#🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼 #🙏ಭಕ್ತಿ ಸ್ಟೇಟಸ್ ವಿಡಿಯೋ🎥 #🙏ಭಕ್ತಿ ಸ್ಟೇಟಸ್
#ತಿರುಪ್ಪಾವೈ ಪಾಶುರಂ
ಕನ್ನಡದಲ್ಲಿ ತಿರುಪ್ಪಾವೈ ಲೇಖನಮಾಲೆ – ಪಾಶುರಂ 1
ಶ್ರೀ ನೀಳಾ ದೇವೈ ನಮಃ
ತಿರುಪ್ಪಾವೈ ಕನ್ನಡದಲ್ಲಿ ಲೇಖನಮಾಲೆಯ ಪೀಠಿಕೆ ಇಲ್ಲಿದೆ
ಮಾರ್ಕಳಿ ತ್ತಿಂಗಳ್ಮದಿನಿರೈಂದ ನನ್ನಾಳಾ।
ನೀರಾಡ ಪ್ಪೋದುವೀರ್,ಪೋದುಮಿನೋ ನೇರಿಲೈಯೀರ್।
ಶೀರ್ ಮಲ್ಗುಂ ಆಯ್ ಪ್ಪಾಡಿ ಶೆಲ್ವಚ್ಚಿರು ಮೀರ್ ಕಾಳ್ ।
ಕೂರ್ವೇಲ್ ಕೊಡುಂದೊಳಿಲನ್ ನಂದಗೋಪನ್ ಕುಮರನ್।
ಏರಾರಂರ್ದ ಕಣ್ಣಿಯಶೋದೈಯಿಳಂಶಿಂಗಂ
ಕಾರ್ಮೇನಿಚ್ಚಜ್ಞ್ಗಣ್ ಕದಿರ್ಮದಿಯಂ ಬೋಲ್ ಮುಗತ್ತಾನ್
ನಾರಾಯಣನೇ ನಮಕ್ಕೇ ಪರೈತರುವಾನ್ ಪಾರೋರ್
ಪುಗಳಪ್ಪಡಿಂದೇಲೋ ರೆಂಬಾವಾಯ್ ॥1॥
ಶ್ರೀಯುತ ಕೌಶಿಕರ ಕನ್ನಡ ಭಾಷಾಂತರ ಹೀಗಿದೆ:
ನಂದಗೋಪಕುಮಾರ, ನಳಿನಾಕ್ಷ, ರವಿಚಂದ್ರರಂದವಡೆದಿಹ,
ವದನ ಮಂಡಲದಿ ಶೋಭಿಸುವ ಮಂದಹಾಸ ತ್ರಿಮುಖ,
ಸರ್ವಜೀವ ಪ್ರಮುಖ, ಮೇಘವರ್ಣಾಂಗ ಹರಿಯು |
ಚಂದದೀ ಮಾರ್ಗಶಿರಮಾಸದಲಿ , ಶೋಭಿಸಿಹ
ಚಂದಿರನ ಬೆಳಕಿನೊಳು ಕ್ರೀಡೆಗೆಳಸುವ ಸೊಬಗಿನಿಂದು
ಮುಖಿಯರು ಬನ್ನಿ , ಬನ್ನಿ ನೀವ್ ಗೆಳತಿಯರೆ, ಕಾದಿರ್ಪ ವ್ರತಾಮುಕ್ತಿಗೆ ||1||
ಮಾಸಗಳೊಳಗೆ ಉತ್ತಮವಾದ ಮಾರ್ಗಶೀರ್ಷ ಮಾಸವು ಬಾರ್ಹ್ಯಸ್ಪತ್ಯ ರೀತ್ಯ ಮೊದಲ ತಿಂಗಳು. ಗೋದಾದೇವಿಗೆ ಈ ತಿಂಗಳು ‘ಯುಗಾದಿ’ ಅಂದರೆ ಮೊದಲನೆಯ ದಿನವಾಗಿ ಕಂಡು ಬಂದಿದೆ. ದ್ವಾದಶ ನಾಮಗಳಿಗೆಲ್ಲ ಮೊದಲನೆಯದಾದ ಶ್ರೀ ಕೇಶವನೆಂಬ ನಾಮವುಳ್ಳ ಮಾಸವಿದು. ಈ ತಿಂಗಳಿಗೆ ‘ಕೇಶವನೇ” ಅಧಿದೇವತೆ. ಆದ್ದರಿಂದಲೇ ಒಂದು ಕಾಲದಲ್ಲಿ ವರ್ಷಾರಂಭವಿದ್ದಿತೆಂದು ಕೆಲವೆರೆನ್ನುವರು:-
“ಆದಾಯ ಮಾರ್ಗಶೀರ್ಷಾದಿದೌದೌ ಮಾಸೌ ಋತುರ್ಮತಃ”– (ಕಾತ್ಯಾಯನ)
“ಮಾರ್ಗಾದೀನಾಂ ಯುಗೈಹಿ ಕ್ರಮಾತ್” – (ಅಮರಸಿಂಹ)
ಎಲ್ಲಕ್ಕೂ ಒಳ್ಳೆಯ ಕಾಲವೆಂಬುದು ಬಹು ಮುಖ್ಯ. ಅನಾದಿ ಕಾಲದಿಂದ ನಡೆದು ಬಂದ ವಿಪರೀತರುಚಿ ನೀಗಿ ನಿರ್ವೇದದಿಂದ ಭಗವಂತನಲ್ಲಿ ರುಚಿ ಹುಟ್ಟುವ ಕಾಲವೇ ಆತ್ಮನಿಗೆ ಒಳ್ಳೆಯ ಕಾಲ. ಬರೀ ಬಾಹ್ಯ ಮುಂಜಾನೆ ಮಾತ್ರವಲ್ಲದೆ ಆಂತರಕ್ಕೂ ಮುಂಜಾನೆಯಿದು. ಅನಾದಿ ಮಾಯೆಯಿಂದ ನಿದ್ರಿಸುತ್ತಿರುವ ಜೀವನಿಗೆ ಆಂತರ ಪ್ರಬೋಧವಿದು. ಸಂಸಾರ ಚಕ್ರದಲ್ಲಿ ಸಿಕ್ಕಿ ಸ್ವಕರ್ಮಗಳಿಂದ ಸುತ್ತುತ್ತ ದುಃಖಾಕುಲನಾದ ಜೀವನಿಗೆ ಭಗವತ್ಪ್ರಸಾದ ವಿಶೇಷ ಲಭಿಸುವಂತೆ ಮಾಡುವ ಒಂದು ವಿಶೇಷ ವ್ರತಾಚರಣೆ ಏರ್ಪಟ್ಟ ದಿವಸವಾದ್ದರಿಂದ ಇದಕ್ಕೆ ಬಹಳ ಪ್ರಾಮುಖ್ಯವಿದೆ.
ಮಾರ್ಗಳಿ ತ್ತಿಂಗಳ್: ‘ಮಾ’ ಎನ್ನುವ ಮಂಗಲವಾಚಕ ಅಕ್ಷರವು ಮೊದಲಲ್ಲಿದೆ. ಇಂತಹ ಶ್ರೇಷ್ಠವಾದ ಮಾಸದಲ್ಲಿ (ಮತಿನಿರೈನ್ದ) ಚಂದಿರನ ಪೂರ್ಣವಾದ ಬೆಳದಿಂಗಳಿಂದ ಕೂಡಿದ ಶುಭ ದಿನದಲ್ಲಿ ಸ್ನಾನ ಮಾಡ ಹೋಗಲು ಆಸಕ್ತಿವುಳ್ಳವರೇ ಬನ್ನಿರಿ. ಐಶ್ವರ್ಯದಿಂದ ತುಂಬಿ ತುಳುಕುವ ಗೋಕುಲದ ಶ್ರೀಮಂತ ಕನ್ಯೆಯರೇ, ಸುಂದರ ಬಾಲೆಯರೇ, ಶ್ಲಾಘ್ಯವಾದ ಆಭರಣವುಳ್ಳವರೇ, ಅಂದರೆ ಪರಮಾತ್ಮನನ್ನು ಸೇರಬೇಕೆಂಬ ಭಕ್ತಿ ಪರವಶತೆಯುಳ್ಳ ಶೇಷತ್ವ ಜ್ಞಾನವುಳ್ಳವರೆ ಬನ್ನಿ- ಹೀಗೆ ಗೋದಾದೇವಿ ಮಾಸದ ಮಹಿಮೆಯನ್ನು ಹಾಗು ಸಖಿಯರನ್ನು ವರ್ಣಿಸುತ್ತಾಳೆ.
