🔴ಇನ್ಮುಂದೆ ವರ್ಷಕ್ಕೆ ನಾಲ್ಕೇ ಸಿಲಿಂಡರ್; ಗ್ರಾಹಕರಿಗೆ ಬಿಗ್ ಶಾಕ್😱

Edu ವೀರ
6.5K views
8 hours ago
ಇನ್ಮುಂದೆ ವರ್ಷಕ್ಕೆ ನಾಲ್ಕೇ ಸಿಲಿಂಡರ್, ಫಲಾನುಭವಿಗಳಿಗೆ ಬಿಗ್ ಶಾಕ್! ಮಧ್ಯಪ್ರಾಚ್ಯದಲ್ಲಿ ಯುದ್ಧ ಶುರುವಾದಾಗಿನಿಂದಲೂ ತೈಲ ಬಿಕ್ಕಟ್ಟು, ಎಲ್​ಪಿಜಿ ಕೊರತೆ ಎದುರಾಗಿದೆ. ಹೀಗಾಗಿ ಬೆಲೆ ಹೆಚ್ಚಳ ಮಾಡಲಾಗಿದೆ, ಇದರ ಜೊತೆಗೆ ಇದೀಗ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳಿಗೂ ದೊಡ್ಡ ಶಾಕ್​ ಎದುರಾಗಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೊರತೆ ಉಂಟಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಒಂದು ಕಡೆ ಬೆಲೆ ಹೆಚ್ಳಳ ಮಾಡ್ತಿದ್ರೆ, ಮತ್ತೊಂದು ಕಡೆ ಮಿತವಾಗಿ ಬಳಸಿ ಎಂದು ಸಲಹೆ ನೀಡುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಕ್ರಮ ಕೈಗೊಂಡಿದ್ದಾರೆ. ಹೌದು, ಎಲ್​ಪಿಜಿ ಕೊರತೆಯಿಂದ ಒಂದು ಕಡೆ ಎಲ್‌ಪಿಜಿ ದರವನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಬ್ಸಿಡಿ ಪಡೆಯುತ್ತಿರುವ ಉಜ್ವಲ ಯೋಜನೆಯ ಫಲಾನುಭವಿಗಳ ಮೇಲಿನ ಸೌಲಭ್ಯಗಳನ್ನು ಕಡಿಮೆ ಮಾಡುವ ನಿರ್ಧಾರವೂ ಹೊರಬಿದ್ದಿದೆ.ಇತ್ತೀಚಿಗೆ ಸರ್ಕಾರ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು 29 ರೂ.ಗಳಷ್ಟು ಹೆಚ್ಚಿಸಿದೆ. ಇದರ ಜತೆಗೆ, ಉಜ್ವಲ ಯೋಜನೆಯಡಿ ಸಬ್ಸಿಡಿ ಸಹಿತ ಎಲ್‌ಪಿಜಿ ಪಡೆಯುತ್ತಿರುವ ಬಡ ಕುಟುಂಬಗಳ ವಾರ್ಷಿಕ ಸಬ್ಸಿಡಿ ಸಿಲಿಂಡರ್‌ಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲಾಗಿದೆ. ಮೇ 2016ರಲ್ಲಿ ಉಜ್ವಲ ಯೋಜನೆ ಆರಂಭವಾದಾಗ, ಫಲಾನುಭವಿಗಳು ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್‌ಗಳನ್ನು ಪಡೆಯಲು ಅವಕಾಶ ಇತ್ತು. ಕಳೆದ ವರ್ಷ ಈ ಸಂಖ್ಯೆಯನ್ನು 9ಕ್ಕೆ ಇಳಿಸಲಾಗಿತ್ತು. ಈಗ ಮತ್ತೊಮ್ಮೆ ಪರಿಷ್ಕರಣೆ ಮಾಡಿ, ವರ್ಷಕ್ಕೆ ಕೇವಲ 4 ಸಬ್ಸಿಡಿ ಸಿಲಿಂಡರ್‌ಗಳಷ್ಟೇ ನೀಡಲಾಗುತ್ತದೆ ಎಂದು ಸರ್ಕಾರ ಆದೇಶಿಸಿದೆ.ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಮಲ್ ಖನೂಜಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಾಗ, ಈ ಪರಿಷ್ಕೃತ ಅರ್ಹತೆ ಉಜ್ವಲ ಫಲಾನುಭವಿಗಳ ಸರಾಸರಿ ವಾರ್ಷಿಕ ಬಳಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು. ಅಂದರೆ, ಹೆಚ್ಚಿನ ಮನೆಗಳು ವರ್ಷಕ್ಕೆ 4 ಸಬ್ಸಿಡಿ ಸಿಲಿಂಡರ್‌ಗಳಿಗಿಂತ ಹೆಚ್ಚು ಬಳಸುತ್ತಿಲ್ಲ ಎಂಬುದೇ ಸರ್ಕಾರದ ಅರ್ಥ.ಶುದ್ಧ ಅಡುಗೆ ಇಂಧನ ಬಳಕೆಯನ್ನು ಉತ್ತೇಜಿಸಲು, ಮೇ 2022ರಲ್ಲಿ ಕೇಂದ್ರ ಸರ್ಕಾರ 14.2 ಕೆಜಿ ಸಿಲಿಂಡರ್‌ಗಳಿಗೆ 200 ರೂ.ಗಳ ಗುರಿ ಸಬ್ಸಿಡಿ ಘೋಷಿಸಿತ್ತು. ಪ್ರತೀ ರೀಫಿಲ್ಲಿಂಗ್​ ನಂತರ ಈ ಸಬ್ಸಿಡಿ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿತ್ತು. ನಂತರ ಅಕ್ಟೋಬರ್ 2023ರಲ್ಲಿ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್‌ಗೆ 300 ರೂ.ಗಳಷ್ಟು ಹೆಚ್ಚಿಸಲಾಯಿತು. ಇದೇ ಸಬ್ಸಿಡಿಯನ್ನು 5 ಕೆಜಿ ಸಿಲಿಂಡರ್‌ಗಳಿಗೂ ಅನುಪಾತವಾಗಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಪಶ್ಚಿಮ ಏಷ್ಯಾದಲ್ಲಿ ಕಚ್ಚಾ ತೈಲ, ಎಲ್‌ಪಿಜಿ ಮತ್ತು ನೈಸರ್ಗಿಕ ಅನಿಲದ ಪೂರೈಕೆಯಲ್ಲಿ ಕೊರತೆ ಮುಂದುವರಿದಿದ್ದರೂ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಎಲ್ಲ ನಿರ್ಧಾರಗಳ ಹಿಂದಿನ ಉದ್ದೇಶ, ಒಂದು ಕಡೆ ಸರಬರಾಜು ಸುರಕ್ಷಿತವಾಗಿರಬೇಕು, ಮತ್ತೊಂದು ಕಡೆ ಸರ್ಕಾರದ ಮೇಲಿನ ಆರ್ಥಿಕ ಭಾರವನ್ನು ನಿಯಂತ್ರಿಸಬೇಕು ಎನ್ನುವುದಾಗಿದೆ. #🔴ಇನ್ಮುಂದೆ ವರ್ಷಕ್ಕೆ ನಾಲ್ಕೇ ಸಿಲಿಂಡರ್; ಗ್ರಾಹಕರಿಗೆ ಬಿಗ್ ಶಾಕ್😱