Edu ವೀರ
32K views 3 days ago
ನಟಿ ಶೋಭಾ ಶೆಟ್ಟಿ ಬಾಳಲ್ಲಿ ಮಡುಗಟ್ಟಿದ ನೋವು, ಮದುವೆ ಆಗದಿರಲು ಕಾರಣ ಅಮ್ಮನ ಅಗಲಿಕೆ! ನಟಿ ಶೋಭಾ ಶೆಟ್ಟಿ ಅವರು ‘ಬಿಗ್‌ ಬಾಸ್‌ ಕನ್ನಡ ಸೀಸನ್‌-11’ರಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿದ್ದರು. ‘ಅಗ್ನಿಸಾಕ್ಷಿ’ ಧಾರಾವಾಹಿ ತನು ಪಾತ್ರದ ಮೂಲಕ ರಂಜಿಸಿದವರು. ನಂತರ ತೆಲುಗು ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಪಡೆದರು. ಹೈದ್ರಾಬಾದ್‌ ಮೂಲದ ನಟನ ಜೊತೆಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ಆದರೆ ಎರಡ್ಮೂರು ವರ್ಷ ಕಳೆದು ಜೋಡಿ ಮದುವೆ ಆಗಿಲ್ಲ.ಇದಕ್ಕೆ ಕಾರಣ ಶೋಭಾ ಶೆಟ್ಟಿ ಅವರ ತಾಯಿಯ ಅಗಲಿಕೆ ನೋವು. ಒಂದುವರೆ ವರ್ಷ ತಾವು ಅನುಭವಿಸಿದ ಸಂಕಟವನ್ನ ನಟಿ ಹಂಚಿಕೊಂಡಿದ್ದಾರೆ.ಅಗ್ನಿಸಾಕ್ಷಿ’ ಧಾರಾವಾಹಿಯ ತನು ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಶೋಭಾ ಶೆಟ್ಟಿ . ನಂತರ ಇವರು ತೆಲುಗು ಇಂಡಸ್ಟ್ರಿ ಕಡೆ ಮುಖ ಮಾಡಿದರು. ಅಲ್ಲಿಯೇ ಸ್ವಂತ ಮನೆ ಕಟ್ಟಿಸಿ, ಡಿಸೈನರ್‌ ಸ್ಟುಡಿಯೋ ಆರಂಭಿಸಿ, ಬದುಕು ಕಟ್ಟಿಕೊಂಡಿದ್ದಾರೆ.ತೆಲುಗು ಕಿರುತೆರೆ ನಟ ಯಶವಂತ್ ರೆಡ್ಡಿ ಅವರನ್ನ ಪ್ರೀತಿಸಿ ಮದುವೆ ಆಗಲು ನಿರ್ಧಾರ ಮಾಡಿದ್ದಾರೆ. ನಿಶ್ಚಿತಾರ್ಥ ಕೂಡ ಜರುಗಿದೆ. ಆದರೆ, ಎರಡ್ಮೂರು ವರ್ಷ ಕಳೆದರು ಇನ್ನು ಮದುವೆ ಆಗಿಲ್ಲ. ಇತ್ತೀಚೆಗೆ ಜೊತೆಗೆ ಫೋಟೋ, ವಿಡಿಯೋ ಏನನ್ನೂ ಶೇರ್‌ ಮಾಡಿರಲಿಲ್ಲ. ಹೀಗಾಗಿ ತೆಲುಗು ಮತ್ತು ಕನ್ನಡದ ಅವರ ಅಭಿಮಾನಿಗಳಲ್ಲಿ ಅನುಮಾನ ಮೂಡಿತ್ತು. ಕಾಮೆಂಟ್‌ಗಳ ಮೂಲಕ ಏನಾಯ್ತು ಎಂದು ಕೇಳುತ್ತಿದ್ದರು.ಈ ನಡುವೆ ತೆಲುಗು ‘ಬಿಗ್‌ ಬಾಸ್‌’ ಶೋನಲ್ಲಿಯೂ ಶೋಭಾ ಶೆಟ್ಟಿ ಅವರು ಭಾಗಿಯಾಗಿ, ಫೈಯರ್‌ ಬ್ರ್ಯಾಂಡ್‌ ಎಂಬ ಬಿರುದು ಪಡೆದರು. ಇದಾದ ಬಳಿಕ ಅಂದ್ರೆ ಡಿಸೆಂಬರ್‌ 2024ರಲ್ಲಿ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 11’ರಲ್ಲಿ ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಪ್ರವೇಶ ಪಡೆದರು. ಆದರೆ, ಕೇವಲ ಎರಡೇ ವಾರಕ್ಕೆ ಶೋಭಾ ಅವರು ದುಃಖಿಸುತ್ತಾ ಆಚೆಬರುವ ನಿರ್ಧಾರ ಮಾಡಿದರು. ‘ಸೂಪರ್‌ ಸಂಡೆ ವಿತ್‌ ಕಿಚ್ಚ ಸುದೀಪ’ ಭಾನುವಾರದ ಸಂಚಿಕೆಯಲ್ಲಿ ಬಕ್ಕಳಿಸಿ, ಶೋನಿಂದ ಆಚೆ ಬಂದರು. ಶೋಭಾ ಅವರು ಬಿಗ್‌ ಬಾಸ್‌ ಮನೆಯಿಂದ ಬರುತ್ತಿದ್ದಂತೆ ತಾಯಿಯ ಆರೋಗ್ಯದ ಬಗ್ಗೆ ಆಘಾತಕಾರಿ ಸುದ್ದಿ ಎದುರಾಗಿತ್ತು. ‘ನಮ್ಮವರಿಗೆ ಏನಾದರೂ ಆಗುತ್ತಿದೆ ಅಂದಾಗ, ಮನಸ್ಸಿಗೆ ನೆಮ್ಮದಿ ಇರಲ್ಲ. ತಳಮಳ ಅನುಭವಿಸುತ್ತಿರುತ್ತೇವೆ. ಹಿಂಟ್‌ ಸಿಕ್ಕಿರುತ್ತೆ’ ಅದೇ ರೀತಿ ಶೋಭಾ ಶೆಟ್ಟಿ ಅವರ ಮನಸ್ಸಿಗೂ ತಾಯಿ ಕುರಿತು ಹಿಂಟ್‌ ಸಿಕ್ಕಿತ್ತಾ? ಗೊತ್ತಿಲ್ಲ. ಅವರು ಕಾರಣವನ್ನು ಹೇಳದೇ ಶೋನಿಂದ ಹೊರಬಂದಿದ್ದರು.ಇದೇ ವರ್ಷದ ಆರಂಭ ಅಂದ್ರೆ ಜನವರಿಯಲ್ಲಿ ತಾಯಿಯನ್ನ ಕಳೆದುಕೊಂಡಿದ್ದಾರೆ ನಟಿ ಶೋಭಾ ಶೆಟ್ಟಿ. ಅಮ್ಮನಿಗೆ ಏನಾಯ್ತು? ತಾವು ಅನುಭವಿಸಿದ ನರಕಯಾತನೆ ಎಂತಹದ್ದು? ಇಷ್ಟು ವರ್ಷವಾದರೂ ಮದುವೆ ಏಕೆ ಆಗುತ್ತಿಲ್ಲ ಎಂಬುವುದರ ನೋವಿನ ಜರ್ನಿಯನ್ನ ತಮ್ಮ ಅಭಿಮಾನಿಗಳ ಮುಂದೆ ತೋಡಿಕೊಂಡಿದ್ದಾರೆ. ತೆಲುಗು ಭಾಷೆಯಲ್ಲಿ ತಾವು ಅನುಭವಿಸಿದ ಕಷ್ಟವನ್ನ ಬಿಚ್ಚಿಟ್ಟಿದ್ದಾರೆ ನಟಿ ಶೋಭಾ ಶೆಟ್ಟಿ. ಅಸಲಿಗೆ ಶೋಭಾ ಶೆಟ್ಟಿ ಬಾಳಲ್ಲಿ ಏನಾಗಿತ್ತು?