ಈ ಪಾಶುರಂನಲ್ಲಿ ಗೋದಾದೇವಿ ತನ್ನ ಸಖಿಯರನ್ನು ವ್ರತದ ಸ್ನಾನಕ್ಕಾಗಿ ಕರೆಯುತ್ತಿದ್ದಾಳೆ. ವ್ರತಾಚರಣಕ್ಕೆ ಅನುಕೂಲವಾದ ಕಾಲದ ವರ್ಣನೆ, ತನ್ನ ಸಖಿಯರ ಸೌಂದರ್ಯ (ಶೆಲ್ವಚ್ಚಿರು ಮೀರ್ ಕಾಳ್) ವರ್ಣನೆ, ಕೃಷ್ಣನ ತಂದೆಯ ವಿವರಣೆ, ಆತನ ತಾಯಿಯ ಭಾಗ್ಯ, ಅಂತಹ ಮಾತಾಪಿತೃಗಳಿಗೆ ಮಗನಾಗಿ ಅವತರಿಸಿದ ನಾರಾಯಣನ ಗುಣಾನುವರ್ಣನೆ ಹೇಳಿಯಾದ ಮೇಲೆ ಭಗವಂತನ ಶರಣಾಗತ ವಾತ್ಸಲ್ಯವನ್ನು ಕೊಂಡಾಡಿ ಅವನಲ್ಲಿ ತನಗಿರುವ ಭರವಸೆಯನ್ನು ಹೇಳಿಕೊಳ್ಳುತ್ತಾಳೆ.
ಚೂಪಾದ ವೇಲಾಯುಧವನ್ನು ಧರಿಸಿ, (ಕೂರ್ವೇಲ್ ಕೊಡುಂದೊಳಿಲನ್ ) ದುಷ್ಟ ನಿಗ್ರಹಕ್ಕಾಗಿ ಉಪಯೋಗಿಸಿ, ತನ್ನ ಭಕ್ತರನ್ನು ಸಂರಕ್ಷಿಸುವವನೂ, ನಂದಗೋಪನಿಗೆ ಮಗನಾದ, (ಏರಾರಂರ್ದ ಕಣ್ಣಿಯಶೋದೈಯಿಳಂಶಿಂಗಂ) ಯಶೋದೆಯ ವಾತ್ಸಲ್ಯ ಪೂರ್ಣ ನೇತ್ರಗಳಿಗೆ ಸಿಂಹದ ಮರಿಯಂತೆ ಇರುವವನೂ, ನೀಲ ಮೇಘ ಶ್ಯಾಮನಾಗಿ, ತಾವರೆ ಹೂವಿನ ದಳದಂತೆ ಕಣ್ಣುಳ್ಳವನೂ , ಸೂರ್ಯನ ತೇಜಸ್ಸಿನಂತೆ ಮುಖವುಳ್ಳವನೂ, ಜಗತ್ಕಾರಣನೂ, ರಕ್ಷಕನೂ, ಲಯಕರ್ತನೂ- ಆದ ದೈವವೇ ಈಗ ಶ್ರೀಕೃಷ್ಣನಾಗಿ ನಿಂತಿರುವವನು. ಅವನ ಪಾದಾರವಿಂದವನ್ನೇ ಅನನ್ಯರಾಗಿ ಆಶ್ರಯಿಸಿರುವ ನಮಗೆ ವ್ರತಸಾಧನೆಗಳನ್ನು ಕೊಡುವನು. ಈ ಲೋಕದವರೆಲ್ಲ ಸ್ತೋತ್ರ ಮಾಡುವಂತೆ ಅವಧಾನದಿಂದ ಇದ್ದರೆ ನಮ್ಮ ಈ ವ್ರತವು ಅದ್ವಿತೀಯವಾಗುವುದೆನ್ನುತ್ತಾಳೆ.
ಮಾರ್ಗಶೀರ್ಷ ಮಾಸವು, ಆಂಡಾಳ್ ದೇವಿಗೆ ಬಹು ಇಷ್ಟವಾದ ಮಾಸ. ಇದು ಶ್ರೀ ತಿರುಪ್ಪಾವೈ ಅನುಭವದ ಮೇಲ್ಮೈಯಿಂದ ಬಂದುದು.
ಇದು ಸುಪಕ್ವವಾದ ಸಸ್ಯಾದಿ ಸಂಪನ್ನವಾದುದು, ಸರ್ವ ಸಸ್ಯಗಳೂ ಫಲಿಸಿ ಪಕ್ವವಾಗಿರುವಂತೆ, ತಮ್ಮ ಸಾತ್ವಿಕ ಸಾಧನೆಗೆ ಅನುಕೂಲಕರವೆಂದೂ, ಕಾತ್ಯಾಯಿನಿ ವ್ರತ ಹಾಗು ತಿರುಪ್ಪಾವೈ ವ್ರತಗಳನ್ನು ಆಚರಿಸಿ ಸಿದ್ಧಿಪಡೆಯುವುದು.
ಗೋ-ಕ್ಷೀರ ಸಮೃದ್ಧಿಯುಳ್ಳದ್ದು.
ಶಿಷ್ಟರು ನಡೆಸುವ ನವಾಗ್ರಯಣ ಪೂಜೆಗಳಿಂದ ಪಿತೃ ದೇವತೆಗಳೂ ಸಂತೋಷಿಸುವ ಕಾಲ.
ದಕ್ಷಿಣಾಯನವೆಂಬುದು ದೇವತೆಗಳಿಗೆ ರಾತ್ರಿ. ಆ ರಾತ್ರಿಗೆ ಇದು ಉಷಃಕಾಲ, ಬ್ರಾಹ್ಮೀ ಮುಹೂರ್ತದಂತೆ ಇದು ಸತ್ತ್ವೋನ್ಮೇಷಕರವಾದ ಕಾಲ.
‘ಮೃಗಶೀರ್ಷಾ’ ನಕ್ಷತ್ರಸಹಿತನಾಗಿ ಚಂದ್ರನು ಪೂರ್ಣವಾಗಿ ಉದಯಿಸುವುದು ಈ ಮಾಸದಲ್ಲಿ.
ಈ ನಕ್ಷತ್ರಕ್ಕೆ ಅಧಿದೇವತೆ ಚಂದ್ರ.
