#🎤ಗಾನ ಕೋಗಿಲೆ ಎಸ್. ಜಾನಕಿ ಅವರ ಜನ್ಮದಿನ❤️ ದಕ್ಷಿಣ ಭಾರತದ ಕೋಗಿಲೆ ಎಂದು ಪ್ರಸಿದ್ಧವಾಗಿರುವ ಹಿನ್ನೆಲೆ ಗಾಯಕಿ ಎಸ್. ಜಾನಕಿ ಆಂಧ್ರದವರು. ತಮ್ಮ ಮೂರನೆಯ ವಯಸ್ಸಿನಲ್ಲೇ ಸಂಗೀತಗಾರ್ತಿಯಾಗುವ ಕನಸು ಕಂಡಿದ್ದ ಅವರನ್ನು ಸ್ವರ ಸಾಮ್ರಾಜ್ಯ ಕೈಬೀಸಿ ಕರೆದಿತ್ತು.ಇಲ್ಲಿಯವರೆಗೆ ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಗೀತೆಗಳಿಗೆ ದನಿಯಾದ ಹಿರಿಮೆ ಇವರದ್ದು. ತನ್ನ ಮಧುರ ಕಂಠದಿಂದಲೇ ಪದ್ಮಭೂಷಣೆಯಾಗಿ ಎಲ್ಲರ ಮನದಲ್ಲಿ ನೆಲೆಯೂರಿರುವ ಎಸ್. ಜಾನಕಿ ಅಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹೇಳುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#📖ವಿಶ್ವ ಪುಸ್ತಕ ದಿನ📘 #ಹಾಸ್ಯದ ಜೀವದ್ರವ್ಯ #ಬೀಚಿ 😂😂🙏🙏🙏
ಮೇಲ್ನೋಟಕ್ಕೆ ಬೀಚಿ ಒಬ್ಬ ಹಾಸ್ಯಗಾರರಂತೆ ಕಂಡರೂ ಬದುಕು ನಗೆಯಷ್ಟು ಸುಲಲಿತವಾಗಿರಲಿಲ್ಲ. ಬದುಕಿನುದ್ದಕ್ಕೂ ಕಷ್ಟ, ಕಹಿ ಅನುಭವಗಳನ್ನೇ ಉಂಡರು. ಹೆತ್ತವರಿಲ್ಲದ ಬಾಲ್ಯ, ನೌಕರಿಗಾಗಿ ಅಲೆದಾಟ, ನೌಕರಿ ಪಡೆದ ಮೇಲೆ ವರ್ಗಾವಣೆಗಳು, ವೈವಾಹಿಕ ಜೀವನದ ಜಂಜಾಟಗಳು… ಹೀಗೆ ಅನೇಕ ಕೋಟಲೆಗಳಿಗೆ ಬೀಚಿ ನಲುಗಿದವರು. ಇಂದು ಅವರ 108ನೇ ಜನ್ಮದಿನ.
ಕನ್ನಡ ಸಾರಸ್ವತ ಲೋಕಕ್ಕೆ ಅದರಲ್ಲೂ ಹಾಸ್ಯ, ವಿಡಂಬನೆ, ಚತುರೋಕ್ತಿಗಳಿಗೆ ಹೊಸ ಬಾಷ್ಯ ಬರೆದವರು ರಾಯಸಂ ಭೀಮಸೇನರಾಯರು. ರಾಯಸಂ ಭೀಮಸೇನರಾಯರು ಎಂದರೆ ಬಹುತೇಕರಿಗೆ ಗೊತ್ತಾಗುವುದಿಲ್ಲ. ಬೀಚಿ, ಬಳ್ಳಾರಿ ಬೀಚಿ ಎಂದರೆ ಎಂಥವರಿಗೂ ಥಟ್ಟನೆ ತಿಳಿದುಬಿಡುತ್ತದೆ.
ಕಾದಂಬರಿಕಾರರಾಗಿ, ವಿಡಂಬನಕಾರರಾಗಿ, ಅಂಕಣಕಾರರಾಗಿ ಜತೆಗೆ ಕವಿಯಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬೀಚಿಯವರು ಜಿಡ್ಡುಗಟ್ಟಿದ ಸಮಾಜವನ್ನು ತಮ್ಮ ವ್ಯಂಗ್ಯ, ಮೊನಚು ಮಾತುಗಳಿಂದ ಚುಚ್ಚಿದ್ದು ಗಮನಾರ್ಹ. ಬದುಕಿನಲ್ಲಿ ಕಂಡದ್ದನ್ನೇ ಬರೆದ, ಬರೆದಂತೆ ಬದುಕಿದ ಕೆಲವೇ ಕೆಲವರಲ್ಲಿ ಇವರೊಬ್ಬರು. ಬದುಕು-ಬರಹಗಳ ನಡುವೆ ಗೋಡೆ ಕಟ್ಟಿಕೊಳ್ಳದೆ ಪಾರದರ್ಶಕತೆ ಮೆರೆದ ಬೀಚಿ ಅಪರೂಪದ ಅಕ್ಷರಪ್ರೇಮಿ.
32 ವರ್ಷ ಪೊಲೀಸ್ ಇಲಾಖೆ ಸೇವೆಯಲ್ಲಿ್ಲ್ದೂ ಪ್ರಾಮಾಣಿಕತೆ, ಸ್ವಾಭಿಮಾನದ ಮೇರು ಪರ್ವತವಾಗಿದ್ದ ಇವರು ಹಚ್ಚಿಕೊಂಡ ಚಟ(ಹವ್ಯಾಸ)ಗಳನ್ನು ಮುಚ್ಚಿಟ್ಟವರಲ್ಲಿ ಅಕ್ಷರವನ್ನು ಪ್ರೀತಿಸಿದಷ್ಟೆ ಗುಂಡು(ಪಾನ) ಪ್ರಿಯರಾಗಿದ್ದರು.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯಲ್ಲಿ ರಾಯಸಂ ಮನೆತನದ ಶ್ರೀನಿವಾಸರಾಯ, ಶ್ರೀಮತಿ ಭಾರತಿಯಮ್ಮರ ಕಿರಿಯ ಮಗನಾಗಿ 23.04.1913ರಲ್ಲಿ ಜನಿಸಿದ ಭೀಮಸೇನರಾಯರು ನಾಡಿಗೆಲ್ಲ ಬೀಚಿ ಎಂದೇ ಪರಿಚಿತ. ಹುಟ್ಟುತ್ತಲೆ ತಂದೆಯನ್ನು ಕಳೆದುಕೊಂಡ ಇವರೊಟ್ಟಿಗೆ ತಾಯಿಯೂ ಬಹುವರ್ಷ ಇರಲಿಲ್ಲ. ಬೀಚಿಯವರಿಗೆ 9 ವರ್ಷ ತುಂಬುವ ಹೊತ್ತಿಗೆ ಕ್ಷಯರೋಗಕ್ಕೆ ತುತ್ತಾದರು. ಬಳಿಕ ಸೋದರಮಾವ ಇವರಿಗೆ ಆಸರೆಯಾದರು.