“ಐ ಮಿಸ್ ಯು ಅಮ್ಮ. ನೀನಿಲ್ಲದೆ ಐದು ತಿಂಗಳು ಕಳೆಯಿತು. ಜೀವನದಲ್ಲಿ ತುಂಬಾ ರೀತಿಯ ಆಸೆಗಳನ್ನು ಇಟ್ಟುಕೊಂಡಿರುತ್ತೇವೆ. ಹೀಗೆ ಮಾಡಿದರೆ ಚೆನ್ನಾಗಿರುತ್ತೆ, ಹಾಗೆ ಆದರೆ ಚೆನ್ನಾಗಿರುತ್ತೆ, ಇದೇ ನಡೆಯಬೇಕು ಅಂದುಕೊಳ್ಳುತ್ತೇವೆ. ಭಗವಂತ ಎನ್ನುವವನು ಈಗಾಗಲೇ ನಮ್ಮ ಜೀವನವನ್ನ ಹೇಗೆ ನಡೆಸಬೇಕು ಎಂದು ನಿರ್ಧರಿಸಿರುತ್ತಾನೋ, ಹಾಗೆಯೇ ನಡೆಯುತ್ತದೆ. ಅದರ ಮಧ್ಯೆ ನಾವು ತುಂಬಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇವೆ. ಆದರೆ, ಅದು ಯಾವುದೂ ವರ್ಕೌಟ್ ಆಗುವುದಿಲ್ಲ ಎಂಬುವುದು ನನಗೆ ಕೆಲವು ಅನುಭವಗಳಾದ ಮೇಲೆಯೇ ಅರ್ಥವಾಗಿದ್ದು”.“2024 ಡಿಸೆಂಬರ್ ಎಂದಿಗೂ ನಾನು ಮರೆಯಲು ಸಾಧ್ಯವಿಲ್ಲ. ಮತ್ತು ಇಂತಹ ಒಂದು ವಿಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ನಾನು ಎಂದೂ ಕೂಡ ಅಂದುಕೊಂಡಿರಲಿಲ್ಲ. ಇವೆಲ್ಲವನ್ನೂ ನಾನು ನಿಮ್ಮೊಂದಿಗೆ ಹೇಳಿಕೊಳ್ಳಲು ಇಷ್ಟು ದಿನಗಳು ಬೇಕಾಯಿತು ಎಂದರೆ, ನೀವೆಲ್ಲರೂ ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನಾನು ಎಂದಿಗೂ ಹೇಳಿಕೊಳ್ಳಬಾರದು ಎಂದೇ ಅಂದುಕೊಂಡಿದ್ದೆ. ಮತ್ತು ಇದುವರೆಗೆ ನನ್ನ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿಯೂ ಕೂಡ ಹಾಕಿಲ್ಲ, ಯಾರಿಗೂ ಕೂಡ ಹೇಳಿಲ್ಲ”.“ಡಿಸೆಂಬರ್ 27 ರಿಂದ ಅಮ್ಮನಿಗೆ ಕೆಲವು ಆರೋಗ್ಯದ ಸಮಸ್ಯೆಗಳು ಪ್ರಾರಂಭವಾದವು. ಅದಕ್ಕಿಂತ ಮುಂಚೆಯೇ ಕೆಲವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದಾಗ ಅಮ್ಮ ತುಂಬಾ ನಿರ್ಲಕ್ಷ್ಯ ಮಾಡಿದ್ದಳು. "ಅಯ್ಯೋ ಏನೂ ಆಗುವುದಿಲ್ಲ, ನೆಗಡಿ ಅಷ್ಟೇ ಅಲ್ವಾ, ಟ್ಯಾಬ್ಲೆಟ್ ಹಾಕಿಕೊಂಡಿದ್ದೇನೆ, ಕಷಾಯ ಕುಡಿದಿದ್ದೇನೆ, ಕಡಿಮೆಯಾಗಿದೆ" ಅದು ಇದು ಎನ್ನುತ್ತಿದ್ದಳು. ಆದರೆ ಯಾವಾಗ ಗಂಭೀರವಾಯಿತೋ, ಆಗ ಅದು ಹೊರಬಂತು. ಅದು ಹೊರಬರುವಷ್ಟರಲ್ಲಿ ತುಂಬಾ ಗಂಭೀರವಾಗಿಬಿಟ್ಟಿತ್ತು. ಹಾಗೆಂದ ಮಾತ್ರಕ್ಕೆ ಅಮ್ಮನ ಆರೋಗ್ಯವನ್ನು ನಾನು ನಿರ್ಲಕ್ಷ್ಯ ಮಾಡಿದೆನಾ ಅಥವಾ ಅಮ್ಮ ನಿರ್ಲಕ್ಷ್ಯ ಮಾಡಿದಳಾ ಎಂದರೆ..ಗೊತ್ತಿಲ್ಲ”.“2024 ಡಿಸೆಂಬರ್ 27ಕ್ಕೆ ಆಸ್ಪತ್ರೆಗೆ ಹೋಗುವುದು ನಡೆಯಿತು. ಆದರೆ ಅವರು ಕೆಲವು ರೀತಿಯ ಪರೀಕ್ಷೆಗಳನ್ನು ಮಾಡಿದರು. ಅದಾದ ನಂತರ 2025 ಜನವರಿ 23 ರಂದು ಅಮ್ಮನಿಗೆ ಒಂದು ಪ್ರಮುಖ ಪರೀಕ್ಷೆಯನ್ನು ಮಾಡಿದರು. 28ರಂದು ನಮಗೆ ವರದಿ(ರಿಪೋರ್ಟ್) ಬಂತು. ಆ ವರದಿ ಬರುವವರೆಗಿನ ಒಂದು ವಾರದ ಮಧ್ಯೆ ನಾನು, ನನ್ನ ಕುಟುಂಬ ತುಂಬಾ ತುಂಬಾ ಕಷ್ಟಪಟ್ಟೆವು. ದೇವರಿಗೆ ಎಲ್ಲಾ ರೀತಿಯ ಹರಕೆಗಳನ್ನು ಹೊತ್ತುಕೊಂಡೆವು, ತುಂಬಾ ಪ್ರಾರ್ಥನೆ ಮಾಡಿದೆವು. ನಾವು ಏನನ್ನು ಅಂದುಕೊಳ್ಳುತ್ತಿದ್ದೇವೋ, ಆ ವರದಿಯಲ್ಲಿ ಅದು ಬಾರದೆ, ಕೇವಲ ನಾರ್ಮಲ್ ಎಂದು ಬಂದರೆ ಸಾಕು ಅಂದುಕೊಂಡಿದ್ದೆವು. ಆದರೆ ನಾವು ಅಂದುಕೊಂಡಂತೆ ಅದು ಬರಲಿಲ್ಲ”.“2025 ಜನವರಿ 28ರಂದು ಅಮ್ಮನ ವರದಿ ಪಾಸಿಟಿವ್ ಬಂತು. ಕ್ಯಾನ್ಸರ್ ಇದೆ ಎಂದು ನಮಗೆ ವರದಿಯಲ್ಲಿ ಬಂತು. ಆ ದಿನವಂತೂ ಸತ್ತುಹೋಗಬೇಕೆಂದು ಅನಿಸಿತು, ಏಕೆಂದರೆ ಅಷ್ಟು ಸುಲಭವಾಗಿ ನಾವು ಯಾವುದನ್ನೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಆ ದಿನವೂ ನಾನು ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂದೆ ಏನು? ಏನು ಮಾಡಬೇಕು? ಆದರೆ ಅಮ್ಮನಿಗೆ ಈ ವಿಷಯ ತಿಳಿಯಬಾರದು. ಆದರೆ ನಮ್ಮೆಲ್ಲರೂ ಇದ್ದು ಅಮ್ಮನನ್ನು ಪ್ರೇರೇಪಿಸುತ್ತಾ ಆಕೆಯನ್ನು ಧೈರ್ಯವಾಗಿ ನಿಲ್ಲಿಸಿ ಚಿಕಿತ್ಸೆಯನ್ನು ಪ್ರಾರಂಭಿಸಬೇಕು ಎಂದು ಚಿಕಿತ್ಸೆ ಪ್ರಾರಂಭಿಸಿದೆವು. ಕ್ಯಾನ್ಸರ್‌ಗೆ ಕೆಲವು ಚಿಕಿತ್ಸೆಗಳು ನಡೆಯುತ್ತಲೇ ಇರುತ್ತವೆ”.