Malgudi Express
ShareChat
click to see wallet page
@news007
news007
Malgudi Express
@news007
Malgudi Express official Page
#📜ಪ್ರಚಲಿತ ವಿದ್ಯಮಾನ📜 ಫಲಿತಾಂಶ ಘೋಷಣೆಗೆ ಒಂದು ದಿನ ತಡ ಮಾಡಿದ್ದೇಕೆ?: ಆರ್‌.ಅಶೋಕ ಬೆಂಗಳೂರು: ಡಿ.ಎನ್‌.ಜೀವರಾಜ್‌ ಅವರ ಶಾಸಕ ಸ್ಥಾನದ ಫಲಿತಾಂಶ ಬಂದ ನಂತರವೂ ಚುನಾವಣಾಧಿಕಾರಿಗಳು ಫಲಿತಾಂಶ ಘೋಷಿಸಲು ಒಂದು ದಿನ ತಡ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರು ಯಾರೆಂದು ತಿಳಿಯಲು ಸಿಬಿಐ ತನಿಖೆ ಮಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು. ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ಬಳಿಕ ಶಾಸಕರಾಗಿ ಆಯ್ಕೆಯಾದ ಡಿ.ಎನ್.ಜೀವರಾಜ್ ಅವರಿಗೆ ಸ್ಪೀಕರ್‌ ಯು.ಟಿ.ಖಾದರ್ ವಿಧಾನಸೌಧದಲ್ಲಿ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌.ಅಶೋಕ, ಶೃಂಗೇರಿ ಶಾಸಕರಾದ ಡಿ.ಎನ್‌.ಜೀವರಾಜ್‌ ಅಧಿಕೃತವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ನಾಯಕರು ವೋಟ್‌ ಚೋರಿ ಬಗ್ಗೆ ಮಾತಾಡುತ್ತಾರೆ. ಶೃಂಗೇರಿಯಲ್ಲಿ ಕೊನೆಯಲ್ಲಿ ಅಂಚೆ ಮತಗಳನ್ನು ಎಣಿಸಲಾಗಿದೆ. ಇಲ್ಲಿ ಚುನಾವಣಾಧಿಕಾರಿಗಳಿಗೆ ಫೋನ್‌ ಕರೆ ಮಾಡಿ ಒತ್ತಡ ಹಾಕಿದವರು ಯಾರು ಎಂಬುದು ಸಿಬಿಐ ತನಿಖೆಯಿಂದ ಬಯಲಾಗಬೇಕಿದೆ. ಮರು ಎಣಿಕೆಯಲ್ಲಿ ಫಲಿತಾಂಶ ಗೊತ್ತಾದ ಕೂಡಲೇ ಚುನಾವಣಾ ಆಯೋಗದಿಂದ ಪ್ರಮಾಣಪತ್ರ ನೀಡಬೇಕೆಂದು ಕೋರ್ಟ್‌ ಆದೇಶದಲ್ಲಿ ತಿಳಿಸಲಾಗಿದೆ. ಆದರೂ ಒಂದು ದಿನ ತಡವಾಗಿ ಪ್ರಮಾಣಪತ್ರ ನೀಡಲಾಗಿದೆ. ಇಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದವರು ಯಾರೆಂದು ಗೊತ್ತಾಗಬೇಕಿದೆ ಎಂದರು. ಕಳೆದ ಮೂರು ವರ್ಷದಲ್ಲಿ ಎರಡು ಕ್ಷೇತ್ರಗಳಲ್ಲಿ ವೋಟ್‌ ಚೋರಿ ಆಗಿರುವುದು ತಿಳಿದುಬಂದಿದೆ. ಅದನ್ನು ಒಪ್ಪಿಕೊಳ್ಳದೆ ಕಾಂಗ್ರೆಸ್‌ ಆರೋಪಗಳನ್ನು ಮಾಡುತ್ತಿದೆ. ಸ್ಟ್ರಾಂಗ್‌ ರೂಮ್‌ನಲ್ಲಿ ಸಿಸಿಟಿವಿ ಕ್ಯಾಮರಾ ಇದ್ದು, ಅಲ್ಲಿ ಪೊಲೀಸರು ಕೂಡ ಇರುತ್ತಾರೆ. ಅವರ ಕಣ್ಣು ತಪ್ಪಿಸಿ ತಿದ್ದುಪಡಿ ಮಾಡಲು ಬಿಜೆಪಿಗೆ ಸಾಧ್ಯವಿಲ್ಲ. ಈ ರೀತಿ ಆರೋಪ ಮಾಡುವುದು ಕಾಂಗ್ರೆಸ್‌ನ ಹೇಡಿತನದ ಪರಮಾವಧಿ. ಜೀವರಾಜ್‌ ಅವರು ಪ್ರಕರಣದ ದಾಖಲಿಸಿ ವರ್ಷ ಕಳೆದಿದೆ. ಕೋರ್ಟ್‌ ನೀಡುವ ಆದೇಶವನ್ನು ನಾವು ಒಪ್ಪುತ್ತೇವೆಯೇ ಹೊರತು ವಿರೋಧ ಮಾಡುವುದಿಲ್ಲ ಎಂದರು. ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಸೋತ ಬಗ್ಗೆ ಪರಾಮರ್ಶೆ ಮಾಡುತ್ತೇವೆ. ಹಿಂದೆ ನಮ್ಮ ಸರ್ಕಾರ ಇದ್ದಾಗಲೂ ಉಪಚುನಾವಣೆ ಗೆದ್ದಿದ್ದೆವು. ಈ ಎರಡು ಕ್ಷೇತ್ರಗಳ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ. 2028 ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿಯ ಆಧಾರದಲ್ಲಿ ಗೆದ್ದಿದೆ. ಆದರೆ ಜನರಿಗೆ ಈಗ ಗ್ಯಾರಂಟಿಯ ವಾಸ್ತವ ಗೊತ್ತಾಗಿದೆ. ನಾವು ಮುಳ್ಳನ್ನು ಮುಳ್ಳಿಂದಲೇ ತೆಗೆಯುತ್ತೇವೆ ಎಂದರು. ನಾನು ಗ್ಯಾರಂಟಿಗಳ ವಿರೋಧಿಯಲ್ಲ. ಇನ್ನೂ 25 ಗ್ಯಾರಂಟಿಗಳನ್ನು ಕೊಟ್ಟರೂ ನಾನು ವಿರೋಧಿಸುವುದಿಲ್ಲ. ಆದರೆ ಅವೈಜ್ಞಾನಿಕ ಗ್ಯಾರಂಟಿಗಳನ್ನು ನಾನು ವಿರೋಧಿಸುತ್ತೇನೆ. ತಮಿಳುನಾಡಲ್ಲಿ ನಟ ವಿಜಯ್‌ ಚಿನ್ನ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಈ ರೀತಿ ಮಾಡಿದರೆ ಅದು ಅವೈಜ್ಞಾನಿಕವಾಗುತ್ತದೆ. ಅಲ್ಲಿ ಡಿಎಂಕೆಗೆ ಬೆಂಬಲ ನೀಡಿದ್ದ ಕಾಂಗ್ರೆಸ್‌ ನಂತರ ಉಲ್ಟಾ ಹೊಡೆದಿದೆ. ಬಿಜೆಪಿ ಎಂದಿಗೂ ವಿಜಯ್‌ ಅವರಿಗೆ ಬೆಂಬಲ ನೀಡಿಲ್ಲ. ಅವರ ಸಿದ್ಧಾಂತ ಮತ್ತು ಬಿಜೆಪಿಯ ಸಿದ್ಧಾಂತಕ್ಕೆ ಹೊಂದಾಣಿಕೆಯಾಗುವುದಿಲ್ಲ ಎಂದರು. ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವವೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಮೇ 10 ರಂದು ಬೆಂಗಳೂರಿಗೆ ಬರಲಿದ್ದು, ಎಚ್‌ಎಎಲ್‌ ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲಿ ವಿಶೇಷ ಕಾರ್ಯಕ್ರಮ ನಡೆಸಿ ಎಲ್ಲ ಕಾರ್ಯಕರ್ತರ ಜೊತೆಗೆ ಅಭಿನಂದನೆ ಸಲ್ಲಿಸಲಿದ್ದೇವೆ. ಸುಮಾರು 15 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪ್ರಧಾನಿ ಅರ್ಧ ಗಂಟೆ ಭಾಷಣ ಮಾಡಲಿದ್ದಾರೆ ಎಂದರು. #announcement #results #delayed #day #RAshoka #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - DC_` ಶ నoలv EXPRESS ಫಲಿತಾಂಶ ಘೋಷಣೆಗೆ ఒందు దిన తెడ మోదిద్దిశి?: ಆರ್ ಅಶೋಕ HTTPS:IIMALGUDIEXPRESS.CO.IN/ DC_` ಶ నoలv EXPRESS ಫಲಿತಾಂಶ ಘೋಷಣೆಗೆ ఒందు దిన తెడ మోదిద్దిశి?: ಆರ್ ಅಶೋಕ HTTPS:IIMALGUDIEXPRESS.CO.IN/ - ShareChat
#📜ಪ್ರಚಲಿತ ವಿದ್ಯಮಾನ📜 ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ಬೋಧಿಸಿದ್ದರು: ಸಿದ್ದರಾಮಯ್ಯ ಮೈಸೂರು: ಸಿದ್ದರಾಮೇಶ್ವರರೂ ಸೇರಿದಂತೆ ಸಂತಮಹಾಶಯರು, ಸಮಾಜದಲ್ಲಿ ಜಾತಿವರ್ಗಗಳ ವ್ಯವಸ್ಥೆ ತೊಲಗಬೇಕು ಎಂದು ಬಯಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮಸಮಾಜ ನಿರ್ಮಿಸುವ ಸಂಕಲ್ಪವನ್ನು ನಮ್ಮ ಸರ್ಕಾರ ಹೊಂದಿದೆ. ಉತ್ಪಾದಿಸಿದ ಸಂಪತ್ತು ಸಮಾನವಾಗಿ ಹಂಚಿಕೆಯಾಗಿಬೇಕು. ರಾಜ್ಯದ ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬುದೇ ಸರ್ಕಾರದ ಉದ್ದೇಶ ಎಂದರು. ಬಸವಾದಿ ಶರಣರು 12 ನೇ ಶತಮಾನದಲ್ಲಿ ಸಮಾನತೆಯ ಸಿದ್ಧಾಂತವನ್ನು ಬೋಧಿಸಿದ್ದರು. ಶೋಷಣೆಗೊಳಗಾದ ಹಾಗೂ ಅವಕಾಶವಂಚಿತ ಸಮುದಾಯಗಳು ಸಂಘಟಿತರಾಗುವ ಸಮ್ಮೇಳನಗಳು ಉತ್ತಮ ಕಾರ್ಯಗಳಾಗಿವೆ ಎಂದರು. 2013 ಮೇ 13ರ ಬಸವ ಜಯಂತಿಯಂದು ನಾನು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದೆ. ಬಸವಣ್ಣನವರು ಬೋಧಿಸಿದಂತೆ ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರಿಸಿದ್ದೇನೆ. ರಾಜಕೀಯ ಸ್ವಾತಂತ್ರ್ಯವು, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ. ಶಿಕ್ಷಣ ಪಡೆದಾಗ ಮಾತ್ರ ಸಾಮಾಜಿಕ ಆರ್ಥಿಕ ಶಕ್ತಿ ದೊರಕಲು ಸಾಧ್ಯ ಎಂದರು. ನಮ್ಮ ಸರ್ಕಾರ ಭೋವಿ ನಿಗಮವೂ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ ಮಾಡಿದೆ. ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿನ ಅಸಮಾನತೆ ಹೋಗಲಾಡಿಸಲು ಐತಿಹಾಸಿಕ ಒಳ ಮೀಸಲಾತಿಯನ್ನು ಜಾರಿಗೊಳಿಸಿದೆ. ಎಡಗೈಗೆ 5.25%, ಬಲಗೈಗೆ 5.25%, ಹಾಗೂ ಇತರ ಉಪಜಾತಿಗಳಿಗೆ 4.5% ಹಂಚಿಕೆ ಮಾಡಲಾಗಿದೆ ಎಂದರು. ಭೋವಿ ಸಮುದಾಯದವರು ಇಟ್ಟಿರುವ ಬೇಡಿಕೆಗಳ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ. ಸಮುದಾಯದವರಿಗೆ ಕುಲಪತಿ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಏಳು ಕೋಟಿ ಜನರಿಗೂ ನ್ಯಾಯ ಸಿಗಬೇಕು ಹಾಗೂ ಯಾರೂ ಅವಕಾಶಗಳಿಂದ ವಂಚಿತರಾಗಬಾರದು. ಸಂವಿಧಾನ ರಚನೆಯಾದ ನಂತರ ಸಮಾನತೆಯನ್ನು ಸಾಧಿಸುವತ್ತ ದೇಶ ಸಾಗಿದ್ದು, ಸಂವಿಧಾನ ಹೇಳುವಂತೆಯೇ ನಡೆದುಕೊಳ್ಳುತ್ತೇವೆ ಎಂದರು. ಎಲ್ಲಾ ಜಾತಿಗಳನ್ನು ಪ್ರೀತಿಸಿ, ಅವರೂ ನಮ್ಮನ್ನು ಪ್ರೀತಿಸುವಂತೆ ಮಾಡಬೇಕು ಹಾಗೂ ಸಹಿಷ್ಣುತೆಯನ್ನು ರೂಢಿಸಿಕೊಳ್ಳಬೇಕು. ಉತ್ಪಾದನೆಯಲ್ಲಿ ಎಲ್ಲರೂ ಭಾಗವಹಿಸಿ, ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ಬೋಧಿಸಿದ್ದರು. ಅವರು ನಡೆದ ಹಾದಿಯಲ್ಲಿಯೇ ನಮ್ಮ ಸರ್ಕಾರವೂ ನಡೆಯುತ್ತಿದೆ ಎಂದರು. #Siddarameshwara #taught #produce #shared #equally #Siddaramaiah #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ నoలv EXPRESS ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ಬೋಧಿಸಿದ್ದರು: ಸಿದ್ದರಾಮಯ್ಯ . HTTPS:IIMALGUDIEXPRESS.CO.INI ಶ నoలv EXPRESS ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂದು ಸಿದ್ಧರಾಮೇಶ್ವರರು ಬೋಧಿಸಿದ್ದರು: ಸಿದ್ದರಾಮಯ್ಯ . HTTPS:IIMALGUDIEXPRESS.CO.INI - ShareChat
#📜ಪ್ರಚಲಿತ ವಿದ್ಯಮಾನ📜 हमने कई हज़ार एफिडेविट इलेक्शन कमीशन को दिए थे लेकिन इलेक्शन कमीशन ने एक पर भी कार्रवाई नहीं की।: अखिलेश यादव #malgudiexpress #malgudinews #news #TopNews | Subscribe | Comment | Like | Share |
