2026

𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
1.1K views
13 days ago
ಜೂನ್ 26ಕ್ಕೆ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಬಿಡುಗಡೆ: ಭರವಸೆ ಮೂಡಿಸಿದ ಟ್ರೇಲರ್! ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ನಟ ಶೀಲಮ್, ಇದೀಗ ‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಸೈನ್ಸ್ ಫಿಕ್ಷನ್ ಕಥಾಹಂದರ ಹೊಂದಿರುವ ಈ ವಿಭಿನ್ನ ಲವ್ ಸ್ಟೋರಿ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಗಳಾದ ವಿನಯ್ ರಾಜ್‌ಕುಮಾರ್, ನವೀನ್ ಶಂಕರ್ ಹಾಗೂ ಖ್ಯಾತ ನಿರ್ಮಾಪಕ ಉದಯ್ ಮೆಹ್ತಾ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರವು ಇದೇ ಜೂನ್ 26ರಂದು ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಚಿತ್ರತಂಡದ ಮಾತುಗಳು: ನಾಯಕ ಶೀಲಂ: "ನಾನು ಜಗತ್ತಿನಲ್ಲೇ ಅತ್ಯಂತ ಅದೃಷ್ಟವಂತ ವ್ಯಕ್ತಿ. ಈ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಪ್ರದರ್ಶನದಲ್ಲಿ ನಮಗೆ ನೂರಕ್ಕೆ ನೂರರಷ್ಟು ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ನೀವೆಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ, ಖಂಡಿತಾ ನಿಮಗಿಷ್ಟವಾಗುತ್ತದೆ" ಎಂದು ಧೈರ್ಯವಾಗಿ ಹೇಳಿದರು. ನಟಿ ಮೋಕ್ಷಾ ಕುಶಾಲ್: "ಈ ಸಿನಿಮಾದಿಂದ ನಾನು ತುಂಬಾ ಕಲಿತಿದ್ದೇನೆ. ಚಿತ್ರದಲ್ಲಿ ನನ್ನದು 'ಸೌಪರ್ಣಿಕ' ಎಂಬ ಅತ್ಯಂತ ಮುಗ್ಧ ಮತ್ತು ಹಳ್ಳಿ ಹುಡುಗಿಯ ಪಾತ್ರ. ನೀವು ಟ್ರೇಲರ್‌ನಲ್ಲಿ ನೋಡಿರುವುದು ಕೇವಲ ಶೇ. 5ರಷ್ಟು ಮಾತ್ರ, ಸಿನಿಮಾದಲ್ಲಿ ಇನ್ನೂ ದೊಡ್ಡ ಕಥೆಯಿದೆ. ನಿರ್ದೇಶಕ ಸುನಿ ಸರ್ ಹಾಗೂ ಹಿರಿಯ ಸಿನಿಮಾಟೋಗ್ರಾಫರ್‌ಗಳ ಜೊತೆ ಕೆಲಸ ಮಾಡಿದ್ದು ನನ್ನ ಭಾಗ್ಯ" ಎಂದರು. ನಟಿ ಸಾತ್ವಿಕಾ: "ನನ್ನನ್ನು ನಂಬಿ ಈ ಪಾತ್ರ ನೀಡಿದ ಸುನಿ ಸರ್‌ಗೆ ಧನ್ಯವಾದಗಳು. ಸಿನಿಮಾ ಬಗ್ಗೆ ನಾನು ದೊಡ್ಡದಾಗಿ ಹೆಚ್ಚೇನೂ ಹೇಳಲ್ಲ, ಆದರೆ ಚಿತ್ರಮಂದಿರದಲ್ಲಿ ನೀವು ಕಳೆಯುವ ಎರಡು ಗಂಟೆ ಪಕ್ಕಾ 'ಪೈಸಾ ವಸೂಲ್' ಎಂಟರ್ಟೈನ್‌ಮೆಂಟ್ ಆಗಿರುತ್ತದೆ. ಶೀಲಂ ಅದ್ಭುತವಾಗಿ ನಟಿಸಿದ್ದಾರೆ, ಎಲ್ಲರೂ ಬೆಂಬಲಿಸಿ" ಎಂದು ಮನವಿ ಮಾಡಿದರು. ನಿರ್ದೇಶಕ ಸುನಿ: "ಶೀಲಂ ಈ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ನಾಯಕನಾಗಿ ನಿಲ್ಲುತ್ತಾರೆ. ನಾಯಕಿಯರಾದ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ಇಬ್ಬರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿಂಗಾಪುರದಲ್ಲೂ ನಮಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಖಂಡಿತಾ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ" ಎಂದು ಭರವಸೆ ವ್ಯಕ್ತಪಡಿಸಿದರು. ಬಲಿಷ್ಠ ತಾಂತ್ರಿಕ ತಂಡ ಇತ್ತೀಚೆಗೆ 'ಒಂದು ಸರಳ ಪ್ರೇಮಕಥೆ'ಯಂತಹ ಯಶಸ್ವಿ ಸಿನಿಮಾ ನೀಡಿದ್ದ 'ರಾಮ್ ಮೂವೀಸ್' ಬ್ಯಾನರ್ ಅಡಿಯಲ್ಲಿ ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಸ್ಟಾರ್ ತಂತ್ರಜ್ಞರಾದ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ಜೂಡಾ ಸ್ಯಾಂಡಿ ಅವರ ಮೆಲೋಡಿಯಸ್ ಸಂಗೀತ ಚಿತ್ರಕ್ಕಿದೆ. ವಿಭಿನ್ನ ಕಥೆಯ ಮೂಲಕ ಸದ್ದು ಮಾಡುತ್ತಿರುವ ‘ಮೋಡ ಕವಿದ ವಾತಾವರಣ’ ಚಿತ್ರ ಜೂನ್ 26ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
