ShareChat
click to see wallet page
search
#ದಿನಕ್ಕೊಂದು ಕಥೆ ಬಾಲ್ಯದ ಹುರುಪು- ಓಹೋ ಸವಿ ನೆನಪು:- ಕಾಲೇಜಿಗೆ ಹೋಗುವ ಹುಡುಗರಿದ್ದರೂ, ಅಭ್ಯಾಸ ಬಲದಂತೆ ಶಾಲಾ ಮಕ್ಕಳ ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದ ಕೂಡಲೇ ಊರಿಗೆ ಹೋಗಿ ಬರುವುದು ವಾಡಿಕೆಯಂತೆ ಹೋದಾಗ, ಬಾಲ್ಯದ ಗೆಳತಿ ಮಾಲತಿ ಬಂದ ವಿಷಯ ತಿಳಿಯಿತು. ಮನೆಯಿಂದ ಒಂದು ಮೈಲು ದೂರದಲ್ಲಿ ಇರುವ ಗದ್ದೆ -ತೋಟದ ಮನೆ.‌ ಸಣ್ಣ ಸಾರಾ ಬರುತ್ತೆ ಮೇಲೆ ನಾಲ್ಕು ಕುಂಟೆ ಜೋಡಿಸಿದ್ದಾರೆ ದಾಟಿ ಹೋಗುತ್ತಿದ್ದಂತೆ ಮಾಲತಿ ಎದುರಿಗೆ ಬಂದಳು ಇಬ್ಬರ ಮುಖವು ಮೊರದಗಲವಾಯಿತು. ಹೊಸಿಲು ದಾಟಿ ಪಡಸಾಲೆ ಯಲ್ಲಿ ಕಟ್ಟಿದ್ದ ಉಯ್ಯಾಲೆ ಮೇಲೆ ಕುಳಿತು ಹರಟೆ ಶುರು ಹಚ್ಚಿಕೊಂಡೆವು. ಮಾಲತಿ ಅವಳ ಅಮ್ಮನನ್ನು ಕೂಗಿದಳು ಅವರು ಬಂದು ಮಾತನಾಡಿಸಿ ರಾಗಿ ಹುರಿ ಹಿಟ್ಟಿನ ಪಾನಕ, ಜೊತೆಗೆ ನಿಪ್ಪಟ್ಟು ಕೊಟ್ಟು ನೀವಿಬ್ಬರು ಮಾತಾಡುತ್ತಿರಿ, ಒಳಗೆ ಬೇಗ ಅಡಿಗೆ ಮುಗಿಸಿ ಬರುವೆ ಎಂದು ಹೋದರು. ನಮ್ಮಿಬ್ಬರ ಮಾತು ಕೇಳಬೇಕಾ, ವರ್ಷಗಳೇ ಕಳೆದಿತ್ತು ನಮ್ಮೂರು, ಮಠ ದೇವಸ್ಥಾನ, ಹೊಸ ಕುಟುಂಬಗಳು, ಹಳೆ ಹೊಸ ಸ್ನೇಹಿತರು, ಅತ್ತೆ ಮನೆ ಮಕ್ಕಳ ಕೆಲಸ ವಿದ್ಯಾಭ್ಯಾಸ ಎಲ್ಲ ಬಂದಿತ್ತು. ಮಾಲತಿಗೆ ಕಾರಣಾಂತರದಿಂದ ಮದುವೆ ಸ್ವಲ್ಪ ತಡವಾಗಿ ಹುಟ್ಟಿದ ಮಗು ಇನ್ನೂ 6ನೇ ತರಗತಿ ಓದುತ್ತಿದ್ದ. ಅವಳ ಮಗ ಒಳಗಿನ ಕೋಣೆಯಿಂದ ಬಂದು ಅಮ್ಮ ನನಗೆ ಬರೆದು ಬರೆದು ಸಾಕಾಗಿದೆ. ಸ್ವಲ್ಪ ಹೊರಗೆ ಆಡಿ ಬರುತ್ತೇನೆ ಅಂದ. ಮಾಲತಿ ಕೋಪದಿಂದ ಕಣ್ಣು ದೊಡ್ಡ ಮಾಡಿ, ನೋಡು ಹೇಳಿದ್ದನ್ನ ಬರೆದು ಮುಗಿಸೋ ತನಕ ಹೊರಗೆ ತಲೆ ಹಾಕಬೇಡ ಎನ್ನುತ್ತಾ ದರ ದರ ಹುಡುಗನ ಕೈ ಹಿಡಿದೆಳೆದು ಕೋಣೆಯೊಳಗೆ ದಬ್ಬಿ ಮುಂದಿನ ಚಿಲಕ ಹಾಕಿದಳು. ನನಗೆ ಆಶ್ಚರ್ಯವಾಯಿತು, ಅಲ್ವೇ ಪರೀಕ್ಷೆಗಳೆಲ್ಲ ಮುಗಿದು ರಜಕ್ಕಲ್ವಾ ನೀನು ಬಂದಿರೋದು? ಮತ್ಯಾಕೆ ನಿನ್ನ ಮಗನಿಗೆ ಓದು ಬರಹದ ಶಿಕ್ಷೆ.‌ ರಜೆ ಅಲ್ವಾ ಫ್ರೀಯಾಗಿ ಆಡಿಕೊಂಡಿರಲಿ ಬಿಡು ಅಂದೆ. ಅವಳು ಇಲ್ಲಾ ಕಣೆ ಈಗೆಲ್ಲಾ ವಿಚಿತ್ರ ಕಾಲ ಬಂದಿದೆ ಹಿಂದಿನಂತಿಲ್ಲ. ಅವನ್ನ ಹೆದರಿಸಿ ಓದಿಸ್ದೆ ಹೋದ್ರೆ ಆಮೇಲೆ ಬಗ್ಗಲ್ಲ ಅದು ಅಲ್ದೆ ಮುಂದಿನ ವರ್ಷ 7ನೇ ತರಗತಿ, ಪಬ್ಲಿಕ್ ಪರೀಕ್ಷೆ ಅದಕ್ಕಾಗಿ ಪುಸ್ತಕ ಗಳನ್ನು ತಂದಿದ್ದೇನೆ. ಈಗಿನಿಂದಲೇ ಸ್ವಲ್ಪ ಓದಿಸಿ ಬಿಟ್ಟರೆ ಮುಂದೆ ಕಷ್ಟವಾಗಲ್ಲ ಎಂಬ ಗೆಳತಿ ಮಾತಿಗೆ ನಗಬೇಕೋ, ಅಳಬೇಕೋ ತಿಳಿಲಿಲ್ಲ. ಆದರೂ ಹೇಳಿದೆ ಶಾಲೆ ಪ್ರಾರಂಭವಾದ ದಿನದಿಂದ ಪಾಠವನ್ನು ಓದಿಸಿದರೆ ಸಾಕು ಏಕೆಷ್ಟು ಅವಸರ ಸಣ್ಣ ವಯಸ್ಸಿನ ಹುಡುಗರು ಆಡಿಕೊಳ್ಳಲಿ ಬಿಡು. ಈ ಬಾಲ್ಯದ ಸವಿ ನೆನಪು ಬೆಳೆದು ದೊಡ್ಡವರಾದರೂ ಮರೆಯುವುದಿಲ್ಲ ನಾನು ನೀನು ಹಾಗೆ ಬೆಳೆದಿದ್ದು ಅಲ್ವಾ ನೀನೇ ಯೋಚಿಸು ಎಂದು ಹಳೆಯ ನೆನಪಿನ ಸುರುಳಿ ಬಿಚ್ಚಿದೆ. ಶಾಲಾ ತರಗತಿಗಳ ವಾರ್ಷಿಕ ಪರೀಕ್ಷೆ ಮುಗಿಯುತ್ತಿದ್ದಂತೆ ಬೇಸಿಗೆ ರಜೆಯಲ್ಲಿ ಮಜಾ ಮಾಡಲು ಹತ್ತು ಹಲವು ಅವಕಾಶಗಳು ಕೈಬೀಸಿ ಕರೆಯುತ್ತಿತ್ತು .