ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಬಿಡುಗಡೆ ಯಾವಾಗ ಎನ್ನುವುದು ಯಾರಿಗೂ ಗೊತ್ತಿಲ್ಲ. ಪೊಲೀಸರ ಬಳಿ ಬಲವಾದ ಸಾಕ್ಷಿಗಳಿವೆ ಎನ್ನಲಾಗಿದ್ದು, ಪವಿತ್ರಾ ಗೌಡ, ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಎಲ್ಲಾ ಸಾಕ್ಷಿಗಳನ್ನು ಪೊಲೀಸರು ಕಲೆಹಾಕಿದ್ದಾರೆ ಎನ್ನಲಾಗಿದೆ.ದರ್ಶನ್ರನ್ನು ರಕ್ಷಿಸಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಅಭಿಮಾನಿಗಳು, ಕುಟುಂಬದವರು ದೇವರ ಮೊರೆ ಹೋಗಿದ್ದಾರೆ.ಇದೀಗ ದರ್ಶನ್ರ ಬಿಡುಗಡೆಗೆ ಪ್ರಾರ್ಥಿಸಲು ಸ್ಯಾಂಡಲ್ವುಡ್ ಕಲಾವಿದರ ನೇತೃತ್ವದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತಿದೆ. ಮೂಲಗಳ ಪ್ರಕಾರ ಆಗಸ್ಟ್ 14ರಂದು ಬೆಂಗಳೂರಿನಲ್ಲಿರುವ ಕಲಾವಿದರ ಸಂಘದ ಕಚೇರಿಯಲ್ಲಿ ವಿಶೇಷ ಪೂರ್ಣಾಹುತಿ ಹೋಮವನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಕಲಾವಿದರಿಗು ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.ನಟ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮತ್ತು ನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ಈ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಸ್ಯಾಂಡಲ್ವುಡ್ನ ಹಿರಿಯ ನಟ ಶಿವರಾಜ್ಕುಮಾರ್, ಉಪೇಂದ್ರ, ಸುದೀಪ್ ಮತ್ತು ಯಶ್ ಅವರಿಗೂ ಆಹ್ವಾನ ನೀಡಲಾಗಿದೆ. ಪೂಜೆಯಲ್ಲಿ ಇವರು ಭಾಗವಹಿಸುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.ಸಾಕ್ಷ್ಯ ನಾಶ ಶಂಕೆ ಹಿನ್ನೆಲೆ ರೇಣುಕಾಸ್ವಾಮಿ ಕುಟುಂಬದ ಮೇಲೂ ಪೊಲೀಸರ ಹದ್ದಿನ ಕಣ್ಣುಅನೇಕ ಕಲಾವಿದರು ಭಾಗಿಚಂದನವನದಲ್ಲಿ ನಟ ದರ್ಶನ್ಗೆ ಸಾಕಷ್ಟು ಆತ್ಮೀಯರು ಇದ್ದಾರೆ. ಅನೇಕ ಕಲಾವಿದರು ಈ ಯಾಗದಲ್ಲಿ ಭಾಗವಹಿಸುವುದು ಖಚಿತವಾಗಿದೆ. ಧನ್ವೀರ್, ವಿನೋದ್ ಪ್ರಭಾಕರ್ ಸೇರಿದಂತೆ ಅನೇಕರು ಪಾಲ್ಗೊಳ್ಳುವ ಸಾಧ್ಯತೆ ಇದೆ.ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ಕನಿಷ್ಠ ಒಂದಾದರೂ ಸಿನಿಮಾ ಮಾಡುತ್ತಾ ಸಿನಿಮಾ ಕಲಾವಿದರು, ಚಿತ್ರಮಂದಿರಗಳಿಗೆ ಜೀವ ತುಂಬುತ್ತಿದ್ದ ದರ್ಶನ್ ಜೈಲು ಪಾಲಾಗಿದ್ದಾರೆ. ಇನ್ನೂ ಕೆಲವು ನಟರು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿದ್ದಾರೆ. ದೊಡ್ಡ ನಟರು ವರ್ಷಕ್ಕೆ ಕನಿಷ್ಠ ಎರಡು ಸಿನಿಮಾ ಮಾಡಬೇಕು ಎಂದು ಚಿತ್ರಮಂದಿರಗಳ ಮಾಲೀಕರು ಕೂಡ ಮನವಿ ಮಾಡಿಕೊಂಡಿದ್ದರು. ಈಗ ದರ್ಶನ್ ಜೈಲು ಸೇರಿದ್ದರಿಂದ ಚಿತ್ರರಂಗಕ್ಕೆ ಕೂಡ ದೊಡ್ಡ ಹೊಡೆತವಾಗಿದೆ.ಈ ವರ್ಷದ ಮೊದಲಾರ್ಧದಲ್ಲಿ ಕನ್ನಡ ಸಿನಿಮಾಗಳು ಯಾವೂ ಅಷ್ಟಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿಲ್ಲ. ಇನ್ನಾದರೂ ಕನ್ನಡ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣಲಿ ಎನ್ನುವುದು ಕೂಡ ಪೂಜೆ ಮಾಡಿಸಲು ಮತ್ತೊಂದು ಕಾರಣವಾಗಿರಬಹುದು.