852 views
21 days ago
*'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್'ಗೆ ಮುಡಿಗೇರಿಸಿಕೊಂಡ ಕನ್ನಡ Zee5 ವೆಬ್ ಸರಣಿ ಅಯ್ಯನ ಮನೆ* *ಅಯ್ಯನ‌ ಮನೆ ವೆಬ್ ಸಿರೀಸ್ ಗೆ ದಕ್ಕಿದೆ 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್'* ಕನ್ನಡ ಮಣ್ಣಿನ ಕಥೆಗಳಿಗೆ ಮತ್ತು ಹೊಸ ಪ್ರತಿಭೆಗಳಿಗೆ ಕನ್ನಡ ZEE5 ಒಟಿಟಿ ವೇದಿಕೆ ನೀಡಿದೆ. ಅಯ್ಯನ ಮನೆ ವೆಬ್ ಸರಣಿಯಿಂದ ಶುರುವಾದ ಈ ಪಯಣದಲ್ಲಿ ಈಗಾಗಲೇ ಸಾಕಷ್ಟು ವೆಬ್ ಸೀರೀಸ್ ಗಳು ಕನ್ನಡ ಪ್ರೇಕ್ಷಕರನ್ನು ರಂಜಿಸಿವೆ. ಒಳ್ಳೊಳ್ಳೆ ಕಥೆಗಳನ್ನು ನೀಡುತ್ತಿರುವ ಕನ್ನಡ zee5 ಚೊಚ್ಚಲ ವೆಬ್ ಸರಣಿ ಅಯ್ಯನ ಮನೆ ಕನ್ನಡದ ಅತ್ಯುತ್ತಮ ವೆಬ್ ಸರಣಿ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಭಾರತೀಯ ಒಟಿಟಿ (OTT) ಮತ್ತು ಡಿಜಿಟಲ್ ಮನರಂಜನಾ ಕ್ಷೇತ್ರಕ್ಕೆ ನೀಡಲಾಗುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್'ಗೆ ಅಯ್ಯನ ಮನೆ ವೆಬ್ ಸರಣಿ ಭಾಜನವಾಗಿದೆ. ನಿನ್ನೆ ಮುಂಬೈನಲ್ಲಿ ಏಳನೇ ಆವೃತ್ತಿಯ 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್' ನಡೆಯಿತು. ಈ ಕಾರ್ಯಕ್ರಮದಲ್ಲಿ zee5 ಅಯ್ಯನ ಮನೆ ಅತ್ಯುತ್ತಮ ವೆಬ್ ಸಿರೀಸ್ ಅವಾರ್ಡ್‌ ಮುಡಿಗೇರಿಸಿಕೊಂಡಿತು. ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೇ ಅಯ್ಯನ‌ ಮನೆ. ಶ್ರುತಿ ನಾಯ್ಡು ನಿರ್ಮಾಣದಲ್ಲಿ ಮೂಡಿ ಬಂದಿದ್ದ ಈ ಸರಣಿಗೆ ರಮೇಶ್ ಇಂದಿರಾ ಆಕ್ಷನ್ ಕಟ್ ಹೇಳಿದ್ದರು. ದಿಯಾ ಚಿತ್ರದ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ಖುಷಿ ರವಿ ಜಾಜಿಯಾಗಿ ಅಭಿನಯಿಸಿದ್ದರು. ಮಾನಸಿ ಸುಧೀರ್ ನಾಗಲಂಬಿಕೆ ಪಾತ್ರಕ್ಕೆ ಜೀವ ತುಂಬಿದ್ದರು. ನಿರ್ದೇಶನದ ಜೊತೆಗೆ ರಮೇಶ್ ಇಂದಿರಾ ಕೂಡ ಪಾತ್ರವೊಂದನ್ನು ನಿಭಾಯಿಸಿದ್ದರು. 'e4m ಪ್ಲೇ ಸ್ಟ್ರೀಮಿಂಗ್ ಮೀಡಿಯಾ ಅವಾರ್ಡ್ಸ್' ಪಡೆದ ಸಂಭ್ರಮದಲ್ಲಿರುವ ಅಯ್ಯನ ಮನೆ ತಂಡ ಹಾಗೂ zee5 ಹೊಸ ಘೋಷಣೆಯೊಂದನ್ನು‌ ಮಾಡಿದೆ. ಅಯ್ಯನ ಮನೆ 2 ವೆಬ್ ಸರಣಿಯ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲೇ ಕನ್ನಡ zee5ನಲ್ಲಿ ವೀಕ್ಷಣೆ ಮಾಡಬಹುದು. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
898 views
21 days ago
*ಕೆವಿಎನ್ ನಿರ್ಮಾಣದ 'ಬಾಲನ್ ದಿ ಬಾಯ್' ಸಿನಿಮಾದಿಂದ ಬಂತು ಕೀಲಿ ಕೈ ಹಾಡು* ದಕ್ಷಿಣ ಭಾರತದ ಚಲನಚಿತ್ರ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ʻಕೆವಿಎನ್‌ ಪ್ರೊಡಕ್ಷನ್ಸ್‌ʼ ಮಲಯಾಳಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ʻಮಂಜುಮ್ಮೆಲ್‌ ಬಾಯ್ಸ್‌ʼ ಚಿತ್ರದ ನಿರ್ದೇಶಕ ಚಿದಂಬರಂ ಸಾರಥ್ಯದಲ್ಲಿ ಮೂಡಿ ಬರ್ತಿರುವ ಬಾಲನ್ ದಿ ಬಾಯ್ ಸಿನಿಮಾಗೆ ಕೆವಿಎನ್ ಹಣ ಹಾಕಿದೆ. ಇದೇ ತಿಂಗಳ 19ರಂದು ತೆರೆಗೆ ಎಂಟ್ರಿ ಕೊಡುತ್ತಿರುವ ಈ ಚಿತ್ರದ ಕೀಲಿ ಹಾಡು ಬಿಡುಗಡೆಯಾಗಿದೆ. ಕಳೆದು ಹೋದ ಕೀಲಿಯನ್ನು ಹುಡುಕುವ ಕಪ್ಪೆಯ ಸಂತೋಷಕ ಕಥೆಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ. ಈ ಹಾಡು ನಮ್ಮನ್ನು ಬಾಲ್ಯದ ದಿನಗಳಿಗೆ ಕರೆದುಕೊಂಡು ಹೋಗುತ್ತದೆ. ಈ ಗೀತೆಗೆ ಸುಶಿನ್ ಶ್ಯಾಮ್ ಸಂಗೀತ ಒದಗಿಸಿದ್ದು, ಅನ್ವರ್ ಅಲಿ ಸಾಹಿತ್ಯ ಬರೆದಿದ್ದು, ನೀಲಾ ರಾಜ್ ಧ್ವನಿಯಾಗಿದ್ದಾರೆ. ಓರ್ವ ಬಾಲಕನ ಸುತ್ತ ಸಾಗುವ ಕಥೆಗೆ ಸಸ್ಪೆನ್ಸ್, ಥ್ರಿಲ್ ಅಂಶಗಳನ್ನು ಬಾಲನ್ ದಿ ಬಾಯ್ ಸಿನಿಮಾದಲ್ಲಿ ಹೇಳಲಾಗಿದೆ. ಸಿನಿಮಾವನ್ನ ʻಕೆವಿಎನ್‌ʼ ನಿರ್ಮಾಣ ಸಂಸ್ಥೆಯ ವೆಂಕಟ್‌ ಕೆ ನಾರಾಯಣ್‌ ಹಾಗೂ ಶೈಲಜಾ ದೇಸಾಯಿ ಫೆನ್‌ ನಿರ್ಮಾಣ ಮಾಡಿದ್ದಾರೆ. ಚಿತ್ರವು ಮಲಯಾಳ, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಇದೇ ತಿಂಗಳ 19ರಂದು ತೆರೆಗೆ ಬರಲಿದೆ. 'ಆವೇಶಂ’ ನಿರ್ದೇಶಿಸಿದ್ದ ಜಿತು ಮಾಧವನ್‌ ‘ಬಾಲನ್‌’ ಕಥೆ ಬರೆದಿದ್ದಾರೆ #movie #2026 #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
1K views
29 days ago
*ಕೆವಿಎನ್ ನಿರ್ಮಾಣದ 'ಬಾಲನ್ ದಿ ಬಾಯ್' ಸಿನಿಮಾದ ಟ್ರೇಲರ್ ಬಿಡುಗಡೆ...ಕುತೂಹಲ ಹೆಚ್ಚಿಸಿದ 'ಮಂಜುಮ್ಮೆಲ್‌ ಬಾಯ್ಸ್‌’‌ ನಿರ್ದೇಶಕರ ಹೊಸ ಚಿತ್ರ* *ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ ಕೆವಿಎನ್ ನಿರ್ಮಾಣದ ಮಲಯಾಳಂನ 'ಬಾಲನ್ ದಿ ಬಾಯ್' ಸಿನಿಮಾ..* ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. ಬಹುಕೋಟಿ ವೆಚ್ಚದಲ್ಲಿ ದೊಡ್ಡ ದೊಡ್ಡ ಸ್ಟಾರ್ಟ್ ಗೆ ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಜೊತೆಯಲ್ಲಿ ಪ್ರತಿಭಾನ್ವಿತ ನಿರ್ದೇಶಕರಿಗೂ ಅವಕಾಶ ಕಲ್ಪಿಸುತ್ತಿದೆ. ಅದರ ಭಾಗವಾಗಿ 2024ರಲ್ಲಿ ತೆರೆಕಂಡ ಮಲಯಾಳದ ಹಿಟ್‌ ಸಿನಿಮಾ ‘ಮಂಜುಮ್ಮೆಲ್‌ ಬಾಯ್ಸ್‌’ನ ನಿರ್ದೇಶಕ ಚಿದಂಬರಂಗೆ ಕೆವಿಎನ್ ಅವಕಾಶ‌ ನೀಡಿದೆ. ಚಿದಂಬರಂ ನಿರ್ದೇಶನದ ‘ಬಾಲನ್‌ ದಿ ಬಾಯ್‌’ ಚಿತ್ರಕ್ಕೆ ಕೆವಿಎನ್ ಹಣ ಹಾಕಿದೆ. ಅಲ್ಲದೇ ಈ ಸಿನಿಮಾವನ್ನು ಅಂತರಾಷ್ಟ್ರೀಯ ವೇದಿಕೆಯಾದ ಕಾನ್ಸ್ ಚಲನಚಿತ್ರೋತ್ಸವಕ್ಕೆ ತೆಗೆದುಕೊಂಡು ಹೋಗಿದೆ. ಇತ್ತೀಚಿನ ಈ ಸಿನಿಮೋತ್ಸವದಲ್ಲಿ ಬಾಲನ್ ದಿ ಬಾಯ್ಸ್ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಇದರ ಬೆನ್ನಲ್ಲೇ ಚಿತ್ರತಂಡ ಕುತೂಹಲಕಾರಿ ಟ್ರೇಲರ್ ಬಿಡುಗಡೆ ಮಾಡಿದೆ. ಓರ್ವ ಬಾಲಕನ ಸುತ್ತ ಸಾಗುವ ಕಥೆಗೆ ಸಸ್ಪೆನ್ಸ್, ಥ್ರಿಲ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಸಿನಿಮಾವನ್ನು ಕೆವಿಎನ್‌ ನಿರ್ಮಾಣ ಸಂಸ್ಥೆಯ ವೆಂಕಟ್‌ ಕೆ.ನಾರಾಯಣ್‌ ಹಾಗೂ ಶೈಲಜಾ ದೇಸಾಯಿ ಫೆನ್‌ ನಿರ್ಮಾಣ ಮಾಡಿದ್ದಾರೆ. ಚಿತ್ರವು ಮಲಯಾಳ, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಇದೇ ತಿಂಗಳ 19ರಂದು ತೆರೆಗೆ ಬರಲಿದೆ. 'ಆವೇಶಂ’ ನಿರ್ದೇಶಿಸಿದ್ದ ಜಿತು ಮಾಧವನ್‌ ‘ಬಾಲನ್‌’ ಕಥೆ ಬರೆದಿದ್ದಾರೆ. #movies #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
1.8K views
1 months ago
*ಜೂನ್ 5ಕ್ಕೆ Zee5 ಕನ್ನಡದಲ್ಲಿ KD-ದಿ ಡೆವಿಲ್ ಸಿನಿಮಾ ಸ್ಟ್ರೀಮಿಂಗ್* *KD-ದಿ ಡೆವಿಲ್ ಒಟಿಟಿ ಎಂಟ್ರಿಗೆ ರೆಡಿ..ಎಲ್ಲಿ..ಯಾವಾಗ ಸ್ಟ್ರೀಮಿಂಗ್ ಆಗಲಿದೆ ಧ್ರುವ ಸಿನಿಮಾ* ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಪ್ರೇಮ್‌ ನಿರ್ದೇಶನದ KD-ದಿ ಡೆವಿಲ್ ಸಿನಿಮಾ ಒಟಿಟಿ ಎಂಟ್ರಿಗೆ ಸಜ್ಜಾಗಿದೆ. ಜೂನ್ 5ರಂದು zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಚಿತ್ರ ವೀಕ್ಷಣೆಗೆ ಲಭ್ಯವಿರಲಿದೆ. ಕೆಡಿ ಸಿನಿಮಾದಲ್ಲಿ ದೊಡ್ಡ ತಾರಾಬಳಗವಿದೆ. ಬಾಲಿವುಡ್‌ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಡಾ.ವಿ. ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ, ಜಿಶು ಸೇನ್‌ಗುಪ್ತಾ, ನೋರಾ ಫತೇಹಿ ಮತ್ತು ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ಅನೇಕರು ನಟಿಸಿದ್ದಾರೆ. 70ರ ದಶಕದ ಕಾಲಘಟ್ಟದ ಕಥೆಯನ್ನು ಕೆಡಿಯಲ್ಲಿ ಪ್ರೇಮ್ ಕಟ್ಟಿಕೊಟ್ಟಿದ್ದಾರೆ. ಅಣ್ಣ-ತಮ್ಮನ ಭಾವನಾತ್ಮಕ ಬಾಂಧವ್ಯ, ರಾಜಕೀಯ ಪೈಪೋಟಿ ಚಿತ್ರದಲ್ಲಿದೆ.ಅಣ್ಣನೇ ಸರ್ವಸ್ವ ಎಂದುಕೊಂಡು ಬದುಕುತ್ತಿರುವ ಕಾಳಿದಾಸ ಅಲಿಯಾಸ್ ಕೆಡಿ ಎಂಬಾತನ ಕಥೆ ಈ ಸಿನಿಮಾದಲ್ಲಿದೆ. ಧ್ರುವ ಸರ್ಜಾ ಅವರ ಪಾತ್ರದ ಸುತ್ತ ಆ ಕಾಲ ಘಟ್ಟದ ಕಥೆಗಳು ತೆರೆದುಕೊಳ್ಳುತ್ತಾ ಸಾಗುತ್ತೆ. ಇದರ ಜೊತೆಗೆ ಆಕ್ಷನ್‌ ಮತ್ತು ಎಮೋಷನ್‌ ಎರಡನ್ನು ಬ್ಲೆಂಡ್‌ ಮಾಡಿ, ವೀಕ್ಷಕರಿಗೆ ಭರ್ಜರಿ ಮನರಂಜನೆಯ ಭೋಜನ ಪ್ರೇಮ್‌ ಬಡಿಸಿದ್ದಾರೆ. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಮ್ಯೂಸಿಕ್‌, ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ. ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಕೆಡಿ ಸಿನಿಮಾ ನಿರ್ಮಾಣ ಮಾಡಿದೆ. #2026 #movies
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
1.1K views
1 months ago
*ಬೇಲ್ ಫಸ್ಟ್ ಲುಕ್ ರಿಲೀಸ್...ಸಾಲ್ಟ್ ಅಂಡ್‌ ಪೆಪ್ಪರ್ ಲುಕ್ ಶಿವಣ್ಣ..ವರಮಹಾಲಕ್ಷ್ಮಿ ಹಬ್ಬ ಸಿನಿಮಾ ರಿಲೀಸ್* *'ಬೇಲ್'ಗಾಗಿ ಹೊಸ ಅವತಾರ ತಾಳಿದ ಕರುನಾಡ ಚಕ್ರವರ್ತಿ... ಶಿವಣ್ಣ-ಕೆವಿಎನ್-ಪವನ್ ಒಡೆಯರ್ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ* ಕೆವಿಎನ್ ನಿರ್ಮಾಣ ಮಾಡುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಬೇಲ್. ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಕೊನೆಯ ಹಂತದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಇದೀಗ ಬೇಲ್ ಸಿನಿಮಾದ ಫಸ್ಟ್ ಲುಕ್ ನ್ನು‌ ಅನಾವರಣ ಮಾಡಿದೆ. ಬೇಲ್ ಸಿನಿಮಾದಲ್ಲಿ ಶಿವಣ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ದರ್ಶನ ಕೊಟ್ಟಿರುವ ಕರುನಾಡ ಚಕ್ರವರ್ತಿ, ವಿಜಿ ಎಂಬ ಪಾತ್ರವನ್ನು ಪ್ಲೇ ಮಾಡುತ್ತಿದ್ದಾರೆ. ಕೊಡೆ ಹಿಡಿದು ಸಾಕು ನಾಯಿಯ ಜೊತೆ ಶಿವಣ್ಣ ನಡೆದು ಬರುವ ಸ್ಟೈಲ್ ಸಖತ್ ಕಿಕ್ ಕೊಡ್ತಿದೆ. ಶಿವಣ್ಣ ಹಾಗೂ ಸಾಯಿ ಕುಮಾರ್ ಡೈಲಾಗ್ ಜುಗಲ್ ಬಂದಿಯಂತೂ ಸಿನಿಮಾ ಮೇಲಿನ ಥ್ರಿಲ್ ಹೆಚ್ಚು ಮಾಡಿದೆ. ರಾತ್ರಿ ಜೋರು ಮಳೆಯಲ್ಲಿ ಬೆಂಗಳೂರು ಚಿತ್ರಣ.. ನಿಧಾನವಾಗಿ ನಾಯಿಗೆ ಬಿಸ್ಕೆಟ್ ತಿನ್ನುಸುತ್ತಿರುವ ವಿಜಿ‌ ಪರಿಚಯ ಮಾಡಿಸುತ್ತಾರೆ. ಫೋನ್ ಕರೆ ಸ್ವೀಕರಿಸುವ ವಿಜಿಗೆ ಅತ್ತ ಕಡೆಯಿಂದ ಬಹುಪರಾಕ್ ಶುರುವಾಗುತ್ತದೆ. ನೀನು ಹಚ್ಚಿರುವ ಬೆಂಕಿ ಬರೀ ಊರನ್ನು ಅಲ್ಲ, ದೇಶವನ್ನು ಸುಡುತ್ತಿದೆ ಎಂದು ಅತ್ತ ಕಡೆಯಿಂದ ಧ್ವನಿ ಕೇಳುತ್ತದೆ. ಇದನ್ನೆಲ್ಲಾ ಮಾಡಿ ಹೇಗೆ ಸೈಲೆಂಟ್ ಇದ್ದೀಯಾ ಎಂದಾಗ "ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗ್ಲೂ ಆಗಲ್ಲ" ಎಂದು ಖಡಕ್ ಡೈಲಾಗ್ ಹೊಡೆದಿದ್ದಾರೆ ಶಿವಣ್ಣ. ಪವನ್ ಒಡೆಯರ್ ಸತ್ಯಘಟನೆಗಳನ್ನು ಆಧರಿಸಿ ಬೇಲ್ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಇನ್ನು, ಚಿತ್ರದಲ್ಲಿ ಅನುಭವಿ ತಾಂತ್ರಿಕ ವರ್ಗ ಕೆಲಸ ಮಾಡ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವೈದ್ಯ ಛಾಯಾಗ್ರಹಣ ಹಾಗೂ ಗುಣ ಪ್ರೊಡಕ್ಷನ್ ಡಿಸೈನ್ ಹಾಗೂ ಶಶಾಂಕ್ ನಾರಾಯಣ್ ಸಂಕಲನ ಬೇಲ್ ಗಿದೆ. ಸ್ಟಾರ್ ಹೀರೋಗಳಿಗೆ ವಿಭಿನ್ನ ಬಗೆಯ ಸಿನಿಮಾ ಮಾಡಿರುವ ಪವನ್ ಒಡೆಯರ್ ಈಗ ಶಿವಣ್ಣನಿಗೆ ಒಂದೊಳ್ಳೆ ಕಥೆ ಹೆಣೆದಿದ್ದಾರೆ. ಅದಕ್ಕೆ ಕೆವಿಎನ್ ಸಂಸ್ಥೆಯ ವೆಂಕಟ್ ನಾರಾಯಣ್ ಬಂಡವಾಳ ಹಾಕ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಲ್ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ. #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
