2026

28 Posts • 3M views
Sri Venkateswara Swamy Temple ✨ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ✨ #sri #venkateswara #swamy #temple #mavahalli #village #bangarapet #taluk #kolar #district #karnataka #digitalmedia #suddhiprapancha #Kannada #youtubeshorts #viralshorts #shortsfeed #shorts #reels #vairal #video #bangalore #karnataka #india #Viralvideo #2026 #ಶ್ರೀ #ವೆಂಕಟೇಶ್ವರ #ಸ್ವಾಮಿ #ದೇವಸ್ಥಾನ #ಮಾವಹಳ್ಳಿ #ಗ್ರಾಮ #ಬಂಗಾರಪೇಟೆ #ತಾಲ್ಲೂಕು #ಕೋಲಾರ #ಜಿಲ್ಲೆ #ಕರ್ನಾಟಕ #ಡಿಜಿಟಲ್‌ಮೀಡಿಯಾ #ಸುದ್ಧಿಪ್ರಪಂಚ #ಕನ್ನಡ #ಯೂಟ್ಯೂಬ್‌ಶಾರ್ಟ್ಸ್ #ಶಾರ್ಟ್‌ಫೀಡ್ #ವೈರಲ್‌ಶಾರ್ಟ್ಸ್ #ಶಾರ್ಟ್ಸ್ #ರೀಲ್ಸ್ #ವೈರಲ್ #ವೀಡಿಯೋ #ಬೆಂಗಳೂರು #ಕರ್ನಾಟಕ #ಭಾರತ #ವೈರಲ್ವೀಡಿಯೋ #2026 ABOUT US 🙏 @DIGITAL MEDIA SUDDHI PRAPANCHA KANNADA ENTRTANMENT & NEWS ✨🌎🇮🇳📡📺🎬🎥🎙️⚽🥅☺️✨ KINDLY FOLLOW & LIKE US ON SOCIAL MEDIA PLATFORMS Subscribe our channel for the latest news updates : https://youtube.com/@digital.media.suddhi.prapancha #2026 Disclaime ~ digitalmedia suddhiprapancha is committed to remaining unbiased and focused on serving the public. As a news channel, our primary goal is to deliver news that informs and engages our audience. The content presented on digitalmedia suddhiprapancha is intended for entertainment and educational purposes only. Occasionally, we may incorporate content from other creators solely for educational and informational use under fair use policy guidelines. Our intentions are transparent and are never meant to harm anyone's beliefs or values ☺️🙏 ಹಕ್ಕು ನಿರಾಕರಣೆ ~ ಡಿಜಿಟಲ್ ಮೀಡಿಯಾ ಸುದ್ಧಿಪ್ರಪಂಚವು ಪಕ್ಷಪಾತವಿಲ್ಲದೆ ಉಳಿಯಲು ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುವತ್ತ ಗಮನಹರಿಸುತ್ತದೆ. ಸುದ್ದಿ ವಾಹಿನಿಯಾಗಿ, ನಮ್ಮ ಪ್ರಾಥಮಿಕ ಗುರಿ ಪ್ರೇಕ್ಷಕರಿಗೆ ಮಾಹಿತಿ ನೀಡುವ ಮತ್ತು ತೊಡಗಿಸಿಕೊಳ್ಳುವ ಸುದ್ದಿಗಳನ್ನು ತಲುಪಿಸುವುದು. ಡಿಜಿಟಲ್ ಮೀಡಿಯಾ ಸುದ್ಧಿಪ್ರಪಂಚದಲ್ಲಿ ಪ್ರಸ್ತುತಪಡಿಸಲಾದ ವಿಷಯವು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲಾಗಿದೆ. ಸಾಂದರ್ಭಿಕವಾಗಿ, ನ್ಯಾಯಯುತ ಬಳಕೆಯ ನೀತಿ ಮಾರ್ಗಸೂಚಿಗಳ ಅಡಿಯಲ್ಲಿ ಶೈಕ್ಷಣಿಕ ಮತ್ತು ಮಾಹಿತಿ ಬಳಕೆಗಾಗಿ ಮಾತ್ರ ನಾವು ಇತರ ಸೃಷ್ಟಿಕರ್ತರಿಂದ ವಿಷಯವನ್ನು ಸೇರಿಸಿಕೊಳ್ಳಬಹುದು. ನಮ್ಮ ಉದ್ದೇಶಗಳು ಪಾರದರ್ಶಕವಾಗಿರುತ್ತವೆ ಮತ್ತು ಯಾರ ನಂಬಿಕೆಗಳು ಅಥವಾ ಮೌಲ್ಯಗಳಿಗೆ ಎಂದಿಗೂ ಹಾನಿ ಮಾಡುವ ಉದ್ದೇಶವನ್ನು ಹೊಂದಿಲ್ಲ ☺️🙏 🔔 Subscribe Our YouTube Channel : @ Digital Media Suddhiprapancha Kannada #2026
