# ಆಧ್ಯಾತ್ಮಿಕ ಬರಹಗಳು

8 Posts • 40K views
ರಾಧಾಕೃಷ್ಣ 🦚💙
657 views 1 months ago
## ಆಧ್ಯಾತ್ಮಿಕ ಬರಹಗಳು ಧರ್ಮದ ಹಾದಿಯನ್ನು ಬೆಳಗಿಸುವ ಭಗವಾನ್ ರಾಮನ ಕುರಿತ ಐದು ದೈವಿಕ ಸತ್ಯಗಳು ಧರ್ಮದ ಹಾದಿಯನ್ನು ಬೆಳಗಿಸುವ ಭಗವಾನ್ ರಾಮನ ಕುರಿತ ಐದು ದೈವಿಕ ಸತ್ಯಗಳು ಧರ್ಮದ ಹಾದಿಯನ್ನು ಬೆಳಗಿಸುವ ಭಗವಾನ್ ರಾಮನ ಕುರಿತ ಐದು ದೈವಿಕ ಸತ್ಯಗಳು ಶ್ರೀರಾಮನ ಅಚಲ ಧರ್ಮದಿಂದ ಹಿಡಿದು ಸಾರ್ವತ್ರಿಕ ಭಕ್ತಿಯವರೆಗೆ - ಆತನ ಕಾಲಾತೀತ ಮೌಲ್ಯಗಳು ಮತ್ತು ಆಧ್ಯಾತ್ಮಿಕ ಸಾರವನ್ನು ಅನ್ವೇಷಿಸಿ. ಈ 5 ಸತ್ಯಗಳು ನಿಮ್ಮನ್ನು ಸನಾತನ ಧರ್ಮದ ಆತ್ಮದೊಂದಿಗೆ ಮತ್ತೆ ಸಂಪರ್ಕಿಸುತ್ತವೆ. ಶ್ರೀರಾಮನ ಬಗ್ಗೆ 5 ಪ್ರಬಲ ಸತ್ಯಗಳು 🚩 ಧರ್ಮ, ಭಕ್ತಿ ಮತ್ತು ದೈವಿಕ ಅನುಗ್ರಹದ ಅಕಾಲಿಕ ಸಂಕೇತ 1️⃣ ಅವನು ಧರ್ಮದ ಶಾಶ್ವತ ಸಾಕಾರ (ಧರ್ಮ ಕಾ ಪ್ರತೀಕ) 🙏 ದುರಾಸೆ ಮತ್ತು ಅಹಂಕಾರವು ಸದಾಚಾರವನ್ನು ಮರೆಮಾಡುವ ಪ್ರಪಂಚದ ನಿರಂತರ ಉಬ್ಬರವಿಳಿತದಲ್ಲಿ, ಸಮತೋಲನ ಮತ್ತು ಸತ್ಯವನ್ನು ಪುನಃಸ್ಥಾಪಿಸಲು ವಿಷ್ಣುವು ಏಳನೇ ಅವತಾರವಾದ ಶ್ರೀರಾಮನಾಗಿ ಅವತರಿಸಿದನು. ಅನಿಯಂತ್ರಿತ ಆಸೆ ಮತ್ತು ಹೆಮ್ಮೆಯನ್ನು ಸಂಕೇತಿಸುವ ರಾವಣನ ದಬ್ಬಾಳಿಕೆಯ ಆಳ್ವಿಕೆಯಲ್ಲಿ , ರಾಮನು ಅಧಿಕಾರದ ಕುಡಿದ ಯೋಧನಾಗಿ ಅಲ್ಲ, ಕರುಣೆಯ ರಾಜನಾಗಿ , ತತ್ವದ ರಾಜಕುಮಾರನಾಗಿ ಮತ್ತು ತ್ಯಾಗದ ಸಂಕೇತವಾಗಿ ಕಾಣಿಸಿಕೊಂಡನು. ಅವನು ಧರ್ಮದ (ಸದಾಚಾರ) ಮಾರ್ಗವನ್ನು ಮಾತಿನಲ್ಲಿ ಮಾತ್ರವಲ್ಲ, ಕಾರ್ಯದಲ್ಲೂ ನಡೆದನು - ಮಗ, ಪತಿ, ಸಹೋದರ ಮತ್ತು ಆಡಳಿತಗಾರನ ಪ್ರತಿಯೊಂದು ಪಾತ್ರವನ್ನು ಅತ್ಯುನ್ನತ ಕರ್ತವ್ಯ ಪ್ರಜ್ಞೆಯೊಂದಿಗೆ ಪೂರೈಸಿದನು. ನಿಜವಾದ ಶಕ್ತಿ ಸ್ವಯಂ ಶಿಸ್ತು ಮತ್ತು ನಿಸ್ವಾರ್ಥ ಸೇವೆಯಲ್ಲಿದೆ , ಪ್ರಾಬಲ್ಯ ಅಥವಾ ವಂಚನೆಯಲ್ಲಿ ಅಲ್ಲ ಎಂದು ಅವರು ನಮಗೆ ಕಲಿಸುತ್ತಾರೆ . 2️⃣ ಭಕ್ತನ ಹೃದಯ ಬಡಿತ - ರಾಮನು ಭಕ್ತಿಯ ಸಂಕೇತ (ಭಕ್ತಿ) ಅರಮನೆ ರಾಜಕೀಯದ ಕಾರಣದಿಂದಾಗಿ ರಾಮನು 14 ವರ್ಷಗಳ ಕಾಲ ಅನ್ಯಾಯವಾಗಿ ಗಡಿಪಾರು ಮಾಡಿದಾಗ, ಅವನು ಅದನ್ನು ಕೋಪದಿಂದಲ್ಲ - ದಯೆಯಿಂದ ಸ್ವೀಕರಿಸಿದನು. ತನ್ನ ನಿಷ್ಠಾವಂತ ಪತ್ನಿ ಮಾತಾ ಸೀತಾ ಮತ್ತು ಭಕ್ತ ಸಹೋದರ ಲಕ್ಷ್ಮಣನೊಂದಿಗೆ , ಅವನು ಕಾಡುಗಳ ಮೂಲಕ ಪ್ರಯಾಣಿಸಿದನು, ರಾಕ್ಷಸರು, ಹೃದಯಾಘಾತ ಮತ್ತು ಬೇರ್ಪಡುವಿಕೆಯನ್ನು ಎದುರಿಸಿದನು. ರಾವಣ ಸೀತೆಯನ್ನು ಅಪಹರಿಸಿದಾಗ , ರಾಮನ ದೈವಿಕ ಪ್ರೀತಿ ಸೇಡಿನ ಉದ್ದೇಶವಲ್ಲ, ಬದಲಾಗಿ ಪುನಃಸ್ಥಾಪನೆ ಮತ್ತು ಭಕ್ತಿಯ ಉದ್ದೇಶವಾಗಿ ಬದಲಾಯಿತು. ವಾನರಸೇನ (ವಾನರ ಸೈನ್ಯ) ಮತ್ತು ಪರಮ ಭಕ್ತ ದಂತಕಥೆಯ ಹನುಮಾನ್ ಜಿಯವರ ಸಹಾಯದಿಂದ , ರಾಮನು ನಮಗೆ ಸೇವೆಯ ಶಕ್ತಿ (ನಿಸ್ವಾರ್ಥ ಸೇವೆ) ಮತ್ತು ಅಚಲ ಪ್ರೀತಿಯ ಶಕ್ತಿಯನ್ನು ತೋರಿಸಿದನು . ಧೈರ್ಯ, ನಿಷ್ಠೆ ಮತ್ತು ಭಕ್ತಿಯ ಈ ದೈವಿಕ ಕಥೆ ರಾಮಾಯಣದ ಹೃದಯ ಮಿಡಿಯುತ್ತಿದೆ , ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ. 