ShareChat
click to see wallet page
search
#ಜೈಭೀಮ್🙏 #ಪರಮಪೂಜ್ಯ #ಬೋಧಿಸ್ಥವ #drbrambedkar ಜೀ ಅವರ ಹೋರಾಟದ ಸಾಗರಕ್ಕೆ ಕ್ರಾಂತಿಕಾರಿಯ #MukanayakPepar #ಪತ್ರಿಕೆ ಕೂಡ #ಅಸ್ಪೃಶ್ಯರ ವಿಮೋಚನೆಗೆ ಆತ್ಮವಿಶ್ವಾಸ ಜಾಗೃತಿ ಪರಿವರ್ತನೆ ತುಂಬಿದ " #ಮೂಕನಾಯಕ " ಪತ್ರಿಕೆಗೆ #106ನೇ ವಾರ್ಷಿಕೋತ್ಸವದ ಶುಭಾಶಯಗಳು💐🙏 ಬಾಬಾಸಾಹೇಬ್ #ಡಾ_ಬಿ_ಆರ್_ಅಂಬೇಡ್ಕರ್ ಮೂಕನಾಯಕ ಪತ್ರಿಕೆ ಆರಂಭದ #106ನೇ ವರ್ಷ 31 ಜನವರಿ 1920 – 31 ಜನವರಿ 2026 ಮೂಕನಾಯಕ ಮೌನಕ್ಕೆ ಧ್ವನಿ ನೀಡಿದ ಪತ್ರಿಕೆ 31 ಜನವರಿ 1920ರಂದು ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೂಲನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ “ಮೂಕನಾಯಕ” ಎಂಬ #ಮರಾಠಿ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. ಅಸ್ಪೃಶ್ಯರ ವಿಮೋಚನೆಗೆ ಆತ್ಮವಿಶ್ವಾಸ ತುಂಬಿದ ಈ ಪತ್ರಿಕೆ, ಬಾಬಾಸಾಹೇಬರ ಸಾಮಾಜಿಕ ಹೋರಾಟದ ಪ್ರಮುಖ ಮಾಧ್ಯಮವಾಗಿತ್ತು. #ಬಾಬಾಸಾಹೇಬ್ ಜೀ ಅವರು ನಮ್ಮ #ಬಹುಜನರ_ವಿಮೋಚನಾ ಹೋರಾಟಕ್ಕಾಗಿ #ಮೂಕನಾಯಕ #ಪತ್ರಿಕೆಯನ್ನು ನಡೆಸಿದರು ಮನುವಾದಿಗಳ ಬಂಡವಾಳವನ್ನು ಬಯಲು ಮಾಡುವುದು ಮತ್ತು ಅಸ್ಪೃಶ್ಯರ ವಿಮೋಚನೆಗೆ ಪ್ರಥಮ ಆದ್ಯತೆ ನೀಡುವುದು ಅವರ ಉದ್ದೇಶವಾಗಿದ್ದರಿಂದ, ಮೂಕನಾಯಕ ಪತ್ರಿಕೆ ಮನುವಾದಿಗಳಿಗೆ ಸಿಂಹಸ್ವಪ್ನವಾಯಿತು ಅಸ್ಪೃಶ್ಯತೆ ಆಚರಣೆಯನ್ನು ಮುಂದುವರಿಸಿದ ಮನುವಾದಿ ಬಾಲಗಂಗಾಧರ #ತಿಲಕನು ನಡೆಸುತ್ತಿದ್ದ #ಕೇಸರಿ ಪತ್ರಿಕೆಯಲ್ಲಿ ಜಾಹೀರಾತು ನೀಡಲು ಬಾಬಾಸಾಹೇಬ್ ಕೇಳಿಕೊಂಡಾಗ #ಅಸ್ಪೃಶ್ಯರು ನಡೆಸುವ ಪತ್ರಿಕೆಗೆ ನಮ್ಮ ಪತ್ರಿಕೆಯಲ್ಲಿ ಜಾಹೀರಾತು ನೀಡಲು ಸಾಧ್ಯವಿಲ್ಲ” ಎಂದು ತಿಲಕ್ ನಿರಾಕರಿಸಿದ್ದರು ಎಂಬುದು ಬಾಬಾಸಾಹೇಬರಿಗೆ ನೆನಪಾಗಿತ್ತು. ಮೂಕನಾಯಕ ಪತ್ರಿಕೆ ತಿಲಕ್‌ಗೆ ಭಯವಾಗಿದ್ದಕ್ಕೆ ಕಾರಣ, ಅದು ಮನುವಾದಿ ಬಂಡವಾಳವನ್ನು ಬಯಲಿಗೆಳೆದಿದ್ದುದೇ ಆಗಿತ್ತು. ಮೂಕನಾಯಕ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಬಾಬಾಸಾಹೇಬ್ ಅವರು ಅದರ ಧ್ಯೇಯೋದ್ದೇಶಗಳನ್ನು ಅತ್ಯಂತ ಸರಳವಾಗಿ, ಮಾರ್ಮಿಕವಾಗಿ ಮತ್ತು ಶಕ್ತಿಯುತವಾಗಿ ವಿವರಿಸಿದರು. ಭಾರತವನ್ನು ಸಮಾನತೆಯ ನೆಲವೆಂದು ಹೇಳಲಾಗುತ್ತಿದರೂ, ಹಿಂದೂ ಸಮಾಜವು ಹಲವು ಮಹಡಿಗಳಿರುವ ಕಟ್ಟಡದಂತೆ ಇರುವುದನ್ನು ಅವರು ಉದಾಹರಿಸಿದರು. ಒಂದು ಮಹಡಿಯಲ್ಲಿ ಜನಿಸಿದವನು ಎಷ್ಟು ಸಾಧನೆ ಮಾಡಿದರೂ, ಎಷ್ಟು ಮಹತ್ವಾಕಾಂಕ್ಷೆ ಹೊಂದಿದರೂ, ಮತ್ತೊಂದು ಮಹಡಿಗೆ ಹೋಗಲು ದಾರಿ ಇಲ್ಲ ಅವನು ಕೊನೆಯವರೆಗೂ ಅಲ್ಲಿ ಬದುಕಿ, ಅಲ್ಲಿಯೇ ಸಾಯಬೇಕಾದ ಪರಿಸ್ಥಿತಿ ಇದೆ ಎಂದು ಅವರು ವಿವರಿಸಿದರು ಈ ಸಮಾಜದಲ್ಲಿ ಬ್ರಾಹ್ಮಣರು ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರು ಮೂರು ವಿಭಿನ್ನ ಮಹಡಿಗಳಲ್ಲಿ ನೆಲೆಸಿದ್ದಾರೆ ಎಂದು ಬಾಬಾಸಾಹೇಬ್ ಸ್ಪಷ್ಟಪಡಿಸಿದರು. #ಪ್ರಾಣಿ_ಪಕ್ಷಿಗಳಲ್ಲಿಯೂ ದೇವರನ್ನು ಕಾಣುತ್ತೇವೆ ಎಂದು ಬೋಧಿಸುವ ಹಿಂದೂ ಸಮಾಜದಲ್ಲೇ ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರನ್ನು ಕೀಳಾಗಿ ಕಾಣುವ ರೂಢಿಯನ್ನು ಬ್ರಾಹ್ಮಣರು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವುದು ನಾಚಿಕೆಗೇಡು ಎಂದು ಅವರು ಬರೆದರು. ಬ್ರಾಹ್ಮಣರು ಜ್ಞಾನ ಪ್ರಸಾರದ ಕಾರ್ಯವನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡು, ಜ್ಞಾನವನ್ನು ಸಂಗ್ರಹಿಸಿ ಇಡುವ ಅಮಾನುಷ ನಡವಳಿಕೆಯನ್ನು ತೋರಿದ್ದಾರೆ ಎಂದು ಅವರು ಟೀಕಿಸಿದರು. ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರು ಹಿಂದುಳಿಯಲು ಮುಖ್ಯ ಕಾರಣವೆಂದರೆ ಶಿಕ್ಷಣದ ಅವಕಾಶವನ್ನು ಅವರಿಗೆ ನಿರಾಕರಿಸಿರುವುದೇ ಆಗಿದೆ ಎಂದು ಬಾಬಾಸಾಹೇಬ್ ಸ್ಪಷ್ಟವಾಗಿ ಹೇಳಿದರು. ನಿಮ್ನ ವರ್ಗಗಳನ್ನು ಗುಲಾಮಗಿರಿ, ಬಡತನ ಮತ್ತು ಅಜ್ಞಾನದಿಂದ ಪಾರು ಮಾಡುವ ಮೇರು ದಾರಿಯೆಂದರೆ, ಅವರಿಗೆ ಶಿಕ್ಷಣವನ್ನು ಒದಗಿಸುವುದೇ ಆಗಿದೆ ಎಂದು ಅವರು ಘೋಷಿಸಿದರು. ತಮ್ಮ ಹೀನಾಯ ಪರಿಸ್ಥಿತಿಯ ಬಗ್ಗೆ ಬ್ರಾಹ್ಮಣೇತರರು ಮತ್ತು ಅಸ್ಪೃಶ್ಯರನ್ನು ಜಾಗೃತಗೊಳಿಸುವ ಕಾರ್ಯ ತುರ್ತಾಗಿ ಪ್ರಾರಂಭವಾಗಬೇಕು ಎಂದು ಬಾಬಾಸಾಹೇಬ್ “ಮೂಕನಾಯಕ” ಪತ್ರಿಕೆಯಲ್ಲಿ ಪ್ರಕಟಿಸಿದರು. ಇದೇ ವಿಚಾರ ಮನುವಾದಿಗಳಿಗೆ ಸಹಿಸಲಾರದಂತಾಗಿತ್ತು. ಆದ್ದರಿಂದಲೇ ಬಾಬಾಸಾಹೇಬ್ ಜೀ ಅವರು #106ವರ್ಷಗಳ ಹಿಂದೆಯೇ #ಮಾಧ್ಯಮದ ಮೂಲಕ ಮನುವಾದಿಗಳಿಗೆ ತೀವ್ರ ಸವಾಲು ಹಾಕಿದ್ದರು. ಆದರೆ ನಾವು ಇನ್ನೂ ಸಂಪೂರ್ಣವಾಗಿ ಜಾಗೃತರಾಗಿಲ್ಲ. ಇದನ್ನು ಅರ್ಥಮಾಡಿಕೊಂಡು ನಡೆಯಬೇಕಾಗಿದೆ. ಸಂವಿಧಾನ ಮತ್ತು ದೇಶ ಇಂದು ಅಪಾಯದಲ್ಲಿವೆ — ಎಚ್ಚರಿಕೆ ಅಗತ್ಯ. #remember #babasahebambedkar #jaibhim #namobuddhay #ourhistory ಜೈ ಭೀಮ್ ನಮೋ ಬುದ್ಧಾಯ
ಜೈಭೀಮ್🙏 - মুকনাএক Mo dwatedr NuyAFuwvee 07 Vutra vur bn pulnre [ne కిpరనగs నp rn dnarn Oni Iiat . मुकनायक Celebrating the 1O6th Anniversary of Mooknayak Newspaper Warm Greetinss to All..! On 31 January 1920 Dr Bhimrao Ambedkar founded the newspaper Mookna 10^ vaare aon +adav মুকনাএক Mo dwatedr NuyAFuwvee 07 Vutra vur bn pulnre [ne కిpరనగs నp rn dnarn Oni Iiat . मुकनायक Celebrating the 1O6th Anniversary of Mooknayak Newspaper Warm Greetinss to All..! On 31 January 1920 Dr Bhimrao Ambedkar founded the newspaper Mookna 10^ vaare aon +adav - ShareChat