಸರ್ಕಾರದ ಕೆಲಸ, ದಿನವಿಡೀ ಮುಖ್ಯಮಂತ್ರಿಯ ಕೆಲಸ ಮಾಡುತ್ತಾರೆ" ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೇ ಬಹಿರಂಗ ಸಭೆಯಲ್ಲಿ ನಿರ್ಲಜ್ಜೆಯಿಂದ ಮಾತಾಡಿದ ರವಿ ಕುಮಾರ್ ನನ್ನು ಯಾವ ಮಾನದಂಡದ ಮೇಲೆ ಚಿಂತಕರ ಚಾವಡಿಗೆ ಹಿಂಬಾಗಿಲಿಂದ ಆಯ್ಕೆ ಮಾಡಿದ್ದೀರಿ? ಸಂಘ ಪರಿವಾರದ ಸಂಸ್ಕೃತಿಯ ವಾರಸುದಾರನ ನುಡಿಮುತ್ತುಗಳಿಂದ ಚಿಂತಕ ಚಾವಡಿಯೇ ಎಗರಿ ಹೋಗಿದೆ. ಮನೆಗ ಕಷ್ಟ ಎಂದು ಬಂದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಮಾಡಿ, ಪೋಕ್ಸ್ ಕೇಸ್ ಅಲ್ಲಿ ಕೋರ್ಟ್ ಎದುರು ಹಾಜರಾಗದೆ ಸಾರ್ವಜನಿಕವಾಗಿ ಮುಖ ತೋರಿಸಲು ಯೋಗ್ಯತೆ ಇಲ್ಲದ ನಾಯಕನನ್ನು ಮಾರ್ಗದರ್ಶಕ ಮಂಡಳಿಯಲ್ಲಿ ಇಟ್ಟುಕೊಂಡಿರುವ ಬಿಜೆಪಿ ಪಕ್ಷಕ್ಕೆ ಕಿಂಚಿತ್ತಿದ್ದಾರೂ ನಾಚಿಕೆ, ಮಾನ, ಮರ್ಯಾದೆ ಎನ್ನುವುದು ಇದೆಯೇ? ಬಿಜೆಪಿಯ ಇಂದ್ರ-ಚಂದ್ರ-ಸತ್ಯಹರಿಶ್ಚಂದ್ರನ ತುಂಡುಗಳ ಬಗ್ಗೆ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಮಾಡಿರುವ ಮಾನಗೇಡಿತನಗಳನ್ನು ಕಂತುಗಳಲ್ಲಿ ಮಾತಾಡುವಷ್ಟಿದೆ. ಬಿಜೆಪಿಯ ಗೊಡ್ಡು ಬೆದರಿಕೆಗಳಿಗೆ, ಅವಮಾನಗಳಿಗೆ ಹೆದರುವ, ಬಗ್ಗುವ ಹೇಡಿ ನಾನಲ್ಲ.‌ ನನ್ನದು ಗಾಂಧಿ ಸಂತತಿ- ಹೇಡಿ ಸಾವರ್ಕರ್ ಸಂತತಿಯಂತೂ ಅಲ್ಲವೇ ಅಲ್ಲ. - ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ #BJP #leaders #forgotten #common #people #streets #BKHariprasad #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಕೇಂದ್ರ ಸರ್ಕಾರದ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಯಾವಾಗಲೂ ಮಲತಾಯಿ ಧೋರಣೆ: ಡಿ ಕೆ ಶಿವಕುಮಾರ್ ಶಿವಮೊಗ್ಗ: ಕೇಂದ್ರ ಸರ್ಕಾರದ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಯಾವಾಗಲೂ ಮಲತಾಯಿ ಧೋರಣೆ ಮಾಡಲಾಗುತ್ತಿದೆ. ಆದರೆ, ಇದರ ಬಗ್ಗೆ ಬಿಜೆಪಿ ಸಂಸದರು, ಕೇಂದ್ರ ಸಚಿವರು ಯಾರೂ ದನಿ ಎತ್ತಿಲ್ಲ. ಇವರು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್‌ ಅಲ್ಲಿ ಕೊಟ್ಟ ಮಾತನ್ನೇ ಉಳಿಸಿಕೊಂಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇನೆ ಎಂದು ಹೇಳಿ ಕೊಟ್ಟಿಲ್ಲ ಎಂದು ಟೀಕಿಸಿದರು. ಬಿಜೆಪಿಯವರ ಹಗರಣಗಳನ್ನು ನಾವು ಸಹ ಸಾಕಷ್ಟು ಬಿಚ್ಚಿದ್ದೇವೆ. ಕೋವಿಡ್‌ ಸೇರಿದಂತೆ ಹಿಂದೆ ಇದ್ದಂತಹ ಅನೇಕ ಆರೋಪಗಳಿವೆ. ನಾವು ಅವುಗಳನ್ನು ಬಯಲು ಮಾಡೋಣ. ರಾಜಕೀಯ ಮಾಡಬೇಕಲ್ಲ ಎಂದು ಮಾಡುತ್ತಿದ್ದಾರೆ. ಏನೋ ಒಂದು ಬೇಕಲ್ಲ ಅವರಿಗೆ. ಇದರ ಬಗ್ಗೆ ತನಿಖೆ ಮುಗಿಯಲಿ ಎಂದರು. ಮುಖ್ಯಮಂತ್ರಿಗಳು