ShareChat
click to see wallet page
search
#💪ಹನುಮ ಜಯಂತಿ ಶುಭಾಶಯಗಳು🚩 #ಜೈ ಹನುಮಾನ್ ಹನುಮನೊಲಿದರೆ ರಾಮನೊಲಿವನು :- ಶ್ರೀ ರಾಮಚಂದ್ರ ಕರುಣಾಮಯಿ ಪ್ರೇಮ ಮೂರ್ತಿ. ತುಳಸಿದಾಸರು, ಪುರಂದರ ದಾಸರಂಥ ದಾಸರೂ ದಾಸರಾಗಿ ರಾಮನ ಕೃಪೆ ಪಡೆದವರು, ಹಾಗೆ ಮುಗ್ಧ ಮಕ್ಕಳು, ಪಶು, ಪ್ರಾಣಿ, ಪಕ್ಷಿಗಳು, ಜಲಚರ, ಕೀಟಗಳಿಂದ ಹಿಡಿದು ಜಗತ್ತಿನ ಎಲ್ಲಾ ಜೀವ ರಾಶಿ ಗಳ ಮೇಲೂ ರಾಮನ ಕೃಪಾ ದೃಷ್ಟಿ ಇದ್ದು ಎಲ್ಲ ಜೀವಿಗಳು ರಾಮನ ಅನುಗ್ರಹವನ್ನು ಪಡೆದಿವೆ. ಶುದ್ಧವಾದ ನಿರ್ಮಲ ಪ್ರೀತಿ- ಮುಗ್ದ ಮನಗಳಿಗೆ ರಾಮ ಬಹಳ ಬೇಗ ಒಲಿಯುತ್ತಾನೆ. ರಾಮನ ಒಲುಮೆ ಪ್ರೀತಿ ಪಡೆಯುವುದಕ್ಕೂ ಮೊದಲು ಹನುಮಂತನ ಒಲುಮೆ ಪಡೆದರೆ, ರಾಮನ ಹತ್ತಿರ ಹೋಗುವುದು ಇನ್ನೂ ಸುಲಭ. ಹನುಮ ನೊಲಿದರೆ ರಾಮನ ಪ್ರೀತಿ. ಸಂತ ತುಳಸೀದಾಸರಿಗೆ ಹನುಮನ ಮೂಲಕವೇ ರಾಮದರ್ಶನವಾಗಿದ್ದು. ರಾಮನಿದ್ದೆಡೆ ಹನುಮನೇ ಇರುತ್ತಾನೆ. ರಾಮಭಕ್ತರಲ್ಲಿ ಪ್ರಾಣಿಗಳೂ ಸಹ ಭಾಗಿಯಾಗಿವೆ—ನಾಯಿಯು ನ್ಯಾಯ ಪಡೆದಿದೆ, ಧಾನ್ಯಗಳಲ್ಲಿ ರಾಗಿ ಶ್ರೇಷ್ಠವಾಗಿದೆ, ಪಕ್ಷಿಗಳಲ್ಲಿ ಕಾಗೆ, ಪುಟ್ಟ ಅಳಿಲು ಸಹ ರಾಮನ ಸೇವೆ ಮಾಡಿ ಅವನ ಕರುಣೆಗೆ ಪಾತ್ರವಾಗಿದೆ. ಪುಟ್ಟ ಅಳಿಲು, ತನ್ನ ದೇಹ ಗಾತ್ರಕ್ಕೆ ತಕ್ಕಂತೆ ಪುಟ್ಟ ಕೆಲಸ ಮಾಡಿ, ಮೊದಲು ಆಂಜನೇಯನ ದೃಷ್ಟಿಗೆ ಬಿದ್ದು, ಮೂರು ಪಟ್ಟಿ ಹಾಕಿಸಿಕೊಳ್ಳುವ ಮೂಲಕ ರಾಮನ ಪ್ರೀತಿಯ ಪಾರಿತೋಷಕವನ್ನೇ ಪಡೆದಿದೆ. ಪುಟ್ಟ ಅಳಿಲಿಗೆ ಮೊದಲು ಹನುಮನ ಪಾದ ಸ್ಪರ್ಶ , ನಂತರವೇ ರಾಮನ ಹಸ್ತ ಸ್ಪರ್ಶ ಪಡೆಯಿತು. ಹೇಗೆಂದರೆ ಸೀತೆಯ ಅಪಹರಣವಾಗಿ ಲಂಕೆಯಲ್ಲಿ ಬಂಧಿಸಿಟ್ಟಿರುವ ವಿಷಯ ತಿಳಿದು, ಲಂಕೆಗೆ ಹೋಗಲು ಸೇತುವೆ ನಿರ್ಮಾಣವಾಗಬೇಕಿತ್ತು. ರಾಮನ ಆಣತಿಯಂತೆ, ನಳ ಮತ್ತು ನೀಲರ ಮಾರ್ಗದರ್ಶನದಲ್ಲಿ ಸಾವಿರಾರು ವಾನ ರರು