#🕉️ ಜೈ ಶ್ರೀ ರಾಮ🙏
ಶ್ರೀ ರಾಮನ ಅವತಾರದ ಸಂದೇಶ!
ದಶರಥ ಮಹಾರಾಜನಿಗೆ ಸಂತಾನವಿರಲಿಲ್ಲ.. ಋಷಿ ಮುನಿಗಳ ಯಾಗಗಳಿಗೆ ವಿಘ್ನವಾಗುತ್ತಿತ್ತು.. ಅಹಲ್ಯಾ ದೇವಿಗೆ ಶಾಪ ವಿಮೋಚನೆ ಆಗಬೇಕಿತ್ತು.. ಶಬರಿಗೆ ರಾಮದರ್ಶನ ದೊರಕಬೇಕಿತ್ತು.. ಜಾನಕಿ ದೇವಿಯ ವಿವಾಹವಾಗಬೇಕಿತ್ತು.. ಹನುಮಂತನಿಗೆ ಸ್ವಾಮಿಯ ಸೇವಾಭಾಗ್ಯ ಸಿಗಬೇಕಿತ್ತು.. ಸುಗ್ರೀವನಿಗೆ ನ್ಯಾಯ ದೊರಕಬೇಕಿತ್ತು.. ರಾವಣನಂತಹ ಅಧರ್ಮಿಯ ಸಂಹಾರವಾಗಬೇಕಿತ್ತು.. ಆದ್ದರಿಂದ ಶ್ರೀರಾಮದೇವರ ಅವತಾರವಾಯಿತು..
ಶ್ರೀಮನ್ನಾರಾಯಣನು ಎಲ್ಲವನ್ನೂ ಸುಲಭವಾಗಿ ಮಾಡಬಹುದಾಗಿದ್ದರೂ, ನಮಗೆ ಧರ್ಮವನ್ನು ಬದುಕಿ ತೋರಿಸಲು ಮನುಷ್ಯನಾಗಿ ಅವತರಿಸಿದನು. ಕೇವಲ ಉಪದೇಶವಲ್ಲ, ಜೀವನವೇ ಆದರ್ಶವಾಗಿ ತೋರಿಸಿದರು..
ರಾಮನೆಂದರೆ ಜ್ಞಾನ, ಶಾಂತಿ, ಪರಾಕ್ರಮ ಮತ್ತು ಕರ್ತವ್ಯಪ್ರಜ್ಞೆ. ನಮ್ಮ ಮನೆಗೆ ರಾಮ ಬಂದರೆ ಈ ಎಲ್ಲಾ ಗುಣಗಳು ಬರುತ್ತವೆ. ರಾಮ ಬಂದರೆ ಹನುಮಂತನು ಕೂಡ ಬರುತ್ತಾನೆ, ಭಕ್ತಿ ಮತ್ತು ಶಕ್ತಿ ಸಹ ಬರುತ್ತವೆ.
ನಮ್ಮ ಮನಸ್ಸಿನಲ್ಲಿ ರಾಮನ ವಾಸವಾಗಲಿ, ನಮ್ಮ ಜೀವನದಲ್ಲಿ ಧರ್ಮದ ಬೆಳಕು ಹರಡಲಿ..
ಶ್ರೀ ರಾಮನ ಕೃಪೆಯಿಂದ ಜೀವನ ಸಾರ್ಥಕವಾಗಲಿ! 🙏🌺🙏🌺🙏
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