ಸದನದಲ್ಲಿ ಮನರೇಗಾ ವಿಚಾರವಾಗಿ ಪ್ರಸ್ತಾಪ ಮಾಡಿದ್ದು, ಇದನ್ನು ಕಾರ್ಯಕಲಾಪ ಸಲಹಾ ಸಮಿತಿ ಮುಂದಿಟ್ಟು ತೀರ್ಮಾನ ಮಾಡಬೇಕು ಎಂದು ಸಭಾಧ್ಯಕ್ಷರು ತಿಳಿಸಿದ್ದರು. ಅದರಂತೆ ಗುರುವಾರ ಇದರ ಬಗ್ಗೆ ಚರ್ಚೆಯಾಗಿದೆ. ವಿಬಿ ಗ್ರಾಮ್ ಜಿ ಕಾಯ್ದೆಯನ್ನು ಏಕೆ ರದ್ದು ಮಾಡಬೇಕು ಎಂದು ನಾವು ತಿಳಿಸುತ್ತೇವೆ. ಏಕೆಂದರೆ ಈಗಿರುವ ಪರಿಸ್ಥಿತಿಯಲ್ಲಿ ಯಾವ ರಾಜ್ಯದಲ್ಲಿಯೂ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಈಗ ನಾಲ್ಕೈದು ತಿಂಗಳು ವ್ಯವಸಾಯದ ಕಾಲ. ಈ ಸಮಯದಲ್ಲಿ ರೈತರು ಅವರವರ ಕೂಲಿಯನ್ನು ಅವರು ಪಡೆದುಕೊಳ್ಳುತ್ತಿದ್ದರು ಎಂದರು. ಇಂತಹ ಸಮಯದಲ್ಲಿಯೇ ನರೇಗಾ ಯೋಜನೆ ತೆಗೆದು ಹಾಕಿದರೆ ಯಾರಿಗೂ ಏನೂ ಅನುಕೂಲವಾಗುವುದಿಲ್ಲ. ಮಾನವ ದಿನಗಳನ್ನು 125 ದಿನಗಳಿಗೆ ಹೆಚ್ಚಳ ಮಾಡಿದ್ದೇವೆ ಎಂದು ಹೇಳಬಹುದು. ಆದರೆ ಬೇರೆ ಸಮಯದಲ್ಲಿ ಇಷ್ಟು ದಿನಗಳ ಕಾಲ ಕೆಲಸ ನೀಡಲು ಸಾಧ್ಯವಿಲ್ಲ. ಒಂದೊಂದು ಪಂಚಾಯತಿಗೆ ತಲಾ 1- 1.5 ಕೋಟಿ ರೂ. ಅನುದಾನ ನಷ್ಟವಾಗುತ್ತಿದೆ. ಜಾಬ್‌ ಕಾರ್ಡ್‌ ಹೊಂದಿರುವವರಿಗೂ ನಷ್ಟ ಎಂದರು. #Karnataka #always #treated #like #stepmother #central #budget #DKShivakumar #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 External environment uncertain, India needs to be cautious: Supriya Srinate Economic Survey ▪️Pegs GDP growth for next fiscal FY27 at 6.8-7.2%, this is lower than current fiscal ▪️Projects medium-term growth potential at 7% ▪️Geo political scenario could disrupt foreign capital inflows and consequently impact the Rupee ▪️External environment uncertain, India needs to be cautious ▪️Drying up foreign capital making the Rupee unstable ▪️Net surplus in services and remittances not enough to offset trade deficit ▪️Urges private sector to accelerate investment and job creation ▪️Indian firms’ outward investment rises from $14 bn to $24 bn in FY25 ▪️Manufacturing estimated to contribute 12.8% of GDP in FY26 ▪️Cautions against a bigger economic crisis than 2008 due to overheated AI valuations ▪️Need to retain students beyond Class 8 ▪️India’s pulses, maize