ShareChat
click to see wallet page
search
#📜ಪ್ರಚಲಿತ ವಿದ್ಯಮಾನ📜 ನನಸಾದ ಪೂಜ್ಯ ಸಿದ್ದೇಶ್ವರ ಶ್ರೀಗಳ ಕನಸು: ಎಂ ಬಿ ಪಾಟೀಲ್ ತೀಕೋಟಾದಲ್ಲಿ ಕಂಗೊಳಿಸುತ್ತಿದೆ ಕ್ಯಾಲಿಫೋರ್ನಿಯಾದ ಉತ್ಕೃಷ್ಟ ದ್ರಾಕ್ಷಿ ಬೆಳೆ • ರೈತರಿಗೆ ಉತ್ಕೃಷ್ಟ ದ್ರಾಕ್ಷಿ ತಳಿ ಆರಾ-36 (ARD-36) ಪರಿಚಯ • ತಿಕೋಟಾ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 100 ಎಕರೆಯಲ್ಲಿ ಬೆಳೆ • ಸಾಮಾನ್ಯ ದ್ರಾಕ್ಷಿಗಿಂತ ಮೂರು ಪಟ್ಟು ಅಧಿಕ ದರ - ರೈತರಿಗೆ ಹೆಚ್ಚಿನ ಲಾಭ ವಿಜಯಪುರ: ಒಂದು ಕಾಲದಲ್ಲಿ ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ವಿಜಯಪುರದ ಬದಲಾವಣೆಗೆ ಕಾರಣವಾದದ್ದು ನೀರಾವರಿ, ಅದಕ್ಕೆ ಸ್ಪೂರ್ತಿ ನೀಡಿದ್ದು ಪೂಜ್ಯ ಸಿದ್ದೇಶ್ವರ ಶ್ರೀಗಳ "ಈ ಭೂಮಿಗೆ ಒಂದು ಬೊಗಸೆ ನೀರು ಕೊಡಿ, ಇದು ಕ್ಯಾಲಿಫೋರ್ನಿಯಾವನ್ನು ಮೀರಿಸುತ್ತದೆ" ಎಂಬ ಆಶಯ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಿಂದ 2018ರ ಅವಧಿಯಲ್ಲಿ ಸಿದ್ದರಾಯ್ಯನವರ ನೇತೃತ್ವದ ಸರ್ಕಾರದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ನಮ್ಮ ಜಿಲ್ಲೆಯ ನೀರಾವರಿ ಕನಸು ನನಸಾಯಿತು. ಮುಂದೆ ರೈತರು ಹಲವಾರು ಕೃಷಿ-ತೋಟಗಾರಿಕೆ ಪ್ರಯೋಗಗಳನ್ನು ಮಾಡಿ ಸಮೃದ್ಧವಾಗಿ ಬೆಳೆ ತೆಗೆಯುತ್ತಿದ್ದಾರೆ ಎಂದರು. ಜಿಲ್ಲೆಗೆ ನಾವು ಹಾಕಿಕೊಂಡಿದ್ದ ಅಭಿವೃದ್ಧಿಯ ನೀಲನಕ್ಷೆ "ಜಲ - ವೃಕ್ಷ - ಶಿಕ್ಷಣ" ಕ್ರಾಂತಿಯಿಂದ ಮುಂದುವರಿದು ಇದೀಗ "ಕ್ಷೀರ ಕ್ರಾಂತಿ" ಹಾಗೂ "ಉದ್ಯೋಗ ಕ್ರಾಂತಿ"ಗೆ ಮುನ್ನುಡಿ ಬರೆಯುತ್ತಿದ್ದೇವೆ ಎಂದರು. ಅಂತೆಯೇ ನಮ್ಮ ಜನರ ಸ್ವಾವಲಂಬಿ ಬದುಕಿಗಾಗಿ ಈಗಾಗಲೇ ಹೆಸರಾಂತ ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಸಂಸ್ಥೆಗಳ ಸಹಯೋಗದಲ್ಲಿ ಕ್ಷೀರ ಪೈಲಟ್ ಯೋಜನೆಗನ್ನು ಜಾರಿಗೊಳಿಸುತ್ತಿದ್ದು, ಹೈನುಗಾರಿಕೆಯಲ್ಲಿ ನಮ್ಮ ಜನರಿಗೆ ತರಬೇತಿ, ಮಾಡೆಲ್ ಫಾರ್ಮ್, ಇತ್ಯಾದಿ ಕಲ್ಪಿಸಲಾಗುತ್ತಿದೆ ಎಂದರು. ಮತ್ತೊಂದು ವಿಶೇಷವಾದ ಯೋಜನೆ - ಮಹಾರಾಷ್ಟ್ರದ ನಾಸಿಕ್ ನ ಸಹ್ಯಾದ್ರಿ ಫಾರ್ಮ್ ಅವರ ಸಹಯೋಗದಲ್ಲಿ FPOಗಳ ಮೂಲಕ ನಮ್ಮ ರೈತರಿಗೆ ಸಂಘಟಿತ ಮಾರ್ಗದಲ್ಲಿ ಅಗತ್ಯ ತರಬೇತಿ ಹಾಗೂ ರಫ್ತು ಕೇಂದ್ರಿತ ಬೆಳೆಗಳನ್ನು ಬೆಳೆಯಲು ಉತ್ತೇಜಿಸಲಾಗುತ್ತಿದೆ ಎಂದರು. ಈ ಬೆಳವಣಿಗೆಯಡಿ ನಮ್ಮ ತೀಕೋಟಾದ ಕೃಷ್ಣವೇಣಿ FPO ಸಹ್ಯಾದ್ರಿ ಫಾರ್ಮ್ ಸಹಯೋಗದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ಆರಾ-36 ತಳಿಯ ದ್ರಾಕ್ಷಿಯನ್ನು ಸುಮಾರು 100 ಎಕರೆ ಪ್ರದೇಶದಲ್ಲಿ ಬೆಳೆದು, ಉತ್ತಮ ಇಳುವರಿ ಪಡೆದಿದ್ದಾರೆ. ತಮ್ಮ ಬೆಳೆಯನ್ನು ಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಅರ್ಪಿಸಿ ಗೌರವ ಸೂಚಿಸಿದ್ದಾರೆ. ಅವರು ಇಂದು ನನ್ನನ್ನು ಭೇಟಿ ಮಾಡಿ ಹಣ್ಣು ತಿನ್ನಿಸಿ ತಮ್ಮ ಸಂತಸ ಹಂಚಿಕೊಂಡರು ಎಂದರು. ಈ ದ್ರಾಕ್ಷಿ ತಳಿಯ ಬೆಲೆ ಸಾಮಾನ್ಯ ದ್ರಾಕ್ಷಿಗಿಂತ ಮೂರು ಪಟ್ಟು ಹೆಚ್ಚಿದ್ದು, ನಮ್ಮ ರೈತರಿಗೆ ಬಂಪರ್ ಲಾಭ ತರುವಲ್ಲಿ ಅನುಮಾನವಿಲ್ಲ. ರಫ್ತಿಗೂ ತುಂಬಾ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ಇದನ್ನು ಒಂದು ಸಾವಿರ ಎಕರೆ ಪ್ರದೇಶಕ್ಕೆ ವಿಸ್ತರಣೆ ಮಾಡಲಿದ್ದಾರೆ. ಇದಕ್ಕೆ ಮುಖ್ಯವಾಗಿ ಕೃಷ್ಣವೇಣಿ FPOನ ಸಂದೀಪ ಪಾಟೀಲ, ಸಚಿನ ಪಾಟೀಲ ಹಡಲಸಂಗ ಇವರು ತೋಟಗಾರಿಕೆ ಪದವಿಧರರಾಗಿದ್ದು, ಸ್ಥಳೀಯ ರೈತರ ತಂಡವನ್ನು ಕಟ್ಟಿ ಉತ್ಸಾಹದಿಂದ ಈ ಕಾರ್ಯಕ್ಕೆ ಮುಂದಾಗಿರುವುದು ನಮ್ಮ ರೈತರಿಗೆ ಉತ್ತಮ ಮಾರ್ಗದರ್ಶನ ದೊರೆಯಲಿದೆ ಎಂದರು. ಈಗಾಗಲೇ ನಮ್ಮ ಬಿ.ಎಲ್.ಡಿ.ಇ ತಂಡ ನಾಸಿಕ್ ನ ಸಹ್ಯಾದ್ರಿ ಫಾರ್ಮ್ ಗೆ ಭೇಟಿ ನೀಡಿ, ಶ್ರೀ ವಿಲಾಸರಾವ್ ಶಿಂಧೆ ಅವರೊಂದಿಗೆ ಮಾತುಕತೆ ನಡೆಸಿ, ನಮ್ಮ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿಯೂ ಅಗತ್ಯ ಸೌಲಭ್ಯಗಳನ್ನು ನಿರ್ಮಾಣ ಮಾಡಲು ಕೋರಿದ್ದೇವೆ, ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈ ಕಾರ್ಯದ ಮೂಲಕ ಶ್ರೀ ಸಿದ್ದೇಶ್ವರ ಶ್ರೀಗಳ ಕನಸು ನನಸಾಗಿದೆ. ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟದರ್ಜೆಯ ಆರಾ-36 ತಳಿಯ ದ್ರಾಕ್ಷಿಯ ಬೆಳೆ ಇಲ್ಲಿ ಕಂಗೊಳ್ಳಿಸುತ್ತಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ರೈತರಾದ ಈರಪ್ಪ ಬಗಲಿ, ಪಿಂಟು ಕೊಣ್ಣೂರ, ಅಶೋಕ ಬಾಬರ, ಕೃಷ್ಣವೇಣಿ FPO ಪದಾಧಿಕಾರಿ ಸಂದೀಪ ಬಬನ ಪಾಟೀಲ, ಸಚಿನ ಪಾಟೀಲ ಹಾಜರಿದ್ದರು. #dream #SiddeshwaraSri #reality #MBPatil #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - 0 నoలv EXPRESS ಪೂಜ್ಯ  సిద్దిబ్బం ನನಸಾದ ಶೀಗಳ ಕನಸು: ಎಂ ಬಿ ಪಾಟೀಲ್ HTTPS:IIMALGUDIEXPRESS.CO.IN/ 0 నoలv EXPRESS ಪೂಜ್ಯ  సిద్దిబ్బం ನನಸಾದ ಶೀಗಳ ಕನಸು: ಎಂ ಬಿ ಪಾಟೀಲ್ HTTPS:IIMALGUDIEXPRESS.CO.IN/ - ShareChat