ದರ್ಶನ್ ಅವರು ಬೇಗ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ ಪತ್ನಿ ವಿಜಯಲಕ್ಷ್ಮಿ ಕೂಡ ದೇವರ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಕೊಲ್ಲೂರಿನಲ್ಲಿ ಯಾಗ ಕೂಡ ಮಾಡಿಸಿದ್ದರು. ಅಭಿಮಾನಿಗಳು ಕೂಡ ದರ್ಶನ್ರ ಫೋಟೊಗಳನ್ನು ದೇವಸ್ಥಾನದಲ್ಲಿಟ್ಟು ಪೂಜೆ ಮಾಡಿಸುತ್ತಿದ್ದು, ನಟನ ಬಿಡುಗಡೆಗೆ ಪ್ರಾರ್ಥನೆ ಮಾಡುತ್ತಿದ್ದಾರೆ. #📢ಆಗಸ್ಟ್ 9ರ ಅಪ್ಡೇಟ್ಸ್ 🗞️
ಬೆಂಗಳೂರು: ಮನೆ ಬಾಗಿಲಲ್ಲಿಯೇ ತಪಾಸಣೆ ನಡೆಸಿ, ಅಗತ್ಯ ಔಷಧಿಗಳನ್ನು ಒದಗಿಸುವ ಗೃಹ ಆರೋಗ್ಯ ಯೋಜನೆಯನ್ನು ಮುಂದಿನ ತಿಂಗಳು ರಾಜ್ಯದಲ್ಲಿ ಜಾರಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿರುವವರಲ್ಲಿ ಕೆಲವರು ನಿಯಮಿತವಾಗಿ ಮಾತ್ರೆಗಳನ್ನು ಸೇವಿಸುತ್ತಿಲ್ಲ.ಆರ್ಥಿಕ ಹೊರೆ ಸೇರಿ ವಿವಿಧ ಕಾರಣಗಳಿಂದ ಮಾತ್ರೆಗಳನ್ನು ಖರೀದಿಸುತ್ತಿಲ್ಲ. ಗೃಹ ಆರೋಗ್ಯ ಯೋಜನೆಯಡಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆಗಳಿಗೆ ನೇರವಾಗಿ ಒದಗಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹ ಸಮಸ್ಯೆಯಾದ ಎಲ್ಲ ಕಡೆ ಭೇಟಿ ನೀಡುತ್ತಿದ್ದೇನೆ. ರಸ್ತೆ, ವಿದ್ಯುತ್, ಕುಡಿಯುವ ನೀರು, ಕಾಳಜಿ ಕೇಂದ್ರ ಸೇರಿದಂತೆ ಅಗತ್ಯ ಪರಿಹಾರೋಪಾಯಗಳನ್ನು ಆರಂಭಿಸಲಾಗಿದೆ. ಮುಂದಿನ ವಾರ ಇನ್ನೂ ಹೆಚ್ಚಿನ ಮಳೆ ಬೀಳುವ ಮುನ್ಸೂಚನೆ ಇದೆ. ವಿಪತ್ತು ನಿರ್ವಹಣೆಗೆ ಎಲ್ಲ ಇಲಾಖೆಗಳನ್ನೂ ಸಜ್ಜುಗೊಳಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. #📢ಆಗಸ್ಟ್ 9ರ ಅಪ್ಡೇಟ್ಸ್ 🗞️
ಮೀರತ್ನ ನಾಗ್ಲಾ ಶೇಖು ಪ್ರದೇಶದಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಂತರ್ಧರ್ಮೀಯ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ 16 ವರ್ಷದ ಹುಡುಗಿಯನ್ನು ಆಕೆಯ ಸಹೋದರನೇ ಕತ್ತು ಹಿಸುಕಿ ಕೊಂದಿದ್ದಾನೆ.ಮೃತಳನ್ನು ಅಮರೀಶಾ ಎಂದು ಗುರುತಿಸಲಾಗಿದ್ದು, ಈಕೆ ಹಿಂದೂ ಹುಡುಗನನ್ನು ಪ್ರೀತಿಸುತ್ತಿದ್ದಳು.ಆದರೆ ಮದುವೆಗೆ ಆಕೆಯ ಕುಟುಂಬದ ವಿರೋಧವಿತ್ತು. ಕುಟುಂಬವು ಈ ಹಿಂದೆ ಅಮರೀಶಾಳ ಪ್ರೇಮ ಸಂಬಂಧದ ಕುರಿತು ಮನವೊಲಿಸಲು ಪ್ರಯತ್ನಿಸಿತ್ತು. ಆದರೆ ಆಕೆ ಪೋಷಕರ ಮಾತಿಗೆ ಕಿವಿಗೊಡಲಿಲ್ಲ.ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಸಹೋದರ ಹಸನ್ ಹಾಗೂ ಅಮರೀಶಾ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದಿದೆ. ಜಗಳ ಹಿಂಸಾತ್ಮಕವಾಗಿ ತಿರುಗುತ್ತಿದ್ದಂತೆಯೇ ಅಮರೀಶಾ ಮನೆ ಹೊರಗಡೆಯ ಬೀದಿಗೆ ಓಡಿ ಹೋದಳು. ಈಕೆಯನ್ನು ಹಿಂಬಾಲಿಸಿದ ಹಸನ್ ಹಲ್ಲೆ ಮಾಡಿದ್ದಾನೆ. ಅಲ್ಲದೇ ಸಾವರ್ಜನಿಕರ ಮುಂದೆಯೇ ಆಕೆಯ ಕತ್ತು ಹಿಸುಕಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಅಮರೀಶಾ ಮೃತಪಟ್ಟಿದ್ದಳು. ಪೊಲೀಸರು ಬರುವಷ್ಟರಲ್ಲಿ ಆಕೆಯ ಶವ ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲೇ ಬಿದ್ದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಸನ್ನನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಇತ್ತ ಅಮರೀಶಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಹಿಂದೂವನ್ನು ಪ್ರೀತಿಸುವ ಮೂಲಕ ಕುಟುಂಬದ ಹೆಸರನ್ನು ಹಾಳುಮಾಡುತ್ತಿದ್ದಾಳೆ ಮತ್ತು ತಂದೆಯ ಗೌರವಕ್ಕೆ ಕಳಂಕ ತರುತ್ತಿದ್ದಾಳೆ. ಈ ಹಿನ್ನೆಲೆಯಲ್ಲಿ ನಾನು ಸಿಟ್ಟಿಗೆದ್ದು ಆಕೆಯ ಮೇಲೆ ಹಲ್ಲೆ ಮಾಡಿದ್ದೇನೆ. ಆದರೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಹಸನ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. #📢ಆಗಸ್ಟ್ 9ರ ಅಪ್ಡೇಟ್ಸ್ 🗞️
ಯೂಟ್ಯೂಬ್ ನೋಡಿ ಐವರು ಮಕ್ಕಳು ಬಾಂಬ್ ತಯಾರಿಸಲು ಮುಂದಾಗಿದ್ದಾರೆ. ತಯಾರಿಸುತ್ತಿದ್ದಂತೆ ಏಕಾಏಕಿ ಸ್ಫೋಟಗೊಂಡಿದ್ದು, ಪರಿಣಾಮ ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಂತಹ ಘಟನೆಗಳು ಮರುಕಳಿಸದಿರಲು ಪೋಷಕರು ತಮ್ಮ ಮಕ್ಕಳ ಆನ್ಲೈನ್ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪಾಟ್ನಾ: ಇತ್ತೀಚೆಗಷ್ಟೇ ಬಿಹಾರದ ಮುಜಾಫರ್ಪುರ ಜಿಲ್ಲೆಯಲ್ಲಿ ಐವರು ಮಕ್ಕಳು ಯೂಟ್ಯೂಬ್ ನೋಡಿ ಬಾಂಬ್ ತಯಾರಿಸಲು ಮುಂದಾಗಿದ್ದಾರೆ. ಬೆಂಕಿಕಡ್ಡಿಗಳಿಂದ ಹಿಡಿದು ಗನ್ಪೌಡರ್ನವರೆಗೆ ಎಲ್ಲವನ್ನೂ ಸಂಗ್ರಹಿಸಿ ಟಾರ್ಚ್ಲೈಟ್ಗೆ ಸುರಿದು ಬಾಂಬ್ ಒಂದನ್ನು ತಯಾರಿಸಿದ್ದಾರೆ. ಏಕಾಏಕಿ ಅದು ಸ್ಫೋಟಗೊಂಡಿದ್ದು, ಪರಿಣಾಮ ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಬಿಹಾರದ ಮುಜಾಫರ್ಪುರದ ಗೈಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನಿ ಬಂಗ್ರಾ ಕಲ್ಯಾಣ್ ಗ್ರಾಮದಲ್ಲಿ ಐವರು ಮಕ್ಕಳು ಯೂಟ್ಯೂಬ್ ವಿಡಿಯೋ ನೋಡಿ ಬಾಂಬ್ ತಯಾರಿಸಲು ಬಯಸಿದ್ದರು. ಮಕ್ಕಳು ಬೆಂಕಿಕಡ್ಡಿಗಳು ಮತ್ತು ಗನ್ಪೌಡರ್ಗಳನ್ನು ಸಂಗ್ರಹಿಸಿ ಟಾರ್ಚ್ಲೈಟ್ಗೆ ಸುರಿದಿದ್ದರು. ನಂತರ, ಅವರು ಅದರಲ್ಲಿ ಬ್ಯಾಟರಿಯನ್ನು ಹಾಕಿದ್ದಾರೆ. ಏಕಾಏಕಿ ಅದು ಸ್ಫೋಟಗೊಂಡಿದೆ. ಈ ಅವಘಡದಲ್ಲಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯೂಟ್ಯೂಬ್ ವಿಡಿಯೋ ನೋಡಿ ಮಕ್ಕಳು ತಯಾರಿಸಲು ಪ್ರಯತ್ನಿಸಿದ್ದು ಈ ವೇಳೆ ದೊಡ್ಡ ಸ್ಫೋಟ ಸಂಭವಿಸಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪೋಷಕರು ತಮ್ಮ ಮಕ್ಕಳ ಆನ್ಲೈನ್ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. #📢ಆಗಸ್ಟ್ 9ರ ಅಪ್ಡೇಟ್ಸ್ 🗞️
Venus transit into Phalguni: ಫಾಲ್ಗುಣ ನಕ್ಷತ್ರವನ್ನು ಪ್ರವೇಶಿಸುವ ಶುಕ್ರವು ಮಿಥುನ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಈ ವೇಳೆ ಮುಟ್ಟಿದ್ದೆಲ್ಲ ಚಿನ್ನ.. ಕೈಗೆತ್ತಿಕೊಂಡ ಕೆಲಸ ಪೂರ್ಣಗೊಳ್ಳಲಿದೆ. ಅದರಲ್ಲೂ ದಂಪತಿ ನಡುವೆ ಕಲಹಗಳು ಬಂದರೆ ಅದೆಲ್ಲಾ ಪರಿಹಾರಗೊಂಡು ನೆಮ್ಮದಿಯಿಂದ ಬದುಕುತ್ತಾರೆ. ಅವರು ತಮ್ಮ ಗುರಿಗಳನ್ನು ಸಾಧಿಸುತ್ತಾರೆ. ಆರ್ಥಿಕ ಅಭಿವೃದ್ಧಿಯಾ