and cereal yields remain below global averages ▪️Traffic and expensive houses are roadblocks for development ▪️Policy reshape needed for gig workers Some questions arise on the basis of what the Economic Survey says 👇 👉What are we celebrating? A sub 7% growth rate? 👉Survey estimates FY26 GDP growth at 7.4% and nominal GDP growth for the same period at just 8%. Why is the difference between nominal and real GDP growth rate only 0.6%? 👉Rupee has depreciated by over 6.5%. So a 8% nominal GDP growth with 6.5% Rupee depreciation means dollar GDP growth of just 1.5%. Why are we not worried? 👉For Viksit Bharat by 2047 - India needs a GDP growth of at least 8.2% every year for the next 21 years. What are we doing about it? 👉Finally someone in the govt accepting that the Rupee has been falling, but blaming it all on geo political uncertainty. But who will explain why the Rupee is the worst performing Asian currency especially when the dollar has weakened? 👉Why are foreign portfolio investors pulling money out of India? What is the plan to save the Rupee from this withdrawal? 👉Why is net FDI negative for 4 months in a row? 👉Why is India’s private sector not investing in India? 👉Why are Indian corporates investing more overseas than in India (outward investment of Indian cos rises from $14 bn to $24 bn in FY25)? 👉Why is manufacturing’s contribution to overall GDP still languishing at 12.8% - down from 15.6% under UPA and way below the targeted 25% of GDP? 👉Why have Make In India, Production-Linked Incentives (PLIs), failed to boost manufacturing? 👉Modi govt had announced 3 Employment-Linked-Incentive schemes (ELIs) in FY25 Budget to create more than 2 crore jobs. How many jobs have been created? 