ಫಾಲೋ
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
@digitalmediasuddhiprapancha
1,592
ಪೋಸ್ಟ್ಸ್
14,076
ಫಾಲೋವರ್ಸ್
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
541 ವೀಕ್ಷಿಸಿದ್ದಾರೆ
15 ಗಂಟೆಗಳ ಹಿಂದೆ
More than just a fan gathering. ❤️‍🔥 The AAFA Annual Summit 2026 brought together over 1,000 AAFA members from seven states. Along with spending hours meeting every fan for an individual photograph, Icon star @AlluArjun announced insurance coverage for AAFA members and hosted lunch for everyone present. A reflection of @AlluArjun's love, gratitude and commitment towards his fans. ❤️ #AAFAAnnualSummit2026 #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
454 ವೀಕ್ಷಿಸಿದ್ದಾರೆ
15 ಗಂಟೆಗಳ ಹಿಂದೆ
*ಅಭಿಮಾನಿಗಳ ಸುರಕ್ಷತೆಗೆ ಮುಂದಾದ 'ಐಕಾನ್ ಸ್ಟಾರ್'; ಕರ್ನಾಟಕದ 150 ಮಂದಿ ಸೇರಿ ಸಾವಿರ ಫ್ಯಾನ್ಸ್‌ಗೆ ‘ಅಪಘಾತ ವಿಮೆ’ ಮಾಡಿಸಿದ ಅಲ್ಲು ಅರ್ಜುನ್!* ಹೈದರಾಬಾದ್: ತಮ್ಮ ನಟನೆ ಮತ್ತು ಅದ್ಭುತ ಡ್ಯಾನ್ಸ್ ಮೂಲಕ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್, ಇದೀಗ ತಮ್ಮ ಮಾನವೀಯ ನಡೆಯಿಂದ ಮತ್ತೊಮ್ಮೆ ಲಕ್ಷಾಂತರ ಜನರ ಮನಗೆದ್ದಿದ್ದಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ 'AAFA Annual Summit 2026' ಅಭಿಮಾನಿಗಳ ಸಮಾವೇಶದಲ್ಲಿ ಭಾಗವಹಿಸಿದ್ದ ಸುಮಾರು 1,000 ಅಭಿಮಾನಿಗಳಿಗೆ ಅಲ್ಲು ಅರ್ಜುನ್‌ ಸ್ವತಃ 'ಅಪಘಾತ ವಿಮೆ' ಮಾಡಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ಮಾದರಿ ಹುಟ್ಟುಹಾಕಿದ್ದಾರೆ. ಏನಿದು 'AAFA Annual Summit 2026'? ಅಲ್ಲು ಅರ್ಜುನ್ ಅವರ ಅಭಿಮಾನಿಗಳಿಂದ ನೂತನವಾಗಿ ಆರಂಭಗೊಂಡಿರುವ 'ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್' (AAFA) ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ಬೃಹತ್ ಫ್ಯಾನ್ಸ್ ಮೀಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ 7 ಪ್ರಮುಖ ರಾಜ್ಯಗಳಿಂದ ಸುಮಾರು 1000 ಅಭಿಮಾನಿಗಳು ಆಗಮಿಸಿದ್ದರು. ಕರ್ನಾಟಕದ 150 ಅಭಿಮಾನಿಗಳಿಗೆ ವಿಮಾ ಸುರಕ್ಷೆ: ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಅಭಿಮಾನಿಯ ಸುರಕ್ಷತೆ ಮತ್ತು ಅವರ ಕುಟುಂಬದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಲ್ಲು ಅರ್ಜುನ್ ಈ ಮಹತ್ವದ ನಿರ್ಧಾರ ತಳೆದಿದ್ದಾರೆ. ಹೈದರಾಬಾದ್‌ ಸಮಾವೇಶದಲ್ಲಿ ಕರ್ನಾಟಕ ಒಂದರಿಂದಲೇ ಸುಮಾರು 150ಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಿದ್ದು, ಅವರೆಲ್ಲರಿಗೂ ಅಲ್ಲು ಅರ್ಜುನ್‌ ಕಡೆಯಿಂದಲೇ ಅಪಘಾತ ವಿಮೆ ಮಾಡಿಸಿ ಕೊಟ್ಟಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ವಿಮೆಯ ವಿವರ ಹಾಗೂ ಪಾಲಿಸಿ ವಿತರಣೆ: ರಾಜ್ಯ ಸಮಿತಿ ಸದಸ್ಯರಿಗೆ ತಲಾ ₹5 ಲಕ್ಷ ಮೊತ್ತದ ಅಪಘಾತ ವಿಮೆ ಕವರೇಜ್, ಜಿಲ್ಲಾ ಸಮಿತಿ ಸದಸ್ಯರಿಗೆ ತಲಾ ₹3 ಲಕ್ಷ ಮೊತ್ತದ ಅಪಘಾತ ವಿಮೆ ಕವರೇಜ್ ಮಾಡಿಸಲಾಗಿದೆ. ಕಾರ್ಯಕ್ರಮ ವೇದಿಕೆಯಲ್ಲೇ ಅಲ್ಲು ಅರ್ಜುನ್‌ ಅವರು ಸ್ವತಃ ಪ್ರತಿಯೊಬ್ಬ ಅಭಿಮಾನಿಗೂ ಇನ್ಶೂರೆನ್ಸ್ ಕಾರ್ಡ್‌ಗಳನ್ನು ವಿತರಿಸಿದ್ದಾರೆ. "ನನಗೆ ನನ್ನ ಅಭಿಮಾನಿಗಳ ಪ್ರೀತಿ ಎಷ್ಟು ಮುಖ್ಯವೋ, ಅವರ ಹಾಗೂ ಅವರ ಕುಟುಂಬಗಳ ಸುರಕ್ಷತೆಯೂ ಅಷ್ಟೇ ಮುಖ್ಯ" ಎಂಬ ಸಂದೇಶವನ್ನು ಈ ವೇಳೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗಳ ಮಹಾಪೂರ ಅಭಿಮಾನಿಗಳನ್ನು ಕೇವಲ ಸಿನಿಮಾ ಗೆಲುವಿನ ಸಂಭ್ರಮಕ್ಕೆ ಅಥವಾ ಪ್ರಚಾರಕ್ಕೆ ಸೀಮಿತಗೊಳಿಸದೆ, ಅವರ ಕುಟುಂಬದ ಹಿತದೃಷ್ಟಿಯಿಂದ ಈ ರೀತಿಯ ಭದ್ರತಾ ಯೋಜನೆ ರೂಪಿಸಿದ 'ಐಕಾನ್ ಸ್ಟಾರ್' ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ಅವರ ಈ ಸಾಮಾಜಿಕ ಕಾಳಜಿ ಬೇರೆಲ್ಲಾ ಚಿತ್ರರಂಗದ ನಟರಿಗೂ ಪ್ರೇರಣೆಯಾಗಲಿ, ಪ್ರತಿಯೊಬ್ಬ ತಾರೆಯೂ ತಮ್ಮ ಅಭಿಮಾನಿಗಳ ಭದ್ರತೆಗೆ ಈ ರೀತಿ ಚಿಂತಿಸಲಿ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
501 ವೀಕ್ಷಿಸಿದ್ದಾರೆ
15 ಗಂಟೆಗಳ ಹಿಂದೆ
*ಡಿಸೆಂಬರ್‌ 24ಕ್ಕೆ ತೆರೆಗೆ ಬರಲಿದೆ ಧನಂಜಯ್‌ ಅಭಿನಯದ ‘ಅಣ್ಣ ಫ್ರಮ್‌ ಮೆಕ್ಸಿಕೋ’: ಬರ್ತಿದೆ ‘ಬಡವ ರಾಸ್ಕಲ್’ ಹಿಟ್ ಕಾಂಬಿನೇಷನ್ !* ಕನ್ನಡ ಚಿತ್ರರಂಗದ ಖ್ಯಾತ ನಟ, ‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್‌ ಮೆಕ್ಸಿಕೋ’ (Anna From Mexico) ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಾಲು ಸಾಲು ರಜಾದಿನಗಳ ಸಂಭ್ರಮವನ್ನು ದುಪ್ಪಟ್ಟು ಮಾಡಲು, ಈ ಸಿನಿಮಾ ಮುಂಬರುವ ಡಿಸೆಂಬರ್ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ವರ್ಷಾಂತ್ಯಕ್ಕೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಮನರಂಜನೆ ನೀಡಲು ಸಜ್ಜಾಗಿರುವ ಈ ಸುದ್ದಿ ಡಾಲಿ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹಾಗೂ ಸಂತಸ ಮೂಡಿಸಿದೆ. ಈ ಚಿತ್ರದ ವಿಶೇಷವೆಂದರೆ, 2021ರ ಡಿಸೆಂಬರ್‌ ತಿಂಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ 'ಬಡವ ರಾಸ್ಕಲ್' ಸಿನಿಮಾದ ಜೋಡಿ ಈಗ ಬರೋಬ್ಬರಿ ಐದು ವರ್ಷಗಳ ಬಳಿಕ ಮತ್ತೆ ಒಂದಾಗಿದೆ. 'ಬಡವ ರಾಸ್ಕಲ್' ಚಿತ್ರದ ಮೂಲಕವೇ ಧನಂಜಯ್ ತಮ್ಮ 'ಡಾಲಿ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿ ಬಡ್ತಿ ಪಡೆದು ಯಶಸ್ಸು ಕಂಡಿದ್ದರು. ಆ ಚಿತ್ರವನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದ ಶಂಕರ್ ಗುರು, ಈಗ ಎರಡನೇ ಬಾರಿಗೆ ಧನಂಜಯ್ ಅವರಿಗೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಮೂಲಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಿಟ್ ಜೋಡಿ ಮತ್ತೆ ಅದೇ ಡಿಸೆಂಬರ್ ತಿಂಗಳಲ್ಲೇ ಒಂದಾಗಿ ಚಿತ್ರಮಂದಿರಕ್ಕೆ ಎಂಟ್ರಿ ನೀಡುತ್ತಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಪಕ್ಕಾ ಆಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್‌ಟೇನರ್ ಎಲಿಮೆಂಟ್ಸ್‌ ಹೊಂದಿರುವ ಈ ಸಿನಿಮಾದಲ್ಲಿ ಧನಂಜಯ್‌ಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಉಳಿದಂತೆ ರಂಗಾಯಣ ರಘು, ನಾಗಭೂಷಣ ಹಾಗೂ ಪೂರ್ಣಚಂದ್ರ ಮೈಸೂರು ಸೇರಿದಂತೆ ಬಲವಾದ ತಾರಾಗಣವೇ ಚಿತ್ರದಲ್ಲಿದ್ದು, ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವೆಂದರೆ, ನಟ ಲೂಸ್ ಮಾದ ಯೋಗಿ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೋಸ್ ಜಂಟಿ ಬ್ಯಾನರ್‌ನಡಿ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ವಾಸುಕಿ ವೈಭವ್‌ ಅವರ ಸಂಗೀತ ನಿರ್ದೇಶನವಿದ್ದು, ಹಿನ್ನೆಲೆ ಸಂಗೀತ ಹಾಗೂ ಹಾಡುಗಳ ಮೇಲೆ ಅಪಾರ ನಿರೀಕ್ಷೆಯಿದೆ. ತಾಂತ್ರಿಕ ಬಳಗದಲ್ಲಿ ಅಜಯ್ ಅವರ ಸಂಕಲನ ಹಾಗೂ ಗುಣ ಅವರ ಕಲಾ ನಿರ್ದೇಶನವಿದ್ದು, ಅದ್ಧೂರಿ ಮೇಕಿಂಗ್‌ನೊಂದಿಗೆ ಸಿನಿಮಾ ಡಿಸೆಂಬರ್ 24ಕ್ಕೆ ಪ್ರೇಕ್ಷಕರ ಮುಂದೆ ಬರಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
429 ವೀಕ್ಷಿಸಿದ್ದಾರೆ
