ಸ್ವಾತಂತ್ರ್ಯ ಹೋರಾಟಗಾರ, ಕರುನಾಡಿನ ಮೊದಲ ಮುಖ್ಯಮಂತ್ರಿ ಶ್ರೀ ಕೆ.ಸಿ.ರೆಡ್ಡಿ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಕರ್ನಾಟಕ ಏಕೀಕರಣ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ಅಪ್ರತಿಮ ಕೊಡುಗೆಗಳು ಸದಾ ಸ್ಮರಣೀಯ.
#ಕೆ ಸಿ ರೆಡ್ಡಿ
ಕನ್ನಡಿಗರ ವಿಜಯ ದಿನ!
ಕ್ರಿ.ಶ. 618ರಲ್ಲಿ ಬಾದಾಮಿ ಚಾಲುಕ್ಯರ ಅಪ್ರತಿಮ ವೀರ ಇಮ್ಮಡಿ ಪುಲಕೇಶಿಯು ಉತ್ತರ ಭಾರತದ ಸಾಮ್ರಾಟ ಹರ್ಷವರ್ಧನನ್ನು ನರ್ಮದಾ ನದಿಯ ತೀರದಲ್ಲಿ ಸೋಲಿಸಿ, ಅಜೇಯನಾಗಿ ಹೊರಹೊಮ್ಮಿದ ಮಹಾನ್ ದಿನವಿದು. ಈ ಐತಿಹಾಸಿಕ ವಿಜಯದ ಮೂಲಕ 'ದಕ್ಷಿಣ ಪಥೇಶ್ವರ' ಎಂಬ ಬಿರುದು ಧರಿಸಿ ಕನ್ನಡ ನಾಡಿನ ಕೀರ್ತಿಯನ್ನು ಇಡೀ ಭಾರತಕ್ಕೆ ಪಸರಿಸಿದ ನಮ್ಮ ಹೆಮ್ಮೆಯ ಚಕ್ರವರ್ತಿಯ ಶೌರ್ಯಕ್ಕೆ ಕೋಟಿ ನಮನಗಳು. ಚಾಲುಕ್ಯರ ಈ ವಿಜಯದ ನೆನಪು ಪ್ರತಿಯೊಬ್ಬ ಕನ್ನಡಿಗನಲ್ಲೂ ಹೆಮ್ಮೆ ಮತ್ತು ಸ್ಪೂರ್ತಿಯನ್ನು ತುಂಬಲಿ.
#ಕನ್ನಡದ ವಿಜಯ ದಿನ