3️⃣ ರಾಮನು ಎಲ್ಲಾ ನಂಬಿಕೆಗಳನ್ನು ಅಪ್ಪಿಕೊಳ್ಳುತ್ತಾನೆ - ಆಧ್ಯಾತ್ಮಿಕ ಬಹುತ್ವದ ಜ್ಯೋತಿ ಹೊತ್ತವನು ಶ್ರೀರಾಮನ ಭಕ್ತಿ ಯಾವುದೇ ಒಂದು ಮಾರ್ಗಕ್ಕೆ ಸೀಮಿತವಾಗಿರಲಿಲ್ಲ. ವಿಷ್ಣುವಿನ ಅವತಾರವಾಗಿಯೂ ಸಹ, ರಾವಣನನ್ನು ಸೋಲಿಸುವ ಮೊದಲು ಆದಿತ್ಯ ಹೃದಯಂ ಸ್ತೋತ್ರವನ್ನು ಪಠಿಸುವ ಮೂಲಕ ಸೂರ್ಯದೇವನನ್ನು ಗೌರವಿಸಿದನು. ನಂತರ ಅವನು ರಾಮೇಶ್ವರಂನಲ್ಲಿ ಶಿವಲಿಂಗಗಳನ್ನು ಸ್ಥಾಪಿಸಿದನು, ಶಿವನನ್ನು ಪೂಜಿಸಿದನು , ಎಲ್ಲಾ ದೈವಿಕ ಶಕ್ತಿಗಳಿಗೆ ಗೌರವವನ್ನು ತೋರಿಸಿದನು. ಈ ಏಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಕ್ರಿಯೆಯು ಸನಾತನ ಧರ್ಮದ ಸಾರವನ್ನು ನಮಗೆ ಕಲಿಸುತ್ತದೆ - ಹಲವು ಮಾರ್ಗಗಳು, ಒಂದೇ ಸತ್ಯ. 4️⃣ ಅವನ ಗೆಲುವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಬೆಳಕು ಯಾವಾಗಲೂ ಕತ್ತಲೆಯನ್ನು ಗೆಲ್ಲುತ್ತದೆ ಎಂಬುದಕ್ಕೆ ರಾಮನ ಕಥೆ ಒಂದು ದೈವಿಕ ಜ್ಞಾಪನೆಯಾಗಿದೆ . ರಾವಣನನ್ನು ಸೋಲಿಸಿದ ನಂತರ, ರಾಮನು ಸೀತಾ ಮಾತೆಯೊಂದಿಗೆ ಅಯೋಧ್ಯೆಗೆ ಮರಳಿದನು, ಸಂತೋಷಗೊಂಡ ನಾಗರಿಕರು ಲೆಕ್ಕವಿಲ್ಲದಷ್ಟು ದೀಪಗಳನ್ನು ಬೆಳಗಿಸಿದರು . ಈ ಸುಂದರ ಕ್ಷಣವು ದೀಪಗಳ ಹಬ್ಬವಾದ ದೀಪಾವಳಿಯ ಮೂಲವಾಯಿತು . ಪ್ರತಿ ದೀಪಾವಳಿಯಂದು, ಮನೆಗಳು ಬೆಳಗುವಾಗ ಮತ್ತು ಹೃದಯಗಳು ಭರವಸೆಯಿಂದ ತುಂಬಿದಾಗ, ಕತ್ತಲೆ ಎಷ್ಟೇ ಆಳವಾಗಿದ್ದರೂ, ಒಳ್ಳೆಯತನ ಯಾವಾಗಲೂ ಮೇಲೇರುತ್ತದೆ ಎಂದು ನಮಗೆ ನೆನಪಿಸಲಾಗುತ್ತದೆ . 🌌 5️⃣ ಅವರ ಜನ್ಮವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ ಚೈತ್ರ ಮಾಸದ 9ನೇ ದಿನದಂದು ಜನಿಸಿದ ರಾಮ ನವಮಿಯು ಶ್ರೀರಾಮನ ದೈವಿಕ ಅವತಾರವನ್ನು ಆಚರಿಸುತ್ತದೆ. ಪ್ರಪಂಚದಾದ್ಯಂತ ಭಕ್ತರು ಉಪವಾಸ ಮಾಡುತ್ತಾರೆ, ರಾಮಾಯಣವನ್ನು ಪಠಿಸುತ್ತಾರೆ , ಪೂಜೆಗಳನ್ನು ಮಾಡುತ್ತಾರೆ , ಭಜನೆಗಳನ್ನು ಹಾಡುತ್ತಾರೆ ಮತ್ತು ತಮ್ಮ ಭಕ್ತಿಯನ್ನು ವ್ಯಕ್ತಪಡಿಸಲು ರಾಮಲೀಲಾವನ್ನು ಸಹ ಅಭಿನಯಿಸುತ್ತಾರೆ. ಅಯೋಧ್ಯೆ, ರಾಮೇಶ್ವರಂ ಮತ್ತು ಭದ್ರಾಚಲಂನಂತಹ ಪವಿತ್ರ ಸ್ಥಳಗಳಲ್ಲಿ , ರಥಯಾತ್ರೆಗಳು , ಹಬ್ಬಗಳು ಮತ್ತು ದಾನ ಕಾರ್ಯಗಳೊಂದಿಗೆ ಭವ್ಯ ಆಚರಣೆಗಳು ನಡೆಯುತ್ತವೆ - ರಾಮನು ಕೇವಲ ದೇವತೆಯಲ್ಲ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಆಧಾರಸ್ತಂಭ ಎಂಬುದನ್ನು ಸಾಬೀತುಪಡಿಸುತ್ತದೆ . ಸಾಗರಗಳನ್ನು