15 ಗಂಟೆಗಳ ಹಿಂದೆ
*ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಚಿತ್ರದ ‘ಮೊದಮೊದಲಿದು’ ಮೆಲೋಡಿ ಹಾಡು ರಿಲೀಸ್‌* ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಹಾಗೂ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಈಗ ‘ಭಾವಾಂತರ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಈ ಸಿನಿಮಾದ ‘ಮೊದಮೊದಲಿದು’ ಎಂಬ ಮೆಲೋಡಿ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ತನ್ನದೇ ಆದ ‘ಹೊಂಬಾಳೆ ಮ್ಯೂಸಿಕ್’ ಆಡಿಯೋ ಲೇಬಲ್ ಮೂಲಕ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಹೊಸಬರ ಈ ವಿಭಿನ್ನ ಪ್ರಯತ್ನಕ್ಕೆ ಸಾಥ್ ನೀಡಿದೆ. ನಿರ್ದೇಶನದ ಜೊತೆಗೆ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ ಸ್ವತಃ ಕಾರ್ತಿಕ್ ಶರ್ಮಾ ಅವರೇ ಹೊತ್ತಿದ್ದಾರೆ. ಬಿಡುಗಡೆಯಾಗಿರುವ 'ಮೊದಮೊದಲಿದು' ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದು, ಪ್ರಖ್ಯಾತ ಗಾಯಕರಾದ ಸಿದ್ಧಾರ್ಥ ಬೆಳ್ಮಣ್ಣು ಹಾಗೂ ಐಶ್ವರ್ಯ ರಂಗರಾಜನ್ ತಮ್ಮ ಮಧುರ ಕಂಠದಲ್ಲಿ ಹಾಡಿ ಜೀವ ತುಂಬಿದ್ದಾರೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಕಥಾಹಂದರಕ್ಕೆ ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲೇ ಈ ರೀತಿಯ ವಿಶಿಷ್ಟವಾದ ಹಾಗೂ ಅಪರೂಪದ ಎಳೆ ಹೊಂದಿರುವ ಸಿನಿಮಾ ಬಂದಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಎಲ್ಲವನ್ನೂ ಹೊಂಬಾಳೆ ಮ್ಯೂಸಿಕ್ ಮೂಲಕ ಹಂತ ಹಂತವಾಗಿ ಬಿಡುಗಡೆ ಆಗಲಿವೆ. ಈಗಾಗಲೇ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿರುವ ‘ಭಾವಾಂತರ’ ತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದ್ದು, ಶೀಘ್ರದಲ್ಲೇ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ. ಕರಾವಳಿಯ ಉಡುಪಿ, ಬೆಂಗಳೂರು ಹಾಗೂ ತಮಿಳುನಾಡಿನ ಸುಂದರ ತಾಣಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. ‘ಕಿಕ್ ಮೀಡಿಯಾ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕಾರ್ತಿಕ್ ಶರ್ಮಾ ಅವರಿಗೆ ಜೋಡಿಯಾಗಿ ಖ್ಯಾತ ನಟಿ ತನ್ವಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದ ರಾವ್ ಮತ್ತು ಭಾನು ಮುಂತಾದ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದು, ಸಾಗರ್ ಅತ್ಕರ್ ಛಾಯಾಗ್ರಹಣ ಹಾಗೂ ಆಶೀಷ್ ಹುಲಕುಂದ್ ಅವರ ಸಂಕಲನ ಈ ಚಿತ್ರಕ್ಕಿದೆ. ನಿರ್ದೇಶಕ ಕಾರ್ತಿಕ್ ಶರ್ಮಾ ಅವರಿಗೆ ಚಿತ್ರರಂಗ ಹೊಸದೇನಲ್ಲ. 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅಭಿನಯದ ‘ವೀರ ಕನ್ನಡಿಗ’ ಹಾಗೂ ನಟಿ ಖುಷ್ಬೂ ಅಭಿನಯದ ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಅವರು ಮಿಂಚಿದ್ದರು. ಕೇವಲ ನಟನೆಯಷ್ಟೇ ಅಲ್ಲದೆ, ನೂರಕ್ಕೂ ಹೆಚ್ಚು ಕಿರುತೆರೆ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳಿಗೆ ಸಂಗೀತ ನೀಡುವ ಮೂಲಕ ಸಂಗೀತ ಲೋಕದಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಇದೀಗ ಚಿತ್ರರಂಗದಲ್ಲ ತಮಗಿರುವ ಸುದೀರ್ಘ ಅನುಭವವನ್ನು ಧಾರೆ ಎರೆದು ‘ಭಾವಾಂತರ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
494 ವೀಕ್ಷಿಸಿದ್ದಾರೆ
15 ಗಂಟೆಗಳ ಹಿಂದೆ
