#🙏ಲಕ್ಷ್ಮಿ ದೇವಿ🌸
ಮಹಾಲಕ್ಷ್ಮಿ ಮಾತು
ಬ್ರಹ್ಮವೈವರ್ತ ಪುರಾಣ ರೀತ್ಯ* –
ಲಕ್ಷ್ಮೀ ದೇವಿ ಹೇಳುತ್ತಾಳೆ – ಯಾರು ಗುರುಗಳನ್ನು, ತಂದೆತಾಯಿಯನ್ನು, ಗೌರವದಿಂದ ಪೂಜಿಸುವುದಿಲ್ಲವೋ , ಪಿತೃದೇವತೆಗಳ ಅನುಗ್ರಹ ಪಡೆದಿಲ್ಲವೋ ಅವರ ಮನೆಗೆ ನಾನು ಬರುವುದಿಲ್ಲ” –
ಸುಳ್ಳು ಹೇಳುವವರು, ಸುಳ್ಳು ಸಾಕ್ಷಿ ಹೇಳುವವರು, ಸತ್ಕಾರ್ಯ ದೀಕ್ಷೆ ಇರುವುದಿಲ್ಲವೋ, ಕನ್ಯೆಯನ್ನೂ, ಅನ್ನವನ್ನೂ, ವೇದವನ್ನೂ ಮಾರಾಟ ಮಾಡಿ ಹಣ ಸಂಪಾದಿಸುವರ ಮನೆಯಲ್ಲಿ ಲಕ್ಷ್ಮೀ ಬರುವುದಿಲ್ಲ.
ಮೂತ್ರ ವಿಸರ್ಜನೆ, ಮಲ ವಿಸರ್ಜನೆ ನಂತರ ಕೈಕಾಲು ತೊಳೆದುಕೊಳ್ಳದವರು, ವಿವಾಹ ಮತ್ತು ಧರ್ಮಕಾರ್ಯಗಳನ್ನು ನಿಲ್ಲಿಸುವವರು, ಅಲ್ಲಿಯೂ ಲಕ್ಷ್ಮೀ ನಿಲ್ಲುವುದಿಲ್ಲ.
ಲಕ್ಷ್ಮೀದೇವಿಯು ಶ್ರೀಮನ್ನಾರಾಯಣನ ಅವತಾರ ಕಾಲದಲ್ಲಿ ತಾನೂ ಅವತಾರ ಮಾಡುತ್ತಾಳೆ.
ಲಕ್ಷ್ಮೀ ದೇವಿಯು ಸಮುದ್ರರಾಜನ ಪುತ್ರಿಯಾಗಿ ದೇವದಾನವರ ಸಮುದ್ರಮಥನ ಕಾಲದಲ್ಲಿ ಆವಿರ್ಭವಿಸಿದಳು ಮತ್ತು ಶ್ರೀಹರಿಯನ್ನು ವಿವಾಹವಾದಳು.
ಶ್ರೀಹರಿ ರಾಮಚಂದ್ರನಾದಾಗ ಜನಕರಾಜನ ಕುವರಿಯಾಗಿ ಸೀತಾಮಾತೆಯಾದವಳು, ಕೃಷ್ಣಾವತಾರ ಕಾಲದಲ್ಲಿ ತನ್ನ ಶ್ರೀ ಭೂ ರೂಪದಿಂದ ರುಕ್ಮಿಣಿ ಸತ್ಯಭಾಮಳಾಗಿಯೂ, ಕೃಷ್ಣ ಪರಮಾತ್ಮನ ಮುಂದುವರಿದ ರೂಪವಾದ ಶ್ರೀನಿವಾಸನಾದಾಗ ಪದ್ಮಾವತಿಯಾಗಿಯೂ, ವರಾಹನಾದಾಗ ಭೂದೇವಿಯಾಗಿಯೂ, ಪೃಥು ಮಹಾರಾಜನಾದಾಗ ಜಯಂತಿ ಎಂಬ ಹೆಸರಿನಿಂದಲೂ ಅವತರಿಸಿದ್ದಳು.
ಲಕ್ಷ್ಮೀದೇವಿಯ ವಿವಿಧ ನಾಮಾವಳಿಗಳು – ಪದ್ಮಜಾ, ವಾರಿಜಾ, ವೆಂಕಟರಮಣಿ, ಅರವಿಂದನಯನೆ, ಕ್ಷೀರವಾರಿಧಿ ಕನ್ನಿಕೆ, ಅಂಭ್ರಣಿ, ವೇದವತಿ, ಮಾಯಾ, ಜಯಾ, ಕೃತಿ, ಶಾಂತಿ, ದೇವಿ, ಜಯಂತಿ, ರಮಾ, ಇಂದಿರೆ, ಸೋಮಸೋದರಿ, ಭಾರ್ಗವಿ, ಹೀಗೆ ಇನ್ನೂ ಹಲವಾರು ನಾಮಗಳಿವೆ.
ಮಹಾಲಕ್ಷ್ಮಿಯು ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯ ನೀಡಲಿ
▬▬▬ஜ۩۞۩ஜ▬▬▬*▬▬▬ஜ۩۞۩ஜ▬▬
ಧಮೋ೯ ರಕ್ಷತಿ ರಕ್ಷಿತ:* ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
ಶುಭವಾಗಲಿ ಶ್ರೀಮತಿ ನಿರ್ಮಲರಾಜೇಶ್
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬


