ವರ್ಷದ ಬೇರೆ ತಿಂಗಳಿಗೆ 30, 31 ದಿನ: ಆದರೆ ಫೆಬ್ರವರಿಗೆ ಮಾತ್ರ ಯಾಕೆ ಈ ಶಾಪ? 2 ದಿನ ಕದ್ದಿದ್ದು ಯಾರು?
ಫೆಬ್ರವರಿ (February) ತಿಂಗಳು ಕೇವಲ 28 ದಿನಗಳನ್ನು ಮಾತ್ರ ಹೊಂದಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಿನಲ್ಲಿ 29 ದಿನಗಳು ಇರುತ್ತವೆ.
ಇದನ್ನು ಅಧಿಕ ವರ್ಷ (Leap Year) ಎಂದು ಕರೆಯಲಾಗುತ್ತದೆ.
ಆದರೆ ಕ್ಯಾಲೆಂಡರ್ ನಲ್ಲಿ 12 ತಿಂಗಳುಗಳಿದ್ದು, ಕೇವಲ ಫೆಬ್ರವರಿಯಲ್ಲೇ ಮಾತ್ರ ಈ 28, 29 ದಿನಗಳು ಮಾತ್ರ ಯಾಕಿರುತ್ತೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿರುತ್ತದೆ. ಹಾಗಿದ್ರೆ ಬನ್ನಿ, ಈ 28 ದಿನಗಳ ಹಿಂದಿನ ರಹಸ್ಯವೇನು ಎಂದು ತಿಳಿಯೋಣ ಬನ್ನಿ.!
ಇತಿಹಾಸ ಹೀಗೆ ಹೇಳುತ್ತೆ.!
ಇಂದು, ನಾವು ಜೂಲಿಯಸ್ ಸೀಸರ್ ಮತ್ತು ಪೋಪ್ ಗ್ರೆಗೊರಿ XIIIರ ಸುಧಾರಣೆಗಳಿಂದ ಬಂದ ಗ್ರೆಗೋರಿಯನ್ ಕ್ಯಾಲೆಂಡರ್ ಅನ್ನು ಬಳಸುತ್ತೇವೆ, ಆದರೆ ಫೆಬ್ರವರಿ ತಿಂಗಳ ಉದ್ದವನ್ನು ರೋಮನ್ ಚಕ್ರವರ್ತಿ ನುಮಾ ಪೊಂಪಿಲಿಯಸ್ (ಕ್ರಿ.ಪೂ. 715-673) ಆಳ್ವಿಕೆಯಲ್ಲಿ ನಿರ್ಧರಿಸಲಾಯಿತು. ಹಳೆಯ ರೋಮನ್ ಕ್ಯಾಲೆಂಡರ್ ಕೇವಲ 10 ತಿಂಗಳುಗಳನ್ನು ಹೊಂದಿತ್ತು - ಮಾರ್ಚ್ ನಿಂದ ಡಿಸೆಂಬರ್ ವರೆಗೆ, ಒಟ್ಟು 304 ದಿನಗಳಿತ್ತು.
ಚಳಿಗಾಲವನ್ನು ತಿಂಗಳಿಲ್ಲ ಎಂದು ಪರಿಗಣಿಸಲಾಗಿತ್ತು. ಚಂದ್ರ ವರ್ಷಕ್ಕೆ (ಸುಮಾರು 355 ದಿನಗಳು) ಹೊಂದಿಸಲು ನುಮಾ ಜನವರಿ ಮತ್ತು ಫೆಬ್ರವರಿಯನ್ನು ಕ್ಯಾಲೆಂಡರ್ಗೆ ಸೇರಿಸಿದರು. ರೋಮನ್ ಮೂಢನಂಬಿಕೆಯಲ್ಲಿ, ಸಮ ಸಂಖ್ಯೆಗಳನ್ನು ದುರದೃಷ್ಟಕರವೆಂದು ಪರಿಗಣಿಸಲಾಗಿತ್ತು.
ರೋಮನ್ ಚಕ್ರವರ್ತಿ ನುಮಾ ಎಲ್ಲಾ ತಿಂಗಳುಗಳು ಬೆಸ ದಿನಗಳನ್ನು ಹೊಂದಿರಬೇಕೆಂದು ಬಯಸಿದ್ದರು, ಆದ್ದರಿಂದ ವರ್ಷವು ಒಟ್ಟಾರೆಯಾಗಿ ಬೆಸವಾಗಿರುತ್ತದೆ. ಆದರೆ 12 ತಿಂಗಳುಗಳಲ್ಲಿ ಎಲ್ಲಾ ಬೆಸ ದಿನಗಳು ಇದ್ದರೆ ಒಟ್ಟು ದಿನಗಳ ಸಂಖ್ಯೆ ಒಂದೇ ಆಗಿರುತ್ತದೆ (ಏಕೆಂದರೆ 12 ಸಮ ಸಂಖ್ಯೆ ಮತ್ತು ಬೆಸ ಸಂಖ್ಯೆಗಳ ಮೊತ್ತವು ಸಮವಾಗಿರುತ್ತದೆ). ಆದ್ದರಿಂದ, ಕನಿಷ್ಠ ಒಂದು ತಿಂಗಳು ಸಮ ದಿನಗಳನ್ನು ಹೊಂದಿರಬೇಕಾಗಿತ್ತು. ನುಮಾ ಫೆಬ್ರವರಿಯನ್ನು ಆಯ್ಕೆ ಮಾಡಿಕೊಂಡರು ಏಕೆಂದರೆ ಅದು ಸಾವು ಮತ್ತು ಶುದ್ಧೀಕರಣ ಆಚರಣೆಗಳೊಂದಿಗೆ (ಫೆಬ್ರವರಿ) ಸಂಬಂಧಿಸಿದೆ.
ಮೂಢನಂಬಿಕೆಯೋ ಅಥವಾ ತರ್ಕವೋ.?
ಫೆಬ್ರವರಿಯನ್ನು ರೋಮನ್ನರು ದುರದೃಷ್ಟಕರವೆಂದು ಪರಿಗಣಿಸಿ 28 ದಿನಗಳೊಂದಿಗೆ ಇಟ್ಟುಕೊಂಡರು. ಫೆಬ್ರವರಿಯನ್ನು ಫೆಬ್ರುರಿಯಸ್ ಎಂದು ಕರೆಯಲಾಗುತ್ತಿತ್ತು, ಈ ತಿಂಗಳು ಸತ್ತವರ ಪೂಜೆ ಮತ್ತು ಶುದ್ಧೀಕರಣಕ್ಕೆ ಮೀಸಲಾಗಿತ್ತು, ಆದ್ದರಿಂದ ದುರದೃಷ್ಟಕರ ಸಂಖ್ಯೆ ಸೂಕ್ತವೆಂದು ತೋರುತ್ತದೆ.
ಜೂಲಿಯಸ್ ಸೀಸರ್ ಕ್ರಿ.ಪೂ 46ರಲ್ಲಿ ಕ್ಯಾಲೆಂಡರ್ ಅನ್ನು ಸುಧಾರಿಸಿದರು. ಅವರು ಸೌರ ವರ್ಷವನ್ನು (365.25 ದಿನಗಳು) ಆಧರಿಸಿ ಜೂಲಿಯನ್ ಕ್ಯಾಲೆಂಡರ್ ಅನ್ನು ರಚಿಸಿದರು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ, ಅಧಿಕ ವರ್ಷಗಳಲ್ಲಿ, 6-ಗಂಟೆಗಳ ವ್ಯತ್ಯಾಸವನ್ನು ಸರಿದೂಗಿಸಲು ಫೆಬ್ರವರಿಯನ್ನು 29 ದಿನಗಳಿಂದ ವಿಸ್ತರಿಸಲಾಯಿತು.
ಆದರೆ, ಧಾರ್ಮಿಕ ಸಮಾರಂಭಗಳನ್ನು ಅಡ್ಡಿಪಡಿಸುವುದನ್ನು ತಪ್ಪಿಸಲು ಫೆಬ್ರವರಿ 28 ದಿನಗಳಲ್ಲಿಯೇ ಉಳಿಯಿತು. ನಂತರ, ಆಗಸ್ಟಸ್ ಫೆಬ್ರವರಿಯಿಂದ ಒಂದು ದಿನವನ್ನು ಕಳೆಯಲು ತನ್ನ ತಿಂಗಳಿಗೆ ಆಗಸ್ಟ್ 31 ದಿನಗಳನ್ನು ನೀಡಿದರು. ಗ್ರೆಗೋರಿಯನ್ ಕ್ಯಾಲೆಂಡರ್ (1582) ಸಹ ಈ ಮಾದರಿಯನ್ನು ಉಳಿಸಿಕೊಂಡಿದೆ.
ವೈಜ್ಞಾನಿಕ ಕಾರಣವೂ ಇದೆ.!
ಭೂಮಿಯು ಸೂರ್ಯನನ್ನು ಸುತ್ತಲು 365 ದಿನಗಳು, 5 ಗಂಟೆಗಳು, 48 ನಿಮಿಷಗಳು ಮತ್ತು 46 ಸೆಕೆಂಡುಗಳು ತೆಗೆದುಕೊಳ್ಳುತ್ತದೆ. ಜೂಲಿಯನ್ನಲ್ಲಿ, ಪ್ರತಿ 4 ವರ್ಷಗಳಿಗೊಮ್ಮೆ 1 ದಿನವನ್ನು ಸೇರಿಸಲಾಗುತ್ತಿತ್ತು, ಗ್ರೆಗೋರಿಯನ್ನಲ್ಲಿ, ಶತಮಾನದ ವರ್ಷಗಳು (1900 ರಂತೆ) ಅಧಿಕ ವರ್ಷಗಳಲ್ಲ, 400ರಿಂದ ಭಾಗಿಸಬಹುದಾದ ವರ್ಷಗಳನ್ನು ಹೊರತುಪಡಿಸಿ (2000 ದಂತೆ). ಆದರೆ ಫೆಬ್ರವರಿ ಚಿಕ್ಕದಾಗಿಯೇ ಉಳಿಯಿತು.
#VIRALINFO #INTERESTINGFACT #FEBRUARYMONTH #LEAPYEAR #GREGORIANCALENDAR
ದಿನನಿತ್ಯ ಓಡಾಡುವ ಬಸ್ ಬಗ್ಗೆ ನಿಮಗೆಷ್ಟು ಗೊತ್ತು.?
ಸಾಮಾನ್ಯ ಜನರಿಂದ ಶ್ರೀಮಂತರವರೆಗೆ, ಹಳ್ಳಿಯಿಂದ ನಗರವರೆಗೆ ಪ್ರತಿದಿನ ಲಕ್ಷಾಂತರ ಜನರನ್ನು ಗಮ್ಯಸ್ಥಾನಕ್ಕೆ ತಲುಪಿಸುವ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿ ಬಸ್ ಕಾರ್ಯನಿರ್ವಹಿಸುತ್ತಿದೆ. ದಿನನಿತ್ಯದ ಬದುಕಿನ ಅವಿಭಾಜ್ಯ ಭಾಗವಾಗಿರುವ ಬಸ್ಗಳ ಬಗ್ಗೆ ಸಾಕಷ್ಟು ಜನರಿಗೆ ತಿಳಿಯದ ಹಲವು ಆಸಕ್ತಿದಾಯಕ ವಿಚಾರಗಳು ಇವೆ.
ಬಸ್ ಎಂಬ ಹೆಸರಿನ ಮೂಲವೇನು.? ಇದಕ್ಕೆ ಯಾವುದೇ ಪೂರ್ಣ ರೂಪವಿದೆಯೇ.? ಹಿಂದೆ ಬಸ್ಗಳನ್ನು ಕುದುರೆಗಳು ಎಳೆಯುತ್ತಿದ್ದವು ಎಂಬ ಮಾಹಿತಿ ನಿಮಗೆ ಗೊತ್ತೇ.? ಮೊದಲ ಬಸ್ ಸೇವೆಯನ್ನು ಯಾರು ಆರಂಭಿಸಿದರು ಎಂಬ ಪ್ರಶ್ನೆಗೆ ಇತಿಹಾಸದಲ್ಲೇ ಉತ್ತರ ಸಿಗುತ್ತದೆ.
ನಾವು ಸಾಮಾನ್ಯವಾಗಿ ಬಳಸುವ BUS ಎಂಬ ಪದ ಲ್ಯಾಟಿನ್ ಭಾಷೆಯ 'ಓಮ್ನಿಬಸ್' ಎಂಬ ಪದದಿಂದ ಉತ್ಪನ್ನವಾಗಿದೆ. ಓಮ್ನಿಬಸ್ ಎಂದರೆ ಎಲ್ಲರಿಗೂ ಎಂಬ ಅರ್ಥ. ಎಲ್ಲರೂ ಒಟ್ಟಾಗಿ ಪ್ರಯಾಣಿಸಬಹುದಾದ ವಾಹನ ಎಂಬ ಅರ್ಥದಲ್ಲಿ, ಈ ಪದ ಬಳಕೆಗೆ ಬಂದಿದ್ದು, ಕಾಲಕ್ರಮೇಣ ಸಂಕ್ಷಿಪ್ತವಾಗಿ ಬಸ್ ಎಂದು ಕರೆಯಲು ಆರಂಭಿಸಲಾಯಿತು. ತಾಂತ್ರಿಕವಾಗಿ ಬಸ್ ಅನ್ನು ವಾಣಿಜ್ಯ ಸಾರಿಗೆ ವಾಹನ ಎಂದು ಕರೆಯಲಾಗುತ್ತದೆ. ಆದರೆ ಇತಿಹಾಸದ ದೃಷ್ಟಿಯಲ್ಲಿ ಇದರ ನಿಜವಾದ ಹೆಸರು ಓಮ್ನಿಬಸ್ ಆಗಿದೆ.
ಬಸ್ ಸಾರಿಗೆಯ ಇತಿಹಾಸ ಸುಮಾರು 360 ವರ್ಷಗಳ ಹಿಂದಕ್ಕೆ ಹೋಗುತ್ತದೆ. 1662ರಲ್ಲಿ ಫ್ರಾನ್ಸ್ನ ಗಣಿತಜ್ಞ ಬ್ಲೇಸ್ ಪ್ಯಾಸ್ಕಲ್ ಪ್ಯಾರಿಸ್ ನಗರದಲ್ಲಿ ಕುದುರೆ ಎಳೆಯುವ ಗಾಡಿಗಳ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಿದರು. ಇದನ್ನೇ ವಿಶ್ವದ ಮೊದಲ ಬಸ್ ಸೇವೆ ಎಂದು ಪರಿಗಣಿಸಲಾಗುತ್ತದೆ.
ನಂತರ 1895ರಲ್ಲಿ ಜರ್ಮನಿಯ ಎಂಜಿನಿಯರ್ ಕಾರ್ಲ್ ಬೆಂಜ್ ಇಂಜಿನ್ ಚಾಲಿತ ಬಸ್ ಅನ್ನು ವಿನ್ಯಾಸಗೊಳಿಸಿದರು. ಇದರಿಂದ ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಉಂಟಾಯಿತು.
ಕಾಲಕ್ರಮೇಣ ಬಸ್ ವ್ಯವಸ್ಥೆ ಹಲವು ಹಂತಗಳಲ್ಲಿ ಅಭಿವೃದ್ಧಿಯಾಯಿತು. 1820ರ ವೇಳೆಗೆ ಉಗಿ ಎಂಜಿನ್ಗಳಿಂದ ಚಾಲಿತ ಬಸ್ಗಳು ಬಳಕೆಗೆ ಬಂದವು. 1920ರ ದಶಕದಲ್ಲಿ ಬ್ರಿಟಿಷ್ ಆಡಳಿತದ ಕಾಲದಲ್ಲಿ ಭಾರತದಲ್ಲಿ ಬಸ್ ಪ್ರಯಾಣ ಜನಪ್ರಿಯವಾಗತೊಡಗಿತು.
ಇಂದಿನ ದಿನಗಳಲ್ಲಿ ಡೀಸೆಲ್ ಹಾಗೂ ಗ್ಯಾಸ್ ನಲ್ಲಿ ಸಂಚರಿಸುತ್ತಿದ್ದ ಬಸ್ಗಳು ಪರಿಸರ ಸ್ನೇಹಿ ವಿದ್ಯುತ್ ಬಸ್ಗಳು, ಸ್ಮಾರ್ಟ್ ಬಸ್ಗಳು ಹಾಗೂ ಎಸಿ ಬಸ್ಗಳಾಗಿ ರೂಪಾಂತರಗೊಂಡಿವೆ. ಒಂದು ಕಾಲದಲ್ಲಿ ಕೇವಲ ಕುದುರೆ ಎಳೆಯುವ ಗಾಡಿಯಾಗಿ ಆರಂಭವಾದ ಓಮ್ನಿಬಸ್, ಇಂದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಪ್ರಮುಖ ಅಂಗವಾಗಿ ಬೆಳೆದಿದೆ.
#LATEST #VIRALINFO #BUS #PUBLICTRANSPORT #TECHNOLOGY
ಭಾರತದಲ್ಲಿ ಉತ್ತಮ ಹೆಲ್ತ್ ಇನ್ಶುರೆನ್ಸ್ ಯೋಜನೆಗಳು ಯಾವುವು.?
ಆರೋಗ್ಯ ವಿಮೆ, ಅಂದರೆ ಹೆಲ್ತ್ ಇನ್ಶುರೆನ್ಸ್ ಎನ್ನುವುದು ಆಪತ್ಬಾಂಧವ ಇದ್ದಂತೆ. ಆಪತ್ತು ಯಾವಾಗ ಬರುತ್ತೆ ಅಂತ ಹೇಳೋಕಾಗಲ್ಲ. ಆದ್ರೆ ಆರೋಗ್ಯ ವಿಮೆ ಈಗಿಂದಲೇ ಇದ್ದರೆ, ಆಪತ್ತನ್ನ ಸುಧಾರಿಸಬಹುದು ಅಂತ ಮಾತ್ರ ಹೇಳಬೋದು. ಆರ್ಥಿಕ ಸುರಕ್ಷತೆಗೆ ಆರೋಗ್ಯ ವಿಮೆ ಅನ್ನೋದು ಬಹಳ ಮುಖ್ಯ.
ಆಕಸ್ಮಿಕ ವೈದ್ಯಕೀಯ ತುರ್ತು ಪರಿಸ್ಥಿತಿಗಳು ಯಾವಾಗ ಬೇಕಾದರೂ ಸಂಭವಿಸಬಹುದು.
ಆಗ ವೈದ್ಯಕೀಯ ವೆಚ್ಚಗಳು ದೊಡ್ಡ ಆರ್ಥಿಕ ಹೊರೆಯನ್ನು ತರುತ್ತವೆ. ಹೀಗಾಗಿ ಆರೋಗ್ಯ
ವಿಮೆ ಇರಲೇಬೇಕು. ಹಾಗಾದರೆ ಯಾವ ರೀತಿಯ ಆರೋಗ್ಯ ವಿಮೆ ಬೆಸ್ಟ್ ಎಂದು ಇಲ್ಲಿ ತಿಳಿಯಿರಿ.
ಫ್ಯಾಮಿಲಿ ಪ್ಲೋಟರ್ ಯೋಜನೆ:
ಈ ಯೋಜನೆಯು ಒಂದು ಕುಟುಂಬಕ್ಕಾಗಿ ಮಾಡಿರುವಂತಹ ಯೋಜನೆ. ಇದರಡಿ ಕುಟುಂಬದ ಎಲ್ಲಾ ಸದಸ್ಯರಿಗೆ ಆರ್ಥಿಕ ರಕ್ಷಣೆ ಒದಗುತ್ತದೆ. ಈ ಯೋಜನೆಯ ಅಡಿ ಸಾಮಾನ್ಯವಾಗಿ ತಂದೆ-ತಾಯಿ ಹಾಗೂ ಅವಲಂಬಿತ ಮಕ್ಕಳು ಒಳಗೊಂಡಿರುತ್ತಾರೆ. ಇದು ವೈಯಕ್ತಿಕ ಯೋಜನೆಗಳಿಗಿಂತ, ವೆಚ್ಚದ ದೃಷ್ಟಿಯಲ್ಲಿ ಬಹಳ ಸಮರ್ಥವಾಗಿದೆ. ಈ ಯೋಜನೆಯನ್ನು ಆಯ್ಕೆ ಮಾಡಲು,
ಕನಿಷ್ಠ ₹15-25 ಲಕ್ಷ ವಿಮಾ ಮೊತ್ತವನ್ನು ಹೊಂದಿರುವ ಯೋಜನೆಯನ್ನು ಆರಿಸಬೇಕು
ಮತ್ತು ಮೂಲ ವಿಮಾ ಮೊತ್ತದ ಬಳಕೆಯಾದರೆ ಅದನ್ನು ಮರುಸ್ಥಾಪಿಸಲು ಸಾಧ್ಯವಾಗುವಂತೆ ಯೋಜನೆಯನ್ನು ಆಯ್ಕೆ ಮಾಡಬೇಕು.
ಗಂಭೀರ ಅನಾರೋಗ್ಯ ವಿಮೆ:
ಇನ್ನು ಗಂಭೀರ ಅನಾರೋಗ್ಯ ವಿಮೆಯು ಆಸ್ಪತ್ರೆಯ ವೆಚ್ಚಗಳನ್ನು ಭರಿಸುವ ಒಂದು ಯೋಜನೆಯಾಗಿದೆ. ಆದರೆ ಕೆಲವು ದೊಡ್ಡ ಕಾಯಿಲೆಗಳಿಗೆ ಇದು ವೆಚ್ಚವನ್ನು ಭರಿಸುವುದಿಲ್ಲ. ಕ್ಯಾನ್ಸರ್, ಹೃದಯಾಘಾತ ಅಥವಾ ಇನ್ನಿತರೆ ಪ್ರಮುಖ ಕಾಯಿಲೆಗಳಿಗೆ ಸಂಬಂಧಿಸಿದ ಹೆಚ್ಚಿನ ವೆಚ್ಚಗಳನ್ನು ಅದು ನೀಡುವುದಿಲ್ಲ. ಹೀಗಾಗಿ ಇದನ್ನು ನೋಡಿ ಮಾಡಿ ಆರಿಸಬೇಕು. ಇದೊಂದು ತೆರಿಗೆ ಮುಕ್ತವಾದ ವಿಮೆ ಆಯ್ಕೆಯಾಗಿರುವುದರಿಂದ, ಚಿಕಿತ್ಸೆ ಅಥವಾ ದೈನಂದಿನ ವೆಚ್ಚಗಳಿಗೆ ಬಳಸಬಹುದು. ಆದರೆ ಇಂದು ಬಾರಿ ಹಣ ನೀಡುತ್ತದೆ.
ಹಿರಿಯ ನಾಗರಿಕರಿಗಾಗಿ ಆರೋಗ್ಯ ವಿಮೆ:
ಇನ್ನು ವಯಸ್ಸಾದ ಮೇಲೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು. ಹಾಗೆಯೇ ಅನಾಹುತಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ವಯಸ್ಸಾದವರ ಫ್ಲೋಟರ್ ಯೋಜನೆಯಲ್ಲಿ ಸೇರಿಸುವುದು, ವೆಚ್ಚದ ದೃಷ್ಟಿಯಿಂದ ಅತಿರೇಕ ಆಗಬಹುದು. ಅವರ ಕ್ಲೈಮ್ಗಳು ಹೆಚ್ಚಿನದಾಗಬಹುದು. ಇದರ ಪರಿಣಾಮದಿಂದ ಕುಟುಂಬ ಸದಸ್ಯರಿಗೆ ಲಭ್ಯವಿರುವ ಮೊತ್ತ ಕೂಡ ಕಡಿಮೆಯಾಗಬಹುದು. ಹೀಗಾಗಿ ಫ್ಯಾಮಿಲಿ ಫ್ಲೋಟರ್ ಯೋಜನೆಯಲ್ಲಿ ಸೇರಿಸುವುದಕ್ಕಿಂತ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ವಿಮೆ ಖರೀದಿಸಿದರೆ ಉತ್ತಮ. ಇದರಿಂದ ತಮ್ಮ ವಿಶೇಷ ಅಗತ್ಯಗಳಿಗೆ ಸಹಾಯ ಮಾಡುತ್ತದೆ ಮತ್ತು ಫ್ಲೋಟರ್ ಯೋಜನೆಯ ಸಮಗ್ರತೆಯನ್ನು ರಕ್ಷಿಸುತ್ತದೆ.
ಭಾರತೀಯ ಕುಟುಂಬಗಳು ತಮ್ಮ ಆರೋಗ್ಯ ಮತ್ತು ಆರ್ಥಿಕ ಭದ್ರತೆಗೆ ಉತ್ತಮ ಮಾರ್ಗವೆಂದರೆ ಫ್ಯಾಮಿಲಿ ಫ್ಲೋಟರ್, ಗಂಭೀರ ಅನಾರೋಗ್ಯ ವಿಮೆ, ಹಿರಿಯ ನಾಗರಿಕರ ಪ್ರತ್ಯೇಕ ಯೋಜನೆಗಳು ಮತ್ತು ಟಾಪ್-ಅಪ್ ಪಾಲಿಸಿಗಳನ್ನು ಒಳಗೊಂಡ ಸಮಗ್ರ ಪೋರ್ಟ್ಫೋಲಿಯೊ ನಿರ್ಮಿಸುವುದು. ಈ ರೀತಿಯ ಯೋಜನೆ ಕುಟುಂಬದ ಎಲ್ಲಾ ಸದಸ್ಯರಿಗೆ ಸುರಕ್ಷಿತ ಮತ್ತು ಸಂಪೂರ್ಣ ರಕ್ಷಣೆಯನ್ನು ನೀಡುತ್ತದೆ, ಮತ್ತು ಯಾವುದೇ ಅನಿರೀಕ್ಷಿತ ಆರೋಗ್ಯ ಘಟನೆಯಿಂದ ಕುಟುಂಬದ ಆರ್ಥಿಕ ಭವಿಷ್ಯವನ್ನು ರಕ್ಷಿಸುತ್ತದೆ.
#BUSINESS #HEALTHINSURANCE #IRDA #FAMILYFLOATERPLAN #SENIORCITIZENSCHEME
BSNL ಗ್ರಾಹಕರಿಗೆ ಗುಡ್ ನ್ಯೂಸ್ : 90 ದಿನಗಳ ವ್ಯಾಲಿಡಿಟಿಯ ಸೂಪರ್ ಪ್ಲಾನ್ ಬಿಡುಗಡೆ!
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ (BSNL) ತನ್ನ ಗ್ರಾಹಕರಿಗಾಗಿ ಭರ್ಜರಿ ಕೊಡುಗೆಯೊಂದನ್ನು ತಂದಿದೆ. ದೀರ್ಘಕಾಲದಿಂದ ರೀಚಾರ್ಜ್ ಮಾಡದೆ ಬಂದ್ ಆಗಿರುವ ಅಥವಾ ಡೀಆಕ್ಟಿವೇಟ್ ಆಗಿರುವ ನಂಬರ್ಗಳನ್ನು ಮರುಚಾಲನೆಗೊಳಿಸಲು ಮತ್ತು ಸೆಕೆಂಡರಿ ಸಿಮ್ ಬಳಸುವವರಿಗಾಗಿ ಈ ವಿಶೇಷ ಪ್ಲಾನ್ ರೂಪಿಸಲಾಗಿದೆ.
ರೂ. 449 ಪ್ಲಾನ್ನ ವಿಶೇಷತೆಗಳು:
ಬಿಎಸ್ಎನ್ಎಲ್ ಪರಿಚಯಿಸಿರುವ ಈ ಹೊಸ ಪ್ರಿಪೇಯ್ಡ್ ಪ್ಲಾನ್ನ ಬೆಲೆ ರೂ. 449. ಇದರ ಪ್ರಮುಖ ಲಾಭಗಳು ಈ ಕೆಳಗಿನಂತಿವೆ:
1.ವ್ಯಾಲಿಡಿಟಿ: ಪೂರ್ಣ 90 ದಿನಗಳ ಅವಧಿವರೆಗೆ ಈ ಪ್ಲಾನ್ ಚಾಲ್ತಿಯಲ್ಲಿರುತ್ತದೆ.
2.ದೈನಂದಿನ ಖರ್ಚು: ನೀವು ಲೆಕ್ಕ ಹಾಕಿದರೆ, ದಿನಕ್ಕೆ ಕೇವಲ 5 ರೂಪಾಯಿ ಖರ್ಚಿನಲ್ಲಿ ನಿಮ್ಮ ಸಿಮ್ ಕಾರ್ಡ್ ಅನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳಬಹುದು.
3.ಅನ್ಲಿಮಿಟೆಡ್ ಕಾಲಿಂಗ್: ದೇಶಾದ್ಯಂತ ಯಾವುದೇ ನೆಟ್ವರ್ಕ್ಗೆ ಉಚಿತವಾಗಿ ಕರೆ ಮಾಡಬಹುದು ಮತ್ತು ನ್ಯಾಷನಲ್ ರೋಮಿಂಗ್ ಕೂಡ ಉಚಿತವಾಗಿದೆ.
4.ಎಸ್ಎಂಎಸ್: ಪ್ರತಿದಿನ 100 ಉಚಿತ ಎಸ್ಎಂಎಸ್ ಸೌಲಭ್ಯ ದೊರೆಯಲಿದೆ.
5.ಡೇಟಾ: ಈ ಪ್ಲಾನ್ನಲ್ಲಿ ಒಟ್ಟು 5GB ಇಂಟರ್ನೆಟ್ ಡೇಟಾ ಸಿಗಲಿದ್ದು, ಇದನ್ನು 90 ದಿನಗಳಲ್ಲಿ ಯಾವಾಗ ಬೇಕಾದರೂ ಬಳಸಬಹುದು (ಯಾವುದೇ ದೈನಂದಿನ ಮಿತಿ ಇರುವುದಿಲ್ಲ).
ಯಾರಿಗೆ ಇದು ಉಪಯುಕ್ತ?