📜ಪ್ರಚಲಿತ ವಿದ್ಯಮಾನ📜 - ShareChat
00:41
#📜ಪ್ರಚಲಿತ ವಿದ್ಯಮಾನ📜 ವೋಟ್‌ ಚೋರಿ ಮಾಡಿರುವುದು ಯಾರೆಂದು ಸ್ಪಷ್ಟವಾಗಿದೆ: ಆರ್‌.ಅಶೋಕ ಬೆಂಗಳೂರು: ತಮಿಳುನಾಡಲ್ಲಿ ಡಿಎಂಕೆ ಜೊತೆ ಚುನಾವಣೆ ಎದುರಿಸಿದ ಕಾಂಗ್ರೆಸ್‌, ಈಗ ಅದೇ ಪಕ್ಷಕ್ಕೆ ಕೈ ಕೊಟ್ಟಿದೆ. ಇಂಡಿ ಒಕ್ಕೂಟದ ಮಿತ್ರಪಕ್ಷಗಳು ಈ ಬಗ್ಗೆ ಪರಾಮರ್ಶೆ ಮಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಲ್ಲಿ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ. ಕಾಂಗ್ರೆಸ್‌ನ ಸ್ನೇಹ ಮಾಡಿದ ಡಿಎಂಕೆ ಪಕ್ಷದ ನಾಯಕರು ಈಗ ಸಪ್ಪೆ ಮೋರೆ ಹಾಕಿಕೊಂಡಿದ್ದಾರೆ. ಚುನಾವಣೆ ಬಳಿಕ ಒಂದಾಗಿ ಸರ್ಕಾರ ರಚಿಸಬೇಕೆಂದು ತೀರ್ಮಾನವಾಗಿತ್ತು. ಫಲಿತಾಂಶ ಬಂದ ನಂತರ ಕಾಂಗ್ರೆಸ್‌ ಗೆದ್ದೆತ್ತಿನ ಬಾಲ ಹಿಡಿದಿದೆ. ಯಾವುದೇ ಸಿದ್ಧಾಂತವನ್ನು ಇವರು ಅನುಸರಿಸುತ್ತಿಲ್ಲ. ಇವರನ್ನು ನಂಬಿದ ಡಿಎಂಕೆ ಬೆನ್ನಿಗೆ ಚೂರಿ ಹಾಕಿದ್ದು, ಕಾಂಗ್ರೆಸ್‌ ಕೈ ಕೊಡುವ ಪಕ್ಷ ಎಂದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್‌ ಪಕ್ಷ ನಂಬಿಕೆಗೆ ಅರ್ಹವಲ್ಲ ಎಂಬುದು ಸ್ಪಷ್ಟವಾಗಿದೆ. ಇಂಡಿ ಒಕ್ಕೂಟದಲ್ಲಿರುವ ಬೇರೆ ಪಕ್ಷಗಳು ಈ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್‌ ಹೇಗೆ ಕೈ ಕೊಡುತ್ತದೆ ಎಂದು ಗಮನಿಸಬೇಕಾಗುತ್ತದೆ. ಇಲ್ಲವಾದರೆ ಮಿತ್ರಪಕ್ಷಗಳಿಗೂ ಡಿಎಂಕೆ ಸ್ಥಿತಿಯೇ ಬರಲಿದೆ ಎಂದರು. ಶಾಸಕ ಡಿ.ಎನ್‌.ಜೀವರಾಜ್‌ಗೆ ಪ್ರಮಾಣವಚನ ಬೋಧಿಸಲು ಸ್ಪೀಕರ್‌ ಯು.ಟಿ.ಖಾದರ್‌ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ರಾಜ್ಯಪಾಲರ ಬಳಿ ಹೋದ ನಂತರ ಪ್ರಮಾಣವಚನ ಬೋಧಿಸಲು ಅವಕಾಶ ನೀಡಿದ್ದಾರೆ. ಒಂದು ಬಾರಿ ರಾಜ್ಯಪತ್ರದಲ್ಲಿ ಹೆಸರು ಪ್ರಕಟವಾದ ನಂತರ ಹಾಗೂ ಚುನಾವಣಾ ಆಯೋಗ ಪ್ರಮಾಣಪತ್ರ ನೀಡಿದ ಬಳಿಕ ಪ್ರಮಾಣವಚನ ಬೋಧಿಸಲೇಬೇಕು. ರಾಜ್ಯಪಾಲರು ಅಥವಾ ಅವರು ಸೂಚಿಸಿದ ವ್ಯಕ್ತಿ ಪ್ರಮಾಣವಚನ ಬೋಧಿಸಬಹುದು. ಕೊನೆ ಹಂತದಲ್ಲಿ ಸ್ಪೀಕರ್‌ ಯು.ಟಿ.ಖಾದರ್‌ ಅವರೇ ಫಲಿತಾಂಶವನ್ನು ಒಪ್ಪಿಕೊಂಡು ಪ್ರಮಾಣವಚನ ನೀಡುತ್ತಿರುವುದು ಸಂತಸ ತಂದಿದೆ ಎಂದರು. ವೋಟ್‌ ಚೋರಿ ಮಾಡಿರುವುದು ಯಾರೆಂದು ಸ್ಪಷ್ಟವಾಗಿದೆ. ಡಕಾಯಿತಿ ಎಂದು ಆರೋಪ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲೇ ಕೋರ್ಟ್‌ಗೆ ಹೋಗಬೇಕಿತ್ತು. ರಾಜೇಗೌಡರು ಗೆದ್ದಾಗ ಚುನಾವಣಾ ಆಯೋಗ ಸರಿ ಇದೆ, ಈಗ ಸರಿ ಇಲ್ಲ ಎನ್ನುತ್ತಾರೆ. ಕೇರಳದಲ್ಲಿ ಇವಿಎಂ ಸರಿ ಇದೆ, ಪಶ್ಚಿಮ ಬಂಗಾಳದಲ್ಲಿ ಸರಿ ಇಲ್ಲ ಎಂದು ರಾಹುಲ್‌ ಗಾಂಧಿ ಹೇಳುತ್ತಿದ್ದು, ಇವರೆಲ್ಲರಿಗೂ ಬ್ರೈನ್‌ ಮ್ಯಾಪಿಂಗ್‌ ಮಾಡಬೇಕಿದೆ. ಇನ್ನಾದರೂ ಚುನಾವಣಾ ಫಲಿತಾಂಶಗಳ ಬಗ್ಗೆ ಆಲೋಚಿಸಿ ಮಾತನಾಡಲಿ ಎಂದರು. ಮಲ್ಲಿಕಾರ್ಜುನ ಖರ್ಗೆ ಪ್ರವೇಶದ ಬಳಿಕ ಸಿಎಂ ಕುರ್ಚಿ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಅವರ ಕನಸು ಭಗ್ನವಾಗಿದೆ. ಕನಕಪುರದ ಬಂಡೆಯಾದ ನಾನು ವಿಧಾನಸೌಧಕ್ಕೆ ಮೆಟ್ಟಿಲಾಗುತ್ತೇನೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕರು ಈ ಬಂಡೆಯನ್ನು ಶಿಲೆಯಾಗಿ ಕೆತ್ತುತ್ತಲೇ ಇದ್ದಾರೆ. ಇನ್ನೂ ಸಂಪೂರ್ಣವಾಗಿ ಶಿಲೆ ನಿರ್ಮಾಣವಾಗಿಲ್ಲ. ಡಿ.ಕೆ.ಶಿವಕುಮಾರ್‌ ಮೆಟ್ಟಿಲಾಗಿಯೇ ಇರುತ್ತಾರೆಯೇ ಹೊರತು ಶಿಲೆಯಾಗಲು ಸಾಧ್ಯವಾಗಲೇ ಇಲ್ಲ ಎಂದರು. #clear #stole #votes #RAshoka #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ నoలv EXPRESS ವೋಟ್ ಚೋರಿ ಮಾಡಿರುವುದು ಯಾರೆಂದು ಸ್ಪಷ್ಟವಾಗಿದೆ: ಆರ್ .ಅಶೋಕ HTTPS:IIMALGUDIEXPRESS.CO.INI ಶ నoలv EXPRESS ವೋಟ್ ಚೋರಿ ಮಾಡಿರುವುದು ಯಾರೆಂದು ಸ್ಪಷ್ಟವಾಗಿದೆ: ಆರ್ .ಅಶೋಕ HTTPS:IIMALGUDIEXPRESS.CO.INI - ShareChat
