👩🏻‍❤️‍👨🏻ಕಿರುತೆರೆ ನಟಿಯ ಅದ್ದೂರಿ ಮದುವೆ : ಫೋಟೋಸ್ ವೈರಲ್ !😍

11 Posts • 121K views
Edu ವೀರ
25K views 20 days ago
ಮೈಸೂರು ಹುಡುಗನ ಕೈಹಿಡಿದ ಮಹಾನಟಿ ಖ್ಯಾತಿಯ ದಿವ್ಯಾಂಜಲಿ, ಅನಾಥೆಯ ಬಾಳಲ್ಲಿ ಸಂಭ್ರಮದ ಅಧ್ಯಾಯ!ಹೆತ್ತವರಿಂದ ತ್ಯಜಿಸಲ್ಪಟ್ಟ ದಿವ್ಯಾಂಜಲಿ ಎಂಬ ಅನಾಥೆಯನ್ನು ಭಾಲ್ಕಿ ಮಠದ ಡಾ. ಬಸವಲಿಂಗ ಪಟ್ಟದೇವರು ಸಾಕಿ, ಕಲಾವಿದೆಯನ್ನಾಗಿ ರೂಪಿಸಿದರು. 'ಮಹಾನಟಿ ಸೀಸನ್-2' ಖ್ಯಾತಿಯ ದಿವ್ಯಾಂಜಲಿ, ರಂಗಭೂಮಿ ಕಲಾವಿದ ಪವನ್‌ಕುಮಾರ್ ಅವರನ್ನು ಮದುವೆಯಾಗಿದ್ದಾರೆ.ಅನಾಥ ಮಗುವಿಗೆ ಆಸರೆಯಾದ ಭಾಲ್ಕಿ ಮಠ, ವಿದ್ಯಾಭ್ಯಾಸದ ಜತೆಗೆ ಕಲಾ ತರಬೇತಿ2005ರಲ್ಲಿ ಹುಟ್ಟಿದ ತಕ್ಷಣವೇ ಹೆತ್ತವರಿಂದ ತ್ಯಜಿಸಲ್ಪಟ್ಟು ತಿಪ್ಪೆಗೆ ಎಸೆಯಲ್ಪಟ್ಟಿದ್ದ ಮಗುವಿಗೆ ಬೀದರ್ ಜಿಲ್ಲೆಯ ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಬಸವಲಿಂಗ ಪಟ್ಟದೇವರು (ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಬೆಳೆಸಿದ ಮಠ) ಆಶ್ರಯ ನೀಡಿ ಸಾಕಿ ಬೆಳೆಸಿದರು. ಉತ್ತಮ ಸಂಸ್ಕಾರದೊಂದಿಗೆ ಪದವಿವರೆಗೆ ವಿದ್ಯಾಭ್ಯಾಸ ಕೊಡಿಸಿದ ಅವರು, ದಿವ್ಯಾಂಜಲಿಗೆ ಸಾಣೇಹಳ್ಳಿ ಮಠದಲ್ಲಿ ನಾಟಕ ಮತ್ತು ಕಲೆಯ ತರಬೇತಿಯನ್ನೂ ಕೊಡಿಸಿದರು. ರಂಗಭೂಮಿ ಹಾಗೂ ಜೀ ಕನ್ನಡದ ‘ಮಹಾನಟಿ ಸೀಸನ್-2’ರಲ್ಲಿ ಮಿಂಚುನಟನೆಯ ಬಗ್ಗೆ ಅಗಾಧ ಪ್ರೀತಿ ಹೊಂದಿದ್ದ ದಿವ್ಯಾಂಜಲಿ, ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಮಹಾನಟಿ ಸೀಸನ್-2’ರ ಸ್ಪರ್ಧಿಯಾಗಿ ವೇದಿಕೆಯಲ್ಲಿ ಅದ್ಭುತ ನಟನೆಯಿಂದ ಮಿಂಚಿದರು. ತಮ್ಮ ಬದುಕಿನ ನೋವಿನ ಕಥೆಯನ್ನು ಹಂಚಿಕೊಳ್ಳುವ ಮೂಲಕ ದೇಶಾದ್ಯಂತ ಲಕ್ಷಾಂತರ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗಿದ್ದಾರೆ. ಮಠದಲ್ಲೇ ಚಿಗುರಿದ ಪ್ರೀತಿ, ರಂಗಭೂಮಿ ಪ್ರತಿಭೆ ಪವನ್‌ಕುಮಾರ್ ಜೊತೆ ಕಲ್ಯಾಣಮೈಸೂರು ಮೂಲದ ರಂಗಭೂಮಿ ಕಲಾವಿದ ಪವನ್‌ಕುಮಾರ್ ವೈ. ಎಂಬುವವರ ಪರಿಚಯ ದಿವ್ಯಾಂಜಲಿಗೆ ಮಠದಲ್ಲೇ ಆಗಿ, ಸ್ನೇಹ ಪ್ರೀತಿಯಾಗಿ ಬದಲಾಯಿತು. ಪ್ರೀತಿಸಿದ ಹುಡುಗನನ್ನೇ ಕೈಹಿಡಿದ ದಿವ್ಯಾಂಜಲಿ ಅವರ ಹೊಸ ಜೀವನಕ್ಕೆ ಪವನ್‌ಕುಮಾರ್ ಆಸರೆಯಾಗಿದ್ದಾರೆ.ಭಾಲ್ಕಿಯಲ್ಲಿ ಗುರುಗಳ ಸಮ್ಮುಖದಲ್ಲಿ ಅದ್ದೂರಿ ಮದುವೆಇವರ ಪ್ರೀತಿಗೆ ಭಾಲ್ಕಿ ಮಠದ ಪರಮಪೂಜ್ಯ ಡಾ. ಬಸವಲಿಂಗ ಪಟ್ಟದೇವರು ಪೂರ್ಣ ಸಮ್ಮತಿ ನೀಡಿ, ಬೀದರ್ ಜಿಲ್ಲೆಯ ಭಾಲ್ಕಿಯ 'ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪ'ದಲ್ಲಿ ಹೆತ್ತ ತಂದೆಯ ಸ್ಥಾನದಲ್ಲಿ ನಿಂತು ಅದ್ದೂರಿಯಾಗಿ ಮದುವೆ ನೆರವೇರಿಸಿಕೊಟ್ಟಿದ್ದಾರೆ ಹಸೆಮಣೆ ಏರಿ ಒಂದು ತಿಂಗಳು, ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿದಿವ್ಯಾಂಜಲಿ ಮತ್ತು ಪವನ್‌ಕುಮಾರ್ ಜೂನ್ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಜುಲೈ 26ಕ್ಕೆ ಸರಿ ಸುಮಾರು ಒಂದು ತಿಂಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ನಟಿ ದಿವ್ಯಾಂಜಲಿ ತಮ್ಮ ಮದುವೆಯ ಅಪರೂಪದ ಹಾಗೂ ಸುಂದರ ಕ್ಷಣಗಳ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. #👩🏻‍❤️‍👨🏻 ಹಸೆಮಣೆ ಏರಿದ ಕಿರುತೆರೆ ನಟಿ!😍
245 likes
2 comments 218 shares