ಬಸವಾದಿ ಶರಣ ಶರಣೆಯರು
3K Posts • 258K views
"ಯೋಗಿಗೆ ಕೋಪವೇ ಮಾಯೆ, ರೋಗಿಗೆ ಅಪಥ್ಯವೇ ಮಾಯೆ, ಜ್ಞಾನಿಗೆ ಮಿಥ್ಯವೇ ಮಾಯೆ, ಅರಿದೆನೆಂಬವರಿಗೆ ನಾನು ನೀನು ಎಂಬುದೇ ಮಾಯೆ, ಕಪಿಲಸಿದ್ಧ ಮಲ್ಲಿಕಾರ್ಜುನ.. ✍ ಶಿವಯೋಗಿ ಸಿದ್ದರಾಮೇಶ್ವರ ರ ವಚನ.. ವಚನದ ಭಾವಾರ್ಥ: ಯೋಗಿ ಯಾದವನಿಗೆ, ತಾಮಸ ಗುಣವಾದ ಕೋಪ ಇರಬಾರದು. ಆ ಕೋಪ ಯೋಗ ಸಾಧನೆಗೆ ಅಡ್ಡಿಯಾಗುತ್ತದೆ. ರೋಗಿ ತನ್ನ ಆರೋಗ್ಯವನ್ನು ಪುನಃ ಗಳಿಸಿಕೊಳ್ಳಬೇಕಾದರೆ ಆತ ಕೆಲವು ಆಹಾರಗಳನ್ನು ತೆಗೆದುಕೊಳ್ಳಬಾರದು, ಮತ್ತು ಕೆಲ ನಿಯಮಗಳನ್ನು ಅನುಸರಿಸ ಬೇಕಾಗುತ್ತದೆ ಇಲ್ಲದಿದ್ದರೆ ರೋಗ ಉಲ್ಬಣವಾಗಿ ರೋಗಿ ಸಾಯುತ್ತಾನೆ. ಸತ್ಯವನ್ನು ತಿಳಿಯುವವನಿಗೆ ಅಂದರೆ ಜ್ಞಾನಿಗೆ ಸುಳ್ಳು ವಿಷಯಗಳೇ ಜ್ಞಾನ ತಿಳಿಯುವುದಕ್ಕೆ ಅಡ್ಡಿಯಾಗುತ್ತದೆ. ಅದೇ ರೀತಿಯಲ್ಲಿ ಐಕ್ಯ ಸ್ಥಳವನ್ನು ತಿಳಿದ ಶರಣನಿಗೆ ನಾನು ಬೇರೆ, ಪರಮಾತ್ಮ ಬೇರೆ ಎನ್ನುವ ಭಾವನೆ ಇರಬಾರದು. ನಾನು ನೀನು ಎನ್ನುವ ಭಾವನೆಯಿಂದ ಮುಕ್ತನಾಗಬೇಕೆಂದು ಸಿದ್ದರಾಮೇಶ್ವರರು ಅಭಿಪ್ರಾಯ ಪಡುತ್ತಾರೆ..! #ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
12 likes
11 shares
"ಅಂಗದ ಮೇಲೆ ಲಿಂಗ ಸಾಹಿತ್ಯವಾದ ಬಳಿಕ ಸ್ಥಾವರದೈವಕ್ಕೆರಗಲಾಗದು. ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ??? ಕರಸ್ಥಲದ ದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಟೆಗೆರಗಿದಡೆ ನರಕದಲ್ಲಿಕ್ಕುವ ನಮ್ಮ ಕೂಡಲಸಂಗಮದೇವ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು
5 likes
7 shares