ಇದೆಲ್ಲಕ್ಕಿಂತ ಹೆಚ್ಚಾಗಿ ಸಿಎ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ಮಗ ನರೇಂದ್ರನನ್ನು ಕಳೆದುಕೊಂಡು ಬೀಚಿಯವರು ಕುಗ್ಗಿ ಹೋದರು. ಗಾಯದ ಮೇಲೆ ಬರೆ ಎಂಬಂತೆ ಹೆಂಡತಿ ಸೀತಾಬಾಯಿ ಮತಿಭ್ರಮಣೆಗೊಳಗಾಗಿ ನಿಂತ ನೆಲ ಅದುರಿದಂತೆ ಮತ್ತಷ್ಟು ಕುಸಿದರು. ಬೀಚಿ ಸಾಮಾನ್ಯರಂತೆ ಬದುಕಿ ತೋರಿಸಿದರು ಕೂಡ. ಸರಳವಾಗಿ, ಹಾಸ್ಯವಾಗಿ ಕಂಡರೂ ಅವರೊಳಗೊಬ್ಬ ದಾರ್ಶನಿಕನಿದ್ದ. ಸಾಹಿತ್ಯ ಲೋಕದ ದಿಗ್ಗಜರಾದ ಕೈಲಾಸಂ, ಅನಕೃ, ಜಿ.ಪಿ.ರಾಜರತ್ನಂ, ಶ್ರೀರಂಗ, ಕೀರ್ತಿನಾಥ ಕುರ್ತಕೋಟಿ, ಶಂ.ಬಾ. ಜೋಷಿಯಂಥವರ ಒಡನಾಟದಲ್ಲಿದ್ದು ಹೊಸಗನ್ನಡ ಸಾಹಿತ್ಯದ ಪ್ರಮುಖರೆನಿಸಿಕೊಂಡರು. ರಾಶಿ, ನಾ.ಕಸ್ತೂರಿ, ನಾಡಿಗೇರ್ ಅವರ ಮಧ್ಯೆ ಬಂದ ಬೀಚಿಯವರ ಹೊಸ ಎಂಟ್ರಿ 1940- 50 ದಶಕಗಳಲ್ಲಿ ಸಾಹಿತ್ಯಕ್ಕೊಂದು ಹೊಸ ಮೆರಗು ತಂತು.
ಸಮಾಜದ ಬದಲಾವಣೆಯನ್ನು ಬಯಸಿದ್ದ ಅವರು ಕೃತಿಗಳಲ್ಲಿ ವ್ಯಂಗ್ಯದ ಮೂಲಕ ಕಟುಸತ್ಯವನ್ನೇ ಹೇಳಿದ್ದಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿನ ಶೋಷಣೆ, ಗಂಡಿನ ಸರ್ವಾಧಿಕಾರ ಧೋರಣೆ, ಭ್ರಷ್ಟಚಾರ, ಲಂಚಗುಳಿತನ, ಅಧಿಕಾರ ಕೇಂದ್ರೀಕೃತ ಮಠಗಳ ವ್ಯವಸ್ಥೆ, ಬದಲಾವಣೆಗೆ ಗೋಡೆಯಂತೆ ಅಡ್ಡಿಯಾಗಿದ್ದ ಜಾತಿ ವ್ಯವಸ್ಥೆಯನ್ನು ಕೃತಿಗಳಲ್ಲಿ ಪಾತ್ರಗಳ ಮೂಲಕ ಕಟುವಾಗಿ ಟೀಕಿಸಿದರು. ಧರ್ಮ, ಧರ್ವಂಧಕಾರ, ಆಷಾಢಭೂತಿಯನ್ನು ಒಪ್ಪದೆ ಮನುಷ್ಯ, ಮನುಷ್ಯನಂತೆ ಬಾಳಬೇಕು ಎಂಬ ಸಂದೇಶ ಸಾರಿದ್ದಾರೆ. ಸಂಪ್ರದಾಯಬದ್ಧ ಆಚರಣೆ ನಂಬದಿದ್ದರೂ ಅವನ್ನು ಗೌರವಿಸುತ್ತಿದ್ದ ಬೀಚಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರೂ ಸಹೃದಯಿಯಾಗಿದ್ದರು.