*ನಟ ಸಂತೋಷ್ ಬಾಲರಾಜ್ ‘ಬೆಂಟ್ಲಿ’ ಟ್ರೇಲರ್ ರಿಲೀಸ್: ಭಾವುಕರಾದ ಲೂಸ್ ಮಾದ ಯೋಗಿ, ಪ್ರಮೋದ್ ಶೆಟ್ಟಿ!* ಬೆಂಗಳೂರು: 'ಗಣಪ' ಮತ್ತು 'ಕರಿಯ-2' ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ನಟ ಸಂತೋಷ್ ಬಾಲರಾಜ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ (ಆಗಸ್ಟ್ 5) ಅಂಗವಾಗಿ, ಅವರು ನಟಿಸಿ, ನಿರ್ದೇಶಿಸಿದ್ದ ‘ಬೆಂಟ್ಲಿ’ (Bentlee) ಸಿನಿಮಾದ ಅಧಿಕೃತ ಟ್ರೇಲರ್‌ ಬಿಡುಗಡೆಯಾಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ ಅಕಾಲಿಕ ಮರಣ ಹೊಂದಿದ್ದ ಸಂತೋಷ್ ಅವರ ಅಗಲಿಕೆ ಚಂದನವನಕ್ಕೆ ದೊಡ್ಡ ಆಘಾತವನ್ನುಂಟು ಮಾಡಿತ್ತು. ಸಿನಿ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಶ್ವೇತಾ ಬಾಲರಾಜು ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ಬಾಲರಾಜು ಅವರೊಂದಿಗೆ ಸಿಮ್ರಾನ್ ನಾಟೇಕರ್, ಶ್ರುತಿ, ಚರಣ್‌ರಾಜ್, ರಾಜಾ ಬಲವಾಡಿ ಮುಂತಾದವರು ನಟಿಸಿದ್ದಾರೆ. ಸ್ನೇಹಿತನನ್ನು ನೆನೆದು ಭಾವುಕರಾದ ‘ಲೂಸ್ ಮಾದ’ ಯೋಗಿ ಈ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿರುವ ನಟ ಲೂಸ್ ಮಾದ ಯೋಗಿ ಮಾತನಾಡಿ, "ಈ ಕಾರ್ಯಕ್ರಮದಲ್ಲಿ ಖುಷಿ ಆಗ್ತಿದೆ ಅಂತಾನೂ ಹೇಳೋಕೆ ಆಗಲ್ಲ, ಬೇಜಾರಾಗ್ತಿದೆ ಅಂತಾನೂ ಹೇಳೋಕೆ ಆಗಲ್ಲ. ನಮ್ಮ ನಾಯಕ ನಟ ತೀರಿಕೊಂಡು ಒಂದು ವರ್ಷ ಆಯ್ತು ಅನ್ನುವುದು ನೆನಪಿನಲ್ಲಿ ಇರುವ ವಿಷಯ ಅಷ್ಟೇ. ಸಂತು ಎಷ್ಟು ಒಳ್ಳೆ ಸಿನಿಮಾಗಳು ಕೊಟ್ರೋ, ಎಷ್ಟು ಸಂಪಾದನೆ ಮಾಡಿದ್ರೋ ಅದೆಲ್ಲ ಒಂದು ಕಡೆಯಾದರೆ, ಅವರು ಎಷ್ಟೊಂದು ಜನ ಒಳ್ಳೆಯ ಸ್ನೇಹಿತರನ್ನ ಸಂಪಾದನೆ ಮಾಡಿದ್ದಾರೆ ಅನ್ನೋದಕ್ಕೆ ಈ ಈವೆಂಟ್ ಸಾಕ್ಷಿ" ಎಂದರು. "ಸಂತೋಷ್‌ಗೆ ಸಿನಿಮಾಗಳ ಬಗ್ಗೆ ತುಂಬಾ ಆಸೆ, ಕನಸುಗಳಿದ್ದವು. ಅವನನ್ನು ತುಂಬಾ ಬೇಗ ಕಳೆದುಕೊಂಡೆವು. ನಾವು ಸಿಕ್ಕಾಗ ಈ ಸಿನಿಮಾ ಬಗ್ಗೆ ಮಾತಾಡ್ತಿದ್ವಿ, ಆಗ ಇದಕ್ಕೆ ಬೇರೆ ಹೆಸರಿತ್ತು. ನಾನು ಈ ಸಿನಿಮಾಗೆ ಡಬ್ ಮಾಡ್ತೀನಿ ಅನ್ನೋ ಕಲ್ಪನೆಯೂ ನನಗಿರಲಿಲ್ಲ, ಆದರೆ ಆ ಪರಿಸ್ಥಿತಿ ಬಂತು. ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿ, ನಾವೆಲ್ಲರೂ ಥಿಯೇಟರ್‌ಗೆ ಬಂದು ನೋಡಿ ಈ ಸಿನಿಮಾನ ಗೆಲ್ಲಿಸೋಣ" ಎಂದು ವಿನಂತಿಸಿದರು. ತಾನೇ ನಿರ್ದೇಶಿಸಿ, ನಟಿಸಿದ ಚಿತ್ರದ ಸಂಭ್ರಮ ನೋಡಲು ಸಂತೋಷ್ ಇಲ್ಲ ಚಿತ್ರದ ಕುರಿತು ಮಾತನಾಡಿದ ನಟ ಪ್ರಮೋದ್ ಶೆಟ್ಟಿ, "ತಂದೆಯವರು ಹೋದ ಮೇಲೂ ನಿರ್ಮಾಣ ಸಂಸ್ಥೆಯನ್ನು ಕಾಪಾಡಿಕೊಂಡು, ತಾನೇ ನಿರ್ದೇಶನ ಹಾಗೂ ನಟನೆ ಮಾಡಿರುವ ಸಿನಿಮಾದ ಸಂಭ್ರಮವನ್ನು ನೋಡಲು ಸಂತೋಷ್ ಇಲ್ಲ ಅನ್ನುವುದೇ ದೊಡ್ಡ ಬೇಜಾರು. ನಾವು ಭೇಟಿಯಾದಾಗಲೆಲ್ಲಾ ಸಿನಿಮಾರಂಗಕ್ಕೆ ಇನ್ನು ಹೆಚ್ಚಿನ ಮಟ್ಟದ ಒಳ್ಳೆಯ ಸಿನಿಮಾಗಳನ್ನು ಕೊಡುವ ಯೋಚನೆಗಳನ್ನೇ ಹಂಚಿಕೊಳ್ಳುತ್ತಿದ್ದರು. ಅಂತಹ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ" ಎಂದು ತೀವ್ರ ಕಂಬನಿ ಮಿಡಿದರು. "ನಾವು ಕೆಲವೇ ಕೆಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದರೂ, ಸಿಕ್ಕಾಗಲೆಲ್ಲಾ ಸಿನಿಮಾರಂಗವನ್ನು ಇನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯುವ ಬಗ್ಗೆ, ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುವ ಬಗ್ಗೆಯೇ ಚರ್ಚಿಸುತ್ತಿದ್ದರು. ಅಂತಹ ಉನ್ನತ ಯೋಚನೆಗಳಿದ್ದ ಒಳ್ಳೆಯ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ" ಎಂದು ಪ್ರಮೋದ್ ಶೆಟ್ಟಿ ವಿಷಾದಿಸಿದರು. ‘ಬೆಂಟ್ಲಿ’ ಚಿತ್ರಕ್ಕೆ ಜೂಡಾ ಸ್ಯಾಂಡಿ ಹಾಡುಗಳನ್ನು ಸಂಯೋಜಿಸಿದ್ದರೆ, ರವಿ ವರ್ಮ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಕೆ.ಕೆ. ಹಾಗೂ ಗುಂಡ್ಲುಪೇಟೆ ಸುರೇಶ್ ಜಂಟಿಯಾಗಿ ಛಾಯಾಗ್ರಹಣ ನಿರ್ವಹಿಸಿದ್ದು, ಉಮೇಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಇನ್ನು ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ಝಂಕರ್ ಮ್ಯೂಸಿಕ್ ಸಂಸ್ಥೆ ಪಡೆದುಕೊಂಡಿದೆ. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
