ಕಾಯಕವೇ ಕೈಲಾಸ..
ShareChat
click to see wallet page
@76865063
76865063
ಕಾಯಕವೇ ಕೈಲಾಸ..
@76865063
ದಯವೇ ಧರ್ಮದ ಮೂಲವಯ್ಯಾ.. ದೇಹವೇ ದೇಗುಲ.. ಅರಿವೇ ಗುರು..
ವಿಶ್ವಗುರು ಬಸವಣ್ಣನವರ ವಚನ.. #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ಶರಣ ನಿದ್ರೆಗೈದಡೆ ಜಪ ಕಾಣಿರೊ  ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ; ಶರಣ ನಡೆದುದೆ ಪಾವನ ಕಾಣಿರೊ; ಶರಣ ನುಡಿದುದೆ ಶಿವತತ್ವ ಕಾಣಿರೊ  ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ ಶರಣ ನಿದ್ರೆಗೈದಡೆ ಜಪ ಕಾಣಿರೊ  ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ; ಶರಣ ನಡೆದುದೆ ಪಾವನ ಕಾಣಿರೊ; ಶರಣ ನುಡಿದುದೆ ಶಿವತತ್ವ ಕಾಣಿರೊ  ಕೂಡಲಸಂಗನ ಶರಣನ ಕಾಯವೆ ಕೈಲಾಸ ಕಾಣಿರೊ - ShareChat
"ಮುಂಡದಲ್ಲಿ ತಿರುಗುವವರು ಕೋಟ್ಯಾನುಕೋಟಿ: ತಲೆಯಲ್ಲಿ ತಿರುಗುವವರನಾರನೂ ಕಾಣೆ, ಅಂಗದಲ್ಲಿಪ್ಪ ಮಲೀನವ ಕಳೆವರು ಕೋಟ್ಯಾನುಕೋಟಿ: ಮನದಲ್ಲಿಪ್ಪ ಮಲೀನವ ಕಳೆವವರನಾರನೂ ಕಾಣೆ ಅಮುಗೇಶ್ವರಾ.. ✍️ ಅಮುಗೆ ರಾಯಮ್ಮನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - అముగిరయమ అముగిరయమ - ShareChat
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ; ಸತ್ಯಶುದ್ಧವಿಲ್ಲದುದು ಕಾಯಕವಲ್ಲ; ಆಸೆಯೆಂಬುದು ಭವದ ಬೀಜ; ನಿರಾಸೆಯೆಂಬುದು ನಿತ್ಯ ಮುಕ್ತಿ, ಉರಿಲಿಂಗಪೆದ್ದಿಗಳ ರಸನಲ್ಲಿ ಸದರವಲ್ಲ ಕಾಣವ್ವ.. ✍️ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಯವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ಉboonaand ವನ್ನಿಕಾಳನವ ಉboonaand ವನ್ನಿಕಾಳನವ - ShareChat
