#📜ಪ್ರಚಲಿತ ವಿದ್ಯಮಾನ📜
ಸ್ವಾತಂತ್ರ್ಯ ಹೋರಾಟದ ನಿಜ ಬಂಡಾಯದ ಧ್ವನಿ ಸಿಂಧೂರ ಲಕ್ಷ್ಮಣ: ಡಾ.ಗೀತಾಂಜಲಿ ಕುರುಡಗಿ
ಬೆಳಗಾವಿ: ಇತಿಹಾಸವೆಂದರೆ ಕೇವಲ ಕೋಟೆ ಕೊತ್ತಲಗಳಲ್ಲಿ ಅಷ್ಟೇ ಇಲ್ಲ, ಗುಡಿಸಲುಗಳಲ್ಲಿ ಬಡತನದ ಬೇಗೆಯಲ್ಲಿ ಬೆಂದ ಕ್ರಾಂತಿಯ ಜ್ವಾಲೆಗಳಾಗಿ ಪ್ರಜ್ವಲಿಸಿದ ಸ್ವಾತಂತ್ರ್ಯ ಹೋರಾಟದ ನಿಜ ಬಂಡಾಯದ ಧ್ವನಿ ಸಿಂಧೂರ ಲಕ್ಷ್ಮಣ ಎಂದು ಡಾ. ಗೀತಾಂಜಲಿ ಕುರುಡಗಿ ಅಭಿಪ್ರಾಯಪಟ್ಟರು.
ರವಿವಾರ ಯುವ ಬರಹಗಾರರ ವೇದಿಕೆ, ಕರ್ನಾಟಕ, ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಬೆಳಗಾವಿಯ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯ ಸೇನಾನಿ ವೀರ ಸಿಂಧೂರ ಲಕ್ಷ್ಮಣ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಸಿಂಧೂರ ಲಕ್ಷ್ಮಣನ ಇಡೀ ಜೀವನ ಚರಿತ್ರೆಯನ್ನು ಸ್ವಾತಂತ್ರ್ಯ ಹೋರಾಟಗಳ ಹಿನ್ನಲೆಯಲ್ಲಿ ಕಟ್ಟಿ ಕೊಡುವ ಮೂಲಕ ಹೋರಾಟದ ಚರಿತ್ರೆಯನ್ನು ಕೇವಲ ಬ್ರಿಟಿಷ್ ಆಡಳಿತದ ಕಡತಗಳ ದೃಷ್ಟಿಯಲ್ಲಿ ನೋಡುವುದಕ್ಕಿಂತ ಜಾನಪದ ಸಾಹಿತ್ಯವಾದ ಲಾವಣಿ, ಸೋಬಾನೆ ಪದ, ಬಿಸುಕಲ್ಲಿನ ಹಾಡುಗಳಂತಹ ವೀರಗಾತೆಗಳನ್ನು ಗಮನಿಸಿದರೆ ಸಿಂಧೂರ ಲಕ್ಷ್ಮಣನ ನಿಜ ಚರಿತ್ರೆಯನ್ನು ಅರ್ಥೈಸಿಕೊಳ್ಳಬಹುದು. ಘಟ ಹೋದರೂ ಹಿಡಿದ ಹಠ ಬಿಡಲಾರದ ಜಗದಂಕ ಮಲ್ಲ, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ, ಆದರೆ ಭೌತಿಕವಾಗಿ ಇಲ್ಲದಿದ್ದರೂ ಪ್ರತಿಬಾರಿಯೂ ಬಡವರ ಕಣ್ಣೀರು ಒರೆಸಿದಾಗ ಲಕ್ಷ್ಮಣ ಮತ್ತೆ ಮತ್ತೆ ಹುಟ್ಟಿ ಬರುತ್ತಾನೆ ಎಂದರು.