ಮೀರಿ, ಟ್ರಿನಿಡಾಡ್, ಗಯಾನಾ ಮತ್ತು ಅದರಾಚೆಗೂ ಸಹ, ರಾಮಾಯಣವು ಕಷ್ಟದಲ್ಲಿರುವ ಜನರಿಗೆ ಭರವಸೆಯನ್ನು ನೀಡಿತು, ಪ್ರತಿಕೂಲ ಪರಿಸ್ಥಿತಿಯಲ್ಲೂ ಸನಾತನ ಧರ್ಮವನ್ನು ಸಂರಕ್ಷಿಸಲು ಅವರಿಗೆ ಸಹಾಯ ಮಾಡಿತು. ತೀರ್ಮಾನ: ರಾಮ - ಹೃದಯಗಳು ಮತ್ತು ಧರ್ಮದ ರಾಜ ಶ್ರೀರಾಮ ಕೇವಲ ಐತಿಹಾಸಿಕ ವ್ಯಕ್ತಿಗಿಂತ ಹೆಚ್ಚಿನವನು - ಅವನು ಭಕ್ತರ ಹೃದಯಗಳಲ್ಲಿ ಜೀವಂತ ಶಕ್ತಿ. ಅವನ ಜೀವನವು ನಮಗೆ ಕಲಿಸುತ್ತದೆ ನಿಜವಾದ ನಾಯಕತ್ವವು ನಮ್ರತೆಯಲ್ಲಿ ಬೇರೂರಿದೆ. ಪ್ರೀತಿ ತ್ಯಾಗವನ್ನು ಬೇಡುತ್ತದೆ ಸದಾಚಾರ ಎಂದಿಗೂ ವಿಫಲವಾಗುವುದಿಲ್ಲ . “ರಾಮ ನಾಮದಲ್ಲಿ ಶಕ್ತಿಯಿದೆ, ಪ್ರೇಮ ಮತ್ತು ಮೋಕ್ಷದ ಮಾರ್ಗವಿದೆ.” 🙏 ಜಯ ಶ್ರೀ ರಾಮ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
15 likes
13 shares
ರಾಧಾಕೃಷ್ಣ 🦚💙
7K views 1 months ago
## ಆಧ್ಯಾತ್ಮಿಕ ಬರಹಗಳು ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ ೧. ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಂಕಲ್ಪ ಮಾಡುವುದರ ಮಹತ್ವ ದೈನಂದಿನ ಜೀವನದಲ್ಲಿ ನಾವು ದೇವರಪೂಜೆ, ಉಪವಾಸ, ಸ್ನಾನ, ಇಂತಹ ಅನೇಕ ಧಾರ್ಮಿಕ ಕೃತಿಗಳನ್ನು ಸಹಜವಾಗಿಯೇ ಮಾಡುತ್ತಿರುತ್ತೇವೆ. ಅವುಗಳಲ್ಲಿನ ಎಷ್ಟೋ ಕೃತಿಗಳನ್ನು ಹಿರಿಯರು ಮಾಡುತ್ತಿದ್ದರೆಂದು ನಾವು ಸಹ ಅದೇ ರೀತಿ ಮಾಡುತ್ತೇವೆ; ಆದರೆ ಈ ಕೃತಿಗಳನ್ನು ನಾವು ಏಕೆ ಮಾಡುತ್ತೇವೆ, ಅವುಗಳನ್ನು ಮಾಡುವ ಉದ್ದೇಶವೇನು, ಎಂಬುದನ್ನು ನಾವು ಗಮನಿಸುವುದಿಲ್ಲ. ಈ ಕೃತಿಗಳ ಸಂಪೂರ್ಣ ಲಾಭವಾಗಲು ಅವುಗಳ ಶಾಸ್ತ್ರವನ್ನು ತಿಳಿದುಕೊಳ್ಳೋಣ… ಸಙ್ಕಲ್ಪಂ ಚ ಯಥಾ ಕುರ್ಯಾತ್‌ ಸ್ನಾನದಾನವ್ರತಾದಿಕೇ | ಅನ್ಯಥಾ ಪುಣ್ಯಕರ್ಮಾಣಿ ನಿಷ್ಫಲಾನಿ ಭವನ್ತಿ ಚ || – ಆಚಾರಮಯೂಖ, ಪರಿಭಾಷಾಪ್ರಕರಣ ಅರ್ಥ : ಸ್ನಾನ, ದಾನ, ವ್ರತ ಇತ್ಯಾದಿ ಯಾವುದೇ ಸತ್ಕರ್ಮವನ್ನು ಮಾಡುವಾಗ ಸಂಕಲ್ಪವನ್ನು ಮಾಡಬೇಕು, ಇಲ್ಲದಿದ್ದರೆ (ಆ) ಪುಣ್ಯಕರ್ಮಗಳು ನಿಷ್ಫಲವಾಗುತ್ತವೆ. ೧ ಅ. ದೇವರ ಪೂಜೆಯನ್ನು ಮಾಡುವಾಗ ಮಾಡಬೇಕಾದ ಸಂಕಲ್ಪ ಹಿಂದಿನ ಕಾಲದಲ್ಲಿ ಪ್ರತಿದಿನ ಮಾಡುವ ದೇವರ ಪೂಜೆಯನ್ನು ಮಾಡುವಾಗಲೂ ಆಚಮನ ಇತ್ಯಾದಿಗಳನ್ನು ಶಾಸ್ತ್ರೋಕ್ತವಾಗಿ ಮಾಡಿ ‘ನನ್ನ ಸಂಪೂರ್ಣ ಕುಟುಂಬದಲ್ಲಿರುವ ಸದಸ್ಯರಿಗೆ (ಅದರಲ್ಲಿ ಸಾಕುಪ್ರಾಣಿ-ಪಕ್ಷಿ ಇತ್ಯಾದಿ ಎಲ್ಲರನ್ನೂ ಸೇರಿಸಲಾಗುತ್ತಿತ್ತು.) ಎಲ್ಲರಿಗೂ ಆಯುಷ್ಯ, ಆರೋಗ್ಯ ಇತ್ಯಾದಿಗಳು ಸಿಗಲಿ, ಅವರೆಲ್ಲರ ಸಂಪೂರ್ಣ ಏಳಿಗೆಯಾಗಲಿ ಮತ್ತು ನಮ್ಮ ಕುಟುಂಬದ ಮೇಲೆ ಎಲ್ಲ ದೇವತೆಗಳ ಸಂಪೂರ್ಣ ಕೃಪೆಯಿರಲಿ, ಅದಕ್ಕಾಗಿ ನಾನು ಈ ದೇವರಪೂಜೆಯನ್ನು ಮಾಡುತ್ತಿದ್ದೇನೆ’, ಎಂಬ ಸಂಕಲ್ಪವನ್ನು ಮಾಡಿ ಪೂಜೆಯನ್ನು ಮಾಡಲಾಗುತ್ತಿತ್ತು. ೧ ಆ. ಸ್ನಾನವನ್ನು ಮಾಡುವಾಗ ಮಾಡಬೇಕಾದ ಸಂಕಲ್ಪ ಹಿಂದಿನ ಕಾಲದಲ್ಲಿ ಸ್ನಾನ ಮಾಡುವಾಗ ‘ನನ್ನ ದೇಹ, ವಾಣಿ ಮತ್ತು ಮನಸ್ಸಿನಿಂದ ಆದ ಎಲ್ಲ ಪಾಪಗಳು, ಹಾಗೆಯೇ ಯಾವುದಾದರೊಬ್ಬ ಪಾಪಿ ಮನುಷ್ಯನ ಸಂಪರ್ಕದಿಂದ ತಗಲಿದ ಪಾಪವನ್ನು ದೂರಗೊಳಿಸಲು ನಾನು ಗಂಗಾನದಿಯನ್ನು ಸ್ಮರಿಸಿ ಸ್ನಾನ ಮಾಡುತ್ತೇನೆ’, ಹೀಗೆ ಸಂಕಲ್ಪವನ್ನು ಮಾಡಲು ಹೇಳಲಾಗಿದೆ. (ಇಲ್ಲಿ ಸತ್‌ಸಂಗದ ಮಹತ್ವವು ಗಮನಕ್ಕೆ ಬರುತ್ತದೆ. ಪಾಪಿ ಮನುಷ್ಯನ ಸಂಪರ್ಕದಿಂದ ಯಾವ ಪಾಪಗಳು ತಗಲುತ್ತವೆಯೋ, ಅದರ ಬಗ್ಗೆಯೂ ಶಾಸ್ತ್ರಕಾರರು ವಿಚಾರ ಮಾಡಿದ್ದಾರೆ.) ಉದಾಹರಣೆಗಾಗಿ ಮೇಲಿನ ಧಾರ್ಮಿಕ ಕೃತಿಗಳನ್ನು ಇಲ್ಲಿ ಕೊಡಲಾಗಿದೆ. ‘ದಿನನಿತ್ಯ ಮಾಡಲಾಗುವ ಪ್ರತಿಯೊಂದು ಧಾರ್ಮಿಕ ಕೃತಿಗಳ ಹಿಂದೆ ಸಂಕಲ್ಪದ ಕೃತಿಯು ಶಾಸ್ತ್ರಕಾರರಿಗೆ ಅಪೇಕ್ಷಿತವಿದೆ. ಇಲ್ಲದಿದ್ದರೆ ಆ ಕೃತಿಗಳು ನಿಷ್ಫಲವಾಗುತ್ತವೆ’, ಎಂದು ಅವರು ಹೇಳುತ್ತಾರೆ. ೧ ಇ. ಇಂದು ಧಾರ್ಮಿಕ ಕೃತಿಗಳನ್ನು ಮಾಡುವ ಮೊದಲು ಅದರ ಉದ್ದೇಶವನ್ನು ದೇವರಿಗೆ ಹೇಳಬೇಕು ಕಾಲಕ್ಕನುಸಾರ ಮೇಲಿನಂತೆ ಶಾಸ್ತ್ರೋಕ್ತ ಸಂಕಲ್ಪ ಇತ್ಯಾದಿಗಳನ್ನು ಮಾಡಲು ಅನೇಕರಿಗೆ ಸಾಧ್ಯವಾಗುವುದಿಲ್ಲ; ಆದರೆ ನಾವು ಮಾಡುತ್ತಿರುವ ಧಾರ್ಮಿಕ ಕೃತಿಗಳ ಉದ್ದೇಶವನ್ನು ನಮ್ಮ ನಮ್ಮ ರೀತಿಯಲ್ಲಿ ದೇವರಿಗೆ ಹೇಳಬೇಕು ಮತ್ತು ನಂತರ ಆ ಕೃತಿಯನ್ನು ಮಾಡಬೇಕು. ಅದರಿಂದ ಶಾಸ್ತ್ರದಲ್ಲಿ ಹೇಳಿದ ಆ ಕೃತಿಯ ಎಲ್ಲ ಲಾಭಗಳು ನಮಗೆ ಸಿಗುತ್ತವೆ. ೧ ಇ ೧. ಧಾರ್ಮಿಕ ಕೃತಿಗಳ ಉದ್ದೇಶವನ್ನು ಹೇಳುವುದರಿಂದ ಆಗುವ ಲಾಭ ಅ. ನಮಗೆ ಆ ಕೃತಿಯ ಬಗ್ಗೆ ಶಾಸ್ತ್ರದಲ್ಲಿ ಹೇಳಿದ ಲಾಭ ಸಿಗುವುದು. ಆ. ಆ ಕೃತಿಯ ಉದ್ದೇಶವು ಮಾನಸಶಾಸ್ತ್ರಕ್ಕನುಸಾರ ಮೊದಲು ನಮ್ಮ ಮನಸ್ಸಿನ ಮೇಲೆ ಬಿಂಬಿತವಾಗುವುದು ಮತ್ತು ಅದನ್ನು ನಾವು ಏಕೆ ಮಾಡುತ್ತಿದ್ದೇವೆ ಎಂದು ತಿಳಿಯುವುದರಿಂದ ಆ ಕೃತಿಯನ್ನು ಗಾಂಭೀರ್ಯದಿಂದ ಮಾಡಲಾಗುವುದು. ಇ. ಆ ಕೃತಿಯ ವಿಶಿಷ್ಟ ಉದ್ದೇಶ ತಿಳಿಯುವುದರಿಂದ ದೈನಂದಿನ ಜೀವನದಲ್ಲಿಯೂ ಬದಲಾವಣೆ ಆಗುವುದು. ಅವುಗಳ ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ. ೧. ದಿನನಿತ್ಯ ಸ್ನಾನವನ್ನು ಮಾಡುವಾಗ ‘ಪಾಪಿ ವ್ಯಕ್ತಿಯ ಸಂಪರ್ಕದಿಂದ ತಗಲಿದ ಪಾಪವು ದೂರವಾಗಲಿ’, ಎಂದು ಹೇಳಿ ಸ್ನಾನವನ್ನು ಮಾಡಿದರೆ ಸತ್‌ಸಂಗದಲ್ಲಿ ಇರುವುದರ ಮಹತ್ವ ನಮ್ಮ ಮನಸ್ಸಿನ ಮೇಲೆ ತನ್ನಿಂದ ತಾನೇ ಬಿಂಬಿಸಲ್ಪಡುವುದು. ೨. ದೇವರ ಪೂಜೆಯನ್ನು ಮಾಡುವಾಗ ‘ಮನೆಯಲ್ಲಿನ ಎಲ್ಲರ ಏಳಿಗೆಯಾಗಲಿ’, ಎಂದು ಪ್ರಾರ್ಥಿಸಿ ಪೂಜೆಯನ್ನು ಮಾಡಿದರೆ ಕುಟುಂಬದ ಸದಸ್ಯರಲ್ಲಿ ಸಾಮರಸ್ಯ ಉಂಟಾಗುವುದು. ೨. ಧಾರ್ಮಿಕ ಕೃತಿಗಳ ಫಲವನ್ನು