`ನಾವು ಕಷ್ಟಕಾಲದಲ್ಲಿ ಕೈಕೊಡುವವರಲ್ಲ': ಸ್ಟಾಲಿನ್, ಮಮತಾ ಫೋಟೋ ಹಾಕಿ ಕಾಂಗ್ರೆಸ್ ಗೆ ಟಾಂಗ್ ನೀಡಿದ ಅಖಿಲೇಶ್ ಯಾದವ್
Akhilesh Yadav On Congress- ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಸೋಲುತ್ತಿದ್ದಂತೆ ಕಾಂಗ್ರೆಸ್ ತನ್ನ ನಿಲುವು ಬದಲಿಸಿ, ನಟ ವಿಜಯ್ ಅವರ ಟಿವಿ ಕೆ (TVK) ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಇಂಡಿ ಒಕ್ಕೂಟದಲ್ಲಿ ಬಿರುಕು ಮೂಡಿಸಿದೆ. ಕಾಂಗ್ರೆಸ್ನ ಈ ನಡೆಯನ್ನು ಡಿಎಂಕೆ 'ಬೆನ್ನಿಗೆ ಚೂರಿ ಹಾಕಿದ ಕೆಲಸ' ಎಂದು ಟೀಕಿಸಿದೆ. ಇದೇ ವೇಳೆ ಅಖಿಲೇಶ್ ಯಾದವ್ ಅವರು ಮಮತಾ ಮತ್ತು ಸ್ಟಾಲಿನ್ ಜೊತೆಗಿನ ಫೋಟೋ ಹಂಚಿಕೊಂಡು, "ಕಷ್ಟದಲ್ಲಿ ಕೈಬಿಡುವವ ನಾನಲ್ಲ" ಎಂದು ಹೇಳುವ ಮೂಲಕ ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ. ಸದ್ಯ ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ವಿಜಯ್ ಸರ್ಕಾರ ರಚಿಸಲು ಸಜ್ಜಾಗಿದ್ದಾರೆ.