ಅಜ್ಜಿ ಮನೆಗೆ ಹೋಗುವ ಸಲುವಾಗಿಯೇ ಬೇಸಿಗೆ ರಜಾ ಕೊಡುವುದು ಎಂಬ ಕಾಲ ಆಗಿತ್ತು ಅಜ್ಜನ ಊರಿನಲ್ಲಿ ತೋಟಗದ್ದೆ ಸುತ್ತುವುದು ನದಿ ಹಳ್ಳಗಳಲ್ಲಿ ಮನಸ್ಸು ಇಚ್ಛೆ ಈಜುವುದು ನೀರಲ್ಲೇ ಜುಟಾಟ ಹಿತ್ತಲಲ್ಲಿರುವ ಪೇರಲೆ ಪನ್ನೀರ್ ಲ* ಸಪೋಟ ಮರಗಳ ಮೇಲೆ ಮರದಿಂದ ಮರಕ್ಕೆ ಹಾರುತ್ತ ಮರಕೋತಿ ಕೊಟ್ಟಿಗೆ ಬೇಲಿ ಮೂಲೆ ಓಣಿ ಸಂಧಿ ಬೋಧಿ ರಾಶಿಗಳ ಮೇಲೆ ಗುಂಡಿ ಮಾಡಿಕೊಂಡು ಮುದ್ದಾದ ನಾಲ್ಕಾರು ಮರಿಗಳನ್ನು ಹಾಕಿದ್ದ ನಾಯಿ ಇನ್ನು ಕಣ್ಣು ಬಿಡದ ಆ ಮರಿಗಳನ್ನು ಲಂಗದೊಳಗೆ ಬಚ್ಚಿಟ್ಟುಕೊಂಡು ಒಳ ಹೊರಗೆಲ್ಲ ಸುತ್ತುವುದು ದೋಸೆ ರೊಟ್ಟಿ ಚೂರುಗಳನ್ನು ನಾಯಿಗೆ ಕೊಡುವುದು ಬೆಕ್ಕಿಗೆ ಹಾಲು ಕೊಡುವುದು ಹಳೆಯ ಮನೆಯ ಗೋಡೆಗಳ ಫೋಟೋ ಹಿಂದೆ ಕಟ್ಟಿರುವ ಗುಬ್ಬಿ ಗೂಡಿನಿಂದ ಜಾರಿ ಬಿದ್ದ ಮರಿಯನ್ನು ಜತನದಿಂದ ಗೂಡು ಮಾಡಿ ಬಿಡುವುದು ಗುಬ್ಬಿಗಳಿಗೆ ಅಕ್ಕಿ ನುಚ್ಚು ಭತ್ತ ತಂದು ಹಾಕುವುದು. ಒಟ್ಟಿಗೆಯಲ್ಲಿರುವ ಪುಟಾಣಿ ಕರುವಿನ ಕೊರಳಿಗೆ ಗೆಜ್ಜೆ ಕಟ್ಟಿ ನೆಗೆಯುವುದನ್ನು ನೋಡಿ ಖುಷಿಪಡುವುದು ಬಚ್ಚಲವಲೆಯೊಳಗೆ ನೀರುಳ್ಳಿ ಹಲಸಿನ ಬೀಜ ಗೇರು ಬೀಜಗಳನ್ನು ಸುಟ್ಟು ತಿನ್ನುವುದು, ಮಸಿ ಮಣ್ಣು ಬೂದಿ ತುಂಬಿದ ಬಟ್ಟೆ ಮೈ ಕೈ ಕಾಲುಗಳನ್ನು ತೊಳೆಯಬೇಕೆಂದರೆ ಹೊಳೆನೀರೇ ಸರಿ.‌ ಹಳ್ಳಿಯ ವಾತಾವರಣದಲ್ಲಿ ಬೆಳೆಯುವ ಮಕ್ಕಳಿಗೆ ಅದೆಷ್ಟೋ ಪಾಠಗಳನ್ನು ಪ್ರಕೃತಿಯೇ ಕಲಿಸಿಕೊಡುತ್ತದೆ ಸಾಲಾಗಿ ಹರಿವ ಇರುವೆಯ ಹಿಂದೆ ಹೋಗಿ ಅದರ ಗೂಡನ್ನು ಪತ್ತೆ ಹಚ್ಚುತ್ತಾರೆ ಮಣ್ಣಿನಲ್ಲಿರುವ ಗುಬ್ಬಿ ಹುಳದ ಗೂಡನ್ನು ಸರಿಸಿ ಅವುಗಳನ್ನು ಅಂಗೈಯಲ್ಲಿ ಹಿಡಿದು ಆಡುವುದು ಹಾರುವ ಬಣ್ಣ ಬಣ್ಣದ ಚಿಟ್ಟೆಗಳನ್ನು ಕೈಯಲ್ಲಿ ಹಿಡಿದು ಬಿಡುವ ಸಂತೋಷ ರಾತ್ರಿ ಮಿಣಕ್ ಎನ್ನುವ ದ ದೀಪದ ಹುಳುಗಳನ್ನು