ನಾವು ತಪ್ಪು ಮಾಡಿದಾಗ ಕೃಷ್ಣ ಏಕೆ ತಕ್ಷಣ ಪ್ರತಿಕ್ರಿಯಿಸುವುದಿಲ್ಲ.?
ಪ್ರಪಂಚದಲ್ಲಿ ಎಲ್ಲರೂ ಸರಿಯಾದ ಕೆಲಸವನ್ನೇ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಬ್ಬರು ತಪ್ಪಾದ ಕೆಲಸವನ್ನು ಮಾಡಬಹುದು. ಇನ್ನು ಕೆಲವೊಬ್ಬರು ಕೆಲಸ ಮಾಡುವುದರಲ್ಲೇ ಹಿಂದಕ್ಕೆ ಉಳಿಯಬಹುದು. ಕೃಷ್ಣನಿಗೆ ಜನರು ತಪ್ಪು ಮಾಡುತ್ತಿದ್ದಾರೆ ಎಂದು ತಿಳಿದಿದ್ದರೂ ಅವನೇಕೆ ಸುಮ್ಮನಿದ್ದ.? ನಾವು ಸರಿಯಾದ ಕೆಲಸವನ್ನೇ ಮಾಡುವಂತೆ ಯಾಕೆ ಕೃಷ್ಣ ನಮಗೆ ಸಹಾಯ ಮಾಡಲಿಲ್ಲ.? ನಾವು ಮಾಡುತ್ತಿರುವ ಕೆಲಸ ತಪ್ಪೆಂದು ಕೃಷ್ಣನಿಗೆ ತಿಳಿದಿದ್ದರೂ ಅವನು ಮೌನವಹಿಸಿದ್ದೇಕೆ.?