#📜ಪ್ರಚಲಿತ ವಿದ್ಯಮಾನ📜 ಕಾಂಗ್ರೆಸ್ ಗೆಲುವು ಹಣದ ಬಲ, ರಾಜ್ಯ ಯಂತ್ರಾಂಗದ ಬಹಿರಂಗ ದುರುಪಯೋಗ: ಅಪ್ಸರ್ ಕೊಡ್ಲಿಪೇಟೆ ದಾವಣಗೆರೆ: ಕಾಂಗ್ರೆಸ್ ಈ ಗೆಲುವನ್ನು ಹಿಂಬಾಗಿಲಿನ ಚುನಾವಣಾ ಅಕ್ರಮಗಳು ಹಾಗೂ ಅಪಾರ ಪ್ರಮಾಣದ ಹಣಬಲದ ಮೂಲಕ ಸಾಧಿಸಿದೆ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ವಾರ್ಡ್‌ನಲ್ಲೂ ನೇರ ಹಸ್ತಕ್ಷೇಪ ನಡೆದಿದ್ದು, ಅಧಿಕಾರದಲ್ಲಿರುವ ಮಂತ್ರಿಗಳು, ಶಾಸಕರು ಮತ್ತು ವಿವಿಧ ನಿಗಮಗಳ ಅಧ್ಯಕ್ಷರನ್ನು ಚುನಾವಣಾ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ನಿಯಂತ್ರಿಸಲು ನಿಯೋಜಿಸಲಾಗಿತ್ತು. ನೆಲಮಟ್ಟದ ವರದಿಗಳು ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಸಂಘಟಿತವಾಗಿ ಹಣ ಹಂಚಿಕೆ ನಡೆದಿರುವುದನ್ನು ಸ್ಪಷ್ಟಪಡಿಸುತ್ತವೆ. ಇದು ಸ್ವತಂತ್ರ ಮತ್ತು ನ್ಯಾಯಸಮ್ಮತ ಚುನಾವಣೆಯ ಆತ್ಮವನ್ನೇ ಹಾಳುಮಾಡುವಂತಹ ಗಂಭೀರ ವಿಚಾರವಾಗಿದೆ ಎಂದರು. ಇದಲ್ಲದೆ, ಈ ಫಲಿತಾಂಶವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳಒಪ್ಪಂದ ನಡೆದಿರುವ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟಿಸುತ್ತದೆ. ಇಂತಹ ರಾಜಕೀಯ ಹೊಂದಾಣಿಕೆಗಳು ನಿಜವಾದ ಪರ್ಯಾಯ ಶಕ್ತಿಗಳಾದ ಎಸ್‌ಡಿಪಿಐಯನ್ನು ಹಿನ್ನಡೆಗೊಳಿಸುವ ಮೂಲಕ ಪ್ರಮುಖ ಪಕ್ಷಗಳು ಪರಸ್ಪರ ರಕ್ಷಿಸಿಕೊಳ್ಳುತ್ತಿರುವುದನ್ನು ಬಹಿರಂಗಪಡಿಸುತ್ತವೆ ಎಂದು ಆರೋಪಿಸಿದರು. ಸಂಖ್ಯೆಯಲ್ಲಿ ಅವರು ಗೆದ್ದಿರಬಹುದು, ಆದರೆ ನಾನು ವಿಶ್ವಾಸದಲ್ಲಿ ಗೆದ್ದಿದ್ದೇನೆ ಎಂಬ ಧನ್ಯತಾಭಾವ ನನ್ನಲ್ಲಿದೆ ಎಂದರು. ಹಣಬಲ ಮತ್ತು ಅಧಿಕಾರದ ಒತ್ತಡಗಳ ನಡುವೆಯೂ ಜನರು ನೀಡಿದ 18,975 ಸ್ವಾಭಿಮಾನದ ಮತಗಳು ನನಗೆ ದೊಡ್ಡ ಪ್ರೇರಣೆಯಾಗಿವೆ. ಪರ್ಯಾಯ ರಾಜಕಾರಣವನ್ನು ಬಯಸುವ ಸ್ವಾಭಿಮಾನಿ ಮತದಾರರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಸ್ಟ್ರಾಂಗ್ ರೂಮ್‌ನ ಎರಡು ಕೀಲಿಗಳು ನಾಪತ್ತೆಯಾಗಿರುವ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. ಇದು ಚುನಾವಣಾ ಅಕ್ರಮ ನಡೆದಿದೆ ಎಂಬುದಕ್ಕೆ ಗಂಭೀರ ಸೂಚನೆ ಎಂದು ಆರೋಪಿಸಿದರು. ಈ ಎಲ್ಲಾ ಸವಾಲುಗಳ ನಡುವೆಯೂ ದಾವಣಗೆರೆಯಲ್ಲಿ ಎಸ್‌ಡಿಪಿಐಯ ಪ್ರದರ್ಶನ ಜನಬೆಂಬಲ ಹೆಚ್ಚುತ್ತಿರುವುದಕ್ಕೆ ದೃಢ ಸೂಚಕವಾಗಿದೆ. ನಾವು ಈ ಚುನಾವಣೆಯನ್ನು ಪ್ರಾಮಾಣಿಕತೆ, ನಿಷ್ಠೆ ಮತ್ತು ಜನರ ಸಮಸ್ಯೆಗಳತ್ತ ಬದ್ಧತೆಯೊಂದಿಗೆ ಹೋರಾಡಿದ್ದೇವೆ, ಭ್ರಷ್ಟಾಚಾರ ಅಥವಾ ಅನೈತಿಕ ವಿಧಾನಗಳಿಗೆ ತಲೆಬಾಗದೆ ನಮ್ಮೊಂದಿಗೆ ನಿಂತ ಎಲ್ಲಾ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳು. ದಾವಣಗೆರೆಯ ಜನತೆಗೆ ಎಸ್‌ಡಿಪಿಐ ಸದಾ ನಿಮ್ಮ ಧ್ವನಿಯಾಗಿರುತ್ತದೆ, ಆಡಳಿತವನ್ನು ಜವಾಬ್ದಾರಿಯುತವಾಗಿರಿಸುತ್ತದೆ ಹಾಗೂ ನ್ಯಾಯ, ಪಾರದರ್ಶಕತೆ ಮತ್ತು ನಿಜವಾದ ಪ್ರಜಾಪ್ರಭುತ್ವಕ್ಕಾಗಿ ಹೋರಾಟವನ್ನು ಮುಂದುವರಿಸುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎ ಆರ್ ತಾಹೀರ್, ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಝ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಮೋಸಿನ್ ಜಿಲ್ಲಾ ಸಮಿತಿ ಸದಸ್ಯರಾದ ಇಸ್ಮಾಯಿಲ್ ಝಬಿವುಲ್ಲಾ, ಮನ್ಸೂರ್ ಅಲಿ ರವರು ಹಾಜರಿದ್ದರು. #Congress #victory #power #money #open #misuse #state #machinery #ApsarKodlipete #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - & నoలv EXPRESS ವರದಿಗಾರ7 [ದಾವಣಗೆರೆ' ಇಿಲ್ಲಾ * ಕಾಂಗ್ರೆಸ್ ಗೆಲುವು ಹಣದ ಬಲ; ರಾಜ್ಯ ಯಂತ್ರಾಂಗದ AVANCERE DIST REPORTER | ಬಹಿರಂಗ ದುರುಪಯೋಗ: ಅಪ್ಸರ್ ಕೊಡ್ಲಿಪೇಟೆ HTTPS:IIMALGUDIEXPRESS.CO.IN/ & నoలv EXPRESS ವರದಿಗಾರ7 [ದಾವಣಗೆರೆ' ಇಿಲ್ಲಾ * ಕಾಂಗ್ರೆಸ್ ಗೆಲುವು ಹಣದ ಬಲ; ರಾಜ್ಯ ಯಂತ್ರಾಂಗದ AVANCERE DIST REPORTER | ಬಹಿರಂಗ ದುರುಪಯೋಗ: ಅಪ್ಸರ್ ಕೊಡ್ಲಿಪೇಟೆ HTTPS:IIMALGUDIEXPRESS.CO.IN/ - ShareChat
