ShareChat
click to see wallet page
search
#🙏ಸಿದ್ಧಿ ವಿನಾಯಕ #🔱 ಭಕ್ತಿ ಲೋಕ ಮಕ್ಕಳ ಕಥೆ: ಬಾಲ ಗಣೇಶ:- ಕೈಲಾಸ ದಲ್ಲಿದ್ದ ಪಾರ್ವತಿ ಒಂದು ದಿನ 'ನಂದಿ' ಯನ್ನು ಕರೆದು, ನಂದಿ ನಾನು ಸ್ನಾನಕ್ಕೆ ಹೋಗುತ್ತೇನೆ. ನಾನು ಬರುವವರೆಗೂ ನನ್ನ ಅಪ್ಪಣೆ ಇಲ್ಲದೆ ಅರಮನೆಯೊಳಗೆ ಯಾರನ್ನು ಬಿಡಬೇಡ. ನಿಮ್ಮ ಅಪ್ಪಣೆಯಂತೆ ಆಗಲಿ ಮಾತೆ ಎಂದನು. ಪಾರ್ವತಿ ಸ್ನಾನಕ್ಕೆ ಹೋದಳು. ನಂದಿ ಕಾಯುತ್ತಿದ್ದ. ಆ ಸಮಯಕ್ಕೆ ಶಿವನು ಬಂದ. ಅವನ ಬರುವ ಹಾಗೆ ಹಾದಿಗೆ ಅಡ್ಡವಾಗಿ ನಿಂತ ನಂದಿಯು, ಪ್ರಭು ಪ್ರಣಾಮಗಳು, ಮಾತೆ ಪಾರ್ವತಿ ಸ್ನಾನಮಾಡಲು ಹೋಗಿದ್ದಾರೆ ಅವರ ಅಪ್ಪಣೆ ಇಲ್ಲದೆ ಯಾರನ್ನೂ ಒಳಗೆ ಬಿಡಬೇಡವೆಂದು ಹೇಳಿದ್ದಾರೆ ಕ್ಷಮಿಸಿ ಪ್ರಭು ಎಂದನು. ಶಿವನು ಜೋರಾಗಿ ನಕ್ಕು ನಂದಿ ನಾನು ಅವಳ ಪತಿ ಪರಮೇಶ್ವರ. ಅವಳ ಆದೇಶ ಇರುವುದು ಇತರರಿಗಾಗಿ, ನನಗಲ್ಲ ಜಾಗ ಬಿಡು ಎಂದು ಒಳಗೆ ಹೋದನು. ಪಾರ್ವತಿಯನ್ನು ಹುಡುಕುತ್ತಾ ಬಂದ ಶಿವನು, ನೀರಿನಲ್ಲಿ ಆಡುತ್ತಿದ್ದ ಪಾರ್ವತಿಯನ್ನು ನೋಡಿ ಪ್ರಿಯೆ ಎಂದು ಕರೆದನು. ಸರೋವರದಲ್ಲಿ ಆಡುತ್ತಿದ್ದ ಪಾರ್ವತಿ, ಗಾಬರಿಯಿಂದ ತಿರುಗಿ ಶಿವನನ್ನು ನೋಡಿ ದಂಗಾದಳು. ಸಾವರಿಸಿಕೊಂಡು ನೀವು ಹೇಗೆ ಒಳಗೆ ಬಂದಿರಿ, ನಂದಿ ತಡೆಯಲಿಲ್ಲವೇ ಎಂದಳು. ಅವನು ನನ್ನ ಪ್ರೀತಿಯ ಗಣ ಅವನು ನನ್ನನ್ನು ಹೇಗೆ ತಡೆಯಲು ಸಾಧ್ಯ, ಅದಕ್ಕೆ ಪಾರ್ವತಿ ನಾನು ಅವನನ್ನು ಕಾವಲು ಕಾಯಲು ನಿಲ್ಲಿಸಿದ್ದೆ. ಅವನು ನನ್ನ ಮಾತನ್ನು ಅವಮಾನ ಮಾಡಬಾರದಿತ್ತು ಎಂದ ಪಾರ್ವತಿಗೆ ಶಿವನು, ದೇವಿ ನಾನು ನಿನ್ನ ಪತಿಯಲ್ಲವೆ ? ನನ್ನನ್ನು ತಡೆಯುವುದರಲ್ಲಿ ಅರ್ಥವೇನಿದೆ. ನೀವು ಹೇಳುವುದು ಸರಿ. ಆದರೆ ನಂದಿ ನನ್ನ ಮಾತನ್ನು ಕೇಳದಿರುವುದು ಧರ್ಮವಲ್ಲ ಎಂದಳು. ಇಷ್ಟು ಸಣ್ಣ ವಿಷಯಕ್ಕೆ ಕೋಪವೇಕೆ, ಅವನಿಗೆ ಅಷ್ಟೊಂದು ತಿಳುವಳಿಕೆ ಇಲ್ಲ ಎಂದು ಪರಮೇಶ್ವರ ಹೇಳಿದ. ನಂತರ ಪಾರ್ವತಿ ಒಬ್ಬಳೇ ಕುಳಿತು ಯೋಚಿಸಿದಳು. ನಂದಿ ಮಾಡಿದ್ದು ತಪ್ಪು. ಆದರೂ ಪಾಪ ಅವನಿಗೆ ಏನು ಮಾಡಲು ಸಾಧ್ಯ? ಅವನು ಸ್ವಾಮಿಭಕ್ತ ಅವನು ಹೇಗೆ ಸ್ವಾಮಿಯನ್ನು ತಡೆಯಲು ಸಾಧ್ಯ? ಇದರಲ್ಲಿ ಅವನದೇನೂ ತಪ್ಪಿಲ್ಲ. ಆದರೆ ನನಗೆ ಒಬ್ಬ ಒಳ್ಳೆಯ 'ಗಣ' ಬೇಕು. ಅವನು ಬುದ್ಧಿವಂತ, ಶಕ್ತಿವಂತ, ಸಾಹಸಿ, ಹಾಗೂ ನನ್ನ ಮಾತನ್ನು ಕೇಳುವಂಥ ವನಾಗಿರಬೇಕು. ತಾನೇ ಸ್ವತಹ ಇಂಥ 'ಗಣ' ಮಾಡುವ ಸಂಕಲ್ಪ ಮಾಡಿಕೊಂಡಳು. ಸ್ನಾನದ ಸರೋವರದ ಹತ್ತಿರ ಕುಳಿತು, ತನ್ನ ಸುಕೋಮಲವಾದ ಮೈಯ ಮಣ್ಣನ್ನೆಲ್ಲ ತೆಗೆದು ಕಣಕಣದಲ್ಲೂ ತನ್ನ ಅಂಶ ತುಂಬಿ, ಮನುಷ್ಯಾಕಾರದ ಪುತ್ಥಳಿ ಮಾಡಿದಳು. ಅದನ್ನು ಒಂದು ಕಡೆ ಇಟ್ಟು ಕಣ್ಣು ಮುಚ್ಚಿ ಕೈಯ್ಮುಗಿದು, ಜಗತ್ತು ಬೆಚ್ಚಿಬೀಳುವಂಥ, ಸ್ವರ್ಗವೇ ನಾಚುವಂತ, ಕೀರ್ತಿ ಪತಾಕೆ ಹಾರಿಸುವಂತ, ಮಗನಿಗೆ ಜೀವಕೊಟ್ಟಳು. ಆಕೆಗೆ ಪುಟ್ಟ ಬಾಲಕ ಪರಮೇಶ್ವರನನ್ನು ನೋಡಿದಂತಾಯಿತು. ಮುದ್ದಿಸಿದಳು, ಎತ್ತಿ ಹಾರಿಸಿದಳು, ಸಂತೋಷದಿಂದ ಮಗುವನ್ನೆತ್ತಿ ಗಿರಗಿರ ತಿರುಗಿದಳು. ದಿನಕಳೆದಂತೆ ಬಾಲ ಗಣೇಶನ ಚೇಷ್ಟೇ ವಿಪರೀತವಾಯಿತು. ಶಿವನ ಗಣಗಳನ್ನು ಕೀಟಲೆ ಮಾಡುವುದು, ತಳ್ಳುವುದು, ಅವರಿಗೆ ತೊಂದರೆ ಕೊಡುವುದು, ಕಲ್ಲಿನಿಂದ ಹೊಡೆಯುವುದು, ಹೀಗೆ ವಿಪರೀತ ತುಂಟಾಟ ಮಾಡುತ್ತಿದ್ದನು. ಯಾರ ಕೈಗೂ ಸಿಗದೆ, ಎಲ್ಲರ ಮೇಲೂ, ಹಲ್ಲೆ ಮಾಡುತ್ತಾ, ತುಂಬಾ ಕಾಟ ಕೊಡತೊಡಗಿದನು. ಶಿವಗಣಗಳು ಇವನ ತುಂಟಾಟಕ್ಕೆ ಹೆದರಿದರು. ಹೀಗಿರುವಾಗ ಒಂದು ದಿನ ಪಾರ್ವತಿ ಮಗನನ್ನು ಕರೆದು, ಮಗು ನಾನು ಸ್ನಾನಕ್ಕೆ ಹೋಗುತ್ತೇನೆ, ನನ್ನ ಅನುಮತಿಯಿಲ್ಲದೆ ಯಾರನ್ನು ಬಿಡಬೇಡ ಎಂದಾಗ, ಮಾತೆ, ಆಗ್ನೆಯಂತೆ ಯಾರನ್ನೂ ಒಳಗೆ ಬರಲು ಬಿಡುವುದಿಲ್ಲ ಅಮ್ಮ ನಿಶ್ಚಿಂತೆಯಾಗಿ ಸ್ನಾನ ಮಾಡು ಎಂದನು. ಮಗು ಆಟದಲ್ಲಿ ಮೈ ಮರೆತು ಯಾರನ್ನು ಬಿಡಬೇಡ ಎಂದು ಹೇಳಿ ಹೋದಳು. ದೊಡ್ಡ ಕೋಲನ್ನು ತೆಗೆದುಕೊಂಡು ಕಾವಲು ನಿಂತಿರುವಾಗಲೇ ಅಲ್ಲಿಗೆ ಬಂದ ಶಿವನನ್ನು ಒಳಗೆ ಬರದಂತೆ ಅಡ್ಡಗಟ್ಟಿ, ಕ್ಷಮಿಸಿ ನೀವು ಒಳಗೆ ಹೋಗುವಂತಿಲ್ಲ, ಇವನ ಮಾತಿಗೆ ಶಿವನು ಮಗು ಯಾರು ನೀನು ? ನಾನು ಹೋಗುವುದನ್ನು ಏಕೆ ತಡೆಯುತ್ತಿರುವೆ? ನಾನು ಗೌರಿಪುತ್ರ ಗಣೇಶ. ಮತ್ತೆ ನಾನು ಮಾತೆಯ ಆದೇಶವನ್ನು ಪಾಲಿಸುತ್ತಿದ್ದೇನೆ. ಯಾರನ್ನು ಬಿಡುವಂತಿಲ್ಲ. ಈ ಮಾತಿಗೆ ಮಗು ಈ ಆದೇಶ ನನಗಲ್ಲ, ನಾನು ಪಾರ್ವತಿ ಪತಿ ಶಿವಶಂಕರ ಬಾಗಿಲಿಂದ ಸರಿ ನಾನು ಒಳಗೆ ಹೋಗುತ್ತೇನೆ. ಗಣೇಶನು ಅಷ್ಟೇ ಹಠದಿಂದ ನಾನು ಬಿಡಲಾರೆ ಎಂದ. ನನ್ನ ಕೋಪದ ಅರಿವು ನಿನಗಿಲ್ಲ ಹಠ ಮಾಡಬೇಡ ಎಂದು ಶಿವ, ನಾನು ಮಾತೆಯ ಆದೇಶ ಮತ್ತು ನನ್ನ ಧರ್ಮಮಾರ್ಗವನ್ನು ಬಿಡುವುದಿಲ್ಲ ಎಂದ ಗಣೇಶ. ಹೀಗೆ ಜಟಾಪಟಿ ನಡೆಯುತ್ತಿರುವಾಗ, ನಂದಿ ಬಂದು ಒಡಂಬಡಿಸಿ ಹೇಳಿದ. ಆದರೆ ಕೇಳಲಿಲ್ಲ. ನಂದಿ ‌ ಹೋರಾಟ ಮಾಡಿ ಗಣೇಶನಿಂದ ಸೋತುಹೋದ. ನಂದಿ ಶಿವನಿಗೆ ಬಂದು ಹೇಳಿದ. ಶಿವನು ಕೋಪದಿಂದ ತನ್ನ ಉಳಿದ ಗಣಗಳನ್ನು