ShareChat
click to see wallet page
search
#🕉️ಏಕದಂತ ಸಂಕಷ್ಟಿ ಚತುರ್ಥಿ🙏🏼 #🔱 ಭಕ್ತಿ ಲೋಕ #🙏ಸಿದ್ಧಿ ವಿನಾಯಕ ಏಕದಂತ ಸಂಕಷ್ಟ ಚತುರ್ಥಿ, ಮಂಗಳವಾರ, ಮೇ 5, 2026 ಸಂಕಷ್ಟಿ ದಿನದಂದು ಚಂದ್ರೋದಯ - 10:35 PM ಚತುರ್ಥಿ ತಿಥಿ ಆರಂಭ - ಮೇ 05, 2026 ರಂದು 05:24 AM ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ - ಮೇ 06, 2026 ರಂದು 07:51 AM ಏಕದಂತ ಸಂಕಷ್ಟ ಹರ ಚತುರ್ಥಿ ಪ್ರಯುಕ್ತ *ಏಕದಂತ..!*ಎಂಬ ಹೆಸರು ಬರುವ ಕಥೆ ಹಿಂದೂ ದೇವತೆಗಳಲ್ಲಿ ಗಣೇಶನಿಗೆ ಅಗ್ರಸ್ಥಾನ ಕೊಟ್ಟಿದ್ದಾರೆ. ಸಕಲರ ಕಷ್ಟಗಳನ್ನು ನಿವಾರಣೆ ಮಾಡಿ, ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವಂತೆ ವರವನ್ನು ಕರುಣಿಸುವ ಗಣೇಶನಿಗೂ, ಒಂದೊಂದು ಸಲ ಕೋಪ ಹಠ ಎಲ್ಲಾ ಬರುತ್ತದೆ. ಒಮ್ಮೆ ಪರಮೇಶ್ವರನು ಧ್ಯಾನಾಸಕ್ತನಾಗುವ ಮುನ್ನ ಗಣೇಶನನ್ನು ಕರೆದು ಪುತ್ರ ನನ್ನ ಧ್ಯಾನಕ್ಕೆ ಯಾರಿಂದಲೂ ಅಡ್ಡಿಯಾಗದಂತೆ ನೀನು ಕಾವಲು ಕಾದಿರು. ಯಾರನ್ನೂ ಒಳಗೆ ಬಿಡಬೇಡ ಎಂದು ಶಿವನು ಧ್ಯಾನಾಸಕ್ತನಾದನು. ಗಣೇಶನು ಕೈಲಾಸದ ದ್ವಾರದಲ್ಲಿ ಕಾಯುತ್ತಾ ನಿಂತನು. ಆ ಸಮಯಕ್ಕೆ ಋಷಿಮುನಿಗಳು, ದೇವತೆಗಳು ಶಿವನ ದರ್ಶನಕ್ಕೆ ಬಂದರು. ಆದರೆ ತನ್ನ ತಂದೆ ಧ್ಯಾನಕ್ಕೆ ಕುಳಿತಿದ್ದಾನೆ. ಒಳಗೆ ಯಾರು ಹೋಗಬಾರದೆಂದು ಗಣೇಶನು ಹೇಳಿದ್ದನ್ನು ಕೇಳಿ ಅವರೆಲ್ಲ ವಾಪಸ್ಸಾದರು. ಶಿವನ ತಪಸ್ಸನ್ನು ಮಾಡಿ ಅನುಗ್ರಹ ಪಡೆದ 'ಪರಶುರಾಮ' ಸಾಕ್ಷಾತ್ ಶಿವನಿಂದಲೇ 'ಪರುಶು' ವನ್ನು ಪಡೆದಿದ್ದನು. ಹೀಗಾಗಿ ಇವನಿಗೆ 'ಪರಶುರಾಮ' ಎಂಬ ಹೆಸರು