#📜ಪ್ರಚಲಿತ ವಿದ್ಯಮಾನ📜 ನನಸಾದ ಪೂಜ್ಯ ಸಿದ್ದೇಶ್ವರ ಶ್ರೀಗಳ ಕನಸು: ಎಂ ಬಿ ಪಾಟೀಲ್ ತೀಕೋಟಾದಲ್ಲಿ ಕಂಗೊಳಿಸುತ್ತಿದೆ ಕ್ಯಾಲಿಫೋರ್ನಿಯಾದ ಉತ್ಕೃಷ್ಟ ದ್ರಾಕ್ಷಿ ಬೆಳೆ • ರೈತರಿಗೆ ಉತ್ಕೃಷ್ಟ ದ್ರಾಕ್ಷಿ ತಳಿ ಆರಾ-36 (ARD-36) ಪರಿಚಯ • ತಿಕೋಟಾ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 100 ಎಕರೆಯಲ್ಲಿ ಬೆಳೆ • ಸಾಮಾನ್ಯ ದ್ರಾಕ್ಷಿಗಿಂತ ಮೂರು ಪಟ್ಟು ಅಧಿಕ ದರ - ರೈತರಿಗೆ ಹೆಚ್ಚಿನ ಲಾಭ ವಿಜಯಪುರ: ಒಂದು ಕಾಲದಲ್ಲಿ ಬರದನಾಡು ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ವಿಜಯಪುರದ ಬದಲಾವಣೆಗೆ ಕಾರಣವಾದದ್ದು ನೀರಾವರಿ, ಅದಕ್ಕೆ ಸ್ಪೂರ್ತಿ ನೀಡಿದ್ದು ಪೂಜ್ಯ ಸಿದ್ದೇಶ್ವರ ಶ್ರೀಗಳ "ಈ ಭೂಮಿಗೆ ಒಂದು ಬೊಗಸೆ ನೀರು ಕೊಡಿ, ಇದು ಕ್ಯಾಲಿಫೋರ್ನಿಯಾವನ್ನು ಮೀರಿಸುತ್ತದೆ" ಎಂಬ ಆಶಯ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಿಂದ 2018ರ ಅವಧಿಯಲ್ಲಿ ಸಿದ್ದರಾಯ್ಯನವರ ನೇತೃತ್ವದ ಸರ್ಕಾರದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ನಮ್ಮ ಜಿಲ್ಲೆಯ ನೀರಾವರಿ ಕನಸು ನನಸಾಯಿತು. ಮುಂದೆ ರೈತರು ಹಲವಾರು ಕೃಷಿ-ತೋಟಗಾರಿಕೆ ಪ್ರಯೋಗಗಳನ್ನು ಮಾಡಿ ಸಮೃದ್ಧವಾಗಿ ಬೆಳೆ ತೆಗೆಯುತ್ತಿದ್ದಾರೆ ಎಂದರು. ಜಿಲ್ಲೆಗೆ ನಾವು ಹಾಕಿಕೊಂಡಿದ್ದ ಅಭಿವೃದ್ಧಿಯ ನೀಲನಕ್ಷೆ "ಜಲ - ವೃಕ್ಷ - ಶಿಕ್ಷಣ" ಕ್ರಾಂತಿಯಿಂದ ಮುಂದುವರಿದು ಇದೀಗ "ಕ್ಷೀರ ಕ್ರಾಂತಿ" ಹಾಗೂ "ಉದ್ಯೋಗ ಕ್ರಾಂತಿ"ಗೆ ಮುನ್ನುಡಿ ಬರೆಯುತ್ತಿದ್ದೇವೆ ಎಂದರು. ಅಂತೆಯೇ ನಮ್ಮ ಜನರ ಸ್ವಾವಲಂಬಿ ಬದುಕಿಗಾಗಿ ಈಗಾಗಲೇ ಹೆಸರಾಂತ ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಸಂಸ್ಥೆಗಳ ಸಹಯೋಗದಲ್ಲಿ ಕ್ಷೀರ ಪೈಲಟ್ ಯೋಜನೆಗನ್ನು ಜಾರಿಗೊಳಿಸುತ್ತಿದ್ದು, ಹೈನುಗಾರಿಕೆಯಲ್ಲಿ ನಮ್ಮ ಜನರಿಗೆ ತರಬೇತಿ, ಮಾಡೆಲ್ ಫಾರ್ಮ್, ಇತ್ಯಾದಿ ಕಲ್ಪಿಸಲಾಗುತ್ತಿದೆ ಎಂದರು. ಮತ್ತೊಂದು ವಿಶೇಷವಾದ ಯೋಜನೆ - ಮಹಾರಾಷ್ಟ್ರದ ನಾಸಿಕ್ ನ ಸಹ್ಯಾದ್ರಿ ಫಾರ್ಮ್ ಅವರ ಸಹಯೋಗದಲ್ಲಿ FPOಗಳ ಮೂಲಕ ನಮ್ಮ ರೈತರಿಗೆ ಸಂಘಟಿತ ಮಾರ್ಗದಲ್ಲಿ ಅಗತ್ಯ ತರಬೇತಿ ಹಾಗೂ ರಫ್ತು ಕೇಂದ್ರಿತ ಬೆಳೆಗಳನ್ನು ಬೆಳೆಯಲು ಉತ್ತೇಜಿಸಲಾಗುತ್ತಿದೆ ಎಂದರು. ಈ ಬೆಳವಣಿಗೆಯಡಿ ನಮ್ಮ ತೀಕೋಟಾದ ಕೃಷ್ಣವೇಣಿ FPO ಸಹ್ಯಾದ್ರಿ ಫಾರ್ಮ್ ಸಹಯೋಗದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟ ದರ್ಜೆಯ ಆರಾ-36 ತಳಿಯ ದ್ರಾಕ್ಷಿಯನ್ನು ಸುಮಾರು 100 ಎಕರೆ ಪ್ರದೇಶದಲ್ಲಿ ಬೆಳೆದು, ಉತ್ತಮ ಇಳುವರಿ ಪಡೆದಿದ್ದಾರೆ. ತಮ್ಮ ಬೆಳೆಯನ್ನು ಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಅರ್ಪಿಸಿ ಗೌರವ ಸೂಚಿಸಿದ್ದಾರೆ. ಅವರು ಇಂದು ನನ್ನನ್ನು ಭೇಟಿ ಮಾಡಿ ಹಣ್ಣು ತಿನ್ನಿಸಿ ತಮ್ಮ ಸಂತಸ ಹಂಚಿಕೊಂಡರು ಎಂದರು. ಈ ದ್ರಾಕ್ಷಿ ತಳಿಯ ಬೆಲೆ ಸಾಮಾನ್ಯ ದ್ರಾಕ್ಷಿಗಿಂತ ಮೂರು ಪಟ್ಟು ಹೆಚ್ಚಿದ್ದು, ನಮ್ಮ ರೈತರಿಗೆ ಬಂಪರ್ ಲಾಭ ತರುವಲ್ಲಿ ಅನುಮಾನವಿಲ್ಲ. ರಫ್ತಿಗೂ ತುಂಬಾ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ಇದನ್ನು ಒಂದು ಸಾವಿರ ಎಕರೆ ಪ್ರದೇಶಕ್ಕೆ ವಿಸ್ತರಣೆ ಮಾಡಲಿದ್ದಾರೆ. ಇದಕ್ಕೆ ಮುಖ್ಯವಾಗಿ ಕೃಷ್ಣವೇಣಿ FPOನ ಸಂದೀಪ ಪಾಟೀಲ, ಸಚಿನ ಪಾಟೀಲ ಹಡಲಸಂಗ ಇವರು ತೋಟಗಾರಿಕೆ ಪದವಿಧರರಾಗಿದ್ದು, ಸ್ಥಳೀಯ ರೈತರ ತಂಡವನ್ನು ಕಟ್ಟಿ ಉತ್ಸಾಹದಿಂದ ಈ ಕಾರ್ಯಕ್ಕೆ ಮುಂದಾಗಿರುವುದು ನಮ್ಮ ರೈತರಿಗೆ ಉತ್ತಮ ಮಾರ್ಗದರ್ಶನ ದೊರೆಯಲಿದೆ ಎಂದರು. ಈಗಾಗಲೇ ನಮ್ಮ ಬಿ.ಎಲ್.ಡಿ.ಇ ತಂಡ ನಾಸಿಕ್ ನ ಸಹ್ಯಾದ್ರಿ ಫಾರ್ಮ್ ಗೆ ಭೇಟಿ ನೀಡಿ, ಶ್ರೀ ವಿಲಾಸರಾವ್ ಶಿಂಧೆ ಅವರೊಂದಿಗೆ ಮಾತುಕತೆ ನಡೆಸಿ, ನಮ್ಮ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಲ್ಲಿಯೂ ಅಗತ್ಯ ಸೌಲಭ್ಯಗಳನ್ನು ನಿರ್ಮಾಣ ಮಾಡಲು ಕೋರಿದ್ದೇವೆ, ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಈ ಕಾರ್ಯದ ಮೂಲಕ ಶ್ರೀ ಸಿದ್ದೇಶ್ವರ ಶ್ರೀಗಳ ಕನಸು ನನಸಾಗಿದೆ. ಕ್ಯಾಲಿಪೋರ್ನಿಯಾದಲ್ಲಿ ಬೆಳೆಯುವ ಉತ್ಕೃಷ್ಟದರ್ಜೆಯ ಆರಾ-36 ತಳಿಯ ದ್ರಾಕ್ಷಿಯ ಬೆಳೆ ಇಲ್ಲಿ ಕಂಗೊಳ್ಳಿಸುತ್ತಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ರೈತರಾದ ಈರಪ್ಪ ಬಗಲಿ, ಪಿಂಟು ಕೊಣ್ಣೂರ, ಅಶೋಕ ಬಾಬರ, ಕೃಷ್ಣವೇಣಿ FPO ಪದಾಧಿಕಾರಿ ಸಂದೀಪ ಬಬನ ಪಾಟೀಲ, ಸಚಿನ ಪಾಟೀಲ ಹಾಜರಿದ್ದರು. #dream #SiddeshwaraSri #reality #MBPatil #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - 0 నoలv EXPRESS ಪೂಜ್ಯ  సిద్దిబ్బం ನನಸಾದ ಶೀಗಳ ಕನಸು: ಎಂ ಬಿ ಪಾಟೀಲ್ HTTPS:IIMALGUDIEXPRESS.CO.IN/ 0 నoలv EXPRESS ಪೂಜ್ಯ  సిద్దిబ్బం ನನಸಾದ ಶೀಗಳ ಕನಸು: ಎಂ ಬಿ ಪಾಟೀಲ್ HTTPS:IIMALGUDIEXPRESS.CO.IN/ - ShareChat