ಬಂಡೆಗಳನ್ನು ಸಮುದ್ರ ಕ್ಕೆ ಹಾಕಿದಾಗ 'ರಾಮ ಮಹಿಮೆ'ಯಿಂದ ಬಂಡೆ ಸಮುದ್ರದಲ್ಲಿ ತೇಲುತ್ತಿತ್ತು. ಹೀಗೆ ಸೇತುವೆ ಕಟ್ಟುವ ಕೆಲಸವು ಭರದಿಂದ ಸಾಗುತ್ತಿತ್ತು. ಇನ್ನೊಂದೆಡೆ ಲಕ್ಷ್ಮಣ ಹನುಮಂತ ರೊಡಗೂಡಿ ಕುಳಿತಿದ್ದ ರಾಮನು ಸೇತುವೆ ಕಾರ್ಯವನ್ನು ವೀಕ್ಷಿಸುತ್ತಿದ್ದನು. ಆ ಸಮಯದಲ್ಲಿ ಒಂದಷ್ಟು ವಾನರರು ಹನುಮಂತನಲ್ಲಿ ದೂರು ತಂದರು.ಹನುಮಂತ ನಾವು ಮಾಡುವ ಕೆಲಸಗಳು ರಭಸದಿಂದ ಸಾಗುತ್ತಿದೆ. ಆದರೆ ಅಲ್ಲೊಂದು ಪುಟ್ಟ ಅಳಿಲು ಸಮುದ್ರಕ್ಕೆ ಹೋಗುತ್ತದೆ ಮುಳುಗುತ್ತದೆ. ಮತ್ತೆ ದಡಕ್ಕೆ ಬಂದು ಮರಳ ಮೇಲೆ ಹೊರಳುತ್ತದೆ. ಮತ್ತೆ ಸೇತುವೆ ಸಮೀಪ ಬರುತ್ತದೆ ಮತ್ತೆ ಓಡುತ್ತದೆ ಅಲ್ಲಿಂದ ಇಲ್ಲಿಗೆ ಓಡಾಡುತ್ತಾ ಸರಸರ ಓಡಾಡುತ್ತಿ ರುವ ಕಾಲಿಗೆ ತೊಡಕಾಗಿ ತೊಂದರೆ ಕೊಡುತ್ತಿದೆ. ನಾವು ಎಷ್ಟೇ ಹುಷಾರಾಗಿ ಓಡಾಡಿದರು ನಮ್ಮ ಕಾಲ ತುಳಿತಕ್ಕೆ ಸಿಕ್ಕರೆ ಅಪ್ಪಚ್ಚಿಯಾಗುತ್ತದೆ ಎಂದರು. ಹನುಮಂತ ಕ್ಷಣ ಹೊತ್ತು ಧ್ಯಾನ ಮಾಡಿ ಆ ಅಳಿಲನ್ನು ಗಮನಿಸಿ, ಅದು ಏಕೆ ಹಾಗೆ ಓಡಾಡುತ್ತಿದೆ ಎಂದು ನೋಡಿದ. ಅಳಿಲು ಮೈಯನ್ನು ಒದ್ದೆ ಮಾಡಿ ಕೊಂಡು, ಒಣ ಮರಳಿನ ಮೇಲೆ ಹೊರಳಿ ಮತ್ತೆ ಓಡಿಹೋಗಿ ಸೇತುವೆಯ ಬಂಡೆ ಕಲ್ಲುಗಳ ಸಂದು ಗೊಂದಿ ನಲ್ಲಿ ಮರಳನ್ನು ಕೊಡ್ಹವಿ ತುಂಬುತ್ತಿತ್ತು. ಮತ್ತೆ ಮರಳನ್ನು ತುಂಬಿ ಕೊಂಡು ಹೋಗುತ್ತಿತ್ತು ಬಂಡಿ ಸಂಧಿ ವದರುತ್ತಿತ್ತು. ಈ ರೀತಿ ಎಡೆಬಿಡದೆ ಮಾಡುತ್ತಿತ್ತು. ಅದಕ್ಕೆ ರಾಮನ ಮೇಲೆರುವ ಪ್ರೀತಿ ಮತ್ತು ಅದರ ಭಾವ ಹನುಮನಿಗೆ ಅರ್ಥವಾಯಿತು. ಅದನ್ನು ಪರೀಕ್ಷಿಸಲು ಹನುಮನೆ ಅಳಿಲು ಇದ್ದಲ್ಲಿಗೆ ಬಂದನು. ಮತ್ತು ಅದರ ಬಾಲದ ತುದಿಯನ್ನು ತನ್ನ ಕಾಲಿ ನಲ್ಲಿ ಒತ್ತಿ ಹಿಡಿದನು. ಅದು ನೋವಿನಿಂದ ರಾಮಾ, ಹೇ ರಾಮಾ ಎಂದು ಕೂಗಿತು. ಅದರ ಕರುಣೆಯ ಕೂಗಿನ ಧ್ವನಿ ರಾಮನಿಗೆ ಕೇಳಿತು. ಧ್ವನಿ ಕೇಳಿ ರಾಮ ಓಡಿ ಅಳಿಲಿನ ಹತ್ತಿರ ಬಂದನು. ಆಂಜನೇಯನನ್ನು ಪಕ್ಕಕ್ಕೆ ಸರಿಸಿ ಅಳಿಲನ್ನು ತನ್ನ ಕೈಯಲ್ಲಿ ಎತ್ತಿ ಹಿಡಿದುಕೊಂಡು, ಮೃದುವಾಗಿ ಅದರ ಬೆನ್ನ ಮೇಲೆ ನೇವರಿಸುತ್ತಾ ಪುಟ್ಟ ಅಳಿಲೇ, ನೀನೇಕೆ ಇಷ್ಟು ದೊಡ್ಡ ವಾನರರ ನಡುವೆ ಓಡಾಡುತ್ತಾ ಏನು ಮಾಡುತ್ತಿರುವೆ? ಎಂದು ಕೇಳಿದ. ಅದಕ್ಕೆ ಅಳಿಲು ಹೇಳಿತು. ಈ ಕಥೆಯನ್ನು ಬರಹ ರೂಪಕ್ಕೆ ತಂದವರು — ಆಶಾ ನಾಗಭೂಷಣ. ಪ್ರಭು ನೀವು ಸೇತುವೆ ಕಟ್ಟಿಸುತ್ತಿರುವಿರಿ ವಾನರರು ಬಂಡೆಗಳನ್ನು ಹಾಕುತ್ತಿ ದ್ದಾರೆ. ಆಗ ಬಂಡೆಗಳು ತುದಿಗಳಲ್ಲಿ ತುಂಬಾ ಚೂಪಾಗಿದೆ. ನೀವು ಅದರ ಮೇಲೆ ನಡೆದಾಗ ಬಂಡೆಯ ಚೂಪು ನಿಮ್ಮ ಕಾಲಿಗೆ ಚುಚ್ಚಬಾರದೆಂದು ಮರಳನ್ನು ತಂದು ಬಂಡೆಗಳ ಸಂಧಿಯಲ್ಲಿ ಹಾಕಿ ಚೂಪನ್ನು ಮುಚ್ಚುತ್ತೇನೆ. ಇದರಿಂದ ನೀವು ಹಾಯಾಗಿ ನಡೆಯಬಹುದು. ಅಲ್ಲದೆ ವಾನರ ಸೈನ್ಯವು ಇಷ್ಟೊಂದು ಸೇವೆ ಮಾಡುವುದನ್ನು ನಾನು ನೋಡಿದೆ. ಪ್ರಭು ನನಗೂ ಏನಾದರೂ ನಿಮ್ಮ ಸೇವೆ ಮಾಡಬೇಕೆಂದು ಅನಿಸಿತು. ಆದರೆ ಅಷ್ಟು ದೊಡ್ಡ ಬಂಡೆಯನ್ನು ಎತ್ತುವಂತ ಕೆಲಸ ನನ್ನಿಂದಂತೂ ಆಗದು. ಅದಕ್ಕಾಗಿ ಮರಳನ್ನು ತಂದು ಹಾಕುವ ಈ ಪುಟ್ಟ ಕೆಲಸ ಮಾಡುತ್ತಿದ್ದೇನೆ. ಇದು ನನ್ನ ಕೈಲಾದ ಪುಟ್ಟ ಸೇವೆ. ಪ್ರಭು ನೀವು ಈ ನನ್ನ ಚಿಕ್ಕ ಸೇವೆಯನ್ನು ಸ್ವೀಕರಿಸಿ ನಿಮ್ಮ ಚರಣ ಕಮಲ ಗಳಲ್ಲಿ ನನಗೂ ಸ್ವಲ್ಪ ಆಶ್ರಯ ಕೊಡು ಎಂದು ಬೇಡಿತು. ಅಳಿಲಿನ ಮಾತು ಕೇಳಿ, ರಾಮನ ಕಣ್ಣಲ್ಲು ನೀರು ತುಂಬಿತು. ರಾಮನು ಸಂತಸ ಗೊಂಡು ಅದರ ಬೆನ್ನನ್ನು ಸವರುತ್ತಾ. ಏ ಪುಟ್ಟ ಅಳಿಲೇ, ಕೇಳು ನೀನು ಪುಟ್ಟ ಪ್ರಾಣಿ ಇಂಥ ಮೃದುವಾದ ನಿನ್ನ ಬಾಲದ ಮೇಲೆ ಆಂಜನೇಯ ಕಾಲಿಟ್ಟು ತುಂಬಾ ನೋವು ಮಾಡಿದ್ದಾನೆ. ನೀನೇ ಹೇಳು, ಅವನಿಗೆ ಯಾವ ಶಿಕ್ಷೆ ಕೊಡಲಿ ಎಂದು ಕೇಳಿದ. ಅಳಿಲು ಹೇಳಿತು ಪ್ರಭು ಆಂಜನೇಯನ ಕೃಪೆ ಯಿಂದಾಗಿ ಅವನ ಪಾದ ಸ್ಪರ್ಶ ನನಗಾಯಿತು. ಅವನ ಪಾದಸ್ಪರ್ಶದಿಂದಾಗಿ ನಾನು ನಿಮ್ಮ ಕರಕಮಲಗಳ ಸ್ಪರ್ಶವಾಯಿತು. ಅವನಿಂದಾಗಿ ನಿಮ್ಮ ದರ್ಶನ ಕೃಪೆ ನನಗಾಯಿತು. ಇದಕ್ಕಿಂತ ಇನ್ನೇನು ಬೇಕು. ನನಗೇನೂ ಬೇಡ ಎಂದಿತು. ರಾಮ ಅದರ ಬೆನ್ನನ್ನು ಮೃದುವಾಗಿ ಸವರಿ, ಪುಟ್ಟ ಅಳಿಲೇ, ನಿನ್ನ ಈ ಪುಟ್ಟ ಸೇವೆಯನ್ನು ರಘುವಂಶ ಎಂದಿಗೂ ಮರೆಯುವುದಿಲ್ಲ. ಯುಗ ಯುಗ ಗಳಲ್ಲೂ ನಿನ್ನ ಈ ಕಥೆ ಹೇಳುತ್ತಾರೆ, ಕೇಳುತ್ತಾರೆ, ಮತ್ತೆ ಮತ್ತೆ ಕೇಳುತ್ತಲೇ ಇರುತ್ತಾರೆ. ಎಂದು ಪ್ರೀತಿ ವಾತ್ಸಲ್ಯದಿಂದ ತನ್ನ ಬೆರಳುಗಳಿಂದ ಅದರ ಬೆನ್ನನ್ನು ಸವರಿದನು. ಅದೇ ಮೂರು ಪಟ್ಟೆಯಾಗಿ ಇಂದಿಗೂ ಉಳಿದಿದೆ.‌ ಯಾರೇ ಆಗಲಿ ಮಾಡುವ ಕೆಲಸ ಚಿಕ್ಕದಿರಲಿ ದೊಡ್ಡದಿರಲಿ ಅದನ್ನು ಮಾಡುವವರ ಭಾವವನ್ನು ಭಗವಂತ ನೋಡುತ್ತಾನೆ, ಹೊರತು ಬೇರೆ ಏನು ಅಲ್ಲ. ರಾಮನ ಕೃಪೆ ಸುಲಭವಾಗಿ ತ್ವರಿತ ಗತಿಯಲ್ಲಿ ಪಡೆಯಬೇಕೆಂದರೆ ಹನುಮಂತನ ಮೂಲಕವೇ ಹೋಗಬೇಕು. ಎಂಬುದು ಈ ಪುಟ್ಟ ಅಳಿಲಿನಿಂದ ತಿಳಿಯುತ್ತದೆ. ಹೂವುಗಳನ್ನು ಕೈಗೆತ್ತಿಕೊಂಡರೆ ಎರಡು ಕೈಗಳಿಗೂ ಅದರ ಸುಗಂಧ ಬೀರುವುದು. ಹಾಗೆಯೇ ಭಗವಂತನ ಪ್ರೀತಿ ಬೇಗ ಭಾವವಿಲ್ಲದೆ ಎಲ್ಲರಿಗೂ ತಲುಪುತ್ತದೆ. ವಂದನೆಗಳೊಂದಿಗೆ, ಬರಹ: ©ಆಶಾ ನಾಗಭೂಷಣ ▬▬ஜ۩۞۩ஜ▬▬▬*▬▬▬ஜ۩۞۩ஜ▬▬ !! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !! 🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ ಸಂತು ನಿರಾಮಯಾಃ 🙏 !! ಧರ್ಮೋ ರಕ್ಷತಿ ರಕ್ಷಿತಃ !! ▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬ 🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
💪ಹನುಮ ಜಯಂತಿ ಶುಭಾಶಯಗಳು🚩 - gabbushana sha gabbushana sha - ShareChat