"ಅಷ್ಟವಿಧಾರ್ಚನೆ ಷೋಡಶೋಪಚಾರವ
ಲಿಂಗಕ್ಕೆ ಮಾಡಿ, ಜಂಗಮಕ್ಕೆ ಮಾಡದವರ ಕಂಡರೆ ಭಕ್ತರೆಂತೆಂಬೆ? ಇಂದ್ರಿಯಂಗಳ ಬೆಂಬಳಿಯಲ್ಲಿ ಹೋಗಿ, ನಿಮ್ಮ ಚರಿತ್ರವ ನೆನೆಯದವರ ಕಂಡರೆ ಶರಣರೆಂತೆಂಬೆ? ಅನಿಮಿಷ ದೃಷ್ಟಿಯಲ್ಲಿ ನೋಡುವರ ಅನಿಮಿಷರೆಂದೆಂಬೆನೆ? ನೀವೆ ತಾನಾಗಿ ಮೈದೋರದವರ ಕಂಡರೆ, ಎನ್ನವಿಸ್ತಾರವೆಂಬೆ,
ಕೂಡಲಚೆನ್ನಸಂಗಮದೇವಾ.. ✍ ಚನ್ನಬಸವಣ್ಣನವರ ವಚನ.. ಸ.ವ.ಸಂ: ೩ವ.ಸಂ: ೫೬೦ #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #ವಚನಗಳು