#📜ಪ್ರಚಲಿತ ವಿದ್ಯಮಾನ📜 ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ: ಸಿದ್ದರಾಮಯ್ಯ ಬೆಂಗಳೂರು: ಹಜ್ ಯಾತ್ರಿಗರು ಮಾಡುವ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತನ್ನೂ ಬಯಸಿರಿ ಎಂದು ಕೋರುತ್ತಾ, ಹಜ್ ಯಾತ್ರೆಯು ಸುಖಕರವಾಗಿರಲೆಂದು ಸಿಎಂ ಸಿದ್ದರಾಮಯ್ಯ ಹಾರೈಸಿದರು. ಕರ್ನಾಟಕ ಹಜ್ ಸಮಿತಿ ಆಯೋಜಿಸಿದ್ದ "ಹಜ್ -2026" ಹಜ್ ಯಾತ್ರಿಕರ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಸ್ಲಾಂ ಧರ್ಮದ ಪ್ರಮುಖ ಐದು ಆಧಾರ ಸ್ತಂಭಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಲೇಬೇಕಾಗಿದೆ ಎಂದರು. ಹಜ್ ಯಾತ್ರೆ ಮಾಡುವುದರಿಂದ ಮನುಷ್ಯನ ಹಿಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ಆತ ಮರುಜನ್ಮ ಪಡೆದ ಮಗುವಿನಂತೆ ಪರಿಶುದ್ಧನಾಗುತ್ತಾನೆ ಎಂಬ ನಂಬಿಕೆಯಿದೆ. ಯಾರಾದರೂ ಒಬ್ಬ ಮನುಷ್ಯನನ್ನು (ಅಪರಾಧ ಮಾಡದಿದ್ದರೂ) ಕೊಂದರೆ, ಅವನು ಇಡೀ ಮಾನವಕುಲವನ್ನೇ ಕೊಂದಂತೆ; ಮತ್ತು ಯಾರಾದರೂ ಒಂದು ಜೀವವನ್ನು ಉಳಿಸಿದರೆ, ಅವನು ಇಡೀ ಮಾನವಕುಲವನ್ನೇ ಉಳಿಸಿದಂತೆ ಎಂದು ಜೀವದ ಬೆಲೆಯ ಬಗ್ಗೆ ಕುರಾನ್ ನೀಡುವ ಅತ್ಯುನ್ನತ ಸಂದೇಶವಾಗಿದೆ ಎಂದರು. ಪ್ರತಿಯೊಬ್ಬ ಹಜ್ ಯಾತ್ರಿಗನು ನಿಷ್ಕಲ್ಮಶ ಮನದಿಂದ ಯಾತ್ರೆ ಕೈಗೊಳ್ಳಬೇಕು. ಯಾತ್ರೆಯ ಸಂದರ್ಭದಲ್ಲಿ ಮಾಡುವ ಪ್ರಾರ್ಥನೆಯಲ್ಲಿ ಸರ್ಕಾರದ ಒಳಿತನ್ನೂ ಬಯಸಿರಿ ಎಂದು ಕೋರಿದರು. ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ ಮಾನವನು ಪರಸ್ಪರ ದ್ವೇಷವನ್ನು ಸಾಧಿಸುತ್ತಾನೆ. ಮಾನವೀಯತೆಯೇ ನಿಜವಾದ ಧರ್ಮ. ಪರರ ಒಳಿತನ್ನು ಬಯಸುವವರನ್ನು ದೇವರು ರಕ್ಷಿಸುತ್ತಾನೆ. ತನ್ನ ಧರ್ಮವನ್ನು ಪ್ರೀತಿಸಿ, ಆದರೆ ಇತರೆ ಧರ್ಮದ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಭ್ರಾತೃತ್ವ, ಸಮಾನತೆ ಮತ್ತು ಸೌಹಾರ್ದತೆಗಳೇ ನಮ್ಮ ಸಂವಿಧಾನದ ಮೂಲತತ್ವವಾಗಿದೆ ಎಂದರು. 2026-27ನೇ ಸಾಲಿನ ಆಯವ್ಯಯದಲ್ಲಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಹಜ್ ಯಾತ್ರಾರ್ಥಿಗಳು ಹಾಗೂ ಅವರ ಸಂಬಂಧಿಕರಿಗೆ ಸೌಲಭ್ಯ ಮತ್ತು ಸೌಕರ್ಯಗಳನ್ನು ನೀಡಲು ಅನುಕೂಲವಾಗುವಂತೆ ಹಜ್ ಭವನಗಳ ನಿರ್ಮಾಣ ಮಾಡಲಾಗುತ್ತದೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು. #religion #teaches #haj #violence #Siddaramaiah #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ~8 ಕುಲುವೆ ತತ್ತೂರಿಯಲ್ಲ . ನಲನಿ EXPRESS ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವದಿಲ್ಲ: ಸಿದ್ದರಾಮಯ್ಯ ಸಿದ್ದರಾಮಯ್ಯ , ಮುಖ್ಯಮಂತ್ರಿ ~8 ಕುಲುವೆ ತತ್ತೂರಿಯಲ್ಲ . ನಲನಿ EXPRESS ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವದಿಲ್ಲ: ಸಿದ್ದರಾಮಯ್ಯ ಸಿದ್ದರಾಮಯ್ಯ , ಮುಖ್ಯಮಂತ್ರಿ - ShareChat
#📜ಪ್ರಚಲಿತ ವಿದ್ಯಮಾನ📜 ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ವಿಜಯ್ ದಳಪತಿ #tamilnadupolitics #assembly #AssemblyElection #vijaythalapathy #ambedkar #malgudiexpress #malgudinews #news #TopNews | Subscribe | Comment | Like | Share |
📜ಪ್ರಚಲಿತ ವಿದ್ಯಮಾನ📜 - ShareChat
00:22
