"ಉಂಡಡೆ ಭೂತವೆಂಬರು, "ಉಣ್ಣದಿರ್ದಡೆ ಚಕೋರಿಯೆಂಬರು, "ಊರೊಳಗಿರ್ದಡೆ ಸಂಸಾರಿಕನೆಂಬರು, "ಅಡವಿಯೊಳಗಿರ್ದಡೆ ಮರ್ಕಟನೆಂಬರು. "ಮಾತನಾಡಿದಡೆ ಪಾಪಕರ್ಮಿಯೆಂಬರು, "ಮಾತನಾಡದಿರ್ದಡೆ ಮುಸುಕರ್ಮಿಯೆಂಬರು. "ಮಲಗದಿರ್ದಡೆ ಚೋರನೆಂಬರು, "ಮಲಗಿರ್ದಡೆ ಜಡದೇಹಿಯೆಂಬರು. "ಇಂತೀ ವಸುಧೆಯೊಳಗೆ ಎಂಟುವಿಧ ಕಳೆಯಲು ವಶವಲ್ಲ ಕಾಣಾ ಕಲಿದೇವರದೇವ..! ✍🏻ಶರಣ ಮಡಿವಾಳ ಮಾಚಿದೇವರ ವಚನ.. ಶರಣು ಶರಣಾರ್ಥಿಗಳು 🙏 #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು


