Wallet Install
Home
Explore
Wallet
Video
Profile
Trends
English
M M RAMESH  - Author on ShareChat: Funny, Romantic, Videos, Shayari, Quotes
M M RAMESH
520 views • 10 hours ago
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #ದಿನಪತ್ರಿಕೆ #🤓ಸರಕಾರಿ ಉದ್ಯೋಗ ಅಪ್ಡೇಟ್ಸ್ #📜ಪ್ರಚಲಿತ ವಿದ್ಯಮಾನ📜
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ಕೆಪಿಎಸ್‌ಸಿ ಅಧ್ಯಕ್ಷರನ್ನು ಅಮಾನತುಗೊಳಿಸಿ ರಾಜ್ಯಪಾಲ ಗೆಹೋತ್ ಆದೇಶ ಲೋಪಸೇವಾ ಆಯೋಗಕ್ಕೆ ಮುಖಭಂಗ , ಅಧ್ಯಕ್ಷರಿಗೆ ಕುತ್ತಾದ ಪುತ್ರಿವ್ಯಾಮೋಹ ಕೆಪಿಎಸ್ಸಿ ಸಾಹುಕಾರ್ ಔಟ್ ಸುಪ್ರೀಂ ನ್ಯಾಯಾಧೀಶರ ಮೂಲಕ ಪ್ರಕರಣದ ತನಿಖೆಗೆ ರಾಷ್ಟ್ರಪತಿಗೆ ಶಿಫಾರಸು N ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಇಬ್ಬರು ಪ್ರಕ್ರಿಯರು , ಸರಕಾರಿ ಹುದ್ದೆ ಪಡೆಯಲು ಸಹಕರಿಸಿದ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರನ್ನು ಕೂಡಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹೋತ್ ಆದೇಶ ಹೊರಡಿಸಿದ್ದಾರೆ . 75 ವರ್ಷಗಳ ಇತಿಹಾಸವುಳ್ಳ ಲೋಕಸೇವಾ ಆಯೋಗದ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪಗಳು ಹೊಸ ದಲ್ಲವಾದರೂ ಅಧ್ಯಕ್ಷರೊಬ್ಬರು ಅಮಾನತಾಗಿರುವುದು ಇದೇ ಮೊದಲು . ಸ್ವಜನಪಕ್ಷಪಾತ , ಅಧಿಕಾರ ದುರುಪ ಯೋಗ ಮತ್ತು ಆರ್ಥಿಕವಾಗಿ ಹಿ ೦ ದುಳಿದ ವರ್ಗಕ್ಕೆ ನೀಡುವ ಮೀಸಲು ಪಡೆಯಲು ನಕಲಿ ಆದಾಯ ಪ್ರಮಾಣಪತ್ರ ಸಲ್ಲಿಕೆ ಸೇರಿ ದಂತೆ ಹಲವು ಗಂಭೀರ ಆರೋಪಗಳ ಹಿನ್ನೆಲೆ ಯಲ್ಲಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್ .ಪ್ರಭು ಶಂಕರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ . ಮುಂದಿನ ಆದೇಶ ಆಗುವವರಗೆ ಆಯೋಗದ ಹಿಲಯ ಸದಸ್ಯರು ಆಯೋಗದ ಹಂಗಾಮಿ ಅಧ್ಯಕ್ಷ ರಾಗಿ ಕಾರ್ಯನಿರ್ವಹಿಸುವಂತೆ ರಾಜ್ಯ ಪಾಲರು ಆದೇಶಿಸಿದ್ದಾರೆ ಎಂದು ಲೋಕ ಭವನದ ಪ್ರಕಟಣೆ ತಿಳಿಸಿದೆ . ಇದೇ ವೇಳೆ ಶಿವಶಂಕರಪ್ಪ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಶಿಫಾರಸು ಮಾಡಲಾಗಿದೆ . ಪ್ರಕರಣ ವನ್ನು ಸುಪ್ರೀಂ ಕೋರ್ಟಿಗೆ ಉಲ್ಲೇಖಿಸಲು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಶಿಫಾರಸು ಮಾಡಿದ್ದಾರೆ . ಹಗರಣ ?: ಕೈಗಾರಿಕೆ ವಾಣಿಜ್ಯ • ಅಮಾನತಿಗೆ ಕಾರಣಗಳೇನು ? ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ನಕಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿರುವ ಆರೋಹದ ಮೇಲೆ ಪತಿ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲು , * 2002 ಮಾರ್ಚ್ 30 ರ ಸರಕಾರಿ ಆದೇಶ ಸಂಖ್ಯೆ ಸಮಾಜ ಕಲ್ಯಾಣ ಇಲಾಖೆ 225 ಬಿಸಿಎ 2000 ರ ಪ್ರಕಾರ , ಕರ್ನಾಟಕದಲ್ಲಿ ಕೆಪಿಎಸ್‌ಸಿ ಅಧ್ಯಕ್ಷರ ಮಕ್ಕಳು ಹಿಂದುಳಿದ ವರ್ಗಗಳ ಕೋಟಾದಡಿ ಮೀಸಲು ಪಡೆಯಲು ಅರ್ಹರಲ್ಲ . ಈ ಸಾಂವಿಧಾನಿಕ ಸಂಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಅಭ್ಯರ್ಥಿಗಳಲ್ಲಿ ಉಂಟಾದ ತೀವ್ರ ಆಕ್ರೋಶ . ಪ್ರಭುದೇವ ಹಂಗಾಮಿ ಅಧ್ಯಕ್ಷ ಶಿವಶಂಕರಪ್ಪ ಎಸ್ . ಸಾಹುಕಾರ ಅವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ಅವರ ' ದುರ್ನಡತೆ ' ಯನ್ನು ಎತ್ತಿ ತೋರಿಸುತ್ತಿವೆ . ಈ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದ ವಿಧಿ 317 ( 1 ) ರ ಅಡಿಯಲ್ಲಿ ಅಗತ್ಯ ತನಿಖೆ ನಡೆಸಲು ಪ್ರಕರಣವನ್ನು ಭಾರತದ ಸುಪ್ರೀಂಕೋರ್ಟ್‌ಗೆ ಉಲ್ಲೇಖಿಸುವಂತೆ ರಾಜ್ಯ ಪಾಲರು ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ . ರಾಷ್ಟ್ರಪತಿಗಳಿಂದ ಮುಂದಿನ ಆದೇಶ ಬರುವವರೆಗೆ ಈ ಅಮಾನತು ಆದೇಶ ಜಾರಿಯಲ್ಲಿರಲಿದೆ . ಅಲ್ಲಿಯವರೆಗೆ ಆಯೋಗದ ಹಿರಿಯ ಸದಸ್ಯ ಜಿ . ಪ್ರಭುದೇವ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ . 45 ದಿನಾಂಕ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ ಕೇವಲ 40 ಸಾವಿರ ಎಂದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ . ಕೆಪಿಎಸ್‌ಸಿ ಅಧ್ಯಕ್ಷರು ತಮ್ಮ ಅಧಿಕಾರ ವನ್ನು ದುರು ಪಯೋಗಪಡಿಸಿಕೊಂಡು , ತಮ್ಮ ಮಗಳನ್ನು ' ಕೈಗಾರಿಕಾ ವಿಸ್ತರಣಾ ಅಧಿಕಾರಿ ' ಹುದ್ದೆಗೆ ಕಾನೂನುಬಾಹಿರವಾಗಿ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೂರಲಾಗಿದೆ . ಯಲ್ಲಿನ 30 ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳಿಗೆ ಸಾಹುಕಾರನಾದರೂ ಬಿಪಿಎಲ್ ಕೆಟಗರಿ ! 2024 ರ ಮಾರ್ಚ್ 15 ರಂದು ಲಾಗಿತ್ತು . ಈ ಹುದ್ದೆಗಾಗಿ ಕೆಪಿಎಸ್‌ ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್ . ಸಾಹುಕಾರ ಅವರ ಪುತ್ರಿ ಸುಮಾ ಎಸ್ . ಸಾಹುಕಾರ್ ಅವರು 3 ಜಿ ಮಿಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು . 1 : 3 ಅನುಪಾತದ ಅರ್ಹತಾ ಪಟ್ಟಿಯಲ್ಲಿ ಸಾನ ಪಡೆದಿದ್ದ ಅವರು ಫೆಬ್ರವರಿ 19 ರಂದು ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಿದರು . ದಾಖಲೆಗಳ ಪುತಿನ ವೇಳೆ , ಅವರು ಸಲ್ಲಿಸಿದ 2020 ರ ಮಾರ್ಚ್ ಕೆಪಿಎಸ್‌ ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಅವರ ಪುತ್ರಿ ಸುಮಾ ಎಸ್ ಸಾಹುಕಾರ ವಿರುದ್ದ ಕೆಲ ದಿನಗಳ ಹಿಂದೆ ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು . ಕೈಗಾರಿಕಾ ವಿಸ್ತರಣಾ ಧಿಕಾರಿ ಮದ್ದೆಗೆ ಅರ್ಜಿ ಸಲ್ಲಿಸುವಾಗ ನಕಲಿ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿರುವ ಆರೋಪದ ಮೇಲೆ ಈ ಪ್ರಕರಣ ದಾಖಲಾಗಿತ್ತು . ಅಭ್ಯರ್ಥಿಗಳ ದಾಖಲೆ ಪರಿಶೀಲನೆ ವೇಳೆ ಸುಮಾ ಅವರು ತಮ್ಮ ಕುಟುಂಬದ ವಾರ್ಷಿಕ ಆದಾಯವನ್ನು 40 ಸಾವಿರ ರು . ಎಂದು ನಮೂದಿಸಿರುವುದು ಬೆಳಕಿಗೆ ಬಂದಿತ್ತು . ಆದರೆ , ತಂದೆ ಅವರಂಕರಪ್ಪ ಅವರ ಮಾಸಿಕ ವೇತನವೇ 2,25,000 ರು . ಆಗಿದ್ದು , ಸರಕಾರಿ ಹುದ್ದೆ ಪಡೆಯಲು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿತ್ತು . - ShareChat
12 likes
12 shares
Home
Explore
Wallet
Video