ರಾಧಾಕೃಷ್ಣ 🦚💙
364 views • 15 hours ago
#ಚಾತುರ್ಮಾಸ್ಯ #❄️ರಂಗೋಲಿ #ಜೈ ಶ್ರೀ ಕೃಷ್ಣ🙏🙏🙏🙏🙏🙏
#ಚಾತುರ್ಮಾಸ್ಯದ #ರಂಗೋಲಿ
ಈ ರಂಗೋಲಿಯನ್ನು ಕೃಷ್ಣ ತನ್ನ ತಂಗಿಗೆ ಉಪದೇಶ ಮಾಡಿದ್ದು
ಈ ರಂಗೋಲಿ ಚಾತುರ್ಮಾಸ್ಯ ಪೂರ್ಣ ಹಾಕಿ ತುಪ್ಪದ ದೀಪ ಹಚ್ಚಿ ಹಾಲು ಸಕ್ಕರೆ ನೈವೇದ್ಯ ಮಾಡಬೇಕು . ಇದೇ ಏಕಾದಶಿಯಂದು ವ್ರತ ಧಾರಣೆ ಮಾಡಬೇಕು
ಈ ವ್ರತದ ಬಗ್ಗೆ #ಶ್ರೀಕೃಷ್ಣ ತನ್ನ ತಂಗಿ #ಸುಭದ್ರೆಗೆ ಹೇಳಿದ್ದು ,ಮಣೆಯ ಮೇಲೆ ಗೋಕುಲ ಅಂತ ಸುತ್ತಲೂ 4 ಗೀರು ಹಾಕಿ ಅದರಲ್ಲಿ ಶ್ರೀಕಾರ, ಶಂಖ,ಚಕ್ರ ಗದ,ಪದ್ಮ,ರಾಮನ ತೊಟ್ಟಿಲು,ಸೀತೆ ಸೆರಗು, ಕೊಳಲು,ತಂತಿ ಬೇಲಿ, ಚತುರ್ಭುಜ ನಾರಾಯಣ,ಕೂರ್ಮ , ಗರುಡ , ಶೇಷ, ಸೂರ್ಯ ಚಂದ್ರ ,ಆನೆಗಳು ,ತುಳಸಿ ಕಟ್ಟೆ,ತುಳಸಿ ದಳ,ಪಾದಗಳು,ಗೋಪಾದ ದ್ವಾರಪಾಲಕರು ,ಆಕಳು ಕರು, ಸ್ವಸ್ತಿಕ, 33ಪದ್ಮಗಳು ಲಕ್ಷ್ಮೀ ಸಹಿತ ನಾರಾಯಣ ಕುಳಿತಿರುವಂತೆ , ತುಳಸಿ ಗಿಡ, ದೀಪ ಹಚ್ಚಿ ಅರಿಶಿನಕುಂಕುಮದಿಂದ ಪೂಜಿ ಸುತ್ತಲೂ 33 ಪ್ರದಕ್ಷಿಣೆ ನಮಸ್ಕಾರ ಹಾಕಬೇಕು ಹಾಗೂ 5 ವರ್ಷ ಈವ್ರತ ಆಚರಿಸಿ ಸಹೋದರನಿಗೆ ಬಾಗಿನ ಕೊಡಬೇಕು
1ನೇವರ್ಷ ಬೆಳ್ಳಿ ಬಟ್ಟಲಲ್ಲಿ ಶಾವಿಗೆ ಪಾಯಸ ,
2ನೇವರ್ಷ ಮೂವತ್ಮೂರು ಮಂಡಿಗೆ(ಸಕ್ಕರೆಹೋಳಿಗೆ)
3ನೇವರ್ಷ ಮೂವತ್ಮೂರು ಚಕ್ಕುಲಿ, 4ನೇವರ್ಷ
ಮೂವತ್ಮೂರು ಕರಿಗಡಬು 5ನೆ ಹಾಗೂ ಕಡೆ ವರ್ಷ
ಮೂವತ್ಮೂರು ಅಪೂಪ ದಾನ 33 ಇರುವಂತೆ ಕೊಡಬೇಕು,ಅದು ಅಣ್ಣ ಅಥವಾ ತಮ್ಮನಿಗೇ ಕೊಡಬೇಕು. ಅಕಸ್ಮಾತ್ ತಮ್ಮ ಅಣ್ಣ ಇಲ್ಲದವರು ಅಳಿಯನಿಗೆ ಕೊಡಬೇಕು. ಅಳಿಯನು ಇಲ್ಲದಿದ್ದರೆ ಆಚಾರ್ಯ ರಿಗೆ ದಾನ ಕೊಡಬೇಕು..
