ShareChat
click to see wallet page
search
#ಅಮ್ಮ ಮಾತೃದೇವೋ ಭವ :- ಒಬ್ಬ ತಾಯಿಗೆ ಮಗನಿದ್ದ. ಬೆಳೆದು ಯುವಕನಾಗಿದ್ದ. ಮನೆಯಲ್ಲಿ ಬಡತನ. ಬೇರೆಯವರ ಮನೆ ಚಾಕರಿ ಮಾಡಿ ಮಗನನ್ನು ಸಾಕಿದ್ದಳು. ಅವಳಿಗೂ ವಯಸ್ಸಾಗಿತ್ತು ಕೆಲಸ ಮಾಡಲು ಸಾಗುತ್ತಿರಲಿಲ್ಲ . ಹೇಗೋ ಮಗ ದೊಡ್ಡವನಾಗಿದ್ದಾನೆ ಒಂದು ಮದುವೆ ಮಾಡಿದರೆ, ಸೊಸೆ ಮನೆಯಲ್ಲಿ ಸುಧಾರಿಸಿಕೊಂಡು ಹೋಗುತ್ತಾಳೆ, ತಾನು ಹಾಯಾಗಿ ಇರಬಹುದು ಎಂದು ಚಿಂತಿಸಿದಳು. ಹೀಗಿರುವಾಗ ಒಂದು ದಿನ ಮಗ ತಾಯಿ ಮುಂದೆ ಬಂದು ಅಮ್ಮ ನನಗೆ ದೇವರನ್ನು ನೋಡಬೇಕೆಂಬ ಆಸೆ ಇದೆ. ನಾನು ಆಗಲೇ ಮನಸ್ಸಿನಲ್ಲಿ ನಿರ್ಧರಿಸಿದ್ದೇನೆ. ಹೇಗೆ ಕಾಣುವುದು ಅಮ್ಮ ಎಂದು ಕೇಳಿದ. ತಾಯಿಯ ಆಲೋಚನೆ ಮಗನ ಮದುವೆ ಮಾಡಬೇಕೆಂದು, ಮಗನ ಅಪೇಕ್ಷೆ ದೇವರನ್ನು ಕಾಣಬೇಕು ಎಂದು. ಯಾರ ಅಪೇಕ್ಷೆ ಏನಿದಿಯೋ ಯಾರಿಗೆ ಗೊತ್ತು ಎಂದುಕೊಂಡ ತಾಯಿ ಮಗನಿಗೆ ಹೋಗುವುದು ಬೇಡ ಎಂದು ಹೇಳಲು ಮನಸ್ಸು ಬರಲಿಲ್ಲ. ಮಗು ನೀನು ದೇವರನ್ನು ಕಾಣಲು ಹೋಗುತ್ತಿ ರುವೆ ಒಳ್ಳೆಯದು ಹೋಗು ಮಗನೆ ಮುಂಜಾನೆ ಬುತ್ತಿ ಕಟ್ಟಿ ಕೊಡುತ್ತೇನೆ ಹೋಗಿ ಬಾ ಎಂದಳು. ತಾಯಿ ಬೆಳಗ್ಗೆ ಎದ್ದು ಹಿಟ್ಟು ಕಲಸಿರೊಟ್ಟಿ ತಟ್ಟಿ ಎಲೆ ಮೇಲೆಟ್ಟು ರೊಟ್ಟಿ ಮೇಲೆ ಚಟ್ನಿಪುಡಿ ಹಾಕಿ ಹಳೆಯ ಬಟ್ಟೆ ತುಂಡಿನಲ್ಲಿಟ್ಟು ಕಟ್ಟಿ ಮಗನ ಕೈಗೆ ಕೊಟ್ಟಳು ಹಾಗೆಯೇ, ಮಗ ನೀನು ದೇವರನ್ನು ಕಾಣಲು ಹೊರಟಿರುವೆ, ತುಂಬಾ ಒಳ್ಳೆಯ ಯೋಚನೆ, ಎಂತೆಂಥ ಸಾಧು-ಸಂತರೆಲ್ಲ ದೇವರನ್ನು ಕಾಣುವ ಸಲುವಾಗಿ ಪ್ರಯತ್ನಿಸುತ್ತಾರೆ. ನಿನಗೆ ಭಗವಂತನ ದರ್ಶನವಾಗಲಿ ಆದರೆ ನನ್ನ ಒಂದು ಮಾತನ್ನು ನಡೆಸಿಕೊಡು. ನೀನು ದೇವರನ್ನು ಕಂಡ ಮೇಲೆ ಮನೆಗೆ ಬಂದು ದೇವರು ಹೇಗಿದ್ದಾನೆ ಎಂಬುದನ್ನು ನನಗೂ ಹೇಳು ಮಗು ಎಂದಳು. ಆ ಹುಡುಗ ಆಯಿತು ಎಂದು ತಾಯಿಗೆ ಹೇಳಿ ದೇವರನ್ನು ಕಾಣಲು ಹೊರಟ ಹೊರಟು ಬಹಳ ಸಮಯವಾಯಿತು, ಕಾಡೆಲ್ಲ ಸುತ್ತಿದ, ಬೆಟ್ಟ ಗುಡ್ಡ ಹತ್ತಿದ, ಗುಹೆಗಳಲ್ಲಿ ಕುರಿತು ಧ್ಯಾನ ಮಾಡಿದ, ನದಿ ತಟಗಳಲ್ಲಿ ಕುಳಿತು ತಪಸ್ಸು ಮಾಡಿದ. ಆದರೆ ಅವನಿಗೆ ಯಾವ ದೇವರು ದರ್ಶನ ಕೊಡಲಿಲ್ಲ. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ.ಇನ್ನು ಸಾಕು ಮನೆಗೆ ಹೋಗೋಣ ಎಂದು ಹೊರಟು ಬಂದ. ಅವನು ಬರುವ ಸಮಯಕ್ಕೆ ಮುಸ್ಸಂಜೆ ಆಗಿತ್ತು . ಗುಡಿಸಲ ಮುಂದೆ ನಿಂತಿದ್ದಾನೆ ಒಳಗೆ ತಾಯಿ ದೇವರ ಮುಂದೆ ದೀಪ ಹಚ್ಚಿ ನನ್ನ ಮಗನಿಗೆ ನಿನ್ನ ದರ್ಶನ ಮಾಡಿಸು ಅವನುನಿನ್ನನ್ನು ನೋಡುವ ಸಲುವಾಗಿ ಹೊರಟಿದ್ದಾನೆ. ಬಹಳ ದಿನಗಳಾಗಿದೆ ಅವನಿಗೆ ನಿನ್ನ ದರ್ಶನ ಭಾಗ್ಯವನ್ನು ಬೇಗ ಕೊಡು ಎಂದು ಕೈಮುಗಿದು ಬೇಡುತ್ತಿದ್ದಳು. ಆ ದೀಪದ ಬೆಳಕು ಅವಳ ಮುಖದ ಮೇಲೆ ಬಿದ್ದು ತಾಯಿಯ ಮುಖದ ಪ್ರಶಾಂತ ತೆಯಿಂದ ದಿವ್ಯವಾದ ತೇಜಸ್ಸು ತುಂಬಿತ್ತು. ದೇವರನ್ನು ಹುಡುಕಲು ಹೊರಟ ಮನೆಗೆ ಬಂದು ದೇವರ ದೀಪದ ಬೆಳಕಿನಲ್ಲಿ ಅಮ್ಮನ ಮಮತೆ ತುಂಬಿದ ಮುಖವನ್ನು ನೋಡಿದ. ಆಗ ಮನಸ್ಸಿನಲ್ಲಿ ಬಂದಿತು ಎಂಥಾ ಕರುಣಾಮಯಿ ದಯಾಮಯಿ ನನ್ನಮ್ಮ. ತಾಯಿಗಿಂತ ಬೇರೆ ದೇವರು ಉಂಟೇ ಆ ಕ್ಷಣವೇ ಅಮ್ಮಾ ಎಂದು ಕೂಗಿದ. ಮಗನ ದೇವರಲ್ಲಿ ಪ್ರಾರ್ಥಿಸುತ್ತಿದ್ದ ತಾಯಿ ಹೊರಗೆ ಓಡಿ ಬಂದಳು ಮಗನನ್ನು ಕಂಡು ಅವನ ತಲೆಯನ್ನು ನೇವರಿಸಿ ಮಗು ಈಗ ಬಂದೆಯಾ ದೇವರನ್ನು ಕಂಡೆಯಾ? ಹೆಂಗಿದ್ದಾನೆ ಎಂದು ಕೇಳಿದಳು? ಮಗ ಹೇಳಿದ ಅಮ್ಮ ನಾನು ದೇವರನ್ನು ಕಂಡೆ ಕಾಡು ಮೇಡುಗಳಲ್ಲಿ, ಪರ್ವತಗಳ ತುದಿಯವರೆಗೂ ಹತ್ತಿದೆ, ನದಿ ತೀರಗಳಲ್ಲಿ ಕುಳಿತು ತಪಸ್ಸು ಮಾಡಿದೆ ಗುಹೆ ಗಳಲ್ಲಿ ಕುಳಿತು ಧ್ಯಾನ ಮಾಡಿದೆ. ಎಲ್ಲಿ ಹುಡುಕಿದರು ದೇವರು ಕಾಣಲಿಲ್ಲ. ಜಗವೆಲ್ಲ ಸುತ್ತಿ ಮನೆಗೆ ಬಂದೆ ದೇವರ ದೀಪದ ಬೆಳಕು ನಿನ್ನ ಮುಖದ ಮೇಲೆ ಬಿದ್ದಿತ್ತು ಅಲ್ಲಿ ದೇವರನ್ನು ಕಂಡೆ ಎಂದು ತಾಯಿಯನ್ನು ಅಪ್ಪಿ ಹಿಡಿದುಕೊಂಡು. ತಾಯಿಗಿಂತ ಬೇರೆ ದೇವರಿಲ್ಲ ಅಮ್ಮಾ ನನ್ನಮ್ಮ ನೀನೇ ನನಗೆಲ್ಲ. ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ನಿನ್ನ ಸಂಗ ಆಡಲೆಂದು ಬಂದೆ ನಾನು!! ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು ಬಣ್ಣದ ಬಣ್ಣದ ಚಿಟ್ಟೆಯನ್ನು ನೀನೇ ನೀನು!! ರೆಕ್ಕೆ ಬಂದ ಹಾರುವೆ ಹಾಗೆ ನಾನು ಅಕ್ಕರೆಯ ತೋರಿ ಎನ್ನ ಅಪ್ಪು ನೀನು!! ಅಮ್ಮಾ!! ಊರು ಬೇಡ ಕೇಳಿ ಬೇಡ ಯಾರು ಬೇಡಾ ಅಮ್ಮ ಒಮ್ಮೆ ಕಣ್ಣು ಬಿಟ್ಟು ನನ್ನ ನೋಡಾ ತಾಯಿ ತಂದೆ ಬಂಧು ಬಳಗ ನೀನೆ ಎಲ್ಲಾ ನಿನಗಿಂತ ಬೇರೆ ದೇವರಿಲ್ಲಾ !! ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ — ಹಕ್ಕುಗಳು ಸಂರಕ್ಷಿತ
ಅಮ್ಮ - Nagabhushana Stories Asho Nagabhushana Stories Asho - ShareChat