ಜ್ಯೋತಿಷ್ಯದಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ನವಗ್ರಹಗಳಲ್ಲಿ ಶುಕ್ರನ ಸ್ಥಾನ ಬಹಳ ವಿಶೇಷವಾಗಿದೆ. ರಾಕ್ಷಸ ಗುರು ಶುಕ್ರನು ಸುಂದರವಾದ ಗ್ರಹ.. ದಾಂಪತ್ಯ ಸುಖ, ಸಮೃದ್ಧಿ, ಆಕರ್ಷಣೆ, ವೈಭವದ ಜೊತೆಗೆ ಕಲೆಗಳ ಅಧಿಪತಿ. ಆಗಸ್ಟ್ 11 ರಂದು ಶುಕ್ರನು ರಾಶಿಯನ್ನು ಬದಲಾಯಿಸುತ್ತಾನೆ. ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸೇರಿದ ಜನರು ಶುಕ್ರನ ಸಂಕ್ರಮಣದಿಂದ ಐಷಾರಾಮಿ ಜೀವನವನ್ನು ಆನಂದಿಸುತ್ತಾರೆ. ಇದೇ ತಿಂಗಳ 11ರಂದು ಶುಕ್ರನು ಫಾಲ್ಗುಣ ನಕ್ಷತ್ರಕ್ಕೆ (Phalguni Nakshatra) ಪ್ರವೇಶ ಮಾಡಲಿದ್ದಾನೆ. ಲಾಭದಾಯಕ ಶುಕ್ರನು ತನ್ನ ರಾಶಿಗಳಿಗೆ ಶುಭ ಯೋಗಗಳನ್ನು ಸೃಷ್ಟಿಸುತ್ತಾನೆ. ಶುಕ್ರವು ಪಾಲ್ಗುಣ ನಕ್ಷತ್ರಕ್ಕೆ ಕಾಲಿಡುತ್ತಿದ್ದಂತೆ, ಈ ಸಮಯವು ಕೆಲವು ರಾಶಿಚಕ್ರ ಚಿಹ್ನೆಗಳೊಂದಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ. ಸಂಪತ್ತಿನ ಮಳೆಯೂ ಸುರಿಯಲಿದೆ. ಈ ಸಂದರ್ಭದಲ್ಲಿ ಯಾವ ರಾಶಿಯವರಿಗೆಲ್ಲ ಶುಭ ಯೋಗಗಳು ಸೃಷ್ಟಿಯಾಗುತ್ತವೆ.. ನಿಮ್ಮ ರಾಶಿ ಯಾವುದು ಪರಿಶೀಲಿಸಿ..ಮಿಥುನ: ಫಾಲ್ಗುಣ ನಕ್ಷತ್ರವನ್ನು ಪ್ರವೇಶಿಸುವ ಶುಕ್ರವು ಈ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಈ ವೇಳೆ ಮುಟ್ಟಿದ್ದೆಲ್ಲ ಚಿನ್ನ.. ಕೈಗೆತ್ತಿಕೊಂಡ ಕೆಲಸ ಪೂರ್ಣಗೊಳ್ಳಲಿದೆ. ಅದರಲ್ಲೂ ದಂಪತಿ ನಡುವೆ ಕಲಹಗಳು ಬಂದರೆ ಅದೆಲ್ಲಾ ಪರಿಹಾರಗೊಂಡು ನೆಮ್ಮದಿಯಿಂದ ಬದುಕುತ್ತಾರೆ. ಅವರು ತಮ್ಮ ಗುರಿಗಳನ್ನು ಸಾಧಿಸುತ್ತಾರೆ. ಆರ್ಥಿಕ ಅಭಿವೃದ್ಧಿಯಾಗಲಿದೆ.ಕರ್ಕ ರಾಶಿ: ಶುಕ್ರನ ಸಂಕ್ರಮವು ಈ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ಇದಲ್ಲದೆ, ಈ ಚಿಹ್ನೆಯ ಉದ್ಯಮಿಗಳು ಉತ್ತಮ ಲಾಭವನ್ನು ಗಳಿಸುತ್ತಾರೆ. ವಿಶೇಷವಾಗಿ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ ಅದೃಷ್ಟ ಕೂಡಿಬರುತ್ತದೆ. ಒಟ್ಟಿನಲ್ಲಿ ಈ ರಾಶಿಯವರಿಗೆ ಇದು ಅದೃಷ್ಟದ ಸಮಯ ಎಂದು ಹೇಳಬಹುದು.
ತುಲಾ: ಶುಕ್ರ ಸಂಕ್ರಮವು ಈ ರಾಶಿಯವರಿಗೆ ನಾಲ್ಕು ಆದಾಯದ ಮಾರ್ಗಗಳನ್ನು ನೀಡುತ್ತದೆ. ಈ ನಕ್ಷತ್ರ ಬದಲಾವಣೆಯಿಂದ ಉದ್ಯೋಗಿಗಳ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವಿರಿ. ಈ ರಾಶಿಯ ಜನರು ಹಠಾತ್ ಆರ್ಥಿಕ ಲಾಭವನ್ನು ಪಡೆಯುತ್ತಾರೆ.ಕುಂಭ: ಈ ರಾಶಿಯವರು ಕೈಗೊಂಡ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ. ನೀವು ಜೀವನದಲ್ಲಿ ಅನಿರೀಕ್ಷಿತ ಆದಾಯವನ್ನು ಪಡೆಯುತ್ತೀರಿ. ಸಂಪತ್ತಿನಲ್ಲಿ ಅನಿರೀಕ್ಷಿತ ಹೆಚ್ಚಳವಾಗುತ್ತದೆ. ಕುಟುಂಬ ಸದಸ್ಯರ ನಡುವೆ ಸೌಹಾರ್ದತೆ ಹೆಚ್ಚುತ್ತದೆ. ಶುಕ್ರನ ಈ ಸಂಕ್ರಮವು ಕುಂಭ ರಾಶಿಯವರಿಗೆ ವಿಶೇಷ ಫಲಿತಾಂಶಗಳನ್ನು ನೀಡುತ್ತದೆ. #📢ಆಗಸ್ಟ್ 9ರ ಅಪ್ಡೇಟ್ಸ್ 🗞️