20 shares
ಜೂನ್ 26ಕ್ಕೆ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಬಿಡುಗಡೆ: ಭರವಸೆ ಮೂಡಿಸಿದ ಟ್ರೇಲರ್! ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ನಟ ಶೀಲಮ್, ಇದೀಗ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಸೈನ್ಸ್ ಫಿಕ್ಷನ್ ಕಥಾಹಂದರ ಹೊಂದಿರುವ ಈ ವಿಭಿನ್ನ ಲವ್ ಸ್ಟೋರಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಗಳಾದ ವಿನಯ್ ರಾಜ್‌ಕುಮಾರ್, ನವೀನ್ ಶಂಕರ್ ಹಾಗೂ ಖ್ಯಾತ ನಿರ್ಮಾಪಕ ಉದಯ್ ಮೆಹ್ತಾ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರವು ಇದೇ ಜೂನ್ 26ರಂದು ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಚಿತ್ರತಂಡದ ಮಾತುಗಳು: ನಾಯಕ ಶೀಲಂ: "ನಾನು ಜಗತ್ತಿನಲ್ಲೇ ಅತ್ಯಂತ ಅದೃಷ್ಟವಂತ ವ್ಯಕ್ತಿ. ಈ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಪ್ರದರ್ಶನದಲ್ಲಿ ನಮಗೆ ನೂರಕ್ಕೆ ನೂರರಷ್ಟು ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ನೀವೆಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಖಂಡಿತಾ ನಿಮಗಿಷ್ಟವಾಗುತ್ತದೆ" ಎಂದು ಧೈರ್ಯವಾಗಿ ಹೇಳಿದರು. ನಟಿ ಮೋಕ್ಷಾ ಕುಶಾಲ್: "ಈ ಸಿನಿಮಾದಿಂದ ನಾನು ತುಂಬಾ ಕಲಿತಿದ್ದೇನೆ. ಚಿತ್ರದಲ್ಲಿ ನನ್ನದು 'ಸೌಪರ್ಣಿಕ' ಎಂಬ ಅತ್ಯಂತ ಮುಗ್ಧ ಮತ್ತು ಹಳ್ಳಿ ಹುಡುಗಿಯ ಪಾತ್ರ. ನೀವು ಟ್ರೇಲರ್‌ನಲ್ಲಿ ನೋಡಿರುವುದು ಕೇವಲ ಶೇ. 5ರಷ್ಟು ಮಾತ್ರ, ಸಿನಿಮಾದಲ್ಲಿ ಇನ್ನೂ ದೊಡ್ಡ ಕಥೆಯಿದೆ. ನಿರ್ದೇಶಕ ಸುನಿ ಸರ್ ಹಾಗೂ ಹಿರಿಯ ಸಿನಿಮಾಟೋಗ್ರಾಫರ್‌ಗಳ ಜೊತೆ ಕೆಲಸ ಮಾಡಿದ್ದು ನನ್ನ ಭಾಗ್ಯ" ಎಂದರು. ನಟಿ ಸಾತ್ವಿಕಾ: "ನನ್ನನ್ನು ನಂಬಿ ಈ ಪಾತ್ರ ನೀಡಿದ ಸುನಿ ಸರ್‌ಗೆ ಧನ್ಯವಾದಗಳು. ಸಿನಿಮಾ ಬಗ್ಗೆ ನಾನು ದೊಡ್ಡದಾಗಿ ಹೆಚ್ಚೇನೂ ಹೇಳಲ್ಲ, ಆದರೆ ಚಿತ್ರಮಂದಿರದಲ್ಲಿ ನೀವು ಕಳೆಯುವ ಎರಡು ಗಂಟೆ ಪಕ್ಕಾ 'ಪೈಸಾ ವಸೂಲ್' ಎಂಟರ್ಟೈನ್‌ಮೆಂಟ್ ಆಗಿರುತ್ತದೆ. ಶೀಲಂ ಅದ್ಭುತವಾಗಿ ನಟಿಸಿದ್ದಾರೆ, ಎಲ್ಲರೂ ಬೆಂಬಲಿಸಿ" ಎಂದು ಮನವಿ ಮಾಡಿದರು. ನಿರ್ದೇಶಕ ಸುನಿ: "ಶೀಲಂ ಈ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ನಾಯಕನಾಗಿ ನಿಲ್ಲುತ್ತಾರೆ. ನಾಯಕಿಯರಾದ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ಇಬ್ಬರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿಂಗಾಪುರದಲ್ಲೂ ನಮಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಖಂಡಿತಾ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ" ಎಂದು