ತಮ್ಮ ಹಳೆಯ ನಂಬರ್ ಅನ್ನು ಕಳೆದುಕೊಳ್ಳಲು ಇಷ್ಟವಿಲ್ಲದವರು ಅಥವಾ ಕಡಿಮೆ ಬೆಲೆಯಲ್ಲಿ ಕರೆ ಸೌಲಭ್ಯಕ್ಕಾಗಿ ಎರಡನೇ ಸಿಮ್ ಬಳಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಕೇವಲ ಡೇಟಾಕ್ಕಿಂತ ಹೆಚ್ಚಾಗಿ ಸಿಮ್ ಆಕ್ಟಿವ್ ಆಗಿರಬೇಕು ಮತ್ತು ಅನ್ಲಿಮಿಟೆಡ್ ಕರೆ ಬೇಕು ಎನ್ನುವವರಿಗೆ ಈ ಪ್ಲಾನ್ ವರದಾನವಾಗಿದೆ.
ನೆಟ್ವರ್ಕ್ ಸುಧಾರಣೆ:
ಬಿಎಸ್ಎನ್ಎಲ್ ದೇಶಾದ್ಯಂತ ವೇಗವಾಗಿ 4G ಟವರ್ಗಳನ್ನು ಅಳವಡಿಸುತ್ತಿದ್ದು, ಶೀಘ್ರದಲ್ಲೇ ಪ್ರಮುಖ ನಗರಗಳಲ್ಲಿ 5G ಸೇವೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಕಂಪನಿಯ 4G ಮೂಲಸೌಕರ್ಯವು ‘5G-ರೆಡಿ’ ಆಗಿದ್ದು, ಶೀಘ್ರದಲ್ಲೇ ಅಪ್ಗ್ರೇಡ್ ಆಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಇತರ ಕಂಪನಿಗಳಿಗೆ ಪೈಪೋಟಿ: ಇದೇ 90 ದಿನಗಳ ವ್ಯಾಲಿಡಿಟಿಗೆ ಜಿಯೋ (Jio) ಸಂಸ್ಥೆಯು ರೂ. 899 ಪ್ಲಾನ್ ನೀಡುತ್ತಿದೆ (ಇದರಲ್ಲಿ ದಿನಕ್ಕೆ 2GB ಡೇಟಾ ಸಿಗುತ್ತದೆ). ಆದರೆ, ಕೇವಲ ಸಿಮ್ ಕಾರ್ಡ್ ಆಕ್ಟಿವ್ ಇಟ್ಟುಕೊಳ್ಳಲು ಬಯಸುವವರಿಗೆ ಬಿಎಸ್ಎನ್ಎಲ್ನ ರೂ. 449 ಪ್ಲಾನ್ ಅತಿ ಅಗ್ಗವಾಗಿದೆ.
#LATEST #BENGALURU #DOT #BSNL4G #NETWORKUPGRADE
ಟೋಲ್ ಪ್ಲಾಜಾಗಳಲ್ಲಿ ಕ್ಯಾಶ್ ಗೆ ಗುಡ್ ಬೈ?
ಏಪ್ರಿಲ್ 1ರಿಂದ ಹೊಸ ನಿಯಮ!
ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (NHAI) ದೇಶಾದ್ಯಂತ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ಏಪ್ರಿಲ್ 1ರಿಂದ ನಗದು ಪಾವತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಕುರಿತು ಚಿಂತನೆ ನಡೆಸುತ್ತಿದೆ.
ಅನುಷ್ಠಾನಗೊಳ್ಳುವಂತಾದರೆ, ರಾಷ್ಟ್ರೀಯ ಹೆದ್ದಾರಿ ಶುಲ್ಕ ಪ್ಲಾಜಾಗಳಲ್ಲಿನ ಎಲ್ಲಾ ಟೋಲ್ ಪಾವತಿಗಳು ಫಾಸ್ಟ್ಟ್ಯಾಗ್ ಅಥವಾ ಯುಪಿಐ (UPI) ಮೂಲಕ ಡಿಜಿಟಲ್ ವಿಧಾನದಲ್ಲಿ ಮಾತ್ರ ಪ್ರಕ್ರಿಯೆಯಾಗಲಿವೆ ಎಂದು ಪ್ರಾಧಿಕಾರ ತಿಳಿಸಿದೆ.
ಸಂಪೂರ್ಣ ಡಿಜಿಟಲ್ ಟೋಲಿಂಗ್ ವ್ಯವಸ್ಥೆ ಜಾರಿಗೆ ತರುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಲಿದೆ. ಜೊತೆಗೆ, 'ಪ್ರಯಾಣ ಸುಲಭಗೊಳಿಸುವಿಕೆ' ಹೆಚ್ಚಳ, ಲೇನ್ ಥ್ರೋಪುಟ್ ಸುಧಾರಣೆ, ದಟ್ಟಣೆ ಕಡಿತ ಮತ್ತು ಪಾರದರ್ಶಕತೆ ವೃದ್ಧಿಯಾಗಲಿದೆ ಎಂದು ಎನ್ಎಚ್ಎಐ ಹೇಳಿದೆ.
ಕಳೆದ ಕೆಲವು ವರ್ಷಗಳಲ್ಲಿ ಫಾಸ್ಟ್ಟ್ಯಾಗ್ ಬಳಕೆ
ಶೇ.98ಕ್ಕೂ ಹೆಚ್ಚು ಪ್ರಮಾಣಕ್ಕೆ ಏರಿಕೆಯಾಗಿದೆ. ಹೆಚ್ಚಿನ ಟೋಲ್ ವಹಿವಾಟುಗಳು ಈಗಾಗಲೇ
RFID ಆಧಾರಿತ ಫಾಸ್ಟ್ಟ್ಯಾಗ್ ಮೂಲಕ ಡಿಜಿಟಲ್ ರೀತಿಯಲ್ಲಿ ನಡೆಯುತ್ತಿವೆ. ಯುಪಿಐ ಪಾವತಿ ವ್ಯವಸ್ಥೆಯನ್ನೂ ಟೋಲ್ ಪ್ಲಾಜಾಗಳಲ್ಲಿ ಜಾರಿಗೆ ತರಲಾಗಿದೆ.
ಪ್ರಸ್ತುತ ನಿಯಮಗಳ ಪ್ರಕಾರ, ಫಾಸ್ಟ್ಟ್ಯಾಗ್ ಇಲ್ಲದೇ ಟೋಲ್ ಪ್ಲಾಜಾಗೆ ಪ್ರವೇಶಿಸಿ ನಗದು ಪಾವತಿಸಿದರೆ, ಅನ್ವಯವಾಗುವ ಶುಲ್ಕದ ದ್ವಿಗುಣ ಮೊತ್ತ ವಿಧಿಸಲಾಗುತ್ತದೆ. ಆದರೆ ಯುಪಿಐ ಮೂಲಕ ಪಾವತಿಸಿದರೆ, ಸಂಬಂಧಿತ ವಾಹನ ವರ್ಗಕ್ಕೆ ಅನ್ವಯಿಸುವ ಶುಲ್ಕದ 1.25 ಪಟ್ಟು ಮಾತ್ರ ವಿಧಿಸಲಾಗುತ್ತದೆ.
ಎನ್ಎಚ್ಎಐ ಪ್ರಕಾರ, ನಗದು ಪಾವತಿಗಳು ದಟ್ಟಣೆ, ಹೆಚ್ಚಿನ ಕಾಯುವ ಸಮಯ ಹಾಗೂ ವಹಿವಾಟು ಸಂಬಂಧಿತ ವಿವಾದಗಳಿಗೆ ಕಾರಣವಾಗುತ್ತಿವೆ. ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆಗೆ ಪರಿವರ್ತನೆಗೊಂಡರೆ, ಸಂಚಾರ ನಿರ್ವಹಣೆ ಸುಧಾರಿಸಿ ವಿಳಂಬ ಕಡಿಮೆಯಾಗಲಿದೆ.
ದೇಶದ ವಿವಿಧ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್ಪ್ರೆಸ್ವೇಗಳಲ್ಲಿ ಇರುವ 1,150ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಈ ಕ್ರಮ ಜಾರಿಗೆ ಬಂದರೆ, ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಅನುಭವದಲ್ಲಿ ಮಹತ್ತರ ಸುಧಾರಣೆ ಕಾಣಬಹುದು ಎಂದು ಪ್ರಾಧಿಕಾರ ತಿಳಿಸಿದೆ.
#LATEST #INDIA #TECHNOLOGY #FASTAG #NHAI #GOCASHLESS
ಫೋನ್ ಪೇ ಮೂಲಕ ಯುಪಿಐ ಬಳಸುವವರಿಗೆ
ಬಹಳ ಮುಖ್ಯವಾದ ಮಾಹಿತಿ.!
ಹಣ ತೆಗೆದುಕೊಂಡು ಹೋಗಿ ಶಾಪಿಂಗ್ ಮಾಡುವುದು, ವಸ್ತುಗಳನ್ನು ಖರೀದಿ ಮಾಡುವುದು ಆಧುನಿಕ ಕಾಲದಲ್ಲಿ ಮುಗಿದು ಹೋಗಿರುವ ಅಧ್ಯಾಯ. ಬಹುತೇಕ ಎಲ್ಲಾ ಕಡೆಯೂ ಯುಪಿಐ ಹಾಗೂ ಕಾರ್ಡ್ ಮೂಲಕವೇ ಎಲ್ಲಾ ವಹಿವಾಟು ಡಿಜಿಟಲ್ ಜಗತ್ತಿನಲ್ಲಿ ನಡೆದು ಹೋಗುತ್ತದೆ. ಅದರಲ್ಲೂ ಫೋನ್ಪೇ ಭಾರತದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಬಹುತೇಕರು ಇದನ್ನೇ ಆದ್ಯತೆಯಾಗಿ ತೆಗೆದುಕೊಳ್ಳುತ್ತಾರೆ.