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಿಗ್ ಅಪ್ಡೇಟ್ ಬಂದಿದೆ. ಕೊಲೆ ತನಿಖೆಯ ಭಾಗವಾಗಿ ಇಂದು ಎಫ್ಎಸ್ಎಲ್ ವರದಿ ಬರಲಿದೆ ಎನ್ನಲಾಗಿತ್ತು. ಈ ಸಂಬಂಧ ಈಗ ವರದಿ ಪೊಲೀಸರ ಕೈ ಸೇರಿದ್ದು ಶಾಕಿಂಗ್ ಸತ್ಯವೊಂದು ರಿವೀಲ್ ಆಗಿದೆ.ಕೊಲೆ ತನಿಖೆಯಲ್ಲಿ ಅತಿ ದೊಡ್ಡ ರಹಸ್ಯ ರಿವಿಲ್ ಆಗಿದೆ.ಎಫ್ ಎಸ್ ಎಲ್ ವರದಿ ಬಿಚ್ಚಿಟ್ಟಿದೆ ಭಯಾನಕ ಸತ್ಯವೇನು ಗೊತ್ತಾ? ದರ್ಶನ್ ಬಟ್ಟೆಗಳ ಮೇಲೆ ರೇಣುಕಾಸ್ವಾಮಿ ದೇಹದ ರಕ್ತದ ಕಲೆಗಳು ಸಿಕ್ಕಿದ್ದು ಪೊಲೀಸರಿಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ.ಈ ಒಂದು ಎಫ್ಎಸ್ಎಲ್ ವರದಿಯ ಸಾಕ್ಷಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗೆ ಕಂಟಕವಾಗಲಿದೆ. ದರ್ಶನ್ ಮನೆಯಲ್ಲಿ ವಶಪಡಿಸಿಕೊಂಡಿದ್ದ ದರ್ಶನ್ ನ ನೀಲಿ ಬಣ್ಣ ಜೀನ್ಸ್ ಪ್ಯಾಂಟ್ ಹಾಗೂ ಕಪ್ಪು ರೌಂಡ್ ನೆಕ್ ಶರ್ಟ್ನಲ್ಲಿ ರಕ್ತದ ಕಲೆ ಕಂಡು ಬಂದಿದೆ.ಪೊಲೀಸರು ಇದನ್ನು ವಶಕ್ಕೆ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದ್ದರು. ಎಫ್ ಎಸ್ ಎಲ್ ಪರಿಶೀಲನೆಯಲ್ಲಿ ದರ್ಶನ್ ಬಟ್ಟೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿದ್ದವು. ಇವುಗಳು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು ಎಫ್ ಎಸ್ ಎಲ್ ವರದಿಯಲ್ಲಿ ಧೃಡ ಪಟ್ಟಿದೆ.ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಭಾಗಿಯಾಗಿದ್ದ ಎನ್ನುವುದಕ್ಕೆ ಅತ್ಯಂತ ಮಹತ್ವಪೂರ್ಣ ಸಾಕ್ಷ್ಯ ಇದಾಗಿದೆ. ನ್ಯೂಸ್ 18 ಕನ್ನಡಕ್ಕೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಮಾಹಿತಿ ಲಭ್ಯವಾಗಿದೆ.ಈ ಒಂದು ಕೇಸ್ನಲ್ಲಿ ಬಹಳಷ್ಟು ವರದಿಗಳು ಇನ್ನಷ್ಟೇ ಪೊಲೀಸರ ಕೈ ಸೇರಬೇಕಾಗಿದೆ. ಇವುಗಳು ಸಿಕ್ಕಿದಾಗ ಕೇಸ್ನ ದಿಕ್ಕು ಬದಲಾಗುವ ಅಥವಾ ಪ್ರಕರಣದಲ್ಲಿ ದೊಡ್ಡ ಅಪ್ಡೇಟ್ ಬರುವ ಸಾಧ್ಯತೆಯೂ ಇದೆ. ಆರೋಪಿಗಳ ಡಿಎನ್ಎ ಟೆಸ್ಟ್ ರಿಪೋರ್ಟ್, ಡಿಎನ್ಎ ಟೆಸ್ಟ್ ಸಲುವಾಗಿ ಬ್ಲಡ್ ಸ್ಯಾಂಪಲ್, ಹೇರ್ ಸ್ಯಾಂಪಲ್, ಉಗುರಿನ ಚುರನ್ನ ಸಂಗ್ರಹಿಸಿದ್ದ ವೈದ್ಯರು ಇವೆಲ್ಲದರ ರಿಪೋರ್ಟ್ ಇನ್ನು ಕೊಡಬೇಕಷ್ಟೆ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಆರೋಪಿಗಳ ಡಿಎನ್ಎ ಟೆಸ್ಟ್ ಸ್ಯಾಂಪಲ್ ರಿಪೋರ್ಟ್ಸ್, ಕೃತ್ಯಕ್ಕೆ ಬಳಸಿದ್ದ ವಸ್ತುಗಳ ರಿಪೋರ್ಟ್ಸ್, ವಸ್ತುಗಳ ಮೇಲಿದ್ದ ರಕ್ತದ ಕಲೆಗಳು, ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಬ್ಲಡ್ ಸ್ಯಾಂಪಲ್ಸ್, ಆರೋಪಿಗಳು ಕೃತ್ಯ ಎಸಗಿದ್ದ ವೇಳೆ ಧರಿಸಿದ್ದ ಬಟ್ಟೆಗಳ ರಿಪೋರ್ಟ್ ಕೇಳಲಾಗಿತ್ತು.