ವೀರಮಾತೆ ಅಕ್ಕ ನಾಗಲಾಂಬಿಕೆ (ನಾಗಮ್ಮ) (ಬಸವಣ್ಣನವರ ಹಿರಿಯ ಸಹೋದರಿ/ ಚೆನ್ನಬಸವಣ್ಣನವರ ಮಾತೋಶ್ರೀ) ಯವರು.. #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಕ್ರಾಂತಿಗಂಗೋತ್ರಿ ವೀರಮಾತೆ ನಾಗಲಾಂಬಿಕೆ ೩ ನಾಗಮ್ಮ-ನಾಗಲಾಂಜಕೆ-ಅಕ್ಕನಾಗಮ್ಮ-ಅಕ್ಕನಾಗಲಾಂಜಕೆ' -ಶಿವದೇವ(ಶಿವಸ್ವಾಮಿ)  ತಂದೆ-ಮಾದರಸ ಪತಿ యి-మోదెలాంఎిక: విజయమం జెల్లి ಊರು-ಇಂಗಳೀಶ್ವರ ಬಾಗೇವಾಡಿ; ಉಂತ್ತರಕೋಲಪೀಪರ್ದೊರಯಶೀತ್ತಗಕೂಡಲಸಂವವನಾದುಂಳವೇವ-ಕ್ಲ್ಯಣಚದ್ದುಕಂಗಯ್ಯ ನ ಕಾಯಕ_ಮಹಾಮನೆಯ ಕಾರ್ಯಕೇತ್ರ-ಕೂಡಲಸಂಗವು-ಮಂಗಳವೇಥೆ-ಕಲಯಾಣ_-ಉಳವ ಜೊಯಿಡಾ ತಾಲ್ಲೂಕು, ಲಿಂಗೈಕ್ಯಸಮಾಧಿಸ್ಥಳ-ಎಣ್ಣಿಹೊಳಿ ಶೀರದ ತರಿಕೆರೆ; ಶಿವಮೊಗ್ಗ ಜಿಲ್ಲೆ ಪೂರ್ವಾಶ್ರಮ-ಆಗಮಿಕ ಶೈವಬ್ರಾಹ್ಮಣ ನಚನ ೨ Ejoajod ಮನದೊಡೆಯ ಮಹಾದೇವ ಮನವ ನೋಡಿಹನೆಂದು ಮನಜರ ಒಂದೊಂದ ನುಣಿಸುವನು ಇದಕ್ಕೆ ಕತನಳಿಸದಿರು ಮನವೆ, ಕಾತಲಿಸದರು ತನುವ ನಿಶ್ಚಿಂತನಾನರು ಮನವೆ   ಬಸನಣಲಿಯ ಜೆನ್ನಸಂಗಯ್ಯನು ` ನಿಐವ ಮರೆಯದಿರು ತಂಡa, ಬಿಟ್ಟದನಿತಪರಾದವನು ` ಬೊಟ್ಟನಲ್ಲಿ ತೊಡೆವನು ` ಒ೦ದು ಅರಿವನಕರದಾರತಿ ಅಬಸವಣ್ಕಾ; ನೀವು ಮರ್ತ್ಯಕ್ಕೆ ಬಂದುನಿಂದಲ್ಲಿ ಭಕ್ತಿಯ ಬೆಳಎಗೆ ದೆಸೆದೆಸೆಗೆ ಪಸರಿಸಿತಲಲಾ" ಆಮರದಣಂಗರ ರಾಯಕ uತದ್ಶ೯ನ ಶರಣಸುವ ೩ ಕ್ರಾಂತಿಗಂಗೋತ್ರಿ ವೀರಮಾತೆ ನಾಗಲಾಂಬಿಕೆ ೩ ನಾಗಮ್ಮ-ನಾಗಲಾಂಜಕೆ-ಅಕ್ಕನಾಗಮ್ಮ-ಅಕ್ಕನಾಗಲಾಂಜಕೆ' -ಶಿವದೇವ(ಶಿವಸ್ವಾಮಿ)  ತಂದೆ-ಮಾದರಸ ಪತಿ యి-మోదెలాంఎిక: విజయమం జెల్లి ಊರು-ಇಂಗಳೀಶ್ವರ ಬಾಗೇವಾಡಿ; ಉಂತ್ತರಕೋಲಪೀಪರ್ದೊರಯಶೀತ್ತಗಕೂಡಲಸಂವವನಾದುಂಳವೇವ-ಕ್ಲ್ಯಣಚದ್ದುಕಂಗಯ್ಯ ನ ಕಾಯಕ_ಮಹಾಮನೆಯ ಕಾರ್ಯಕೇತ್ರ-ಕೂಡಲಸಂಗವು-ಮಂಗಳವೇಥೆ-ಕಲಯಾಣ_-ಉಳವ ಜೊಯಿಡಾ ತಾಲ್ಲೂಕು, ಲಿಂಗೈಕ್ಯಸಮಾಧಿಸ್ಥಳ-ಎಣ್ಣಿಹೊಳಿ ಶೀರದ ತರಿಕೆರೆ; ಶಿವಮೊಗ್ಗ ಜಿಲ್ಲೆ ಪೂರ್ವಾಶ್ರಮ-ಆಗಮಿಕ ಶೈವಬ್ರಾಹ್ಮಣ ನಚನ ೨ Ejoajod ಮನದೊಡೆಯ ಮಹಾದೇವ ಮನವ ನೋಡಿಹನೆಂದು ಮನಜರ ಒಂದೊಂದ ನುಣಿಸುವನು ಇದಕ್ಕೆ ಕತನಳಿಸದಿರು ಮನವೆ, ಕಾತಲಿಸದರು