520 ವೀಕ್ಷಿಸಿದ್ದಾರೆ
15 ಗಂಟೆಗಳ ಹಿಂದೆ
ಧೀರನ್ ರಾಮ್‌ಕುಮಾರ್ ಅಭಿನಯದ 'ಪಬ್ಬಾರ್' ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ ​ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಧೀರನ್ ರಾಮ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಪಬ್ಬಾರ್' ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 'ಶಾಖಾಹಾರಿ' ಚಿತ್ರದ ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದ ನಿರ್ದೇಶಕ ಸಂದೀಪ್ ಸುಂಕದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, 'ಗೀತಾ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಮಡಿಕೇರಿಯ ರಮಣೀಯ ತಾಣಗಳು ಹಾಗೂ ಹಿಮಾಚಲ ಪ್ರದೇಶದ ಮನಮೋಹಕ ವಾತಾವರಣದಲ್ಲಿ ಈ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ. ​ಈ ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್ ಅವರು ಹಿಂದೆಂದೂ ಕಾಣಿಸಿಕೊಂಡಿರದ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಅವರ ಅಭಿನಯದ ಹೊಸ ಮಗ್ಗುಲನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ನಾಯಕಿಯಾಗಿ 'ನೆನಪಿರಲಿ' ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಅಭಿನಯಿಸಿದ್ದು, ಧೀರನ್ ಹಾಗೂ ಅಮೃತಾ ಜೋಡಿ ತೆರೆಯ ಮೇಲೆ ಹೊಸ ಅಲೆ ಮೂಡಿಸುವ ನಿರೀಕ್ಷೆಯಿದೆ. ಇದರೊಂದಿಗೆ ಕೆ.ಜಿ.ಎಫ್ ಖ್ಯಾತಿಯ ಅಯ್ಯಪ್ಪ ಶರ್ಮ, ಅಚ್ಯುತ್ ಕುಮಾರ್ & ಗೋಪಾಲಕೃಷ್ಣ ದೇಶಪಾಂಡೆ ಅವರಂತಹ ಅನುಭವಿ ಕಲಾವಿದರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಿಮಾಚಲದ ಪಬ್ಬಾರ್ ಕಣಿವೆಯ ಹಿನ್ನೆಲೆಯಲ್ಲಿ ಸಾಗುವ ರೋಚಕ ಅಡ್ವೆಂಚರಸ್ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಅವರ ಸಂಗೀತ ಹಾಗೂ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ ಬಲ ತುಂಬಿದೆ. ​ಸದ್ಯ ಚಿತ್ರೀಕರಣದ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ 'ಪಬ್ಬಾರ್' ಸಿನಿಮಾ ತಂಡವು ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದೆ. ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಕೆರಳಿಸಿರುವ ಈ ಚಿತ್ರದ ಕ್ಯಾರೆಕ್ಟರ್ ಟೀಸರ್, ನಿರೀಕ್ಷೆಯನ್ನು ಡಬಲ್ ಮಾಡಿದೆ. ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಅದ್ದೂರಿಯಾಗಿ ಘೋಷಿಸಲಿದೆ. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
1.6K ವೀಕ್ಷಿಸಿದ್ದಾರೆ
15 ಗಂಟೆಗಳ ಹಿಂದೆ
*'ಝೀ 5' ನಲ್ಲಿ ಆಗಸ್ಟ್ 7 ರಿಂದಲೇ ಸ್ಟ್ರೀಮಿಂಗ್‌ ಆರಂಭಿಸಿದ 'ಅಯ್ಯಗಾರು' ಅಖಿಲ್ ಅಕ್ಕಿನೇನಿ ಅಭಿನಯದ 'ಲೆನಿನ್'; ಕನ್ನಡದಲ್ಲೂ ನೋಡಬಹುದು!* ಅಖಿಲ್ ಅಕ್ಕಿನೇನಿ ಅವರ ವೃತ್ತಿಜೀವನದ ಅತಿ ದೊಡ್ಡ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ 'ಲೆನಿನ್' ಸಿನಿಮಾ ಈಗ ಡಿಜಿಟಲ್ ಪ್ರಸಾರಕ್ಕೆ ಸಿದ್ಧವಾಗಿದೆ. ಈ ಆಕ್ಷನ್ ಭರಿತ ಗ್ರಾಮೀಣ ಮನರಂಜನಾ ಚಿತ್ರವು ಆಗಸ್ಟ್ 7 ರಿಂದ 'ಝೀ 5' ಆಪ್‌ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮಿಂಗ್ ಆರಂಭಿಸಿದ್ದು, ಕನ್ನಡದಲ್ಲೂ ಲಭ್ಯವಿದೆ. ಇದರೊಂದಿಗೆ ತೆಲುಗು ಚಿತ್ರರಂಗದ ಈ ವರ್ಷದ ಬಹುದೊಡ್ಡ ಯಶಸ್ವಿ ಚಿತ್ರವನ್ನು ಪ್ರೇಕ್ಷಕರು ತಮ್ಮ ಮನೆಗಳಲ್ಲೇ ಕುಳಿತು ಸವಿಯುವ ಅವಕಾಶ ಸಿಕ್ಕಂತಾಗಿದೆ. ಮುರಳಿ ಕಿಶೋರ್ ಅಬ್ಬೂರು ನಿರ್ದೇಶನದ 'ಲೆನಿನ್' ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ಅವರ ಜೊತೆಗೆ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಶಿವಾಜಿ, ಸುನಿಲ್, ಈಶ್ವರಿ ರಾವ್, ಬ್ರಹ್ಮಾಜಿ, ಗೆಟಪ್ ಶ್ರೀನು, ರಾಮ್‌ಕಿ ಸೇರಿದಂತೆ ಹಲವು ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ನಟ ಪ್ರಮೋದ್ ಪಂಜು ಈ ಸಿನಿಮಾದ ದೊಡ್ಡ ಹೈಲೈಟ್‌. 