ಕಳಿಸಿಕೊಟ್ಟ. ಗಣೇಶ ಆ ಗಣ ಗಳನ್ನೆಲ್ಲ ಸೋಲಿಸಿದ. ಬ್ರಹ್ಮನಿಗೆ ಇದು ತಿಳಿದು, ಶಂಕರನು ಕೋಪದಿಂದ ಇದೇನು ಮಾಡುತ್ತಿದ್ದಾರೆ ಬಾಲಕನಿಗೆ ತಿಳಿ ಹೇಳುವ ಬದಲು, ಬಾಲಕನ ಜೊತೆ ಹೋರಾಡಲು ಗಣಗಳನ್ನು ಕಳಿಸಿರುವುದು ಸರಿಯಲ್ಲ. ಬ್ರಹ್ಮನೇ ಬಂದು ಯುದ್ಧವನ್ನು ನಿಲ್ಲಿಸಲು ಹೇಳಿದ. ನಂತರ ಬಾಲಕ ನೀನು ಹೀಗೆಲ್ಲಾ ಯುದ್ಧ ಮಾಡುವುದು ಸರಿಯಲ್ಲ ಶಂಕರರು ನಿನ್ನ ತಂದೆ, ಅವರಿಗೆ ಅನುಮತಿ ಕೊಡಬೇಕು ಎಂದನು. ಆದರೆ ಗಣೇಶ ತಂದೆಯ ಮಾತನ್ನು ಪಾಲಿಸಿದರೆ, ತಾಯಿಯ ಆದೇಶವನ್ನು ಮೀರಿದಂತಾಗುತ್ತದೆ. ಆದುದರಿಂದ ನನಗೆ ತಾಯಿ ಮಾತನ್ನು ಪಾಲಿಸುತ್ತೇನೆ ಎಂದನು ಬ್ರಹ್ಮ ಹಠ ಬೇಡ ದ್ವಾರದಿಂದ ಈಚೆಗೆ ಬಾ ಎಂದು ಹೇಳಿದನು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಎಷ್ಟೇ ಅನುನಯಿಸಿದರೂ ಬ್ರಹ್ಮನ ಮಾತು ಗಣೇಶ ಕೇಳಲಿಲ್ಲ. ಬ್ರಹ್ಮನಿಗೂ ಸಿಟ್ಟು ಬಂದಿತು. ಅಸ್ತ್ರ ಪ್ರಯೋಗಿಸಿದ, ಎಲ್ಲ ನಿಷ್ಫಲವಾಯಿತು. ಬ್ರಹ್ಮನು ಸೋತುಹೋದ. ಇದರಿಂದ ಶಿವನು ಆವೇಶಭರಿತನಾದ. ಶೇಷಶಾಯಿಯಾದ ವಿಷ್ಣುವಿಗೂ ಇದು ತಿಳಿಯಿತು. ಈಗ ಘೋರ ಅನರ್ಥವಾಗುತ್ತದೆ ಎಂದು ಲಕ್ಷ್ಮಿಗೆ ಹೇಳಿದ. ಹಾಗೇಕೆ ಎಂದಾಗ, ಶಂಕರರು ಶಿವತಾಂಡವ ಆಡುತ್ತಿದ್ದಾರೆ. ಕೋಪ ಮೇರೆ ಮೀರಿದೆ ಆಗುವ ಘೋರ ಆಪತ್ತನ್ನು ತಪ್ಪಿಸಲು ಸಾಧ್ಯವಿಲ್ಲ. ಬೇಗ ಕೈಲಾಸಕ್ಕೆ ಹೋಗೊಣ, ಶಿವನನ್ನು ಶಾಂತ ಗೊಳಿಸಬೇಕು ಎಂದನು. ಅಷ್ಟರಲ್ಲಾಗಲೇ ಶಿವನು ತ್ರಿಶೂಲದಿಂದ ಗಣೇಶನ ದೇಹದಿಂದ ರುಂಡವನ್ನು ಬೇರ್ಪಡಿಸಿದ್ದನು. ಪಾರ್ವತಿ ಬಂದು ನೋಡಿದಳು ಅವಳ ದುಃಖ ಕಟ್ಟೆ ಒಡೆಯಿತು. ಗಣೇಶನನ್ನು