ಪೊಲೀಸರು ಆರೋಪಿಗಳ ಬಟ್ಟೆಗಳನ್ನ ಸೀಜ್ ಮಾಡಿ ಎಫ್ಎಸ್ಎಲ್ ಗೆ ರವಾನಿಸಿದ್ದರು. ಆರೋಪಿಗಳ ಚಪ್ಪಲಿ, ಶೂಗಳ ರಿಪೋರ್ಟ್ ಕೂಡಾ ಕೇಳಲಾಗಿದೆ. ಕೃತ್ಯದ ವೇಳೆ ಪುಟ್ ಪ್ರಿಂಟ್ ಸಂಗ್ರಹಿಸಲು ಚಪ್ಪಲಿ, ಶೂಗಳ ಸಂಗ್ರಹಿಸಲಾಗಿತ್ತು.ಪಟ್ಟಣಗೆರೆ ಶೆಡ್ ನಲ್ಲಿ ಸಂಗ್ರಹಿಸಿದ ಸಿಸಿಟಿವಿ ಪೂಟೇಜ್ ಸದ್ಯ ಕೇಸ್ನಲ್ಲಿ ದೊಡ್ಡ ಸಾಕ್ಷಿಯಾಗಿದೆ. ಡಿವಿಆರ್ ಸಮೇತ ಇವೆಲ್ಲವನ್ನೂ ಎಫ್ಎಸ್ಎಲ್ ಗೆ ರವಾನಿಸಿದ್ದ ಪೊಲೀಸರು ರಿಪೋರ್ಟ್ಗಾಗಿ ಕಾಯುತ್ತಿದ್ದಾರೆ. ದರ್ಶನ್ ಹಾಗೂ ಪವಿತ್ರಾಗೌಡ ಮನೆಯ ಸಿಸಿಟಿವಿ ರಿಪೋರ್ಟ್ ಕೂಡಾ ಸಿಗಬೇಕಾಗಿದೆ.ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಸಿಸಿಟಿವಿಗಳ ರಿಪೋರ್ಟ್, ಮೃತದೇಹ ಪತ್ತೆಯಾದ ರಾಜಕಾಲುವೆ ಸಮೀಪದ ಸಿಸಿಟಿವಿ ರಿಪೋರ್ಟ್, ಆರೋಪಿಗಳ ಮೊಬೈಲ್ ಫೋನ್ ರಿಪೋರ್ಟ್ ಬರಲಿದೆ. ನಟ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳ ಮೊಬೈಲ್ ಫೋನ್ ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ. ಎಫ್ಎಸ್ಎಲ್ ನಲ್ಲಿ ಮೊಬೈಲ್ ಎಕ್ಸ್ಟಾಕ್ಟ್ ಮಾಡಿ ವರದಿ ಕೇಳಿದ ಪೊಲೀಸರು ವರದಿಗಾಗಿ ಸದ್ಯ ಕಾಯುತ್ತಿದ್ದಾರೆ. ಈಗ ಬಂದಿರುವ ಎಫ್ಎಸ್ಎಲ್ ವರದಿಯಂತೂ ದರ್ಶನ್ ವಿರುದ್ಧ ಬಹಳ ಮುಖ್ಯವಾದ ಸಾಕ್ಷಿಯಾಗಿರಲಿದೆ. ಇದರಿಂದ ನಟನಿಗೆ ಮತ್ತಷ್ಟು ಸಮಸ್ಯೆಯಾಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ. #📢ಆಗಸ್ಟ್ 7ರ ಅಪ್ಡೇಟ್ಸ್ 🗞️
ಬಾಂಗ್ಲಾದೇಶದ ಸಿನಿಮಾ ನಿರ್ಮಾಪಕ, ಉದ್ಯಮಿ ಸಲೀಂ ಖಾನ್ ಹಾಗೂ ಖ್ಯಾತ ನಟ ಶಾಂತಾ ಖಾನ್ ಅನ್ನು ಜನ, ನಡು ರಸ್ತೆಯಲ್ಲಿ ಹಿಡಿದು ಭೀಕರವಾಗಿ ಹೊಡೆದು ಕೊಂದು ಹಾಕಿದ್ದಾರೆ. ಅಷ್ಟಕ್ಕೂ ಇವರನ್ನು ಹೀಗೆ ಭೀಕರವಾಗಿ ಕೊಲ್ಲಲು ಕಾರಣವೇನು?ಬಾಂಗ್ಲಾದೇಶದಲ್ಲಿ ಯುವಕರು ಬೀದಿಗಿಳಿದಿದ್ದಾರೆ.ಮೀಸಲಾತಿ ವಿರೋಧಿ ಹೋರಾಟ ಹಿಂಸಾಚಾರಕ್ಕೆ ತಿರುಗಿದೆ. ಈ ವರೆಗೆ ಸುಮಾರು 200 ಕ್ಕೂ ಹೆಚ್ಚು ಜನ ಜೀವ ಹೋಗಿದೆ. ಲಕ್ಷಾಂತರ ಕೋಟಿ ಆಸ್ತಿ ಹಾನಿಯಾಗಿದೆ. ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಜನ ಹುಚ್ಚರಂತಾಗಿದ್ದು ಪೊಲೀಸರು, ಸೈನ್ಯ ಏನೂ ಮಾಡಲಾಗದ ಸ್ಥಿತಿ ತಲುಪಿದೆ. ಜನರು ಅದೆಷ್ಟು ಹುಚ್ಚಾಟಕ್ಕಿಳಿದಿದ್ದಾರೆಂದು ಆಗಸ್ಟ್ 05 ರಂದು ಸಿನಿಮಾ ನಿರ್ಮಾಪಕ ಮತ್ತು ಸ್ಟಾರ್ ನಟನಾಗಿರುವ ಆತನ ಮಗನನ್ನು ನಡು ರಸ್ತೆಯಲ್ಲಿ ಹೊಡೆದು ಕೊಂದು ಹಾಕಿದ್ದಾರೆ. ಪೊಲೀಸರಿಗೆ ವಿಷಯ ತಿಳಿದರೂ ಸಹ ಹೋಗಿ ಕಾಪಾಡಲು ಆಗಲಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಸಿನಿಮಾ ನಿರ್ಮಾಪಕ ಸಲೀಂ ಖಾನ್ ಹಾಗೂ ಅವರ ಪುತ್ರ ಶಾಂತಾ ಖಾನ್ ಅನ್ನು ಚಾಂದ್ಪುರ ಉಪ ಜಿಲ್ಲೆ ಪ್ರದೇಶದ ಬಜಾರ್ನಲ್ಲಿ ಜನ ಕಟ್ಟಿಗೆಗಳಿಂದ ಕೈಗೆ ಸಿಕ್ಕಿದ ಆಯುಧಗಳಿಂದ ಭೀಕರವಾಗಿ ಹೊಡೆದು ಕೊಂದು ಹಾಕಿದ್ದಾರೆ. ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಪರಾರಿಯಾದ ಬಳಿಕ ಸಲೀಂ ಖಾನ್ ಹಾಗೂ ಅವರ ಪುತ್ರ ಶಾಂತಾ ಖಾನ್ ಅವರುಗಳು ತಾವು ಸಹ ಪರಾರಿಯಾಗಲು ಮುಂದಾಗಿದ್ದಾರೆ. ಮೊದಲು ಅವರು ಫರೂಕಾಬಾದ್ ಮಾರ್ಕೆಟ್ಗೆ ಬಂದಿದ್ದಾರೆ. ಅಲ್ಲಿ ಜನರು ಅವರನ್ನು ಗುರುತು ಹಿಡಿದು ಕೊಲ್ಲಲು ಬಂದಿದ್ದಾರೆ. ಆಗ ಸಲೀಂ ಖಾನ್ ತನ್ನಲ್ಲಿದ್ದ ಬಂದೂಕು ತೋರಿಸಿ ಹೇಗೋ ಬಚಾವಾಗಿ ಮುಂದೆ ಹೋಗಿದ್ದಾರೆ. ಅಲ್ಲಿಂದ ಮುಂದೆ ಹೋದಾಗ ಬಗಾರಾ ಮಾರುಕಟ್ಟೆ ಬಳಿ ಮತ್ತೊಂದು ಗುಂಪು ಅವರನ್ನು ಅಡ್ಡ ಹಾಕಿದೆ ಅಲ್ಲಿ ಅವರಿಗೆ ತಪ್ಪಿಸಿಕೊಳ್ಳಲಾಗಿಲ್ಲ. ಜನರೆಲ್ಲ ಸೇರಿ ನಡು ರಸ್ತೆಯಲ್ಲಿಯೇ ಅವರನ್ನು ಹೊಡೆದು, ಹೊಡೆದು ಕೊಂದು ಹಾಕಿದೆ.ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, 'ನಮಗೆ ಸಲೀಂ ಹಾಗೂ ಶಾಂತಾ ಖಾನ್ ನಿಧನ ಸುದ್ದಿ ತಿಳಿಯಿತು. ಆದರೆ ನಮ್ಮ ಜೀವದ ಕಾಳಜಿವಹಿಸಿ ನಾವು ಅವರನ್ನು ರಕ್ಷಿಸಲು ಹೋಗಲಿಲ್ಲ' ಎಂದಿದ್ದಾರೆ. ಪೊಲೀಸರು ಹಾಗೂ ಸೈನ್ಯವೇ ಪ್ರತಿಭಟನಾಕಾರರನ್ನು ಎದುರುಹಾಕಿಕೊಳ್ಳಲಾಗದ ಸ್ಥಿತಿ ತಲುಪಿದೆ ಬಾಂಗ್ಲಾದಲ್ಲಿ. #📢ಆಗಸ್ಟ್ 7ರ ಅಪ್ಡೇಟ್ಸ್ 🗞️
ಸಲೂನ್ನಲ್ಲಿ ಕ್ಷೌರಿಕನೊಬ್ಬ ತನ್ನ ಗ್ರಾಹಕನ ಬಳ್ಳಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಎಂಜಲು ಉಗುಳು ಮುಖಕ್ಕೆ ಮಸಾಜ್ ಮಾಡಿರುವ ವಿಡಿಯೋ ಎಲ್ಲೆಡೆ ಹರಿದಾಡಿದೆ.ಕ್ಷೌರಿಕನೊಬ್ಬ ತನ್ನ ಎಂಜಲು ಉಗುಳಿ ವ್ಯಕ್ತಿಗೆ ಮಸಾಜ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರಿಗೂ ಆಘಾತ ತಂದಿದೆ. ಉತ್ತರ ಪ್ರದೇಶದ ಕನೌಜ್ನಲ್ಲಿ ಈ ಘಟನೆ ನಡೆದಿದೆ. ಸಲೂನ್ನಲ್ಲಿ ಕೆಲಸ ಮಾಡುವ ಕ್ಷೌರಿಕನೊಬ್ಬ ಗ್ರಾಹಕರೊಬ್ಬರಿಗೆ ಎಂಜಲಿನ ಮೂಲಕ ಮಸಾಜ್ ಮಾಡುತ್ತಿರುವ ವಿಡಿಯೋವನ್ನು ಅಲ್ಲಿರುವವರು ಚಿತ್ರಿಸಿದ್ದಾರೆ ಎನ್ನಲಾಗುತ್ತಿದೆ.ಈ ವಿಡಿಯೋ ಸುಮಾರು 15ದಿನಗಳ ಹಳೆಯದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಕ್ತಿ ಸಲೂನ್ ಬಾಗಿಲು ಹಾಕಿ ತಲೆಮರೆಸಿಕೊಂಡಿದ್ದಾನೆ. ಕನ್ನೌಜ್ ಪೊಲೀಸರ ಪ್ರಕಾರ, ಈ ವೀಡಿಯೊ ನಗರದ ತಾಲ್ಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ಚಿಬ್ರಮೌ ಬಳಿ ಇರುವ ಸಲೂನ್ ಇದಾಗಿದೆ.ಈ ವಿಡಿಯೋವನ್ನು 15 ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸ್ವತಃ ತಾನೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೋಕ್ಕೆ ಈ ಭಾಗದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಈ ಘಟನೆಯನ್ನು ಸ್ಪಿಟ್ ಜಿಹಾದ್ ಎಂದು ಟ್ಯಾಗ್ ಮಾಡಿದ್ದಾರೆ. ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.ಈ ಘಟನೆಯ ಕುರಿತು ಎಸ್ಪಿ ಕನೌಜ್ ಅವರು ಪ್ರಕರಣದ ತನಿಖೆಯನ್ನು ತರಬೇತಿ ಸಿಒ ಕಪೂರ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.ಲಕ್ನೋದಲ್ಲಿ ಇಂಥದ್ದೇ ಘಟನೆಯೊಂದು ನಡೆದಿತ್ತು, ಝೈದ್ ಎಂಬಾತ ಗ್ರಾಹಕರಿಗೆ ಎಂಜಲು ಉಗುಳಿ ಮಸಾಜ್ ಮಾಡಿದ ವಿಡಿಯೋ ವೈರಲ್ ಆಗಿತ್ತು, ಬಳಿಕ ಅವರನ್ನು ಬಂಧಿಸಲಾಗಿತ್ತು. #📢ಆಗಸ್ಟ್ 7ರ ಅಪ್ಡೇಟ್ಸ್ 🗞️
Naga Panchami: ನಾಗದೋಷದಿಂದ ಸಂಕಷ್ಟದಲ್ಲಿರುವವರು ಈ ನಾಗರ ಪಂಚಮಿಯಂದು ಇಷ್ಟಾರ್ಥ ಪೂಜೆ ಮಾಡಿ ಪರಿಹಾರವನ್ನು ಪಡೆದು ಉತ್ತಮ ಆರೋಗ್ಯ, ಸುಖ, ನೆಮ್ಮದಿ ಸಂಪತ್ತು, ಉದ್ಯೋಗ, ವಿವಾಹ, ಸಂತಾನ ಭಾಗ್ಯವನ್ನು ಪಡೆಯಲು ಅವಕಾಶವಿದೆ.