ಹಿಡಿದು ಕವರಿನಲ್ಲಿ ಕಟ್ಟಿ ಬ್ಯಾಟರಿ ಬೆಳಕು ಕಾಣುವ ಹುರುಪು ಎಲ್ಲಿಂದಲೋ ಇಳಿದು ಬರುವ ಜರಿಯನ್ನು ಕೌತುಕದಿಂದ ನೋಡುವುದು ನೀರಿನ ಸಾಹಸ ಒದ್ದೆಮರನಲ್ಲಿ ಕಪ್ಪೆಗೂಡು ಕಾಗದದಲ್ಲಿ ದೋಣಿ ಮಾಡಿ ನೀರಿನಲ್ಲಿ ತೇಲಿ ಬಿಡುವುದು ಮರಳಲ್ಲಿ ಈಶ್ವರ ಲಿಂಗ ಮಾಡಿ ಪೂಜೆ ಮಾಡುವುದು. ತುಂಬಾ ಬಿಸಿಲಿನ ಸಮಯದಲ್ಲಿ ಮನೆಯ ಒಳಗೆ ಆಡುವ ಆಟಗಳಾದ ಪಗಡೆ, ಚೌಕಬಾರ, ಗಿಚ್ಚಿ, ಕಲ್ಲಾಟ, ಚನ್ನೆಮಣೆ, ( ಅಳುಗುಳಿ ಮಣೆ) ಕಣ್ಣಾ ಮುಚ್ಚೆ, ಕಳ್ಳ ಪೊಲೀಸು, ಐಸ್ ಪೈಸ್ ಸ್ವಲ್ಪ ಬಿಸಿ ಇಳಿಯುತ್ತಿದ್ದಂತೆ ಮುಂಭಾಗದ ಬಯಲಿನಲ್ಲಿ ಚಿನ್ನಿದಾಂಡು, ಬುಗುರಿ, ಲಗೋರಿ, ಟೋಪಿ ಬೇಕ ಟೋಪಿ, ಗೋಲಿ, ಕಬ್ಬಡಿ, ಆಟವನ್ನು ಗಂಡು ಮಕ್ಕಳ ಸರಿ ಸರಿಗೂ ಆಡುವುದು.‌ ಬಿದಿರಿನ ಪೆಟ್ಲು ಮಾಡಿ ಪೆಟ್ಲಕಾಯಿ ಸಿಗದಿದ್ದರೆ ಕೆಸುವಿನ ಸೊಪ್ಪು ತುಂಬಿ ಟಪ್ ಎನಿಸುವುದು. ಚಾರ್ಟರ್ ಬಿಲ್ ಮಾಡಿಕೊಂಡು ಮಾವು ನೇರಳೆ ಹಣ್ಣುಗಳನ್ನು ಉದುರಿಸುವುದು. ನಾಯಿ ಬೆಕ್ಕಿನ ಮರಿಗಳು ಕಣ್ಣು ಬಿಡುವ ತನಕ ಅವುಗಳ ಮುಂದೆ ಕುಳಿತು ಕಾವಲು ಕಾಯುವುದು. ಇನ್ನು ಗ್ರಾಮೀಣ ಆಟಗಳಾದ, ಗೊಂಬೆ ಮದುವೆ ಆಟ, ಅಡಿಗೆ ಆಟ ಬಹಳ ಹುರುಪಿನಿಂದ ಆಡುತ್ತಿದ್ದೆವು. ಮದುವೆ ಆಟದಲ್ಲಿ ದೊಡ್ಡವರು ಮಾಡುವ ಎಲ್ಲಾ ಶಾಸ್ತ್ರವನ್ನು ಮಾಡುತ್ತಿದ್ದೇವೆ ತೆಂಗಿನಗರಿ, ಅಥವಾ ದಪ್ಪ ಎಲೆ ಸುತ್ತಿ ಓಲಗದಂತೆ ಮಾಡಿಕೊಂಡು ಓಲಗ ಊದುವುದು, ಬೀಗರ ಜಗಳ, ಅಡಿಕೆಗಂತೂ ಕಡಿಮೆ ಇರಲಿಲ್ಲ ಪುಟಾಣಿ ಅವಲಕ್ಕಿ ಅರಳು, ಬೆಲ್ಲ, ನೇರ್ಲೆ ಹಣ್ಣು ಹಲಸಿನ ಹಣ್ಣು ಎಲ್ಲಾ ತರಹದ ಕಾಡು ಹಣ್ಣುಗಳನ್ನು