ಬಂದಿತ್ತು. ಪರಶುರಾಮನಿಗು ಶಿವನ ಹಾಗೆ ಉಗ್ರವಾದ ಕೋಪ ಬರುತ್ತಿತ್ತು. ತಂದೆಯ ಮಾತಿಗೆ ತಾಯಿಯ ಶಿರವನ್ನೇ ಕತ್ತರಿಸಿದ್ದ ದೇವತಾ ಸ್ವರೂಪಿ ಪರಶುರಾಮ. ಮಹಾವಿಷ್ಣುವಿನ ಆರನೇ ಅವತಾರವಾದ ಪರಶುರಾಮ ದೀರ್ಘಕಾಲದ ತನ್ನ ತಪಸ್ಸನ್ನು ಮುಗಿಸಿ ಗುರುವಾದ ಶಿವನ ದರ್ಶನವನ್ನು ಮಾಡಲು ಕೈಲಾಸಕ್ಕೆ ಬರುವ ವಿಷಯ ಗಣೇಶನಿಗೆ ತಿಳಿಯಿತು. ಹೀಗಾಗಿ ಪರಶುರಾಮನು ಬರುತ್ತಿರುವ, ಮಾರ್ಗಮಧ್ಯದಲ್ಲಿಯೇ ತಡೆದು ನನ್ನ ತಂದೆ ಧ್ಯಾನಕ್ಕೆ ಕುಳಿತಿದ್ದಾರೆ. ಒಳಗೆ ಯಾರು ಬರುವಂತಿಲ್ಲ ಎಂದು ಹೇಳಿದನು. ಪರಶುರಾಮನು, ಏ ಹುಡುಗ ನೀನು ಯಾರೋ? ನನ್ನನ್ನು ತಡೆಯಲು ನನ್ನನ್ನು ತಡೆಯುವಷ್ಟು ಧೈರ್ಯ ನಿನಗೆ ಹೇಗೆ? ಬಂದಿತು. ನಾನು ಶಿವನ ಪರಮ ಭಕ್ತ. ನನ್ನ ಆರಾಧ್ಯ ದೈವವಾದ ಪರಮೇಶ್ವರನ ದರ್ಶನ ಪಡೆಯದೇ ಇಲ್ಲಿಂದ ಕದಲುವುದಿಲ್ಲ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದನು. ವಿನಾಯಕ, ವಿನಯದಿಂದ ಪರಶುರಾಮರಿಗೆ ಕೈಮುಗಿದು, ನಾನು ಪಾರ್ವತಿ-ಪರಮೇಶ್ವರರ ಪುತ್ರ ನನ್ನ ಹೆಸರು ಗಣೇಶ ನನ್ನ ತಂದೆ ಈಗ ಧ್ಯಾನ ಮಾಡುತ್ತಿದ್ದಾರೆ. ಅವರ ಆದೇಶದಂತೆ ಯಾರನ್ನು ನಾನು ಒಳಗೆ ಬಿಡುತ್ತಿಲ್ಲ. ಆದ್ದರಿಂದ ನಿಮ್ಮನ್ನು ಕೂಡ ನಾನು ಬಿಡುವುದಿಲ್ಲ ಎಂದನು. ಚೋಟುದ್ದ ಹುಡುಗ ಎಷ್ಟು ಮಾತನಾಡುತ್ತಾನೆ ಎಂದು ಪರಶುರಾಮಗೆ ಸಿಟ್ಟು ಕೆರಳಿತು. ನಾನು ಹೋಗುವ ಮಾರ್ಗಕ್ಕೆ ಅಡ್ಡವಾಗಿ ನಿಂತಿದೆಯಾ? ದೂರ ಹೋಗು ಎಂದು ಬಲವಂತವಾಗಿ ಗಣೇಶನನ್ನು ತಳ್ಳಿ ಕೈಲಾಸದ ದ್ವಾರದ ಹತ್ತಿರ ಹೋಗಲು ಪರಶುರಾಮ ಪ್ರಯತ್ನಪಟ್ಟ. ಆಗ ಗಣೇಶನು ಪರಶುರಾಮನನ್ನು ಎಳೆದು ಸರಿಸಿದನು. ಇದರಿಂದ ಕೋಪಗೊಂಡ ಪರಶುರಾಮ ಗಣಪತಿ ಜೊತೆ ಯುದ್ಧ ಆರಂಭಿಸಿದನು. ಪರಶುರಾಮನು ಬಲಶಾಲಿ ಅಸ್ತ್ರಗಳನ್ನೆಲ್ಲಾ ಗಣಪತಿಯ ಮೇಲೆ ಪ್ರಯೋಗಿಸಿದನು. ಆದರೆ ಇದರಿಂದ ಗಣೇಶನಿಗೆ ಏನು ಆಗಲಿಲ್ಲ . ಬಿಟ್ಟ ಅಸ್ತ್ರಗಳನ್ನು ಬಾಲಕ ಗಣೇಶನು ವಿಫಲಗೊಳಿಸಿದನು. ಈ ಪುಟ್ಟ ಬಾಲಕ ತನ್ನನ್ನು ಅವಮಾನಗೊಳಿಸುತ್ತಿದ್ದಾನೆ ಎಂದುಕೊಂಡ ಪರಶುರಾಮ ಕೆರಳಿ ಕೆಂಡವಾಗುತ್ತಾನೆ. ತನ್ನ ದಿವ್ಯಾಸ್ತ್ರಗಳನ್ನು ಪ್ರಯೋಗಿಸಿದರೂ ಕೂಡ 'ಸಂಕಷ್ಟಹರ ಗಣಪತಿ' ಯನ್ನು ಸೋಲಿಸಲು ಸಾಧ್ಯವಾಗಲಿಲ್ಲ. ಈಗ ದಾರಿಯಿಲ್ಲದೆ ಶಿವನೇ ಕೊಟ್ಟ 'ಪರಶುವನ್ನು' ಶಿವನ ಧ್ಯಾನ ಮಾಡುತ್ತಾ ವಿನಾಯಕನ ಮೇಲೆ ಪ್ರಯೋಗಿಸುತ್ತಾನೆ. ತನ್ನ ತಂದೆ ಕೊಟ್ಟ ಪರಶು ವಿರುದ್ಧ ಯುದ್ಧ ಮಾಡುಲು ಗಣಪತಿಗೆ ಮನಸ್ಸಾಗಲಿಲ್ಲ. ಪರುಶು ವನ್ನು ಕ್ಷಣಮಾತ್ರದಲ್ಲಿ ವಿಫಲಗೊಳಿಸುವ ಶಕ್ತಿ ಗಣೇಶನಿಗೆ ಇತ್ತು. ಆದರೆ ತಂದೆ ಕೊಟ್ಟ ಅಸ್ತ್ರವಾಗಿದೆ. ಇದನ್ನು ಮಣಿಸುವುದು ತಂದೆಗೆ ಮಾಡುವ ಅವಮಾನದಂತೆ ಎಂದುಕೊಂಡನು. ಯಾವುದೇ ಅಸ್ತ್ರವನ್ನು ಪ್ರಯೋಗಿಸದೆ, ತನ್ನ ಒಂದು ದಂತವನ್ನೆ 'ಪರುಶು' ಅಸ್ತ್ರಕ್ಕೆ ಎದುರು ನಿಲ್ಲುತ್ತಾನೆ. ಅಂತಹ ಶಕ್ತಿಶಾಲಿ 'ಪರಶು ಅಸ್ತ್ರದಿಂದ' ವಿನಾಯಕನ ಒಂದು 'ದಂತ' ತುಂಡಾಗುತ್ತದೆ. ಒಂದೇ ಸಲ ರಕ್ತ ಚಿಮ್ಮಿ ನೋವಿನಿಂದ ''ಅಮ್ಮಾ'ಎಂದು ಜೋರಾಗಿ ಕೂಗುತ್ತಾನೆ. ಮಗನ ನೋವಿನ ಧ್ವನಿ ಕೇಳುತ್ತಿದ್ದಂತೆ, ತಾಯಿ ಪಾರ್ವತಿ ಪ್ರತ್ಯಕ್ಷಳಾದಳು. ಮಗನ ಸ್ಥಿತಿ ಕಂಡು ದುರ್ಗೆಯ ರೂಪ ತಾಳಿದಳು. ಈ ಸ್ವರೂಪ ನೋಡಿ ಪರಶುರಾಮನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ದುರ್ಗಾ ಸ್ವರೂಪಳಾದ ಮಾತೇ ಕಂಡು ಗಣೇಶನು ಯೋಚಿಸಿದನು. ಹೀಗೆ ಬಿಟ್ಟರೆ, ಕೈಲಾಸದಲ್ಲಿ ಒಂದು ಅನಾಹುತ ಆಗಿಬಿಡುತ್ತದೆ ಎಂದುಕೊಂಡು ಗಣೇಶನು ತಾಯಿಯನ್ನು ಸಮಾಧಾನ ಮಾಡುತ್ತಾನೆ. ಅಮ್ಮ ಪರಶುರಾಮ ತಂದೆಯ ಭಕ್ತರು. ಶಿವನ ದರ್ಶನಕ್ಕೆ ಈಗ ಹೋಗಬಾರದೆಂದು ನಾನು ಅವರನ್ನು ತಡೆದು ನಿಲ್ಲಿಸಿದೆ. ನೀನು ನಿನ್ನ ಉಗ್ರರೂಪದಿಂದ ಶಾಂತಳಾಗು ಎಂದು ತಾಯಿಯನ್ನು ಕೇಳಿಕೊಳ್ಳುತ್ತಾನೆ. ತನ್ನ ತಪ್ಪನ್ನು ಅರಿತ ಪರಶುರಾಮನು 'ಆದಿಶಕ್ತಿ' ಯಲ್ಲಿ ಕ್ಷಮ ಯಾಚಿಸುತ್ತಾನೆ. ಪಾರ್ವತಿ ಶಾಂತನಳಾಗುತ್ತಾಳೆ. ವಿನಾಯಕ, ಮತ್ತು ಪರಶುರಾಮನ ಯುದ್ಧದಿಂದ 'ಸಂಕಷ್ಟಹರ 'ಗಣೇಶನಿಗೆ ' 'ಏಕದಂತ' ಎಂಬ ಹೆಸರು ಬಂದಿತು. ಏಕದಂತ ಗಾಯಿತ್ರಿ ಮಂತ್ರ ''ಏಕದಂತಂ ಮಹಾಕಾಯಂ ಲಂಬೋದರಗಜಾನನಂ| ವಿಘ್ನನಾಶಕರಂ ದೇವಂ ಹೇರಂಬಂ ಪ್ರಣಾಮ್ಯಹಂ||'' ಮಹಾಭಾರತ ಲಿಪಿಕಾರ ಗಣೇಶನು ಮಹಾಭಾರತದ ಮೂಲ ಬರಹಗಾರ. ವ್ಯಾಸರು ಮಹಾಭಾರತವನ್ನು ಅರ್ಥ ಮಾಡಿಕೊಂಡು ಬರೆಯತಕ್ಕವನು ಗಣಪತಿಯೇ ಎಂದು, ಮಧ್ಯೆ ಏಳದೆ ಬರೆದುಕೊಡುವಂತೆ ಆತನಲ್ಲಿ ಕೇಳುತ್ತಾರೆ. ಹೀಗೆ ವ್ಯಾಸ ಮಹರ್ಷಿಗಳು ಹೇಳುತ್ತಾ ಹೋದಂತೆ ಗಣಪತಿ ಹಕ್ಕಿ ಪುಕ್ಕದಲ್ಲಿ ಬರೆಯುತ್ತಾ ಹೋಗುತ್ತಾನೆ. ಕಡೆಗೆ ಪುಕ್ಕ ಮುರಿದ ಬಳಿಕ ತನ್ನ ದಂತವನ್ನೇ ಬಳಸಿ ಬರೆಯುತ್ತಾನೆ ▬▬▬ஜ۩۞۩ஜ▬▬▬*▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು ಸರ್ವಜನಾಃ ಸುಖಿನೋಭವತು ಶುಭವಾಗಲಿ ಧನ್ಯವಾದಗಳು ಶ್ರೀಮತಿ ನಿರ್ಮಲರಾಜೇಶ್ @everyone ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🕉️ಏಕದಂತ ಸಂಕಷ್ಟಿ ಚತುರ್ಥಿ🙏🏼 - 3 3 - ShareChat