ಬೀಚಿಯವರ ಹಾಸ್ಯ ಪ್ರಜ್ಞೆ ವಿಭಿನ್ನ. ಇವರು ಉತ್ತಮ ಬರಹಗಾರರಂತೆ ಉತ್ತಮ ಭಾಷಣಕಾರರಾಗಿದ್ದರು. ಮೇಲ್ನೋಟಕ್ಕೆ ಮಾತಾಗಿ ಕಾಣುವ ಪದಗಳಲ್ಲಿ ಒಳಾರ್ಥ ಚಾಟಿಯ ನೋವಿನ ಅನುಭವವನ್ನು ಉಕ್ಕಿಸುತ್ತಿದ್ದವು. ಇವರ ಮನಸ್ಸಿನಲ್ಲಿ ಏನಿತ್ತೋ ಆದರೆ, ಸದಾ ಹಾಸ್ಯ, ವ್ಯಂಗ್ಯ, ವಕ್ರೋಕ್ತಿ, ವಿಡಂಬನೆಯನ್ನೆ ಉಸಿರಾಡಿ ಕನ್ನಡ ಸಾಹಿತ್ಯಕ್ಕೆ ಹೊಸ ಸಿಂಚನ, ಸಂಚಲನ ಮೂಡಿಸಿದರು. ಇವರು ಎಷ್ಟು ಹಾಸ್ಯ ಪ್ರಿಯರಾಗಿದ್ದರೆಂದರೆ ತಮ್ಮ ಮಕ್ಕಳಿಬ್ಬರಿಗೂ ಟ್ರಿಮ್ಮಿ, ಟ್ರಕ್ಕಿ ಎಂದೇ ಕರೆದು ಬದುಕನ್ನು ನಗುತ್ತ ಕಳೆಯಲೆತ್ನಿಸಿದರು.
ಬೀಚಿಯವರಿಗೆ ತಮ್ಮ ಏಳೂವರೆ ದಶಕಗಳ (7.12.1980 ನಿಧನ) ಜೀವನದಲ್ಲಿ ದಕ್ಕಿದ ಸುಖವೆಷ್ಟೊ ಆದರೆ, ಅವರು ಉಣಬಡಿಸಿದ ಸಾಹಿತ್ಯ ರಸಗವಳ ತಿಂದು ತೇಗಿದವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಈಗಲೂ ಬೀಚಿಯವರ ಪುಸ್ತಕಗಳಿಗೆ ಸಾಹಿತ್ಯ ಪ್ರಿಯರು ಹಾತೊರೆಯುವುದುಂಟು. ಈ ಕಾರಣಕ್ಕೆ ಹೇಳಿರಬೇಕು ಹಿರಿಯರು ‘ಕನ್ನಡಕ್ಕೊಬ್ಬರೇ ಕೈಲಾಸಂ, ಹಾಸ್ಯಕ್ಕೊಬ್ಬರೇ ಬೀಚಿ’ಎಂದು. #🎂ಬೀಚಿರವರ ಜನ್ಮದಿನ ನಗು ವಾರದಲ್ಲಿ ಮೂರು ದಿನವಾದರೂ ನಗುತ್ತಾ ಇರಬೇಕು ನಿನ್ನೆ ಇವತ್ತು ಮತ್ತು ನಾಳೆ " ಬೀಚಿರವರ ಮಾತನ್ನು ಕೇಳಿ ನಗುತ್ತಾ ಇರೋಣ ಇವರ ಜನ್ಮದಿನಕ್ಕೆ ನೋವೊಂದು ಶುಭಾಶಯ ಕೋರೋಣ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#📖ವಿಶ್ವ ಪುಸ್ತಕ ದಿನ📘 ಪ್ರತಿ ವರ್ಷದ ಎಪ್ರೀಲ್ ೨೩ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ (ಇದನ್ನು ಅಂತರಾಷ್ಟ್ರೀಯ ಪುಸ್ತಕ ದಿನ ಎಂದೂ ಕರೆಯುತ್ತಾರೆ). ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (ಯುನೆಸ್ಕೋ) 1995ರಲ್ಲಿ ಮೊದಲ ಬಾರಿಗೆ ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಅರಿವು ಮತ್ತು ಪ್ರಚಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಂಡಿತು. ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುನೇಸ್ಕೊ ಯುವಜನತೆಯಲ್ಲಿ ಪುಸ್ತಕ ಪ್ರೇಮ, ಓದಿನ ಖುಷಿ ಅಥವಾ ಗಮ್ಮತ್ತು ಹೆಚ್ಚಿಸುವ ಮತ್ತು ಉತ್ತಮ ಲೇಖಕನ್ನು ಗೌರವಿಸುವ ಹಂಬಲ ಹೊಂದಿದೆ. ನೂರಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ವಿಶ್ವಾದ್ಯಂತ ಅನೇಕಾನೇಕ ಪುಸ್ತಕ ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು, ಗ್ರಂಥಾಲಯಗಳು, ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳು, ಸಾಂಸ್ಕೃತಿಕ ಸಂಘಟನೆಗಳು ಮತ್ತು ಸಾಹಿತ್ಯ ವೇದಿಕೆಗಳು ಈ ದಿನಾಚಾರಣೆಯಲ್ಲಿ ಭಾಗವಹಿಸಿ ಪುಸ್ತಕ ಮತ್ತು ಓದುವಿಕೆಯ ಮಹತ್ವ ಸಾರಲಿವೆ. ಈ ದಿನದಂದು ವಿಲಿಯಮ್ ಶೆಕ್ಸ್ಪಿಯರ್ ರವರ ಪುಣ್ಯತಿಥಿಯನ್ನೂ ಸಹ ಆಚರಿಸುವರು. ಬಹು ಮುಖ್ಯ ವಿದ್ಯೆ ತಲೆಬಾಗಿ ಪುಸ್ತಕವನ್ನು ನೋಡು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ ಪುಸ್ತಕ ವಿದ್ಯೆ ಎಂದು ಕಳ್ಳರ ಪಾಲಾಗುವುದಿಲ್ಲ ಅದು ನಮ್ಮ ಪಾಳೆ ಬೋಧಿಸಿದರೆ ಮಾತ್ರ ನಮ್ಮ ವಿದ್ಯೆ ನಮ್ಮನ್ನು ಹೆಚ್ಚಿಸುತ್ತದೆ ದಿನದಲ್ಲಿ ಒಂದು ತಾಸಾದರೂ ಓದುವುದರ ಕಡೆಗೆ ಗಮನ ಕೊಡಿ ನನ್ನ ಸ್ನೇಹಿತರೇ ನನ್ನೆಲ್ಲಾ ಸ್ನೇಹಿತರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#☀️ಹ್ಯಾಪಿ ಸಮ್ಮರ್🌴🤩 ಮಹಾತ್ಮ ಗಾಂಧಿ ಅವರ ಹೋರಾಟದ ಬದುಕಿನ
ಹಿಂದಿನ ಸ್ತ್ರೀಶಕ್ತಿಯಾಗಿ,ಅವರ ಎಲ್ಲ ಪ್ರಯೋಗಳಿಗೆ ಮೊದಲು ತನ್ನನ್ನು ಒಡ್ಡಿಕೊಂಡು,ತಾಳ್ಮೆಯಿಂದ ಸಹಿಸಿಕೊಂಡು, ಕುಟುಂಬದ ಸರ್ವಭಾರವನ್ನು ಹೊತ್ತುಕೊಂಡುಗಾಂಧೀಜಿ ಎಂಬ ರಾಷ್ಟ್ರಪಿತನನ್ನು ಜಗತ್ತಿಗೆ ನೀಡಿದವರು ಕಸ್ತೂರ್ ಬಾ.ಈ ನಿಸ್ವಾರ್ಥ ಜೀವವನ್ನು ಅವರ ಜನ್ಮದಿನದಂದು ಗೌರವದಿಂದ ಸ್ಮರಿಸೋಣ. ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#☀️ಹ್ಯಾಪಿ ಸಮ್ಮರ್🌴🤩 ಸಮಾಜ ಸುಧಾರಕರು ಸತ್ಯಶೋಧಕ ಸಮಾಜದ ಸಂಸ್ಥಾಪಕರು ರೈತರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಜಯಂತಿಯಂದು ಭಾವಪೂರ್ಣ ನಮನಗಳು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಲು ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟ ಇವರು ಸದಾ ಸ್ಮರಣೀಯರು. ಎನ್ನುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🌸🙏 ಸಂಕಷ್ಟ ಚತುರ್ಥಿ 🙏🌸 ಸ್ನೇಹಿತರೆ ಇಂದು ರಾಷ್ಟ್ರೀಯ ಕಡಲು ದಿನ ಹಡಗು ನಿರ್ಮಾಣದಿಂದ ಬಂದರು ಮೂಲ ಸೌಕರ್ಯದವರೆಗೆ, ನಮ್ಮ ಕಡಲ ಉದ್ಯಮವು ವಿಕಸನಗೊಳ್ಳುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿದೆ. ರಾಷ್ಟ್ರೀಯ ಕಡಲ ದಿನದಂದು, ನಮ್ಮ ಕರಾವಳಿ ನೀರು ಮತ್ತು ಕಡಲ ಸ್ವತ್ತುಗಳನ್ನು ರಕ್ಷಿಸಲು ಕಡಲ ಸುರಕ್ಷತೆ ಮತ್ತು ಭದ್ರತಾ ಕ್ರಮಗಳನ್ನು ಹೆಚ್ಚಿಸುವ ನಮ್ಮ ಕಡಲ ಪಡೆಗಳಿಗೆ ರಾಷ್ಟ್ರೀಯ ಕಡಲ ದಿನದ ಶುಭಾಶಯಗಳು. ನನ್ನೆಲ್ಲಾ ಪ್ರೀತಿಯ ಕಡಲು ನಂಬಿ ಜೀವಿಸುತ್ತಿರುವ ಮತ್ತು ಕಡಲನ್ನೇ ತನ್ನ
ಒಡನಾಡಿಯಾಗಿಸಿಕೊಂಡಿರುವ ಸಮಸ್ತ ಜನತೆಗೆ ಈ ದಿನದ ಶುಭಾಶಯ ಕೋರುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🌸🙏 ಸಂಕಷ್ಟ ಚತುರ್ಥಿ 🙏🌸 ಕನ್ನಡ ಸಾಹಿತ್ಯ ಲೋಕದ ಒಂಟಿಸಲಗ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸವಿ ನೆನಪಿನಲ್ಲಿ.. ತೇಜಸ್ವಿಯವರು ನಮ್ಮನ್ನಗಲಿ ಇಂದಿಗೆ 17 ವರ್ಷಗಳಾದವು ಈ ದಿನ ನನ್ನ ಮಲೆನಾಡಿನ ಮಾಣಿಕ್ಯ ಕನ್ನಡ ಸಾಹಿತ್ಯ ಲೋಕದ ಶಕ್ತಿ ಮಲೆನಾಡಿನ ಪ್ರೀತಿಯ ಸಾಧಕರಾಧಾ ಪೂರ್ಣಚಂದ್ರ ತೇಜಸ್ವಿಯವರ ತೇಜಸ್ಸು ಕರ್ನಾಟಕದಲ್ಲಿ ಡೇ ಹರಡಲಿ ಅವರು ಹೇಳಿದಂತೆ ಯುವಕರ ಬದುಕು ಹಸಿರು ತೋಟದ ಅಂತಾಗಲಿ ಎನ್ನುತ್ತಾ ಅವರ ಪುಣ್ಯಸ್ಮರಣೆಯ ದಿನದಂದು ನಾವೆಲ್ಲರೂ ಅವರನ್ನು ಸ್ಮರಿಸೋಣ ಅವರಿಗೆ ನಮ್ಮ ಗೌರವಪೂರ್ವಕ ನಮನ ಸಲ್ಲಿಸೋಣ ಎನ್ನುತ್ತಾ #ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🌸🙏 ಸಂಕಷ್ಟ ಚತುರ್ಥಿ 🙏🌸 ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಹಸಿರು ಕ್ರಾಂತಿಯ ಹರಿಕಾರರು, ಮಾಜಿ ಉಪ ಪ್ರಧಾನಮಂತ್ರಿಗಳಾದ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.