ದೇವರಿಗೆ ಅರ್ಪಿಸುವುದು ಅ. ಧಾರ್ಮಿಕ ಕೃತಿಯನ್ನು ಮಾಡುವ ಮೊದಲು ಸಂಕಲ್ಪ ಮಾಡಬೇಕು; ಆದರೆ ಕೃತಿ ಆದ ನಂತರ ‘ಈ ಕೃತಿಯನ್ನು ನಾವು ಕೇವಲ ಈಶ್ವರನಿಗೆ ಅರ್ಪಿಸಲು ಮಾತ್ರ ಮಾಡಿದ್ದೇವೆ’, ಎಂಬ ಆಧ್ಯಾತ್ಮಿಕ ಭಾವದಿಂದ ಅದನ್ನು ಈಶ್ವರನಿಗೆ ತಕ್ಷಣ ಅರ್ಪಿಸಬೇಕು. ಆ. ಈ ಕುರಿತು ಶ್ರೀಮದ್ಭಗವದ್ಗೀತೆಯಲ್ಲಿ ಭಗವಂತನು ಅರ್ಜುನನಿಗೆ ೨ ಸೂತ್ರಗಳನ್ನು ಹೇಳಿದ್ದಾನೆ. ೧. ನೀನು ಕೇವಲ ಕರ್ಮವನ್ನು ಮಾಡು, ಫಲದ ಅಪೇಕ್ಷೆಯನ್ನು ಮಾಡಬೇಡ. ೨. ಯತ್ಕರೋಷಿ ಯದಶ್ನಾಸಿ ಯಜ್ಜುಹೋಷಿ ದದಾಸಿ ಯತ್‌ | ಯತ್ತಪಸ್ಯಸಿ ಕೌನ್ತೇಯ ತತ್ಕುರುಷ್ವ ಮದರ್ಪಣಮ್‌ || – ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೨೭ ಅರ್ಥ : ಹೇ ಕೌಂತೇಯ (ಅಂದರೆ ಕುಂತೀಪುತ್ರ ಅರ್ಜುನ), ನೀನು ಯಾವ ಕರ್ಮವನ್ನು ಮಾಡುತ್ತಿಯೋ, ಏನು ಸೇವಿಸುವೆಯೋ, ಯಾವ ಹವನವನ್ನು ಮಾಡುವೆಯೋ, ಏನು ದಾನ ಮಾಡುವೆಯೋ ಮತ್ತು ಏನು ತಪಸ್ಸು ಮಾಡುವೆಯೋ, ಅದೆಲ್ಲವನ್ನು ನನಗೆ ಅರ್ಪಿಸು. ಇ. ಫಲದ ಅಪೇಕ್ಷೆಯನ್ನಿಡದೇ ಅದನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವವನ್ನು ಕೂರ್ಮಪುರಾಣದಲ್ಲಿಯೂ ಹೇಳಲಾಗಿದೆ. ಬ್ರಹ್ಮಣ್ಯಾಧಾಯ ಕರ್ಮಾಣಿ ನಿಃಸಙ್ಗಃ ಕಾಮವರ್ಜಿತಃ | ಪ್ರಸನ್ನೇನೈವ ಮನಸಾs ಕುರ್ವಾಣೋ ಯಾತಿ ತತ್ಪದಮ್‌ || – ಕೂರ್ಮಪುರಾಣ, ಪೂರ್ವಭಾಗ, ಅಧ್ಯಾಯ ೩, ಶ್ಲೋಕ ೧೪ ಅರ್ಥ : ಯಾರು ಎಲ್ಲ ಕರ್ಮಗಳನ್ನು ಪರಮಾತ್ಮನಿಗೆ ಅರ್ಪಿಸಿ ಆಸಕ್ತಿ ಮತ್ತು ವಾಸನೆಗಳನ್ನು ಬಿಟ್ಟು ಪ್ರಸನ್ನ ಮನಸ್ಸಿನಿಂದ ಮಾಡುತ್ತಾರೋ, ಅವರು ಬ್ರಹ್ಮಪದವನ್ನು ಪಡೆಯುತ್ತಾರೆ. ತಾತ್ಪರ್ಯವೇನೆಂದರೆ, ಧಾರ್ಮಿಕ ಕೃತಿಯನ್ನು ಮಾಡುವ ಮೊದಲು ‘ನಾವು ಅದನ್ನು ಯಾವ ಉದ್ದೇಶದಿಂದ ಮಾಡುತ್ತಿದ್ದೇವೆ’, ಎಂಬುದನ್ನು ದೇವರಿಗೆ ಹೇಳಬೇಕು ಮತ್ತು ಅದನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾಡಲು ಪ್ರಯತ್ನಿಸಬೇಕು. ಕೃತಿ ಮಾಡಿದ ನಂತರ ಫಲದ ವಿಚಾರವನ್ನು ಮಾಡದೇ ಅದನ್ನು ತಕ್ಷಣ ದೇವರಿಗೆ ಅರ್ಪಿಸಬೇಕು. ಯಾವುದೇ ಕೃತಿಯನ್ನು ಮಾಡುವ ಮೊದಲು ದೇವರಿಗೆ ಪ್ರಾರ್ಥಿಸುವುದು ಮತ್ತು ಕೃತಿಯ ಕೊನೆಗೆ ಅವನಿಗೆ ಕೃತಜ್ಞತೆಯನ್ನು ಸಲ್ಲಿಸುವುದು, ಇದರ ಒಂದು ಪ್ರಾತಿನಿಧಿಕ ರೂಪವಾಗಿದೆ. ✍🏻 ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
51 likes
109 shares
ರಾಧಾಕೃಷ್ಣ 🦚💙
682 views 1 months ago