ಹೀಗಿದ್ದಾಗಲೇ ಇನ್ನುಮುಂದೆ ನೀವು ಯುಪಿಐ ಪಾವತಿ ಮಾಡಲು, ಫೋನ್ಪೇ ಬಳಸಿದರೆ ಸಣ್ಣಪುಟ್ಟ ವಹಿವಾಟು ನಡೆಸಲು ಪಿನ್ ಹಾಕುವ ಅಗತ್ಯತೆ ಇರುವುದಿಲ್ಲ. ಈ ರೀತಿ ಹೊಸ ಆಪ್ಷನ್ ಕೊಟ್ಟಿದೆ ಫೋನ್ ಪೇ ಅಪ್ಲಿಕೇಷನ್ ಇದೀಗ, ಬಯೋಮೆಟ್ರಿಕ್ ಮೂಲಕ ಪಾವತಿ ಮಾಡಲು ಈಗ ಅವಕಾಶ ನೀಡಲಾಗಿದೆ. ಫೇಸ್ ಐಡಿ ಅಥವಾ ಫಿಂಗರ್ ಪ್ರಿಂಟ್ ಬಳಸಿ ನೀವು ಪಾವತಿ ಮಾಡಲು ಫೋನ್ಪೇ ಹೊಸ ಅವಕಾಶ ಕಲ್ಪಿಸಿದೆ. ಹಾಗಾದರೆ ಇದರಿಂದ ಏನೆಲ್ಲಾ ಅನುಕೂಲ ಆಗಲಿದೆ? ಬನ್ನಿ ತಿಳಿಯೋಣ.
5,000 ರೂಪಾಯಿ ಒಳಗೆ ಇರಬೇಕು!
ಫಿನ್ಟೆಕ್ ಪ್ಲಾಟ್ಫಾರ್ಮ್ ತನ್ನ ಗ್ರಾಹಕರಿಗೆ ಹೊಸ ಅಪ್ಷನ್ ತಂದಿದೆ, ಯುಪಿಐ ಮೂಲಕ ಪಾವತಿ ಮಾಡುವ ಫೋನ್ಪೇ ಬಳಕೆದಾರರಿಗೆ ಇದೀಗ ಪಿನ್ ಬಳಸುವ ಅವಶ್ಯಕತೆ ಇರುವುದಿಲ್ಲ, ಆದರೆ ಆ ನಿಮ್ಮ ವಹಿವಾಟು 5,000 ರೂಪಾಯಿ ಒಳಗೆ ಇರಬೇಕು. ಸಣ್ಣಪುಟ್ಟ ವಹಿವಾಟು ಮಾಡಲು, ಈಗ ಸುಮಾರು 5,000 ಒಳಗೆ ಪಾವತಿ ಮಾಡಲು ಗ್ರಾಹಕರು ಪಿನ್ ಹಾಕುವ ಬದಲಾಗಿ ನೇರವಾಗಿ ಫಿಂಗರ್ ಪ್ರಿಂಟ್ ಅಥವಾ ತಮ್ಮ ಫೇಸ್ ಐಡಿ ಬಳಕೆ ಮಾಡಬಹುದು ಎಂದು ತಿಳಿಸಲಾಗಿದೆ. ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ನ ಫಿಂಗರ್ಪ್ರಿಂಟ್ ಸ್ಕ್ಯಾನರ್ ಅಥವಾ ಫೇಸ್ ಐಡಿ ಮೂಲಕ ಪಾವತಿಸಬಹುದಾಗಿದೆ.
ಡಬಲ್ ವೆರಿಫಿಕೇಷನ್ ಸೌಲಭ್ಯ ಲಭ್ಯ!
ಹಾಗೇ ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಡಬಲ್ ವೆರಿಫಿಕೇಷನ್ ಅಂದ್ರೆ, ಎರಡು ಬಾರಿ ಪರಿಶೀಲನೆಗೆ ಅವಕಾಶ ಕೂಡ ಇರಲಿದೆ. 5,000 ರೂಪಾಯಿ ಮೀರಿದ ಯುಪಿಐ ಪಾವತಿಗಳಿಗೆ ಈ ಹೊಸ ಆಪ್ಷನ್ ಅನ್ವಯ ಆಗುವುದಿಲ್ಲ, ಆಗ ಗ್ರಾಹಕರು ತಮ್ಮ ಪಿನ್ ಬಳಸಬೇಕಾಗುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಸ್ನೇಹಿತರು & ಕುಟುಂಬಕ್ಕೆ ಹಣ ಕಳುಹಿಸಲು ಇದು ಸಹಕಾರಿ ಆಗಲಿದೆ. ಅಂಗಡಿಯಲ್ಲಿ ಕ್ಯೂಆರ್
ಕೋಡ್ ಸ್ಕ್ಯಾನ್ ಮಾಡಿ ನೇರವಾಗಿ ಪಿನ್ ಹಾಕದೆ ಪಾವತಿಸಬಹುದು. ಆನ್ಲೈನ್ ಪಾವತಿ & ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆಗೆ ಕೂಡ ಇದು ಸಹಕಾರಿ ಆಗಲಿದೆ.
#LATEST #BENGALURU #DIGITALPAYMENT #UPI #BIOMETRIC
ವಿಶ್ವದ ಮೊದಲ AI ನಗರಕ್ಕೆ ಬೆಂಗಳೂರೇ ವೇದಿಕೆ.!ಕುತೂಹಲಕಾರಿ ಘೋಷಣೆ.!
ನವದೆಹಲಿಯಲ್ಲಿ ನಡೆಯಲಿರುವ 2026ರ AI ಇಂಪ್ಯಾಕ್ಟ್ ಶೃಂಗಸಭೆಯ ಎರಡನೇ ದಿನದಂದು ಒಂದು ಕುತೂಹಲಕಾರಿ ಘೋಷಣೆ ಹೊರಬಿದ್ದಿದೆ. ಅದೇನೆಂದರೆ, Bharat1 ಹೆಸರಿನ ಸ್ಟಾರ್ಟ್ಅಪ್ ಒಂದು ನಮ್ಮ ಬೆಂಗಳೂರಿನಲ್ಲಿ ವಿಶ್ವದ ಮೊದಲ
AI ನಗರವನ್ನು ನಿರ್ಮಿಸುವ ಯೋಜನೆಗಳನ್ನು ಪ್ರಕಟಿಸಿದೆ.!
ಇದು ಸಾಮಾನ್ಯ ಸ್ಮಾರ್ಟ್ ಸಿಟಿಯಂತಿಲ್ಲ ಬದಲಾಗಿ, ನೈಜ ಪರಿಸ್ಥಿತಿಗಳಲ್ಲಿ AI ವ್ಯವಸ್ಥೆಗಳನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾದ ನಗರಮಟ್ಟದ ಸಂಶೋಧನಾ ವೇದಿಕೆಯಾಗಿರುತ್ತದೆ ಎಂದು ಹೇಳಿದೆ.! ಈ ವಿಷಯವೂ ಸಾಕಷ್ಟು ಕೂತೂಹಲಕ್ಕೆ ಕಾರಣವಾಗಿದೆ.
ಪತ್ರಿಕಾ ಪ್ರಕಟಣೆಯಲ್ಲಿ, ನಗರ-ಪ್ರಮಾಣದ ಸಂಶೋಧನೆ ಮತ್ತು ಮೂಲಸೌಕರ್ಯ ಉಪಕ್ರಮವನ್ನು ನಿರ್ಮಿಸುವ ತನ್ನ ದೃಷ್ಟಿಕೋನವನ್ನು Bharat1 ಅನಾವರಣಗೊಳಿಸಿದೆ. ಈ ಯೋಜನೆಯ ಮೊದಲ ಹಂತವಾಗಿ, ಬೆಂಗಳೂರಿನ ಸರ್ಜಾಪುರದಲ್ಲಿ ಸಮೀಪದ ಪ್ರದೇಶದಲ್ಲಿ ಸುಮಾರು 5 ಲಕ್ಷ ಚದರ ಅಡಿ ವ್ಯಾಪ್ತಿಯ AI ಸಂಶೋಧನಾ ಮತ್ತು ನವೀನತಾ ಕ್ಯಾಂಪಸ್ ನಿರ್ಮಾಣಕ್ಕೆ ರೂಪುರೇಷೆ ಸಿದ್ಧವಾಗಿದೆ.
ಈ ಕ್ಯಾಂಪಸ್ನಲ್ಲಿ ಮಾದರಿ ತರಬೇತಿ (model training), ಫೈನ್-ಟ್ಯೂನಿಂಗ್, ಇನ್ಫರೆನ್ಸ್, ಪ್ಲಗ್-ಅಂಡ್-ಪ್ಲೇ ಪ್ರಯೋಗಾಲಯಗಳು,
ಹಾಗೂ AI ಕ್ಲೌಡ್ ಸೇವೆಗಳ ಸಂಪರ್ಕ
ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ.
Bharat1 ಸಂಸ್ಥೆಯು ಮುಂದಿಟ್ಟಿರುವ ದೃಷ್ಟಿಯಲ್ಲಿ, "AI ಸಿಟಿ" ಎಂದರೆ AI ನಗರವನ್ನು ನಿಯಂತ್ರಿಸುವುದಲ್ಲ. ಬದಲಿಗೆ, ಏಜೆಂಟಿಕ್ AI
ಹಾಗೂ ಭೌತಿಕ AI ವ್ಯವಸ್ಥೆಗಳನ್ನು ನಿಯಂತ್ರಿತ ನೈಜ ಪರಿಸ್ಥಿತಿಗಳಲ್ಲಿ ಪರೀಕ್ಷಿಸಿ, ಅವುಗಳ ಪರಿಣಾಮಗಳನ್ನು ವಿಶ್ಲೇಷಿಸಿ, ಬಳಿಕ ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರುವ ಪ್ರಕ್ರಿಯೆ ಎಂದು ತಿಳಿಸಲಾಗಿದೆ. ಇದು ಭವಿಷ್ಯದ ಸ್ವಯಂಚಾಲಿತ ವಾಹನಗಳು, ರೋಬೋಟಿಕ್ಸ್, ಸ್ಮಾರ್ಟ್ ಮೂಲಸೌಕರ್ಯ ವ್ಯವಸ್ಥೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮಹತ್ವದ ಹೆಜ್ಜೆಯಾಗಬಹುದು. ದರಿಂದ ಸಂಶೋಧಕರು ಮತ್ತು ಸ್ಟಾರ್ಟ್ಅಪ್ಗಳಿಗೆ ನಗರಮಟ್ಟದ AI ಪರೀಕ್ಷಾ ಪರಿಸರ ಲಭ್ಯವಾಗಲಿದೆ.