ಸಂಗ್ರಹಿಸಿ ಅಡಿಗೆ ತಯಾರಿ. ದೊಡ್ಡವರಿಗೆ ಗೊತ್ತಾಗದ ರೀತಿ, ಒಳಗಿನಿಂದ ಸೀರೆ, ಪಂಚೆ ತಂದು ಅಡರ ಬಡರಾ ಉಟ್ಟಿಕೊಂಡು ದೊಡ್ಡವರು ಮಾಡುವ ಮದುವೆಗಿಂತ ಕಡಿಮೆ ಇರುತ್ತಿರಲಿಲ್ಲ. ಸ್ವಲ್ಪ ಗೊತ್ತಾದ ಮೇಲೆ ಪುಟ್ಟ ಕರ್ಪೂರದ ಗೊಂಬೆಗೆ ಬಟ್ಟೆ ಹಾಕಿ ಮಗು ಅಣ್ತ ಮಾಡಿ ಜೋಗುಳ ಕಟ್ಟಿ ಹಾಡುವುದು. ಸ್ಕೂಲ್ ಆಟ:- ಎಲ್ಲಾ ಮಕ್ಕಳಿಗೂ ಟೀಚರ್ ಆಗುವ ಹುಚ್ಚು, ಕೊನೆಗೆ ಮೂರು ಜನ ಸೇರಿ ಕ್ಲಾಪ್ಸ ಹೊಡೆದು ಅದರಲ್ಲಿ ಗೆದ್ದವರನ್ನು ಟೀಚರ್ ಮಾಡುವುದು. ಹೋಮ್ ವರ್ಕ್ ಮಾಡದಿದ್ದರೆ, ಮಾತಾಡಿದರೆ, ಲಕ್ಕಿ ಕೋಲು ತೆಗೆದು ಕೊಂಡು ಕೈಗೆ ಹೊಡೆಯುವುದು, ಉಟ್ ಬೈಸ್ ಹೋಡೆಸುವುದು, ಕ್ಲಾಸ್ ರೂಮಿನಿಂದ ಹೊರಗೆ ನಿಲ್ಲಿಸುವುದು. ತುಂಬಾ ಬೋರ್ ಆದಾಗ, ಬಟ್ಟೆ ಬಗೆವಾ ಕಲ್ಲಿನ ಬೆಲೆ ಸೇರಿದೆ ಕುಟ್ಟಿ ಕಡ್ಡಿ ಅಂಟಿಸಿಕೊಂಡು ಬಾಯಲ್ಲಿ ನೀರೂರುವಂತೆ ಚೀಪುವುದು, ಇದು ಈಗಿನ ಲಾಲಿಪಪ್, ಚೂಯಿಂಗ್ ಗಮ್ ಗಿಂತ ಚೆನ್ನಾಗಿತ್ತು. ಆರೋಗ್ಯಕ್ಕೆ ಒಳ್ಳೆಯದು ನಾಲಿಗೆ ಕ್ಲೀನಾಗುತ್ತಿತ್ತು. ದಸರಾ ಬಂತೆಂದರೆ, ಹುಲಿವೇಷದಂತೆ ಹರಿಶಿನ ಕುಂಕುಮ ಬಟ್ಟೆಗೆ ಹಾಕುವ ನೀಲಿ ಕಲೆಸಿಕೊಂಡು ಕೈ ಕಾಲು ಮುಖಗಳಿಗೆ ಹಚ್ಚಿಕೊಂಡು ಹುಲಿ ವೇಷ ಕುಣಿಯುವುದು. ಎರಡು ಮರಗಳನ್ನು ಮರಗಳಿಗೆ ಹಗ್ಗ ಕಟ್ಟಿಕೊಂಡು ಒಬ್ಬರಿಗಿಂತ ಒಬ್ಬರು ಜೋರಾಗಿ ಜೀಕಿ ಕೊಳ್ಳುವುದು.‌ ಇಂಥ ಹತ್ತು ಹಲವು ಆಟಗಳನ್ನು ಬಾಲ್ಯದಲ್ಲಿ ಆಡಿ -ಕುಣಿದು- ನಲಿದು, ನಿಜ ಜೀವನದಲ್ಲಿ ದೊಡ್ಡವರು ನಿರ್ವಹಿಸುವ ಪಾತ್ರಗಳನ್ನೆಲ್ಲ ಮಕ್ಕಳು ಆಟದ ಮೂಲಕವೇ ಕಲಿತು ದೊಡ್ಡವರಾಗುವ ಹೊತ್ತಿಗೆ ಸಾಕಷ್ಟು