#📜ಪ್ರಚಲಿತ ವಿದ್ಯಮಾನ📜
ಅತಿಥಿ ಉಪನ್ಯಾಸಕರ ಹಿತಾಸಕ್ತಿ ಕಾಪಾಡುವ “ಶೈಕ್ಷಣಿಕ ಸಂಯೋಜಕ” ವಿಶೇಷ ಯೋಜನೆ: ಎಂ ಸಿ ಸುಧಾಕರ್
ಬೆಂಗಳೂರು: ರಾಜ್ಯ ಸರ್ಕಾರ ಉನ್ನತ ನ್ಯಾಯಾಲಯದ ನಿರ್ದೇಶನದ ಅನ್ವಯ, ಅತಿಥಿ ಉಪನ್ಯಾಸಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ “ಶೈಕ್ಷಣಿಕ ಸಂಯೋಜಕ” ಎಂಬ ವಿಶೇಷ ಯೋಜನೆಯನ್ನು 2026-27ನೇ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಲು ತೀರ್ಮಾನಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಹೇಳಿದ್ದಾರೆ.
ಈ ಯೋಜನೆಯಡಿ, ಕನಿಷ್ಠ 5 ವರ್ಷ ಸೇವಾ ಅನುಭವ ಹೊಂದಿರುವ ಹಾಗೂ UGC ಅರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ಶೈಕ್ಷಣಿಕ ಸಂಯೋಜಕರಾಗಿ ನೇಮಿಸಲಾಗುವುದು. ಇದರಿಂದ ಸುಮಾರು 3853 ಉಪನ್ಯಾಸಕರಿಗೆ ಪ್ರಯೋಜನವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೈಕ್ಷಣಿಕ ಸಂಯೋಜಕರು ಕಾಲೇಜುಗಳಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಐಟಿ, ಪರೀಕ್ಷಾ ಕಾರ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ ಎಂದಿದ್ದಾರೆ.
ಈ ಯೋಜನೆ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವುದರ ಜೊತೆಗೆ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದಿದ್ದಾರೆ.
#Academic #Coordinator #SpecialScheme #Protect #Interest #GuestLecturers #MCSudhakar #malgudiexpress #malgudinews #news #TopNews