#🤩ಆಸಕ್ತಿಕರ ಪೋಸ್ಟ್ ## ಆಧ್ಯಾತ್ಮಿಕ ಬರಹಗಳು ಗಾಯತ್ರಿ ದೇವಿಯ ಆಧ್ಯಾತ್ಮಿಕ ಮಹತ್ವ ಮತ್ತು ಗುಣವೈಶಿಷ್ಟ್ಯಗಳು ನಮಗೆಲ್ಲರಿಗೂ ‘ಗಾಯತ್ರಿ ಮಂತ್ರ’ ತಿಳಿದಿದೆ. ಅನೇಕರು ಅದರ ನಿತ್ಯ ಜಪ ಮಾಡುತ್ತಾರೆ ಕೂಡ. ಗಾಯತ್ರಿ ಜಯಂತಿಯ ನಿಮಿತ್ತ ಗಾಯತ್ರಿ ದೇವಿಯ ಚರಣಗಳಲ್ಲಿ ವಂದಿಸಿ, ಗಾಯತ್ರಿ ದೇವಿಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ೧. ಉತ್ಪತ್ತಿಯ ಕಥೆ ಶ್ರೀ ಗಣೇಶನಿಗೆ ಸಹಾಯವಾಗಲೆಂದು ಬ್ರಹ್ಮದೇವರು ಗಾಯತ್ರಿ ದೇವಿಯನ್ನು ನಿರ್ಮಿಸಿರುವುದು : ಸತ್ಯಯುಗದ ಆರಂಭವಾಗುವ ಮೊದಲು, ಬ್ರಹ್ಮದೇವರು ಎಲ್ಲ ದೇವತೆಗಳ ನಿರ್ಮಿತಿಯನ್ನು ಮಾಡಿದರು. ಸತ್ಯಯುಗ ಪ್ರಾರಂಭವಾದ ಮೇಲೆ ಆ ದೇವತೆಗಳ ತೇಜವು ಮನುಷ್ಯರಿಗೆ ದೊರೆಯುತ್ತಿರಲಿಲ್ಲ, ಏಕೆಂದರೆ ದೇವತೆಗಳು ಹೆಚ್ಚು ನಿರ್ಗುಣ ಸ್ತರದಲ್ಲಿರುತ್ತಿದ್ದರು. ದೇವತೆಗಳಲ್ಲಿ ಇರುವ ನಿರ್ಗುಣ ತತ್ತ್ವವನ್ನು ಸಗುಣ ತತ್ತ್ವಕ್ಕೆ ಪರಿವರ್ತಿಸಲು ಶ್ರೀ ಗಣೇಶನಿಗೆ ಒಂದು ಶಕ್ತಿಯ ಅವಶ್ಯಕತೆ ಇತ್ತು. ಆದುದರಿಂದ ಬ್ರಹ್ಮದೇವರು ಸರಸ್ವತಿ ಮತ್ತು ಸವಿತೃ ದೇವತೆಗಳ ಸಂಯುಕ್ತ ತತ್ತ್ವಗಳಿಂದ ಗಾಯತ್ರಿ ದೇವಿಯನ್ನು ನಿರ್ಮಿಸಿದರು. (- ಸೂಕ್ಷ್ಮದಲ್ಲಿ ದೊರೆತ ಜ್ಞಾನ) ೨. ಗಾಯತ್ರಿ ಶಬ್ದದ ಅರ್ಥ ಗಾಯತ್ರಿ ಶಬ್ದದ ವ್ಯುತ್ಪತ್ತಿಯು – ಗಾಯಂತಂ ತ್ರಾಯಾತೇ | ಅಂದರೆ ಹಾಡುವವರ (ಗಾಯನ – ಮಂತ್ರ ಹೇಳುವವರ) ರಕ್ಷಣೆ ಮಾಡುವವಳು, ಮತ್ತು ಗಾಯಂತಂ ತ್ರಾಯಂತಂ ಇತಿ | – ಸತತವಾಗಿ ಗಾಯನ (ಮಂತ್ರ ಹೇಳುವುದರಿಂದ) ಮಾಡುವುದರಿಂದ ಶರೀರವೇ ಹಾಡುವಂತೆಯಾಗುತ್ತದೆಯೋ (ಅಂದರೆ ಶರೀರದಲ್ಲಿ ಆ ಮಂತ್ರದ ಸೂಕ್ಷ್ಮ ಸ್ಪಂದನಗಳು ನಿರ್ಮಾಣಗುತ್ತದೆಯೋ), ಮತ್ತು ಅದರಿಂದ ರಕ್ಷಿಸುವ ಶಕ್ತಿಯು ಉತ್ಪನ್ನವಾಗುತ್ತದೆಯೋ – ಅದುವೇ ಗಾಯತ್ರಿ ಎಂದರ್ಥ. ೩. ಇತರ ಹೆಸರುಗಳು ಅಥರ್ವವೇದದಲ್ಲಿ ಗಾಯತ್ರಿಯನ್ನು ‘ವೇದಮಾತಾ’ ಎಂದು ಸಂಬೋಧಿಸಲಾಗಿದೆ. ಗಾಯತ್ರಿ ದೇವಿಯ ಉತ್ಪತ್ತಿಯು ಸರಸ್ವತಿಯಿಂದ ಆಗಿರುವುದರಿಂದ ಕೆಲವು ಸ್ಥಳಗಳಲ್ಲಿ ಅವಳನ್ನು ಸಾವಿತ್ರಿ ಎಂದು ಕೂಡ ಸಂಬೋಧಿಸಲಾಗಿದೆ. ಗಣೇಶ ಗಾಯತ್ರಿ, ಸೂರ್ಯ ಗಾಯತ್ರಿ, ವಿಷ್ಣು ಗಾಯತ್ರಿ ಮುಂತಾದ ಗಾಯತ್ರಿಮಂತ್ರಗಳಿಂದ ಕೂಡ ಗಾಯತ್ರಿಯನ್ನು ಸಂಬೋಧಿಸಲಾಗುತ್ತದೆ. ೪. ನಿವಾಸ ಬ್ರಹ್ಮಲೋಕದಿಂದ ಸೂರ್ಯಲೋಕದತ್ತ ಕ್ರಮಿಸುವ ಮಾರ್ಗದಲ್ಲಿ, ಬ್ರಹ್ಮಲೋಕದ ಒಂದು ಉಪಲೋಕವಿದ್ದು ಅದಕ್ಕೆ ‘ಗಾಯತ್ರಿಲೋಕ’ವೆಂದು ಹೆಸರಿದೆ. ಆ ಲೋಕದಲ್ಲಿ ನಿರಂತರವಾಗಿ ವೇದಮಂತ್ರಗಳ ಉದ್ಘೋಷ ನಡೆಯುತ್ತಿರುತ್ತದೆ, ಅಲ್ಲದೆ ಸಂಪೂರ್ಣ ಲೋಕದಲ್ಲಿ ಬಂಗಾರದ ಬಣ್ಣದ ಪ್ರಕಾಶವು ಎಲ್ಲೆಡೆ ಹಬ್ಬಿರುತ್ತದೆ. ಆ ಲೋಕದಲ್ಲಿ ಇರುಳೆಂಬುವುದಿಲ್ಲ. ಗಾಯತ್ರಿಲೋಕದ ವಾತಾವರಣವು ಆಹ್ಲಾದಕರವಾಗಿದ್ದು, ಉತ್ಸಾಹವನ್ನು ಹೆಚ್ಚಿಸುತ್ತದೆ. ಗಾಯತ್ರಿ ಉಪಾಸಕರು ಮರಣ ಹೊಂದಿದೆ ಮೇಲೆ ಅವರಿಗೆ ಗಾಯತ್ರಿಲೋಕದಲ್ಲಿ ಸ್ಥಾನ ಲಭಿಸುತ್ತದೆ. ಕೆಲವು ಸೂರ್ಯ ಉಪಾಸಕರಿಗೂ ಈ ಲೋಕದಲ್ಲಿ ಸ್ಥಾನ ಲಭಿಸುತ್ತದೆ. ೫. ತ್ರಿಗುಣಗಳ ಪ್ರಮಾಣ (ಶೇಕಡಾವಾರು) ಸತ್ವ – 70 ರಜ – 20 ತಮ – 10 ೬. ಕ್ಷಮತೆಯ ಪ್ರಮಾಣ (ಶೇಕಡಾವಾರು) ಉತ್ಪತ್ತಿ – 60 ಸ್ಥಿತಿ – 30 ಲಯ – 10 ೭. ಶಕ್ತಿ ಪ್ರಕಟ ಶಕ್ತಿಯ ಪ್ರಮಾಣ – ಶೇ. 