ತಿಳುವಳಿಕೆ ಬಂದಿರುತ್ತಿ ತ್ತು. ಈಗ ಎಲ್ಲವುದಕ್ಕೂ ಕೋರ್ಸ್ ಅಂತ ಮಾಡಿದಾರೆ. ಇಂಥ ಆಟಗಳಿಂದ ಮಕ್ಕಳ ದೈಹಿಕ ಮಾನಸಿಕ ಬಹುತೇಕ ಬೆಳವಣಿಗೆಗೆ ಸಹಾಯವಾಗುತ್ತಿತ್ತು ಈ ರೀತಿ ಮಕ್ಕಳು ಅಜ್ಜಿ ಮನೆಯಲ್ಲಿ ನೆರೆ ಹೊರೆ ಮಕ್ಕಳು ಸೇರಿ ಆಡಿ ನಲಿದು ಎಂದಿಗೂ ಮರೆಯಲಾರದ ಸವಿ ಸವಿ ಸಾವಿರ ನೆನಪಿನ ಬಾಲ್ಯದ ನೆನಪಿನ ಬುತ್ತಿಯನ್ನು ಕಟ್ಟಿಕೊಳ್ಳುತ್ತಿದ್ದರು. ಇಷ್ಟೆಲ್ಲಾ ನನ್ನ ಗೆಳತಿ ಜೊತೆ ಮಾತಾಡಿ ನೋಡು ಮಾಲತಿ ನಿನಗೆ ನಾನು ಹೇಳುವುದು ಇಷ್ಟೆ, ಕೆಲ ಅಮ್ಮಂದಿರು ಮಾಡುವಂತೆ ನೀನು ಮಗನ ಮೇಲೆ ವಿಪರೀತ ಒತ್ತಡವನ್ನು ಹೇರಬೇಡ ಟೆಸ್ಟ್ ಗಳು ಪರೀಕ್ಷೆಗಳು ಬಂದರೆ ರಾಂಕ್ ಬರಲೇಬೇಕೆಂದು ಹಠ ಏಕೆ ಈ ರೀತಿ ಪರಿಸ್ಥಿತಿಯನ್ನು ನೀನೆ ನಿರ್ಮಾಣ ಮಾಡಿಕೊಂಡರೆ ನಿನ್ನ ಮಗನ ಬಾಲ್ಯವನ್ನು ಹಿಸುಕಿದಂತಾಗುವುದಿಲ್ಲವೇ ಯೋಚಿಸು, ಬೇಸಿಗೆ ರಜೆಯನ್ನು ಓದು ಬರೆ ಎಂಬ ಕಟ್ಟುಪಾಡು ಬಿಟ್ಟು ಹಾಯಾಗಿ ಹಾಡಿಕೊಂಡಿರಲು ಬಿಡು ಎಂದೆ. ಆದರೆ ಅವಳು ಒಪ್ಪದೇ ನಿನಗೇನು ಗೊತ್ತು ನಿನ್ನ ಮಕ್ಕಳು ದೊಡ್ಡವರಾಗಿ ಕಾಲೇಜಿಗೆ ಹೋಗುತ್ತಿದ್ದಾರೆ ಅದಕ್ಕೆ ಹೀಗೆ ಹೇಳುವೆ, ನಿನಗೆ ಇಂದಿನ ಶಿಕ್ಷಣದ ವಿಷಯ ಗೊತ್ತಿಲ್ಲ ಮಾರ್ಕ್ಸ್ ಗಳನ್ನು ಎಷ್ಟು ತೆಗೆದುಕೊಂಡು ವಿದ್ಯಾರ್ಥಿಗಳನ್ನು ಮಾತ್ರ ಗಮನಿಸುತ್ತಾರೆ. ಬರೀ ಓದುವುದು ಮಾತ್ರವಲ್ಲ ಒಂದು ಮಗು, ಡ್ಯಾನ್ಸು ಸಂಗೀತ, ಎಲ್ಲಾ ಆಟಗಳು, ಈಜುವುದು, ಕ್ರಿಕೆಟು, ಜೊತೆಗೆ ನಟನೆ, ಹೀಗೆ ಒಂದಲ್ಲ ಎರಡಲ್ಲ ಎಲ್ಲದರಲ್ಲೂ ಮಕ್ಕಳು ಪ್ರಥಮವಾಗಿ ಬರಬೇಕು. ಅಲ್ಲದೆ ಮುಂದೆ ಉನ್ನತ ವ್ಯಾಸಂಗ ಮಾಡಬೇಕೆಂದರೆ ಈಗಿನಿಂದಲೇ ಕಷ್ಟಪಡಬೇಕು ಬೇಸಿಗೆ ರಜೆಯಲ್ಲಿ ಆಡದಿದ್ದರೂ ಚಿಂತೆ ಇಲ್ಲ ನಾಳೆ ಶಾಲೆಯಲ್ಲಿ ಕಡಿಮೆ ಮಾರ್ಕ್ಸ್ ಬಂದರೆ ಯಾಪು ಮೊರೆ ಹಾಕಿಕೊಂಡು ಬರುವ ಮಕ್ಕಳನ್ನು ನೋಡುವ ಕಷ್ಟ ಹಾಗೂ ಹೆಚ್ಚು ಓದಬೇಕೆಂದರೆ ಒದ್ದಾಡುವ ತಾಪತ್ರಯ ಯಾವ ಪೋಷಕರಿಗೂ ಬೇಡ ಎಂದಳು. ಎಲ್ಲಾ ತಿಳಿದುಕೊಂಡು ಮಗನ ಮೇಲೆ ಓದಲು ಒತ್ತಡ ಹೇಳುತ್ತಿದ್ದ ಮಾಲತಿಗೆ ಸರಿ ತಪ್ಪುಗಳ ವಿಮರ್ಶೆ ಮಾಡುವುದನ್ನು ನಿಲ್ಲಿಸಿ ಅವರಮ್ಮ ಮಾಡಿದ ರುಚಿಯಾದ ಅಡುಗೆ, ಅನ್ನ ಸಾರು, ಹಪ್ಪಳ, ಸಂಡಿಗೆ, ಕೆಸುವಿನ ದಂಟಿನ ಸಾಸಿವೆ, ಗುಬ್ಬಿ ಬಾಳೆ ಎಲೆ ಬೊಂಡ, ಹಲಸಿನ ಹಣ್ಣಿನ ಮಳಕಾ, ಮಾವಿನಕಾಯಿ ಚಿತ್ರಾನ್ನ, ಅಕ್ಕಿ ಹಾಲುಬಾಯಿ, ಕಡೆದ ಮಜ್ಜಿಗೆ, ಉಪ್ಪಿನಕಾಯಿ ಮಾಡಿಕೊಂಡು ಮನೆಗೆ ಹೊರಟೆ. ಮನೆ ಸಮೇಪಿಸಿತು ಗಮ್ ಎನ್ನುವ ಹಲಸಿನ ಕಣ್ಣಿನ ಪರಿಮಳ ಬಂದಿತು. ಹೊಟ್ಟೆ ತುಂಬಿದ್ದರು ಬಾಯಲ್ಲಿ ನೀರೂರಿತು. “ಉಂಡಾಗ ಹಲಸು ಹಸಿದಾಗ ಮಾವು” ನೆನಪಾಯಿತು ಸೀದಾ ಕೊಟ್ಟಿಗೆ ಹತ್ತಿರ ಹೋದೆ ಅಮ್ಮ ದೊಡ್ಡ ಬಗ್ಗೆ ಹಲಸಿನ ಹಣ್ಣನ್ನು ಹೆಚ್ಚಿ ಶ್ಯಾಡೆ ಮಾಡಿ ಮರಕ್ಕೆ ಹಾಕುತ್ತಿದ್ದಳು. ಸುತ್ತ ಮಕ್ಕಳು ಕುಳಿತುಕೊಂಡು ಶ್ಯಾಡೆಯಿಂದ ತೊಳೆ ಬಿಡಿಸಿ ಸಣ್ಣ ತೊಳೆ ತಿನ್ನುವುದು, ಬೀಜ ಇರುವ ಹಿರಿಯರನ್ನು ಪಾತ್ರೆಗೆ ಹಾಕುತ್ತಿದ್ದರು ಇನ್ನೊಂದು ತಲೆ ಬಟ್ಟಲಿಗೆ ಹಾಕುತ್ತಾ ಟಂಗ್ ಟ್ವಿಸ್ಟರ್ ಅಂತ ಫಾಸ್ಟ್ ಆಗಿ ಹೇಳುವ “ ಕಾಗೆ ಪುಕ್ಕ- ಗುಬ್ಬಿ ಪುಕ್ಕ” ಕಪ್ಪುಕಾಗೆ- ಕೆಂಪು ಕುಂಕುಮ, “ಕಿಮಿಕ್ ಕಮಕ್- ಕಮಕ್ ಕಿಮಿಕ್” ಕರಿ ಕಿವಿ- ಕಿವಿ ಕರಿ,ಹ ಇಂಥ ಪದಗಳನ್ನು