ತಮ್ಮ ಜೀವನದುದ್ದಕ್ಕೂ ರೈತರು, ಕಾರ್ಮಿಕರು ಮತ್ತು ಅಂಚಿನಲ್ಲಿರುವ ಸಮುದಾಯಗಳ ಪರವಾಗಿ ಹೋರಾಡಿದ ಇವರು ಸದಾ ಸ್ಮರಣೀಯರು. ಇವರ ಸಾಧನೆಯನ್ನು ನಾವು ಸೋರಿಸೋಣ ಎಂದು ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
#🙏🛕 ಹನುಮ ಜಯಂತಿಯ ಶುಭಾಶಯಗಳು🛕🙏 ಕಲಿತ ವಿದ್ಯೆಯನ್ನು ಹಿಂದಿನ ಪರಂಪರೆಯನ್ನು ಹಾಗೂ ದೇಶದ ಜನರ ಬಾಂಧವ್ಯವನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಕಸಿಯಲು ಪ್ರಯತ್ನಿಸುವವರು ಹುಟ್ಟುತ್ತಿರುತ್ತಾರೆ ಸಾಯುತ್ತಿರುತ್ತಾರೆ ಆ ಹುಟ್ಟು ಸಾವಿನ ನಡುವೆ ವಿಷ ಬೀಜ ಬಿತ್ತುತ್ತಿರುತ್ತಾರೆ ಅದಕ್ಕೆ ಗಮನಹರಿಸಬೇಡಿ ಕಲಿಯುವ ವಿದ್ಯೆಯ ಕಡೆ ಗಮನಹರಿಸಿ ಹಿಂದಿನ ಪರಂಪರೆಯನ್ನು ಮರೆಯಬೇಡಿ ದೇಶದ ಜನರ ಬಾಂಧವ್ಯವನ್ನು ಮುರಿದು ಹಾಕಿಕೊಳ್ಳಬೇಡಿ ನಮ್ಮ ಈ ರಾಷ್ಟ್ರ ಋಣ ತೀರಿಸೋಣ ಸ್ನೇಹದಿಂದ ಪ್ರೀತಿಯಿಂದ ಬಾಂಧವ್ಯದಿಂದ ದೇಶ ಕಟ್ಟೋಣ ದ್ವೇಷವನ್ನಲ್ಲ ಉಜ್ವಲ ದಿನಗಳು ನಮ್ಮದಾಗಲಿ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್
ನಾಡಿನ ಸಮಸ್ತ ಜನತೆಗೆ ಬೆಂಗಳೂರು ಕರಗ ಮಹೋತ್ಸವದ ಶುಭಾಶಯಗಳು
ನಮ್ಮ ಹೆಮ್ಮೆಯ ಬೆಂಗಳೂರಿನ ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕವಾದ ವಿಶ್ವವಿಖ್ಯಾತ ಐತಿಹಾಸಿಕ ಬೆಂಗಳೂರು ಕರಗ ಉತ್ಸವದ ಹಾರ್ದಿಕ ಶುಭಾಶಯಗಳು ಆದಿಶಕ್ತಿ ದ್ರೌಪದಮ್ಮನ ಆಶೀರ್ವಾದದೊಂದಿಗೆ ನಾಡಿನಲ್ಲಿ ಶಾಂತಿ ಸಮೃದ್ಧಿ ಮತ್ತು ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ ನಮ್ಮ ಭವ್ಯ ಪರಂಪರೆಯನ್ನು ಎತ್ತಿ ಹಿಡಿಯುವ ಈ ಸಾಂಸ್ಕೃತಿಕ ಹಬ್ಬವು ಎಲ್ಲರ ಬಾಳಿನಲ್ಲಿ ಹರ್ಷವನ್ನು ತರಲಿ ಎಂದು ಆದಿಶಕ್ತಿ ದ್ರೌಪದಮ್ಮನ ಪ್ರಾರ್ಥಿಸುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್ #Bangalore Bangalore City Congress Committee.
#Karaga #Bangalore #Karnataka #💐ಬುಧವಾರದ ಶುಭಾಶಯ