70 ಶಕ್ತಿಯ ಪ್ರಕಾರ ತಾರಕ ಶಕ್ತಿಯ ಪ್ರಮಾಣ – ಶೇ. 70 ಮಾರಕ ಶಕ್ತಿಯ ಪ್ರಮಾಣ – ಶೇ. 30 ಸಗುಣ ಶಕ್ತಿಯ ಪ್ರಮಾಣ – ಶೇ. 50 ನಿರ್ಗುಣ ಶಕ್ತಿಯ ಪ್ರಮಾಣ – ಶೇ. 50 ೮. ಮೂರ್ತಿವಿಜ್ಞಾನ ಗಾಯತ್ರಿದೇವಿಯನ್ನು ಎರಡು ರೀತಿಯಲ್ಲಿ ಚಿತ್ರಿಸಲಾಗುತ್ತದೆ. ೮ಅ. ಮೊದಲನೇ ರೂಪ ಧನಸಂಪತ್ತು ಮತ್ತು ಐಶ್ವರ್ಯದ ಪ್ರತೀಕವಾಗಿರುವ ಕೆಂಪು ಕಮಲದ ಮೇಲೆ ವಿರಾಜಮಾನಳಾಗಿರುವ ರೂಪ ಮೊದಲನೆಯದು. ಈ ಪಂಚಮುಖಿ ಗಾಯತ್ರಿಯ (೫ ಮುಖಗಳಿರುವ) ಪ್ರತಿಯೊಂದು ಮುಖಕ್ಕೆ ಕ್ರಮವಾಗಿ ‘ಮುಕ್ತಾ, ವಿದ್ರುಮಾ, ಹೇಮಾ, ನೀಲಾ ಮತ್ತು ಧವಲಾ’ ಎಂಬ ಹೆಸರುಗಳಿವೆ. ಅವಳು ಹತ್ತು ಕಣ್ಣುಗಳಿಂದ ಹತ್ತು ದಿಕ್ಕುಗಳನ್ನು ಅವಲೋಕಿಸುತ್ತಾಳೆ. ಅವಳ ಎಂಟು ಕೈಗಳಲ್ಲಿ ಕ್ರಮವಾಗಿ ಶಂಖ, ಸುದರ್ಶನಚಕ್ರ, ಪರಶು, ಪಾಶ, ಜಪಮಾಲೆ, ಗದೆ, ಕಮಲ ಮತ್ತು ಪಾಯಸಪಾತ್ರ (ದೇವಿಗೆ ನೈವೇದ್ಯವೆಂದು ಪಾಯಸ ಅರ್ಪಿಸುವ ಪಾತ್ರೆ) ಇವೆ. ಒಂಬತ್ತನೆಯ ಕೈ ಆಶೀರ್ವಾದ ಮುದ್ರೆಯಲ್ಲಿಯೂ, ಹತ್ತನೆಯ ಕೈ ಅಭಯಮುದ್ರೆಯಲ್ಲಿಯೂ ಇದೆ. ೮ಆ. ಎರಡನೇ ರೂಪ ಹಂಸಾರೂಢ ಗಾಯತ್ರಿ ದೇವಿ – ದ್ವಿಭುಜ (ಎರಡು ಕೈಗಳಿರುವ) ಗಾಯತ್ರಿ ದೇವಿಯ ಒಂದು ಕೈಯಲ್ಲಿ ಜ್ಞಾನದ ಪ್ರತೀಕವಾಗಿರುವ ವೇದಗಳಿದ್ದು, ಇನ್ನೊಂದು ಕೈಯು ಆಶೀರ್ವಾದ ಮುದ್ರೆಯಲ್ಲಿದೆ. ೯. ಕಾರ್ಯ ಮತ್ತು ವೈಶಿಷ್ಟ್ಯಗಳು ಆದಿಶಕ್ತಿಸ್ವರೂಪ – ಸರಸ್ವತಿ, ಮಹಾಲಕ್ಷ್ಮಿ ಮತ್ತು ಪಾರ್ವತಿಯ ರೂಪವೆಂದರೆ ಗಾಯತ್ರಿದೇವಿ ಬ್ರಹ್ಮದೇವರ ಕಾರ್ಯನಿರತ ಶಕ್ತಿ – ಗಾಯತ್ರಿದೇವಿಯ ಶಕ್ತಿಯಿಲ್ಲದೆ ಬ್ರಹಮದೇವರು ನಿಷ್ಕ್ರಿಯರಾಗುತ್ತಾರೆ. ಆದಿತ್ಯ ಮತ್ತು ಸೂರ್ಯನಿಗೆ ತೇಜಸ್ಸು ನೀಡುವವಳು – ಸವಿತೃವಿನಿಂದ ಗಾಯತ್ರಿಗೆ, ಮತ್ತು ಗಾಯತ್ರಿಯಿಂದ ೧೨ ಆದಿತ್ಯರಿಗೆ ತೇಜಸ್ಸು ಪ್ರಾಪ್ತವಾಗುತ್ತದೆ. ಸ್ಥೂಲದಲ್ಲಿ ಕಾಣಿಸುವ ಸೂರ್ಯನಿಗೂ ತೇಜಸ್ಸು ಪ್ರಧಾನಿಸುವ ಶಕ್ತಿಯೆಂದರೆ ಈ ಗಾಯತ್ರಿ. ಸೂರ್ಯನಿಗಿಂತ ೧೬ ಪಟ್ಟು ಹೆಚ್ಚು ಶಕ್ತಿ ಗಾಯತ್ರಿಯಲ್ಲಿದೆ. ದೇವತೆಗಳ ಅಪ್ರಕಟ ಅವಸ್ಥೆಯಲ್ಲಿರುವ ಶಕ್ತಿ ಮತ್ತು ಚೈತನ್ಯ ಪ್ರಕಟವಾಗುವುದು – ಗಾಯತ್ರೀಮಂತ್ರಗಳ ಉಚ್ಚಾರದಿಂದ ವಿವಿಧ ದೇವತೆಗಳ ಅಪ್ರಕಟ ಶಕ್ತಿ ಮತ್ತು ಚೈತನ್ಯವು ಪ್ರಕಟವಾಗಿ ಕಾರ್ಯನಿರತವಾಗುತ್ತದೆ. ಆದುದರಿಂದ ಉಪಾಸಕನಿಗೆ ಆ ದೇವತೆಯ ಕೃಪೆಯನ್ನು ಸಂಪಾದಿಸಲು ಸುಲಭವಾಗುತ್ತದೆ. ೧೦. ಉಪಾಸನೆಯ ಶಾಸ್ತ್ರ ಅ. ದೇವಿಯ ಪ್ರತಿಮೆಯನ್ನು ಪೂಜಿಸುವುದು ಆ. ಗಾಯತ್ರಿಮಂತ್ರಗಳನ್ನು