ಕಾರ್ಯಕ್ರಮದ ಆಶಯ ಭಾಷಣ ಮಾಡಿದ ಯುವ ಬರಹಗಾರ ಡಾ. ನೀಲಪ್ಪ ವಾಲಿಕಾರ, ವಿಶ್ವವಿದ್ಯಾಲಯಗಳಲ್ಲಿ ಸಿಂಧೂರ ಲಕ್ಷ್ಮಣನ ಅಧ್ಯಯನ ಪೀಠಗಳನ್ನು ಆರಂಭಿಸಿ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಸತ್ಯ ಸಂಗತಿಗಳ ಚರಿತ್ರೆಯನ್ನು ಕಟ್ಟಿಕೊಡಬೇಕು, ಆ ಮೂಲಕ ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರೇಮವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿರುವ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಯುವ ಬರಹಗಾರರ ವೇದಿಕೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯ ಹಿರಿಯ ಸಾಹಿತಿ ಶಿ.ಗು.ಕುಸಗಲ್ಲ ಮಾತನಾಡಿ, ನಾವು ಬರೆಯದಿದ್ದರೂ ಇನ್ನೊಬ್ಬರ ಬರವಣಿಗೆಯ ಸ್ಪೂರ್ತಿ ಆಗಬೇಕು. ಅಂತಹ ವ್ಯಕ್ತಿತ್ವ ಸಿಂಧೂರ ಲಕ್ಷ್ಮಣನ ಹತ್ತಿರವಿತ್ತು. ನಾಡಿನ ಪ್ರಗತಿಯಲ್ಲಿ ಯುವಕರ ಪಾತ್ರ ಮಹತ್ವದ್ದು, ಯುವ ಸಮುದಾಯಕ್ಕೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಬೇಕಾಗಿದೆ. ಹೊಸದಾಗಿ ಬರವಣಿಗೆಯಲ್ಲಿ ತೊಡಗಿಕೊಂಡ ಲೇಖಕರಿಗೆ ವೇದನೆಯ ಜೊತೆಗೆ ಸಂವೇದನೆಗಳನ್ನು ದಾಖಲಿಸುವ ಶಕ್ತಿ ಇರಬೇಕು. ಬೆಳಗಾವಿಯ ಯುವ ಬರಹಗಾರರ ವೇದಿಕೆಯು ಸಿಂಧೂರ ಲಕ್ಷ್ಮಣನ ಕುರಿತು ಉಪನ್ಯಾಸವನ್ನು ಏರ್ಪಡಿಸಿದ್ದು ಸಮಾಜದಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ ಎಂದರು.
ಕಾರ್ಯಕ್ರಮದ ವಿಶೇಷತೆ ಎನ್ನುವಂತೆ ಕು. ಲಕ್ಷ್ಮೀ ಗಡಕರಿ ಹಾಡಿದ ಸಿಂಧೂರ ಲಕ್ಷ್ಮಣ ಲಾವಣಿಯ ಹಾಡು ಸಭೆಯನ್ನು ಮಂತ್ರಮುಗ್ದವಾಗಿಸಿತ್ತು. ವೇದಿಕೆ ಮೇಲೆ ಸಂಚಾಲಕ ಪ್ರೊ. ದೇಮಣ್ಣ ಸೊಗಲದ, ಡಾ ಬಾಲಕೃಷ್ಣ ನಾಯಕ, ಡಾ. ಮಂಜುನಾಥ ಪಾಟೀಲ, ಬಾಳೇಶ ದಾಸನಟ್ಟಿ ಉಪಸ್ಥಿತರಿದ್ದರು. ಭೀಮಶಿ ಕನಕನ್ನವರ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಪ್ರತಿಭಾ ಕಲ್ಲಿ ವಂದಿಸಿದರು. ಕು. ಈರಣ್ಣ ಬೇಟಗೇರಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಅಶೋಕ ಚಂದರಗಿ, ಡಾ. ಕೆ.ಎನ್. ದೊಡ್ಡಮನಿ, ಮಲ್ಲಿಕಾರ್ಜುನ ಲೋಕಳೆ, ಡಾ. ಮಹೇಶ ಗಾಜಪ್ಪನವರ, ಮಹೇಶ ಡಾಲೆ, ಡಾ. ಸತೀಶ್ ನಾಯ್ಕ್, ಜಿ.ಎ. ಗದಗ, ಪ್ರೊ. ಗೌರಿಶಂಕರ್ ಚಿಗರಿ, ಡಾ. ಎಂ.ಐ. ನದಾಫ, ಬರಮು ಕುರ್ಲಿ, ಸುನಿಲಕುಮಾರ ಜಮನಾಳ, ರಾಘವೇಂದ್ರ ಪೂಜಾರ್, ಆನಂದ ಪಟಾತ, ಕು. ಸುಜಾತ ಮತ್ತಿಕೊಪ್ಪ, ಸಾವಕ್ಕ ದೊಡ್ಡಮನಿ, ವೈಷ್ಣವಿ ಪಾಟೀಲ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