ಈ ಕಾಲದಲ್ಲಿ ದೇವತೆಗಳೂ, ಪಿತೃಗಳೂ ನಮಗೆ ಸನ್ನಿಹಿತರಾಗುತ್ತಾರೆ. ಆದ್ದರಿಂದ, ಮುಂಜಾನೆ ಎದ್ದು ಶುದ್ಧರಾಗಿ ಅವರನ್ನು ಪೂಜಿಸುವುದಕ್ಕೆ ಮತ್ತು ಚಿಂತಿಸುವುದಕ್ಕೆ ಅನುಕೂಲಕರ. ಧನುರ್ಮಾಸದಲ್ಲಿ ಬೆಳದಿಂಗಳಿಂದ ಕೂಡಿದ ತಂಪಾದ ಉಷಃ ಕಾಲ ವ್ರತಾನುಷ್ಠಾನಕ್ಕೆ ಸೂಕ್ತ. ಅದು ಮನುಷ್ಯನಲ್ಲಿ ಸತ್ವ ಗುಣವನ್ನು ಉದ್ರೇಕಗೊಳಿಸಿ, ಭಗವಧ್ಯಾನವೇ ಮುಂತಾದ ಮಾನಸಿಕ ಕ್ರಿಯೆಗಳಿಗೆ ಮನಸ್ಸನ್ನು ಮುದಗೊಳಿಸುತ್ತದೆ.
ಕೆಲ ಕೆಲವು ವ್ರತಗಳನ್ನು ಆಚರಿಸಲು ಬೇಕಾದ ಅರ್ಹತೆಯು ಕೆಲವರಿಗೆ ಮಾತ್ರ ಇರುವುದೆಂದು ಹೇಳುವರು. ಅದೇ ರೀತಿ, ’ತಿರುಪ್ಪಾವೈ’ ವ್ರತವನ್ನು ಆಚರಿಸಲು ಬೇಕಾದದ್ದು ‘ಮನಸ್ಸಿನ ಇಚ್ಛೆ’ .
‘ಪೋದುಮಿನೋ’ ಎಂದು ಕರೆಯುವುದು ‘ಇಚ್ಛೆಯುಳ್ಳವರೆಲ್ಲಾ’ ಬರಬಹುದೆಂಬ ಭಾವ. ಹಾಗೆ ಗೊಲ್ಲಕನ್ಯೆಯರಿಗೆ ವ್ರತಾನುಷ್ಠಾನಕ್ಕೆ ಬೇಕಾಗುವ ‘ಪರೈ’ ಎಂಬ ವಾದ್ಯ ವಿಶೇಷವನ್ನು ಶ್ರೀಕೃಷ್ಣನು ಕೊಡುತ್ತಾನೆ ಎನ್ನುವ ಭಾವ.
ಮುಂದೆ ಕೆಲವು ಸಾಲುಗಳಲ್ಲಿ, ನಂದಗೋಪನನ್ನು ಮಹಾಸಾಹಸಿ ಮತ್ತು ಪುಟ್ಟ ಶ್ರೀಕೃಷ್ಣನ ರಕ್ಷಣಾರ್ಥವಾಗಿ ಮಹಾಧೈರ್ಯಶಾಲಿಯೂ ಆದನೆಂದು ವ್ಯಾಖ್ಯಾನಿಸಲಾಗಿದೆ. ಅದೇ ರೀತಿ ಕೃಷ್ಣನನ್ನು ಸದಾ ನೋಡುತ್ತಾ, ಅವನ ತುಂಟಾಟವನ್ನು ಕಣ್ತುಂಬಿಸಿಕೊಂಡ ಯಶೋದಾದೇವಿಯು
“ಏರಾರಂದ ಕಣ್ಣೇ” ಆದಳು. ಶ್ರೀ ಕೃಷ್ಣನ ಮುಖಕಾಂತಿಯು ತೀಕ್ಷ್ಣವಾದ ಸೂರ್ಯನ ಕಾಂತಿಗೂ, ಸೌಮ್ಯವಾದ ಚಂದ್ರನ ಕಾಂತಿಗೂ ಹೋಲಿಸಲ್ಪಟ್ಟಿದೆ. ಕೃಷ್ಣನು ತನ್ನ ವಿರೋಧಿಗಳಿಗೆ ಸೂರ್ಯನ ತೀಕ್ಷ್ಣ ಕಾಂತಿಯಿಂದ ಪ್ರತಾಪಶಾಲಿಯೂ ಮತ್ತು ತನ್ನ ಹಿತೈಷಿಗಳಿಗೆ ಹಾಗು ಭಕ್ತರಿಗೆ ಚಂದ್ರನಂತೆ ಆಹ್ಲಾದಕರವಾಗಿಯೂ ಕಾಣುತ್ತಾನೆ.
ತತ್ವಾರ್ಥ:
“ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ”– ಎಂದು ದಾಸರು ಹೇಳಿದಂತೆ, ನೀರಾಡಲ್ ಅಥವಾ ಸ್ನಾನ ಮಾಡುವಿಕೆ ಎಂದರೆ, ಭಗವಂತನ ಗುಣಗಳನ್ನು ಸ್ಮರಿಸಿ, ತಲ್ಲೀನರಾಗಿ ಆನಂದಿಸುವುದು ಹಾಗು ಅವನ ಧ್ಯಾನದಲ್ಲಿ ಮಗ್ನವಾಗುವುದು. ಇದಕ್ಕೆ ಇಚ್ಚಾ ಪ್ರವೃತ್ತಿಗಳಲ್ಲದೆ ಬೇರೆ ಅಧಿಕಾರ ಮತ್ತು ಸಂಪತ್ತು ಬೇಕಿಲ್ಲ. ಸೌಂದರ್ಯಾದಿ ಪ್ರಸಾಧನಗಳು ಶರೀರಕ್ಕೆ ಮುಖ್ಯಾಲಂಕಾರ. ಶಾಂತ್ಯಾದಿ ಗುಣಗಳು ಆತ್ಮನಿಗೆ ಅಲಂಕಾರ. ಅಂತಹ ಸಾತ್ವಿಕ ಗುಣಗಳನ್ನು ವೃದ್ಧಿ ಮಾಡಿಕೊಂಡು, ವಿಷಯಾಕರ್ಷಣೆಯಿಂದ ದೂರವಾಗಿ ಪರಮಾತ್ಮನ ಸೇವೆ ಮಾಡಿದರೆ ಭಗವಂತನ ಅಪರಿಮಿತ ಪ್ರೀತಿಗೆ ಪಾತ್ರರಾಗುವುದು ಖಂಡಿತ.
ಆ ಅನಂತನನ್ನು ಧ್ಯಾನಿಸಲು “ಓಂ ನಮೋ ನಾರಾಯಣಾಯ!” ಎಂಬ ತಿರುಮಂತ್ರವೇ ಆಧಾರ. ಭಗವದ್ ಧ್ಯಾನದ ಫಲವಾಗಿ ಅವನು ನಮಗೆ ಅವನ ಸೇವೆಯ ಆನಂದವನ್ನು ಮತ್ತು ಮೋಕ್ಷವನ್ನು ಅನುಗ್ರಹಿಸುವನು.
“ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ “– ಭಗವಂತನ ದಿವ್ಯರೂಪ ಸಕಲತಾಪಗಳನ್ನು ನೀಗಿಸುವ ಅದ್ವಿತೀಯ ರತ್ನ ತಟಾಕದಂತೆ .
