Vijay Karnataka
ShareChat
click to see wallet page
@vijaykarnataka
vijaykarnataka
Vijay Karnataka
@vijaykarnataka
News Publisher
-
ಧೋನಿ ಅವರು ಚೆಪಾಕ್ ನಲ್ಲಿ ಆಡ್ತಾರೆ ಎಂಬ ನಿರೀಕ್ಷೆಯನ್ನು ಇರಿಸಿಕೊಂಡಿದ್ದ ಸಿಎಸ್ ಕೆ ಅಭಿಮಾನಿಗಳಿಗೆ ತೀವ್ರ ನಿರಾಸೆ. ಕೊನೆಗೂ ಅಶ್ವಿನ್ ಹೇಳಿದ್ದೇ ನಿಜವಾಯ್ತು! #IPL 2026
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇನ್ನುಮುಂದೆ ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (CIC) ಘೋಷಿಸಿದೆ. ಕಾರಣವೇನು? #BCCI And RTI
BCCI And RTI - ShareChat
RTI ಕಾಯ್ದೆಯ ವ್ಯಾಪ್ತಿಗಿಲ್ಲ BCCI!: ಕೇಂದ್ರ ಮಾಹಿತಿ ಆಯೋಗದ ಮಹತ್ವದ ಘೋಷಣೆ ಹಿಂದೆ 4 ಪ್ರಮುಖ ಕಾರಣ
ಕೇಂದ್ರ ಮಾಹಿತಿ ಆಯೋಗವು (CIC) ಬಿಸಿಸಿಐ 'ಸಾರ್ವಜನಿಕ ಪ್ರಾಧಿಕಾರ' ಅಲ್ಲ ಎಂದು ಸ್ಪಷ್ಟಪಡಿಸಿ, ಅದನ್ನು ಆರ್‌ಟಿಐ ಕಾಯ್ದೆಯಿಂದ ಮುಕ್ತಗೊಳಿಸುವ ಐತಿಹಾಸಿಕ ತೀರ್ಪು ನೀಡಿದೆ. ಮಾಹಿತಿ ಆಯುಕ್ತ ಪಿ.ಆರ್. ರಮೇಶ್ ಅವರ ಈ ಆದೇಶವು ಬಿಸಿಸಿಐ ಅನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿದ್ದ 2018ರ ನಿರ್ಧಾರವನ್ನು ರದ್ದುಗೊಳಿಸಿದೆ. ಬಿಸಿಸಿಐ ಸರ್ಕಾರದಿಂದ ಯಾವುದೇ ಧನಸಹಾಯ ಅಥವಾ ನಿಯಂತ್ರಣ ಹೊಂದಿರದ ಸ್ವಾಯತ್ತ ಖಾಸಗಿ ಸಂಸ್ಥೆಯಾಗಿರುವುದರಿಂದ ಈ ವಿನಾಯಿತಿ ನೀಡಲಾಗಿದೆ. ಕ್ರಿಕೆಟ್ ಮಂಡಳಿಯ ಆಂತರಿಕ ಹಾಗೂ ಆರ್ಥಿಕ ವಿಚಾರಗಳನ್ನು ಬಹಿರಂಗಪಡಿಸುವ ಕಡ್ಡಾಯ ನಿಯಮದಿಂದ ಬಿಸಿಸಿಐಗೆ ಈ ಮೂಲಕ ದೊಡ್ಡ ರಿಲೀಫ್ ಸಿಕ್ಕಿದೆ.
ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಏನಿದೆ ಅದರಲ್ಲಿ? ಧೋನಿ ಅಭಿಮಾನಿಗಳು ಗೊಂದಲಕ್ಟೀಡಾಗಿರುವುದು ಏಕೆ? #IPL 2026
IPL 2026 - ShareChat
Dhoni Comeback: `ಇಂದಂತೂ ಕಷ್ಟಸಾಧ್ಯ' ಎಂದ ಅಶ್ವಿನ್!: `ತಲಾ' ಅಭಿಮಾನಿಗಳಲ್ಲಿ ಇನ್ನಿಲ್ಲದ ಗೊಂದಲ
R Ashwin On MS Dhoni- ಗಾಯದ ಸಮಸ್ಯೆಯಿಂದಾಗಿ ಐಪಿಎಲ್ 2026ರಲ್ಲಿ ಇದುವರೆಗೆ ಒಂದೂ ಪಂದ್ಯವಾಡದ ಎಂ.ಎಸ್. ಧೋನಿ, ಸೋಮವಾರ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದಿದ್ದಾರೆ. ಆದರೆ ಇದೀಗ ಆರ್. ಅಶ್ವಿನ್ ಅವರ "ಇವತ್ತು ಇದು ಸಾಧ್ಯವಿಲ್ಲ, ಬಹುಶಃ 2027ರಲ್ಲೋ ಏನೋ?" ಎಂಬ ನಿಗೂಢ ಎಕ್ಸ್ ಪೋಸ್ಟ್ ಅಭಿಮಾನಿಗಳಲ್ಲಿ ಭಾರಿ ಗೊಂದಲ ಮೂಡಿಸಿದೆ. ಕಾಲಿನ ಸ್ನಾಯು ಸೆಳೆತದಿಂದ ಬಳಲುತ್ತಿರುವ ಧೋನಿ, ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದ್ದರೂ ತಂಡದ ಗೆಲುವಿನ ಲಯ ಹಾಗೂ ಸಮತೋಲನ ಕಾಯ್ದುಕೊಳ್ಳಲು ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯೇ ಹೆಚ್ಚಾಗಿದೆ ಎಂಬ ಮಾತು ಇದೀಗ ಕೇಳಿ ಬರುತ್ತಿದೆ.