AI ತಂತ್ರಜ್ಞಾನವು ಇತ್ತೀಚಿನ ವರ್ಷಗಳಲ್ಲಿ ಅಪಾರ ವೇಗದಲ್ಲಿ ಅಭಿವೃದ್ಧಿ ಕಂಡಿದೆ. ಆದರೆ ದೊಡ್ಡ ಭಾಷಾ ಮಾದರಿಗಳು (LLMs) ಹಾಗೂ ಇತರೆ ಬುದ್ಧಿವಂತ ವ್ಯವಸ್ಥೆಗಳು ಇಂಟರ್ನೆಟ್ ಆಧಾರಿತ ಡೇಟಾದ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ಅವುಗಳ ವಿಶ್ವಾಸಾರ್ಹತೆ, ಸುರಕ್ಷತೆ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತು ಪ್ರಶ್ನೆಗಳು ಉದ್ಭವಿಸುತ್ತಿವೆ. ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು Bharat1 ನೈಜ ಜಗತ್ತಿನ ಗುಣಮಟ್ಟದ, ಸಂರಚಿತ ಮತ್ತು ಬಹುಮಾಧ್ಯಮ ಡೇಟಾ ಆಧಾರಿತ ಪರೀಕ್ಷಾ ಮೂಲಸೌಕರ್ಯ ಅಗತ್ಯವಿದೆ ಎಂದು ಹೇಳಿದೆ.
Bharat1 ಸಂಸ್ಥೆಯ ಸಹ-ಸ್ಥಾಪಕ ಹಾಗೂ ಸಿಇಒ ಉಮಾಕಾಂತ್ ಸೋನಿ ಅವರ ಪ್ರಕಾರ, AI ಈಗ ಪ್ರಯೋಗಾಲಯಗಳ ಗಡಿಯನ್ನು ಮೀರಿ ಸಮಾಜದ ದೈನಂದಿನ ಬದುಕಿಗೆ ಪ್ರವೇಶಿಸುತ್ತಿದೆ. AI ಕ್ರಾಂತಿಯಲ್ಲಿ ನಾವು ಒಂದು ಬಾಗುವ ಹಂತದಲ್ಲಿದ್ದು, ಬುದ್ಧಿವಂತಿಕೆಯು ಪ್ರಯೋಗಾಲಯಗಳಿಂದ ಹೊರಬಂದು ಸಮಾಜದ ರಚನೆಗೆ ಚಲಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಮಗ್ರ ಪರೀಕ್ಷೆಯಿಲ್ಲದೆ AI ವ್ಯವಸ್ಥೆಗಳನ್ನು ವಿಸ್ತರಿಸುವುದು ಅಪಾಯಕಾರಿಯಾಗಬಹುದು. ಆದ್ದರಿಂದ, ಜವಾಬ್ದಾರಿಯುತ ಮತ್ತು ಮಾನವ ಹಿತಾಸಕ್ತಿಯನ್ನು ಕೇಂದ್ರೀಕರಿಸಿದ ಅಭಿವೃದ್ಧಿಗೆ ನಗರಮಟ್ಟದ ಮಾನ್ಯತೆ ವ್ಯವಸ್ಥೆ ಅಗತ್ಯವಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ನಮ್ಮ ಬೆಂಗಳೂರು ಜಾಗತಿಕ AI ಸಂಶೋಧನಾ ನಕ್ಷೆಯಲ್ಲಿ ಮತ್ತಷ್ಟು ಬಲವಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಭಾರತದ ಸ್ಟಾರ್ಟ್ಅಪ್ ರಾಜಧಾನಿ ಎಂಬ ಹೆಸರನ್ನು ಪಡೆದಿರುವ ಬೆಂಗಳೂರು, ಈ ರೀತಿಯ ಪ್ರಯತ್ನಗಳ ಮೂಲಕ AI ಸುರಕ್ಷತೆ ಮತ್ತು ಜವಾಬ್ದಾರಿತನದ ಕ್ಷೇತ್ರದಲ್ಲೂ ಮುಂಚೂಣಿಗೆ ಬರಬಹುದು. ಒಟ್ಟಾರೆಯಾಗಿ, Bharat1 ಘೋಷಿಸಿರುವ AI ನಗರ ಯೋಜನೆ ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಪ್ರಯತ್ನವಾಗಿದೆ. ಮಾನವ ಮೌಲ್ಯಗಳು,
ಸುರಕ್ಷತೆ ಮತ್ತು ಜವಾಬ್ದಾರಿತನವನ್ನು ಕೇಂದ್ರದಲ್ಲಿ ಇಟ್ಟುಕೊಂಡು AI ವ್ಯವಸ್ಥೆಗಳನ್ನು ರೂಪಿಸುವ ಉದ್ದೇಶದಿಂದ ಈ ಯೋಜನೆ ರೂಪುಗೊಂಡಿದ್ದು, ಮುಂದಿನ ದಿನಗಳಲ್ಲಿ ಇದರ ಪ್ರಗತಿ ತಂತ್ರಜ್ಞಾನ ವಲಯದಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
#LATEST #TECHNOLOGY #WORLDSFIRSTAICITY #BENGALURU #BHARAT1STARTUP
ರಿಲಯನ್ಸ್ ಜಿಯೋ ಆರೋಗ್ಯ AI: ನಿಮಿಷಗಳಲ್ಲಿ ಹೆಲ್ತ್ ರಿಪೋರ್ಟ್!
ನವದೆಹಲಿ: ನಿಮಿಷಗಳಲ್ಲಿ ಹೆಲ್ತ್ ರಿಪೋರ್ಟ್ ವಿಶ್ಲೇಷಣೆ ಮಾಡಿ, ಅದರ ಫಲಿತಾಂಶವನ್ನು
ಕೈಗಿಡುವ ಎಐ ಆಧಾರಿತ ಕ್ಲಿನಿಕ್ ಮಾದರಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಮನ ಸೆಳೆದಿದೆ. ಅಲ್ಲಿ ಪ್ರದರ್ಶಿಸಲಾದ ಜಿಯೋ ಆರೋಗ್ಯ ಎಐ,
ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಎಐ-ಆಧಾರಿತ ಕ್ಲಿನಿಕ್ ಮಾದರಿಯನ್ನು ಪರಿಚಯಿಸಿದೆ.
ಈ ಎಐ-ಚಾಲಿತ ವ್ಯವಸ್ಥೆಯು ರೋಗಿಯ ಪ್ರಮುಖ ಆರೋಗ್ಯ ಅಂಶಗಳನ್ನು ಅಳೆದು- ತೂಗಿ, ಕೆಲವೇ ನಿಮಿಷಗಳಲ್ಲಿ ಸ್ಕ್ರೀನ್ ಮಾಡುತ್ತದೆ ಮತ್ತು ವಿಶ್ಲೇಷಿಸುತ್ತದೆ, ಸಂಭಾವ್ಯ ಅಪಾಯಗಳನ್ನು ಗುರುತಿಸುತ್ತದೆ ಮತ್ತು ಅಗತ್ಯವಿರುವಂತೆ ತಜ್ಞರ ಉಲ್ಲೇಖಗಳನ್ನು ಶಿಫಾರಸು ಮಾಡುತ್ತದೆ.
ದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಐ-ಸಕ್ರಿಯಗೊಳಿಸಿದ ಚಿಕಿತ್ಸಾಲಯಗಳಾಗಿ ಪರಿವರ್ತಿಸುವುದು, ದೂರದ ಪ್ರದೇಶಗಳಲ್ಲಿಯೂ ಸಹ ವೇಗದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವುದು ತನ್ನ ಗುರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ವ್ಯವಸ್ಥೆಯಲ್ಲಿ ರೋಗಿಯು ಎಐ-ಸಕ್ರಿಯಗೊಳಿಸಿದ ರೋಗನಿರ್ಣಯ (ಡಯಾಗ್ನೋಸ್ಟಿಕ್) ಸಾಧನ, ಸ್ಮಾರ್ಟ್ ಮಿರರ್ ಮುಂದೆ ನಿಲ್ಲುತ್ತಾನೆ, ಇದು ಕಣ್ಣುಗಳು, ಚರ್ಮ ಮತ್ತು ಇತರ ದೃಶ್ಯ ಸೂಚನೆಗಳ ಆಧಾರದ ಮೇಲೆ ಅಗತ್ಯವಾದ ರೀಡಿಂಗ್ ತೆಗೆದುಕೊಳ್ಳುತ್ತದೆ. ಎಐ ಈ ಡೇಟಾವನ್ನು ವಿಶ್ಲೇಷಿಸುತ್ತದೆ ಮತ್ತು ಪ್ರಾಥಮಿಕ ಆರೋಗ್ಯ ಮೌಲ್ಯಮಾಪನವನ್ನು ಜನರೇಟ್ ಮಾಡುತ್ತದೆ. ರೋಗಿಯು ಸಮಸ್ಯೆಯನ್ನು 'ವಾಯ್ಸ್ ಎಐ ವೈದ್ಯರಿಗೆ' ಮೌಖಿಕವಾಗಿ ವಿವರಿಸಬಹುದು. ಅಗತ್ಯವಿದ್ದರೆ, ವಾಯ್ಸ್ ಎಐ ವೈದ್ಯರು ರೋಗಿಗೆ ಹೆಚ್ಚುವರಿ ಪ್ರಶ್ನೆಗಳನ್ನು ಸಹ ಕೇಳುತ್ತಾರೆ. ಇದರ ವೈಶಿಷ್ಟ್ಯವೆಂದರೆ ಅದು ಹಲವಾರು ಪ್ರಮುಖ ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸಬಹುದು.
'ಜಿಯೋ ಆರೋಗ್ಯ ಎಐ' ರೋಗಿಗಳನ್ನು ವರ್ಗೀಕರಿಸಬಹುದು ಮತ್ತು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುವ ಪ್ರಕರಣಗಳಿಗೆ- ರೆಫರೆನ್ಸ್ ಗಳಿಗೆ ಆದ್ಯತೆ ನೀಡಬಹುದು. ಇದು ವೈದ್ಯರ ನಿತ್ಯದ ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ನಿರ್ಣಾಯಕ ಪ್ರಕರಣಗಳ ಮೇಲೆ ಹೆಚ್ಚು ಗಮನಹರಿಸಲು ಸಹಾಯ ಮಾಡುತ್ತದೆ.
