ವಿಷ್ಣು ಪ್ರಿಯ 🦚💙
653 views
5 days ago
#ಹರೇ ಕೃಷ್ಣ #🙏🏻ಶ್ರೀಕೃಷ್ಣನ ಕಥೆಗಳು📜 #🙏ಭಕ್ತಿ ಸ್ಟೇಟಸ್ #🔱 ಭಕ್ತಿ ಲೋಕ #🔱 ಭಕ್ತಿ ಲೋಕ ‎ ನಾವು ಕರೆದರೆ ಕೃಷ್ಣನು ಬರಲ್ವಾ? ಬರುತ್ತಾನೆ... ಆದರೆ ಯಾವ ರೂಪದಲ್ಲಿ? ‎ ‎ ಕೃಷ್ಣ ಬರುತ್ತಾನೆ, ಕತ್ತಲಲ್ಲಿ ಸೂರ್ಯನಂತೆ. ಇದು ಹೊರಗಿನ ಬೆಳಕು-ಕತ್ತಲೆ ಬಗ್ಗೆ ಅಲ್ಲ! ನಮ್ಮೊಳಗಿನ ಕತ್ತಲೆ ಬಗ್ಗೆ. ನಮ್ಮ ಬದುಕಿನ ದೊಡ್ಡ ಶತ್ರು ದುಃಖವಲ್ಲ... ದಾರಿಯಿಲ್ಲದ ಅಜ್ಞಾನ. ದುಃಖ, ವಿಫಲತೆ, ನೋವು ಇವೆಲ್ಲ ಸಮಸ್ಯೆಗಳಲ್ಲ. ಅವು ಸಮಸ್ಯೆಗಳ ಫಲಗಳು ಮಾತ್ರ.. ‎ ‎→ ಹಣ, ಸಂಬಂಧ, ಸ್ಥಾನಮಾನ ಇವೆಲ್ಲ ದೀಪಗಳಂತಿವೆ. ಸ್ವಲ್ಪ ಹೊತ್ತು ಬೆಳಕು ಕೊಡುತ್ತವೆ... ಮನಸ್ಸಿಗೆ ತಾತ್ಕಾಲಿಕ ಆರಾಮ ಕೊಡುತ್ತವೆ. ಆದರೆ ಕತ್ತಲೆ ಉಳಿಯುತ್ತದೆ. ‎ ‎ ಆದರೆ... ಆತ್ಮಜ್ಞಾನ ಎಂಬ ಸೂರ್ಯೋದಯವಾದರೆ, ಕತ್ತಲೆ ಉಳಿಯುವುದೇ ಇಲ್ಲ. ಸೂರ್ಯ ಎಂದರೆ ಆತ್ಮಜ್ಞಾನ, ಭಗವದ್ ಜ್ಞಾನ, ಕೃಷ್ಣಸ್ಮರಣೆ. ‎ ‎ಒಮ್ಮೆ.. “ನಾನು ದೇಹವಲ್ಲ, ನಾನು ಭಗವಂತನ ಅಂಶ” ಎಂಬ ಬೋಧ ಬಂದರೆ ಭಯ ಕರಗುತ್ತದೆ, ದುಃಖ ಶಮನವಾಗುತ್ತದೆ, ಅಸಂತೋಷ ತಾನೇ ದೂರವಾಗುತ್ತದೆ. ‎ ‎ ಹಣವಿಲ್ಲದಾಗ ಮನುಷ್ಯ ತಪ್ಪು ಸಾಲ, ತಪ್ಪು ಜನ, ತಪ್ಪು ದಾರಿಗೆ ಬೀಳುತ್ತಾನೆ. ಆತ್ಮಜ್ಞಾನ ಇದ್ದರೆ ಯಾವ ದಾರಿ ಸರಿ, ಯಾರನ್ನು ನಂಬಬೇಕು, ಏನು ತಪ್ಪು ಎಂದು ತೋರಿಸುತ್ತದೆ. ‎ ‎ ಅಂತಿಮವಾಗಿ ಹಣವಲ್ಲ - ಆತ್ಮಜ್ಞಾನವೇ ಮನುಷ್ಯನನ್ನು ಉಳಿಸುವ ಬೆಳಕು! 🙏🌼🙏🌼🙏 ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