ವಿಷಯ ಸಂಗ್ರಹ : “ತಿರುಪ್ಪಾವೈ ರಸಸ್ವಾಧಿನಿ” – ಬರೆದವರು ವಿದ್ವಾನ್ ವೇದಾನ್ತ ಸಾರಜ್ಞ
ಶ್ರೀ ಎಸ್. ಕೃಷ್ಣಾತಾತಾಚಾರ್ಯ )
(1) ಗಮಕ ಕವಿತಾ ವನಜ ಭಾಸ್ಕರ , ಗಮಕ ರತ್ನಾಕರ ಶ್ರೀಯುತ ಬಿ.ಎಸ್ .ಎಸ್ ಕೌಶಿಕ್ ರವರ ಶ್ರೀಮದಾಂಡಾಳ್ ಮಹಾ ವೈಭವಂ –ತಿರುಪ್ಪಾವೈ – ಮೂಲ, ಕನ್ನಡ ತಾತ್ಪರ್ಯ , ಷಟ್ಪದಿ, ಭಾವಾರ್ಥ , ಚೌಪದಿ )
ಚಿತ್ರಕೃಪೆ : ಕೇಶವ್ ವೆಂಕಟರಾಘವನ್ (ಪಾಶುರಂ – 1)
@highlight
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
#🔱 ಭಕ್ತಿ ಲೋಕ #ಪಾಂಡುರಂಗ ವಿಠ್ಠಲ
🙏ಈ ಬೆಳಗಿನಲ್ಲಿ ಪರಮಾತ್ಮನಲ್ಲಿ ಪ್ರಾರ್ಥನೆ 🙏
🌼 ಶ್ರೀಪಂಢರೀಶಾ ಪತಿತಪಾವನಾ|
ಏಕ ವಿಜ್ಞಾಪನಾ ಪಾಯಾಂಪಾಶೀ||೧||
🌺ಹೇ ಪತಿತಪಾವನಾ ಪಂಢರೀಶಾ, ನಿನ್ನ ಚರಣಗಳಲ್ಲಿ ನನ್ನದೊಂದು ವಿನಂತಿ ಇದೆ.
🌼ಅನಾಥಾ ಜೀವಾಂಚಾ ತೂ ಕಾಜಕೈವಾರೀ|
ಐಸೀ ಚರಾಚರೀ ಬ್ರೀದಾವಳೀ||೨||
🌺 ನೀನು ಅನಾಥ ಜೀವರುಗಳ ಕೈವಾರಿ(ಪರಮ ಮಿತ್ರ)ಯೆಂದು ಸಮಸ್ತ ಬ್ರಹ್ಮಾಂಡದಲ್ಲಿ ನಿನಗೆ ಬಿರುದಾವಳಿ ಇದೆ.
🌼ನ ಸಾಂಗತಾ ಕಳೇ ಅಂತರೀಚೇ ಗುಜ|
ಆತಾ ತುಝೀ ಲಾಜ ತುಜ ದೇವಾ||೩||
🌺ದೇವಾ, ಪ್ರತಿಯೊಬ್ಬರ ಅಂತಃಕರಣದಲ್ಲಿಯ ರಹಸ್ಯವು ನಿನಗೆ ತಿಳಿದಿದೆ.ಆದ್ದರಿಂದ ಸದಾ ನಿನ್ನ ನಾಮಸ್ಮರಣೆ ಮಾಡುವ ಭಕ್ತರ ಮರ್ಯಾದೆ ಉಳಿಸುವುದು ನಿನಗೇ ಬಿಟ್ಟಿದ್ದು.
🌼ಆಳಿಕರ ತ್ಯಾಚೇ ಕರಿಸೀ ಸಮಾಧಾನ|
ಅಭಯಾಚೇ ದಾನ ದೇವೂನಿಯಾ||೪||
🌺 ಏನಾದರೂ ಪ್ರಬಲ ಇಚ್ಛೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಭಕ್ತರಿಗೆ ಅಭಯದಾನ ಮಾಡಿ ನೀನು ಸಮಾಧಾನಪಡಿಸುತ್ತೀ.
🌼ತುಕಾಮ್ಹಣೇ ತೂಚಿ ಖೇಳೇ ದೋಹೀ ಠಾಯಿ|
ನಸೇಲ ತೋ ದೇಯೀ ಧೀರ ಮನಾ||೫||
🌺ಹೇ ದೇವಾ ಭಕ್ತರಲ್ಲಿ ಹೀಗೆ ಭಯವನ್ನುಂಟುಮಾಡುವವನು ನೀನೇ, ಅವರನ್ನು ನಿರ್ಭಯರನ್ನಾಗಿ ಮಾಡುವವನೂ ನೀನೇ(ಭಯಕೃತ್ -ಭಯನಾಶನಃ-ಶ್ರೀವಿಷ್ಣುಸಹಸ್ರನಾಮ) ಆದ್ದರಿಂದ ಸಂಕಟ ಪ್ರಸಂಗದಲ್ಲಿ ಅಧೈರ್ಯವುಂಟಾದಾಗ ನೀನು ನನ್ನ ಮನಸ್ಸಿನಲ್ಲಿ ಧೈರ್ಯ ತುಂಬಬೇಕೆಂದು ಸಂತ ತುಕಾರಾಮರು ಹೇಳುತ್ತಾರೆ.
🕉️ ಶ್ರೀಹರಿ ಸರ್ವೋತ್ತಮ ವಾಯು ಜೀವೋತ್ತಮ 🕉️
🪷 ಜೈ ಜೈ ರಾಮಕೃಷ್ಣ ಹರಿ/ಶುಭೋದಯ 🪷
🌼 ದಿನಾಂಕ ೧೭/೧೨/೨೦೨೫ ಬುಧವಾರ 🌼
🙏ಈ ದಿನದ ಬೆಳಗಿನ ಕಾಕಡಾರತಿ ನಂತರದ🙏
🌷 ಭಗವಾನ್ ವಿಠ್ಠಲ ಹಾಗೂ ಭಗವತಿ ರುಗ್ಮೀಣಿ ಮಾತೆಯ ಶುಭ ದರ್ಶನ 🌷
💥ಭೂವೈಕುಂಠ ಸಂತರ ತವರುರೂ ಪಂಢರಪುರ 💥
🚩 ಅಪಾಯ ಕೋಟಿಗಳಿಗೆ ಉಪಾಯ ಒಂದೇ ಶ್ರೀಹರಿಯ ನಾಮಸ್ಮರಣೆ 🚩
💐 ಜೈ ಶ್ರೀ ರಾಮ್ 💐
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
#ಶುಭ ಬುಧವಾರ 💐 #ಪಾರ್ವತಿ ಪರಮೇಶ್ವರ
#ನಿತ್ಯ ಪಂಚಾಂಗ. Nitya panchanga #ನಿತ್ಯ ಪಂಚಾಂಗ #ದಾರಿದೀಪೋಕ್ತಿ
*ದಾರಿದೀಪೋಕ್ತಿ*
*☘ನಮ್ಮನ್ನು ಇಷ್ಟಪಡುವವರು ನಮ್ಮಿಂದ ತಪ್ಪಾದಾಗ ನಮ್ಮನ್ನು ತಿದ್ದುತ್ತಾರೆ, ಬುದ್ದಿ ಹೇಳುತ್ತಾರೆ. ನಮ್ಮನ್ನು ಇಷ್ಟಪಡದವರಿಗೆ, ನಮ್ಮಿಂದ ದೂರವಾಗಲು ಅದೇ ನೆಪವಾಗಿ ಬಳಸಿಕೊಳ್ಳುತ್ತಾರೆ. ಕೆಲವರು ದೂರವಾದರೆ ಬೇಸರಿಸಿಕೊಳ್ಳಬಾರದು"*.!!🌿
🙏ನಮಸ್ತೆ🍀ಶುಭೋದಯ🍃ಶುಭದಿನ
---------------------
*ಶ್ರೀ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ*🙏🙏🙏
--------------------
|| ಶ್ರೀ ಗುರುಭ್ಯೋ ನಮಃ ||
*ಶುಭಮಸ್ತು,ನಿತ್ಯ ಪಂಚಾಂಗ*
ಬುಧವಾರ-ಡಿಸೆಂಬರ್-17,2025
ಸಂವತ್ಸರ : ಶ್ರೀ ವಿಶ್ವಾವಸು ನಾಮ ಸಂವತ್ಸರ
ಆಯನಂ : ದಕ್ಷಿಣಾಯಣ
ಋತು : ಹೇಮಂತ ಋತು
ಮಾಸ : ಮಾರ್ಗಶಿರ ಮಾಸ
ಪಕ್ಷ : ಕೃಷ್ಣ ಪಕ್ಷ
