manmohan
520 views • 6 days ago
RCB ಫ್ಯಾನ್ಸ್ಗೆ ಗುಡ್ ನ್ಯೂಸ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯ ನಡೆಸಲು ಸರ್ಕಾರ ಅನುಮತಿ.!
ಆರ್ಸಿಬಿ ಫ್ಯಾನ್ಸ್ಗೆ ಗುಡ್ ನ್ಯೂಸ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತದಿಂದ ಬ್ರೇಕ್ ಬಿದ್ದಿದ್ದ ಪಂದ್ಯಗಳಿಗೆ ಮತ್ತೆ ಸರ್ಕಾರದ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. RCB ಅಧಿಕೃತ ಘೋಷಣೆ ಮಾಡಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ.
ಒಂದೆಡೆ 11ಕ್ಕೂ ಹೆಚ್ಚು ಮಂದಿ ಮೃತಪಟ್ಟರೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.
ಇದರ ಪರಿಣಾಮ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಬ್ರೇಕ್ ಬಿದ್ದಿತ್ತು.
ಆದರೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷತೆಯ ಹೊಸ ಕೆಎಸ್ಎಸಿಎ ಪದಾಧಿಕಾರಿಗಳ ತಂಡ ಸತತ ಮಾತುಕತೆ ಮೂಲಕ ಮತ್ತೆ ಚಿನ್ನಸ್ವಾಮಿಯಲ್ಲಿ
ಪಂದ್ಯ ಆಯೋಜನೆಗೆ ಸಜ್ಜಾಗಿದೆ.
ಕಾಲ್ತುಳಿತ ಘಟನೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣಣದಲ್ಲಿ ಪಂದ್ಯಗಳ ಆಯೋಜನೆಗೆ ಒಂದೆಡೆ ಬಿಸಿಸಿಐ ಹಿಂದೇಟು ಹಾಕಿದ್ದರೆ, ಮತ್ತೊಂದೆಡೆ ರಾಜ್ಯ ಸರ್ಕಾರ ಕೂಡ ನಿರ್ಬಂಧ ಹೇರಿತ್ತು. ಇದೀಗ ಸರ್ಕಾರ ನೇಮಿಸಿದ್ದ ಸಮಿತಿ ಸಾಧಕ ಬಾಧಕಗಳ ಪರಿಶೀಲನೆ ನಡೆಸಿ ಪಂದ್ಯ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಗೆ ಸರ್ಕಾರದ ಸಮಿತಿ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಲಿದೆ. ಎಲ್ಲಾ ಭದ್ರತಾ ವ್ಯವಸ್ಥೆ, ಹಲವು ಷರತ್ತುಗಳ ಮೂಲಕ ಪಂದ್ಯ ಆಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು ವರದಿಯಾಗಿದೆ.
ಸರ್ಕಾರದ ಸಮಿತಿಯ ವರದಿ ಅಧರಿಸಿ ರಾಜ್ಯ ಸರ್ಕಾರ ಐಪಿಎಲ್ ಟೂರ್ನಿಯ ಬೆಂಗಳೂರು
ಪಂದ್ಯ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತವರಿನ ಪಂದ್ಯಗಳು ಬೆಂಗಳೂರಿನಲ್ಲಿ ಆಯೋಜಿಸಲು ಎಲ್ಲಾ
ಸಿದ್ಥತೆಗಳು ನಡೆದಿದೆ. ಹೀಗಾಗಿ ಅಭಿಮಾನಿಗಳು ನಿರಾಶರಾಗಬೇಕಿಲ್ಲ.
ಇತ್ತೀಚೆಗೆ ಆರ್ಸಿಬಿ ಫ್ರಾಂಚೈಸಿ ತವರಿನ ಪಂದ್ಯಗಳನ್ನು ಪುಣೆ ಅಥವಾ ರಾಯ್ಪುರದಲ್ಲಿ ಆಡಲು ಮುಂದಾಗಿತ್ತು ಅನ್ನೋ ವರದಿಗಳು ಹರಿದಾಡಿತ್ತು. ಇದರ ಬೆನ್ನಲ್ಲೇ ಆರ್ಸಿಬಿ ಫ್ರಾಂಚೈಸಿ ತವರಿನಲ್ಲಿ ಪಂದ್ಯ ಆಡಲು ಸುರಕ್ಷತಾ ಕ್ರಮಗಳ ಕುರಿತು
KSCA ಜೊತೆ ಚರ್ಚಿಸಿತ್ತು. ಕ್ರೀಡಾಂಗಣದಲ್ಲಿ
ಎಐ ಆಧಾರಿತ ಕ್ಯಾಮೆರಾ ಅಳವಡಿಕೆ, ಸುರಕ್ಷತಾ ಮಾನದಂಡಗಳ ಪಾಲನೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿತ್ತು.ಈ ಮೂಲಕ ಪರೋಕ್ಷವಾಗಿ ಆರ್ಸಿಬಿ ತವರಿನಲ್ಲೇ ಪಂದ್ಯ ಆಡಲು ಎಲ್ಲಾ ತಯಾರಿ ಮಾಡಿಕೊಂಡಿದೆ. ಇದರೊಂದಿಗೆ ಬೆಂಗಳೂರಿನಿಂದ ಪಂದ್ಯಗಳ ವರ್ಗಾವಣೆಗೆ ಪರೋಕ್ಷವಾಗಿಯೇ ಉತ್ತರ ನೀಡಿತ್ತು.
ಬೆಂಗಳೂರಿನಲ್ಲೇ ಪಂದ್ಯ ಆಡಲು ಫ್ಲಾಂಚೈಸಿ ಒಲವು:
ಐಪಿಎಲ್ ಟೂರ್ನಿಗೆ ತಯಾರಿಗಳು ನಡೆಯುತ್ತಿದೆ. ಇದೇ ವೇಳೆ ಪಂದ್ಯ ಆಯೋಜನೆ ಕುರಿತು ಗೊಂದಲ ಕಾರಣ ಆರ್ಸಿಬಿ ಅಭಿಮಾನಿಗಳು ನಿರಾಸೆಗೊಂಡಿದ್ದರು. ಆದರೆ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಯೋಜನೆಗೊಳ್ಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮತ್ತೆ ನೆಚ್ಚಿನ ತಂಡವನ್ನು ಹುರಿದುಂಬಿಸಲು ಅಭಿಮಾನಿಗಳಿಗೆ
ಮತ್ತೆ ಅವಕಾಶ ಒದಗಿ ಬರಲಿದೆ.
#LATEST #BENGALURU #CHINNASWAMYSTADIUM #RCB #IPL #KSCA #BCCI #GOODNEWS
13 likes
1 comment • 12 shares