Edu ವೀರ
ShareChat
click to see wallet page
@edu_veera
edu_veera
Edu ವೀರ
@edu_veera
Edu ವೀರ
. #🥹ಖ್ಯಾತ ನಿರ್ಮಾಪಕ ಪುತ್ರ ನಿಧನ, ಮದುವೆ ಆಗಬೇಕಿದ್ದ ಯುವಕ ಮಸಣಕ್ಕೆ
🥹ಖ್ಯಾತ ನಿರ್ಮಾಪಕ ಪುತ್ರ ನಿಧನ, ಮದುವೆ ಆಗಬೇಕಿದ್ದ ಯುವಕ ಮಸಣಕ್ಕೆ - ShareChat
. #🥹ಖ್ಯಾತ ನಿರ್ಮಾಪಕ ಪುತ್ರ ನಿಧನ, ಮದುವೆ ಆಗಬೇಕಿದ್ದ ಯುವಕ ಮಸಣಕ್ಕೆ
🥹ಖ್ಯಾತ ನಿರ್ಮಾಪಕ ಪುತ್ರ ನಿಧನ, ಮದುವೆ ಆಗಬೇಕಿದ್ದ ಯುವಕ ಮಸಣಕ್ಕೆ - ಬಾ ಮಾ ಹರೀಶ್ ಪುತ್ರ ಉಲ್ಲಾಸ್ ಗೌಡ ಬಾ ಮಾ ಹರೀಶ್ ಪುತ್ರ ಉಲ್ಲಾಸ್ ಗೌಡ - ShareChat
. #👑ನಾಡಪ್ರಭು ಕೆಂಪೇಗೌಡರ ಜಯಂತಿ😇
👑ನಾಡಪ್ರಭು ಕೆಂಪೇಗೌಡರ ಜಯಂತಿ😇 - ಬೆಂಗಳಾರು ನಿರ್ಮಾಶೃ ನಾಡಪ್ರ ಕಂಪೆೇಗೌಡರವರೆ ಜಯಂತಿಯ ಶುಭಾಶಯಗಳು ಬೆಂಗಳಾರು ನಿರ್ಮಾಶೃ ನಾಡಪ್ರ ಕಂಪೆೇಗೌಡರವರೆ ಜಯಂತಿಯ ಶುಭಾಶಯಗಳು - ShareChat
. #👰ಖ್ಯಾತ ಕಿರುತೆರೆಯ ನಟಿಯ ಮನೆಯಲ್ಲಿ ಅದ್ದೂರಿ ಮದುವೆ ಸಂಭ್ರಮ!💐
👰ಖ್ಯಾತ ಕಿರುತೆರೆಯ ನಟಿಯ ಮನೆಯಲ್ಲಿ ಅದ್ದೂರಿ ಮದುವೆ ಸಂಭ್ರಮ!💐 - Cmcsh Cmcsh - ShareChat
. #👰ಖ್ಯಾತ ಕಿರುತೆರೆಯ ನಟಿಯ ಮನೆಯಲ್ಲಿ ಅದ್ದೂರಿ ಮದುವೆ ಸಂಭ್ರಮ!💐
👰ಖ್ಯಾತ ಕಿರುತೆರೆಯ ನಟಿಯ ಮನೆಯಲ್ಲಿ ಅದ್ದೂರಿ ಮದುವೆ ಸಂಭ್ರಮ!💐 - ShareChat
ಮದುವೆ ಆಗೋ ಹುಡುಗನ ಪರಿಚಯಿಸಿದ ದಿವ್ಯಾ ಗೌಡ; ನೆರವೇರಿತು ಹೂ ಮುಡಿಸೋ ಶಾಸ್ತ್ರಬಿಗ್ ಬಾಸ್ ಭವ್ಯಾ ಗೌಡ ಅವರ ಸಹೋದರಿ ದಿವ್ಯಾ ಗೌಡ ಮದುವೆ ಸಂಭ್ರಮ ಶುರುವಾಗಿದೆ. ದಿವ್ಯಾ ಮತ್ತು ಹೇಮಂತ್ ಕುಮಾರ್ ಅವರ ಹೂ ಮುಡಿಸೋ ಶಾಸ್ತ್ರ ಅದ್ದೂರಿಯಾಗಿ ನಡೆದಿದ್ದು, ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮಾಧ್ಯಮ ರಂಗದಲ್ಲಿ ಗುರುತಿಸಿಕೊಂಡಿರುವ ಹೇಮಂತ್, ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂಭ್ರಮದ ಫೋಟೋಗಳು ವೈರಲ್ ಆಗುತ್ತಿವೆ. ಕಿರುತೆರೆಯ ಜನಪ್ರಿಯ ನಟಿ, ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡ ಅವರ ಮನೆಯಲ್ಲಿ ಈಗ ಮದುವೆಯ ಸಂಭ್ರಮ ಶುರುವಾಗಿದೆ. ಭವ್ಯಾ ಅವರ ಸಹೋದರಿ ದಿವ್ಯಾ ಗೌಡ ಅವರ ಮನೆಯಲ್ಲಿ ಸಾಂಪ್ರದಾಯಿಕವಾಗಿ ಹೂ ಮುಡಿಸೋ ಶಾಸ್ತ್ರ ಅದ್ದೂರಿಯಾಗಿ ನಡೆದಿದೆ. ದಿವ್ಯಾ ಗೌಡ ಅವರ ಕೈಹಿಡಿಯಲಿರುವ ಹುಡುಗನ ಹೆಸರು ಹೇಮಂತ್ ಕುಮಾರ್. ಇವರು ಮಾಧ್ಯಮ ರಂಗದಲ್ಲಿ ಗುರುತಿಸಿಕೊಂಡಿದ್ದು, ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಇವರು ಬಿಗ್ ಬಾಸ್ ಶೋಗೂ ಕೆಲಸ ಮಾಡಿದ್ದರು. ಭವ್ಯಾ ಗೌಡ ಈ ಹಿಂದೆ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋದಾಗ, ವೇದಿಕೆ ಮೇಲೆ ಸಹೋದರಿ ದಿವ್ಯಾ ಗೌಡ ಕೂಡ ಬಂದು ಮಿಂಚಿದ್ದರು. ತಮ್ಮ ಬಬ್ಲಿ ಸ್ವಭಾವದಿಂದ ದಿವ್ಯಾ ಅಂದು ವೀಕ್ಷಕರ ಗಮನ ಸೆಳೆದಿದ್ದರು.ದಿವ್ಯಾ ಗೌಡ ಅವರು ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಿದ್ದು, ಯಶಸ್ವಿಯಾಗಿ ಬಿಸ್ನೆಸ್ ನಡೆಸುತ್ತಿದ್ದಾರೆ. ಈಗ ಸಹೋದರಿಯ ಮನೆಯಲ್ಲೇ ಹೂ ಮುಡಿಸುವ ಶಾಸ್ತ್ರ ನೆರವೇರಿರುವುದು ಕುಟುಂಬದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.ಸಾಮಾಜಿಕ ಜಾಲತಾಣದಲ್ಲಿ ಈ ಸಂಭ್ರಮದ ಫೋಟೋಗಳು ಹಾಗೂ ವಿಡಿಯೋಗಳು ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಮನೆಯಲ್ಲಿ ಮದುವೆಯ ಕಳೆ ಕಟ್ಟಿ ಕಂಗೊಳಿಸುತ್ತಿದೆ. #👰ಖ್ಯಾತ ಕಿರುತೆರೆಯ ನಟಿಯ ಮನೆಯಲ್ಲಿ ಅದ್ದೂರಿ ಮದುವೆ ಸಂಭ್ರಮ!💐
👰ಖ್ಯಾತ ಕಿರುತೆರೆಯ ನಟಿಯ ಮನೆಯಲ್ಲಿ ಅದ್ದೂರಿ ಮದುವೆ ಸಂಭ್ರಮ!💐 - ShareChat
ಜೈಲು ಪಾಲಾದ ನಟ ಪ್ರಭಾಸ್, ಫ್ಯಾನ್ಸ್ ಕಂಗಾಲು! ಈ ಶಾಕಿಂಗ್ ನ್ಯೂಸ್ ಹಿಂದಿನ ಸೀಕ್ರೆಟ್ ಇಲ್ಲಿದೆ ನೋಡಿ! ರೆಬೆಲ್ ಸ್ಟಾರ್ ಪ್ರಭಾಸ್ ಈಗ ಜೈಲುಪಾಲು! ಫ್ಯಾನ್ಸ್ ಕಂಗಾಲು.. ಏನಿದು ಶಾಕಿಂಗ್ ನ್ಯೂಸ್?  ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅವರ ಹೆಸರು ಕೇಳಿದರೆ ಸಾಕು, ಅಭಿಮಾನಿಗಳಲ್ಲಿ ಒಂದು ರೀತಿಯ ಮಿಂಚಿನ ಸಂಚಲನ ಆರಂಭವಾಗುತ್ತದೆ. 