ವಾಸರ : ಸೌಮ್ಯವಾಸರ
ತಿಥಿ : ತ್ರಯೋದಶೀ ಗುರುವಾರ ಬೆ.2:32 ವರೆಗೆ
ನಕ್ಷತ್ರ: ವಿಶಾಖ ಸಂ.5:11 ವರೆಗೆ
ಯೋಗ : ಸುಕರ್ಮ ಮ.2:16 ವರೆಗೆ
ಕರಣ : ಗರಜ ಮ. 1:15 ವರೆಗೆ, ವಣಿಜ ಗುರುವಾರ ಬೆ.2:32 ವರೆಗೆ
--------------------
ರಾಹುಕಾಲ : ಮ.12:00 ಇಂದ ಮ.1:30 ವರೆಗೆ
ಗುಳಿಕಕಾಲ : ಬೆ.10:30 ಇಂದ ಮ.12:00 ವರೆಗೆ
ಯಮಗಂಡ : ಬೆ.7:30 ಇಂದ ಬೆ.9:00 ವರೆಗೆ
---------------------
*ಇಂದಿನ ವಿಶೇಷ* : ಭಾರತೀಯ ಕ್ರಿಕೆಟ್ ದಿಗ್ಗಜ ಸೈಯದ್ ಕೀರ್ಮಾನಿ ಅವರ ಜನ್ಮದಿನ, ಪ್ರದೋಷ
------------------
*॥ಸರ್ವೆಜನಃ ಸುಖಿನೋಭವಂತು॥*
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
#ತಿಳಿಯಬೇಕಾದ ವಿಷಯ
🌿ಉಪವಾಸದ ಲಕ್ಷಣ🌿
ಉಪಾವೃತ್ತಸ್ತು ಪಾಪೇಭೋ ಯಸ್ತು ವಾಸೋ ಗುಣೈಃ ಸಹ | ಉಪವಾಸಃ ಸ ವಿಶ್ಲೇಯಃ ಸರ್ವಭೋಗವಿವರ್ಜಿತಃ ||
- ವಿಷ್ಣುಧರ್ಮೋತ್ತರಪುರಾಣ
ಅರ್ಥ: ಪಾಪಗಳಿಂದ ದೂರವಿದ್ದು, ಸತ್ಪವೃತ್ತಿಗಳಲ್ಲಿ ವಾಸಿಸುವವನು - ಅವನೇ ಉಪವಾಸಸ್ಥ.
ಅದು ಕೇವಲ ಆಹಾರವರ್ಜನೆ ಅಲ್ಲ, ಭೋಗವರ್ಜನೆ ಮತ್ತು ಚಿತ್ತಶುದ್ಧಿ.
ಆ ದಿನ ಮನಸ್ಸು, ಮಾತು, ಕರ್ಮ
- ಮೂರು ಶುದ್ಧವಾಗಿರಬೇಕು.
ಹರಿನಾಮ, ಪಾಠ, ಧ್ಯಾನಗಳಲ್ಲಿ ನಿರತರಾಗಬೇಕು.
🪔ಉಪವಾಸ ಎಂದರೆ ದೇಹದ ಹಸಿವು ಅಲ್ಲ - ಆತ್ಮದ ಜಾಗೃತಿ. ದೋಷಗಳಿಂದ ದೂರವಿದ್ದು, ಗುಣಗಳಲ್ಲಿ ವಾಸಿಸುವುದೇ ನಿಜ ಉಪವಾಸ! 🙏🌸🙏🌸🙏
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
#🙏ಲಕ್ಷ್ಮಿ ದೇವಿ🌸
🙏 ಹರಿಃ ಓಂ 🕉️ ಶ್ರೀ ಮಹಾಲಕ್ಷ್ಮೀ ಸುಪ್ರಭಾತಂ
ಶ್ರೀಮಹಾಲಕ್ಷ್ಮೀಸುಪ್ರಭಾತಂ ..🙏🙏
ಶ್ರೀಲಕ್ಷ್ಮಿ ಶ್ರೀಮಹಾಲಕ್ಷ್ಮಿ ಕ್ಷೀರಸಾಗರಕನ್ಯಕೇ.
ಉತ್ತಿಷ್ಠ ಹರಿಸಂಪ್ರೀತೇ ಭಕ್ತಾನಾಂ ಭಾಗ್ಯದಾಯಿನಿ .
ಉತ್ತಿಷ್ಠೋತ್ತಿಷ್ಠ ಶ್ರೀಲಕ್ಷ್ಮಿ ವಿಷ್ಣುವಕ್ಷಸ್ಥಲಾಲಯೇ
ಉತ್ತಿಷ್ಠ ಕರುಣಾಪೂರ್ಣೇ ಲೋಕಾನಾಂ ಶುಭದಾಯಿನಿ .. 1..
ಶ್ರೀಪದ್ಮಮಧ್ಯವಸಿತೇ ವರಪದ್ಮನೇತ್ರೇ
ಶ್ರೀಪದ್ಮಹಸ್ತಚಿರಪೂಜಿತಪದ್ಮಪಾದೇ .
ಶ್ರೀಪದ್ಮಜಾತಜನನಿ ಶುಭಪದ್ಮವಕ್ತ್ರೇ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 2..
ಜಾಂಬೂನದಾಭಸಮಕಾಂತಿವಿರಾಜಮಾನೇ
ತೇಜೋಸ್ವರೂಪಿಣಿ ಸುವರ್ಣವಿಭೂಷಿತಾಂಗಿ .
ಸೌವರ್ಣವಸ್ತ್ರಪರಿವೇಷ್ಟಿತದಿವ್ಯದೇಹೇ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 3..
ಸರ್ವಾರ್ಥಸಿದ್ಧಿದೇ ವಿಷ್ಣುಮನೋಽನುಕೂಲೇ
ಸಂಪ್ರಾರ್ಥಿತಾಖಿಲಜನಾವನದಿವ್ಯಶೀಲೇ .
ದಾರಿದ್ರ್ಯದುಃಖಭಯನಾಶಿನಿ ಭಕ್ತಪಾಲೇ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 4..
ಚಂದ್ರಾನುಜೇ ಕಮಲಕೋಮಲಗರ್ಭಜಾತೇ
ಚಂದ್ರಾರ್ಕವಹ್ನಿನಯನೇ ಶುಭಚಂದ್ರವಕ್ತ್ರೇ .
ಹೇ ಚಂದ್ರಿಕಾಸಮಸುಶೀತಲಮಂದಹಾಸೇ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 5..
ಶ್ರೀಆದಿಲಕ್ಷ್ಮಿ ಸಕಲೇಪ್ಸಿತದಾನದಕ್ಷೇ
ಶ್ರೀಭಾಗ್ಯಲಕ್ಷ್ಮಿ ಶರಣಾಗತ ದೀನಪಕ್ಷೇ .
ಐಶ್ವರ್ಯಲಕ್ಷ್ಮಿ ಚರಣಾರ್ಚಿತಭಕ್ತರಕ್ಷಿನ್
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 6..
ಶ್ರೀಧೈರ್ಯಲಕ್ಷ್ಮಿ ನಿಜಭಕ್ತಹೃದಂತರಸ್ಥೇ
ಸಂತಾನಲಕ್ಷ್ಮಿ ನಿಜಭಕ್ತಕುಲಪ್ರವೃದ್ಧೇ .
ಶ್ರೀಜ್ಞಾನಲಕ್ಷ್ಮಿ ಸಕಲಾಗಮಜ್ಞಾನದಾತ್ರಿ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 7..
ಸೌಭಾಗ್ಯದಾತ್ರಿ ಶರಣಂ ಗಜಲಕ್ಷ್ಮಿ ಪಾಹಿ
ದಾರಿದ್ರ್ಯಧ್ವಂಸಿನಿ ನಮೋ ವರಲಕ್ಷ್ಮಿ ಪಾಹಿ .