'ಮನಂ ಎಂಟರ್‌ಟೈನ್‌ಮೆಂಟ್ಸ್' ಮತ್ತು 'ಸಿತಾರಾ ಎಂಟರ್‌ಟೈನ್‌ಮೆಂಟ್ಸ್' ಬ್ಯಾನರ್‌ಗಳ ಅಡಿಯಲ್ಲಿ ನಾಗಾರ್ಜುನ ಅಕ್ಕಿನೇನಿ ಹಾಗೂ ಸೂರ್ಯದೇವರ ನಾಗವಂಶಿ ಈ ಚಿತ್ರವನ್ನು ನಿರ್ಮಿಸಿದ್ದು, ತಮನ್ ಎಸ್. ಸಂಗೀತ, ಲಿಯೋನ್ ಬ್ರಿಟ್ಟೋ ಛಾಯಾಗ್ರಹಣ ಮತ್ತು ನವೀನ್ ನೂಲಿ ಸಂಕಲನ ನಿರ್ವಹಿಸಿದ್ದಾರೆ. ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶದ ಹಿನ್ನೆಲೆಯಲ್ಲಿ ಸಾಗುವ 'ಲೆನಿನ್', ಅನ್ಯಾಯದ ವಿರುದ್ಧ ಹೋರಾಡುವ ಧೈರ್ಯವಂತ ಯುವಕನೊಬ್ಬನ ಕಥೆಯನ್ನು ಹೇಳುತ್ತದೆ. ಭಾವನಾತ್ಮಕ ಪ್ರೇಮಕಥೆಯಾಗಿ ಪ್ರಾರಂಭವಾಗುವ ಈ ಚಿತ್ರವು ಕ್ರಮೇಣ ಕುಟುಂಬದ ಬಾಂಧವ್ಯ, ಅಧಿಕಾರದ ಸಂಘರ್ಷ ಮತ್ತು ತನ್ನ ಜನರನ್ನು ರಕ್ಷಿಸುವ ದೃಢ ಸಂಕಲ್ಪದ ತೀವ್ರ ಹೋರಾಟವಾಗಿ ಮಾರ್ಪಡುತ್ತದೆ. ಆಕ್ಷನ್, ಎಮೋಷನ್, ರೊಮ್ಯಾನ್ಸ್, ಹಾಸ್ಯ ಮತ್ತು ಉತ್ತಮ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾ ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ರಂಜಿಸುತ್ತದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ತಕ್ಷಣವೇ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅಖಿಲ್ ಅಕ್ಕಿನೇನಿ ಅವರ ನಟನೆ, ಮುರಳಿ ಕಿಶೋರ್ ಅಬ್ಬೂರು ಅವರ ಹಿನ್ನೆಲೆ ಕಥೆ, ತಮನ್ ಎಸ್. ಅವರ ಶಕ್ತಿಯುತ ಹಿನ್ನೆಲೆ ಸಂಗೀತ ಮತ್ತು ಭಾವನಾತ್ಮಕ ನಿರೂಪಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಮಾಸ್ ಎಲಿವೇಶನ್‌ಗಳು, ರೋಮಾಂಚಕ ಆಕ್ಷನ್ ದೃಶ್ಯಗಳು ಮತ್ತು ಹೃದಯಸ್ಪರ್ಶಿ ಕ್ಷಣಗಳಿಂದ ಕೂಡಿದ 'ಲೆನಿನ್' ಅಖಿಲ್ ಅವರ ವೃತ್ತಿಜೀವನದ ಗರಿಷ್ಠ ಗಳಿಕೆಯ ಚಿತ್ರವಾಗಿ ಹೊರಹೊಮ್ಮಿದೆ. ಬ್ಲಾಕ್‌ಬಸ್ಟರ್ ಸಿನಿಮಾಗಳು, ಒರಿಜಿನಲ್‌ ವೆಬ್‌ ಸರಣಿಗಳು ಮತ್ತು ಪ್ರಾದೇಶಿಕ ಮನರಂಜನೆಯ ಬೃಹತ್ ಸಂಗ್ರಹವನ್ನು ಹೊಂದಿರುವ 'ಝೀ 5', ವಿವಿಧ ಭಾಷೆಗಳ ಪ್ರೀಮಿಯಂ ಕಂಟೆಂಟ್ ನೀಡುವಲ್ಲಿ ಮುಂಚೂಣಿಯಲ್ಲಿದೆ. 'ಲೆನಿನ್' ಚಿತ್ರವು ಕನ್ನಡ ಭಾಷೆಯಲ್ಲೂ ಲಭ್ಯವಿರುವುದು 'ಝೀ 5' ಕಂಟೆಂಟ್ ಶ್ರೇಣಿಯನ್ನು ಇನ್ನಷ್ಟು ಸಮೃದ್ಧಗೊಳಿಸಿದ್ದು, ಕನ್ನಡ ಪ್ರೇಕ್ಷಕರಿಗೆ ಮತ್ತೊಂದು ಬ್ಲಾಕ್‌ಬಸ್ಟರ್ ಚಿತ್ರವನ್ನು ವೀಕ್ಷಿಸುವ ಅವಕಾಶವನ್ನು ಒದಗಿಸಿದೆ. ಆಗಸ್ಟ್ 7 ರಿಂದ 'ಝೀ 5' ನಲ್ಲಿ ಪ್ರಸಾರವಾಗುತ್ತಿರುವ 'ಲೆನಿನ್' ಚಿತ್ರವನ್ನು ತಪ್ಪದೇ ವೀಕ್ಷಿಸಿ. ಇದು ಕನ್ನಡದಲ್ಲೂ ಲಭ್ಯವಿದೆ. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
708 ವೀಕ್ಷಿಸಿದ್ದಾರೆ
15 ಗಂಟೆಗಳ ಹಿಂದೆ
*ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ 'ಸ್ಲಮ್ ಡಾಗ್' ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧಿಕಾರಿ 'ಗೌರಿ ಹೆಗ್ಡೆ' ಪಾತ್ರದಲ್ಲಿ ಟಬು!