#SindhooraLakshmana #true #voice #rebellion #freedom #struggle #GeetanjaliKurudagi #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ಇದೇ ತಿಂಗಳ ೨೩ ರಂದು ಸಂಜೆ ೫ ಗಂಟೆಗೆ ನಮ್ಮ ನಡುವಿನ ಅಪರೂಪದ ಅನುವಾದಕರಾದ ಬಿ. ಸುಜ್ಞಾನಮೂರ್ತಿಯವರು ಅನುವಾದಿಸಿರುವ 'ಇಂದಿನ ಜಗತ್ತಿಗೆ ಬೌದ್ಧಧರ್ಮ' ಹಾಗೂ 'ಬೌದ್ಧಧರ್ಮದ ತಿರುಳು' ಎಂಬ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ. ತಾವು ತಪ್ಪದೇ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ತಮಗೆ ಪ್ರೀತಿಯ ಸ್ವಾಗತ.
- ಡಾ.ನರಸಿಂಹಮೂರ್ತಿ ಹಳೇಹಟ್ಟಿ
#malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
ಮೋದಿ ಕರೆಗೆ ಓಗೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ
ಬೆಂಗಳೂರು: ಇಂಧನ ಮಿತವ್ಯಯಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟು ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ತಮ್ಮ ಕಾರು ಮತ್ತು ಬೆಂಗಾವಲನ್ನು ಕಡಿತಗೊಳಿಸಿ ಸಾರ್ವಜನಿಕ ಸಾರಿಗೆ ಬಳಸಿದರು. ಕುಂಬಳಗೋಡಿನಲ್ಲಿ ನಡೆಯಲಿರುವ ಬೆಂಗಳೂರು ದಕ್ಷಿಣ ಪ್ರಶಿಕ್ಷಣ ವರ್ಗ ಕಾರ್ಯಾಗಾರದಲ್ಲಿ ಭಾಗಿಯಾಗಲು ಮೆಜೆಸ್ಟಿಕ್ - ಕೆಂಗೇರಿ ನಡುವೆ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮತ್ತು ಇತರರು ಹಾಜರಿದ್ದರು.
#malgudiexpress #malgudinews #news #TopNews
| Subscribe | Comment | Like | Share |
#🔴ಶಾಲೆ-ಕಾಲೇಜುಗಳಲ್ಲಿ ಹಿಜಾಬ್ಗೆ ಗ್ರೀನ್ ಸಿಗ್ನಲ್ ಕೊಟ್ಟ ಸರ್ಕಾರ!😮
ಮಕ್ಕಳಲ್ಲಿ ಬೇಧಭಾವ, ಆತಂಕದ ವಾತಾವರಣ ಸೃಷ್ಟಿಸುವ ಕೆಲಸ: ಬಸವರಾಜ ಬೊಮ್ಮಾಯಿ
ರಾಜ್ಯ Indian National Congress - Karnataka ಸರ್ಕಾರವು ಯಾವುದೇ ಬೇಡಿಕೆ ಇಲ್ಲದಿದ್ದರೂ, ಅತ್ಯಂತ ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯುತ್ತಿರುವ ಶಿಕ್ಷಣ ವ್ಯವಸ್ಥೆಯ ನಡುವೆ ಶಾಲೆಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಕಲ್ಪಿಸುವ ಮೂಲಕ ಧರ್ಮದ ಆಧಾರದಲ್ಲಿ ಮಕ್ಕಳಲ್ಲಿ ಬೇಧಭಾವ ಮೂಡುವಂತಹ ಆದೇಶವನ್ನು ಹೊರಡಿಸಿದೆ.