ಸತ್ಸೌಖ್ಯದಾಯಿನಿ ನಮೋ ಧನಲಕ್ಷ್ಮಿ ಪಾಹಿ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 8..
ಶ್ರೀರಾಜ್ಯಲಕ್ಷ್ಮಿ ನೃಪವೇಶ್ಮಗತೇ ಸುಹಾಸಿನ್
ಶ್ರೀಯೋಗಲಕ್ಷ್ಮಿ ಮುನಿಮಾನಸಪದ್ಮವಾಸಿನ್ .
ಶ್ರೀಧಾನ್ಯಲಕ್ಷ್ಮಿ ಸಕಲಾವನಿಕ್ಷೇಮದಾತ್ರಿ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 9..
ಶ್ರೀಪಾರ್ವತೀ ತ್ವಮಸಿ ಶ್ರೀಕರಿ ಶೈವಶೈಲೇ
ಕ್ಷೀರೋದಧೇಸ್ತ್ವಮಸಿ ಪಾವನಿ ಸಿಂಧುಕನ್ಯಾ .
ಸ್ವರ್ಗಸ್ಥಲೇ ತ್ವಮಸಿ ಕೋಮಲೇ ಸ್ವರ್ಗಲಕ್ಷ್ಮೀ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 10..
ಗಂಗಾ ತ್ವಮೇವ ಜನನೀ ತುಲಸೀ ತ್ವಮೇವ
ಕೃಷ್ಣಪ್ರಿಯಾ ತ್ವಮಸಿ ಭಾಂಡಿರದಿವ್ಯಕ್ಷೇತ್ರೇ .
ರಾಜಗೃಹೇ ತ್ವಮಸಿ ಸುಂದರಿ ರಾಜ್ಯಲಕ್ಷ್ಮೀ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 11..
ಪದ್ಮಾವತೀ ತ್ವಮಸಿ ಪದ್ಮವನೇ ವರೇಣ್ಯೇ
ಶ್ರೀಸುಂದರೀ ತ್ವಮಸಿ ಶ್ರೀಶತಶೃಂಗಕ್ಷೇತ್ರೇ .
ತ್ವಂ ಭೂತಲೇಽಸಿ ಶುಭದಾಯಿನಿ ಮರ್ತ್ಯಲಕ್ಷ್ಮೀ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 12..
ಚಂದ್ರಾ ತ್ವಮೇವ ವರಚಂದನಕಾನನೇಷು
ದೇವಿ ಕದಂಬವಿಪಿನೇಽಸಿ ಕದಂಬಮಾಲಾ .
ತ್ವಂ ದೇವಿ ಕುಂದವನವಾಸಿನಿ ಕುಂದದಂತೀ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 13..
ಶ್ರೀವಿಷ್ಣುಪತ್ನಿ ವರದಾಯಿನಿ ಸಿದ್ಧಲಕ್ಷ್ಮಿ
ಸನ್ಮಾರ್ಗದರ್ಶಿನಿ ಶುಭಂಕರಿ ಮೋಕ್ಷಲಕ್ಷ್ಮಿ .
ಶ್ರೀದೇವದೇವಿ ಕರುಣಾಗುಣಸಾರಮೂರ್ತೇ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 14..
ಅಷ್ಟೋತ್ತರಾರ್ಚನಪ್ರಿಯೇ ಸಕಲೇಷ್ಟದಾತ್ರಿ
ಹೇ ವಿಶ್ವಧಾತ್ರಿ ಸುರಸೇವಿತಪಾದಪದ್ಮೇ .
ಸಂಕಷ್ಟನಾಶಿನಿ ಸುಖಂಕರಿ ಸುಪ್ರಸನ್ನೇ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 15..
ಆದ್ಯಂತರಹಿತೇ ವರವರ್ಣಿನಿ ಸರ್ವಸೇವ್ಯೇ
ಸೂಕ್ಷ್ಮಾತಿಸೂಕ್ಷ್ಮತರರೂಪಿಣಿ ಸ್ಥೂಲರೂಪೇ .
ಸೌಂದರ್ಯಲಕ್ಷ್ಮಿ ಮಧುಸೂದನಮೋಹನಾಂಗಿ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 16..
ಸೌಖ್ಯಪ್ರದೇ ಪ್ರಣತಮಾನಸಶೋಕಹಂತ್ರಿ
ಅಂಬೇ ಪ್ರಸೀದ ಕರುಣಾಸುಧಯಾಽಽರ್ದ್ರದೃಷ್ಟ್ಯಾ .
ಸೌವರ್ಣಹಾರಮಣಿನೂಪುರಶೋಭಿತಾಂಗಿ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 17..
ನಿತ್ಯಂ ಪಠಾಮಿ ಜನನಿ ತವ ನಾಮ ಸ್ತೋತ್ರಂ
ನಿತ್ಯಂ ಕರೋಮಿ ತವ ನಾಮಜಪಂ ವಿಶುದ್ಧೇ .
ನಿತ್ಯಂ ಶೃಣೋಮಿ ಭಜನಂ ತವ ಲೋಕಮಾತಃ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 18..
ಮಾತಾ ತ್ವಮೇವ ಜನನೀ ಜನಕಸ್ತ್ವಮೇವ
ದೇವಿ ತ್ವಮೇವ ಮಮ ಭಾಗ್ಯನಿಧಿಸ್ತ್ವಮೇವ .
ಸದ್ಭಾಗ್ಯದಾಯಿನಿ ತ್ವಮೇವ ಶುಭಪ್ರದಾತ್ರೀ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 19..
ವೈಕುಂಠಧಾಮನಿಲಯೇ ಕಲಿಕಲ್ಮಷಘ್ನೇ
ನಾಕಾಧಿನಾಥವಿನುತೇ ಅಭಯಪ್ರದಾತ್ರಿ .
ಸದ್ಭಕ್ತರಕ್ಷಣಪರೇ ಹರಿಚಿತ್ತವಾಸಿನ್
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 20..
ನಿರ್ವ್ಯಾಜಪೂರ್ಣಕರುಣಾರಸಸುಪ್ರವಾಹೇ
ರಾಕೇಂದುಬಿಂಬವದನೇ ತ್ರಿದಶಾಭಿವಂದ್ಯೇ .
ಆಬ್ರಹ್ಮಕೀಟಪರಿಪೋಷಿಣಿ ದಾನಹಸ್ತೇ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 21..
ಲಕ್ಷ್ಮೀತಿ ಪದ್ಮನಿಲಯೇತಿ ದಯಾಪರೇತಿ
ಭಾಗ್ಯಪ್ರದೇತಿ ಶರಣಾಗತವತ್ಸಲೇತಿ .
ಧ್ಯಾಯಾಮಿ ದೇವಿ ಪರಿಪಾಲಯ ಮಾಂ ಪ್ರಸನ್ನೇ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 22..
ಶ್ರೀಪದ್ಮನೇತ್ರರಮಣೀವರೇ ನೀರಜಾಕ್ಷಿ
ಶ್ರೀಪದ್ಮನಾಭದಯಿತೇ ಸುರಸೇವ್ಯಮಾನೇ .
ಶ್ರೀಪದ್ಮಯುಗ್ಮಧೃತನೀರಜಹಸ್ತಯುಗ್ಮೇ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 23..
ಇತ್ಥಂ ತ್ವದೀಯಕರುಣಾತ್ಕೃತಸುಪ್ರಭಾತಂ
ಯೇ ಮಾನವಾಃ ಪ್ರತಿದಿನಂ ಪ್ರಪಠಂತಿ ಭಕ್ತ್ಯಾ .
ತೇಷಾಂ ಪ್ರಸನ್ನಹೃದಯೇ ಕುರು ಮಂಗಲಾನಿ
ಶ್ರೀಲಕ್ಷ್ಮಿ ಭಕ್ತವರದೇ ತವ ಸುಪ್ರಭಾತಂ .. 24..
ಜಲಧೀಶಸುತೇ ಜಲಜಾಕ್ಷವೃತೇ ಜಲಜೋದ್ಭವಸನ್ನುತೇ ದಿವ್ಯಮತೇ .
ಜಲಜಾಂತರನಿತ್ಯನಿವಾಸರತೇ ಶರಣಂ ಶರಣಂ ವರಲಕ್ಷ್ಮಿ ನಮಃ .. 25..
ಪ್ರಣತಾಖಿಲದೇವಪದಾಬ್ಜಯುಗೇ ಭುವನಾಖಿಲಪೋಷಣ ಶ್ರೀವಿಭವೇ .
ನವಪಂಕಜಹಾರವಿರಾಜಗಲೇ ಶರಣಂ ಶರಣಂ ಗಜಲಕ್ಷ್ಮಿ ನಮಃ .. 26..
ಘನಭೀಕರಕಷ್ಟವಿನಾಶಕರಿ ನಿಜಭಕ್ತದರಿದ್ರಪ್ರಣಾಶಕರಿ .
ಋಣಮೋಚನಿ ಪಾವನಿ ಸೌಖ್ಯಕರಿ ಶರಣಂ ಶರಣಂ ಧನಲಕ್ಷ್ಮಿ ನಮಃ .. 27..
ಅತಿಭೀಕರಕ್ಷಾಮವಿನಾಶಕರಿ ಜಗದೇಕಶುಭಂಕರಿ ಧಾನ್ಯಪ್ರದೇ .
ಸುಖದಾಯಿನಿ ಶ್ರೀಫಲದಾನಕರಿ ಶರಣಂ ಶರಣಂ ಶುಭಲಕ್ಷ್ಮಿ ನಮಃ .. 28..
ಸುರಸಂಘಶುಭಂಕರಿ ಜ್ಞಾನಪ್ರದೇ ಮುನಿಸಂಘಪ್ರಿಯಂಕರಿ ಮೋಕ್ಷಪ್ರದೇ .
ನರಸಂಘಜಯಂಕರಿ ಭಾಗ್ಯಪ್ರದೇ ಶರಣಂ ಶರಣಂ ಜಯಲಕ್ಷ್ಮಿ ನಮಃ .. 29..
ಪರಿಸೇವಿತಭಕ್ತಕುಲೋದ್ಧರಿಣಿ ಪರಿಭಾವಿತದಾಸಜನೋದ್ಧರಿಣಿ .
ಮಧುಸೂದನಮೋಹಿನಿ ಶ್ರೀರಮಣಿ ಶರಣಂ ಶರಣಂ ತವ ಲಕ್ಷ್ಮಿ ನಮಃ .. 28..
ಶುಭದಾಯಿನಿ ವೈಭವಲಕ್ಷ್ಮಿ ನಮೋ ವರದಾಯಿನಿ ಶ್ರೀಹರಿಲಕ್ಷ್ಮಿ ನಮಃ .
ಸುಖದಾಯಿನಿ ಮಂಗಲಲಕ್ಷ್ಮಿ ನಮೋ ಶರಣಂ ಶರಣಂ ಸತತಂ ಶರಣಂ .. 29..
ವರಲಕ್ಷ್ಮಿ ನಮೋ ಧನಲಕ್ಷ್ಮಿ ನಮೋ ಜಯಲಕ್ಷ್ಮಿ ನಮೋ ಗಜಲಕ್ಷ್ಮಿ ನಮಃ .
ಜಯ ಷೋಡಶಲಕ್ಷ್ಮಿ ನಮೋಽಸ್ತು ನಮೋ ಶರಣಂ ಶರಣಂ ಸತತಂ ಶರಣಂ .. 30..
ನಮೋ ಆದಿಲಕ್ಷ್ಮಿ ನಮೋ ಜ್ಞಾನಲಕ್ಷ್ಮಿ ನಮೋ ಧಾನ್ಯಲಕ್ಷ್ಮಿ ನಮೋ ಭಾಗ್ಯಲಕ್ಷ್ಮಿ .
ಮಹಾಲಕ್ಷ್ಮಿ ಸಂತಾನಲಕ್ಷ್ಮಿ ಪ್ರಸೀದ ನಮಸ್ತೇ ನಮಸ್ತೇ ನಮೋ ಶಾಂತಲಕ್ಷ್ಮಿ .. 30..
ನಮೋ ಸಿದ್ಧಿಲಕ್ಷ್ಮಿ ನಮೋ ಮೋಕ್ಷಲಕ್ಷ್ಮಿ ನಮೋ ಯೋಗಲಕ್ಷ್ಮಿ ನಮೋ ಭೋಗಲಕ್ಷ್ಮಿ .
ನಮೋ ಧೈರ್ಯಲಕ್ಷ್ಮಿ ನಮೋ ವೀರಲಕ್ಷ್ಮಿ ನಮಸ್ತೇ ನಮಸ್ತೇ ನಮೋ ಶಾಂತಲಕ್ಷ್ಮಿ .. 31..
ಅಜ್ಞಾನಿನಾ ಮಯಾ ದೋಷಾನಶೇಷಾನ್ವಿಹಿತಾನ್ ರಮೇ .
ಕ್ಷಮಸ್ವ ತ್ವಂ ಕ್ಷಮಸ್ವ ತ್ವಂ ಅಷ್ಟಲಕ್ಷ್ಮಿ ನಮೋಽಸ್ತುತೇ .. 32..
ದೇವಿ ವಿಷ್ಣುವಿಲಾಸಿನಿ ಶುಭಕರಿ ದೀನಾರ್ತಿವಿಚ್ಛೇದಿನಿ
ಸರ್ವೈಶ್ವರ್ಯಪ್ರದಾಯಿನಿ ಸುಖಕರಿ ದಾರಿದ್ರ್ಯವಿಧ್ವಂಸಿನಿ .
ನಾನಾಭೂಷಿತಭೂಷಣಾಂಗಿ ಜನನಿ ಕ್ಷೀರಾಬ್ಧಿಕನ್ಯಾಮಣಿ
ದೇವಿ ಭಕ್ತಸುಪೋಷಿಣಿ ವರಪ್ರದೇ ಲಕ್ಷ್ಮಿ ಸದಾ ಪಾಹಿ ನಃ .. 33..
ಮಾಂ
ಸದ್ಯಃಪ್ರಫುಲ್ಲಸರಸೀರುಹಪತ್ರನೇತ್ರೇ
ಹಾರಿದ್ರಲೇಪಿತಸುಕೋಮಲಶ್ರೀಕಪೋಲೇ .
ಪೂರ್ಣೇಂದುಬಿಂಬವದನೇ ಕಮಲಾಂತರಸ್ಥೇ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 34..
ಭಕ್ತಾಂತರಂಗಗತಭಾವವಿಧೇ ನಮಸ್ತೇ
ರಕ್ತಾಂಬುಜಾತನಿಲಯೇ ಸ್ವಜನಾನುರಕ್ತೇ .
ಮುಕ್ತಾವಲೀಸಹಿತಭೂಷಣಭೂಷಿತಾಂಗಿ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 35..
ಕ್ಷಾಮಾದಿತಾಪಹಾರಿಣಿ ನವಧಾನ್ಯರೂಪೇ
ಅಜ್ಞಾನಘೋರತಿಮಿರಾಪಹಜ್ಞಾನರೂಪೇ .
ದಾರಿದ್ರ್ಯದುಃಖಪರಿಮರ್ದಿತಭಾಗ್ಯರೂಪೇ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 36..