ರಂಗೋಲಿ ಹಾಕಿ ಈ ಕಥೆ ಹೇಳಿ
ಒಮ್ಮೆ ಇಂದ್ರನ ಆಸ್ಥಾನದಲ್ಲಿ ಅಪ್ಸರೆ ರಂಭೆ ನೃತ್ಯ ಮಾಡುತ್ತಿದ್ದಳು. ಆಗ ಮೃದಂಗದ ಚರ್ಮ ಹರಿದು ಹೋಯಿತು. ಆಗ ಇಂದ್ರನು ಯಮನಿಗೆ ಚಾತುರ್ಮಾಸ್ಯದ ರಂಗೋಲಿ ಯಾರು ಯಾವ ವ್ರತವನ್ನೂ ಮಾಡುವುದಿಲ್ಲವೊ ಅವರನ್ನು ಕೊಂದು ಅವರ ಬೆನ್ನು ಚರ್ಮದಿಂದ ಮೃದಂಗವನ್ನು ಸರಿಮಾಡು ಎಂದು ಹೇಳಿದನು಼.
ಯಮನು ತನ್ನ ಬಟರನ್ನು ಕರೆದು ಯಾರು ಯಾವ ಚಾತುರ್ಮಾಸ್ಯ ದ ವ್ರತವನ್ನು ಮಾಡುವುದಿಲ್ಲವೊ ಅವರನ್ನು ಕೊಂದು ಅವರ ಬೆನ್ನು ಚರ್ಮವನ್ನು ತನ್ನಿ ಎಂದು
ಆಜ್ಞೆ ಮಾಡಿದನು.
ಸ್ವಲ್ಪ ಕಾಲನಂತರ ಯಮನ ಬಂಟರು ಹಿಂದಿರುಗಿ ಗಂಗಾ, ಗೌರಿ, ಸಾವಿತ್ರಿ ಮತ್ತು ಸರಸ್ವತಿ ರಂಗೋಲಿ ಹಾಕಿದ್ದಾರೆ. ಆದರೆ ಕೃಷ್ಣನ
ತಂಗಿ ಸುಭಧ್ರ ಚಾತುರ್ಮಾಸ್ಯ ದ ರಂಗೋಲಿ ಇಲ್ಲ ಎಂದು ಹೇಳಿದರು.
ಆಗ ಯಮನು ಬಟರಿಗೆ ಸುಭಧ್ರೆಯ ಚರ್ಮತಂದು ಮೃದಂಗವನ್ನು ಸರಿಪಡಿಸಿ ಎಂದು ಆಜ್ಞೆ ಮಾಡಿದನು಼.
ಕೃಷ್ಣನು ಬೆಳಿಗ್ಗೆ ಸುಭಧ್ರೆಯ ಮನೆಗೆ ಬಂದು ಯಾಕಮ್ಮ ತಂಗಿ ಚಾತುರ್ಮಾಸ್ಯ ದ ರಂಗೋಲಿಯನ್ನು ಯಾಕೆ ಹಾಕಿಲ್ಲವಂದು ಸುಭಧ್ರೆಯನ್ನು ಕೇಳಿದನು.
ಸುಭದ್ರೆಯು
ನನಗೆ ಇಂದ್ರ,ಚಂದ್ರನಂತಹ ಅಣ್ಣಂದಿರು,ಅರ್ಜುನಂತಹ ಗಂಡ,ವಸುದೇವ ದೇವಕಿಯಂತಹ ತಾಯಿತಂದೆಯರು ಎಲ್ಲಕ್ಕಿಂತ ಹೆಚ್ಚಾಗಿ ನೀನು
ಇರುವಾಗ ನನಗೆಂತಹ ಭಯವೆಂದು ಹೇಳಿದಳು.