👉Govt had also announced an incentive scheme for 1 crore internships. Why did less than 10,000 people intern in the last 18 months? 👉Survey shows Corporate tax contribution to the total tax kitty declining, personal income tax collection rising. Why are all incentives then for wealthy corporates and not the ordinary tax payers? 👉The survey’s acceptance that students beyond Class 8 are dropping out should ring alarm bells for our education system. Does the Modi govt care which has shut down 90,000 Govt schools and consistently reduced education budget over the years? 👉Survey says India’s pulses, maize and cereal yields remain below global averages - what is being done to make agriculture more remunerative? 👉Survey says traffic and expensive houses are roadblocks for development - will the unliveable urban cities saddled with traffic, waste and pollution wake the govt up? - Supriya Srinate #External #environment #uncertain #India #needs #cautious #SupriyaSrinate #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#📜ಪ್ರಚಲಿತ ವಿದ್ಯಮಾನ📜 ಉಳ್ಳವರ ಮಕ್ಕಳಿಗಳಿಗೆ ಅಕಾಡೆಮಿಗಳಿವೆ, ಬಡವರ ಮಕ್ಕಳಿಗೆ ಮೈದಾನಗಳೂ ಇಲ್ಲ ಉಳ್ಳವರ ಮಕ್ಕಳು ಆಟ ಆಡಲು ಅಕಾಡಮಿಗಳಿದೆ, ಬಡವರ ಮಕ್ಕಳು ಆಟವಾಡಲು ಮೈದಾನಗಳೇ ಇಲ್ಲ ಬೆಂಗಳೂರು ನಗರದಲ್ಲಿ ಸಿಕ್ಕಸಿಕ್ಕ ಕಡೆಯಲ್ಲಿ ಸರ್ಕಾರಿ ಜಾಗ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ಖಾಲಿ ಪ್ರದೇಶಗಳನ್ನು ತಮ್ಮ ಜೇಬು ತುಂಬಿಸಿಕೊಳ್ಳುವ ಸಲುವಾಗಿ ಉದ್ಯಾನವನಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಇಲ್ಲಿ ಒಂದಷ್ಟು ಆಟದ ಸಾಮಾನು ಮತ್ತು ಜಿಮ್ನಾಸ್ಟಿಕ್ ಉಪಕರಣಗಳು ಇವುಗಳನ್ನು ಅಳವಡಿಸಿ ಬಿಡುಗಡೆಯಾದ ಹಣದಲ್ಲಿ ಒಂದಷ್ಟನ್ನು ಖರ್ಚು ಮಾಡಿ ಉಳಿದ ಹಣವನ್ನು ತಮ್ಮ ಕಿಸೆಗಳಿಗೆ ತುಂಬಿಸಿಕೊಳ್ಳುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿರುತ್ತದೆ. ಇದರಿಂದಾಗಿ ಸಾಮಾನ್ಯ ಜನರ ಮಕ್ಕಳು ಆಟವಾಡಲು ಅನೇಕ ಬಡಾವಣೆಗಳಲ್ಲಿ ಆಟದ ಮೈದಾನಗಳ ಇಲ್ಲ. ಉಳ್ಳವರ ಮಕ್ಕಳಿಗಾಗಿ ಅನೇಕ ಅಕಾಡೆಮಿಗಳಿಗೆ ಮತ್ತು