“21 ದಿನಗಳಿಗೊಮ್ಮೆ ಕೀಮೋಗಳು, ಇಂಜೆಕ್ಷನ್‌ಗಳು, ಎಲ್ಲವನ್ನೂ ಮಾಡುತ್ತಲೇ ಇದ್ದರು. ಎಲ್ಲಾ ಔಷಧಿಗಳು ಪ್ರಾರಂಭವಾದವು, ಮಾಡುತ್ತಲೇ ಇದ್ದೆವು. ನೋಡ ನೋಡುತ್ತಿದ್ದಂತೆ ಅಮ್ಮನನ್ನು ನೋಡಲು ಸಾಧ್ಯವಾಗಲಿಲ್ಲ, ಎಲ್ಲಾ ರೀತಿಯ ಔಷಧಿಗಳು, ಯಾರು ಏನು ಹೇಳಿದರೋ ನಮ್ಮ ಕಡೆಯಿಂದ ಏನೆಲ್ಲಾ ಪ್ರಯತ್ನ ಮಾಡಬಹುದೋ, ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡಿದೆವು. ಆದರೆ ಏನಪ್ಪಾ ಅಂದರೆ ಅಮ್ಮನಿಗೆ ಶ್ವಾಸಕೋಶದ ಕ್ಯಾನ್ಸರ್(ಲಂಗ್ ಕ್ಯಾನ್ಸರ್) ಬಂದಿತ್ತು. ಅದೂ ನಾಲ್ಕನೇ ಹಂತದಲ್ಲಿದ್ದಾಗ(ಫೋರ್ತ್ ಸ್ಟೇಜ್) ತಿಳಿದುಬಂದಿದ್ದರಿಂದ ನಾವು ಕೂಡ ಏನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ನಮ್ಮ ಕಡೆಯಿಂದ ಸಾಧ್ಯವಾದಷ್ಟು ಮಟ್ಟಿಗೆ ತುಂಬಾ ರೀತಿಯ ಪ್ರಯತ್ನಗಳನ್ನು ಮಾಡಿದೆವು”.“2025 ರಿಂದ 2026 ರವರೆಗೆ, ಅಂದರೆ ಅಕ್ಷರಶಃ ಒಂದೂವರೆ ವರ್ಷ ನಮ್ಮ ಅಮ್ಮ ಎಷ್ಟು ಅನುಭವಿಸಿದಳೋ... ಜೀವನದಲ್ಲಿ ಯಾವ ಮನುಷ್ಯನೂ, ಯಾವ ಶತ್ರುವೂ ಕೂಡ ಇಷ್ಟು ಕಷ್ಟಪಡಬಾರದು ಎಂದು ಅಂದುಕೊಂಡೆವು. ಆದರೆ, ನನ್ನ ಅಕ್ಕ, ನನ್ನ ಅಣ್ಣ ಎಲ್ಲರೂ ಅಮ್ಮನ ಹತ್ತಿರವೇ ಇದ್ದು ನೋಡಿಕೊಂಡರು. ಆಕೆ ಅಷ್ಟು ಕಷ್ಟಪಡುವುದನ್ನು ನಾನು ನೋಡಲು ಸಾಧ್ಯವಾಗಲಿಲ್ಲ, ನನಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ನಮ್ಮ ಅಮ್ಮ ಇರುವವರೆಗೂ ಅಮ್ಮನಿಗೆ ನಿನಗೆ ಇಂತಹ ಕಾಯಿಲೆ ಇದೆ ಎಂದು ಎಲ್ಲೂ ತಿಳಿಯದಂತೆ ನೋಡಿಕೊಳ್ಳುತ್ತಾ, ಮೋಟಿವೇಟ್ ಮಾಡುತ್ತಾ, ಆರೈಕೆ ಮಾಡುತ್ತಾ ಬಂದೆವು”.“2026 ಜನವರಿಯಲ್ಲೇ ನಾವು ಭರವಸೆಗಳನ್ನೆಲ್ಲಾ ಕಳೆದುಕೊಂಡೆವು. ಎಲ್ಲರೂ ಒಂದು ದಿನ ಸಾಯುತ್ತೇವೆ. ಆದರೆ, ನಮ್ಮ ಜೊತೆಯಲ್ಲಿರುವ ವ್ಯಕ್ತಿ ಇನ್ನು 24 ಗಂಟೆಗಳಲ್ಲಿ ಸಾಯುತ್ತಾರೆ, ಇನ್ನು 72 ಗಂಟೆಗಳಲ್ಲಿ ಹೋಗುತ್ತಾರೆ, ನಮ್ಮ ಕಣ್ಣೆದುರೇ ಅಷ್ಟು ಕಷ್ಟಪಡುವುದು, ಇವೆಲ್ಲವನ್ನೂ ಸ್ವೀಕರಿಸಬೇಕೆಂದರೆ ಜೀವನ ನರಕ. ನಾವು ಇದ್ದರೂ ಒಂದೇ, ಸತ್ತರೂ ಒಂದೇ. ಅವರಿಗೆ ಆರೋಗ್ಯ ಸಮಸ್ಯೆ ಬಂದು ಅಷ್ಟು ಕಷ್ಟಪಡುವುದು ಒಂದು ಕಡೆಯಾದರೆ, ಅವರನ್ನು ನೋಡಿ ಕಷ್ಟಪಡುವುದು ಇನ್ನೊಂದು ಕಡೆ”.“ನನ್ನ ಕುಟುಂಬದಲ್ಲಿ ವೈದ್ಯರು ಹೇಳಿದ ಪ್ರತಿಯೊಂದು ಔಷಧಿ, ಪ್ರತಿಯೊಂದು ಚಿಕಿತ್ಸೆ ಎಲ್ಲವನ್ನೂ ಕೊಡಿಸಿದ ನನ್ನ ಕುಟುಂಬದವರು. ಎಂದಿಗೂ ನನಗೆ ಇದು ಬೇಡ, ಅದು ಬೇಡ, ಮಾಡಬೇಡ ಎಂದು ಎಲ್ಲಿಯೂ ಹೇಳದೆ, ನಾನು ಏನು ಮಾಡಿದರೂ, ವೈದ್ಯರು ಏನು ಹೇಳಿದರೂ, ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡಿದೆವು. ಕೀಮೋದಿಂದ ಹಿಡಿದು ರೇಡಿಯೇಶನ್ ಥೆರಪಿಯವರೆಗೆ, ಇಮ್ಯುನೊಥೆರಪಿಯವರೆಗೆ ಎಲ್ಲವನ್ನೂ, ಆದರೆ ಇಲ್ಲಿ ಒಂದನ್ನಂತೂ ನಾನು ಜೀವನದಲ್ಲಿ ಕಲಿತಿದ್ದೇನೆ, ಅದೇನೆಂದರೆ... ನಿಮ್ಮ ಹತ್ತಿರ ಎಷ್ಟೇ ದುಡ್ಡಿದ್ದರೂ, ಏನೇ ಇದ್ದರೂ, ನಮ್ಮ ಕೈಯಲ್ಲಿ ಕೆಲವು ಇಲ್ಲ ಎಂದಾಗ ನಾವು ಏನೂ ಮಾಡಲು ಸಾಧ್ಯವಿಲ್ಲ. ಆರೋಗ್ಯ ಎನ್ನುವುದು ತುಂಬಾ ತುಂಬಾ ತುಂಬಾ ಮುಖ್ಯ ಎಂದು”.“2026 ಫೆಬ್ರವರಿ 11ರಂದು ನಾನು ನನ್ನ ಅಮ್ಮನನ್ನು ಕಳೆದುಕೊಂಡೆ. ಆಕೆ ಇನ್ನು ಇಲ್ಲ. ಐದು ತಿಂಗಳಾಯಿತು. ಐದು ತಿಂಗಳು ಹೇಗೆ ಕಳೆಯಿತೋ ತಿಳಿಯುತ್ತಿಲ್ಲ. ಆಕೆ ಇಲ್ಲ, ನಮ್ಮೊಂದಿಗೆ ಇಲ್ಲ ಎನ್ನುವುದು ಇಂದಿಗೂ, ಈ ಕ್ಷಣಕ್ಕೂ ಕೂಡ ನಮಗೆ ನೆನಪಿಸುತ್ತಲೇ ಇರುತ್ತದೆ. ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಮಾನಸಿಕವಾಗಿ ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದಲ್ಲಿ, ನಮ್ಮ ಮನೆಗಳಲ್ಲಿ, ನಮ್ಮ ಪ್ರತಿಯೊಂದು ಜಾಗದಲ್ಲೂ, ಪ್ರತಿಯೊಂದು ಜಾಗದಲ್ಲೂ ನಮ್ಮ ಅಮ್ಮ ಇದ್ದಾಳೆ. ಈ ಒಂದು ಸುದ್ದಿಯನ್ನು ಹೇಳಿಕೊಳ್ಳುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಈ ಪರಿಸ್ಥಿತಿಯಿಂದ ನಾನು ಹೊರಗೆ ಬರಬೇಕೆಂದರೆ ತುಂಬಾ ತುಂಬಾ ಸಮಯ ಬೇಕಾಯಿತು”.