ತನುವ ನಿಶ್ಚಿಂತನಾನರು ಮನವೆ   ಬಸನಣಲಿಯ ಜೆನ್ನಸಂಗಯ್ಯನು ` ನಿಐವ ಮರೆಯದಿರು ತಂಡa, ಬಿಟ್ಟದನಿತಪರಾದವನು ` ಬೊಟ್ಟನಲ್ಲಿ ತೊಡೆವನು ` ಒ೦ದು ಅರಿವನಕರದಾರತಿ ಅಬಸವಣ್ಕಾ; ನೀವು ಮರ್ತ್ಯಕ್ಕೆ ಬಂದುನಿಂದಲ್ಲಿ ಭಕ್ತಿಯ ಬೆಳಎಗೆ ದೆಸೆದೆಸೆಗೆ ಪಸರಿಸಿತಲಲಾ" ಆಮರದಣಂಗರ ರಾಯಕ uತದ್ಶ೯ನ ಶರಣಸುವ ೩ - ShareChat
"ಶರಣ ಶರಣನ ಕಂಡು, 'ಶರಣು' ಎಂದು ಕರವ ಮುಗಿವುದೆ ಭಕ್ತಿಲಕ್ಷಣ. ಶರಣ ಶರಣನ ಕಂಡು, ಪಾದವಿಡಿದು ವಂದಿಸುವುದೆ ಭಕ್ತಿಲಕ್ಷಣ. ಶರಣ ಚರಣವ ಪಿಡಿಯದೆ ಕಂಡೂ ಕಾಣದೆ ಪೋದನಾದಡೆ ಕೂಡಲಚೆನ್ನಸಂಗನ ಶರಣರು ಮನ್ನಿಸರಯ್ಯಾ. ==================. ಶಿವನಿಗೈದು ಮುಖ, ಭಕ್ತನಿಗೈದು ಮುಖ. ಆವುವಾವುವೆಂದರೆ: ಗುರುವೊಂದು ಮುಖ, ಲಿಂಗವೊಂದು ಮುಖ, ಜಂಗಮವೊಂದು ಮುಖ, ಪಾದೋದಕವೊಂದು ಮುಖ, ಪ್ರಸಾದವೊಂದು ಮುಖ. ಇಂತೀ ಪಂಚಮುಖವನರಿಯದ ವೇಶಿ, ದಾಸಿ, ಸುಂಕಿಗ, ಮಣಿಹಗಾರ, ವಿದ್ಯಾವಂತ ಇಂತೀ ಐವರಿಗೆ ಲಿಂಗವ ಕಟ್ಟಿದಡೆ ಗುಡಿಯ ಮುಂದಣ ಶೃಂಗಾರದ ಗಂಟೆ, ಎಮ್ಮೆಯ ಕೊರಳಗಂಟೆ ಕೊಟ್ಟಿಯ ಮೆಳೆಯೊಳಗೆ ಇಟ್ಟು ಸಿಕ್ಕಿದ ಕಲ್ಲು! ಲಿಂಗ ವಿಭೂತಿ ರುದ್ರಾಕ್ಷಿ ಇವ ಮಾರಾಟಕ್ಕೆ ಹೇರಿಕೊಂಡು ತಿರುಗುವ ಎತ್ತು ಕತ್ತೆಗೆ ಮುಕ್ತಿಯುಂಟೆ??? ಕೂಡಲಚೆನ್ನಸಂಗಮದೇವಾ.. ✍️ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ವಚನಗಳು.. ಶರಣು ಶರಣಾರ್ಥಿಗಳು 🙏 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - 1ವಐ rod ಬkes 1ವಐ rod ಬkes - ShareChat
"ಬಸವಣ್ಣ ಮರ್ಥ್ಯ ಲೋಕಕ್ಕೆ ಬಂದು ಮಹಾಮನೆಯ ಕಟ್ಟಿ. ಭಕ್ತಿ ಜ್ಞಾನವೆಂಬ ಜ್ಯೋತಿಯನೆತ್ತಿ ತೋರಲು ಸುಜ್ಞಾನವೆಂಬ ಪ್ರಭೆ ಪಸರಿತಯ್ಯಾ ಜಗದೊಳಗೆ ಬೆಳಗಿನೊಳಗೆ ತಿಳಿದು ನೋಡಿ ಹರೆದಿದ್ದ ಶಿವಗಣಂಗಳೆಲ್ಲನೆರೆದು ಕುಡಿತ್ತಯ್ಯಾ ಕೂಡಲ ಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣನ ಕೃಪೆಯಿಂದ ಪ್ರಭುದೇವರ ನಿಜವನರಿದು ನಿಶ್ಚಿಂತರಾದರಯ್ಯಾ ಶಿವಗಣಂಗಳೆಲ್ಲರು.. ✍️ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಜ್ಞಾನಭಂಡಾರಿ ಚನ್ನಬಸವಣ್ಣನವರು " ಶರಣ ಜ್ಞಾನಭಂಡಾರಿ ಚನ್ನಬಸವಣ್ಣನವರು " ಶರಣ - ShareChat