#📜ಪ್ರಚಲಿತ ವಿದ್ಯಮಾನ📜 ದಾಖಲೆಯ ಮಟ್ಟಕ್ಕೆ ಕುಸಿದ ಭಾರತೀಯ ರೂಪಾಯಿ ಮೌಲ್ಯ! ರೂಪಾಯಿಗೆ ‘ಡಾಲರ್’ ಬಿಸಿ: ದೆಹಲಿ: ಭಾರತೀಯ ಆರ್ಥಿಕತೆಯ ಪಾಲಿಗೆ ಇಂದು ಆತಂಕಕಾರಿ ದಿನ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಹಿಂದೆಂದೂ ಕಾಣದ ರೀತಿಯಲ್ಲಿ ₹95.03 ರ ದಾಖಲೆಯ ಮಟ್ಟಕ್ಕೆ ಕುಸಿತ ಕಂಡಿದೆ. ಇಂದು 11 ಪೈಸೆ ಕುಸಿತದೊಂದಿಗೆ ದಿನ ಕರಾಳವಾಗಿ ಮಾರ್ಪಟ್ಟಿತು. ಸತತ ಏರಿಳಿತಗಳನ್ನು ಕಾಣುತ್ತಿದ್ದ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇಂದು ರೂಪಾಯಿ ದೊಡ್ಡ ಮಟ್ಟದ ಹೊಡೆತ ಅನುಭವಿಸಿದೆ. ಈ ಕುಸಿತ ಸಾಮಾನ್ಯ ಜನರಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೆ ಎಲ್ಲರಲ್ಲೂ ನಡುಕ ಹುಟ್ಟಿಸಿದೆ. ಕುಸಿತಕ್ಕೆ ಪ್ರಮುಖ ಕಾರಣಗಳೇನು?: ತಜ್ಞರ ವಿಶ್ಲೇಷಣೆಯ ಪ್ರಕಾರ, ರೂಪಾಯಿ ಮೌಲ್ಯ ಇಷ್ಟು ಕೆಳಮಟ್ಟಕ್ಕೆ ಇಳಿಯಲು ಈ ಕೆಳಗಿನ ಅಂಶಗಳು ಪ್ರಮುಖವಾಗಿವೆ: ಕಚ್ಚಾ ತೈಲ ಬೆಲೆ ಏರಿಕೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $120 ರ ಗಡಿ ದಾಟಿರುವುದು ಭಾರತದ ಮೇಲೆ ಒತ್ತಡ ಹೇರಿದೆ. ಭಾರತ ತನ್ನ ತೈಲ ಅವಶ್ಯಕತೆಗಾಗಿ ಹೆಚ್ಚಿನ ಡಾಲರ್ ವ್ಯಯಿಸುತ್ತಿರುವುದು ರೂಪಾಯಿಯನ್ನು ದುರ್ಬಲಗೊಳಿಸಿದೆ. ಹೂಡಿಕೆದಾರರ ಹಿಂತೆಗೆತ: ಜಾಗತಿಕ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು (FII) ಭಾರತೀಯ ಶೇರು ಮಾರುಕಟ್ಟೆಯಿಂದ ತಮ್ಮ ಹಣವನ್ನು ಹಿಂಪಡೆಯುತ್ತಿದ್ದಾರೆ. ಏಪ್ರಿಲ್ ತಿಂಗಳೊಂದರಲ್ಲೇ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಹೊರಹೋಗಿದೆ. ಅಮೆರಿಕದ ಫೆಡರಲ್ ರಿಸರ್ವ್ ನೀತಿ: ಅಮೆರಿಕ ತನ್ನ ಬಡ್ಡಿದರಗಳನ್ನು ಹೆಚ್ಚಿಸಿರುವುದು ಹೂಡಿಕೆದಾರರನ್ನು ಡಾಲರ್ ಕಡೆಗೆ ಆಕರ್ಷಿಸುತ್ತಿದೆ, ಇದರಿಂದಾಗಿ ಜಾಗತಿಕವಾಗಿ ಡಾಲರ್ ಬಲಿಷ್ಠವಾಗುತ್ತಿದೆ. ಸಾಮಾನ್ಯ ಜನರ ಮೇಲೆ ಬೀರುವ ಪ್ರಭಾವ: ರೂಪಾಯಿ ಮೌಲ್ಯ ಕುಸಿತ ಕೇವಲ ಅಂಕಿ-ಅಂಶಗಳ ಆಟವಲ್ಲ, ಇದು ನೇರವಾಗಿ ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುತ್ತದೆ: ದುಬಾರಿಯಾಗಲಿದೆ ಆಮದು: ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಇಂಧನ ದರ ಏರಿಕೆ: ತೈಲ ಕಂಪನಿಗಳು ಹೆಚ್ಚಿನ ಹಣ ನೀಡಿ ಕಚ್ಚಾ ತೈಲ ಖರೀದಿಸಬೇಕಾಗಿರುವುದರಿಂದ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಮತ್ತಷ್ಟು ಹೆಚ್ಚಾಗಬಹುದು. ವಿದೇಶಿ ಶಿಕ್ಷಣ ಮತ್ತು ಪ್ರವಾಸ: ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೋಷಕರಿಗೆ ಹೆಚ್ಚಿನ ಹೊರೆ ಬೀಳಲಿದೆ. ಹಾಗೆಯೇ ವಿದೇಶಿ ಪ್ರವಾಸದ ಕನಸು ಕಾಣುತ್ತಿರುವವರು ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಆರ್‌ಬಿಐ (RBI) ಮುಂದಿನ ಹೆಜ್ಜೆ ಏನು?: ರೂಪಾಯಿಯ ಮೌಲ್ಯ ಅತಿಯಾಗಿ ಕುಸಿಯದಂತೆ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ಬಳಸುವ ಮೂಲಕ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುವ ಸಾಧ್ಯತೆಯಿದೆ. ಆದರೆ, ಜಾಗತಿಕ ಮಾರುಕಟ್ಟೆಯ ಬಿರುಗಾಳಿಯ ಮುಂದೆ ಈ ಪ್ರಯತ್ನಗಳು ಎಷ್ಟು ಯಶಸ್ವಿಯಾಗುತ್ತವೆ ಎಂಬುದು ಕಾದು ನೋಡಬೇಕಿದೆ. ರೂಪಾಯಿ ಈ ಕುಸಿತ ಆಮದುದಾರರಿಗೆ ಶಾಪವಾದರೆ, ರಫ್ತುದಾರರಿಗೆ (ವಿಶೇಷವಾಗಿ ಐಟಿ ಕಂಪನಿಗಳಿಗೆ) ವರವಾಗಲಿದೆ. ಆದರೆ ಒಟ್ಟಾರೆಯಾಗಿ ಹಣದುಬ್ಬರ ಏರಿಕೆಯ ಭೀತಿ ಇರುವುದರಿಂದ ಸರ್ಕಾರ ಮತ್ತು ಆರ್‌ಬಿಐ ತುರ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಅಂದಹಾಗೆ ಮೋದಿಯವರು ಪ್ರಧಾನಿಯಾದರೆ 100 ರೂಪಾಯಿಗೆ 3 ಡಾಲರ್‌ ಆಗುವ ದಿನ ಬರುತ್ತವೆ ಎಂದವರು ಕಾಣೆಯಾಗಿದ್ದಾರೆ. ಜೊತೆಗೆ, ಈ ವಿಷಯವನ್ನು ದೇಶದ ಜನ ಕೂಡ ಮರೆತು ದರ ಏರಿಕೆಯ ಬರೆಯನ್ನು ಸುಮ್ಮನೆ ಅನುಭವಿಸುತ್ತಿದ್ದಾರೆ. #value #Indian #rupee #fallen #record #low #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - 0 ನ೦ಬನಿ 9சல oo வEXPRESS ರೂಪಾಯಿ ಮೌಲ್ತ ದಾಖಲೆಯ ಕುಸಿತ! ಮಟ್ಟಕ್ಕೆ ಕುಸಿದ ದಾಖಲೆಯ ಭಾರತೀಯ ರೂಪಾಯಿ $ USD 3305 INR < ಮೌಲ್ಯ * 795.33 ಕ್ಕೆ ತಲುಪಿದ ರೂಪಾಲಿ ಆಮದುವಸುಗಳ ಬೆಲೆಏರಿಕೆ ಬೀತಿ HTTPS:IIMALGUDIEXPRESS.CO.INI 0 ನ೦ಬನಿ 9சல oo வEXPRESS ರೂಪಾಯಿ ಮೌಲ್ತ ದಾಖಲೆಯ ಕುಸಿತ! ಮಟ್ಟಕ್ಕೆ ಕುಸಿದ ದಾಖಲೆಯ ಭಾರತೀಯ ರೂಪಾಯಿ $ USD 3305 INR < ಮೌಲ್ಯ * 795.33 ಕ್ಕೆ ತಲುಪಿದ ರೂಪಾಲಿ ಆಮದುವಸುಗಳ ಬೆಲೆಏರಿಕೆ ಬೀತಿ HTTPS:IIMALGUDIEXPRESS.CO.INI - ShareChat