ತರಬೇತಿ ಸಂಸ್ಥೆಗಳಿಗೆ ಅಲ್ಲಿ ಅವರು ತಮ್ಮ ಮಕ್ಕಳನ್ನು ಆಟ ಆಡಲು ಸೇರಿಸಿ ತರಬೇತಿ ಕೊಡಿಸುತ್ತಾರೆ. ಆದರೆ ಸಾಮಾನ್ಯ ಜನರ ಮಕ್ಕಳು ಆಟ ಆಡಲು ಮೈದಾನಗಳು ಇಲ್ಲ, ಅಕಾಡೆಮಿಗಳನ್ನು ಸೇರಲು ಅವರ ಪೋಷಕರ ಜೇಬಿನಲ್ಲಿ ಹಣವಿಲ್ಲ. ಸದ್ಯದಲ್ಲಿಯೇ ನಡೆಯುವ ಜಿಬಿಎ ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷದವರು ತಮ್ಮ ಪ್ರಣಾಳಿಕೆಗಳಲ್ಲಿ ಪ್ರತಿಯೊಂದು ವಾರ್ಡಿಗೆ ಕನಿಷ್ಠ ಒಂದು ಆಟದ ಮೈದಾನಗಳನ್ನು ಅಭಿವೃದ್ಧಿ ಪಡಿಸುವ ತೀರ್ಮಾನವನ್ನು ಮಾಡಿ ಅದರಂತೆ ನಡೆದುಕೊಳ್ಳಿ. ಸಾಮಾನ್ಯ ಜನರ ಮಕ್ಕಳು ಮತ್ತು ಬಡವರ ಮಕ್ಕಳು ರಸ್ತೆಗಳ ಮೇಲೆ ಆಟ ಆಡಬೇಕು ವಾಹನಗಳ ಓಡಾಟವಿರುತ್ತದೆ ಮತ್ತು ಮನೆಯವರ ಬೈಗುಳವು ಸಾಕಷ್ಟು ಈ ಮಕ್ಕಳಿಗೆ ಸಿಗುತ್ತದೆ. ಇದರಿಂದಾಗಿ ಇವರಿಗೆ ಆಟವಾಡಲು ಸಾಧ್ಯವಾಗುವುದಿಲ್ಲ. ಇರುವ ಹಲವಾರು ಮೈದಾನಗಳಲ್ಲಿ ಪ್ರತಿಷ್ಠಿತ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ನೋಂದಾಯಿಸಿಕೊಂಡಿರುವ ಮಕ್ಕಳಿಗೆ ತರಬೇತಿ ನೀಡಲು ಮೈದಾನಗಳನ್ನು ಗುತ್ತಿಗೆಗೆ ಪಡೆದುಕೊಂಡಿರುತ್ತಾರೆ. ಹೀಗಾಗಿ ಅಲ್ಲಿಯೂ ಸಾಮಾನ್ಯ ಮಕ್ಕಳಿಗೆ ಆಟ ಆಡಲು ಸ್ಥಳಗಳು ದೊರೆಯುವುದಿಲ್ಲ. ಹಲವಾರು ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಇನ್ನು ಬಡಾವಣೆಗಳಲ್ಲೂ ಆಟದ ಮೈದಾನಗಳು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಆಟದ ಮೈದಾನಗಳ ಕಡೆ ಗಮನವನ್ನು ಹರಿಸಬೇಕಾಗಿದೆ. ಹಿರಿಯ ನಾಗರಿಕರಿಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲಾ ಕಡೆಯಲ್ಲೂ ವಾಯು ವಿಹಾರಕ್ಕಾಗಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಸ್ಥಳೀಯ ಸಂಸ್ಥೆಗಳಿಗೆ ಬಾಳಿ ಬದುಕಬೇಕಾಗಿರುವ ಮುಂದಿನ ಪೀಳಿಗೆಯ ಆಸ್ತಿಗಳಾಗಿರುವ ಮಕ್ಕಳ ಬಗ್ಗೆಯೂ ಚಿಂತಿಸಬೇಕಾಗಿದೆ. - ಕೆ ಎಸ್ ನಾಗರಾಜ್, ಬೆಂಗಳೂರು #playgrounds #children #poor #ksnagaraj #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಉಳ್ಳವರ ಮಕ್ಕಳಿಗಳಿಗೆ ಅಕಾಡೆಮಿಗಳಿವೆ;, ಬಡವರ ಮಕ್ಕಳಿಗೆ ಮೈದಾನಗಳೂ ಇಲ್ಲ ಸುದ್ರಿ & ಉಂಯಲ್ಲಿ್ 'Saqa Please subscribe to Malgudi Express YouTube and Website EXPRESS ಉಳ್ಳವರ ಮಕ್ಕಳಿಗಳಿಗೆ ಅಕಾಡೆಮಿಗಳಿವೆ;, ಬಡವರ ಮಕ್ಕಳಿಗೆ ಮೈದಾನಗಳೂ ಇಲ್ಲ ಸುದ್ರಿ & ಉಂಯಲ್ಲಿ್ 'Saqa Please subscribe to Malgudi Express YouTube and Website EXPRESS - ShareChat
