ದುಃಖ ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ರೂಪದಲ್ಲಿ ಬರುತ್ತೆ.ಯಾರಿಗೂ ಅದರಿಂದ ವಿನಾಯಿತಿ ಇಲ್ಲ.
ಆದರೆ❓ಅತ್ಯಂತ ಮುಖ್ಯವಾದ ವಿಷಯ ಏನು ಗೊತ್ತಾ❔
ದುಃಖ ಬರುವುದನ್ನು ನಾವು ತಡೆಯಲು ಆಗದೇ ಇರಬಹುದು.ಆದರೆ❓ಅದರಲ್ಲಿ ಮುಳುಗಿ ಹೋಗಬೇಕಾ ಬೇಡವಾನ್ನೋ ನಿರ್ಧಾರ ಮಾತ್ರ ನಮ್ಮ ಕೈಯಲ್ಲೇ ಇರುತ್ತೆ.
ಇದನ್ನು ದೂರ ಮಾಡಿಕೊಳ್ಳುವ ಶಕ್ತಿಯು ನಮ್ಮಲ್ಲಿಯೇ ಇದೆ
ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳೋದು ಅಷ್ಟು ಸುಲಭ ಅಲ್ಲ,ಆದರೆ❔ಪ್ರತಿದಿನದ ಸಣ್ಣ ಅಭ್ಯಾಸಗಳಿಂದ ಸಾಧ್ಯ:
ಕೋಪ,ದುಃಖ ಬಂದಾಗ 3 ಆಳವಾದ ಉಸಿರು ತಗೊಳ್ಳಿ.ಮನಸ್ಸು ಶಾಂತವಾಗುತ್ತೆ
ಈಗ ಏನಿದೆಯೋ ಅದಕ್ಕೆ ಒಂದು ಕ್ಷಣ ಧನ್ಯವಾದ ಹೇಳಿ.ಚಿಕ್ಕದಾದರೂ ಪರವಾಗಿಲ್ಲ
ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಂಬಿದ ಒಬ್ಬರ ಹತ್ತಿರ ಹಂಚಿಕೊಳ್ಳಿ.ಹಂಚಿಕೊಂಡಾಗ ಅರ್ಧ ಭಾರ ಕಡಿಮೆಯಾಗುತ್ತೆ
10 ನಿಮಿಷ ನಡೆದರೆ ಆಲೋಚನೆಗಳು ಬದಲಾಗುತ್ತವೆ
ದುಃಖ ಶಾಶ್ವತ ಅಲ್ಲ.ಅದು ಮೋಡದಂತೆ ಬಂದು ಹೋಗುತ್ತೆ. ಮೋಡದ ಹಿಂದೆ ಯಾವಾಗ್ಲೂ ಸೂರ್ಯ ಇದ್ದೇ ಇರುತ್ತಾನೆ
ದುಃಖವನ್ನ ಅಳಿಸೋಕೆ ಆಗದೇ ಇರಬಹುದು,ಆದರೆ❔ಅದರ ಜೊತೆ ಹೇಗೆ ಇರಬೇಕು ಅನ್ನೋದನ್ನ ನಾವು ಕಲಿಯಬಹುದು.ಮತ್ತು ಆ ಶಕ್ತಿ ನಮ್ಮಲ್ಲೇ ಇದೆ.
#ನನ್ನ ಪ್ರಪಂಚ ❣️