ನಾಲಿಗೆ ತಳಪಡಿಸಿದಂತೆ ಹೇಳುತ್ತಿರುವುದನ್ನು ನೋಡಿ ಬೆರೆಗಾದೆ. ದೊಡ್ಡವರು ಹೇಳಲು ಹೊರಟಾಗ ಕಾಗೆ ಪುಕ್ಕ ಬುಗ್ಗಿ ಪುಕ್ಕ ಪಕ್ ಪಕ್ ಆಯಿತು. ಹುಡುಗರು ಕಿಸಕ್ಕನ ನಕ್ಕು ಆಟ ನಿಲ್ಲಿಸಿ ನಂತರ ಎಲ್ಲರೂ ಸೇರಿಕೊಂಡು ಅಂತ್ಯಾಕ್ಷರಿ ಆಡೋಣ ಎಂದು ಸ್ಟಾರ್ಟ್ ಮಾಡಿದರು. “ ಬೈಠೇ ಬೈಠೇ ಕ್ಯಾ ಕರೆ ಹೋ ಜಾಯೇ ಕುಛ್ ಕಾಮ್ ಶುರು ಕರೋ ಅಂತ್ಯಾಕ್ಷರಿ ಲೇಕೆ ಪ್ರಭು ಕಾ ನಾಮ್” ಗಜಮುಖನೆ ಗಣಪತಿಯೆ ನಿನಗೆ ವಂದನೆ ನಂಬಿದವರ ಬಾಯಿನ ಕಲ್ಪತರು ನೀನೆ, ನ- ನಾನೇ ವೀಣೆ ನೀನೇ ತಂತಿ ಅವನೇ ವೈನಿಕಾ ಅವನೇ ವೈನಿಕ, ಕ- ಕೃಷ್ಣ ಎಂದರೆ ಭಯವಿಲ್ಲ, ಕೃಷ್ಣಾ ಎನದೆ ಸುಖವಿಲ್ಲ, ಕೃಷ್ಣ ಎಂದರೆ ದಿನವಿಲ್ಲ ಬಾಯಾರಿಕೆ ಹಸಿವಿನ ಹಂಗಿಲ್ಲ, ಕೃಷ್ಣ ಹರೇ ಜೈ ಜೈ ಕೃಷ್ಣ ಹರೇ, ಕೃಷ್ಣ ಹರೇ ಜೈ ಜೈ ಕೃಷ್ಣ ಹರೇ” ರ- ರಾಜ ಮುದ್ದು ರಾಜಾ ನೂಕುವಂತ ಕೋಪ ನನ್ನಲ್ಲೇಕೆ ರಾಜ ಮುದ್ದು ರಾಜ, ಜ- “ಜಯತು ಜಯ ವಿಠಲ ನಿನ್ನ ನಾಮವು ಶಾಂತಿಧಾಮವು ಸೌಖ್ಯದಾ ರಾಮ ಜಯತು ಜಯ ವಿಠಲ. ತೀರಾ ಹಿಂದಿನ ಕಾಲವೂ ಅಲ್ಲ, ಆಧುನಿಕ ಯುಗವಂತೂ ಅಲ್ಲ ,ಮಧ್ಯ ಕಾಲದ ನಮ್ಮ ಬಾಲ್ಯ ಹೀಗಿತ್ತು. ಒಂದು ಎರಡು ಬಾಳೆಲೆ ಹರಡು ಮೂರು ನಾಲ್ಕು ಅನ್ನ ಹಾಕು ಐದು ಆರು ಬೇಳೆ ಸಾರು ಏಳು ಎಂಟು ಪಲ್ಯಕ್ಕೆ ದಂಟು ಒಂಬತ್ತು ಹತ್ತು ಎಲೆ ಮುದುರೆತ್ತು ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು. ವಂದನೆಗಳೊಂದಿಗೆ, ಬರಹ:- ಆಶಾ ನಾಗಭೂಷಣ.
ದಿನಕ್ಕೊಂದು ಕಥೆ - ~AshaNagabhushana] Storues ~AshaNagabhushana] Storues - ShareChat