1.1K views
1 months ago
*ಬಿ.ಅಜನೀಶ್ ಲೋಕನಾಥ್‌ ನೇತೃತ್ವದಲ್ಲಿ ಕನ್ನಡದ ಮೊದಲ ಲೈವ್ ಇನ್ ಕಾನ್ಸರ್ಟ್* *ಇದೇ ತಿಂಗಳ 16ರಂದು ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಕಾನ್ಸರ್ಟ್* ಕನ್ನಡದ ಸ್ಟಾರ್‌ ಸಂಗೀತ ನಿರ್ದೇಶಕರ ಪಟ್ಟಿಯಲ್ಲಿ ಪ್ರಮುಖರಾಗಿರುವ ಅಜನೀಶ್‌ ಲೋಕನಾಥ್‌. ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಖ್ಯಾತರಾಗಿ ‘ರಂಗಿತರಂಗ’, ‘ವಿಕ್ರಾಂತ್‌ ರೋಣ’, ‘ಕಿರಿಕ್‌ ಪಾರ್ಟಿ’, ‘ಅಕಿರ’, ‘ಅವನೇ ಶ್ರೀಮನ್ನಾರಾಯಣ’, ‘ಬೆಲ್‌ ಬಾಟಂ’, ‘ಕಾಂತಾರ’, ಮಾರ್ಕ್ ಸೇರಿದಂತೆ ಹಲವು ಸೂಪರ್‌ ಹಿಟ್‌ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾದವರು. ಕನ್ನಡ ಮಾತ್ರವಲ್ಲ ಪರಭಾಷೆಯಲ್ಲಿಯೂ ಬ್ಯುಸಿಯಾಗಿರುವ ಅಜನೀಶ್ ಲೋಕನಾಥ್ ಇದೀಗ ಕನ್ನಡದಲ್ಲಿ ಮ್ಯೂಸಿಕ್ ಕಾನ್ಸರ್ಟ್ ಹಮ್ಮಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ನೇತೃತ್ವದಲ್ಲಿ ಇದೇ ತಿಂಗಳ‌ 16ರಂದು ಕನ್ನಡದ ಮೊದಲ ಮ್ಯೂಸಿಕ್ ಕಾನ್ಸರ್ಟ್ ನಡೆಯುತ್ತಿದೆ. ಈ ಬಗ್ಗೆ ನಿನ್ನೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಸುದ್ದಿಗೋಷ್ಟಿಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಜನೀಶ್ ಲೋಕನಾಥ್, ಲಹರಿ ಮುಖ್ಯಸ್ಥ ವೇಲು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಬಿ.ಅಜನೀಶ್ ಲೋಕನಾಥ್, ಇಂಡಸ್ಟ್ರಿಯಲ್ ಕೆಲಸ ಶುರು ಮಾಡಿದ್ದು 2023ರಲ್ಲಿ. ಕೆ ಕಲ್ಯಾಣ್ ಸರ್ ಜೊತೆ ಸೆಷನ್ ಮ್ಯೂಸಿಷನ್ ಆಗಿ, ಆರೆಂಜರ್ ಆಗಿ ಕೆಲಸ ಮಾಡಿ, ತುಂಬಾ ಇಷ್ಟಪಟ್ಟು ಐದಾರು ವರ್ಷದ ಪ್ರಯತ್ನದ ಬಳಿಕ 2009ರಲ್ಲಿ ಮೊದಲ ಸಿನಿಮಾ ರಿಲೀಸ್ ಆಯ್ತು.‌ ಶಿಶಿರ ಸಿನಿಮಾದಿಂದ ಒಳ್ಳೆ ಹೆಸರು ಸಿಕ್ತು. ಉಳಿದವರು ಕಂಡಂತೆ ಸಿನಿಮಾ ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಈ 13 ವರ್ಷದಲ್ಲಿ ನನ್ನ ಫೋಕಸ್ ಇದಿದ್ದು ಒಳ್ಳೆ ಸಾಂಗ್ ಮಾಡಬೇಕು. ಅದು ಈಗ ಆಗಿದೆ. ಎಲ್ಲರೂ ಕಾನ್ಸರ್ಟ್ ಏಕೆ ಮಾಡೋಲ್ಲ ಎಂದು‌ ಕೇಳುತ್ತಿದ್ದರು. ACTC ಕಂಪನಿ ಕಡೆಯಿಂದ ಈಗ ಮ್ಯೂಸಿಕ್ ಕಾನ್ಸರ್ಟ್ ಮಾಡುತ್ತಿದ್ದೇವೆ. ಕಾನ್ಸರ್ಟ್ ಲೈವ್ ಇರೋಲ್ಲ. ಒಂದೊಂದು ಹಾಡಿಗೆ ಫರ್ಪಾಮೆನ್ಸ್, ವಿಷ್ಯುವಲ್ಸ್ ಇರುತ್ತದೆ. ಸಂಗೀತ ಮೇನ್ ಆಗಿ ಇರಲಿದೆ ಎಂದರು. *ಎಲ್ಲಿ ನಡೆಯಲಿದೆ? ಯಾರೆಲ್ಲಾ ಹಾಡಲಿದ್ದಾರೆ.?* ಬಿ. ಅಜನೀಶ್ ಲೋಕನಾಥ್ ಅವರ ಮ್ಯೂಸಿಕ್ ಕಾನ್ಸರ್ಟ್ ಬೆಂಗಳೂರಿನ ಭಾರತೀಯ ಮಾಲ್ ನಲ್ಲಿ ನಡೆಯಲಿದೆ. ಈ ಕನ್ಸರ್ಟ್ ನಲ್ಲಿ ವಿಜಯ್ ಪ್ರಕಾಶ್, ಮಂಗ್ಲಿ, ನಕಾಶ್ ಅಜೀಜ್, ಅನನ್ಯ ಭಟ್, ಸಾನ್ವಿ ಸುದೀಪ್, ಸಂಜಿತ್ ಹೆಗ್ಡೆ, ಹರಿಶಂಕರ್, ಅಬ್ಬಿ ವಿ, ವಾಸುಕಿ ವೈಭವ್, ಅನಿರುದ್ಧ್ ಶಾಸ್ತ್ರೀ, ಐಶ್ವರ್ಯ ರಂಗರಾಜನ್, ರಾಮ್‌ದಾಸ್, ಸಾಯಿ ವಿಘ್ನೇಶ್, ಹರಿಶಿಕಾ, ಬಾಬಿ ಸೇರಿದಂತೆ ಹಲವರು ಕಂಠ ಕುಣಿಸಲಿದ್ದಾರೆ‌. ಹೆಚ್ಚಿನ ಮಾಹಿತಿಗಾಗಿ ACTC events ಸೋಷಿಯಲ್ ಮೀಡಿಯಾ ಫಾಲೋ ಮಾಡಿ #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