ಕಂಪನಿಯ ಪ್ರಕಾರ, ಎಐ ವ್ಯವಸ್ಥೆಯು ಪ್ರಾಥಮಿಕ ಮೌಲ್ಯಮಾಪನವನ್ನು ಮಾತ್ರ ಜನರೇಟ್ ಮಾಡುತ್ತದೆ ಮತ್ತು ವೈದ್ಯರ ಸಲಹೆಯಿಲ್ಲದೆ ಔಷಧಿ ಅಥವಾ ಇತರ ವೈದ್ಯಕೀಯ ಸಹಾಯವನ್ನು ಒದಗಿಸುವುದಿಲ್ಲ.
ಸದ್ಯಕ್ಕೆ ಅಸ್ತಿತ್ವದಲ್ಲಿರುವ ಆರೋಗ್ಯ ಮೂಲಸೌಕರ್ಯದ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಈ ಮಾದರಿಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಕಂಪನಿ ಹೇಳಿದೆ.
ಸಂಪರ್ಕ ಲಭ್ಯವಿರುವಲ್ಲೆಲ್ಲಾ ಎಐ ಚಿಕಿತ್ಸಾಲಯಗಳನ್ನು ಸ್ಥಾಪಿಸಬಹುದು. ಪೋರ್ಟಬಲ್ ಎಕ್ಸ್-ರೇಗಳು ಮತ್ತು ಪೋರ್ಟಬಲ್ ಇಸಿಜಿಗಳಂತಹ ಸಾಧನಗಳನ್ನು ಸಹ ಸಂಪರ್ಕಿಸಬಹುದು. ಅಗತ್ಯವಿದ್ದರೆ ರೋಗಿಗಳು ಆನ್ಲೈನ್ ಕನ್ಸಲ್ಟೇಷನ್ ಮತ್ತು ಡಿಜಿಟಲ್ ಔಷಧಿ ಪ್ರಿಸ್ಕ್ರಿಪ್ಷನ್ ನಂಥ ವೈಶಿಷ್ಟ್ಯಗಳಿಂದ ಪ್ರಯೋಜನ ಪಡೆಯಬಹುದು.
ದೇಶದಲ್ಲಿ ವಿಸ್ತರಿಸುತ್ತಿರುವ ಡಿಜಿಟಲ್ ಸಂಪರ್ಕದ ಲಾಭವನ್ನು ಪಡೆದುಕೊಂಡು, ಜಿಯೋ ಆರೋಗ್ಯ ಎಐನಂತಹ ಮಾದರಿಗಳು ದೊಡ್ಡ ಪ್ರಮಾಣದಲ್ಲಿ ಜಾರಿಗೆ ಬಂದರೆ, ಆರಂಭಿಕ ರೋಗನಿರ್ಣಯ ಮತ್ತು ತಜ್ಞರ ಸಲಹೆಯ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು.
#LATEST #INDIA #TECHNOLOGY #JIO #HEALTHAI #INSTANTREPORT
ಕರ್ಮ ರಿಟರ್ನ್ಸ್ ಅನ್ನೋದು ಇದಕ್ಕೇ.! ವಿಶ್ವಕಪ್ ಮೇಲೆ ಕಾಲಿಟ್ಟಿದ್ದೇ ಬಂತು, ಹೆಗಲೇರಿದ ಶನಿ.!
ಈಗ ಟಿ20 ವಿಶ್ವಕಪ್ನಿಂದ ಆಸೀಸ್ ಬಹುತೇಕ ಔಟ್.?
T20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮತ್ತೊಂದು ದಯನೀಯ ಸೋಲು ಅನುಭವಿಸಿದ್ದು, ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ. 2023ರ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟಿದ್ದರು. ಇದಾದ ಮೇಲೆ ಟ್ರೋಫಿ ಹತ್ತಿರ
ಬರಲು ಸಾಧ್ಯವಾಗುತ್ತಿಲ್ಲ.
ಆಸ್ಟ್ರೇಲಿಯಾ ತಂಡಕ್ಕೆ ಕಳೆದ ಮೂರ್ನಾಲ್ಕು ದಶಕಗಳಿಂದ ಐಸಿಸಿ ಟ್ರೋಫಿ ಗೆಲ್ಲುವುದು ನೀರು ಕುಡಿದಷ್ಟೇ ಸುಲಭ ಎನ್ನುವಂತಹ ಪ್ರದರ್ಶನ ನೀಡುತ್ತಾ ಬಂದಿತ್ತು. ಹೀಗಾಗಿ ಕಾಂಗರೂ ಪಡೆಯ ಸೊಕ್ಕು ಮುಗಿಲು ಮುಟ್ಟಿತ್ತು.
ಅದರಲ್ಲೂ ಭಾರತದಲ್ಲೇ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಆತಿಥೇಯ ಟೀಂ ಇಂಡಿಯಾವನ್ನು ಸೋಲಿಸಿದ ಆಸ್ಟ್ರೇಲಿಯಾ ಚಾಂಪಿಯನ್ ಅಗಿ ಹೊರಹೊಮ್ಮಿತ್ತು. ಇಷ್ಟಕ್ಕೆ ಸುಮ್ಮನಾಗದ ಕಾಂಗರೂ ಪಡೆ ಆಲ್ರೌಂಡರ್ ಮಿಚೆಲ್ ಮಾರ್ಷ್, ಟ್ರೋಫಿ ತಲೆ ಮೇಲೆ ಕಾಲಿಟ್ಟು ಫೋಟೋಗೆ ಫೋಸ್ ಕೊಟ್ಟಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದು ಆಸ್ಟ್ರೇಲಿಯನ್ನರಿಗೆ ಎಷ್ಟು ದುರಹಂಕಾರ ಎಂದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಆದರೆ ಎಲ್ಲಾ ದರ್ಪಕ್ಕೂ ಒಂದು ಅಂತ್ಯ ಇರಲೇಬೇಕಲ್ಲ. ಈ ಘಟನೆಯ ಬಳಿಕ ಆಸ್ಟ್ರೇಲಿಯಾ ತಂಡವು ಮತ್ತೊಂದು ಟ್ರೋಫಿ ಗೆಲ್ಲುವುದಿರಲಿ ಕನಿಷ್ಠಪಕ್ಷ ಫೈನಲ್ಗೇರಲು ಸಾಧ್ಯವಾಗುತ್ತಿಲ್ಲ. ಇದೀಗ ಮಿಚೆಲ್ ಮಾರ್ಷ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಸೆಮೀಸ್ಗೇರಲು ಸಾಧ್ಯವಾಗಿರಲಿಲ್ಲ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸೆಮಿಫೈನಲ್ನಲ್ಲಿ ಮುಗ್ಗರಿಸುವ ಮೂಲಕ ಮತ್ತೆ ಐಸಿಸಿ ಟ್ರೋಫಿ ಗೆಲ್ಲುವ ರೇಸ್ನಿಂದ ಹೊರಬಿದ್ದಿತ್ತು.
ಇದೀಗ ಆಸ್ಟ್ರೇಲಿಯಾ ತಂಡವು ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ದ ಸೋಲು ಕಂಡಿದೆ. ಇದೀಗ ಆಸೀಸ್ ತಂಡದ ಪರಿಸ್ಥಿತಿ ಹೇಗಿದೆ ಎಂದರೆ, ತಾನು ಸೂಪರ್-8 ಹಂತಕ್ಕೇರಬೇಕಾದರೆ ಇಂದು ನಡೆಯಲಿರುವ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ.
ಈಗಾಗಲೇ 'ಬಿ' ಗುಂಪಿನಲ್ಲಿ ಶ್ರೀಲಂಕಾ ತಂಡವು ಆಡಿದ ಮೂರು ಪಂದ್ಯಗಳನ್ನು ಗೆದ್ದು ಸೂಪರ್-8 ಹಾದಿ ಖಚಿತಪಡಿಸಿಕೊಂಡಿದೆ. ಇನ್ನು ಜಿಂಬಾಬ್ವೆ ಎರಡು ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದ್ದರೇ, ಆಸೀಸ್ ಮೂರು ಪಂದ್ಯಗಳ ಪೈಕಿ ಒಂದು ಗೆಲುವು ಎರಡು ಸೋಲು ಸಹಿತ ಮೂರನೇ ಸ್ಥಾನದಲ್ಲಿದೆ. ಇಂದು ಐರ್ಲೆಂಡ್ ಎದುರು ಜಿಂಬಾಬ್ವೆ ಗೆದ್ದರೇ ಆಸೀಸ್ ಹೋರಾಟ ಗ್ರೂಪ್ ಹಂತದಲ್ಲೇ ಕೊನೆಯಾಗಲಿದೆ.
#LATESTINFO #CRICKETZONE #OVERVIEW #T20 #WORLDCUP #KARMARETURN
Ind vs Pak: ಪಂದ್ಯವನ್ನೇ ಬದಲಾಯಿಸಿದ ಮೊಮ್ಮಗನ ಬ್ಯಾಟ್,ಆ ಯುವ ಬ್ಯಾಟ್ಸ್ ಮನ್
ಕುರಿತು ಅವರ ಅಜ್ಜ ಹೇಳಿದ್ದಿಷ್ಟೇ!
ಭಾರತ-ಪಾಕಿಸ್ತಾನ (India- Pakistan) ಪಂದ್ಯವೆಂದರೆ ಕ್ರಿಕೆಟ್ ಲೋಕದ ಅತ್ಯಂತ ಉತ್ಸಾಹಭರಿತ ಸಮರ. ಮೈದಾನದಲ್ಲೇ ಅಲ್ಲ, ಟಿವಿ ಮುಂದೆ ಕೂತು ನೋಡುತ್ತಿರುವ ಅಭಿಮಾನಿಗಳ ಹೃದಯದಲ್ಲೂ ಅದೇ ಮಟ್ಟದ ಒತ್ತಡವಿತ್ತು. ಈ ಬಾರಿ ಆಟದ ಸಂಪೂರ್ಣ ಪ್ರೆಶರ್ ಅನ್ನು ತಮ್ಮ ಮೇಲೆ ಮೇಲೆ ಹಾಕಿಕೊಂಡು ಪಂದ್ಯದ ದಿಕ್ಕನ್ನೇ ಬದಲಿಸಿದ
ಆ ಒಬ್ಬ ಯುವ ಬ್ಯಾಟ್ಸ್ಮನ್ ಕುರಿತು ಅವರ ತಾತ ಹೇಳಿದ್ದೇನು ಗೊತ್ತಾ.?
