ಮುಂಜಾನೆಯ ರವಿಯ ಕಿರಣ
ತಾಗಿ ಕೆಂಪಾಯಿತು ಬಾನಂಗಣ
ಕಂಗೊಳಿಸಿತು ತಳಿರು ತೋರಣ
ನೋಡಿ ನಮಗಾಯಿತು ರಸದೌತಣ
ಬಿದ್ದಾಗ ಮಂಜಿನ ಹನಿ ಹುಲ್ಲಿನ ಮೇಲೆ
ಎಲ್ಲೆಲ್ಲೂ ಹರಡಿತು ಮುತ್ತಿನ ಮಾಲೆ
ಸ್ಪುರಿಸಿತು ಸುತ್ತಲೂ ಜೀವದ ಸೆಲೆ
ಅರಿತೆ ನಾ ಪ್ರಕೃತಿಯ ಬೆಲೆ
ಕೇಳಿದೆ ನಾ ಹಕ್ಕಿಗಳ ಕಲರವ
ನೋಡಿದೆ ಹುರುಪಿನ ಹಾರಾಟವ
ಮುದಗೊಂಡೆ ಕಂಡು ಹೊಸ ದಿನವ
ಅಚ್ಚರಿಗೊಂಡೆ ಕಂಡು ನವ ದಿಗಂತವ
ಎಂಥ ಅದ್ಭುತ ಈ ಸೃಷ್ಟಿಯ ಚಿತ್ತಾರ
ಎಲ್ಲೆಲ್ಲೂ ನಗೆಯ ಮಂದಾರ
ಕಂಡಾಗ ಬೆಳಗಿನ ಹಂದರ
ನಮ್ಮಯ ಬಾಳು ಬಂಗಾರ #📝ನನ್ನ ಕವಿತೆಗಳು #🖋️ ನನ್ನ ಬರಹ #😍 ನನ್ನ ಸ್ಟೇಟಸ್ #✍️ ಮೋಟಿವೇಷನಲ್ ಕೋಟ್ಸ್ #💓ಮನದಾಳದ ಮಾತು