ಶ್ರಾವಣ ಮಾಸ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಹಬ್ಬಗಳೂ ಒಂದರ ಹಿಂದೆ ಒಂದರಂತೆ ಸರಮಾಲೆಯಾಗಿ ಬರಲಿವೆ. ಇವು ಮನುಷ್ಯನ ಬದುಕಿಗೆ ಬೇಕಾದ ಪರಿವರ್ತನೆಯನ್ನೂ ಮಾಡಿಕೊಡಲು ಸಾಧ್ಯವಿದೆ. ಹಬ್ಬಗಳ ಯಾದಿಯಲ್ಲಿ ಮೊದಲಿರುವ ಹಬ್ಬ ನಾಗರ ಪಂಚಮೀ. ಈ ಹಬ್ಬವು ಅನೇಕ ಕಾರಣಗಳಿಂದ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ನಾಗ ದೋಷನಿವಾರಣೆಗೆ ಉಚಿತವಾದ ಹಬ್ಬ ಇದು. ಎಲ್ಲರೂ ಆಚರಿಸಬಹುದಾದ ಹಬ್ಬವಾದರೂ ಕೆಲವು ರಾಶಿಯವರಿಗೆ ಇದು ವಿಶೇಷ ಫಲವನ್ನು ಪಡೆಯಲು ಇರುವ ಹಬ್ಬವಾಗಿದೆ. ಶ್ರಾವಣ ಶುಕ್ಲ ಪಂಚಮಿಯಂದು ಈ ಹಬ್ಬ ಬರಲಿದೆ. ಪಂಚಮೀ ತಿಥಿಯ ದೇವತೆ ಸರ್ಪ. ಹಾಗಾಗಿ ಈ ದಿನಕ್ಕೆ ವಿಶೇಷ ಮಹತ್ತ್ವ. ಅದರಲ್ಲಿಯೂ ಈ ವರ್ಷ ಶುಕ್ರವಾರ ಬಂದಿದೆ. ಸಿದ್ಧಿ ಯೋಗದಲ್ಲಿ ಹಬ್ಬವು ಮನೋರಥವನ್ನು ಸಿದ್ಧಿಸಿಕೊಳ್ಳುವ ದಿನವಾಗಿದೆ.
ಮಿಥುನ ರಾಶಿ :ಈ ರಾಶಿಯವರಿಗೆ ನಾಗರ ಪಂಚಮೀ ಶುಭಫಲವನ್ನು ಕೊಡುವುದು. ಕುಟುಂಬ ಸೌಖ್ಯ ದಾಯದಿ ಕಲಹವು ಇದ್ದರೆ ಅದು ನಿವಾರಣೆಯಾಗಿ ಬಾಂಧವ್ಯವು ಸಹಜ ಸ್ಥಿತಿಗೆ ಮರಳುವುದು. ವಿದೇಶ ಪ್ರಯಾಣದ ಆಲೋಚನೆಯೂ ಕೈಗೂಡುವುದು.ಕನ್ಯಾ ರಾಶಿ :ಈ ರಾಶಿಯವರಿಗೆ ಸಂಗಾತಿಯ ನಡುವೆ ಮನಸ್ತಾಪ ದೂರವಾಗಿ ಸುಖ ದಾಂಪತ್ಯವು ಸಿದ್ಧಿಸುವುದು. ಅವಿವಾಹಿತರು ಸಂಗಾತಿಯ ಅನ್ವೇಷಣೆಯನ್ನು ಮಾಡಲು ಉತ್ತಮ ಅವಕಾಶ. ಉತ್ತಮ ಸಂಗಾತಿಯ ಪ್ರಾಪ್ತಿಯಾಗಲಿದೆ.ತುಲಾ ರಾಶಿ :ಈ ರಾಶಿಯವರಿಗೆ ಅನಾರೋಗ್ಯವು ಕಡಿಮೆಯಾಗಲಿದೆ. ಉತ್ತಮ ಚಿಕಿತ್ಸೆ ದೊರೆಯುವುದು. ಪಾಪವು ಪರಿಹಾರವಾಗಲಿದೆ. ನರದೌರ್ಬಲ್ಯವು ನಿವಾರಣೆಯಾಗಿ ಸ್ವಸ್ಥರಾಗಲು ಸಮಯವು ಬರುವುದು.ಕುಂಭ ರಾಶಿ :ಆರ್ಥಿಕ ಹೊರೆಯು ಕಡಿಮೆಯಾಗಲಿದೆ. ದುಷ್ಕಾರ್ಯಕ್ಕೆ ಕಳೆದು ಹೋಗುವ ಹಣವು ಸತ್ಕಾರ್ಯಕ್ಕೆ ವಿನಿಯೋಗವಾಗಲಿದೆ. ಒತ್ತಡದ ಮನಸ್ಸು ಹಗುರಾಗಲಿದೆ.ಮೀನ ರಾಶಿ :ಈ ರಾಶಿಯವರಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದಲ್ಲಿ ಚೇತರಿಕೆ ಕಾಣಿಸುವುದು. ಮಾಡುವ ಕಾರ್ಯದಲ್ಲಿ ಸ್ಥೈರ್ಯ ಕಾಣಿಸುವುದು. ಭಯವು ನಿವಾರಣೆಯಾಗಿ ಮಾಡುವ ಕೆಲಸದಲ್ಲಿ ಉತ್ಸಾಹ ಇರುವುದು.ಇಷ್ಟು ರಾಶಿಯವರು ನಾಗದೇವರಿಗೆ ಶುದ್ಧ ಮನಸ್ಸಿನಿಂದ ಪೂಜೆ ಸಲ್ಲಿಸಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಅವಕಾಶವನ್ನು ಭಗವಂತ ಕರುಣಿಸಿದ್ದಾನೆ. #📢ಆಗಸ್ಟ್ 7ರ ಅಪ್ಡೇಟ್ಸ್ 🗞️













