ಬಸವಾದಿ ಶರಣ ಶರಣೆಯರು

3K Posts • 299K views
ಕಾಯಕವೇ ಕೈಲಾಸ..
801 views 1 months ago
"ಕೆರೆಯ ನೀರು, ಮರದ ಪುಷ್ಪ ಧರಿಸಿದಡೇನು ಆಗುವುದೇ ಲಿಂಗಾರ್ಚನೆ, ನೀರ ಎರೆಯಲಿಕ್ಕೆ ಆತನೇನು ಬಿಸಿಲಿನಿಂದ ಬಳಲಿದನೇ? ಪುಷ್ಪವ ಧರಿಸಲಿಕ್ಕೆ ಆತನೇನು ವಿಟರಾಜನೇ? ನಿನ್ನ ಮನವೆಂಬ ನೀರಿನಿಂದ, ಜ್ಞಾನವೆಂಬ ಪುಷ್ಪದಿಂದ, ಪೂಜಿಸಬಲ್ಲಡೆ ಭಕ್ತನೆಂಬೆ, ಮಹೇಶ್ವರನೆಂಬೆ ನೋಡಾ ಕಪಿಲ ಸಿದ್ದ ಮಲ್ಲಿಕಾರ್ಜುನ..! ✍️ಶಿವಯೋಗಿ ಸಿದ್ದರಾಮೇಶ್ವರರ ವಚನ.. ವಚನದ ಭಾವಾರ್ಥ: ಸರಳ ಆಚರಣೆಯ ಪೂಜೆಯನ್ನು ಸಿದ್ದರಾಮೇಶ್ವರರು ಪ್ರತಿಪಾದಿಸಿದ್ದಾರೆ. ಅಭಿಷೇಕ ಮಾಡಿ ಪೂಜೆ ಮಾಡುತ್ತೇನೆ ಎನ್ನಲು ದೇವರೇನು ಬಿಸಿಲಿನ ತಾಪಕ್ಕೆ ಒಳಗಾದವನೆ??? ಪುಷ್ಪದಿಂದ ಅಲಂಕರಿಸಲು ದೇವನೇನು ಶೋಕಿ ಮಾಡುವ ರಸಿಕನಾ??? ಶುದ್ಧ ಮನಸ್ಸು ಮತ್ತು ಜ್ಞಾನದಿಂದ ಆಂತರಿಕವಾಗಿ ಆರಾಧಿಸುವುದೇ ಪೂಜೆ..! #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು
17 likes
14 shares
ಕಾಯಕವೇ ಕೈಲಾಸ..
705 views 23 days ago
"ಲೋಕದ ಲೋಕಿಗಳು ಏಕಯ್ಯಾ ನುಡಿವರು ಲೋಕನಾಥನಿಪ್ಪ ಠಾವನರಿಯರು. ಕಲ್ಲೊಳಗೆ ಹೇಮ, ಕಾಷದೊಳಗಗ್ನಿ, ತಿಲದೊಳು ತೈಲ, ಜಲದೊಳು ಮುತ್ತು, ಹಾಲೊಳು ತುಪ್ಪ, ಸ್ಥಲದೊಳಗೆ ರತ್ನವಿಪ್ಪ ಪರಿಯಲ್ಲಿ ನೀವಿಪ್ಪ ಭೇದವ ನರರೆತ್ತ ಬಲ್ಲರೈ, ಕಪಿಲಸಿದ್ಧಮಲ್ಲಿಕಾರ್ಜುನಾ.. ✍️ ಸಿದ್ಧರಾಮೇಶ್ವರರ ವಚನ.. ಸಮಗ್ರ ವಚನ ಸಂಪುಟ: 4 ವಚನದ ಸಂಖ್ಯೆ: 978 #ಶರಣ ಸಾಹಿತ್ಯ #//🌳ವಚನ ಸಾಹಿತ್ಯ 🌳// #ವಚನಗಳು #ಬಸವಾದಿ ಶರಣ ಶರಣೆಯರು #ಬಸವಣ್ಣನವರ ವಚನಗಳು
12 likes
16 shares