ಭರವಸೆ ವ್ಯಕ್ತಪಡಿಸಿದರು. ಬಲಿಷ್ಠ ತಾಂತ್ರಿಕ ತಂಡ ಇತ್ತೀಚೆಗೆ 'ಒಂದು ಸರಳ ಪ್ರೇಮಕಥೆ'ಯಂತಹ ಯಶಸ್ವಿ ಸಿನಿಮಾ ನೀಡಿದ್ದ 'ರಾಮ್ ಮೂವೀಸ್' ಬ್ಯಾನರ್ ಅಡಿಯಲ್ಲಿ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಸ್ಟಾರ್ ತಂತ್ರಜ್ಞರಾದ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ಜೂಡಾ ಸ್ಯಾಂಡಿ ಅವರ ಮೆಲೋಡಿಯಸ್ ಸಂಗೀತ ಚಿತ್ರಕ್ಕಿದೆ. ವಿಭಿನ್ನ ಕಥೆಯ ಮೂಲಕ ಸದ್ದು ಮಾಡುತ್ತಿರುವ ‘ಮೋಡ ಕವಿದ ವಾತಾವರಣ’ ಚಿತ್ರ ಜೂನ್ 26ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. #movies #2026
6 shares
*'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್'ಗೆ ಮುಡಿಗೇರಿಸಿಕೊಂಡ ಕನ್ನಡ Zee5 ವೆಬ್ ಸರಣಿ ಅಯ್ಯನ ಮನೆ* *ಅಯ್ಯನ‌ ಮನೆ ವೆಬ್ ಸಿರೀಸ್ ಗೆ ದಕ್ಕಿದೆ 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್'* ಕನ್ನಡ ಮಣ್ಣಿನ ಕಥೆಗಳಿಗೆ ಮತ್ತು ಹೊಸ ಪ್ರತಿಭೆಗಳಿಗೆ ಕನ್ನಡ ZEE5 ಒಟಿಟಿ ವೇದಿಕೆ ನೀಡಿದೆ. ಅಯ್ಯನ ಮನೆ ವೆಬ್ ಸರಣಿಯಿಂದ ಶುರುವಾದ ಈ ಪಯಣದಲ್ಲಿ ಈಗಾಗಲೇ ಸಾಕಷ್ಟು ವೆಬ್ ಸೀರೀಸ್ ಗಳು ಕನ್ನಡ ಪ್ರೇಕ್ಷಕರನ್ನು ರಂಜಿಸಿವೆ. ಒಳ್ಳೊಳ್ಳೆ ಕಥೆಗಳನ್ನು ನೀಡುತ್ತಿರುವ ಕನ್ನಡ zee5 ಚೊಚ್ಚಲ ವೆಬ್ ಸರಣಿ ಅಯ್ಯನ ಮನೆ ಕನ್ನಡದ ಅತ್ಯುತ್ತಮ ವೆಬ್ ಸರಣಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಭಾರತೀಯ ಒಟಿಟಿ (OTT) ಮತ್ತು ಡಿಜಿಟಲ್ ಮನರಂಜನಾ ಕ್ಷೇತ್ರಕ್ಕೆ ನೀಡಲಾಗುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್'ಗೆ ಅಯ್ಯನ ಮನೆ ವೆಬ್ ಸರಣಿ ಭಾಜನವಾಗಿದೆ. ನಿನ್ನೆ ಮುಂಬೈನಲ್ಲಿ ಏಳನೇ ಆವೃತ್ತಿಯ 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್' ನಡೆಯಿತು. ಈ ಕಾರ್ಯಕ್ರಮದಲ್ಲಿ zee5 ಅಯ್ಯನ ಮನೆ ಅತ್ಯುತ್ತಮ ವೆಬ್ ಸಿರೀಸ್ ಅವಾರ್ಡ್‌ ಮುಡಿಗೇರಿಸಿಕೊಂಡಿತು. ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೇ ಅಯ್ಯನ‌ ಮನೆ. ಶ್ರುತಿ ನಾಯ್ಡು ನಿರ್ಮಾಣದಲ್ಲಿ ಮೂಡಿ ಬಂದಿದ್ದ ಈ ಸರಣಿಗೆ ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದರು. ದಿಯಾ ಚಿತ್ರದ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ಖುಷಿ ರವಿ ಜಾಜಿಯಾಗಿ ಅಭಿನಯಿಸಿದ್ದರು. ಮಾನಸಿ ಸುಧೀರ್ ನಾಗಲಂಬಿಕೆ ಪಾತ್ರಕ್ಕೆ ಜೀವ ತುಂಬಿದ್ದರು. ನಿರ್ದೇಶನದ ಜೊತೆಗೆ ರಮೇಶ್ ಇಂದಿರಾ ಕೂಡ ಪಾತ್ರವೊಂದನ್ನು ನಿಭಾಯಿಸಿದ್ದರು. 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್' ಪಡೆದ ಸಂಭ್ರಮದಲ್ಲಿರುವ ಅಯ್ಯನ ಮನೆ ತಂಡ ಹಾಗೂ zee5 ಹೊಸ ಘೋಷಣೆಯೊಂದನ್ನು‌ ಮಾಡಿದೆ. ಅಯ್ಯನ ಮನೆ 2 ವೆಬ್ ಸರಣಿಯ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಕನ್ನಡ zee5ನಲ್ಲಿ ವೀಕ್ಷಣೆ ಮಾಡಬಹುದು. #movies #2026
9 shares