* ನಿರ್ದೇಶಕ ಪೂರಿ ಜಗನ್ನಾಥ್ ಮತ್ತು ನಟ ವಿಜಯ್ ಸೇತುಪತಿ ಪ್ರಥಮ ಬಾರಿಗೆ ಒಂದಾಗುತ್ತಿರುವ ಪ್ಯಾನ್-ಇಂಡಿಯಾ ಆಕ್ಷನ್ ಡ್ರಾಮಾ 'ಸ್ಲಮ್ ಡಾಗ್: 33 ಟೆಂಪಲ್ ರೋಡ್' ಸಿನಿಮಾವು ಭರ್ಜರಿ ಆಕ್ಷನ್ ಮತ್ತು ನಿಗೂಢತೆಯ ಮಿಶ್ರಣವನ್ನು ನೀಡುವ ಭರವಸೆ ಮೂಡಿಸಿದೆ. ಇತ್ತೀಚೆಗಷ್ಟೇ ಗೌರಿ ಹೆಗ್ಡೆ ಪಾತ್ರದಲ್ಲಿ ಟಬು ಅವರ ಫಸ್ಟ್ ಲುಕ್ ಅನಾವರಣಗೊಳಿಸಿದ್ದ ಚಿತ್ರತಂಡ, ಈಗ ಅವರ ಶಕ್ತಿಶಾಲಿ ಪಾತ್ರದ ಪರಿಚಯ ನೀಡುವ ಒಂದು ಪವರ್‌ಫುಲ್ ಗ್ಲಿಂಪ್ಸ್ ಬಿಡುಗಡೆ ಮಾಡಿದೆ. ನಗರದ ಕೊಳಚೆ ಪ್ರದೇಶಗಳ (ಸ್ಲಮ್) ಹಿನ್ನೆಲೆಯಲ್ಲಿ ಸಾಗುವ ಈ ಗ್ಲಿಂಪ್ಸ್, ಮೊದಲಿಗೆ ಸಿನಿಮಾದ ಕಚ್ಚಾ ಮತ್ತು ನೈಜ ಜಗತ್ತನ್ನು ಪರಿಚಯಿಸುತ್ತದೆ. ತದನಂತರ ಟಬು ಅವರ ಎಂಟ್ರಿಯನ್ನು ಅತ್ಯಂತ ಆಕರ್ಷಕವಾಗಿ ತೋರಿಸಲಾಗಿದೆ. ಕಾರಿನಲ್ಲಿ ಆಗಮಿಸುವ ಅವರು, ಸಿಗರೇಟ್ ಒಂದನ್ನು ಹಚ್ಚಿಕೊಂಡು ತಕ್ಷಣವೇ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಸ್ಥಳೀಯ ಗೂಂಡಾಗೆ ನೀಡುವ ಖಡಕ್ ಎಚ್ಚರಿಕೆ ಮತ್ತು ಆನಂತರ ನೀಡುವ ಒಂದು ಕಪಾಳಮೋಕ್ಷ, ಗೌರಿ ಹೆಗ್ಡೆ ಅಧಿಕಾರವನ್ನು ಕೇಳಿ ಪಡೆಯುವವಳಲ್ಲ, ಬದಲಾಗಿ ಅಧಿಕಾರವನ್ನು ತಾನೇ ಚಲಾಯಿಸುವ ಮಹಿಳೆ ಎಂಬುದನ್ನು ತೋರಿಸುತ್ತದೆ. ಈ ಪಾತ್ರವನ್ನು ಕೇವಲ ಒಬ್ಬ ಶಕ್ತಿಶಾಲಿ ಅಧಿಕಾರಿಯಾಗಿ ಮಾತ್ರವಲ್ಲದೆ, ಸಂಪೂರ್ಣವಾಗಿ ಭಯವಿಲ್ಲದ ಮತ್ತು ಯಾವುದೇ ರಾಜಿ ಮಾಡಿಕೊಳ್ಳದ ವ್ಯಕ್ತಿಯಾಗಿ ತೋರಿಸಲಾಗಿದೆ. ಗೌರಿ ಹೆಗ್ಡೆ ಬೀದಿಗಳ ಮಧ್ಯದಲ್ಲೇ ಗೂಂಡಾಗಳನ್ನು ಎದುರಿಸುತ್ತಾಳೆ; ಅವರೊಂದಿಗೆ ಕಾದಾಡುತ್ತಾ ಲಾಠಿ ಬೀಸಿ ಪರಿಸ್ಥಿತಿಯನ್ನು ಹತೋಟಿಗೆ ತರುತ್ತಾಳೆ. ಸುತ್ತಲೂ ಪೊಲೀಸರು ಮತ್ತು ಜನರ ಗುಂಪೇ ಇದ್ದರೂ, ಅವಳು ಧೃತಿಗೆಡದೆ ತಮ್ಮ ಅಧಿಕಾರಕ್ಕೆ ಸವಾಲು ಹಾಕುವವರನ್ನು ಆಕ್ರಮಣಕಾರಿಯಾಗಿ ಹತೋಟಿಗೆ ತರುತ್ತಾಳೆ. ಗ್ಲಿಂಪ್ಸ್ ಉದ್ದಕ್ಕೂ ಮೂಡಿಬರುವ ಪದಗಳಾದ- 'ಒನ್ ಫಿಯರ್‌ಲೆಸ್ ವುಮನ್' (ಒಬ್ಬ ಭಯವಿಲ್ಲದ ಮಹಿಳೆ), 'ಪವರ್‌ಫುಲ್ ಆಫೀಸರ್' (ಶಕ್ತಿಶಾಲಿ ಅಧಿಕಾರಿ), 'ರೂತ್‌ಲೆಸ್' (ಕ್ರೂರಿ), 'ಮರ್ಸಿಲೆಸ್' (ದಯೆಯಿಲ್ಲದವಳು) ಮತ್ತು 'ಡೆವಿಲ್ ಇನ್ ದಿ ಡಿಪಾರ್ಟ್‌ಮೆಂಟ್' (ಇಲಾಖೆಯ ರಾಕ್ಷಸಿ) - ಅವರ ಪಾತ್ರದ ಸ್ವರೂಪದ ಬಗ್ಗೆ ಸ್ಪಷ್ಟ ಸುಳಿವು ನೀಡುತ್ತವೆ. ಗ್ಲಿಂಪ್ಸ್‌ನ ಕೊನೆಯಲ್ಲಿ ಅವರು ಸಂಪೂರ್ಣ ಅಧಿಕಾರದಿಂದ ತಮ್ಮನ್ನು ಪರಿಚಯಿಸಿಕೊಳ್ಳುವ ಸೀನ್ ಪ್ರಮುಖ ಹೈಲೈಟ್ ಆಗಿದೆ. "ಗೌರಿ ಹೆಗ್ಡೆ, ಡೆಪ್ಯುಟಿ ಕಮಿಷನರ್, ಆದಾಯ ತೆರಿಗೆ ಇಲಾಖೆ" - ಈ ಪರಿಚಯವು ಪೂರಿ ಜಗನ್ನಾಥ್ ಅವರ ಸಿನಿಮಾಗಳ ಶೈಲಿಯ ಪಕ್ಕಾ ಮಾಸ್ ಮತ್ತು ಪಂಚ್‌ನಿಂದ ಕೂಡಿದೆ. ಈ ಗ್ಲಿಂಪ್ಸ್‌ನಲ್ಲಿ ವಿಜಯ್ ಸೇತುಪತಿ ಅವರ ಕೆಲವು ದೃಶ್ಯಗಳೂ ಇವೆ. ಟಬು ಅವರು ತಮ್ಮ ಸ್ಕ್ರೀನ್ ಪ್ರೆಸೆಂಟ್ ಮೂಲಕ ಈ ಪಾತ್ರಕ್ಕೆ ಸಂಪೂರ್ಣ ಜೀವ ತುಂಬಿದ್ದು, ಅತ್ಯಂತ ಗಂಭೀರವಾಗಿ ಮತ್ತು ಪ್ರಭಾವಶಾಲಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಗೌರಿ ಹೆಗ್ಡೆ ಪಾತ್ರಕ್ಕೆ ವಿಶಿಷ್ಟವಾದ ಅಧಿಕಾರ ಮತ್ತು ಭಯ ಹುಟ್ಟಿಸುವ ಗಾಂಭೀರ್ಯವನ್ನು ತಂದಿದ್ದು, ಪಾತ್ರದ ಮೇಲಿನ ಕುತೂಹಲವನ್ನು ತಕ್ಷಣವೇ ಹೆಚ್ಚಿಸುತ್ತಾರೆ. ಸ್ಮರಣೀಯ ಪಾತ್ರಗಳನ್ನು ವಿನ್ಯಾಸಗೊಳಿಸುವುದು ಮತ್ತು ಅವುಗಳನ್ನು ಪ್ರಭಾವಶಾಲಿಯಾಗಿ ಪರಿಚಯಿಸುವುದರಲ್ಲಿ ಪೂರಿ ಜಗನ್ನಾಥ್ ಅವರಿಗೆ ಯಾವಾಗಲೂ ವಿಶೇಷ ಕೌಶಲವಿದ್ದು, ಗೌರಿ ಹೆಗ್ಡೆ ಪಾತ್ರವು ಮತ್ತೊಂದು ಕುತೂಹಲಕಾರಿ ಸೇರ್ಪಡೆಯಂತೆ ಕಾಣುತ್ತಿದೆ. ಚಿತ್ರದಲ್ಲಿ ಸಂಯುಕ್ತಾ ನಾಯಕಿಯಾಗಿದ್ದು, ದುನಿಯಾ ವಿಜಯ್ ನೆಗಟಿವ್ ಪಾತ್ರದಲ್ಲಿದ್ದಾರೆ. ಬ್ರಹ್ಮಾಜಿ ಮತ್ತು ವಿಟಿವಿ ಗಣೇಶ್ ಕೂಡ ಪ್ರಮುಖ ತಾರಾಗಣದ ಭಾಗವಾಗಿದ್ದಾರೆ. ಸ್ಯಾಮ್ ಕೆ. ನಾಯ್ಡು ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಹರ್ಷವರ್ಧನ್ ರಾಮೇಶ್ವರ್ ಸಂಗೀತ ಸಂಯೋಜಿಸುತ್ತಿದ್ದಾರೆ ಮತ್ತು ಸಂತೋಷ್ ನೂಜಿಲ್ಲ ಸಂಕಲನದ (ಎಡಿಟಿಂಗ್) ಹೊಣೆ ಹೊತ್ತಿದ್ದಾರೆ. 