5.4K views
2 months ago
Kiccha Sudeep Chief Guest for KD Press Meet Event ✨ ಕೆಡಿ ಪತ್ರಿಕಾ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿ ✨ #kiccha #sudeep #chief #guest #kdcinema #prem #dhruva #sarja #reeshma #nanaiah #sanjay #dutt #shilpa #shetty #ravichandran #ramesh #aravind #arjun #janya #nora #fatehi #1970s #bangalore #april-30-2026 #suprith #kd #cinema #kvn #productions #trailer #launch #event #punching #dialogue #kannadacinema #indianmovie #digitalmedia #suddhiprapancha #Kannada #youtubeshorts #viralshorts #shortsfeed #shorts #reels #vairal #video #bangalore #karnataka #india #Viralvideo #2026 #ಕಿಚ್ಚ #ಸುದೀಪ್ #ಮುಖ್ಯ #ಅತಿಥಿ #ಕೆಡಿಸಿನೆಮಾ #ಪ್ರೇಮ್ #ಧ್ರುವ #ಸರ್ಜಾ #ರೀಷ್ಮಾ #ನಾನಯ್ಯ #ಸಂಜಯ್ #ದತ್ #ಶಿಲ್ಪಾ #ಶೆಟ್ಟಿ #ರವಿಚಂದ್ರನ್ #ರಮೇಶ್ #ಅರವಿಂದ್ #ಅರ್ಜುನ್ #ಜನ್ಯ #ನೋರಾ #ಫತೇಹಿ #1970 ರ #ಬೆಂಗಳೂರು #ಏಪ್ರಿಲ್-30-2026 #ಸುಪ್ರಿತ್ #ಕೆಡಿ #ಸಿನಿಮಾ #ಕೆವಿಎನ್ #ಪ್ರೊಡಕ್ಷನ್ಸ್ #ಟ್ರೇಲರ್ #ಲಾಂಚ್ #ಈವೆಂಟ್ #ಪಂಚಿಂಗ್ #ಡೈಲಾಗ್ #ಕನ್ನಡ ಸಿನಿಮಾ #ಭಾರತೀಯ ಚಲನಚಿತ್ರ #ಡಿಜಿಟಲ್‌ಮೀಡಿಯಾ #ಸುದ್ಧಿಪ್ರಪಂಚ #ಕನ್ನಡ #ಯೂಟ್ಯೂಬ್‌ಶಾರ್ಟ್ಸ್ #ಶಾರ್ಟ್‌ಫೀಡ್ #ವೈರಲ್‌ಶಾರ್ಟ್ಸ್ #ಶಾರ್ಟ್ಸ್ #ರೀಲ್ಸ್ #ವೈರಲ್ #ವೀಡಿಯೋ #ಬೆಂಗಳೂರು #ಕರ್ನಾಟಕ #ಭಾರತ #ವೈರಲ್ವೀಡಿಯೋ #2026 ABOUT US 🙏 @DIGITAL MEDIA SUDDHI PRAPANCHA KANNADA ENTRTANMENT & NEWS ✨🌎🇮🇳📡📺🎬🎥🎙️⚽🥅☺️✨ KINDLY FOLLOW & LIKE US ON SOCIAL MEDIA PLATFORMS Subscribe our channel for the latest news updates : https://youtube.com/@digital.media.suddhi.prapancha #2026 Disclaime ~ digitalmedia suddhiprapancha is committed to remaining unbiased and focused on serving the public. As a news channel, our primary goal is to deliver news that informs and engages our audience. The content presented on digitalmedia suddhiprapancha is intended for entertainment and educational purposes only. Occasionally, we may incorporate content from other creators solely for educational and informational use under fair use policy guidelines. Our intentions are transparent and are never meant to harm anyone's beliefs or values ☺️🙏 ಹಕ್ಕು ನಿರಾಕರಣೆ ~ ಡಿಜಿಟಲ್ ಮೀಡಿಯಾ ಸುದ್ಧಿಪ್ರಪಂಚವು ಪಕ್ಷಪಾತವಿಲ್ಲದೆ ಉಳಿಯಲು ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುವತ್ತ ಗಮನಹರಿಸುತ್ತದೆ. ಸುದ್ದಿ ವಾಹಿನಿಯಾಗಿ, ನಮ್ಮ ಪ್ರಾಥಮಿಕ ಗುರಿ ಪ್ರೇಕ್ಷಕರಿಗೆ ಮಾಹಿತಿ ನೀಡುವ ಮತ್ತು ತೊಡಗಿಸಿಕೊಳ್ಳುವ ಸುದ್ದಿಗಳನ್ನು ತಲುಪಿಸುವುದು. ಡಿಜಿಟಲ್ ಮೀಡಿಯಾ ಸುದ್ಧಿಪ್ರಪಂಚದಲ್ಲಿ ಪ್ರಸ್ತುತಪಡಿಸಲಾದ ವಿಷಯವು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲಾಗಿದೆ. ಸಾಂದರ್ಭಿಕವಾಗಿ, ನ್ಯಾಯಯುತ ಬಳಕೆಯ ನೀತಿ ಮಾರ್ಗಸೂಚಿಗಳ ಅಡಿಯಲ್ಲಿ ಶೈಕ್ಷಣಿಕ ಮತ್ತು ಮಾಹಿತಿ ಬಳಕೆಗಾಗಿ ಮಾತ್ರ ನಾವು ಇತರ ಸೃಷ್ಟಿಕರ್ತರಿಂದ ವಿಷಯವನ್ನು ಸೇರಿಸಿಕೊಳ್ಳಬಹುದು. ನಮ್ಮ ಉದ್ದೇಶಗಳು ಪಾರದರ್ಶಕವಾಗಿರುತ್ತವೆ ಮತ್ತು ಯಾರ ನಂಬಿಕೆಗಳು ಅಥವಾ ಮೌಲ್ಯಗಳಿಗೆ ಎಂದಿಗೂ ಹಾನಿ ಮಾಡುವ ಉದ್ದೇಶವನ್ನು ಹೊಂದಿಲ್ಲ ☺️🙏 🔔 Subscribe Our YouTube Channel : @ Digital Media Suddhiprapancha Kannada #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
13.4K views
2 months ago
Sachin Tendulkar Cricketer and Former Member of Rajya Sabha ✨ ಸಚಿನ್ ತೆಂಡೂಲ್ಕರ್ ಕ್ರಿಕೆಟಿಗ ಮತ್ತು ಮಾಜಿ ರಾಜ್ಯಸಭಾ ಸದಸ್ಯರು ✨ #happy #birthday #celebration #sachin #tendulkar #cricketer #former #member #rajya #sabha #digitalmedia #suddhiprapancha #Kannada #youtubeshorts #viralshorts #shortsfeed #shorts #reels #vairal #video #bangalore #karnataka #india #Viralvideo #2026 #ಹುಟ್ಟುಹಬ್ಬದ #ಶುಭಾಶಯಗಳು #ಸಚಿನ್ #ತೆಂಡೂಲ್ಕರ್ #ಕ್ರಿಕೆಟಿಗ #ಮಾಜಿ #ಸದಸ್ಯ #ರಾಜ್ಯ #ಸಭಾ #ಡಿಜಿಟಲ್‌ಮೀಡಿಯಾ #ಸುದ್ಧಿಪ್ರಪಂಚ #ಕನ್ನಡ #ಯೂಟ್ಯೂಬ್‌ಶಾರ್ಟ್ಸ್ #ಶಾರ್ಟ್‌ಫೀಡ್ #ವೈರಲ್‌ಶಾರ್ಟ್ಸ್ #ಶಾರ್ಟ್ಸ್ #ರೀಲ್ಸ್ #ವೈರಲ್ #ವೀಡಿಯೋ #ಬೆಂಗಳೂರು #ಕರ್ನಾಟಕ #ಭಾರತ #ವೈರಲ್ವೀಡಿಯೋ #2026 ABOUT US 🙏 @DIGITAL MEDIA SUDDHI PRAPANCHA KANNADA ENTRTANMENT & NEWS ✨🌎🇮🇳📡📺🎬🎥🎙️⚽🥅☺️✨ KINDLY FOLLOW & LIKE US ON SOCIAL MEDIA PLATFORMS Subscribe our channel for the latest news updates : https://youtube.com/@digital.media.suddhi.prapancha #2026 Disclaime ~ digitalmedia suddhiprapancha is committed to remaining unbiased and focused on serving the public. As a news channel, our primary goal is to deliver news that informs and engages our audience. The content presented on digitalmedia suddhiprapancha is intended for entertainment and educational purposes only. Occasionally, we may incorporate content from other creators solely for educational and informational use under fair use policy guidelines. Our intentions are transparent and are never meant to harm anyone's beliefs or values ☺️🙏 ಹಕ್ಕು ನಿರಾಕರಣೆ ~ ಡಿಜಿಟಲ್ ಮೀಡಿಯಾ ಸುದ್ಧಿಪ್ರಪಂಚವು ಪಕ್ಷಪಾತವಿಲ್ಲದೆ ಉಳಿಯಲು ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುವತ್ತ ಗಮನಹರಿಸುತ್ತದೆ. ಸುದ್ದಿ ವಾಹಿನಿಯಾಗಿ, ನಮ್ಮ ಪ್ರಾಥಮಿಕ ಗುರಿ ಪ್ರೇಕ್ಷಕರಿಗೆ ಮಾಹಿತಿ ನೀಡುವ ಮತ್ತು ತೊಡಗಿಸಿಕೊಳ್ಳುವ ಸುದ್ದಿಗಳನ್ನು ತಲುಪಿಸುವುದು. ಡಿಜಿಟಲ್ ಮೀಡಿಯಾ ಸುದ್ಧಿಪ್ರಪಂಚದಲ್ಲಿ ಪ್ರಸ್ತುತಪಡಿಸಲಾದ ವಿಷಯವು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲಾಗಿದೆ. ಸಾಂದರ್ಭಿಕವಾಗಿ, ನ್ಯಾಯಯುತ ಬಳಕೆಯ ನೀತಿ ಮಾರ್ಗಸೂಚಿಗಳ ಅಡಿಯಲ್ಲಿ ಶೈಕ್ಷಣಿಕ ಮತ್ತು ಮಾಹಿತಿ ಬಳಕೆಗಾಗಿ ಮಾತ್ರ ನಾವು ಇತರ ಸೃಷ್ಟಿಕರ್ತರಿಂದ ವಿಷಯವನ್ನು ಸೇರಿಸಿಕೊಳ್ಳಬಹುದು. ನಮ್ಮ ಉದ್ದೇಶಗಳು ಪಾರದರ್ಶಕವಾಗಿರುತ್ತವೆ ಮತ್ತು ಯಾರ ನಂಬಿಕೆಗಳು ಅಥವಾ ಮೌಲ್ಯಗಳಿಗೆ ಎಂದಿಗೂ ಹಾನಿ ಮಾಡುವ ಉದ್ದೇಶವನ್ನು ಹೊಂದಿಲ್ಲ ☺️🙏 🔔 Subscribe Our YouTube Channel : @ Digital Media Suddhiprapancha Kannada #2026
𝗗𝗶𝗚𝗶𝗧𝗮𝗟 𝗠𝗘𝗗𝗜𝗔 🌍 ಸುದ್ದಿ ಪ್ರಪಂಚ
24.5K views
2 months ago
Virat Kohli ✨ ವಿರಾಟ್ ಕೊಹ್ಲಿ ✨ #rcb #csk #ipl2026 #chinnaswamystadium #viratkohli #digitalmedia #suddhiprapancha #kannada #bangalore #karnataka #india #reels #vairal #video #2026 #rcb #csk #ipl2026 #ಚಿನ್ನಸ್ವಾಮಿ ಕ್ರೀಡಾಂಗಣ #ವಿರಾಟ್ ಕೊಹ್ಲಿ #ಡಿಜಿಟಲ್ ಮೀಡಿಯಾ #ಸುದ್ಧಿಪ್ರಪಂಚ #ಕನ್ನಡ #ಬೆಂಗಳೂರು #ಕರ್ನಾಟಕ #ಭಾರತ #ರೀಲ್ಸ್ #ವೈರಲ್ #ವೀಡಿಯೋ #2026 ABOUT US 🙏 @DIGITAL MEDIA SUDDHI PRAPANCHA KANNADA ENTRTANMENT & NEWS ✨🌎🇮🇳📡📺🎬🎥🎙️⚽🥅☺️✨ KINDLY FOLLOW & LIKE US ON SOCIAL MEDIA PLATFORMS Subscribe our channel for the latest news updates : https://youtube.com/@digital.media.suddhi.prapancha #2026 Disclaime ~ digitalmedia suddhiprapancha is committed to remaining unbiased and focused on serving the public. As a news channel, our primary goal is to deliver news that informs and engages our audience. The content presented on digitalmedia suddhiprapancha is intended for entertainment and educational purposes only. Occasionally, we may incorporate content from other creators solely for educational and informational use under fair use policy guidelines. Our intentions are transparent and are never meant to harm anyone's beliefs or values ☺️🙏 ಹಕ್ಕು ನಿರಾಕರಣೆ ~ ಡಿಜಿಟಲ್ ಮೀಡಿಯಾ ಸುದ್ಧಿಪ್ರಪಂಚವು ಪಕ್ಷಪಾತವಿಲ್ಲದೆ ಉಳಿಯಲು ಮತ್ತು ಸಾರ್ವಜನಿಕರಿಗೆ ಸೇವೆ ಸಲ್ಲಿಸುವತ್ತ ಗಮನಹರಿಸುತ್ತದೆ. ಸುದ್ದಿ ವಾಹಿನಿಯಾಗಿ, ನಮ್ಮ ಪ್ರಾಥಮಿಕ ಗುರಿ ಪ್ರೇಕ್ಷಕರಿಗೆ ಮಾಹಿತಿ ನೀಡುವ ಮತ್ತು ತೊಡಗಿಸಿಕೊಳ್ಳುವ ಸುದ್ದಿಗಳನ್ನು ತಲುಪಿಸುವುದು. ಡಿಜಿಟಲ್ ಮೀಡಿಯಾ ಸುದ್ಧಿಪ್ರಪಂಚದಲ್ಲಿ ಪ್ರಸ್ತುತಪಡಿಸಲಾದ ವಿಷಯವು ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ ಉದ್ದೇಶಿಸಲಾಗಿದೆ. ಸಾಂದರ್ಭಿಕವಾಗಿ, ನ್ಯಾಯಯುತ ಬಳಕೆಯ ನೀತಿ ಮಾರ್ಗಸೂಚಿಗಳ ಅಡಿಯಲ್ಲಿ ಶೈಕ್ಷಣಿಕ ಮತ್ತು ಮಾಹಿತಿ ಬಳಕೆಗಾಗಿ ಮಾತ್ರ ನಾವು ಇತರ ಸೃಷ್ಟಿಕರ್ತರಿಂದ ವಿಷಯವನ್ನು ಸೇರಿಸಿಕೊಳ್ಳಬಹುದು. ನಮ್ಮ ಉದ್ದೇಶಗಳು ಪಾರದರ್ಶಕವಾಗಿರುತ್ತವೆ ಮತ್ತು ಯಾರ ನಂಬಿಕೆಗಳು ಅಥವಾ ಮೌಲ್ಯಗಳಿಗೆ ಎಂದಿಗೂ ಹಾನಿ ಮಾಡುವ ಉದ್ದೇಶವನ್ನು ಹೊಂದಿಲ್ಲ ☺️🙏 🔔 Subscribe Our YouTube Channel : @ Digital Media Suddhiprapancha Kannada #2026