ಜಪಿಸುವುದು : ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ವೇದಗಳನ್ನು ಪಠಿಸಿದಷ್ಟು ಫಲವು ಲಭಿಸುತ್ತದೆ. ಇ. ಗಾಯತ್ರಿಯಾಗ : ಸವಿತೃ ಮತ್ತು ಗಾಯತ್ರಿ ದೇವತೆಗಳನ್ನು ಪ್ರಸನ್ನಗೊಳಿಸಲು ಕ್ರಮವಾಗಿ ಸವಿತೃಕಾಠ್ಯಯಾಗ ಮತ್ತು ಗಾಯತ್ರಿಯಾಗಗಳನ್ನು ಮಾಡುತ್ತಾರೆ. ೧೧. ಗಾಯತ್ರಿಮಂತ್ರ ಜಪಿಸುವುದರಿಂದ ಆಗುವ ಲಾಭ ೧೧ ಅ. ಉಚ್ಚಾರ ಸ್ಪಷ್ಟವಾಗುತ್ತದೆ : ಗಾಯತ್ರಿಮಂತ್ರವನ್ನು ಜಪಿಸುವುದರಿಂದ ಉಚ್ಚಾರವು ಸ್ಪಷ್ಟವಾಗುತ್ತದೆ. ವೇದಮಂತ್ರಗಳನ್ನು ಸ್ಪಷ್ಟ ಶುದ್ಧ ಉಚ್ಚಾರದಿಂದ ಪಠಿಸಬೇಕಾಗುತ್ತದೆ. ಆದುದರಿಂದ ಉಪನಯನದ ಸಮಯದಲ್ಲಿ ವಟುವಿಗೆ ಗಾಯತ್ರಿಮಂತ್ರದ ದೀಕ್ಷೆಯನ್ನು ನೀಡುತ್ತಾರೆ. ೧೧ ಆ. ಪಿಂಡದ ಶುದ್ಧಿಯಾಗುತ್ತದೆ : ಗಾಯತ್ರಿಮಂತ್ರ ಜಪಿಸುವುದರಿಂದ ಪಿಂಡದ ಶುದ್ಧಿಯಾಗುತ್ತದೆ. ವೇದಮಂತ್ರಗಳನ್ನು ಪಠಿಸುವುದರಿಂದ ನಿರ್ಮಾಣವಾಗುವ ದೈವೀ ಶಕ್ತಿಯನ್ನು ಗ್ರಹಿಸುವ ಕ್ಷಮತೆಯು ಆ ಜೀವಕ್ಕೆ ಲಭಿಸುತ್ತದೆ. ೧೧ ಇ. ಅಂತರ್ಬಾಹ್ಯ ಶುದ್ಧಿಯಾಗುತ್ತದೆ : ಗಾಯತ್ರಿಮಂತ್ರವನ್ನು ಪಠಿಸುವುದರಿಂದ ಪ್ರಾಣಶಕ್ತಿ ವಹನದಲ್ಲಿ ಬರುವ ಅಡಚಣೆಗಳು ದೂರವಾಗಿ ದೇಹದ ರಕ್ತನಾಳಗಳ, ೭೨೦೦೦ ನಾಡಿಗಳ ಮತ್ತು ಮಾಂಸಖಂಡಗಳ ಅಂತರ್ಬಾಹ್ಯ ಶುದ್ಧಿಯಾಗುತ್ತದೆ. ೧೧ ಈ. ವೇದಾಧ್ಯಯನಕ್ಕೆ ಸಹಾಯವಾಗುತ್ತದೆ ೧೧ ಉ.ಕರ್ಮಕಾಂಡದಂತೆ ಉಪಾಸನೆಯನ್ನು ಮಾಡಲು ಸಹಾಯವಾಗುತ್ತದೆ : ಗಾಯತ್ರಿಮಂತ್ರದ ಉಚ್ಚಾರದಿಂದ ದೇವತೆಗಳ ತತ್ತ್ವ ಮತ್ತು ತೇಜ ಜಾಗೃತವಾಗಿ ಕಾರ್ಯನಿರತವಾಗುತ್ತವೆ. ಆದುದರಿಂದ ಕರ್ಮಕಾಂಡದಂತೆ ಉಪಾಸನೆಯನ್ನು ಮಾಡುವಾಗ ಅಥವಾ ಧಾರ್ಮಿಕ ವಿಧಿಗಳನ್ನು, ಯಜ್ಞ ಯಾಗಗಳನ್ನು ಮಾಡುವಾಗ ಗಾಯತ್ರಿ ಮಂತ್ರ ಅಥವಾ ಆಯಾ ದೇವತೆಯ ಗಾಯತ್ರಿ ಮಂತ್ರಗಳನ್ನು ಪಠಿಸುತ್ತಾರೆ. ೧೧ ಊ. ಗಾಯತ್ರಿಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಆಗುವ ಐಹಿಕ ಲಾಭಗಳು : ಪ್ರತಿದಿವಸ ನಿಯಮಿತವಾಗಿ ೧೦೦೦ ಬಾರಿ ಗಾಯತ್ರಿ ಮಂತ್ರವನ್ನು ಪಠಿಸುವ ವ್ಯಕ್ತಿಯು ಪಾಪಮುಕ್ತನಾಗುತ್ತಾನೆ, ಅವನಿಗೆ ಧನಪ್ರಾಪ್ತಿ ಮತ್ತು ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ೧೧ ಋ. ಗಾಯತ್ರಿಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಆಗುವ ಪಾರಮಾರ್ಥಿಕ ಲಾಭಗಳು : ಆಯುಷ್ಯಪೂರ್ತಿ ಗಾಯತ್ರಿಮಂತ್ರವನ್ನು ಭಾವಪೂರ್ಣವಾಗಿ, ನಿಯಮಿತವಾಗಿ ಮತ್ತು ಶ್ರದ್ಧೆಯಿಂದ ಪುರಶ್ಚರಣ ಮಾಡುವುದರಿಂದ ಗಾಯತ್ರಿದೇವಿಯು ಪ್ರಸನ್ನಳಾಗಿ ಆ ವ್ಯಕ್ತಿಗೆ ಮುಕ್ತಿ ಮತ್ತು ಮೋಕ್ಷವನ್ನೂ ಪ್ರದಾನಿಸುತ್ತಾಳೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
13 likes
12 shares