ಶ್ರೀ ಗುರು ಬಸವ ಲಿಂಗಾಯನಮಃ.. "ಅರ್ಥ ಪ್ರಾಣವ ಕೊಟ್ಟಲ್ಲಿ, ಅಪಮಾನಕ್ಕೆ ಮುಚ್ಚಳನಿಕ್ಕುವ ಲೆಂಕನುಂಟೆ ಅಯ್ಯಾ??? ತಲೆಯ ಮಾರಿದವಂಗೆ ಕಣ್ಣು ಹೊರಗಾದುದುಂಟೆ??? ಭಕ್ತನಾದಲ್ಲಿ ಸತ್ಯ ಬೇಕಾದಡೆ, ಅರ್ಥ ಪ್ರಾಣ ಅಪಮಾನಕ್ಕೆ ಹೊರಗಾಗಬೇಕು. ಈಶಾನ್ಯಮೂರ್ತಿ ಮಲ್ಲಿಕಾರ್ಜುನ ಲಿಂಗವನರಿವುದಕ್ಕೆ.. ✍️ ಶಿವಲೆಂಕ ಮಂಚಣ್ಣ ನವರ ವಚನ.. ಶರಣು ಶರಣಾರ್ಥಿಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ಶಿವಲೆಂಕ ಮಂಚಣ ಶಿವಲೆಂಕ ಮಂಚಣ - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ಲಿಂಗವ ಧ್ಯಾನಿಸುವನ ಅಂಗ ಕೈಲಾಸದ ರಾಜ್ಯಾಂಗಣ ಕಾಣಿರೊ. ಲಿಂಗವ ನೋಡುವ ಕಂಗಳು ಪರಮಾತ್ಮನಿದಿರಲಿ ಕಟ್ಟಿಹ ನಿಲವುಗನ್ನಡಿ ಕಾಣಿರೊ. ಲಿಂಗವ ಕೊಂಡಾಡುವನ ಜಿಹ್ವೆ ಕೈಲಾಸದಲ್ಲಿ ಸಾರುವ ಪಾರಿಗಂಟೆ ಕಾಣಿರೊ ಲಿಂಗದ ಶ್ರುತಿಯ ಕೇಳುವನ [ಕಿವಿ] ಮಾಣಿಕ ಮುತ್ತಂ ಮುಚ್ಚಿಡುವ ಕರಡಿಗೆ ಕಾಣಿರೊ. ಲಿಂಗವ ಮುಟ್ಟಿ ಪೂಜಿಸಿದವನ ಹಸ್ತ ಸುಹಸ್ತ ಕಾಣಿರೊ. ಇಂತೀ ಲಿಂಗಾಂಗಸಂಗಮರಸದಲ್ಲಿಪ್ಪ ಶರಣಂಗೆ ಅಂಗವಿಕಾರವುಂಟೇನಯ್ಯಾ??? ಭೂತ ಸೋಂಕಿದ ಮೇಲೆ ಆತ್ಮನಗುಣ ಉಂಟೇನಯ್ಯಾ??? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಲಿಂಗ ಸೋಂಕಿದ ಮೇಲೆ ಅಂಗಗುಣವುಂಟೇನಯ್ಯಾ??? ✍🏻ಹೇಮಗಲ್ಲ ಹಂಪನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿ ಗಳು 🙏🏻 #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು
ಬಸವಣ್ಣನವರ ವಚನಗಳು - ಹೇಮಗಲ್ಲ ಹಂಪ  ಹೇಮಗಲ್ಲ ಹಂಪ - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ಹಳ್ಳ ಮೇರೆದಪ್ಪಿದರೆ ಇಳಿವುದು, ಹೊಳೆ ಮೇರೆದಪ್ಪಿದರೆ ಇಳಿವುದು, ಸಮುದ್ರ ಮೇರೆದಪ್ಪಿದರೆ ಇಳಿವುದು. ಮನ ಮೇರೆದಪ್ಪಿದರೆ ಏರಿ ಇಳಿದು ಕಾಡುತ್ತಿದೆ. ಅದು ಎಂತೆಂದರೆ : ಹಳ್ಳ ಮೇರೆದಪ್ಪಿದರೆ ಸಂಗಡ ಕಾಯಿಯಿಂದ ನಡೆವುದು. ಹೊಳೆ ಮೇರೆದಪ್ಪಿದರೆ ಹರುಗೋಲು ನಡೆವುದು. ಸಮುದ್ರ ಮೇರೆದಪ್ಪಿದರೆ ಭೈತ್ರ ನಡೆವುದು. ಮನ ಮೇರೆದಪ್ಪಿದರೆ ಎನ್ನ ಕೊಂಡು ಮುಳುಗಿತ್ತು. ಈ ಮನ ವೇದ ಶಾಸ್ತ್ರ ಆಗಮದ ಕಟ್ಟಳೆಗೆ ನಿಲ್ಲುವುದೆ? ನಿಲ್ಲದು. ಓದುವುದು ಮನ, ಹೇಳುವುದು ಮನ, ಕೇಳುವುದು ಮನ, ಕೇಳಿ ನರಕಕ್ಕಿಳಿವುದು ಕೆಡುವುದು ಮನ. ಈ ಮನದಂದುಗದ ದಾಳಿಯಲ್ಲಿ ನೊಂದು ಬೆಂದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.. ✍🏻 ಹೇಮಗಲ್ಲ ಹಂಪನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿ ಗಳು 🙏 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ೩೫ ಗರಬನವ ಅವ3ಯುನಮುa ೩೫ ಗರಬನವ ಅವ3ಯುನಮುa - ShareChat
ಶ್ರೀ ಗುರು ಬಸವ ಲಿಂಗಾಯ ನಮಃ.. "ಬಡವನೆಡವಿ ಧನಕಂಡಂತೆ, ಭವಪಡುವನ ಕರದೊಳು ಮೃಡಮೂರ್ತಿಲಿಂಗವ ಕಂಡೆನಲ್ಲ | ಬಿಡದೆ ಅರಸುವ ಬಳ್ಳಿ ಕಾಲತೊಡರಿ ಬಂದಂತೆ ಭವಭವಾಂತರದಲರಸಿದರೂ ಕಾಣದ ಕಾಲಸಂಹರದೊಡೆಯನ ಕಂಡೆನಲ್ಲ ಎನ್ನ ಕರದೊಳು ! ವೇದಾತೀತ ನಿರಂಜನನೆಂಬ ಲಿಂಗವ ಕಂಡೆನಲ್ಲ ಎನ್ನ ಕರದೊಳು ! ಹರಿಯಜರ ಮಧ್ಯದಲ್ಲಿ ಉರಿವುತಿಹ ಪರಂಜ್ಯೋತಿಲಿಂಗನ ಕಂಡೆನಲ್ಲ ಎನ್ನ ಕರದೊಳು ! ಕಂಡು ಕಂಡು ಬಿಡಲಾರದ ಸುವಸ್ತುವ ಕಂಡೆನಲ್ಲ ಎನ್ನ ಕರದೊಳು. ಆಹಾ ಎನ್ನ ಪುಣ್ಯವೆ ! ಆಹಾ ಎನ್ನ ಭಾಗ್ಯವೆ ! ಆಹಾ ಎನ್ನ ಪ್ರಾಣದ ನಲ್ಲನೆಂಬ ಪರಮಾತ್ಮಲಿಂಗವನಪ್ಪಿ ಅಗಲದಂತೆ ಮಾಡು ಕಂಡ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.. ✍🏻 ಹೇಮಗಲ್ಲ ಹಂಪನವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
ಬಸವಾದಿ ಶರಣ ಶರಣೆಯರು - ShareChat