#📜ಪ್ರಚಲಿತ ವಿದ್ಯಮಾನ📜 ಚಿತ್ರದುರ್ಗದಲ್ಲಿ ಬೃಹತ್ ಉದ್ಯೋಗ ಮೇಳ 100ಕ್ಕೂ ಹೆಚ್ಚು ಕಂಪನಿಗಳು ಭಾಗಿ ಯುವನಿಧಿ ಫಲಾನುಭವಿಗಳ ಕಡ್ಡಾಯ ನೊಂದಣಿಗೆ ಸಿಇಓ ಡಾ.ಆಕಾಶ್ ಸೂಚನೆ ಚಿತ್ರದುರ್ಗ: ಫೆಬ್ರವರಿ 01 ರಂದು ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಯುವನಿಧಿಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಜಿಲ್ಲೆಯ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ನೊಂದಣಿ ಮಾಡಲು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್ ನಿರ್ದೇಶನ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ಜರುಗಿದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ಫೆ. 01 ರಂದು ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು, ಸುಮಾರು 1,800 ಅಭ್ಯರ್ಥಿಗಳು ಈಗಾಗಲೆ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಉದ್ಯೋಗ ಮೇಳದಲ್ಲಿ 7,500 ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಐಟಿ, ಬಿಟಿ, ಮೆಕ್ಯಾನಿಕಲ್, ಆಟೋಮೊಬೈಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 100 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಬಿ.ಇ ಪದವೀಧರರಿಗಾಗಿ ಪ್ರತಿಷ್ಠಿತ ಐಟಿ ಕಂಪನಿಗಳು ಸಹ ಈ ಬಾರಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ ಹಾಗೂ ಇತರೆ ಯಾವುದೇ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ಅಭ್ಯರ್ಥಿ ಕನಿಷ್ಠ 05 ರಿಂದ 06 ರೆಸ್ಯೂಮ್ ಪ್ರತಿ ಹಾಗೂ ಪೂರಕ ದಾಖಲೆಗಳೊಂದಿಗೆ ಹಾಜರಾಗಬೇಕು. ಈಗಾಗಲೇ ಜಿಲ್ಲೆಯ ಉದ್ಯೋಗ ವಿನಿಮಯ ಕೇಂದ್ರದಲ್ಲಿ ತಾಂತ್ರಿಕ ಶಿಕ್ಷಣ ಪೂರೈಸಿದ 967ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ನೊಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಡಿಪೆÇ್ಲಮೋ ಹಾಗೂ ಐಟಿಐ ಪೂರೈಸಿದ 1,500 ವಿದ್ಯಾರ್ಥಿಗಳು ಇದ್ದಾರೆ. ಇದರೊಂದಿಗೆ ಯುವನಿಧಿ ಯೋಜನೆಯಡಿ 5,034 ಫಲಾನುಭವಿಗಳು ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಕಡ್ಡಾಯವಾಗಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗ ಪಡೆದುಕೊಳ್ಳಬೇಕು. ಇದಕ್ಕಾಗಿ ಎಲ್ಲಾ ಅಧಿಕಾರಿಗಳು ಸಂಘಟಿತವಾಗಿ ಪ್ರಯತ್ನಿಸಿ ಪ್ರತಿ ಅಭ್ಯರ್ಥಿಗಳಿಗೂ ವೈಯಕ್ತಿಕವಾಗಿ ಕರೆ ಮಾಡಿ ನೊಂದಣಿ ಮಾಡಿಕೊಳ್ಳುವಂತೆ ತಿಳಿಸಬೇಕು ಎಂದು ತಿಳಿಸಿದರು. ನೆರೆ ಜಿಲ್ಲೆಗಳ ಕಂಪನಿಗಳಿಗೂ ಆಹ್ವಾನ: ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಗಡಿ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ ಚಿತ್ರದುರ್ಗ ಮಾತ್ರವಲ್ಲದೆ ತುಮಕೂರು, ಶಿವಮೊಗ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಮೇಳದಲ್ಲಿ ಅಭ್ಯರ್ಥಿಗಳ ವಿದ್ಯಾರ್ಹತೆ ಆಧಾರಿಸಿ ಕಂಪನಿಗಳನ್ನು ಶಿಫಾರಸ್ಸು ಮಾಡಲು 8 ರಿಂದ 10 ಕೌಂಟರ್ ಗಳನ್ನು ತೆರೆಯಲಾಗುವುದು. ಸುಮಾರು 25 ಕೊಠಡಿಗಳಲ್ಲಿ ಉದ್ಯೋಗದಾತ ಕಂಪನಿಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಲಿಸಲಾಗುವುದು ಎಂದು ಹೇಳಿದರು. ವ್ಯಾಪಕ ಪ್ರಚಾರಕ್ಕೆ ಸೂಚನೆ: ಉದ್ಯೋಗ ಮೇಳದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಪಾಲ್ಗೊಳ್ಳುವಂತೆ ಮಾಡಲು ಸರಳವಾದ ಆನ್‍ಲೈನ್ ನೊಂದಣಿ ಪ್ರಕ್ರಿಯೆ ಮಾಡಲಾಗಿದೆ. ಗೂಗಲ್ ಫಾರ್ಮ್ ನಲ್ಲಿ ನೊಂದಣಿಗೆ ಕ್ಯೂಆರ್ ಕೋಡ್ ರೂಪಿಸಿ, ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಮೇಳ ಕುರಿತು ಜಿಲ್ಲೆಯ ಎಲ್ಲ 189 ಗ್ರಾಮ ಪಂಚಾಯತಿಗಳೂ ಸೇರಿದಂತೆ ಎಲ್ಲ ನಗರ, ಪಟ್ಟಣ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವಚ್ಛ ವಾಹಿನಿ ವಾಹನಗಳಲ್ಲಿ ಜಿಂಗಲ್ ಪ್ರಸಾರ ಮಾಡುವ ಮೂಲಕ ಪ್ರಚಾರ ಕೈಗೊಳ್ಳಬೇಕು. ಎಲ್ಲ ಐಟಿಐ, ಡಿಪ್ಲೋಮಾ, ಪದವಿ, ಇಂಜಿನಿಯರಿಂಗ್ ಸೇರಿದಂತೆ ತಾಂತ್ರಿಕ ಶಿಕ್ಷಣದ ಕಾಲೇಜುಗಳ ಮುಖ್ಯಸ್ಥರ ಮೂಲಕ ವಿದ್ಯಾರ್ಥಿಗಳಿಗೆ ಸಂದೇಶ ತಲುಪಿಸುವ ಕಾರ್ಯ ಮಾಡಬೇಕು. ಉದ್ಯೋಗ ಮೇಳ ಸಂದರ್ಭದಲ್ಲಿ ಸರ್ಕಾರಿ ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜು ಸಿಬ್ಬಂದಿಗಳನ್ನು ಕಂಪನಿಗಳು ಸಂದರ್ಶನ ನಡೆಸುವ ಕೊಠಡಿಗಳಿಗೆ ಮೇಲ್ವಿಚಾರಣೆಗಾಗಿ ನಿಯೋಜಿಸಬೇಕು. ಹೆಚ್ಚು ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳು ಸಮನ್ವಯದೊಂದಿಗೆ ನೊಂದಣಿ ಮಾಡಿಸುವ ಕಾರ್ಯ ಮಾಡಬೇಕು. ಉದ್ಯೋಗ ಮೇಳ ನಡೆಯುವ ಸ್ಥಳದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಗೊಂದಲಕ್ಕೆ ಅವಕಾಶಗದ ರೀತಿಯಲ್ಲಿ ಅಚ್ಚುಕಟ್ಟಾಗಿ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದು ಜಿಪಂ ಸಿಇಒ ಆಕಾಶ್ ಸೂಚನೆ ನೀಡಿದರು. ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆ ಉಪನಿರ್ದೇಶಕ ಮಂಜುನಾಥ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ, ಉದ್ಯೋಗಾಧಿಕಾರಿ ರವೀಂದ್ರ, ಜಿಟಿಟಿಸಿ ಪ್ರಾಂಶುಪಾಲ ಸುಹಾಸ್, ಕಾರ್ಮಿಕ ಅಧಿಕಾರಿ ಅನಿಲ್ ಬಗಟೆ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ, ಸಹಾಯಕ ಸಾಂಖ್ಯಿಕ ಅಧಿಕಾರಿ ವೇಮಣ್ಣ.ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. #Huge #job #fair #employment #Chitradurga #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ShareChat
