ರಾಧಾಕೃಷ್ಣ 🦚💙
1K views • 5 months ago
#ಹರೇ ಕೃಷ್ಣ #🙏🏻ಶ್ರೀಕೃಷ್ಣನ ಕಥೆಗಳು📜 #🙏ಭಕ್ತಿ ಸ್ಟೇಟಸ್ #🔱 ಭಕ್ತಿ ಲೋಕ #🔱 ಭಕ್ತಿ ಲೋಕ
ನಾವು ಕರೆದರೆ ಕೃಷ್ಣನು ಬರಲ್ವಾ? ಬರುತ್ತಾನೆ... ಆದರೆ ಯಾವ ರೂಪದಲ್ಲಿ?
ಕೃಷ್ಣ ಬರುತ್ತಾನೆ, ಕತ್ತಲಲ್ಲಿ ಸೂರ್ಯನಂತೆ. ಇದು ಹೊರಗಿನ ಬೆಳಕು-ಕತ್ತಲೆ ಬಗ್ಗೆ ಅಲ್ಲ! ನಮ್ಮೊಳಗಿನ ಕತ್ತಲೆ ಬಗ್ಗೆ. ನಮ್ಮ ಬದುಕಿನ ದೊಡ್ಡ ಶತ್ರು ದುಃಖವಲ್ಲ... ದಾರಿಯಿಲ್ಲದ ಅಜ್ಞಾನ. ದುಃಖ, ವಿಫಲತೆ, ನೋವು ಇವೆಲ್ಲ ಸಮಸ್ಯೆಗಳಲ್ಲ. ಅವು ಸಮಸ್ಯೆಗಳ ಫಲಗಳು ಮಾತ್ರ..
→ ಹಣ, ಸಂಬಂಧ, ಸ್ಥಾನಮಾನ ಇವೆಲ್ಲ ದೀಪಗಳಂತಿವೆ. ಸ್ವಲ್ಪ ಹೊತ್ತು ಬೆಳಕು ಕೊಡುತ್ತವೆ... ಮನಸ್ಸಿಗೆ ತಾತ್ಕಾಲಿಕ ಆರಾಮ ಕೊಡುತ್ತವೆ. ಆದರೆ ಕತ್ತಲೆ ಉಳಿಯುತ್ತದೆ.
ಆದರೆ... ಆತ್ಮಜ್ಞಾನ ಎಂಬ ಸೂರ್ಯೋದಯವಾದರೆ, ಕತ್ತಲೆ ಉಳಿಯುವುದೇ ಇಲ್ಲ. ಸೂರ್ಯ ಎಂದರೆ ಆತ್ಮಜ್ಞಾನ, ಭಗವದ್ ಜ್ಞಾನ, ಕೃಷ್ಣಸ್ಮರಣೆ.
ಒಮ್ಮೆ.. “ನಾನು ದೇಹವಲ್ಲ, ನಾನು ಭಗವಂತನ ಅಂಶ” ಎಂಬ ಬೋಧ ಬಂದರೆ ಭಯ ಕರಗುತ್ತದೆ, ದುಃಖ ಶಮನವಾಗುತ್ತದೆ, ಅಸಂತೋಷ ತಾನೇ ದೂರವಾಗುತ್ತದೆ.
ಹಣವಿಲ್ಲದಾಗ ಮನುಷ್ಯ ತಪ್ಪು ಸಾಲ, ತಪ್ಪು ಜನ, ತಪ್ಪು ದಾರಿಗೆ ಬೀಳುತ್ತಾನೆ. ಆತ್ಮಜ್ಞಾನ ಇದ್ದರೆ ಯಾವ ದಾರಿ ಸರಿ, ಯಾರನ್ನು ನಂಬಬೇಕು, ಏನು ತಪ್ಪು ಎಂದು ತೋರಿಸುತ್ತದೆ.
ಅಂತಿಮವಾಗಿ ಹಣವಲ್ಲ - ಆತ್ಮಜ್ಞಾನವೇ ಮನುಷ್ಯನನ್ನು ಉಳಿಸುವ ಬೆಳಕು! 🙏🌼🙏🌼🙏
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
15 likes
15 shares