ನೋಡಿ ದುಃಖಿಸಿದಳು. ನಿಮ್ಮ ಮಗನನ್ನು ಸಾಯಿಸಿದರಿ ಎಂದು ಶಿವನಿಗೆ ಹೇಳಿದಳು, ಅಲ್ಲಿದ್ದ ದೇವತೆಗಳು ಗಣಗಳು ಎಲ್ಲರನ್ನೂ ಕುರಿತು ಇಷ್ಟೆಲ್ಲ ಗಣ ದೇವತೆಗಳು ಸೇರಿದ್ದು, ಸಣ್ಣ ಬಾಲಕನ ಮೇಲೆ ಪ್ರಹಾರ ಮಾಡಿದಿರಲ್ಲ ನೀವೆಲ್ಲ ಎಷ್ಟು ಕ್ರೂರಿಗಳು ಎಂದು ಬಿಕ್ಕಳಿಸಿದಳು. ಕ್ರೋಧದಿಂದ ಶಿವನನ್ನು ಕುರಿತು, ನನ್ನ ಮಗನಿಗೆ ಪ್ರಾಣವನ್ನು ಕೊಡಲೆಬೇಕು,ಇಲ್ಲದಿದ್ದರೆ ಇಲ್ಲಿ ನಾನು ಪ್ರಾಣ ತ್ಯಾಗ ಮಾಡುತ್ತೇನೆ ಎಂದಳು. ದೇವತೆಗಳೆಲ್ಲ ಇದೇನು ಮಾತು ದೇವಿ ಇದು ಆಗದೇ ಇರುವಂತಹದು. ಅಮಾಯಕನಾದ ನನ್ನ ಮಗನನ್ನು ಬದುಕಿಸಬೇಕು. ಶಿವನು ಅಸಂಭವ ಎಂದರೆ, ಪಾರ್ವತಿ ನಾನು ಬದುಕುವುದು ಅಸಂಭವ ಎಂದಳು. ಲಕ್ಷ್ಮಿ ಯು, ಪರಮೇಶ್ವರ ನೀವು ಮಗನನ್ನು ಕೊಂದು ತಪ್ಪನ್ನು ಮಾಡಿದ್ದೀರಿ. ಜೀವದಾನ ಮಾಡಬೇಕು ಇಲ್ಲದಿದ್ದರೆ ಪಾರ್ವತಿಯ ಕೋಪದ ಅಗ್ನಿ ಸೃಷ್ಟಿಯನ್ನೆ ನಾಶ ಮಾಡುತ್ತದೆ. ವಿಷ್ಣು ಮುಂದೆ ಬಂದು ಭೋಲೆನಾಥ ನೀವು ಮಾಡಿದ್ದು ತಪ್ಪು ಪಾರ್ವತಿ ಹೇಳಿದಂತೆ ಮಗುವಿಗೆ ಜೀವದಾನ ಮಾಡಬೇಕು ಎಂದನು. ಶಿವನು ಸಾಧ್ಯವಿಲ್ಲ ನನ್ನ ಶಸ್ತ್ರದಿಂದ ಒಮ್ಮೆ ತಲೆ ಬೇರ್ಪಡಿಸಿದ ಮೇಲೆ ಮತ್ತೆ ಜೀವದಾನ ಸಾಧ್ಯವಿಲ್ಲ ಎಂದನು. ಆಗ ಬ್ರಹ್ಮನು, ಹಾಗಾದರೆ ಒಂದು ಉಪಾಯ ಇದೆ. ಪರಮೇಶ್ವರ ನೀವು ನಿಮ್ಮ ಆಯುಧದಿಂದ ಪ್ರಹಾರ ಆಗದೇ ಇದ್ದಂಥ ಬೇರೆ ಬಾಲಕನ ತಲೆ ಯನ್ನು ಗಣೇಶನಿಗೆ ಜೋಡಿಸಬಹುದು ಎಂದರು. ಗಣಗಳಿಗೆ ಹೇಳಲು ತಿಳಿಸಿದರು. ಹಾಗೆ ಎಂತಹ ತಲೆ ತರಬೇಕೆಂದರೆ "ಯಾವ ಬಾಲಕನು ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿರುತ್ತಾನೋ, ಅವನ ತಾಯಿ ಅವನಿಗೆ ಬೆನ್ನು ಹಾಕಿ ಮಲಗಿರುತ್ತಾಳೋ", ಅಂತಹ ತಲೆಯನ್ನು ತಡಮಾಡದೆ ಕಡಿದು ತನ್ನಿ ತಡವಾದರೆ ಇವನು ಜೀವಂತ ವಾಗುವುದಿಲ್ಲ. ತಲೆ ತರಲು ಗಣಗಳು ಹೊರಟರು. ಕಾಡೆಲ್ಲ ಹುಡುಕಿದರೂ ಶಿವನು ಹೇಳಿದ ದಿಕ್ಕಿನಲ್ಲಿ ಮಲಗಿದ ತಲೆ ಎಲ್ಲಿಯೂ ಕಾಣಲಿಲ್ಲ. ಬಹಳ ಹೊತ್ತಾದ ಮೇಲೆ ಉತ್ತರದ ಕಡೆ ತಲೆ ಮಾಡಿದ ಆನೆ ಕಂಡಿತು. ಆನೆ ತಲೆಯನ್ನೇ ತಂದರು. ಶಿವನು ಇದೇನು ಮೂರ್ಖತನ , ನೀವು ಹೇಳಿದಂತ ಉತ್ತರ ದಿಕ್ಕಿನಲ್ಲಿ ಯಾವುದೂ ಮಲಗಿರಲಿಲ್ಲ. ಇದೇ ತಲೆ ಸಿಕ್ಕಿದ್ದು ಪ್ರಭು ಎಂದರು. ತಡ ಮಾಡದಂತೆ ಅದೇ ತಲೆಯನ್ನು ಶಿವನು ಜೋಡಿಸಿ ಬಾಲಕನಿಗೆ ಜೀವ ತುಂಬಿದನು. ಮಗ ಹೇಗೆ ಇದ್ದರೂ ತಾಯಿಗೆ ಸಂತೋಷವಾಯಿತು. ಶಿವನು ದೇವಿ ನಿಮ್ಮ ಮಗನ ಜೀವಂತವಾಗಿದ್ದಾನೆ, ಎಂದಾಗ, ಪಾರ್ವತಿ, ಈ ರೂಪದಲ್ಲಿ ಮಗನನ್ನು ನೋಡಿದರೆ ಎಲ್ಲರೂ ಆಡಿಕೊಳ್ಳುತ್ತಾರೆ. ಶಿವನು ಹಾಗೇನು ಆಗುವುದಿಲ್ಲ ಎಂದರೆ, ಬ್ರಹ್ಮನು, ಎಲ್ಲಾ ಯುಗ-ಯುಗಗಳನ್ನು ಈ ಬಾಲಕನ ಪೂಜೆ ಮಾಡುತ್ತಾರೆ. ಇವನು ಭೂಮಿಯ ಮೇಲಿನ ಜನರ ಕಲ್ಯಾಣವನ್ನು ಮಾಡುತ್ತಾನೆ ಎಂದು ವರ ಕೊಟ್ಟನು. ಯಾವುದೇ ಶುಭಕಾರ್ಯವಾಗಲೀ ಮೊಟ್ಟಮೊದಲು ಇವನ ಪೂಜೆ ಮಾಡುತ್ತಾರೆ ಎಂದು ಲಕ್ಷ್ಮಿ ವರದಾನ ಕೊಟ್ಟರೆ, ಈ ಬಾಲಕನು ವಿದ್ಯಾ-ಬುದ್ಧಿ ಧಾತನು, ದೇವಾಲಯ ಹಾಗೂ ಮನೆಗಳಲ್ಲಿ ಇವನ ಪೂಜೆ ಮಾಡುತ್ತಾರೆ. ಮೋದಕ, ಪಂಚ ಕಜ್ಜಾಯ, ಉಂಡೆಗಳನ್ನು ಇವನಿಗೆ ನೈವೇದ್ಯ ಮಾಡುತ್ತಾರೆ ಎಂದು ವಿಷ್ಣು ವರ ಕೊಡುತ್ತಾನೆ, ನಮ್ಮ ಪುತ್ರ ಎಲ್ಲರಿಗಿಂತ ಬುದ್ಧಿಶಾಲಿ- ಬಲಶಾಲಿ ಯಾಗುತ್ತಾನೆ. ಗಣಗಳ ಸೇನೆಯ ಸೇನಾಪತಿ ಇವನೇ ಎಂದು ಶಿವನು ವರ ಕೊಡುತ್ತಾನೆ. ಈ ರೀತಿ ಎಲ್ಲಾ ದೇವಾನುದೇವತೆಗಳ ಅನುಗ್ರಹ ವರಗಳಿಗೆ ಪಾತ್ರನಾಗುತ್ತಾನೆ. ಪಾರ್ವತಿ ತಾನೆ ಯೋಚಿಸಿ ತನಗಾಗಿ, ಮಾಡಿಕೊಂಡ ಪುತ್ಥಳಿಗೆ ಜೀವ ತುಂಬಿದರೂ, ಅವನು ಕೇವಲ ತಾಯಿ ಮಗನಾಗಿದ್ದ, ಪುರುಷ ಶಕ್ತಿ, ಸಂಸ್ಕಾರ, ಇಲ್ಲದೆ ತಾಯಿ ಮಾತನ್ನು ಪಾಲನೆ ಮಾಡಬೇಕೆಂದು ಉದ್ದೇಶ ಹೊಂದಿದ್ದು, ಅಡ್ಡಾದಿಡ್ಡಿ ಎಂಬಂತಿದ್ದ, ಪಾರ್ವತಿಯ ಅನುಗ್ರಹದಿಂದ ಅಪರಿಮಿತವಾದ ಶಕ್ತಿ ಇದ್ದರೂ, ಸರಿಯಾದ ಬಳಕೆ ಮಾಡುವುದು ಗೊತ್ತಿಲ್ಲದೆ, ಮೈಮೇಲೆ ಗಣ ಮಗ ಬಂದವರಂತೆ ಹೋರಾಡುತ್ತಿದ್ದ. ಒಟ್ಟಾರೆ ಈ ಗಣೇಶ ಪರಿಪೂರ್ಣವಾದ ಬಾಲಕನಾಗಿರಲಿಲ್ಲ. ಯಾವಾಗ ಪರಮೇಶ್ವರ ಅವನ ತಲೆ ಕಡಿದು, ಆನೆ ತಲೆಯನ್ನು ಜೋಡಿಸಿದನೋ, ಆಗ ತಂದೆಯ ಸ್ಪರ್ಶ, ತೇಜಸ್ಸು, ಸದ್ಗುಣಗಳು, ಆಶೀರ್ವಾದ, ಮಿಗಿಲಾಗಿ ತಂದೆಯ ಅಪರಿಮಿತವಾದ ಶಕ್ತಿ ವಿದ್ಯುತ್ ಪ್ರವಾಹದಂತೆ ಅವನೊಳಗೆ ಸಂಚಲನ ವಾಯಿತು. ತಂದೆ-ತಾಯಿಯರ ಪರಿಪೂರ್ಣ ಶಕ್ತಿ, ಸಂಸ್ಕಾರ, ಪ್ರೀತಿ ತುಂಬಿದ ಮಗನಾಗಿ, ಸಕಲ ದೇವಾನುದೇವತೆಗಳ ಆಶೀರ್ವಾದ, ವರದಾನದಿಂದ ಜಗತ್ಪರಿಪಾಲಕ ಗಣೇಶನಾದನು. ಯಾವುದೇ ಮಗು ತಂದೆ-ತಾಯಿ ಇಬ್ಬರ ಪಾಲನೆ-ಪೋಷಣೆಯಲ್ಲಿ ಬೆಳೆದರೆ ಸಂಸ್ಕಾರವಂತನಾಗುತ್ತಾನೆ/ಳೆ. ಜಯಗಣೇಶ ಜಯಗಣೇಶ ಜಯಗಣೇಶ ಪಾಹಿಮಾಂ ! ಜಯಗಣೇಶ ಜಯಗಣೇಶ ಜಯಗಣೇಶ ರಕ್ಷಮಾಂ ! ಶ್ರೀ ಗಣೇಶ ಶ್ರೀ ಗಣೇಶ ಶ್ರೀ ಗಣೇಶ ಪಾಹಿಮಾಂ ! ಶ್ರೀ ಗಣೇಶ ಶ್ರೀ ಗಣೇಶ ಶ್ರೀ ಗಣೇಶ ರಕ್ಷಮಾಂ ! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
🙏ಸಿದ್ಧಿ ವಿನಾಯಕ - ShareChat