#🙏ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ🇮🇳 ಅಹಿಂಸೆಯ ಹರಿಕಾರ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ಸತ್ಯ, ಅಹಿಂಸೆ ಮತ್ತು ಸ್ವರಾಜ್ಯದ ತತ್ವಗಳ ಮೂಲಕ ವಿಶ್ವಕ್ಕೇ ಮಾದರಿಯಾದವರು ಮಹಾತ್ಮ ಗಾಂಧೀಜಿ. ಅವರ 'ಗ್ರಾಮ ಸ್ವರಾಜ್ಯ'ದ ಕನಸು ಕೇವಲ ಹಕ್ಕುಗಳ ಹೋರಾಟವಾಗಿರಲಿಲ್ಲ; ಅದು ನಮ್ಮ ಹಳ್ಳಿಗಳ ಸ್ವಾವಲಂಬನೆ ಮತ್ತು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯ ಸಂಕೇತವಾಗಿತ್ತು. ಇಂದು ನಾವು ಕೈಗೆತ್ತಿಕೊಂಡಿರುವ 'ಸ್ವರಾಜ್' ಅಭಿಯಾನದ ಮೂಲಕ ಅವರ ಆಶಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಊರಿನ ಸ್ವಚ್ಛತೆ, ಸ್ಥಳೀಯ ಸಂಪನ್ಮೂಲಗಳ ಬಳಕೆ ಮತ್ತು ಸಮುದಾಯದ ಸಹಭಾಗಿತ್ವವೇ ಗಾಂಧೀಜಿಯವರಿಗೆ ನಾವು ಸಲ್ಲಿಸುವ ನಿಜವಾದ ಗೌರವ. ಬನ್ನಿ, ಗಾಂಧೀಜಿಯವರ ತತ್ವಗಳ ಹಾದಿಯಲ್ಲಿ ಸಾಗುತ್ತಾ, ಸುಂದರ ಮತ್ತು ಸ್ವಾವಲಂಬಿ ಸಮಾಜವನ್ನು ಕಟ್ಟೋಣ. - ದರ್ಶನ್ ಪುಟ್ಟಣ್ಣಯ್ಯ, ಶಾಸಕ #MahatmaGandhi #MartyrsDay #Swarajya #DarshanPuttannaiah #Melukote #Gramaswarajya #NonViolence #Peace #India #malgudiexpress #malgudinews #news #TopNews | Subscribe | Comment | Like | Share |
🙏ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ🇮🇳 - 30 ಕರ್ನಾಟಕ ರಾಜ್ಯ ` ಜನವರಿ ರೈತ ಸಂಘ 2026 0 ಸತ್ಯ , ಅಹಿಂಸಾತ್ಮಕ ಹೋರಾಟ ಮತ್ತು ಸ್ವರಾಜ್ಯದ ಕಲ್ಪನೆಯ ಮೂಲಕ ಜಗಕ್ಕೆ ಹೊಸ ಹೊಳಪು ನೀಡಿದ" ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ పుణ్యి ಸ್ಮರಣೆ ಅವರ ದರ್ಶನ್ ಪುಟ್ಟಣ್ಣಯ್ಯ ರಾಸಕರು ಮೇಲುಕೋಟೆ ವಿಧಾನಸಭಾ ಕ್ಷೇತ್ರ darshanputtannaiahofficial dputtannaiah darshanputtannaiah_krrs 30 ಕರ್ನಾಟಕ ರಾಜ್ಯ ` ಜನವರಿ ರೈತ ಸಂಘ 2026 0 ಸತ್ಯ , ಅಹಿಂಸಾತ್ಮಕ ಹೋರಾಟ ಮತ್ತು ಸ್ವರಾಜ್ಯದ ಕಲ್ಪನೆಯ ಮೂಲಕ ಜಗಕ್ಕೆ ಹೊಸ ಹೊಳಪು ನೀಡಿದ" ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ పుణ్యి ಸ್ಮರಣೆ ಅವರ ದರ್ಶನ್ ಪುಟ್ಟಣ್ಣಯ್ಯ ರಾಸಕರು ಮೇಲುಕೋಟೆ ವಿಧಾನಸಭಾ ಕ್ಷೇತ್ರ darshanputtannaiahofficial dputtannaiah darshanputtannaiah_krrs - ShareChat