ಅಷ್ಟಾಗಿ ಅವರ ಮೊಮ್ಮಗ ಯಾರು ಗೊತ್ತಾ? ಇಲ್ಲಿದೆ ಅದರ ಕಂಪ್ಲಿಟ್ ಇನ್ಸೈಡ್ ಸ್ಟೊರಿ.!
ಆ ಒಬ್ಬ ಕ್ರಿಕೆಟಿಗ ಇವರೇ.!
ಮೊಮ್ಮಗನ ಬಗ್ಗೆ ಹೊಗಳಿದ ಇಶಾನ್ ತಾತ ಅನುರಾಗ್ ಪಾಂಡೆ . ಅದರಲ್ಲೂ ಪಾಕಿಸ್ತಾನ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಇಶಾನ್ 77 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಆರಂಭದಲ್ಲಿ ಸ್ವಲ್ಪ ಜಾಗ್ರತೆಯಿಂದ ಆಡಿದ ಅವರು, ಬಳಿಕ ತಮ್ಮ ಸಹಜ ಆಕ್ರಮಣಕಾರಿ ಶೈಲಿಗೆ ಮರಳಿದರು. ಕವರ್ ಡ್ರೈವ್ಗಳು, ಪುಲ್ ಶಾಟ್ಗಳು, ಸ್ಕ್ವೇರ್ ಕಟ್ಗಳು - ಎಲ್ಲವೂ ಸಮಯಕ್ಕೆ ಸರಿಯಾಗಿ ಬಂದವು. ಪಾಕಿಸ್ತಾನ ಬೌಲರ್ಗಳು ಲೈನ್ ಮತ್ತು ಲೆಂತ್ ಬದಲಿಸಿದರೂ, ಇಶಾನ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ.
ಕಿಶಾನ್ ಕುರಿತು ಅವರ ತಾತ ಹೇಳಿದ್ದಿಷ್ಟೇ.!
ಒಂದು ಹಂತದಲ್ಲಿ ಪಂದ್ಯ ಸಮಬಲದಲ್ಲಿತ್ತು. ಆದರೆ ಇಶಾನ್ ಕ್ರೀಸ್ನಲ್ಲಿ ನೆಲೆಯೂರಿದ ಬಳಿಕ ಆಟದ ವೇಗವೇ ಬದಲಾಯಿತು. ಮಧ್ಯ ಓವರ್ಗಳಲ್ಲಿ ಅವರು ಗ್ಯಾಪ್ ಹುಡುಕಿ ಬೌಂಡರಿ ಗಳಿಸಿದ ರೀತಿಯೇ ಪಾಕಿಸ್ತಾನಿ ಬೌಲರ್ಗಳ ಮೇಲೆ ಒತ್ತಡ ಹೆಚ್ಚಿಸಿತು. ಅವರ ಬ್ಯಾಟ್ನಿಂದ ಹರಿದ 77 ರನ್ಗಳು ಕೇವಲ ಅಂಕೆಗಳಲ್ಲ; ಅದು ಪಂದ್ಯಕ್ಕೆ ತಿರುವು ನೀಡಿದ ಕ್ಷಣಗಳ ಸರಮಾಲೆ. ಪಂದ್ಯದ ನಂತರ, ಅವರ ಕುಟುಂಬದ ಸಂತೋಷ ಹೇಳತೀರದು. ಗೋರ್ಡಿಹಾದಲ್ಲಿರುವ ತಮ್ಮ ಮನೆಯಲ್ಲಿ ಮಾತನಾಡಿದ ಇಶಾನ್ ಅವರ ಅಜ್ಜ ಅನುರಾಗ್ ಪಾಂಡೆ, ಇಶಾನ್ ಬಾಲ್ಯದಿಂದಲೂ ಶ್ರಮದಿಂದಲೇ ಮೇಲೆ ಬಂದವನು. ಪ್ರೆಶರ್ ಇದ್ದಾಗಲೇ ಅವನು ತನ್ನ ಅತ್ಯುತ್ತಮ ಆಟ ತೋರಿಸುತ್ತಾನೆ, ಎಂದು ಹೆಮ್ಮೆಯಿಂದ ಹೇಳಿದರು.
" ಪಾಕಿಸ್ತಾನದಲ್ಲಿ ಎಷ್ಟೊಂದು ಟಿವಿಗಳು ಕೆಟ್ಟುಹೋಗಿದ್ದವೋ ಗೊತ್ತಿಲ್ಲ. ನಮ್ಮ ಮೊಮ್ಮಗ ಅವರ ನಿದ್ದೆ ಕೆಡಿಸಿದ್ದಾನೆ " ಎಂದು ಹಾಸ್ಯವಾಗಿ ಹೇಳಿದರು.
ಅಜ್ಜನ ಮಾತಲ್ಲಿ ಭರವಸೆ.!
ಅಜ್ಜನ ಮಾತುಗಳಲ್ಲಿ ಕೇವಲ ಸಂತೋಷವಲ್ಲ, ಭರವಸೆಯೂ ಸ್ಪಷ್ಟವಾಗಿತ್ತು. ಇಶಾನ್ ಇತ್ತೀಚಿನ ದಿನಗಳಲ್ಲಿ ಏರಿಳಿತಗಳನ್ನು ಕಂಡಿದ್ದರು. ತಂಡದ ಹೊರಗಿದ್ದ ಸಂದರ್ಭಗಳು, ಗಾಯ ಸಮಸ್ಯೆಗಳು - ಎಲ್ಲವನ್ನೂ ದಾಟಿ ಮತ್ತೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಈ 77 ರನ್ಗಳು ಅವರ ಪುನರಾಗಮನದ ಘೋಷಣೆಯಂತೆಯೇ ಕಂಡವು.
ಮಾನಸಿಕ ದೃಢತೆ ಮುಖ್ಯ.!
ಭಾರತ-ಪಾಕ್ ಪಂದ್ಯಗಳಲ್ಲಿ ಮಾನಸಿಕ ದೃಢತೆ ಬಹಳ ಮುಖ್ಯ. ದೊಡ್ಡ ವೇದಿಕೆ, ಕೋಟಿ ಅಭಿಮಾನಿಗಳ ನಿರೀಕ್ಷೆ, ಪ್ರತಿಯೊಂದು ಶಾಟ್ಗೂ ಬರುವ ಪ್ರತಿಕ್ರಿಯೆ - ಇವೆಲ್ಲವನ್ನು ಸಮತೋಲನಗೊಳಿಸುವುದು ಸುಲಭವಲ್ಲ. ಆದರೆ ಇಶಾನ್ ಈ ಬಾರಿ ಅದನ್ನು ಅತ್ಯಂತ ಜವಾಬ್ಧಾರಿಯುತವಾಗಿ ನಿಭಾಯಿಸಿದರು. ಅವರು ತಾಳ್ಮೆ ಮತ್ತು ಆಕ್ರಮಣಶೀಲತೆ ಎರಡನ್ನೂ ಸಮತೋಲನಗೊಳಿಸಿ, ತಂಡಕ್ಕೆ ಬೇಕಾದ ಸಮಯದಲ್ಲಿ ರನ್ಗಳನ್ನು ಒದಗಿಸಿದ್ದಾರೆ. ಕುಟುಂಬದವರು ಹೇಳುವಂತೆ, ಇದು ಕೇವಲ
ಆರಂಭ ಮಾತ್ರ. ಇಶಾನ್ ಇದೇ ಆತ್ಮವಿಶ್ವಾಸ
ಮತ್ತು ಧೈರ್ಯದಿಂದ ಮುಂದುವರಿದರೆ, ದೀರ್ಘಕಾಲದವರೆಗೆ ತಂಡಕ್ಕೆ ಪಂದ್ಯ ವಿಜೇತನಾಗಿರುತ್ತಾರೆ. ಅವರ ಬ್ಯಾಟ್ ಇನ್ನಷ್ಟು ಮಿಂಚಲಿದೆ ಎಂಬ ನಂಬಿಕೆ ಕುಟುಂಬಕ್ಕೂ, ಅಭಿಮಾನಿಗಳಿಗೂ ಇದೆ.
ಇದು ಬರೀ ಗೆಲುವಿನ ಕಥೆಯಲ್ಲ, ಯುವ ಆಟಗಾರನ ದೃಢತೆ.!
ಪಾಕಿಸ್ತಾನ ವಿರುದ್ಧದ ಈ ಪಂದ್ಯ ಕೇವಲ ಗೆಲುವಿನ ಕಥೆಯಲ್ಲ; ಅದು ಒಬ್ಬ ಯುವ ಆಟಗಾರನ ದೃಢತೆ, ಹೋರಾಟ ಮತ್ತು ಆತ್ಮವಿಶ್ವಾಸದ ಕಥೆ. ಇಶಾನ್ ಕಿಶನ್ 77 ರನ್ಗಳಿಂದ ಮೈದಾನದಲ್ಲಿ ಮಿಂಚಿದಷ್ಟೇ ಅಲ್ಲ, ತಮ್ಮ ಕುಟುಂಬದ ಹೃದಯದಲ್ಲಿ ಹೆಮ್ಮೆ ಮೂಡಿಸಿದರು. ಅವರ ಬ್ಯಾಟ್ ಇನ್ನೂ ಹಲವಾರು ಪಂದ್ಯಗಳಲ್ಲಿ ಇಂತಹ ಕಥೆಗಳನ್ನು ಬರೆಯಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ.
#LATEST #INDIA #T20WC2026 #CRICKET #WONTHEMATCH #RECORDBROKEN









![LATEST #INDIA #TECHNOLOGY #FASTAG #NHAI #GOCASHLESS - ~!]5ப89 E a $ y Cr ui $ e 10 #GoCashLess ~!]5ப89 E a $ y Cr ui $ e 10 #GoCashLess - ShareChat LATEST #INDIA #TECHNOLOGY #FASTAG #NHAI #GOCASHLESS - ~!]5ப89 E a $ y Cr ui $ e 10 #GoCashLess ~!]5ப89 E a $ y Cr ui $ e 10 #GoCashLess - ShareChat](https://cdn4.sharechat.com/bd5223f_s1w/compressed_gm_40_img_111897_2ba30e5c_1771695109580_sc.jpg?tenant=sc&referrer=user-profile-service%2FrequestType50&f=580_sc.jpg)