ಚಂಪಾಲತಾಭದರಹಾಸವಿರಾಜವಕ್ತ್ರೇ
ಬಿಂಬಾಧರೇಷು ಕಪಿಕಾಂಚಿತಮಂಜುವಾಣಿ .
ಶ್ರೀಸ್ವರ್ಣಕುಂಭಪರಿಶೋಭಿತದಿವ್ಯಹಸ್ತೇ
ಲಕ್ಷ್ಮಿ ತ್ವತ್ವದೀಯಚರಣೌ ಶರಣಂ ಪ್ರಪದ್ಯೇ .. 37..
ಸ್ವರ್ಗಾಪವರ್ಗಪದವಿಪ್ರದೇ ಸೌಮ್ಯಭಾವೇ
ಸರ್ವಾಗಮಾದಿವಿನುತೇ ಶುಭಲಕ್ಷಣಾಂಗಿ .
ನಿತ್ಯಾರ್ಚಿತಾಂಘ್ರಿಯುಗಲೇ ಮಹಿಮಾಚರಿತ್ರೇ
ಲಕ್ಷ್ಮಿ ತ್ವತ್ವದೀಯಚರಣೌ ಶರಣಂ ಪ್ರಪದ್ಯೇ .. 38..
ಜಾಜ್ಜ್ವಲ್ಯಕುಂಡಲವಿರಾಜಿತಕರ್ಣಯುಗ್ಮೇ
ಸೌವರ್ಣಕಂಕಣಸುಶೋಭಿತಹಸ್ತಪದ್ಮೇ .
ಮಂಜೀರಶಿಂಜಿತಸುಕೋಮಲಪಾವನಾಂಘ್ರೇ
ಲಕ್ಷ್ಮಿ ತ್ವತ್ವದೀಯಚರಣೌ ಶರಣಂ ಪ್ರಪದ್ಯೇ .. 39..
ಸರ್ವಾಪರಾಧಶಮನಿ ಸಕಲಾರ್ಥದಾತ್ರಿ
ಪರ್ವೇಂದುಸೋದರಿ ಸುಪರ್ವಗಣಾಭಿರಕ್ಷಿನ್ .
ದುರ್ವಾರಶೋಕಮಯಭಕ್ತಗಣಾವನೇಷ್ಟೇ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 40..
ಬೀಜಾಕ್ಷರತ್ರಯವಿರಾಜಿತಮಂತ್ರಯುಕ್ತೇ
ಆದ್ಯಂತವರ್ಣಮಯಶೋಭಿತಶಬ್ದರೂಪೇ .
ಬ್ರಹ್ಮಾಂಡಭಾಂಡಜನನಿ ಕಮಲಾಯತಾಕ್ಷಿ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 41..
ಶ್ರೀದೇವಿ ಬಿಲ್ವನಿಲಯೇ ಜಯ ವಿಶ್ವಮಾತಃ var ವಸುದಾಯಿನಿ
ಆಹ್ಲಾದದಾತ್ರಿ ಧನಧಾನ್ಯಸುಖಪ್ರದಾತ್ರಿ .
ಶ್ರೀವೈಷ್ಣವಿ ದ್ರವಿಣರೂಪಿಣಿ ದೀರ್ಘವೇಣಿ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 42..
ಆಗಚ್ಛ ತಿಷ್ಠ ತವ ಭಕ್ತಗಣಸ್ಯ ಗೇಹೇ
ಸಂತುಷ್ಟಪೂರ್ಣಹೃದಯೇನ ಸುಖಾನಿ ದೇಹಿ .
ಆರೋಗ್ಯಭಾಗ್ಯಮಕಲಂಕಯಶಾಂಸಿ ದೇಹಿ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 43..
ಶ್ರೀಆದಿಲಕ್ಷ್ಮಿ ಶರಣಂ ಶರಣಂ ಪ್ರಪದ್ಯೇ
ಶ್ರೀಅಷ್ಟಲಕ್ಷ್ಮಿ ಶರಣಂ ಶರಣಂ ಪ್ರಪದ್ಯೇ .
ಶ್ರೀವಿಷ್ಣುಪತ್ನಿ ಶರಣಂ ಶರಣಂ ಪ್ರಪದ್ಯೇ
ಲಕ್ಷ್ಮಿ ತ್ವದೀಯಚರಣೌ ಶರಣಂ ಪ್ರಪದ್ಯೇ .. 44..
ಮಂಗಲಂ ಕರುಣಾಪೂರ್ಣೇ ಮಂಗಲಂ ಭಾಗ್ಯದಾಯಿನಿ .
ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 45..
ಅಷ್ಟಕಷ್ಟಹರೇ ದೇವಿ ಅಷ್ಟಭಾಗ್ಯವಿವರ್ಧಿನಿ .
ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 46..
ಕ್ಷೀರೋದಧಿಸಮುದ್ಭೂತೇ ವಿಷ್ಣುವಕ್ಷಸ್ಥಲಾಲಯೇ .
ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 47..
ಧನಲಕ್ಷ್ಮಿ ಧಾನ್ಯಲಕ್ಷ್ಮಿ ವಿದ್ಯಾಲಕ್ಷ್ಮಿ ಯಶಸ್ಕರಿ .
ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 48..
ಸಿದ್ಧಲಕ್ಷ್ಮಿ ಮೋಕ್ಷಲಕ್ಷ್ಮಿ ಜಯಲಕ್ಷ್ಮಿ ಶುಭಂಕರಿ .
ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 49..
ಸಂತಾನಲಕ್ಷ್ಮಿ ಶ್ರೀಲಕ್ಷ್ಮಿ ಗಜಲಕ್ಷ್ಮಿ ಹರಿಪ್ರಿಯೇ .
ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 50..
ದಾರಿದ್ರ್ಯನಾಶಿನಿ ದೇವಿ ಕೋಲ್ಹಾಪುರನಿವಾಸಿನಿ .
ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 51..
ವರಲಕ್ಷ್ಮಿ ಧೈರ್ಯಲಕ್ಷ್ಮಿ ಶ್ರೀಷೋಡಶಭಾಗ್ಯಂಕರಿ .
ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 52..
ಮಂಗಲಂ ಮಂಗಲಂ ನಿತ್ಯಂ ಮಂಗಲಂ ಜಯಮಂಗಲಂ .
ಮಂಗಲಂ ಶ್ರೀಮಹಾಲಕ್ಷ್ಮಿ ಮಂಗಲಂ ಶುಭಮಂಗಲಂ .. 53..
🙏🙏 ಇತಿ ಶ್ರೀಮಹಾಲಕ್ಷ್ಮೀಸುಪ್ರಭಾತಂ ಸಂಪೂರ್ಣಂ .🙏🙏
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏




![ತಿರುಪ್ಪಾವೈ ಪಾಶುರಂ - @vishnuprabhanc vishnuprabhanc] vishnuprabhanc Vishnu Vishnu Arts WAut Qvishnuprabhanc @vishnuprabhanc vishnuprabhanc] vishnuprabhanc Vishnu Vishnu Arts WAut Qvishnuprabhanc - ShareChat ತಿರುಪ್ಪಾವೈ ಪಾಶುರಂ - @vishnuprabhanc vishnuprabhanc] vishnuprabhanc Vishnu Vishnu Arts WAut Qvishnuprabhanc @vishnuprabhanc vishnuprabhanc] vishnuprabhanc Vishnu Vishnu Arts WAut Qvishnuprabhanc - ShareChat](https://cdn4.sharechat.com/bd5223f_s1w/compressed_gm_40_img_874346_1ba07b38_1765942868790_sc.jpg?tenant=sc&referrer=user-profile-service%2FrequestType50&f=790_sc.jpg)