'ಬಾಹುಬಲಿ'ಯಿಂದ ಹಿಡಿದು ಇತ್ತೀಚಿನ 'ಕಲ್ಕಿ'ಯವರೆಗೆ ಪ್ರಭಾಸ್ ಅವರ ಕ್ರೇಜ್ ಬೆಟ್ಟದಷ್ಟಿದೆ. ಸದ್ಯ ಅವರ ಮುಂಬರುವ ಚಿತ್ರ 'ಸ್ಪಿರಿಟ್' (Spirit) ಬಗ್ಗೆ ಕೇಳಿಬರುತ್ತಿರುವ ಸುದ್ದಿಯೊಂದು ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. "ಪ್ರಭಾಸ್ ಜೈಲಿಗೆ ಹೋಗಿದ್ದಾರೆ" ಎಂಬ ಹೆಡ್‌ಲೈನ್ ನೋಡಿ ಅಭಿಮಾನಿಗಳು ಒಂದು ಕ್ಷಣ ದಂಗಾಗಿದ್ದಾರೆ. ಆದರೆ ಗಾಬರಿ ಬೇಡಿ, ಇದು ನಿಜ ಜೀವನದ ಅರೆಸ್ಟ್ ಅಲ್ಲ, ಬದಲಿಗೆ ಸಿನಿಮಾ ರಂಗದ ಇತಿಹಾಸದಲ್ಲೇ ಅತಿ ದೊಡ್ಡ ಆಕ್ಷನ್ ಸನ್ನಿವೇಶದ ಶೂಟಿಂಗ್! ಚಂಚಲಗುಡ ಜೈಲಿನಲ್ಲಿ ಪ್ರಭಾಸ್ ರಣಬೇಟೆ!'ಅರ್ಜುನ್ ರೆಡ್ಡಿ' ಮತ್ತು 'ಅನಿಮಲ್' ಚಿತ್ರಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, ಈಗ ಪ್ರಭಾಸ್ ಅವರನ್ನು 'ಸ್ಪಿರಿಟ್' ಚಿತ್ರಕ್ಕಾಗಿ ಪಳಗಿಸುತ್ತಿದ್ದಾರೆ. ಈ ಚಿತ್ರದ ಹೊಸ ವೇಳಾಪಟ್ಟಿ (Schedule) ಹೈದರಾಬಾದ್‌ನ ಸುಪ್ರಸಿದ್ಧ ಚಂಚಲಗುಡ ಜೈಲಿನಲ್ಲಿ ಆರಂಭವಾಗಿದೆ. ಮೂಲಗಳ ಪ್ರಕಾರ, ಜೈಲಿನ ಒಳಗೆ ನಡೆಯುವ ಒಂದು ಭೀಕರ ಆಕ್ಷನ್ ದೃಶ್ಯವನ್ನು ಇಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಜೈಲಿನ ದೃಶ್ಯಗಳು ಕಥೆಗೆ ಬಹಳ ಮುಖ್ಯವಾದ ತಿರುವು ನೀಡಲಿವೆ ಎಂದು ಹೇಳಲಾಗುತ್ತಿದೆ. ಭಾನುವಾರ ಯಾವುದೇ ವಿರಾಮವಿಲ್ಲದೆ ಸತತವಾಗಿ ಶೂಟಿಂಗ್ ನಡೆದಿದ್ದು, ಪ್ರಭಾಸ್ ಪವರ್‌ಫುಲ್ ಆಕ್ಷನ್ ಮೋಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರ ಸಿನಿಮಾಗಳೆಂದರೆ ಅಲ್ಲಿ ರಕ್ತಸಿಕ್ತ ಆಕ್ಷನ್ ಮತ್ತು ಕಲ್ಟ್ ಹೀರೋಯಿಸಂ ಇರಲೇಬೇಕು. ಇತ್ತೀಚೆಗೆ ವಂಗಾ ಅವರು ಹಂಚಿಕೊಂಡಿದ್ದ ಪ್ರಭಾಸ್ ಅವರ ಶ್ಯಾಡೋ ಫೋಟೋ (Shadow Photo) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬೆಂಕಿ ಹಚ್ಚಿತ್ತು. ಆ ಪೋಸ್ಟರ್ ನೋಡಿದ ಮೇಲೆ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ಸುತ್ತಮುತ್ತಲಿನ ಹಲವು ಸ್ಥಳಗಳಲ್ಲಿ ಭರದಿಂದ ಸಾಗಿದೆ. ಕೊಂಪಳ್ಳಿಯ ಅಜೀಜ್‌ನಗರ, ಕೋಟಿ ಮಹಿಳಾ ಕಾಲೇಜು ಮತ್ತು ಬಾಲನಗರದ ವಿಮಲ್ ಥಿಯೇಟರ್ ಹೀಗೆ ಪ್ರಮುಖ ಜಾಗಗಳಲ್ಲಿ ಕ್ಯಾಮೆರಾ ಸದ್ದು ಮಾಡಿದೆ. ಸುಮಾರು ಎರಡು ತಿಂಗಳ ಕಾಲ ಸತತವಾಗಿ ಚಿತ್ರೀಕರಣ ನಡೆಸಲು ಚಿತ್ರತಂಡ ಬೃಹತ್ ಪ್ಲಾನ್ ಮಾಡಿಕೊಂಡಿದೆ.ಜೈಲಿನ ಸುತ್ತ ಪೊಲೀಸರ ಬಿಗಿ ಭದ್ರತೆ:ರೆಬೆಲ್ ಸ್ಟಾರ್ ಪ್ರಭಾಸ್ ಅವರು ಜೈಲಿನ ಆವರಣದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಸ್ಥಳಕ್ಕೆ ಜಮಾಯಿಸುವ ಸಾಧ್ಯತೆಯಿತ್ತು. ಈ ಹಿನ್ನೆಲೆಯಲ್ಲಿ ಚಂಚಲಗುಡ ಜೈಲು ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ. ಚಿತ್ರೀಕರಣಕ್ಕೆ ಸಂಬಂಧಿಸಿದ ಯಾವುದೇ ಫೋಟೋ ಅಥವಾ ವಿಡಿಯೋ ಲೀಕ್ ಆಗದಂತೆ ಚಿತ್ರತಂಡ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಆದರೂ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಕುತೂಹಲವನ್ನು ಡಬಲ್ ಮಾಡಿದೆ. ಒಟ್ಟಿನಲ್ಲಿ, 'ಸ್ಪಿರಿಟ್' ಚಿತ್ರದ ಮೂಲಕ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಜೋಡಿ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಪ್ರಭಾಸ್ ಅವರ ಪೊಲೀಸ್ ಅವತಾರ ಮತ್ತು ಜೈಲಿನ ಈ ರೋಚಕ ದೃಶ್ಯಗಳನ್ನು ಬೆಳ್ಳಿತೆರೆಯ ಮೇಲೆ ನೋಡಲು ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿದೆ. ಇದು ಕೇವಲ ಸಿನಿಮಾವಲ್ಲ, ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಯಾಗಲಿರುವ ಹೊಸ 'ಸ್ಪಿರಿಟ್'! #😲 ಜೈಲು ಪಾಲಾದ ಖ್ಯಾತ ನಟ, ಫ್ಯಾನ್ಸ್ ಕಂಗಾಲು! 😱💔
😲 ಜೈಲು ಪಾಲಾದ ಖ್ಯಾತ ನಟ, ಫ್ಯಾನ್ಸ್ ಕಂಗಾಲು! 😱💔 - ShareChat
ಆಮಿರ್ ಖಾನ್ 3ನೇ ಮದುವೆ: ಗೌರಿ ಜತೆ ಮನೆಯಲ್ಲೇ ನಡೆಯಲಿದೆ ರಿಜಿಸ್ಟರ್ ಮ್ಯಾರೇಜ್ಖ್ಯಾತ ನಟ ಆಮಿರ್ ಖಾನ್ ಅವರು 3ನೇ ಮದುವೆಗೆ ಸಜ್ಜಾಗಿದ್ದಾರೆ. ಪ್ರಿಯತಮೆ ಗೌರಿ ಜೊತೆ ಮದುವೆ ಯಾವ ರೀತಿ ನಡೆಯಲಿದೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಕೇವಲ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಆಮಿರ್ ಖಾನ್ ಮತ್ತು ಗೌರಿ ನಿರ್ಧಾರ ಮಾಡಿದ್ದಾರೆ.