1980ರ ಶಾಲಾ ಸಮವಸ್ತ್ರ ಕಾಯ್ದೆಯ ಅಡಿಯಲ್ಲಿ ನಾವು ಸ್ಪಷ್ಟೀಕರಣಾತ್ಮಕ ಆದೇಶ ಹೊರಡಿಸಿದ್ದೆವು. ಅದನ್ನು ಹೈಕೋರ್ಟ್ ಕೂಡ ಸಮರ್ಥಿಸಿತ್ತು. ಸುಪ್ರೀಂ ಕೋರ್ಟ್ನಲ್ಲಿಯೂ ವಿಭಜಿತ ತೀರ್ಪು ಬಂದಿತ್ತು. ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವಾಗಲೇ, ಮಕ್ಕಳಲ್ಲಿ ಮತ್ತೆ ಬೇಧಭಾವ ಮತ್ತು ಆತಂಕದ ವಾತಾವರಣ ಸೃಷ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ರಾಜ್ಯ ಸರ್ಕಾರ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸಿದೆ. ಯಾವುದೇ ಸ್ಪಷ್ಟವಾದ ಶಿಕ್ಷಣ ನೀತಿ ಇಲ್ಲ. ವಿದ್ಯಾರ್ಜನೆ ಕುಂಠಿತವಾಗಿದೆ. ಶಿಕ್ಷಕರ ಕೊರತೆ ಗಂಭೀರವಾಗಿದೆ. ಇಂತಹ ವೈಫಲ್ಯಗಳನ್ನು ಮುಚ್ಚಿಹಾಕಲು ಈ ರೀತಿಯ ಆದೇಶಗಳನ್ನು ತರುತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ ಮಾಡಲು ಅನೇಕ ಅಭಿವೃದ್ಧಿ ಕೆಲಸಗಳಿವೆ. ಅವನ್ನು ಬದಿಗಿಟ್ಟು, ಈ ರೀತಿಯ ವಿವಾದಾತ್ಮಕ ಆದೇಶವನ್ನು ಏಕಾಏಕಿ ಜಾರಿಗೊಳಿಸಿರುವುದು ಯಾಕೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು. ಇದು ತುಷ್ಟೀಕರಣದ ರಾಜಕಾರಣ ಬಿಟ್ಟರೆ ಮತ್ತೇನೂ ಅಲ್ಲ ಎನ್ನುವುದು ಸ್ಪಷ್ಟವಾಗಿದೆ.
ಹಿಜಾಬ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಸೌದಿ ಅರೇಬಿಯಾ, ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಹಿಜಾಬ್ ತೊರೆದು ತಮ್ಮ ನಿತ್ಯ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಮಾತ್ರ ಹೆಣ್ಣುಮಕ್ಕಳನ್ನು ಹಿಂದುಳಿದ ಮನೋಭಾವಕ್ಕೆ ತಳ್ಳುವ ರೀತಿಯ ನಿರ್ಧಾರ ಕೈಗೊಂಡಿರುವುದು ಸೂಕ್ತವಲ್ಲ. ಸರ್ಕಾರ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಉಂಟಾಗುವ ಆತಂಕ ಮತ್ತು ಬೇಧಭಾವಕ್ಕೆ ಸರ್ಕಾರವೇ ನೇರ ಹೊಣೆಗಾರಿಯಾಗುತ್ತದೆ. ಕಾನೂನುಬದ್ಧವಾಗಿ ರಾಜ್ಯ ಸರ್ಕಾರವೇ ಹೊಸ ವಿವಾದಕ್ಕೆ ಕಾರಣವಾಗಿದೆ. ಇದು ನಾಗರಿಕ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ಇದು ಜವಾಬ್ದಾರಿಯುತ ಆಡಳಿತವಲ್ಲ, ಅತ್ಯಂತ ಬೇಜವಾಬ್ದಾರಿಯ ನಿರ್ಧಾರವಾಗಿದೆ.
- ಬಸವರಾಜ ಬೊಮ್ಮಾಯಿ, ಸಂಸದ
#Creating #atmosphere #discrimination #anxiety #children #BasavarajaBommai #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
ತುಟ್ಟಿ ಭತ್ಯೆಯನ್ನು ಶೇ. 2 ರಷ್ಟು ಹೆಚ್ಚಳದಿಂದ ಸುಮಾರು 16 ಲಕ್ಷ ಉದ್ಯೋಗಿಗಳು, ಶಿಕ್ಷಕರು ಮತ್ತು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಮತ್ತು ರಾಜ್ಯ ಖಜಾನೆಗೆ ರೂ.1,230 ಹೆಚ್ಚುವರಿ ವೆಚ್ಚವಾಗಲಿದೆ.
#tamilnadu #vijay #cm #ta #malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಜಯಂತಿ
ಬೆಳಗಾವಿಯಲ್ಲಿ ಮೇ 17 ರಂದು ವಿಶೇಷ ಉಪನ್ಯಾಸ ಕಾರ್ಯಕ್ರಮ
ಬೆಳಗಾವಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ತನ್ನದೇ ಆದ ಅಪ್ರತಿಮ ಶೌರ್ಯದ ಮೂಲಕ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಅವರ ಜಯಂತಿಯ ಅಂಗವಾಗಿ, ನಗರದ ಯುವ ಬರಹಗಾರರ ವೇದಿಕೆ ಒಂದು ಅರ್ಥಪೂರ್ಣ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ.
ಕಾರ್ಯಕ್ರಮದ ವಿವರ: ಮೇ 17, 2026ರ ಭಾನುವಾರ ಬೆಳಿಗ್ಗೆ 10:30 ಗಂಟೆಗೆ ಬೆಳಗಾವಿಯ 'ಮಾನವ ಬಂಧುತ್ವ ವೇದಿಕೆ'ಯಲ್ಲಿ ಈ ಸಮಾರಂಭ ಜರುಗಲಿದೆ. ಕಾರ್ಯಕ್ರಮ ಕೇವಲ ಭಾಷಣಕ್ಕೆ ಸೀಮಿತವಾಗದೆ, ಸಾಂಸ್ಕೃತಿಕ ಮತ್ತು ವೈಚಾರಿಕತೆಯ ಸಮ್ಮಿಲನವಾಗಿರಲಿದೆ.
ಪ್ರಮುಖ ಆಕರ್ಷಣೆಗಳು: ಲಾವಣಿ ಗಾಯನ: ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಲಕ್ಷ್ಮಿ ಗಡಕರಿ ಅವರು ಸಿಂಧೂರ ಲಕ್ಷ್ಮಣರ ಸಾಹಸಗಾಥೆಯನ್ನು ಸಾರುವ ಜನಪದ ಶೈಲಿಯ ಲಾವಣಿ ಹಾಡನ್ನು ಪ್ರಸ್ತುತಪಡಿಸಲಿದ್ದಾರೆ.