“ಹೌದು, ನಿಶ್ಚಿತಾರ್ಥವಾಗಿ ತುಂಬಾ ದಿನಗಳಾದವು, ಮದುವೆ ಮಾಡಿಕೊಳ್ಳಬೇಕು, ಅದು ನಮಗೂ ಗೊತ್ತು. ಮಾಡಿಕೊಳ್ಳಬೇಕು ಎಂದರೆ ಕೆಲವು ಪರಿಸ್ಥಿತಿಗಳಿಂದಾಗಿ ನಮಗೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವು ಆಚರಣೆಗಳಿರುತ್ತವೆ, ಕೆಲವು ಪರಿಸ್ಥಿತಿಗಳಿರುತ್ತವೆ. ಮದುವೆ ಎಂದರೆ ಒಂದು ಸಿದ್ಧತೆ. ಮನೆಯಲ್ಲಿ ಇಂತಹ ಒಂದು ದೊಡ್ಡ ಪರಿಸ್ಥಿತಿಯನ್ನು ಇಟ್ಟುಕೊಂಡು ಮದುವೆ ಮಾಡಿಕೊಳ್ಳಬೇಕೆಂದರೆ ಯಾರ ಕೈಯಲ್ಲೂ ಸಾಧ್ಯವಿಲ್ಲ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮದುವೆ ಎನ್ನುವುದು ನಮ್ಮ ಅಮ್ಮನ ದೊಡ್ಡ ಕನಸಾಗಿತ್ತು. ಅದನ್ನೇ ನನಗೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ ಎನ್ನುವ ಗಿಲ್ಟ್ ಇಂದಿಗೂ ಕೂಡ ನನಗೆ ಉಳಿದುಹೋಗಿದೆ”.“ನಾವಿಬ್ಬರೂ(ಭಾವ ಪತಿ) ಚೆನ್ನಾಗಿಯೇ ಇದ್ದೇವೆ. ನೀವು ಏನೇನು ಅಂದುಕೊಳ್ಳುತ್ತಿದ್ದೀರೋ ಹಾಗಿಲ್ಲ. ನಾವಿಬ್ಬರೂ ನಮ್ಮ ಜೀವನದಲ್ಲಿ ಸಂತೋಷವಾಗಿದ್ದೇವೆ. ಅಷ್ಟೇ, ಇದಕ್ಕಿಂತ ಹೆಚ್ಚಾಗಿ ನಾನೇನೂ ಹೇಳಿಕೊಳ್ಳಲು ಇಷ್ಟಪಡುತ್ತಿಲ್ಲ. ನನ್ನ ಕುಟುಂಬದವರು ನನ್ನನ್ನ ಧೈರ್ಯವಾಗಿ ನಿಲ್ಲಿಸಿದ್ದಾರೆ. ತುಂಬಾ ಸ್ಟ್ರಾಂಗ್ ಆಗಿದ್ದೇನೆ.”ಎಂದು ನಟಿ ಶೋಭಾ ಶೆಟ್ಟಿ ಅವರು ಅಮ್ಮನ ಅಗಲಿಕೆಯ ನೋವನ್ನ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ನೋವು ತೋಡಿಕೊಂಡಿದ್ದಾರೆ. #💔 ಖ್ಯಾತ ನಟಿಯ ಬಾಳಲ್ಲಿ ಮಡುಗಟ್ಟಿದ ನೋವು 😔🕊️
279 likes
3 comments 392 shares

More like this