ShareChat
click to see wallet page
search
#ದಿನಕ್ಕೊಂದು ಕಥೆ #🔱 ಭಕ್ತಿ ಲೋಕ ತಾಂಬೂಲಂ ಪ್ರತಿಗೃಹ್ಯತಾಮ್ :- 'ಕರ್ಪೂರ ಚೂರ್ಣಸಂಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಮ್' ಭಗವಂತನ ನೈವೇದ್ಯಕ್ಕೆ ಅಡುಗೆ ಭಕ್ಷಗಳನ್ನು ಅರ್ಪಿಸಿ, ವಿಳ್ಳೆದೆಲೆ ಅಡಿಕೆಯ ಜೊತೆ ಹಣ್ಣು ಹಂಪಲು ಗಳನ್ನು ಇಟ್ಟು ನಿವೇದನೆ ಮಾಡಿ 'ತಾಂಬೂಲಂ ಪ್ರತಿ ಗೃಹ್ಯತಾಮ್' ಎಂದು ವಿಳ್ಳೇದೆಲೆ ತುದಿ ಚಿವುಟಿ ಬದಿಯಲ್ಲಿ ಹಾಕಿ ಮೇಲೆ ಉದ್ಧರಣೆ ನೀರು ಹಾಕಿದರೆ ಭಗವಂತ ಹಣ್ಣನ್ನು ಸವಿದು, ತಾಂಬೂಲ ತಿಂದು ಸಂತುಷ್ಟನಾಗಿದ್ದಾನೆ ಎಂಬ ಭಾವದಿಂದ ಮಾಡಿದ ಪೂಜೆ ಸಂಪನ್ನ ವಾಗುತ್ತದೆ. ಹಾಗೆ ಮನೆಗೆ ಕರೆದ ಅತಿಥಿಗಳಿಗೂ ಊಟವಾದ ನಂತರ ಜೋಡಿಸಿದ ವಿಳ್ಳೆದೆಲೆ, ಅಡಿಕೆ- ಸುಣ್ಣ, ಜೊತೆಗೆ ಸಕ್ಕರೆ,(ಹೊಸ ಸುಣ್ಣವಾಗಿ ನಾಲಿಗೆ ಸುಟ್ಟರೆ ಹಾಕಿಕೊಳ್ಳಲು) ಒಣ ಕೊಬ್ಬರಿ ಚೂರುಗಳು, ಇಡುತ್ತಾರೆ. ಅತಿಥಿಗಳು ಎಲೆ- ಸುಣ್ಣ- ಅಡಿಕೆ- ಎಲ್ಲಾ ಸೇರಿಸಿ ತಾಂಬೂಲ ಬಾಯಿಗೆ ಹಾಕಿ ಸವಿದು ಹೋಗಿ ಬರುತ್ತೇವೆ ಎಂದು ತೃಪ್ತಿಯಿಂದ ಹೇಳಿ ಹೊರಟರೆ ಅವರ ಆಶೀರ್ವಾದ ದೊರೆತಿದೆ ಎಂಬುದು ಗುರುವಾಣಿ. ಆ ಮನೆಯವರಿಗೆ ಸಾಕ್ಷಾತ್ ಭಗವಂತನೇ ಅನುಗ್ರಹ ಮಾಡುತ್ತಾನೆ. ಇಂಥ ವಿಳ್ಳೇದೆಲೆಯ ಮಹತ್ವಕ್ಕೆ ಪುರಾಣ ಹಿನ್ನೆಲೆ ಇದೆ. ಶ್ರೀ ರಾಮ ಸೀತಾ ಲಕ್ಷ್ಮಣ ಸಮೇತ ವನವಾಸಕ್ಕೆ ಹೋದಾಗ ರಾವಣ ಸೀತೆ ಯನ್ನು ಅಪಹರಿಸಿ ಅಶೋಕ ವನದಲ್ಲಿ ಇಡುತ್ತಾನೆ, ಹನುಮಂತ ಲಂಕಾ ನಗರಕ್ಕೆ ಬಂದು ಸೀತೆ ಯನ್ನು ಹುಡುಕಿ, ಆಕೆ ಹೆದರ ಬಹುದು ಎಂದು ಮೊದಲು ಮರದ ಮೇಲೆ ಕುಳಿತು ರಾಮನ ಗುಣಗಾನದ ಹಾಡ ನ್ನು ಹೇಳಿ, ಅವಳು ನಂಬಿದ ಮೇಲೆ, ತನ್ನ ಗಾತ್ರ ವನ್ನು ಕಿರಿದಾಗಿಸಿ ಸೀತೆಗೆ ಕಾಣಿಸಿ ಕೊಂಡು ನಮಸ್ಕರಿಸಿ, ತಾನು ರಾಮನ ಭಂಟ ಹನುಮಂತ ಎಂದು ಪರಿಚಯಿಸಿ ಕೊಂಡು, ರಾಮನೇ ಕೊಟ್ಟ ರಾಮ ಮುದ್ರಿಕೆ ಉಂಗುರ ಸೀತೆಗೆ ಕೊಡುತ್ತಾನೆ. ಸೀತೆಗೆ ಸಂತೋಷ ವಾಯಿತು ಹಾಗೆ ರಾಮ ತನ್ನನ್ನು ಹುಡುಕಲು ಹತ್ತಿರವೇ ಬಂದಿದ್ದಾನೆಂದು ತಿಳಿದು ಅವಳ ಆತ್ಮಸ್ಥೈರ್ಯ ಹೆಚ್ಚುತ್ತದೆ. ಹನುಮಂತ ಅವಳೊಂದಿಗೆ ಮಾತನಾಡಿ ಲಂಕಾ ನಗರದ ಬಹಳಷ್ಟು ಭಾಗ ದಹನ ಮಾಡಿ, ಹೊರಡುವ ಮುನ್ನ ಸೀತೆಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾನೆ. ಹನುಮಂತ ಮೇಲಿ ನ ಅಭಿಮಾನ- ಪ್ರೀತಿ- ಪುತ್ರ ವಾತ್ಸಲ್ಯದಿಂದ ಅವನಿಗೆ ಆಶೀರ್ವಾದ ಮಾಡಿ ಏನು ಕೊಡಲಿ ಎಂದು ಸೀತೆಗೆ ತಿಳಿಯಲಿಲ್ಲ. ಆಗ ಕಂಡಿದ್ದೆ ಅಶೋಕವನ ದಲ್ಲಿ ಸೊಂಪಾಗಿ ಬೆಳೆದಿದ್ದ ವಿಳ್ಳೆದೆಲೆ ಬಳ್ಳಿ ಅವಳು ಎಲೆಗಳನ್ನು ಕೊಯ್ದು ಹಾರ ಮಾಡಿ ಹನುಮಂತಗೆ ಹಾಕುತ್ತಾಳೆ. ಸೀತಾ ಮಾತೆ ಆಶೀರ್ವದಿಸಿ ಹಾಕಿದ ಹಾರ ಹನುಮಂತನಿಗೆ ಪಾರಿತೋಷಕ ಪಡೆದಷ್ಟೇ ಸಂತೋಷವಾಗಿ ಸೀತೆ ಯಿಂದ ಬೀಳ್ಕೊಂಡನು, ಆ ದಿನದಿಂದಲೇ ಭಕ್ತರಿಗಾಗಿ ಆಂಜನೇಯ ಒಂದು ವರ ಕೊಟ್ಟನು. ಮುಂದೆ ಯಾರೇ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ನನಗೆ ವಿಳ್ಳೆದೆಲೆ ಹಾರವನ್ನು ಹಾಕಿ ಪ್ರಾರ್ಥಿಸಿದರೆ ಅವರಿಗೆ ಅನುಗ್ರಹಿಸುವೆ ಎಂದು ವಚನ ಕೊಡುತ್ತಾನೆ. ಇದೇ ಕಾರಣದಿಂದ ಭಕ್ತರು ತಮ್ಮ ಇಷ್ಟಾ ರ್ಥ ಸಿದ್ಧಿಗಾಗಿ ಮಂಗಳವಾರ ಅಥವಾ ಶನಿವಾರ ಆಂಜನೇಯನನ್ನು ಪ್ರಾರ್ಥಿಸಿ ಚಿಗುರು ವಿಳ್ಳೇದೆಲೆ ಹಾರವನ್ನು ಭಕ್ತಿಯಿಂದ ಅರ್ಪಿಸಿ ಬೇಡಿ ಕೊಳ್ಳುತ್ತಾರೆ.16, 48,ಅಥವಾ 108, ವಿಳ್ಳೇದೆಲೆಗಳ ಹಾರ ಕಟ್ಟಿ ಆಂಜನೇಯಗೆ ಅರ್ಪಿಸಬೇಕು. ಮನೆಯ ಲ್ಲಿಯೂ ಹಾಕಿ ಪೂಜಿಸಬಹುದು. ನಂತರ ಎಲೆಗಳನ್ನು ಮನೆಯವರೇ ಸೇವಿಸಬೇಕು ಅಥವಾ ಮುತ್ತೈದೆ ಯಾ ಬ್ರಾಹ್ಮಣನಿಗೆ ಅಡಿಕೆ- ದಕ್ಷಿಣೆ ಸಹಿತ ಕೊಡಬೇಕು. ತಿನ್ನುವವರೆಗೆ ಎಲೆ ಜೊತೆ ಅಡಿಕೆ ಇಟ್ಟು ಕೊಡಬೇಕು. ವೀಳ್ಯೆದೆಲೆ ಹಾರ ಹಾಕುವುದರಿಂದ ದೋಷಗಳ ನಿವಾರಣೆ ಯಾಗುತ್ತದೆ, ಮಾಟ -ಮಂತ್ರ- ದೋಷ ಅನುಮಾನಗಳಿದ್ದರೆ ಅವುಗಳ ಪ್ರಭಾವ ನಾಶ ವಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸಿ, ಶುಭಕಾರ್ಯಗಳು ನೆರವೇರುತ್ತದೆ. ಹಾಗೆ ವೀಳ್ಯದೆಲೆ ಮೇಲೆ ಅರಿಶಿನ- ಕುಂಕುಮ ಹಾಕಿ ಎರಡು ತುಪ್ಪದ ದೀಪ ಹಚ್ಚಿಟ್ಟರೆ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮಕ್ಕಳಿಗೆ ಬಾಲಗ್ರಹ, ಬೆದರುವುದು, ಬೆಚ್ಚುವುದು, ದೃಷ್ಟಿ ದೋಷ, ಭಯ, ಕುಮುಟಿ ಬೀಳುವುದು ಮುಂತಾದ ಸಮಸ್ಯೆಗಳು ನಿವಾರಣೆಯಾಗುತ್ತದೆ. ವೀಳ್ಯದೆಲೆ ಹಾರ ಹಾಕು ವುದರಿಂದ ಕಷ್ಟ ನಿವಾರಣೆ, ಶುಭ ಸಂಕೇತ. ಇದರಂತೆ ಆಂಜನೇಯನಿಗೆ ಹರಕೆ ಹೊತ್ತವರು ಅಂಬಡೆ, ಉದ್ದಿನವಡೆ ,ಚಕ್ಕುಲಿ, ಹಾರಗಳನ್ನು ಹಾಕುತ್ತಾರೆ. ವೀಳ್ಯದೆಲೆ ಹಾರವನ್ನು ಈಶ್ವರ, ಪಾರ್ವತಿ, ಗಣೇಶ. ಶುಕ್ರವಾರ ಲಕ್ಷ್ಮಿಗೆ, ದುರ್ಗಾ ಪರಮೇಶ್ವರಿಗೆ ಹಾಕುತ್ತಾರೆ. ಎಲ್ಲಾ ದೇವರುಗಳಿಗೆ- ಗುರು ಗಳಿಗೂ ಶ್ರೇಷ್ಟವಾದದ್ದು.ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ವಿಳ್ಳೇದೆಲೆ ಬಹಳಷ್ಟು ಉಳಿದರೆ, ಶ್ರಾವಣ,ಭಾದ್ರಪದ, ಅಶ್ವಿಜಮಾಸ ಹಬ್ಬ- ಹುಣ್ಣಿಮೆ, ಮದುವೆ, ಉಪನಯನ ಗೃಹ ಪ್ರವೇಶ,ಅಥವಾ ಮನೆಗಳಲ್ಲಿ ಜಾಸ್ತಿ ಬಿಟ್ಟರೆ, ಸ್ವಲ್ಪ ಬಾಡಿದ್ದರೂ ಪರವಾಗಿಲ್ಲ ಅದರ ತೊಟ್ಟು, ತುದಿಯನ್ನು ತೆಗೆದು ಅಡಿಕೆಯನ್ನು ಪುಡಿ ಮಾಡಿ ಅಡಿಕೆ ಜೊತೆ, ಏಲಕ್ಕಿ,‌ ಸಕ್ಕರೆ, ಒಂದೆ ರಡು ಲವಂಗ ಸೇರಿಸಿ ಹಾಗೂ ಎಲ್ಲಾ ಎಲೆಗಳನ್ನು ಹಾಕಿ ತರಬರಕಲಾಗಿ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟು (ಹೊರಗು ಇಡಬಹು ದು) 15 ದಿನ ತಿಂಗಳು ಇರುತ್ತದೆ. ಒಂದು ಚಮಚ ತಿಂದರೆ ತಾಂಬೂಲ ತಿಂದಂತೆ ಆಗುತ್ತದೆ, ಪ್ರವಾಸಕ್ಕೆ ತೆಗೆದು ಕೊಂಡು ಹೋದರೆ ನಾವು ತಿಂದು ಅಕ್ಕ ಪಕ್ಕದವರಿಗೂ ಕೊಡಬಹುದು. ವೀಳ್ಯೆದೆಲೆ ಮಹತ್ವ:-ವಿಳ್ಳೇದೆಲೆ ಲಕ್ಷ್ಮಿಯ ವಾಸಸ್ಥಾನ. ಕುಂಕುಮಾರ್ಚನೆ ಮಾಡುವಾಗ ಎರಡು ವೀಳ್ಯದೆಲೆ ಅಡಿಕೆ ಒಂದು ನಾಣ್ಯ ಇಟ್ಟು, ಇದರ ಮೇಲೆ ಕುಂಕುಮ ಹಾಕಿ ಒಂದೊಂದು ನಾಮಕ್ಕೂ ಅರ್ಚನೆ ಮಾಡುತ್ತಾರೆ. ಹಣ, ಚಿನ್ನದಷ್ಟೇ ವೀಳ್ಯದೆಲೆ ಪವಿತ್ರವಾದದ್ದು. ಕೈಜಾರಿ ಬಿದ್ದರೆ, ಮದುವೆ ಮನೆಗಳಲ್ಲಿ ಕೆಳಗೆ ಕಂಡರೆ ಎತ್ತಿ ಕಣ್ಣಿಗೊತ್ತಿ ಬದಿಗೆ ಇಡಬೇಕು. ಎಲ್ಲಾ ದೇವಾನು ದೇವತೆಗಳು ಇದ್ದು, ಬಲದಲ್ಲಿ ಬ್ರಹ್ಮ ,ಮಧ್ಯೆ ಸರಸ್ವತಿ ಎಡಕ್ಕೆ ಪಾರ್ವತಿ, ಕೊನೆಯಲ್ಲಿ ಗೌರಿ, ದಂಟಿನಲ್ಲಿ ವಿಷ್ಣು, ಹಿಂದೆ ಚಂದ್ರ, ಎಲ್ಲಾ ಮೂಲೆಯಲ್ಲೂ ಪರಮೇಶ್ವರ ಇದ್ದಾನೆ. ಮೃದು ಮಧ್ಯದಲ್ಲಿ ಮನ್ಮಥ ನಿದ್ದಾನೆ. ಹೀಗಾಗಿ ವಿದ್ಯಾರ್ಥಿಗಳು ವೀಳ್ಯೆದೆಲೆ ತಿನ್ನಬಾರದು ಮದುವೆ ಯಾದ ದಂಪತಿ ತಾಂಬೂಲ ಸೇವನೆ ಮಾಡಬೇಕು. ವೀಳ್ಯೆದೆಲೆ ತುದಿಯಲ್ಲಿ ಮೃತ್ಯುದೇವತೆ ಇರುತ್ತಾಳೆ. ಆದ್ದರಿಂದ ತುದಿಯನ್ನು ಕಿತ್ತು ಬಿಸಾಕುತ್ತಾರೆ. ಜೇಷ್ಠಾಲಕ್ಷ್ಮಿ, ಅಹಂಕಾರ ದೇವತೆ ಇರುವ ತೊಟ್ಟನ್ನು ಮುರಿದು ಹಾಕುತ್ತಾರೆ. ವೀಳ್ಳೆದೆಲೆ ಶುಭ ಸಮಾರಂಭ ಮದುವೆ, ಉಪನಯನ, ಹೋಮ ಹವನ ದಲ್ಲಿ ಬೇಕು. ನಿಶ್ಚಿತಾರ್ಥದಲ್ಲಿ ವೀಳ್ಯದೆಲೆ ಸಾಕ್ಷಿಯಾಗುತ್ತದೆ. ಅಂದರೆ ಮದುವೆ ಮಂಗಳ ಕಾರ್ಯಗಳನ್ನು ನಿಶ್ಚಯ ಮಾಡುವಾಗ, ವೀಳ್ಯದೆಲೆ ತೆಂಗಿನಕಾಯಿ ಮುಟ್ಟಿ ‌ ಒಪ್ಪಿಗೆ ಕೊಡುತ್ತಾರೆ. ವೀಳ್ಯದೆಲೆ ಗೌರವ ಸೂಚಕ. ಕೆಲವೆಡೆ ಮದು ಮಕ್ಕಳಿಗೆ ಉಡುಗೊರೆ ಕೊಟ್ಟವರಿಗೆ ಮರ್ಯಾದೆ ಎಂದು ಮಂಟಪದಲ್ಲೇ ವಿಳ್ಳೇದೆಲೆ ಅಡಿಕೆ ಇಟ್ಟ ತಟ್ಟೆಯನ್ನು ಮುಟ್ಟಿಸಿ ಕೈ ಮುಗಿದು ಊಟ ಮಾಡಿ ಹೋಗಿ ಎನ್ನುತ್ತಾರೆ. ಆಮೇಲೆ ಮರೆತು ಹೋಗಬಹುದು. ಬಂದವರು ಬೇಗ ಹೊರಡಬಹುದು. ಹೇಳಿ ಹೋಗಲು ಆಗದೇ ಇರಬಹು ದು, ಈ ಕಾರಣಗಳು. ಒಂಟಿ ಎಲೆ ಕೊಡಬಾರದು, ಎರಡು ಎಲೆ- ಎರಡು ಅಡಿಕೆ ಅಥವಾ ಎರಡು ಚೂರು ಅಡಿಕೆ ಹಾಕಿ ದಕ್ಷಿಣೆ ಅಥವಾ ಹಣ್ಣು, ಖರ್ಜೂರ, ಸಹಿತ ಕೊಡಬೇಕು. ಅಪ್ಪಿ ತಪ್ಪಿ ಯಾರಿಗಾದರೂ ಮೂರು ವಿಳ್ಳೇದೆಲೆ ಬಂದರೆ ಅವರಿಗೆ ಶುಭ ಶಕುನ. ಹಸ್ತ ದಾಕಾರ ಇರುವ ಎಲೆ ಒಳ್ಳೆಯದು. ವೀಳ್ಯದೆಲೆಯನ್ನು ಮನೆ ಔಷಧಿ ಯಾಗಿ ಬಳಸುತ್ತಾರೆ. ಕಫ ಕರಗಲು, ವಿಳ್ಳೆದೆಲೆ ಶುಂಠಿ ರಸಕ್ಕೆ ಜೇನುತುಪ್ಪ ಬೆರೆಸಿ ಕೊಡುತ್ತಾರೆ. ಗಂಟಲು ನೋವಿಗೆ, ಅಜೀರ್ಣಕ್ಕೆ ಮೆಣಸಿನ ಕಾಳು, ಉಪ್ಪು ಹಾಕಿ ಸುತ್ತಿ ಕೊಡುತ್ತಾರೆ. ಮಕ್ಕಳಿಗೆ ಹೊಟ್ಟೆ ಉಬ್ಬರಿಸಿ ಗಟ್ಟಿಯಾದಾಗ, ವಿಳ್ಳೆದೆಲೆಗೆ ಹರಳೆಣ್ಣೆ ಸವರಿ ಹಣತೆ ದೀಪಕ್ಕೆ ಹಿಡಿದು ಸ್ವಲ್ಪ ಬಿಸಿ ಮಾಡಿ, ಹೊಟ್ಟೆಯ ಮೇಲೆ ತೆಳುಮಲ್ ಬಟ್ಟೆ ಹಾಕಿ ಮೇಲೆ ಹೌದು ಅಲ್ಲೋ ಅನ್ನುವಷ್ಟು ಬಿಸಿ ಮಾಡಿದ ವೀಳ್ಯದೆಲೆ ಹಗುರವಾಗಿ ಒತ್ತುತ್ತಾರೆ. ಚಿಗುರು ವಿಳ್ಳೆದೆಲೆಯಲ್ಲಿ ತಂಬುಳಿ ಚಟ್ನಿ ಮಾಡ ಬಹುದು. ವೀಳ್ಯೆದೆಲೆ ಬಳ್ಳಿಯನ್ನು ತುಳಸಿ ಗಿಡದಂತೆ ಕಾಪಾಡಬೇಕು. ಮುಟ್ಟಾದವರು ಹತ್ತಿರ ಹೋಗಬಾರದು. ವೀಳ್ಯದೆಲೆ ಕೊಯ್ಯುವ ಮೊದಲು ಗಿಡಕ್ಕೆ ಒಂದು ತಂಬಿಗೆ ನೀರು ಹಾಕಿ ಎಲೆ ಕೊಯ್ಯ ಬೇಕು. ಸಂಜೆಯ ಹೊತ್ತು ಕೀಳ ಬಾರದು ಮಂಗಳ- ಶುಕ್ರವಾರ, ಬೇರೆ ದಿನಗಳಲ್ಲಿ 12 ಗಂಟೆಯ ನಂತರ ಎಲೆ ಕೀಳುವುದು ಗಿಡ ಕತ್ತರಿಸಬಾರದು. ಹೊರಗೆ ಹಾಕಬಾರದು. ತಾಂಬೂಲ ಅಂದರೆ ವಿಳ್ಯದೆಲೆ ಅಡಿಕೆ ಇದರ ಜೊತೆಗೆ ಕಾಯಿ ಹಣ್ಣು ದಕ್ಷಿಣೆ ಉಡುಗೊರೆ ಇಟ್ಟು ಕೊಡುವುದು ಗೌರವದ ಸಂಕೇತವಾಗಿದೆ. ಅಕ್ಷರಂ ವಿಪ್ರಹಸ್ತೇನ, ಮಾತೃ ಹಸ್ತೇನ ಭೋಜನಂ! ಬಾರ್ಯಾ ಹಸ್ತೇನ ತಾಂಬೂಲಂ, ರಾಜಹಸ್ತೇನ ಕಂಕಣಂ!! ವಿದ್ಯೆಯನ್ನು ವಿಪ್ರನಿಂದ, ಆಹಾರವನ್ನು ತಾಯಿಯ ಕೈಯಿಂದ, ತಾಂಬೂಲದ ಎಲೆಯನ್ನು ಪತ್ನಿಯ ಕೈಯಿಂದ ಮತ್ತು ರಾಜನಿಂದ ಮನ್ನಣೆಯನ್ನು ಪಡೆಯಬೇಕು. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ
ದಿನಕ್ಕೊಂದು ಕಥೆ - (logablushanas Ctsha (logablushanas Ctsha - ShareChat