ಬಾಲಿವುಡ್‌ ನಟ ಆಮಿರ್ ಖಾನ್ (Aamir Khan) ಅವರು ವೈಯಕ್ತಿಕ ಜೀವನದ ಕಾರಣಕ್ಕಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ಮದುವೆಯ ವದಂತಿಗಳಿಗೆ ಸ್ವತಃ ಆಮಿರ್ ಖಾನ್ ಅವರೇ ತೆರೆ ಎಳೆದಿದ್ದು, ತಮ್ಮ ಪ್ರೇಯಸಿ ಗೌರಿ ಸ್ಪ್ರ್ಯಾಟ್ (Gauri Spratt) ಜೊತೆ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದನ್ನು ಖಚಿತಪಡಿಸಿದ್ದಾರೆ. ಈ ಜೋಡಿಯ ವಿವಾಹವು ಜುಲೈ 5ರಂದು ನಡೆಯಲಿದೆ ಎಂದು ವರದಿಯಾಗಿದೆ. ಅದನ್ನು ಆಮಿರ್ ಖಾನ್ ಅವರು ಒಪ್ಪಿಕೊಂಡಿದ್ದಾರೆ.‘ಡೆಕ್ಕನ್ ಕ್ರಾನಿಕಲ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆಯ ಪ್ಲ್ಯಾನ್ ಬಗ್ಗೆ ಮಾತನಾಡಿರುವ ಆಮಿರ್ ಖಾನ್, ‘ಇದು ನಮ್ಮ ಮನೆಯಲ್ಲೇ ನಡೆಯಲಿರುವ ಅತ್ಯಂತ ಸರಳವಾದ ರಿಜಿಸ್ಟರ್ ಮ್ಯಾರೇಜ್ ಆಗಿರಲಿದೆ. ಮದುವೆಯಲ್ಲಿ ಕೇವಲ ಎರಡೂ ಕುಟುಂಬದ ಸದಸ್ಯರು ಮತ್ತು ತೀರಾ ಹತ್ತಿರದ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ನಾವಿಬ್ಬರೂ ಮದುವೆಯನ್ನು ತುಂಬಾ ಸಿಂಪಲ್ ಆಗಿ ಇಟ್ಟುಕೊಳ್ಳಲು ಬಯಸಿದ್ದೇವೆ’ ಎಂದು ಹೇಳಿದ್ದಾರೆ.ಈ ಮದುವೆಗೆ ಬಾಲಿವುಡ್‌ನ ಸ್ಟಾರ್‌ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರಂತಹ ಆಪ್ತ ಸ್ನೇಹಿತರು ಆಗಮಿಸಲಿದ್ದಾರೆಯೇ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ. ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ಆಮಿರ್ ಖಾನ್, ‘ನಾವಿಬ್ಬರೂ ಈಗ ನಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದೇವೆ’ ಎಂದು ತಿಳಿಸಿದ್ದಾರೆ.61 ವರ್ಷದ ಆಮಿರ್ ಖಾನ್ ಅವರಿಗೆ ಇದು 3ನೇ ಮದುವೆ. ಅವರ ಮೊದಲ ಪತ್ನಿ ರೀನಾ ದತ್ತಾ. ಆಮಿರ್ ಮತ್ತು ರೀನಾಗೆ ಜುನೈದ್ ಖಾನ್, ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ರೀನಾ ಅವರೊಂದಿಗೆ ವಿಚ್ಛೇದನ ಪಡೆದ ನಂತರ ಕಿರಣ್ ರಾವ್ ಅವರನ್ನು ಆಮಿರ್ ಖಾನ್ ವಿವಾಹವಾಗಿದ್ದರು. 16 ವರ್ಷಗಳ ದಾಂಪತ್ಯದ ನಂತರ ಕಿರಣ್ ರಾವ್ ಅವರಿಂದಲೂ ಬೇರ್ಪಟ್ಟ ಅವರು, 3ನೇ ಮದುವೆಯ ನಿರ್ಧಾರ ಮಾಡಿದರು. ವಿಚ್ಛೇದನದ ನಂತರವೂ ಆಮಿರ್ ಖಾನ್ ಅವರು ತಮ್ಮ ಇಬ್ಬರೂ ಮಾಜಿ ಪತ್ನಿಯರೊಂದಿಗೆ ಉತ್ತಮ ಸ್ನೇಹ-ಸಂಬಂಧವನ್ನು ಹೊಂದಿದ್ದಾರೆ.ಸಿನಿಮಾಗಳ ವಿಷಯಕ್ಕೆ ಬಂದರೆ, ಆಮಿರ್ ಖಾನ್ ಅವರು ಕಳೆದ ವರ್ಷ ಆರ್‌ಎಸ್ ಪ್ರಸನ್ನ ನಿರ್ದೇಶನದ ‘ಸಿತಾರೆ ಜಮೀನ್ ಪರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಸ್ಪ್ಯಾನಿಷ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾದ ರಿಮೇಕ್ ಆಗಿತ್ತು. ಇದಲ್ಲದೆ, ರಜನಿಕಾಂತ್ ನಟನೆಯ ‘ಕೂಲಿ’ ಮತ್ತು ‘ಹ್ಯಾಪಿ ಪಟೇಲ್’ ಚಿತ್ರಗಳಲ್ಲಿ ಆಮಿರ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಈಗ ಮದುವೆಯ ಸಲುವಾಗಿ ಬ್ರೇಕ್ ತೆಗೆದುಕೊಂಡಿದ್ದಾರೆ. #🏡ಮನೆಯಲ್ಲೇ ನಡೆಯಲಿದೆ ಸ್ಟಾರ್ ನಟನ ರಿಜಿಸ್ಟರ್ ಮ್ಯಾರೇಜ್!💍
🏡ಮನೆಯಲ್ಲೇ ನಡೆಯಲಿದೆ ಸ್ಟಾರ್ ನಟನ ರಿಜಿಸ್ಟರ್ ಮ್ಯಾರೇಜ್!💍 - ShareChat
ನಟ ಪ್ರಕಾಶ್ ರಾಜ್ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್; ಇದೀಗ ಬಂಧನದ ಭೀತಿ! ಇತ್ತೀಚಿಗಷ್ಟೇ "ಧರ್ಮಸ್ಥಳ' ಕೇಸ್‌ಗೆ ಸಂಬಂಧಪಟ್ಟು ಸುದ್ದಿಯಾಗಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿರುವ ಆರೋಪದ ಅಡಿಯಲ್ಲಿ, ನಟ ಪ್ರಕಾಶ್​ರಾಜ್ (Prakash Raj) ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿದ್ದಾರೆ ಎಂದು ಆರೋಪಿಸಿ ದಿಲೀಪ್​ಕುಮಾರ್ ಕೇಸ್ ದಾಖಲು ಮಾಡಿದ್ದಾರೆ. ಆ ಬಳಿಕ, 48ನೇ ಎಸಿಜೆಎಂ ಕೋರ್ಟ್‌ನಿಂದ ಪ್ರಕಾಶ್​ ರಾಜ್ ವಿರುದ್ಧ NBW ಜಾರಿ ಹಾಗೂ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ನೀಡಲಾಗಿತ್ತು.2 ಬಾರಿ ಸಮನ್ಸ್​ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಪ್ರಕಾಶ್​ ರಾಜ್ ಹಾಜರಾಗದ ಹಿನ್ನೆಲೆಯಲ್ಲಿ, ಇದೀಗ 3ನೇ ಬಾರಿ ಪ್ರಕಾಶ್ ರಾಜ್ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ.ನಟ ಪ್ರಕಾಶ್ ರಾಜ್ 2 ಬಾರಿ ಸಮನ್ಸ್ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಕೋರ್ಟ್‌ಗೆ ಹಾಜರಾಗಿರಲಿಲ್ಲ. 4 ರಾಜ್ಯಗಳಲ್ಲಿ, ಅಂದರೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಅಕ್ರಮ ವೋಟರ್ ಐಡಿ (Voter ID) ಹೊಂದಿರುವ ಗಂಭೀರ ಆರೋಪ ಪ್ರಕಾಶ್ ರಾಜ್ ಮೇಲಿದೆ. ಸಂವಿಧಾನದ ಪ್ರಕಾರ, ಒಬ್ಬ ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿ ಒಂದೇ ಮತದಾರರ ಗುರುತಿನ ಚೀಟಿ ಹೊಂದಿರಲು ಅವಕಾಶವಿದೆ.ಆದರೆ ನಟ ಪ್ರಕಾಶ್ ರಾಜ್ ನಾಲ್ಕು ರಾಜ್ಯಗಳಲ್ಲಿ ಮತದಾರ ಗುರುತಿನ ಚೀಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಆಗಿರುವ ಪ್ರಕಾಶ್ ರಾಜ್, ಸಮನ್ಸ್‌, ವಾರಂಟ್ ಯಾವುದಕ್ಕೂ ಕೇರ್ ಮಾಡದೇ, ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಎಸಿಜೆಎಂ ಕೋರ್ಟ್ ಗರಂ ಆಗಿದೆ ಎನ್ನಲಾಗಿದೆ.ಹೀಗಾಗಿ, ಇದೀಗ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಪ್ರಕಾಶ್ ರಾಜ್‌ಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಸಮನ್ಸ್, ವಾರಂಟ್ ಯಾವುದಕ್ಕೂ ಹಾಜರಾಗದ ಪ್ರಕಾಶ್ ರಾಜ್ ವಿರುದ್ಧ, ಈಗ ಕಾನೂನು ಉಲ್ಲಂಘನೆ ಆರೋಪವೂ ಸೇರಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಇದೀಗ ನಟ ಪ್ರಕಾಶ್ ರಾಜ್ ಅವರಿಗೆ ಬಂಧನ ಭೀತಿ ಎದುರಾಗಿದೆ. #🚨ಖ್ಯಾತ ನಟನ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್; ಬಂಧನದ ಭೀತಿ!😱
🚨ಖ್ಯಾತ ನಟನ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್; ಬಂಧನದ ಭೀತಿ!😱 - ShareChat
ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ನಿಧನ. #😭ಖ್ಯಾತ ನಿರ್ದೇಶಕನ ತಾಯಿ ನಿಧನ💔
😭ಖ್ಯಾತ ನಿರ್ದೇಶಕನ ತಾಯಿ ನಿಧನ💔 - ShareChat