ShareChat
click to see wallet page
search
ಪಶ್ಚಿಮ ಬಂಗಾಳದ ಸಚಿವ ನಿಸಿತ್ ಪ್ರಮಾಣಿಕ್ ಅವರು ಕೋಲ್ಕತಾ ಸಾಲ್ಟ್ ಲೇಕ್ ಕ್ರೀಡಾಂಗಣದ ಹೊರಗಿರುವ ಈ ವಿವಾದಿತ ಪ್ರತಿಮೆಯನ್ನು ತೆರವುಗೊಳಿಸಲಾಗುವುದು ಎಂದು ಪ್ರಕಟಿಸಿರುವುದು ಯಾಕೆ? ಮಮತಾ ಬ್ಯಾನರ್ಜಿಗೂ ಇದಕ್ಕೂ ಏನು ಸಂಬಂಧ? #WB Football Politics
WB Football Politics - ShareChat
ಕೋಲ್ಕತಾದಲ್ಲಿ `ಫುಟ್ಬಾಲ್' ಪಾಲಿಟಿಕ್ಸ್!: ಮಮತಾ ಬ್ಯಾನರ್ಜಿ ವಿನ್ಯಾಸಗೊಳಿಸಿದ್ದ ಪ್ರತಿಮೆ ಕಿತ್ತೊಗೆಯಲು ಬಿಜೆಪಿ ಸರ್ಕಾರ ನಿರ್ಧಾರಿಸಿರುವುದೇಕೆ?
ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದ ಮುಂಭಾಗದಲ್ಲಿದ್ದ, ಮಾಜಿ ಸಿಎಂ ಮಮತಾ ಬ್ಯಾನರ್ಜಿ ವಿನ್ಯಾಸಗೊಳಿಸಿದ್ದ ವಿವಾದಿತ ಫುಟ್‌ಬಾಲ್ ಪ್ರತಿಮೆಯನ್ನು ತೆರವುಗೊಳಿಸಲು ಪಶ್ಚಿಮ ಬಂಗಾಳದ ನೂತನ ಸರ್ಕಾರ ನಿರ್ಧರಿಸಿದೆ. ಐಎಸ್‌ಎಲ್ ಡರ್ಬಿ ಪಂದ್ಯದ ಬಳಿಕ ಕ್ರೀಡಾ ಸಚಿವ ನಿಸಿತ್ ಪ್ರಮಾಣಿಕ್ ಈ ಪ್ರಕಟಣೆ ಹೊರಡಿಸಿದ್ದು, 2017ರಲ್ಲಿ ಸ್ಥಾಪಿಸಲಾಗಿದ್ದ ಈ ರಚನೆಯನ್ನು "ಅರ್ಥಹೀನ ಮತ್ತು ವಿಕೃತ" ಎಂದು ಟೀಕಿಸಿದ್ದಾರೆ. ಈ ಕುರೂಪಿ ಪ್ರತಿಮೆಯ ಬದಲಾಗಿ ಭಾರತದ ಐಕಾನಿಕ್ ಫುಟ್‌ಬಾಲ್ ಆಟಗಾರರ ಸ್ಮರಣಾರ್ಥ ಪ್ರತಿಮೆಗಳನ್ನು ಸ್ಥಾಪಿಸಬೇಕೆಂಬ ಸರ್ಕಾರದ ನಿರ್ಧಾರವನ್ನು ಕ್ರೀಡಾಭಿಮಾನಿಗಳು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.