ShareChat
click to see wallet page
search
ಶ್ರೀ ಗುರು ಬಸವ ಲಿಂಗಾಯನಮಃ.. "ಭಕ್ತ ಶಾಂತನಾಗಿರಬೇಕು, ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು, ಭೂತಹಿತವಹ ವಚನವ ನುಡಿಯಬೇಕು, ಗುರುಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕು, ಸಕಲ ಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು, ತನುಮನಧನವ ಗುರುಲಿಂಗ ಜಂಗಮಕ್ಕೆ ಸವೆಸಲೇಬೇಕು, ಅಪಾತ್ರದಾನವ ಮಾಡಲಾಗದು, ಸಕಲೇಂದ್ರಿಯಗಳ ತನ್ನ ವಶವ ಮಾಡಬೇಕು, ಇದೇ ಮೊದಲಲ್ಲಿ ಬೇಹ ಶೌಚ ನೋಡಾ. ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇಸಾಧನ ಕೂಡಲಚೆನ್ನಸಂಗಮದೇವಾ.. ✍️ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳//
ಬಸವಣ್ಣನವರ ವಚನಗಳು - ಜ್ಞಾನಭಂಡಾರಿ ಚನ್ನಬಸವಣ್ಣನವರು  ಶರಣ ಜ್ಞಾನಭಂಡಾರಿ ಚನ್ನಬಸವಣ್ಣನವರು  ಶರಣ - ShareChat