'ಸ್ಲಮ್ ಡಾಗ್: 33 ಟೆಂಪಲ್ ರೋಡ್' ಚಿತ್ರವನ್ನು ಪೂರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಅವರು, ಜೆಬಿ ಮೋಷನ್ ಪಿಕ್ಚರ್ಸ್‌ನ ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲಾ ಅವರ ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ. ಶೀರ್ಷಿಕೆ ಘೋಷಣೆ, ಫಸ್ಟ್ ಲುಕ್ ಪೋಸ್ಟರ್, ಟೀಸರ್ ಮತ್ತು ಈಗ ಬಿಡುಗಡೆಯಾಗಿರುವ ಈ ಅದ್ಭುತ ಗ್ಲಿಂಪ್ಸ್ ಮೂಲಕ ಚಿತ್ರವು ನಿರಂತರವಾಗಿ ನಿರೀಕ್ಷೆಯನ್ನು ಹೆಚ್ಚಿಸುತ್ತಿದ್ದು, ಪಾತ್ರಗಳು ಮತ್ತು ಅವುಗಳ ಜಗತ್ತಿನ ಸುತ್ತಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಸಿನಿಮಾವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
563 ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ
ಬಾಕ್ಸ್ ಆಫೀಸ್‌ನಲ್ಲಿ ದಳಪತಿ ವಿಜಯ್ 'ಜನ ನಾಯಗನ್' ಅಬ್ಬರ: ₹250 ಕೋಟಿಗೂ ಹೆಚ್ಚು ಕಲೆಕ್ಷನ್! ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ಪೂರ್ಣಪ್ರಮಾಣದ ರಾಜಕೀಯಕ್ಕೆ ಧುಮುಕಿರುವ ತಮಿಳುನಾಡಿನ ನೂತನ ಮುಖ್ಯಮಂತ್ರಿ, 'ದಳಪತಿ' ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕನ್ನಡಿಗರ ಹೆಮ್ಮೆಯ ನಿರ್ಮಾಣ ಸಂಸ್ಥೆ 'ಕೆವಿಎನ್ ಪ್ರೊಡಕ್ಷನ್ಸ್'ನ ನಿರ್ಮಾಪಕ ವೆಂಕಟ್‌ ಕೆ.‌ ನಾರಾಯಣ್ ಅವರು ಭಾರಿ ಬಜೆಟ್‌ನಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ಈ ಸಿನಿಮಾವು ಜುಲೈ 23 ರಂದು ಬಿಡುಗಡೆಯಾದ ಕ್ಷಣದಿಂದಲೇ ವಿಶ್ವದಾದ್ಯಂತ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ಚಿತ್ರವು ತೆರೆಕಂಡ ಕೇವಲ ಒಂದೇ ವಾರದಲ್ಲಿ ಜಾಗತಿಕವಾಗಿ ₹250 ಕೋಟಿಗೂ ಹೆಚ್ಚು (Gross) ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ್ ತಾನೇ ಎಂಬುದನ್ನು 'ದಳಪತಿ' ವಿಜಯ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ದಳಪತಿ ವಿಜಯ್ ಅವರ ಬೆಳ್ಳಿಪರದೆಯ ಕೊನೆಯ 'ಮೈಲಿಗಲ್ಲು' ತಮ್ಮ ದಶಕಗಳ ಬಣ್ಣದ ಪಯಣದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ವಿಜಯ್ ಅವರಿಗೆ 'ಜನ ನಾಯಗನ್' ಅತ್ಯಂತ ವಿಶೇಷ ಹಾಗೂ ಭಾವನಾತ್ಮಕ ಸಿನಿಮಾವಾಗಿದೆ. ಸಕ್ರಿಯ ರಾಜಕೀಯ ಪ್ರವೇಶಿಸುವ ಮುನ್ನ ಅವರು ಅಭಿನಯಿಸಿರುವ ಕೊನೆಯ ಚಿತ್ರ ಇದಾಗಿರುವುದರಿಂದ, ಪ್ರಪಂಚದಾದ್ಯಂತ ಇರುವ ಅವರ ಅಭಿಮಾನಿಗಳು ಹಬ್ಬದಂತೆ ಈ ಸಿನಿಮಾವನ್ನು ಸಂಭ್ರಮಿಸುತ್ತಿದ್ದಾರೆ. ಚಿತ್ರದಲ್ಲಿ ವಿಜಯ್ ಅವರ ಮಾಸ್ ನಟನೆ, ಖಡಕ್ ಮ್ಯಾನರಿಸಂ ಮತ್ತು ಜನನಾಯಕನಾಗಿ ಅವರ ಡೈಲಾಗ್‌ಗಳು ಥಿಯೇಟರ್‌ಗಳಲ್ಲಿ ಸೀಟಿ, ಚಪ್ಪಾಳೆಗಳ ಸುರಿಮಳೆಯನ್ನೇ ಹರಿಸುತ್ತಿವೆ. ಗಲ್ಲಾಪೆಟ್ಟಿಗೆಯಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ವಿಜಯಪತಾಕೆ ಕನ್ನಡ ಮೂಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್, ಈ ದೈತ್ಯ ಸಿನಿಮಾವನ್ನು ಅತ್ಯಂತ ಅದ್ದೂರಿ ವೆಚ್ಚದಲ್ಲಿ ನಿರ್ಮಿಸುವ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನ ಗಟ್ಟಿಯಾದ ಛಾಪನ್ನು ಮೂಡಿಸಿದೆ. ನಿರ್ಮಾಪಕ ವೆಂಕಟ್‌ ಕೆ.‌ ನಾರಾಯಣ್ ಅವರ ಯೋಜನೆ ಮತ್ತು ಮಾರುಕಟ್ಟೆ ತಂತ್ರಗಾರಿಕೆಯಿಂದಾಗಿ ಚಿತ್ರವು ಮೊದಲ ವಾರದಲ್ಲೇ ಶೇ.100 ರಷ್ಟು ಹೌಸ್‌ಫುಲ್ ಪ್ರದರ್ಶನ ಕಾಣುವಂತೆ ಮಾಡಿದೆ. ದಿಗ್ಗಜ ತಾರಾಗಣ ಹಾಗೂ ತಾಂತ್ರಿಕ ಮೆರುಗು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಸೃಷ್ಟಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದು, ಖಳನಾಯಕನಾಗಿ ಬಾಲಿವುಡ್ ನಟ ಬಾಬಿ ಡಿಯೋಲ್ ಘರ್ಜಿಸಿದ್ದಾರೆ. ಉಳಿದಂತೆ ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಮತ್ತು ನರೇನ್ ಮುಂತಾದ ದಕ್ಷಿಣ ಭಾರತದ ಘಟಾನುಘಟಿ ಕಲಾವಿದರ ತಾರಾಗಣವೇ ಈ ಚಿತ್ರದಲ್ಲಿದೆ. #movies #2026