#📜ಪ್ರಚಲಿತ ವಿದ್ಯಮಾನ📜 #📢ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ?🔴 ಬಿಜೆಪಿಗೆ ಅಭೂತಪೂರ್ವ ಗೆಲುವು, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಜನರ ಮೆಚ್ಚುಗೆ: ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ: ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಜನ ನೀಡಿರುವ ಮೆಚ್ಚುಗೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಕೂಟಕ್ಕೆ ದೊರೆತಿರುವ ಭರ್ಜರಿ ಜಯ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯವನ್ನು ಜನ ಮೆಚ್ಚಿರುವ ಸಂಕೇತ. ಕಳೆದ‌ ಲೋಕಸಭಾ ಚುನಾವಣೆಯಿಂದಲೇ ಇಂಡಿ ಕೂಟವನ್ನು ರಚಿಸಿಕೊಂಡ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಬಿಜೆಪಿಯ ಕಡೆಗಿನ ಜನರ ಒಲವನ್ನು ಒಡೆಯಲು ನೋಡಿದ್ದವು. ಆದರೆ ಇಂಡಿ ಕೂಟ ಎನ್ನುವುದೇ ಅತಿ ದೊಡ್ಡ ವಿಫಲ ಹೆಜ್ಜೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿಯ ದುರಾಡಳಿತ, ಕೋಮು ರಾಜಕಾರಣ, ಗೂಂಡಾಗಿರಿ, ಕೈಗಾರಿಕಾ ವಿರೋಧಿ ನೀತಿಗಳು, ಬಾಂಗ್ಲಾದ ಅಕ್ರಮ ವಲಸಿಗರ ಹಿತ ಕಾಯುವ ನೀತಿಗಳಿಂದ ಬೇಸತ್ತ ಜನರು ಎನ್ ಡಿಎ ಗೆ ಆಶೀರ್ವದಿಸಿ ಟಿಎಂಸಿಯನ್ನು ಕಿತ್ತೊಗೆದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ದೀದಿ ಹೇಳಿದ್ದೇ ನಡೆಯುತ್ತದೆ ಎಂಬ ಸರ್ವಾಧಿಕಾರಕ್ಕೆ ಈ ಮೂಲಕ ಬಿಜೆಪಿ ಅಂತ್ಯ ಹಾಡಿದೆ. ಪಶ್ಚಿಮ ಬಂಗಾಳದ ಇತಿಹಾಸವೇ ನೆನಪಿಟ್ಟುಕೊಳ್ಳುವಂತಹ ಮ್ಯಾಜಿಕ್ ಅನ್ನು ಬಿಜೆಪಿ ನೇತೃತ್ವದ ಎನ್ ಡಿಎ ಮಾಡಿದೆ. ಇನ್ನು ಮುಂದೆ ಬಿಜೆಪಿ ಆಡಳಿತದ ಉಳಿದ ರಾಜ್ಯಗಳಂತೆ ಪಶ್ಚಿಮ ಬಂಗಾಳ ಕೂಡ ವಿಕಸಿತದ ಹಾದಿಯಲ್ಲಿ ಸರಾಗವಾಗಿ ಸಾಗಲಿದೆ ಎಂದಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ನ ಗೆಳೆಯರಾದ ಎಂ.ಕೆ.ಸ್ಟಾಲಿನ್ ತಂಡಕ್ಕೆ ತೀವ್ರ ಮುಖಭಂಗವಾಗಿದ್ದು, ಎಐಎಡಿಎಂಕೆ ನೇತೃತ್ವದ ಎನ್ ಡಿಎ ಕೂಟಕ್ಕೆ ಅಭೂತಪೂರ್ವ ವಿಜಯ ಸಿಕ್ಕಿದೆ. ಅಸ್ಸಾಂ ಹಾಗೂ ಪುದುಚೇರಿಯಲ್ಲೂ ಕಮಲ ಅರಳಿದೆ. ಗ್ಯಾರಂಟಿ ಹೆಸರು ಹೇಳಿಕೊಂಡು ಅಭಿವೃದ್ಧಿ ಮಾಡದೆ ಲೂಟಿಯಲ್ಲಿ ನಿರತವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಇದು ದೊಡ್ಡ ಪಾಠವಾಗಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಇದೇ ರೀತಿಯ ಫಲಿತಾಂಶ ಬಂದು ಕಾಂಗ್ರೆಸ್ ನ ಲಜ್ಜೆಗೆಟ್ಟ ಜನವಿರೋಧಿ ಆಡಳಿತ‌ ಕೊನೆಯಾಗಲಿದೆ. ಅಧಿಕಾರದ ಮದದಲ್ಲಿ ಜನಹಿತ ಮರೆತರೆ ಏನಾಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇದನ್ನು‌ ನೋಡಿಯಾದರೂ ಕಾಂಗ್ರೆಸ್ ಪಾಠ ಕಲಿಯಬೇಕಿದೆ ಎಂದಿದ್ದಾರೆ. ಬಿಜೆಪಿ ಸೇರಿದಂತೆ ಎನ್ ಡಿಎ ಕೂಟಕ್ಕೆ ಬೆಂಬಲ‌ ನೀಡಿ ಹಾರೈಸಿದ ಮತದಾರ ಬಂಧುಗಳಿಗೆ ನಾನು ಅನಂತ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಹಾಗೂ ಕೋಟ್ಯಂತರ ಕಾರ್ಯಕರ್ತರಿಗೆ ಹಾರ್ದಿಕ ಅಭಿನಂದನೆಗಳು ಎಂದಿದ್ದಾರೆ. #Unprecedented #victory #BJP #people #appreciation #Modi #govt #KSudhakar #WestBengal #Assam #Puducherry #malgudiexpress #malgudinews #news #TopNews
📜ಪ್ರಚಲಿತ ವಿದ್ಯಮಾನ📜 - ಶ నoలv EXPRESS ಬಿಜೆಪಿಗೆ ಅಭೂತಪೂರ್ವ ಗೆಲುವು; ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಜನರ మిజ్బుగి: డాశి సుధాశిరా HTTPS:IIMALGUDIEXPRESS.CO.IN/ ಶ నoలv EXPRESS ಬಿಜೆಪಿಗೆ ಅಭೂತಪೂರ್ವ ಗೆಲುವು; ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಜನರ మిజ్బుగి: డాశి సుధాశిరా HTTPS:IIMALGUDIEXPRESS.CO.IN/ - ShareChat