ವಿಶೇಷ ಉಪನ್ಯಾಸ: 'ಬೇಟಗೇರಿ ಕೃಷ್ಣಶರ್ಮ ಪ್ರತಿಷ್ಠಾನ'ದ ಸದಸ್ಯರಾದ ಡಾ. ಗೀತಾಂಜಲಿ ಕುರುಡಗಿ ಮುಖ್ಯ ಉಪನ್ಯಾಸ ನೀಡಲಿದ್ದು, ಸಿಂಧೂರ ಲಕ್ಷ್ಮಣರ ಹೋರಾಟದ ಹಾದಿ ಮತ್ತು ಇಂದಿನ ಯುವ ಪೀಳಿಗೆಗೆ ಅವರ ಸಂದೇಶದ ಕುರಿತು ಬೆಳಕು ಚೆಲ್ಲಲಿದ್ದಾರೆ.
ಗಣ್ಯರ ಉಪಸ್ಥಿತಿ: ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಶಿ.ಗು. ಕುಸುಗಲ್ಲ ಅವರು ವಹಿಸಲಿದ್ದಾರೆ. ಸಾಮಾಜಿಕ ಹೋರಾಟಗಾರರಾದ ಶ್ರೀ ಭೀಮಶಿ ಕನಕನ್ನವರ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬೆಳಗಾವಿಯ ಯುವ ಬರಹಗಾರರಾದ ಡಾ. ನೀಲಪ್ಪ ಪಾಲೇಕಾರ ಅವರು ಆಶಯ ಭಾಷಣ ಮಾಡಲಿದ್ದಾರೆ.
ಅತಿಥಿಗಳಾಗಿ ಪ್ರೊ. ದೇವಣ್ಣ ಸೊಗಲದ, ಡಾ. ಅ.ಬ. ಈಟಗಿ, ಶ್ರೀ ಬಾಲೇಶ ದಾಸನಟ್ಟಿ, ಡಾ. ಮಂಜುನಾಥ ಪಾಟೀಲ ಹಾಗೂ ಡಾ. ಬಾಲಕೃಷ್ಣ ನಾಯಿಕ ಸೇರಿದಂತೆ ನಾಡಿನ ಹಿರಿಯ ಚಿಂತಕರು ಉಪಸ್ಥಿತರಿರಲಿದ್ದಾರೆ.
ಸಾರ್ವಜನಿಕರಿಗೆ ಆಮಂತ್ರಣ: "ದೇಶಕ್ಕಾಗಿ ಬಲಿದಾನಗೈದ ವೀರನಿಗೆ ಗೌರವ ಸಲ್ಲಿಸೋಣ" ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಬೆಳಗಾವಿಯ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ವಿನಂತಿಸಿದ್ದಾರೆ.
ನಿರ್ವಹಣೆ:
ಕಾರ್ಯಕ್ರಮ ನಿರೂಪಣೆ: ಈರಣ್ಣ ಬೇಟಗೇರಿ
ವಂದನಾರ್ಪಣೆ: ಪ್ರತಿಭಾ ಕಲ್ಲಿ
#Krantiveera #Sangolli #Rayanna #Jayanti #malgudiexpress #malgudinews #news #TopNews
#📜ಪ್ರಚಲಿತ ವಿದ್ಯಮಾನ📜
#iran #earthquake #malgudiexpress #malgudinews #news #TopNews
| Subscribe | Comment | Like | Share |
#📜ಪ್ರಚಲಿತ ವಿದ್ಯಮಾನ📜
#malgudiexpress #malgudinews #news #TopNews
| Subscribe | Comment | Like | Share |
#😭ಕನ್ನಡದ ಖ್ಯಾತ ನಟ ಇನ್ನಿಲ್ಲ; ಹೃದಯಾಘಾತದಿಂದ ನಿಧನ💔😭
ಕನ್ನಡದ ನಟ ದಿಲೀಪ್ ರಾಜ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಿಲನ, ಯು ಟರ್ನ್, ಆರ್ಕೆಸ್ಟ್ರಾ ಮೈಸೂರು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು.
#DileepRaj #KannadaCinema #RIP #Sandalwood #KannadaActor #malgudiexpress #malgudinews #news #TopNews
| Subscribe | Comment | Like | Share |