ಕೃಷ್ಣನು ಇದೆಲ್ಲವೂ ಇದ್ದರೂ ಸಹ ನೀನು ಮನೆಯ ಮುಂದೆ ತುಳಿಸಿ ಕಟ್ಟೆಯ ಮುಂದೆ ಮತ್ತು
ಸರ್ವ ತೀರ್ಥಗಳು ಹರಿಯುವ ಹಸುವಿನ ಕೊಟ್ಟಿಗಯಲ್ಲಿ ಗರುಡ,ವಿಷ್ಣಪಾದ,ಶಂಕ,ಚಕ್ರ,ಗಧಾ,ಕಮಲದ ಹೂವು, ಸ್ವಸ್ತಿಕ, ಬೃಂದಾವನ,
ಕೊಳಲು,ರಾಮನ ತೊಟ್ಟಿಲು,ಸೀತೆಯ ಸೀರೆ , ತುಳಸಿ ಎಲೆ, ಆನೆ ಹಸು ಕರು ಮತ್ತು ಮೂವತ್ತ ಮೂವತ್ತು ಮೂರು ಕೋಟಿ ದೇವತೆಗಳನ್ನು
ಪ್ರತಿನಿದಿಸುವ ಕಮಲಗಳನ್ನು,ಆನೆ ಮತ್ತು ಸೈನಿಕರು ಇವುಗಳ ರೂಪವನ್ನು ರಂಗೋಲಿಯಲ್ಲಿ ಹಾಕಬೇಕೆಂದು ಹೇಳಿದನು.
ಸುಭಧ್ರೆಯು
ಗಟ್ಟಿಯಾದ ಕಲ್ಲು ತರಿಸಿ ಮುತ್ತು ಹವಳ ಮುಂತಾದವು ಹಾಕಿ ಚನ್ನಾಗಿ ಪುಡಿಮಾಡಿ ರಂಗೋಲಿ ಹಾಕಿದಳು. ಐದು ವರ್ಷ ಹಾಕ ಬೇಕಾಗಿದ್ದ
ರಂಗೋಲಿಯನ್ನು ಒಂದೇ ವರುಷದಲ್ಲಿ ಹಾಕಿದಳು.
ಅದಕ್ಕೆ ಅರಸಿನ ಮತ್ತು ಕುಂಕುಮ ಹಚ್ಚಿ ಪೂಜೆ ಮಾಡಿದಳು. ಈ ವ್ರತವನ್ನು ಮಾಡಿದ್ದರಿಂದ
ಸುಭಧ್ರೆಯು ಶಿಕ್ಷೆಯಿಂದ ತಪ್ಪಿಸಿ ಕೊಂಡಳು..ಗೋಪದ್ಮ ವ್ರತವನ್ನು ಹೆಂಗಸರು ಐಶ್ವರ್ಯ,ಆರೋಗ್ಯ,ಸಂಪತ್ತು,ಮದುವೆ ಮಕ್ಕಳು ಮುಂತಾದ ಸೌಭಾಗ್ಯ ಪಡೆಯಲು ಮಾಡುತ್ತಾರೆ
ನೋಡಿಕೊಂಡು ಹಾಕಿ .
ವಿಶೇಷ ಸೂಚನೆ
ಏಕಾದಶಿ ಮತ್ತು ದ್ವಾದಶಿ:
ಏಕಾದಶಿ ದಿನದಂದು ಮಾತ್ರ, ನೀವು ದ್ವಾದಶಿ ಎಣಿಕೆಗಾಗಿ ಗೋ ಪದ್ಮದ ಇನ್ನೊಂದು ಸೆಟ್ ಅನ್ನು ಸೆಳೆಯಬಹುದು. ಆದರೆ ನೆನಪಿರಲಿ ಅರ್ಘ್ಯ ಮತ್ತು ನೀವೇದ್ಯವನ್ನು ದ್ವಾದಶಿ ದಿನ ಮಾತ್ರ ಮಾಡಬೇಕು.
ಆದರೆ ಪ್ರದಕ್ಷಿಣೆ ಮತ್ತು ನಮಸ್ಕಾರವನ್ನು ಏಕಾದಶಿಯಂದೇ ಮುಗಿಸಬಹುದು
ಅರ್ಘ ಪೂಜೆ ಹಿಂದೆ ಹಾಕಿದ ಮಾಹಿತಿ ಪೋಸ್ಟ್ ನಲ್ಲಿ ಇದೆ ನೋಡಿ
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏
14 likes
14 shares