ಪಶ್ಚಿಮ ಬಂಗಾಳದ ಸಚಿವ ನಿಸಿತ್ ಪ್ರಮಾಣಿಕ್ ಅವರು ಕೋಲ್ಕತಾ ಸಾಲ್ಟ್ ಲೇಕ್ ಕ್ರೀಡಾಂಗಣದ ಹೊರಗಿರುವ ಈ ವಿವಾದಿತ ಪ್ರತಿಮೆಯನ್ನು ತೆರವುಗೊಳಿಸಲಾಗುವುದು ಎಂದು ಪ್ರಕಟಿಸಿರುವುದು ಯಾಕೆ? ಮಮತಾ ಬ್ಯಾನರ್ಜಿಗೂ ಇದಕ್ಕೂ ಏನು ಸಂಬಂಧ? #WB Football Politics
WB Football Politics - ShareChat
ಕೋಲ್ಕತಾದಲ್ಲಿ `ಫುಟ್ಬಾಲ್' ಪಾಲಿಟಿಕ್ಸ್!: ಮಮತಾ ಬ್ಯಾನರ್ಜಿ ವಿನ್ಯಾಸಗೊಳಿಸಿದ್ದ ಪ್ರತಿಮೆ ಕಿತ್ತೊಗೆಯಲು ಬಿಜೆಪಿ ಸರ್ಕಾರ ನಿರ್ಧಾರಿಸಿರುವುದೇಕೆ?
ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದ ಮುಂಭಾಗದಲ್ಲಿದ್ದ, ಮಾಜಿ ಸಿಎಂ ಮಮತಾ ಬ್ಯಾನರ್ಜಿ ವಿನ್ಯಾಸಗೊಳಿಸಿದ್ದ ವಿವಾದಿತ ಫುಟ್‌ಬಾಲ್ ಪ್ರತಿಮೆಯನ್ನು ತೆರವುಗೊಳಿಸಲು ಪಶ್ಚಿಮ ಬಂಗಾಳದ ನೂತನ ಸರ್ಕಾರ ನಿರ್ಧರಿಸಿದೆ. ಐಎಸ್‌ಎಲ್ ಡರ್ಬಿ ಪಂದ್ಯದ ಬಳಿಕ ಕ್ರೀಡಾ ಸಚಿವ ನಿಸಿತ್ ಪ್ರಮಾಣಿಕ್ ಈ ಪ್ರಕಟಣೆ ಹೊರಡಿಸಿದ್ದು, 2017ರಲ್ಲಿ ಸ್ಥಾಪಿಸಲಾಗಿದ್ದ ಈ ರಚನೆಯನ್ನು "ಅರ್ಥಹೀನ ಮತ್ತು ವಿಕೃತ" ಎಂದು ಟೀಕಿಸಿದ್ದಾರೆ. ಈ ಕುರೂಪಿ ಪ್ರತಿಮೆಯ ಬದಲಾಗಿ ಭಾರತದ ಐಕಾನಿಕ್ ಫುಟ್‌ಬಾಲ್ ಆಟಗಾರರ ಸ್ಮರಣಾರ್ಥ ಪ್ರತಿಮೆಗಳನ್ನು ಸ್ಥಾಪಿಸಬೇಕೆಂಬ ಸರ್ಕಾರದ ನಿರ್ಧಾರವನ್ನು ಕ್ರೀಡಾಭಿಮಾನಿಗಳು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.
ಶಿವಾನಂದ ಲಹರಿ| Shivananda Lahari Lyrics In Kannada #ShivaMantra #ShivanandaLahari #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ಶಿವಾನಂದ ಲಹರಿ| Shivananda Lahari Lyrics In Kannada
ಗ್ರಹ ದೋಷ ಕಳೆಯುವ ಶಿವಾನಂದ ಲಹರಿ| Shivananda Lahari Lyrics In Kannada: ಶಿವನ ನೆಚ್ಚಿನ ಸ್ತೋತ್ರಗಳಲ್ಲಿ ಒಂದಾದ ಶಿವಾನಂದ ಲಹರಿ ಸ್ತೋತ್ರವನ್ನು ಆದಿ ಶಂಕರಾಚಾರ್ಯರು ರಚಿಸಿದ ಸ್ತೋತ್ರವಾಗಿದೆ. ಈ ಒಂದು ಸ್ತೋತ್ರವನ್ನು ಪ್ರಮುಖವಾಗಿ ಶಿವನ ಭಕ್ತಿಗಾಗಿ, ಧ್ಯಾನಕ್ಕಾಗಿ ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ಪಠಿಸಲಾಗುತ್ತದೆ. ಸೋಮವಾರದ ದಿನದಂದು ಅಥವಾ ಪ್ರತಿನಿತ್ಯವೂ ಈ ಒಂದು ಶಿವ ಸ್ತೋತ್ರವನ್ನು ಪಠಿಸುವುದರಿಂದ ಮಾನಸಿಕ ಶಾಂತಿ ದೊರೆಯುವುದು. ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಸಹಾಯ ಮಾಡುವುದು. ಇದರೊಂದಿಗೆ ಗ್ರಹದೋಷಗಳನ್ನು ತಗೆದುಹಾಕಿ, ಜೀವನದ ಪ್ರತಿಯೊಂದು ಅಡೆತಡೆಗಳಿಂದ ಮುಕ್ತಿಯನ್ನು ನೀಡುವುದು ಎನ್ನುವ ನಂಬಿಕೆಯಿದೆ. ಶಿವನ ಅನುಗ್ರಹವನ್ನು ಬಯಸುವವರು ಕೂಡ ಈ ಒಂದು ಸ್ತೋತ್ರವನ್ನು ಪಠಿಸಬಹುದಾಗಿದೆ.